Updated News From Kaup
ಉಡುಪಿಯಲ್ಲಿ ಕೋವಿಡ್ ಲಸಿಕೆ ಸಂಗ್ರಹಕ್ಕೆ ಸಿದ್ಧಗೊಂಡಿದೆ ಕೊಠಡಿ
Posted On: 05-11-2020 06:07PM
ಇಡೀ ವಿಶ್ವವನ್ನೇ ಭೀಕರವಾಗಿ ಕಾಡುತ್ತಿರುವ, ಇದುವರೆಗೆ ಕೋಟ್ಯಾಂತರ ಮಂದಿಯನ್ನು ಆವರಿಸಿ, ಲಕ್ಷಾಂತರ ಮಂದಿಯನ್ನು ಬಲಿ ಪಡೆದಿರುವ, ಕೋವಿಡ್-೧೯ ಮಹಾಮಾರಿಗೆ ಕಡಿವಾಣ ಹಾಕಲು ಕೊರೊನಾ ಆರಂಭವಾದ ಕಾಲದಿಂದಲೂ, ವಿಶ್ವದ ಅನೇಕ ದೇಶಗಳಲ್ಲಿ ಲಸಿಕೆ ಪ್ರಯೋಗಗಳು ನಡೆಯುತ್ತಲೇ ಇವೆ. ವಿಶ್ವ ಆರೋಗ್ಯ ಸಂಸ್ಥೆ ಸಹ ಕೊರೋನಾ ಲಸಿಕೆ ಪ್ರಯೋಗದಲ್ಲಿ ತನ್ನನ್ನು ತಾನು ತೊಡಗಿಸಿ ಕೊಂಡಿದೆ. ಪ್ರಸ್ತುತ ಲಸಿಕೆಯ ಅಂತಿಮ ಸಿದ್ದತೆಯಲ್ಲಿದ್ದು, ಶೀಘ್ರದಲ್ಲಿ ವಿಶ್ವದಾದ್ಯಂತ ಆರಂಭಿಕ ಲಸಿಕೆ ನೀಡುವ ಕಾರ್ಯಕ್ರಮ ಆರಂಭಗೊಳ್ಳಲಿದೆ. ಈ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ಸಂಗ್ರಹ ಮಾಡಲು ಅಗತ್ಯವಿರುವ ಲಸಿಕಾ ಕೊಠಡಿ (ವಾಕ್ ಇನ್ ಕೂಲರ್)ಯನ್ನು ಸಂಪೂರ್ಣ ಸಿದ್ಧಗೊಳಿಸಲಾಗಿದೆ.
782 ವರ್ಷ ಹಿಂದೆಯೇ ತುಳು ಲಿಪಿ ಮತ್ತು ಭಾಷೆ ಬಳಸಲು ಪ್ರೇರೇಪಿಸಿದ ಮಧ್ವಾಚಾರ್ಯರು
Posted On: 04-11-2020 02:23PM
ಈಗ ತುಳು ಕಲಿಯುವ, ತುಳುಲಿಪಿಯಲ್ಲಿ ಬರೆಯುವ ಶ್ರದ್ಧೆ ಒಂದು ಅಭಿಯಾನದಂತೆ ಪ್ರಾರಂಭವಾಗಿದೆ .ಎಲ್ಲಡೆ ತುಳು ಬರೆಯುವ ತರಗತಿಗಳು ನಡೆಯುತ್ತಿವೆ . ಇಂದಿಗೆ 782 ವರ್ಷ ಹಿಂದೆಯೇ ತುಳುನಾಡಿನಲ್ಲಿ ಹುಟ್ಟಿದ ಆಚಾರ್ಯ ಮಧ್ವರು ತುಳುಲಿಪಿಯನ್ನು ಸ್ವೀಕರಿಸಿದ , ಮಾತೃಭಾಷೆಯಾಗಿ ಗೌರವಿಸಿ ಬರೆದವರು - ಬರೆಸಿದವರು ಎಂಬುದು ಬಹುಮಂದಿಗೆ ಗೊತ್ತಿಲ್ಲ. ಅದಕ್ಕಾಗಿ ತುಳುಭಾಷೆ - ಕನ್ನಡ ಲಿಪಿಯಲ್ಲಿ ಬರೆದ ಲೇಖನ . ತುಳು