Updated News From Kaup
ಶಿರ್ವ ಕಲ್ಲು ಸಾಗಾಟದ ಟೆಂಪೋ ಪಲ್ಟಿ - ಚಾಲಕ ಆಸ್ಪತ್ರೆಗೆ ದಾಖಲು
Posted On: 31 Oct 2020, 12:07 PM
ಶಿರ್ವ ಸೈಂಟ್ ಮೇರಿಸ್ ಶಾಲಾ ಸಮೀಪದಲ್ಲಿ ಶಿರ್ವದಿಂದ ಕಟಪಾಡಿ ಕಡೆಗೆ ಕಲ್ಲು ಸಾಗಿಸುತ್ತಿದ್ದ ಟೆಂಪೋವೊಂದು ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಘಟನೆ ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ. ಟೆಂಪೋ ಚಾಲಕ ತೀವ್ರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು. ಘಟನಾ ಸ್ಥಳಕ್ಕೆ ಶಿರ್ವ ಪೊಲೀಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.
ವಿಶ್ವ ಹಿಂದೂ ಪರಿಷದ್, ಬಜರಂಗದಳ ಕಾಪು ಪ್ರಖಂಡ ವತಿಯಿಂದ ಬೃಹತ್ ರಕ್ತದಾನ ಶಿಬಿರ
Posted On: 30 Oct 2020, 09:01 PM
ವಿಶ್ವ ಹಿಂದೂ ಪರಿಷದ್, ಬಜರಂಗದಳ ಕಾಪು ಪ್ರಖಂಡ ಇವರ ಸಹಯೋಗದಲ್ಲಿ ದಿನಾಂಕ 02-11-2020ನೇ ಸೋಮವಾರ ಬೆಳಿಗ್ಗೆ 9 ಗಂಟೆಯಿಂದ ಸರಸ್ವತಿ ಮಂದಿರ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಶಾಲೆ ಉಚ್ಚಿಲ ಇಲ್ಲಿ ಅಯೋಧ್ಯಾ ಬಲಿದಾನ್ ದಿವಸ್ ಪ್ರಯುಕ್ತ ಬೃಹತ್ ರಕ್ತದಾನ ಶಿಬಿರ ಜರುಗಲಿದೆ. ಆ ಪ್ರಯುಕ್ತ ಹಿಂದೂ ಬಾಂದವರೆಲ್ಲರೂ ಸ್ವಯಂ ಪ್ರೇರಿತರಾಗಿ ರಕ್ತ ದಾನ ಮಾಡುವ ಮೂಲಕ ಅಯೋಧ್ಯಾ ಶ್ರೀ ರಾಮ ಜನ್ಮ ಭೂಮಿಯ ಆಂದೋಲನದಲ್ಲಿ ಬಲಿದಾನಗೈದ ಕರಸೇವಕರಿಗೆ ಗೌರವಾರ್ಪಣೆ ಮಾಡಬೇಕೆಂದು ವಿಶ್ವ ಹಿಂದೂ ಪರಿಷತ್ ನಮ್ಮ ಕಾಪು ವೆಬ್ ಪೋರ್ಟಲ್ ನ ಮೂಲಕ ಕೇಳಿಕೊಳ್ಳುತ್ತಿದೆ.
ಬೆಳಪುವಿನಲ್ಲಿ ಸೋಲಾರ್ ದೀಪಗಳ ಬ್ಯಾಟರಿ ಕಳ್ಳನ ಬಂಧಿಸಿದ ಸ್ಥಳೀಯ ಯುವಕರು
Posted On: 30 Oct 2020, 08:48 PM
ಬೆಳಪು ಗ್ರಾಮ ಪಂಚಾಯತಿ ವತಿಯಿಂದ ದಾರಿ ದೀಪಕ್ಕಾಗಿ ಅಳವಡಿಸಿರುವ ಸೋಲಾರ್ ದೀಪಗಳ ಬ್ಯಾಟರಿ ಕಳ್ಳತನ ಸವಾಲಾಗಿತ್ತು. ಇದನ್ನು ಅರಿತ ಪಂಚಾಯತ್ ಅಧ್ಯಕ್ಷರಾದ ದೇವಿಪ್ರಸಾದ್ ಶೆಟ್ಟಿಯವರು ಸ್ಥಳೀಯ ಯುವಕರ ತಂಡ ರಚಿಸಿದ್ದರು. ಅದರಂತೆ ಇಂದು ಮುಂಜಾನೆ ಸ್ಥಳೀಯರಿಗೆ ಕಳವು ಮಾಡುತ್ತಿದ್ದಾತ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದಾನೆ. ಈತನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.
