Updated News From Kaup
ಶಿರ್ವ : ಸಂತ ಮೇರಿ ಕಾಲೇಜಿನಲ್ಲಿ ನೇರ ನೇಮಕಾತಿ ಕ್ಯಾಂಪಸ್ ಸಂದರ್ಶನ
Posted On: 11 Feb 2021, 03:40 PM
ಫೆಬ್ರವರಿ 11 ಸಂತ ಮೇರಿ ಕಾಲೇಜು, ಶಿರ್ವ ಇಲ್ಲಿ ಮಂಗಳೂರಿನ ಪ್ರತಿಷ್ಟಿತ ದಿಯಾ ಸಿಸ್ಟಮ್ ಸಂಸ್ಥೆ (ಗ್ಲೋ ಟಚ್ ಟೆಕ್ನಾಲಾಜಿಸ್)ಯು ನೇರ ನೇಮಕಾತಿ ಕ್ಯಾಂಪಸ್ ಸಂದರ್ಶನವನ್ನು ಕಾಲೇಜಿನ ಗಣಕ ವಿಜ್ಞಾನ ವಿಭಾಗ, ವೃತ್ತಿ ಸಮಾಲೋಚನೆ ಮತ್ತು ನಿಯೋಜನೆ ಕೋಶವತಿಯಿಂದ ಏರ್ಪಡಿಸಲಾಯಿತು. ಈಗಾಗಲೇ ಬಿ.ಸಿ.ಎ., ಡಿಪ್ಲೊಮಾ(ಸಿ.ಎಸ್.), ಬಿ.ಎಸ್ಸಿ (ಸಿ.ಎಸ್.), ಬಿ.ಎಸ್ಸಿ (ಐ.ಟಿ), ಬಿ.ಇ, ಎಂ.ಎಸ್ಸಿ, ಎಂ.ಸಿ.ಎ, ಸ್ನಾತಕೋತ್ತರ ಪದವಿ ಮುಗಿಸಿಕೊಂಡಿರುವ ಅಭ್ಯರ್ಥಿಗಳಿಗೆ ಪೂರ್ವಹ್ನ 9.30 ಗಂಟೆಗೆ ಕಾಲೇಜಿನ ಫಾ. ಹೆನ್ರಿ ಕ್ಯಾಸ್ತಲೀನೊ ಆಡಿಟೋರಿಯಂನಲ್ಲಿ ಮಂಗಳೂರಿನ ದಿಯಾ ಸಿಸ್ಟಮ್ನವರು ಕ್ಯಾಂಪಸ್ ಸಂದರ್ಶನವನ್ನು ನಡೆಸಿಕೊಟ್ಟರು. ನಮ್ಮ ಮುಂದೆ ಪೂರ್ವಯೋಜಿತ ಆಧುನಿಕ ತಾಂತ್ರಿಕತೆ ಇದ್ದರೂ ದೋಷಗಳು ಕಂಡುಬರುವುದು ಸಹಜ. ದೋಷಗಳನ್ನು ಕಂಡುಹಿಡಿದು ಅದಕ್ಕೆ ಸೂಕ್ತವಾದ ಪರಿಹಾರೋಪಾಯಗಳನ್ನು ಕಾಲೇಜಿನ ಕಲಿಕಾ ಸಂದರ್ಭದಲ್ಲಯೇ ಯುವಜನತೆ ತಾಂತ್ರಿಕ ಕೌಶಲ್ಯಗಳನ್ನು ಅರಿತುಕೊಂಡರೆ ಮುಂದೆ ಉದ್ಯೋಗವನ್ನು ಪಡೆದಾಗ ಕಂಪೆನಿಗೆ ಅದರಿಂದ ಮುಂದೆ ಅಭ್ಯರ್ಥಿಗೆ ಮತ್ತು ಕಂಪೆನಿಗೆ ಲಾಭವಾಗುತ್ತದೆ ಎಂದು ದಿಯಾ ಸಿಸ್ಟಮ್ಸ್ ಸೀನಿಯರ್ ಮ್ಯಾನೆಜರ್ ಶ್ರೀಶ್ರೀನಿವಾಸ ಭಟ್ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಹೆರಾಲ್ಡ್ ಐವನ್ ಮೋನಿಸ್ರವರು