ಮಣ್ಣ್ ದ "ಕೊಡಿಪು": 'ಮದ್ವಾಚಾರ್ರ್' , 'ತತ್ತ್ವ ವಾದ' ತುಳು ಮಣ್ಣ್ , ತುಳು ಅಪ್ಪೆ , ತುಳು ಬಾಸೆ , ತುಳು ಸಂಸ್ಕೃತಿ ಒಟ್ಟುಡು ತುಳುವ ಕಂಡನಿ - ಬುಡೆದಿಗ್ ಮಗೆಯಾದ್ ಪುಟಿನಾರ್ ಮದ್ವೆರ್ . ಆಂಡ ಆರ್ನ ಸಾದನೆ "ಅಧ್ಯಾತ್ಮ" ಕ್ಷೇತ್ರೊಡು . ಈ ದೇಶದ ಅಧ್ಯಾತ್ಮೊಗು ಪೊಸತ್ತೊಂಜಿ ಮರ್ಗಿಲ್ , ಪೊಸ ಪೊಲಿಕೆ - ಪೊಸ ಆಲೋಚನೆ ಕೊರಿನಾರ್ . ಈ ದೇಶೊಡು ಮೂಜೆ ಮೂಜಿ ಜನ ಆಚಾರ್ರ್ ಈ ಕಜ್ಜೊಡು ಪುದರ್ ಪೊಯಿನಾಕುಲು , ಅಯಿಟ್ ಒರಿ ನಮ್ಮ ತುಳುತಾರ್ , ತುಳುವಪ್ಪೆನ ಮಗೆ , ಮಧ್ವಾಚಾರ್ಯೆರ್ . ತುಳು ಲಿಪಿನ್ ಏಲ್ನೂದು ವರ್ಸೊರ್ದಿಂಚಿ ಗಳಸೊಂದು ಬತ್ತಿನಾಕುಲು ಮದ್ವೆರ್ ಬೊಕ್ಕ ಅರೆನ ಎಡ್ಮ ಜನ ಶಿಷ್ಯೆರ್ .ಇನಿಕ್ಲ ಅಕುಲು ರುಜು ಮಲ್ಪುನಿ ತುಳುಟು .ಅಂಚಾದ್ ಮದ್ವೆರ್ ತುಳುವೆರ್, ಮದಪರೆ ಆವಂದಿನ ತುಳು ಅಪ್ಪೆನ ಮಗೆ . ಆಂಡ ಇನಿ ತುಳುಟು ಏರ್ ಬರೆಪೆ ,ಏರ್ ಓದುವೆ ಆಯೆ ತುಳುವೆ ಪಂಡ್ ದ್ ಏರ್ಲ ಪನೊಂದಿಜ್ಜ . ಕನ್ನಡ ಲಿಪಿಟ್ ತುಳುನಿ ಬರೆದ್ ತುಳುವೆರ್ ಪಂಡ್ದ್ ಪೆರ್ಮೆಡ್ ತಿರ್ಗುನ ಕಾಲವುಂದು .ಆಂಡ ತುಳುಟು ಬರೆಪಿನ , ತುಳುಟು ಬರೆಯಿನ ಗ್ರಂಥೊಲೆನ್ ಓದುನಕುಲು ಇತ್ತೆಲಾ ಉಲ್ಲೆರ್ . ಲೆಕ್ಕೊಗು ಕಡಮೆ ಇಪ್ಪರೆಯಾವು . ನಡುತ ಇಲ್ಲದಾರ್ ಒಡಿಪುಡ್ದು ತೆನ್ಕಾಯಿ ಐನ್ ಮೈಲ್ ದೂರೊಡು ಒಂಜಿ ಊರು, ಅವು 'ಬೊಳ್ಳೆ' - ಬೊಲ್ಲೆ (ಬೆಳ್ಳೆ) . ಪಾದೆಕಲ್ಲ್ ಪಜೆತಲೆಕ್ಕ ದಿಂಜಿದಿತ್ತಿನೆಡ್ದ್ ಈ ಊರು "ಪಾಜೆ" . ಆಚಾರ್ರ್ ಪುಟಿ ಬೊಕ್ಕ ಈ ಊರು 'ಪಾಜಕ' ಆಂಡ್ . ಎಚ್ಚಿಕಡಮೆ ಏಲ್ ನೂತ್ತ ಐವ ವರ್ಸೊಡ್ದು ಪಿರಾವು , ಕಲ್ಜಿಗ ಸುರುವಾದ್ ನಾಲ್ ಸಾರತ್ತ ಮುನ್ನೂತ್ತ ಮುಪ್ಪತ್ತೆನ್ಮ ವರ್ಸ ಕರಿದ್ ಮುಪ್ಪತ್ತ ಒಂರ್ಬನೇ ವರ್ಸ (ವಿಲಂಬಿ ಸಂವತ್ಸರ ,ಆಶ್ವಯುಜ ಮಾಸ ,ಶುಕ್ಲಪಕ್ಷ ,ನವರಾತ್ರಿ ಕಳೆದು ವಿಜಯದಶಮಿಯಂದು) ಮಾರ್ನೆಮಿ ಕರಿದ್ ಮನತ್ತಾನಿ( ಕ್ರಿ . ಶ .೧೨೩೮ ನೇ ಇಸವಿ) ಮದ್ವೆರ್ ಪುಟಿಯೆರ್ .ಬನ್ನಂಜೆದ ಗೋವಿಂದಾಚಾರ್ರ್ ಪಣ್ಪಿಲೆಕ್ಕ 'ನಡಿಲ್ಲಾಯ' ನಾರಾಯಣ ಬಟ್ರ್ - ವೇದವತಿ , ಮದ್ವೆರ್ನ ಅಪ್ಪೆ್ - ಅಮ್ಮೆರ್ . ನಡಿಲ್ಲಾಯ ತುಳು ಬಾಸೆದ ಸಬ್ದ .'ನಡುತ ಇಲ್ಲದಾಯೆ' ಪಂಡ್ ದ್ ಪಣೊಲಿ . ಆಚಾರ್ರೆನ ಪುಟ್ಟ ಪುದಾರ್ ವಾಸುದೇವೆ . ಪತ್ತೋಂಜಿನೇ ವರ್ಸೊಡು ಸನ್ಯಾಸಿಯಾಪೆರ್ ( ಕ್ರಿ . ಶ .೧೨೪೯). ಅರೆಗ್ ಸನ್ಯಾಸಿ ದೀಕ್ಷೆ ಕೊರಿನ ಅಚ್ಚ್ಯುತ ಪ್ರಜ್ಞೆರ್ . 'ಪೂರ್ಣಪ್ರಜ್ಞ' ಪಂಡ್ ದ್ ಪುದರ್ ದೀಪೆರ್ .ಸನ್ಯಾಸಿಯಾದ್ ನಲ್ಪ ದಿನೊಟ್ಟೆ ಒಡಿಪುಗು ಬತ್ತಿನ ವಿದ್ವಾಂಸೆರ್ಡ ಚರ್ಚೆ ಮಲ್ತ್ ದ್ ಗೆಂದುವೆರ್ ಆಚಾರ್ರ್ . ಸಂತೊಸೊಡು ಗುರುಕುಲು 'ಆನಂದತೀರ್ಥ' ಪನ್ಪಿ ಪುದಾರ್ ದೀದ್ ವೇದಾಂತದ ಮಾಮಲ್ಲ ಸಾಮ್ರಾಜ್ಯೊದ ಪಟ್ಟಕಟ್ಟುವೆರ್ . ಆಚಾರ್ರ್ ಸ್ವತ ತಾನೆ ದೀವೊಂಡಿನ ಪುದಾರ್ 'ಮದ್ವೆ' . ಈ ಪುದರೆ ದುಂಬುಗು ಬಳಕೆ ಆಪುಂಡು .ಮದ್ವಾಚಾರ್ರ್ ಪಂಡ್ ದೆ ಪುದರಾಪುಂಡು . ಕಡಲ್ ಡ್ ಕೃಷ್ಣ ದೇವೆರ್ನ ಮೂರ್ತಿ ತಿಕ್ಂಡ್ , ಒಡಿಪುಡು ನಿಲೆ ಮಲ್ತೆರ್ .ಎಡ್ಮ ಜನನ್ ಶಿಶುಪತ್ಯೆರ್ , ಈ ಎಡ್ಮ ಶಿಶ್ಯೆರೆನ್ ಕೃಷ್ಣ ಪೂ ಪೂಜನೆಗ್ ನೇಮಿತೆರ್ . ಇಂಚ ಮದ್ವೆರೆನ ಕತೆ ಮಸ್ತ್ ಮಲ್ಲೆ ಉಂಡು .ತುಳುನಾಡ್ ಡ್ ಪುಟಿನ ತುಳುವಪ್ಪೆನ ಮಗೇಂದ್ ತೆರಿದ್ಂಡಲಾ ತುಳು ಬಾಸೆ - ಸಂಸ್ಕೃತಿ ಅಬಿಮಾನಿಲು ಮದ್ವೆರ್ನ ಕತೆ ಮದತ್ತೆರ್ . ದಾಯೆಗ್ ಗೊತ್ತಿಜ್ಜಿ .