ಭವಿಷ್ಯದಲ್ಲಿ ಸೂಕ್ತವಾದ ಉದ್ಯೋಗವನ್ನು ಪಡೆದುಕೊಳ್ಳಲು ಇಂತಹ ಕ್ಯಾಂಪಸ್ ನೇರನೇಮಕಾತಿ ಕಾರ್ಯಕ್ರಮಗಳು ಹೆಚ್ಚು ಪ್ರಯೋಜನಕಾರಿ ಈ ನಿಟ್ಟಿನಲ್ಲಿ ನಮ್ಮ ಕಾಲೇಜಿನಲ್ಲಿ ಕ್ಯಾಂಪಸ್ ನೇರನೇಮಕಾತಿ ಕಾರ್ಯಕ್ರಮವನ್ನು ಹಮ್ಮಿಕೊಂಡ ದಿಯಾ ಸಿಸ್ಟಮ್ ಕಂಪೆನಿಗೆ ಕೃತಜ್ಞತೆಯನ್ನು ಸಲ್ಲಿಸಿದರು. ಅಭ್ಯರ್ಥಿಗಳಿಗೆ ನಡೆದ ಈ ಕ್ಯಾಂಪಸ್ ಸಂದರ್ಶನದಲ್ಲಿ ಕಾಲೇಜಿನ ಹಳೆ ವಿದ್ಯಾರ್ಥಿಗಳು ಮತ್ತು ರಾಜ್ಯದ ವಿವಿಧ ಜಿಲ್ಲೆಗಳಾದ ಹುಬ್ಬಳ್ಳಿ, ಗದಗ, ಬೆಂಗಳೂರು, ಹಾಸನ, ಬಳ್ಳಾರಿ, ದಕ್ಷಿಣ ಕನ್ನಡ ಮತ್ತು ಉಡುಪಿ ಪರಿಸರದ ಕಾಲೇಜುಗಳ ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಸುಮಾರು 190 ವಿದ್ಯಾರ್ಥಿಗಳು ನೊಂದಾಯಿಸಿ , ಭಾಗವಹಿಸಿದರು. ಇದರ ಸದುಪಯೋಗವನ್ನು ಪಡೆದುಕೊಂಡರು. ಈ ಕಾರ್ಯಕ್ರಮದಲ್ಲಿ ದಿಯಾ ಸಿಸ್ಟಮ್ಸ್ ಹಿರಿಯ ನೇಮಕಾತಿ ಕಾರ್ಯನಿರ್ವಾಹಕರಾದ ಶ್ರಿ. ಲಕ್ಷ್ಮಿಶ್ ಬಿ.ಎನ್, ಕು.ಸಮೃಧಿ, ಶ್ರೀರಾಘವೇಂದ್ರ, ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಮತ್ತು ಮಾಹಿತಿ ತಂತ್ರಜ್ಞಾನಕೋಶದ ನಿರ್ದೇಶಕರಾದ ಲೆಫ್ಟಿನೆಂಟ್ ಶ್ರಿ ಕೆ.ಪ್ರವೀಣ್ ಕುಮಾರ್, ವಿದ್ಯಾರ್ಥಿಗಳು, ಕಾಲೇಜಿನ ಅಧ್ಯಾಪಕ ಮತ್ತು ಅಧ್ಯಾಪಕೇತರ ಬಂಧುಗಳು ಉಪಸ್ಥಿತರಿದ್ದರು. ಕು.ಚಂದನಾ ಮತ್ತು ಬಳಗ ಪ್ರಾರ್ಥಿಸಿ, ವೃತ್ತಿ ಸಮಾಲೋಚನೆ ಮತ್ತು ನಿಯೋಜನೆ ಕೋಶದ ಸಂಯೋಜಕಿ ತನುಜಾ ಎನ್ ಸುವರ್ಣ ವಂದಿಸಿ, ಉಪನ್ಯಾಸಕಿ ಸುಷ್ಮಾ ಸ್ವಾಗತಿಸಿ, ದಿವ್ಯಶ್ರಿ ಕಾರ್ಯಕ್ರಮ ನಿರೂಪಿಸಿದರು.
ಮಣಿಪಾಲ : 8 ಕೆ.ಜಿ ಗಾಂಜಾ ವಶ
Posted On: 10 Feb 2021, 03:03 PM
ಉಡುಪಿ ಜಿಲ್ಲಾ ಪೋಲೀಸ್ ಅಧೀಕ್ಷಕರಾದ ಶ್ರೀ. ವಿಷ್ಣುವರ್ಧನ್ ಐ.ಪಿ.ಎಸ್ರವರ ಮಾರ್ಗದರ್ಶನದಲ್ಲಿ ಮಣಿಪಾಲ ಪೊಲೀಸರು ಮಹಾರಾಷ್ಟ್ರದಿಂದ ಮಣಿಪಾಲಕ್ಕೆ ಮಾರಾಟ ಮಾಡಲು ತಂದಿದ್ದ 8 ಕೆ.ಜಿ ಗಾಂಜಾ ಮೌಲ್ಯ ಸುಮಾರು 2,66000/- ರೂ ಹಾಗೂ ಕೃತ್ಯಕ್ಕೆ ಬಳಸಿದ ಆಟೋರಿಕ್ಷಾವನ್ನು ವಶಪಡಿಸಿಕೊಂಡಿದ್ದು ಮಣಿಪಾಲ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಮುದರಂಗಡಿ : ಬಿಲ್ಲವ ಸಂಘದ 8ನೇ ವರ್ಷದ ವರ್ಧಂತ್ಯುತ್ಸವ , ಪ್ರಭಾವಳಿ ಸಮರ್ಪಣೆ
Posted On: 09 Feb 2021, 05:17 PM
ಕಾಪು ತಾಲೂಕಿನ ಮುದರಂಗಡಿ ಬಿಲ್ಲವ ಸಂಘದ 8ನೇ ವರ್ಷದ ವರ್ಧಂತ್ಯುತ್ಸವ , ಪ್ರಭಾವಳಿ ಸಮರ್ಪಣೆಯು ಫೆಬ್ರವರಿ 20, ಶನಿವಾರದಂದು ನಡೆಯಲಿದೆ. ಬೆಳಿಗ್ಗೆ 9:30ಕ್ಕೆ ಪ್ರಭಾವಳಿಯನ್ನು ಮುದರಂಗಡಿ ಅಶ್ವತ್ಥ ಕಟ್ಟೆಯಿಂದ ಶೋಭಾಯಾತ್ರೆಯ ಮೂಲಕ ನಾರಾಯಣಗುರುಗಳ ಮಂದಿರಕ್ಕೆ ತರಲಾಗುವುದು. ಬೆಳಿಗ್ಗೆ 11 ರಿಂದ ಸಭಾ ಕಾರ್ಯಕ್ರಮ, 12:30ಕ್ಕೆ ಮಹಾಪೂಜೆ ಹಾಗೂ ಮಧ್ಯಾಹ್ನ 1ರಿಂದ ಅನ್ನಸಂತರ್ಪಣೆ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಫೆಬ್ರವರಿ 25 : ಸಾಂತೂರು ಕೊಡಂಗಲ ಶ್ರೀ ಬ್ರಹ್ಮ ಬೈದರ್ಕಳ ಗರಡಿ ವಾರ್ಷಿಕ ನೇಮೋತ್ಸವ
Posted On: 09 Feb 2021, 05:02 PM
ಸಾಂತೂರು ಕೊಡಂಗಲ ಶ್ರೀ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ವರ್ಷಂಪ್ರತಿ ಜರಗುವ ವಾರ್ಷಿಕ ನೇಮೋತ್ಸವವು ಫೆಬ್ರವರಿ 25, ಗುರುವಾರ ನಡೆಯಲಿದೆ. 23 ರಂದು ರಾತ್ರಿ ಗಂಟೆ 8:30ಕ್ಕೆ ಹಸಿರುವಾಣಿಯೊಂದಿಗೆ ಗರಡಿ ಪ್ರವೇಶ, 24 ರಂದು ಬೆಳಿಗ್ಗೆ 8ಕ್ಕೆ ನವಕ ಪ್ರಧಾನ ಹೋಮ, ರಾತ್ರಿ 6:30 ಕ್ಕೆ ಅಗೆಲು ಸೇವೆ. 