ವೈ.ಯು. ಯಶಸ್ವಿ ಆಚಾರ್ಯಗೆ “ಸರಸ್ವತಿ ಪುರಸ್ಕಾರ” -ರಾಜ್ಯ ಪ್ರಶಸ್ತಿ ಪ್ರಧಾನ
Posted On: 03-11-2020 09:15AM
ಕಾಪು : ಉಡುಪಿ ಜಿಲ್ಲೆ ಕಾಪು ತಾಲೂಕು ಕಲ್ಯಾದ ಉಮೇಶ ಆಚಾರ್ಯ, ಶೀಲಾವತಿ ಆಚಾರ್ಯ ದಂಪತಿ ಪುತ್ರಿಯಾದ ವೈ.ಯು. ಯಶಸ್ವಿ ಆಚಾರ್ಯ ಅವರಿಗೆ 2019-20ನೇ ಸಾಲಿನ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ 614(ಶೇ.98.24) ಆಂಕ ಪಡೆದಿರುವ ಇವರ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನ ದಾವಣಗೆರೆ-ಸಾಲಿಗ್ರಾಮ ಅವರು ನೀಡಲ್ಪಡುವ ಸರಸ್ವತಿ ಪುರಸ್ಕಾರ ರಾಜ್ಯ ಪ್ರಶಸ್ತಿಯನ್ನು ನ.1ರಂದು ದಾವಣಗೆರೆಯ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ಆವರಣದಲ್ಲಿ ಪ್ರಧಾನಿಸಲಾಯಿತು ಕಾಪು ಉಳಿಯಾರಗೋಳಿ ದಂಡತೀರ್ಥ ಇಂಗ್ಲೀಷ್ ಮೀಡಿಯಂ ಸ್ಕೂಲ್ ವಿದ್ಯಾರ್ಥಿನಿಯಾಗಿರುವ ವೈ.ಯು. ಯಶಸ್ವಿ ಭರತನಾಟ್ಯ ಪ್ರವೀಣೆಯಾಗಿದ್ದು, ಸಾಂಸ್ಕøತಿಕ, ಕ್ರೀಡಾ, ಶೈಕ್ಷಣಿಕ ರಂಗದ ಸಾಧಕಿಯಾಗಿದ್ದು, ಯಾವುದೇ ಕೋಚಿಂಗ್ ಪಡೆದುಕೊಳ್ಳದೆ ಸ್ವತಃ ಅಭ್ಯಸಿಸಿ ಎಸೆಸ್ಸೆಲ್ಸಿಯಲ್ಲಿ ಸಾಧಕಿಯಗಿದ್ದಾಳೆ. ರಿಯಾದ್ ಇಂಟರ್ ನ್ಯಾಷನಲ್ ಇಂಡಿಯನ್ ಸ್ಕೂಲ್ನಲ್ಲಿ ಕ್ಲೇ ಮಾಡೆಲಿಂಗ್, ಇಂಟರ್ನ್ಯಾಷನಲ್ ಚಿಂತನಾ ಡ್ರಾಯಿಂಗ್ನಲ್ಲಿ ಪ್ರಥಮ ಪ್ರಶಸ್ತಿಗಳನ್ನು ಗಳಿಸಿಕೊಂಡಿದ್ದ ಈಕೆ ಬಹುಮುಖ ಪ್ರತಿಭಾನ್ವಿತೆಯಾಗಿದ್ದಾಳೆ ಕನ್ನಡ ರಾಜ್ಯೋತ್ಸವದಂದು ದಾವಣಗೆರೆಯ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆಯ ಆವರಣದಲ್ಲಿ ವೈ.ಯು. ಯಶಸ್ವಿ ಅವರಿಗೆ ಗಣ್ಯರ ಉಪಸ್ಥಿತಿಯಲ್ಲಿ ಕಿರೀಟವಿಟ್ಟು, ಪುಷ್ಪವೃಷ್ಟಿಯೊಂದಿಗೆ, ಮೆಡಲ್, ಸ್ಮರಣಿಕೆ, ಪ್ರಶಸ್ತಿ ಪತ್ರದೊಂದಿಗೆ ಈ ಪ್ರಶಸ್ತಿ ಪ್ರಧಾನ ನಡೆಯಿತು