25 ರಂದು ರಾತ್ರಿ 7ಕ್ಕೆ ವಾರ್ಷಿಕ ನೇಮೋತ್ಸವ, ರಾತ್ರಿ 8:30ಕ್ಕೆ ಶ್ರೀ ವಿಠಲ ಪೂಜಾರಿ ಮತ್ತು ಕರುಣಾಕರ ಪೂಜಾರಿ ಗರಡಿಮನೆ ಸಾಂತೂರು ಇವರ ವತಿಯಿಂದ ಸಾರ್ವಜನಿಕ ಅನ್ನಸಂತರ್ಪಣೆ, 26ರಂದು ಬೆಳಿಗ್ಗೆ 4ಕ್ಕೆ ಮಾಯಂದಾಲ್ ನೇಮೋತ್ಸವ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕಾಪು : ಮನೆಗೋಡೆ ಕುಸಿತ, ಲಕ್ಷಾಂತರ ರೂಪಾಯಿ ನಷ್ಟ
Posted On: 09 Feb 2021, 04:15 PM
ಕಾಪು ಪಡು ಗ್ರಾಮದ ವನಜಾ ಪೂಜಾರ್ತಿಯವರ ಮನೆಯ ಹಿಂಭಾಗದ ಗೋಡೆ ಸೋಮವಾರ ಮುಂಜಾನೆ ಕುಸಿದಿದ್ದು ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತು ನಷ್ಟ ಅಂದಾಜಿಸಲಾಗಿದೆ. ಈ ಸಂದರ್ಭ ಮನೆಯೊಡತಿ, ಅವರ ಗಂಡ ಮತ್ತು ಮಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆಶ್ರಯವಾಗಿದ್ದ ಮನೆಯ ಗೋಡೆ ಕುಸಿತಗೊಂಡಿದ್ದರಿಂದ ಈ ಕುಟುಂಬ ತೊಂದರೆಗೊಳಗಾಗಿದೆ.
ಉಡುಪಿಯ ಲಚ್ಚಿಲ್, ಪುತ್ತೂರಿನಲ್ಲಿ 13 ರಂದು ಮಂತ್ರ ದೇವತಾ ಸನ್ನಿಧಿಯಲ್ಲಿ ವಾರ್ಷಿಕ ನೇಮೋತ್ಸವ
Posted On: 09 Feb 2021, 03:58 PM
ಉಡುಪಿಯ ಲಚ್ಚಿಲ್, ಪುತ್ತೂರಿನ ಶ್ರೀ ಮಂತ್ರ ದೇವತಾ ಸನ್ನಿಧಿಯಲ್ಲಿ ಶನಿವಾರ ವಾರ್ಷಿಕ ನೇಮೋತ್ಸವ ಜರಗಲಿದೆ. ರಾತ್ರಿ 8 ಗಂಟೆಗೆ ಅನ್ನಸಂತರ್ಪಣೆ ಮತ್ತು ರಾತ್ರಿ ಗಂಟೆ 9 ರಿಂದ ನೇಮೋತ್ಸವ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ದೊಡ್ಡಣಗುಡ್ಡೆ ಪಂಚ ಜುಮಾದಿ ದೈವಸ್ಥಾನದ ಬಿಲ್ಲವ ಸಮುದಾಯದ ನೂತನ ಗುರಿಕಾರರಾಗಿ ನಿತಿನ್ ಪೂಜಾರಿ ಆಯ್ಕೆ
Posted On: 09 Feb 2021, 03:42 PM
ದೊಡ್ಡಣಗುಡ್ಡೆ ಪಂಚ ಜುಮಾದಿ ದೈವಸ್ಥಾನದ ಮಕರ ತಿಂಗಳ ಮಾರಿ ಪೂಜೆ, ಪಂಚ ಜುಮಾದಿ ದೈವದ ದರ್ಶನ ಸೇವೆ ಬೆಳಗ್ಗಿನಿಂದ ರಾತ್ರಿಯವರೆಗೆ ಊರು ಪರವೂರಿನ ಭಕ್ತಾದಿಗಳು ಗಂಧ ಪ್ರಸಾದವನ್ನು ಸ್ವೀಕರಿಸಿ ದೈವದ ಕೃಪೆಗೆ ಪಾತ್ರರಾಗುವ ಮೂಲಕ ಸಂಪನ್ನಗೊಂಡಿತು. ಈ ಸಂದರ್ಭ ದೊಡ್ಡಣಗುಡ್ಡೆ ಪಂಚ ಜುಮಾದಿ ದೈವಸ್ಥಾನದ ಬಿಲ್ಲವ ಸಮುದಾಯದ ನೂತನ ಗುರಿಕಾರರಾಗಿ ನಿತಿನ್ ಪೂಜಾರಿ ಅವರನ್ನು ಎಲ್ಲರ ಒಪ್ಪಿಗೆಯ ಮೇರೆಗೆ ಆಯ್ಕೆ ಮಾಡಲಾಯಿತು. ದೈವದ ಅನುಗ್ರಹ ಮತ್ತು ಪ್ರಸಾದದೊಂದಿಗೆ ಅಧಿಕಾರ ಸ್ವೀಕಾರ ಮಾಡಿದರು. ಈ ಸಂದರ್ಭದಲ್ಲಿ ಊರಿನ ಹಿರಿಯರು ಹಾಗೂ ಆಡಳಿತ ಮಂಡಳಿಯ ಮುಖ್ಯಸ್ಥರು ಯು. ಬಿ. ಅಜಿತ್ ಕುಮಾರ್, ಸದಸ್ಯರಾದ ಗೋಪಾಲ ಶೆಟ್ಟಿ, ಶಿವ ಪಾಲನ್, ಸುರೇಶ್ ಪೂಜಾರಿ, ಕೆ. ಯಾದವ್, ಯು. ಗಣೇಶ್, ಪ್ರಕಾಶ್ ಶೆಟ್ಟಿ, ನಿತ್ಯಾನಂದ ಜೋಗಿ, ದಿನೇಶ್ ಬಂಗೇರ, ಉದಯ ನಾಯ್ಕ್ ಹಾಗೂ ದೈವಸ್ಥಾನದ ಅರ್ಚಕರಾದ ವಿನೋದ್ ಶೆಟ್ಟಿ, ವಿಜಯ್ ಶೆಟ್ಟಿ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು
ಅಭಿವೃದ್ಧಿಗಾಗಿ ಕಾಯುತ್ತಿರುವ ಟ್ಯಾಪ್ ಮೀ ಹಿರೇಬೆಟ್ಟು ಸಂಪಕ೯ ರಸ್ತೆ
Posted On: 09 Feb 2021, 02:49 PM
ಕಾಪು ವಿಧಾನ ಸಭಾ 80 ಬಡಗಬೆಟ್ಟು ಪಂಚಾಯತ್ ವ್ಯಾಪ್ತಿಯ ಪ್ರಮುಖ ರಸ್ತೆ ಟ್ಯಾಪ್ಮೀ - ಹಿರೇಬೆಟ್ಟು ಸಂಪಕಿ ೯ಸುವ ಈ ರಸ್ತೆಯು ಸಂಪೂಣ೯ ನಾ ದುರಸ್ತಿಯಲ್ಲಿದೆ.ಕಳೆದ ಒಂದು ವಷ೯ದಿಂದ ಈ ರಸ್ತೆಯು ಸಂಪೂಣ೯ ಹಾಳಾಗಿದ್ದು ಡಾಮರ್ ರಸ್ತೆ ಇದೀಗ ಮಣ್ಣಿನ ರಸ್ತೆಯಾಗಿ ಪರಿವತ೯ನೆಯಾಗಿದೆ. ವಿಶ್ವವಿಖ್ಯಾತ ವಿದ್ಯಾಸಂಸ್ಥೆ ಅದೇ ರೀತಿ ಸಾಲು ಮರದ ತಿಮ್ಮಕ್ಕ ಉದ್ಯಾನವನ ಸಂಪಕಿ೯ಸುವ ಈ ರಸ್ತೆಯ ಬಗ್ಗೆ ಜನಪ್ರತಿನಿಧಿಗಳು ಮೌನವಹಿಸಿರುವುದು ಬೇಸರದ ವಿಚಾರ. ರಸ್ತೆಯಲ್ಲಿ ವಾಹನಗಳು ಬಿಡಿ ನಡೆದಾಡಲು ತೊಂದರೆಯಾಗಿದೆ. ಧೂಳಿನಿಂದ ರಸ್ತೆಯಲ್ಲಿ ಸಂಚರಿಸುವುದು ದುಸ್ತರವಾಗಿದೆ. ಈ ರಸ್ತೆಯನ್ನು ಅವಲಂಬಿಸಿರುವವರು ಸಾವಿರಾರು ಮಂದಿ ಹಿಡಿ ಶಾಪ ಹಾಕುವ ಪರಿಸ್ಥಿತಿ ನಿಮಾ೯ಣವಾಗಿದೆ. ಆದಷ್ಟು ಬೇಗ ಸಂಬಂಧಿಸಿದ ಜನಪ್ರತಿನಿಧಿ ಅಧಿಕಾರಿಗಳು ರಸ್ತೆಯ ದುರಸ್ತಿಯ ಬಗ್ಗೆ ಗಮನ ಹರಿಸಬೇಕಾಗಿದೆ ಎಂದು ಗ್ರಾಮಸ್ಥರ ಪರವಾಗಿ ಸಾಮಾಜಿಕ ಚಿಂತಕ ರಾಘವೇಂದ್ರ ಪ್ರಭು, ಕವಾ೯ಲು ತಿಳಿಸಿದ್ದಾರೆ.