ಉಡುಪಿ : ಅಕ್ರಮವಾಗಿ ದಾಸ್ತಾನು ಮಾಡಿದ್ದ 600 ಕ್ವಿಂಟಲ್ ಅನ್ನಭಾಗ್ಯ ಅಕ್ಕಿ ವಶ
Posted On: 02-11-2020 10:24PM
ಉಡುಪಿ, ನವೆಂಬರ್ : ಬ್ರಹ್ಮಾವರ ತಾಲೂಕು ಶಿರಿಯಾರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಮರ್ಗಿ ಎಂಬಲ್ಲಿನ ರೈಸ್ ಮಿಲ್ ಮೇಲೆ , ಸೋಮವಾರ ಮಧ್ಯಾಹ್ನ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಜಿಲ್ಲಾಧಿಕಾರಿ ಜಿ.ಜಗದೀಶ್ ನೇತೃತ್ವದ ಅಧಿಕಾರಗಳ ತಂಡ ಅನ್ನಬಾಗ್ಯ ಯೋಜನೆಯ ಸುಮಾರು 600 ಕ್ವಿಂಟಾಲ್ ಗೂ ಅಧಿಕ ತೂಕದ ಅಕ್ಕಿಯನ್ನು ವಶಪಡಿಸಿಕೊಂಡಿದೆ.
ವೈರಲ್ ಆಗಿದ್ದ ದೈವದ ಹಾಡಿಗೆ ಹುಡುಕಿ ಸಮ್ಮಾನಿಸಿದ ಕಾರ್ಕಳ ದೈವಾರಾಧಕರ ಒಕ್ಕೂಟ
Posted On: 02-11-2020 11:04AM
ತುಳುನಾಡಿನ ಕಾರ್ಕಳ ತಾಲೂಕಿನ ಹಿರ್ಗಾನದ ಮಾಸ್ಟರ್ ಕಾರ್ತಿಕ್ ಹಾಡಿರುವ ದೈವ ದೇವರ ಹಾಡೊಂದು ಬಾರಿ ಜನ ಮನ್ನಣೆಗೆ ಪಾತ್ರ ವಾಗಿತ್ತು.
ಉಡುಪಿ ಜಿಲ್ಲಾಡಳಿತದಿಂದ ಕನ್ನಡ ರಾಜ್ಯೋತ್ಸವ ಆಚರಣೆ
Posted On: 01-11-2020 09:13PM
ಉಡುಪಿ : ಜಿಲ್ಲಾಡಳಿತ ಉಡುಪಿ ಜಿಲ್ಲೆ ವತಿಯಿಂದ , 65 ನೇ ಕನ್ನಡ ರಾಜ್ಯೋತ್ಸವ ದಿನಾಚರಣೆಯನ್ನು ನವೆಂಬರ್ 1 ರಂದು ಅಜ್ಜರಕಾಡು ಮಹಾತ್ಮಗಾಂಧೀ ಕ್ರೀಡಾಂಗಣದಲ್ಲಿ ಆಚರಿಸಲಾಯಿತು. ಜಿಲ್ಲಾಧಿಕಾರಿ ಜಿ.ಜಗದೀಶ್ ,ತಾಯಿ ಭುವನೇಶ್ವರಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ನಂತರ ಧ್ವಜಾರೋಹಣ ನೆರವೇರಿಸಿ, ಕನ್ನಡ ರಾಜ್ಯೋತ್ಸವದ ಸಂದೇಶ ನೀಡಿದರು.
ಯುವವಾಹಿನಿ (ರಿ) ಕಾಪು ಘಟಕದ ಪದಪ್ರಧಾನ ಸಮಾರಂಭ, ಸಾಧಕರಿಗೆ ಸಮ್ಮಾನ
Posted On: 01-11-2020 08:52PM
ಕಾಪು, ನ. ೧: ಬ್ರಹ್ಮಶ್ರೀ ನಾರಾಯಣಗುರುಗಳ ಸಂದೇಶದ ಪ್ರತಿಪಾಲನೆ, ಮೂಲತತ್ವಗಳನ್ನು ಅನುಸರಿಸುತ್ತಾ ವಿದ್ಯೆ, ಉದ್ಯೋಗ ಮತ್ತು ಸಂಪರ್ಕದ ಉದ್ದೇಶವನ್ನು ಇಟ್ಟುಕೊಂಡು ಮುನ್ನಡೆಯುತ್ತಿರುವ ಯುವವಾಹಿನಿ ಸಂಘಟನೆಯು ಸಮಾಜದ ಜನರಲ್ಲಿ ವ್ಯಕ್ತಿತ್ವ ವಿಸನಕ್ಕೆ ಪೂರಕವಾದ ಅವಕಾಶಗಳನ್ನು ಒದಗಿಸಿಕೊಡುತ್ತಾ ಬರುತ್ತಿದೆ ಎಂದು ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಕೇಂದ್ರ ಸಮಿತಿಯ ನಿಯೋಜಿತ ಅಧ್ಯಕ್ಷ ಡಾ| ರಾಜಾರಾಮ್ ಉಪ್ಪಿನಂಗಡಿ ಹೇಳಿದರು. ಕಾಪು ಬಿಲ್ಲವರ ಸಹಾಯಕ ಸಂಘದ ಸಭಾಭನದಲ್ಲಿ ನ.೧ರಂದು ಆಯೋಜಿಸಲಾಗಿದ್ದ ಯುವವಾಹಿನಿ ಕಾಪು ಘಟಕದ ೨೦೨೦-೨೧ನೇ ಸಾಲಿನ ನೂತನ ಪದಾಽಕಾರಿಗಳ ಪದಪ್ರಧಾನ ಸಮಾರಂಭದಲ್ಲಿ ಪ್ರತಿಜ್ಞಾ ವಿಧಿ ಬೋದಿಸಿ ಅವರು ಮಾತನಾಡಿದರು. ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತಾ ಹೋಗುವಾಗ ನಮ್ಮ ಅಗತ್ಯತೆಗಳನ್ನು ಅರಿತುಕೊಂಡು ನಾವು ಮುನ್ನಡೆಯಬೇಕಿದೆ. ಕುಟುಂಬ, ಉದ್ಯೋಗ ಮತ್ತು ಸಂಘಟನೆ ಎಂಬ ಮೂರು ವಿಧದ ಜೀವನ ಶೈಲಿಯೊಂದಿಗೆ ಮುನ್ನಡೆದಾಗ ಮಾತ್ರಾ ಸಂಘಟನೆ ಯಶಸ್ವಿಯಾಗಿ ಬೆಳೆಯಲು ಸಾಧ್ಯವಿದೆ. ಯುವವಾಹಿನಿ ಕೇಂದ್ರ ಸಮಿತಿಯ ಕಾರ್ಯಕ್ರಮಗಳೊಂದಿಗೆ, ಘಟಕ ಮಟ್ಟದಲ್ಲೂ ವಿವಿಧ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಕಾಪು ಯುವವಾಹಿನಿ ಘಟಕವನ್ನು ಮಾದರಿ ಘಟಕವನ್ನಾಗಿ ಮೂಡಿ ಬರುವಂತೆ ಮಾಡುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ರಾಜ್ಯೋತ್ಸವದ ಪ್ರಯುಕ್ತ ರಾಜ್ಯ ಮಟ್ಟದ ಕಾನನ ಕವಿ ಕಾವ್ಯ ಸಂಭ್ರಮ
Posted On: 01-11-2020 08:27PM
ಅಜೆಕಾರು : ರಾಜ್ಯೋತ್ಸವದ ಪ್ರಯುಕ್ತ ರಾಜ್ಯ ಮಟ್ಟದ ಕಾನನ ಕವಿ ಕಾವ್ಯ ಸಂಭ್ರಮ ನ.1ರಂದು ಕುಪಾ೯ಡಿ ಕಾನನ ಮಂಟಪದಲ್ಲಿ ನಡೆಯಿತು. ಪಡಿಮಂಚಕ್ಕೆ ಭತ್ತದ ತೆನೆ ಬಡಿಯುವ ಮೂಲಕ ಉದ್ಘಾಟನೆ ನೆರವೇರಿಸಿ ಮಾತನಾಡಿದ, ಸಾಹಿತಿ ಕಾಂತಾವರ ಶಿವಾನಂದ ಶೆಣೈ ಈ ರಾಜ್ಯೋತ್ಸವ ಕಾಯ೯ಕ್ರಮ ವಷ೯ ಪೂತಿ೯ ನಡೆಯಬೇಕು. ಕಾಡಿನಲ್ಲಿ ಕವಿಗೋಷ್ಠಿ ವಿನೂತನ ಪ್ರಯೋಗವಾಗಿದೆ. ಕವಿಗಳು ತಮ್ಮ ಭಾಷಾ ಪ್ರಾಮುಖ್ಯದಿಂದ ಉತ್ತಮ ಕವನಗಳು ಮೂಡಿಬರಲಿ ಎಂದರು.
ಸ್ವಚ್ಛ ಭಾರತ್ ಫ್ರೆಂಡ್ಸ್ ಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ
Posted On: 01-11-2020 08:19PM
೬ ವರ್ಷಗಳಿಂದ ಸ್ವಚ್ಛ ಭಾರತ, ಸ್ವಸ್ಥ ಭಾರತ, ಗ್ರಾಮ ಭಾರತ ಮತ್ತು ಡಿಜಿಟಲ್ ಭಾರತ ಅಡಿಯಲ್ಲಿ ಹಲವಾರು ಸಮಾಜಮುಖಿ ಯೋಜನೆಗಳೊಂದಿಗೆ ಉಡುಪಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಚ್ಛ ಭಾರತ್ ಫ್ರೆಂಡ್ಸ್ ಸಂಘಕ್ಕೆ ೨೦೨೦ ನೇ ಸಾಲಿನ ಉಡುಪಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಇಂದು ಅಜ್ಜರಕಾಡು ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಯಿತು.
ದಾವಣಗೆರೆಯಲ್ಲಿ ಸರಸ್ವತಿ ಪುರಸ್ಕಾರ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಪಡುಬಿದ್ರಿಯ ಶ್ರಾವ್ಯ ಆರ್. ಅಂಚನ್
Posted On: 01-11-2020 01:08PM
ಶೈಕ್ಷಣಿಕ, ಕ್ರೀಡಾ ಮತ್ತು ಸಾಂಸ್ಕೃತಿಕ ರಂಗಗಳ ಸಾಧನೆಗಳನ್ನು ಪರಿಗಣಿಸಿ ಇಂದು ದಾವಣಗೆರೆಯ ಶ್ರೀ ಸಿದ್ದಗಂಗಾ ವಿದ್ಯಾಸಂಸ್ಥೆಯ ಆವರಣದಲ್ಲಿ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯಿಂದ ಪಡುಬಿದ್ರಿಯ ಶ್ರಾವ್ಯ ಆರ್. ಅಂಚನ್ ರವರಿಗೆ ಸರಸ್ವತಿ ಪುರಸ್ಕಾರ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಬಾರಿಯ 10ನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ 613 (ಶೇ. 98.08) ಅಂಕ ಗಳಿಸಿದ್ದು ಶೈಕ್ಷಣಿಕ ಸಾಧನೆಯೊಂದಿಗೆ, ಕ್ರೀಡಾಕ್ಷೇತ್ರದಲ್ಲಿ ಕಬಡಿಯಲ್ಲಿ ಎರಡು ಬಾರಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದರು. ಪ್ರತಿಭಾನ್ವಿತ ನೃತ್ಯಪಟುವೂ ಆಗಿದ್ದಾರೆ. ಪಡುಬಿದ್ರಿಯ ರವಿರಾಜ್ ಕೋಟ್ಯಾನ್ ಮತ್ತು ಶ್ಯಾಮಲಾ ದಂಪತಿಯ ಪುತ್ರಿಯಾಗಿದ್ದಾರೆ.