ಟೆಕ್ ನ್ಯೂಸ್ ಲೋಗೋ ಲೋಕಾರ್ಪಣೆ
Posted On: 07 Feb 2021, 08:19 PM
ಯೂಟ್ಯೂಬ್ ನಲ್ಲಿ ಹೊಸ Tech channel ಬರುತ್ತಿದ್ದು ಇದರ ಹೊಸ ಲೋಗೊವನ್ನು ಇಂದು ಸಂಸ್ಕೃತ ಸಿರಿ ಪೇಜ್ ನಲ್ಲಿ ಬಿಡುಗಡೆ ಮಾಡಲಾಯಿತು. ಉದ್ಘಾಟನೆಯನ್ನು
ಅಂತರಾಷ್ಟೀಯ ಸೈಮಾ ಪ್ರಶಸ್ತಿ ಪುರಸ್ಕೃತೆ ಶ್ಲಾಘ ಸಾಲಿಗ್ರಾಮ ರವರು ಮಾಡಿದ್ದು ವಿಶೇಷವಾಗಿತ್ತು.
ಇಂದು ಲೋಕಾರ್ಪಣೆಗೊಂಡ ಟೆಕ್ ನ್ಯೂಸ್ ಇನ್ನು ಮುಂದೆ ಪ್ರತೀ ಭಾನುವಾರ ಬೆಳಗ್ಗೆ 9 ಘಂಟೆಗೆ ವಾರದ ಪ್ರಮುಖ ಹತ್ತು ಸುದ್ದಿಗಳನ್ನು ನೀಡಲಿದೆ ಜೊತೆಗೆ ಮುಂದಿನ ದಿನಗಳಲ್ಲಿ ಗೇಮಿಂಗ್ , Unbox , ಹಾಗೂ ಸಮಾಜಕ್ಕೆ ಡಿಜಿಟಲ್ ಮಾಧ್ಯಮದ ಮೂಲಕ ಅವಶ್ಯಕ ಸೇವೆಗಳನ್ನೂ ಒದಗಿಸಲಿದೆ.
ಈ ಹೊಸ ಚಾನೆಲ್ಗೆ ಶುಭಹಾರೈಕೆ ಇರಲಿ
ಚಾನೆಲ್ Subscribe ಮಾಡಲು ಮರೆಯಬೇಡಿ
Youtube Link :-
Click here
Click here
ಕಾಪು : ಶ್ರೀರಾಮ ಜನ್ಮಭೂಮಿ ನಿಧಿ ಸಮರ್ಪಣೆ
Posted On: 07 Feb 2021, 04:03 PM
ಶ್ರೀರಾಮ ಜನ್ಮ ಭೂಮಿ ನಿಧಿ ಸಮರ್ಪಣಾ ಅಭಿಯಾನ ದ ಕಾಪು ಕೋತಲ್ ಕಟ್ಟೆ ವಾರ್ಡ್ ನ ಎಲ್ಲಾ ಮನೆ ಮನೆಗಳಿಗೆ ಭೇಟಿ ನೀಡಿ ಶ್ರೀರಾಮ ಜನ್ಮ ಭೂಮಿಗೆ ಭಕ್ತಿಯಿಂದ ನೀಡಿದ ದೇಣಿಗೆಯನ್ನು ಇಂದು ಕಾಪು ವಲಯದ ರಾಮಜನ್ಮಭೂಮಿ ನಿಧಿ ಸಮರ್ಪಣಾ ಸಂಘಟಕರಿಗೆ ಇಂದು ಹಸ್ತಾಂತರಿಸಲಾಯಿತು.