ಉಡುಪಿಯ ಸ್ವಚ್ಛ ಭಾರತ್ ತಂಡ ಈ ಬಾರಿಯ ಪ್ರತಿಷ್ಠಿತ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ
Posted On: 30 Oct 2020, 08:26 PM
ಕಳೆದ ಆರು ವರ್ಷಗಳಿಂದ ಸ್ವಚ್ಛ ಭಾರತ, ಸ್ವಸ್ಥ ಭಾರತ, ಗ್ರಾಮ ಭಾರತ ಮತ್ತು ಡಿಜಿಟಲ್ ಭಾರತ ಎಂಬ ನಾಲ್ಕು ವಿಭಾಗಗಳ ಅಡಿಯಲ್ಲಿ ಪೂರಕವಾದ ಯೋಜನೆಗಳನ್ನು ಇಟ್ಟುಕೊಂಡು ಕಾರ್ಯನಿರ್ವಹಿಸುತ್ತಿದೆ. ನಿರಂತರವಾಗಿ 50 ವಾರಗಳ ಕಾಲ ಪ್ಲಾಸ್ಟಿಕ್ ವಿರೋಧಿ ಅಭಿಯಾನವನ್ನು ಮಲ್ಪೆ ಹಾಗೂ ಹೂಡೆ ಕಡಲ ತೀರದಲ್ಲಿ ನಡೆಸಿದೆ.ಅಜ್ಜರಕಾಡು ಉದ್ಯಾನವನವನ್ನು ದಾನಿಗಳ ಸಹಾಯದಿಂದ ಅಭಿವೃದ್ಧಿ ಪಡಿಸುವ ಕಾಯ೯ ನಡೆಸಿದೆ. ಚೆನ್ನೈ ಚಂಡಮಾರುತ, ಮಡಿಕೇರಿ ಭೂಕುಸಿತ, ಉತ್ತರ ಕರ್ನಾಟಕ ಹಾಗೂ ಉತ್ತರ ಕನ್ನಡದಲ್ಲಿ ಸಂಭವಿಸಿದ ನೆರೆಯ ಸಂದರ್ಭದಲ್ಲಿ ಈ ತಂಡ ಸ್ಥಳಕ್ಕೆ ಅಧಿಕಾರಿಗಳ ಜೊತೆಗೆ ತೆರಳಿ ಅಗತ್ಯ ಪರಿಹಾರವನ್ನು ದಾನಿಗಳ ನೆರವಿನಿಂದ ನೀಡಿದೆ. ಸಂಚಾಲಕರಾಗಿ ಗಣೇಶ್ ಪ್ರಸಾದ್ ನಾಯಕ್ ಅದೇ ರೀತಿ ಸಂಯೋಜಕರಾಗಿ ರಾಘವೇಂದ್ರ ಪ್ರಭು, ಕವಾ೯ಲು ಕಾಯ೯ ನಿವ೯ಹಿಸುತ್ತಿದ್ದಾರೆ.
ಸಿಬಿಐ ವೆಜಿಲೆನ್ಸರ್ ಆಫ಼ೀಸರ್ ಸಮ್ಮುಖದಲ್ಲಿ ಬ್ಯಾಂಕ್ ಆಫ್ ಇಂಡಿಯಾ ಸಿಬ್ಬಂದಿಗಳಿಂದ ಶ್ರೀ ಚಂದ್ರಹಾಸ್ ಗುರುಸ್ವಾಮಿ ಇನ್ನಂಜೆ ಇವರಿಗೆ ಸನ್ಮಾನ
Posted On: 30 Oct 2020, 08:16 PM
ಬ್ಯಾಂಕ್ ಆಫ಼್ ಇಂಡಿಯಾದ ಅನ್ನ ಪೂರ್ಣೇಶ್ವರೀ ಕ್ಯಾಟರರ್ಸ್ ನ ಮಾಲಕರಾದ ಆನಂದ್ ಶೇಟ್ ಅವರ ಉಪಹಾರಗ್ರಹದಲ್ಲಿ ಇತ್ತೀಚೆಗೆ ದೇಶದಾದ್ಯಂತ ಕೊರೋನಾ ಮಹಾಮಾರಿ ವಕ್ಕರಿಸಿದ ಹಿನ್ನಲೆ ಲಾಕ್ ಡೌನ್ ಎಂಬ ಅಸ್ರ್ತದಿಂದ ಜನರು ಕಂಗಾಲಾಗಿ ಹೊಟ್ಟೆಗೆ ಹಿಟ್ಟಿಲ್ಲದ ಪರಿಸ್ಥಿತಿಯ ಸಂದರ್ಭ ಮಾರ್ಚ್23ರಿಂದ ಲಾಕ್ ಡೌನ್ ಮುಗಿಯುವವರೆಗೂ ಫ಼ೋರ್ಟ್ ನ ಬ್ಯಾಂಕ್ ಆಫ಼್ ಇಂಡಿಯಾದ ಎಲ್ಲಾ ಸಿಬ್ಬಂಧಿಗಳಿಗೂ ಒಳ್ಳೆಯ ರೀತಿಯ ಊಟ ಉಪಚಾರ ನೀಡಿ ಸಹಕರಿಸಿದ ಶ್ರೀ ಚಂದ್ರಹಾಸ್ ಗುರುಸ್ವಾಮಿ ಇನ್ನಂಜೆ ಇವರನ್ನು ಬ್ಯಾಂಕ್ ಮ್ಯಾನೇಜರ್ ಜಾನ್ಸಲ್ ಹಾಗೂ ಬ್ಯಾಂಕ್ ಸಿಬ್ಬಂದಿಗಳು ಹಾಗೂ ದಿಲ್ಲಿಯಿಂದ ಆಗಮಿಸಿದ ಸಿಬಿಐ ವೆಜಿಲೆನ್ಸರ್ ಆಫ಼ೀಸರ್ ಇವರ ಉಪಸ್ಥಿತಿಯಲ್ಲಿ ಪ್ರೀತಿಪೂರ್ವಕವಾಗಿ ಸನ್ಮಾನಿಸಿದರು. ಹಲವಾರು ವರ್ಷಗಳಿಂದ ಬ್ಯಾಂಕ್ ಆಫ಼್ ಇಂಡಿಯಾದ ಕ್ಯಾಂಟೀನ್ ಉದ್ಯಮವನ್ನು ನಡೆಸುತ್ತಾ ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದು ,ಶ್ರೀ ಅಯ್ಯಪ್ಪ ಸ್ವಾಮಿಯ ಪರಮ ಭಕ್ತರಾದ ಇನ್ನಂಜೆ ಶ್ರೀ ಚಂದ್ರಹಾಸ್ ಗುರುಸ್ವಾಮಿಯವರು ಹಲವಾರು ಶಿಷ್ಯವೃಂದವನ್ನೂ ಹೊಂದಿದ್ದಾರೆ.ಲಾಕ್ ಡೌನ್ ಸಮಯದಲ್ಲಿ ತನ್ನ ಉದ್ಯಮವಾದ ಬ್ಯಾಂಕ್ ಆಫ಼್ ಇಂಡಿಯಾ ಉಪಹಾರ ಗ್ರಹದಲ್ಲಿ ಸಿಲುಕಿರುವ ಬ್ಯಾಂಕ್ ಸಿಬ್ಬಂದಿಗಳಿಗೆ ಊಟೋಪಚಾರ ನೀಡುವುದರ ಮೂಲಕ ಇವರ ಈ ಸೇವೆಗೆ ಬ್ಯಾಂಕ್ ಮ್ಯಾನೇಜರ್ ಹಾಗೂ ಸಿಬ್ಬಂದಿಗಳು ಇವರನ್ನು ಸನ್ಮಾನಿಸಿದ್ದಾರೆ.ದಿಲ್ಲಿಯಿಂದ ಆಗಮಿಸಿದ ಸಿಬಿಐ ವೆಜಿಲೆನ್ಸರ್ ಆಫ಼ೀಸರ್ ಕೂಡ ಈ ಹೊತ್ತಿನಲ್ಲಿ ಉಪಸ್ಥಿತರಿದ್ದು ಇವರ ಈ ಕಾರ್ಯಕ್ಕೆ ಸನ್ಮಾನಿಸಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
2020ನೇ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಾಪು ತಾಲೂಕಿನ ಸಾಧಕರು
Posted On: 30 Oct 2020, 08:04 PM
2020 ನೇ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿದ್ದು, ಕಾಪು ತಾಲೂಕಿನಲ್ಲಿ ರಂಗಭೂಮಿ ಕ್ಷೇತ್ರದಲ್ಲಿ ಶ್ರೀ ದಿನಕರ ಭಂಡಾರಿ ಕಣಜಾರು, ಸಾಹಿತ್ಯ ಕ್ಷೇತ್ರದಲ್ಲಿ ನವೀನ್ ಸುವರ್ಣ ಪಡ್ರೆ, ನೃತ್ಯ ಕ್ಷೇತ್ರದಲ್ಲಿ ಶ್ರೀಮತಿ ಮಂಗಳ ಕಿಶೋರ್ ದೇವಾಡಿಗ ಉಚ್ಚಿಲ, ಕ್ರೀಡಾ ಕ್ಷೇತ್ರದಲ್ಲಿ ಶರತ್ ಶೆಟ್ಟಿ ಪಡುಬಿದ್ರಿ ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಇದನ್ನು ನವೆಂಬರ್ ಒಂದು ಕನ್ನಡ ರಾಜ್ಯೋತ್ಸವದಂದು ಉಡುಪಿಯಲ್ಲಿ ನಡೆಯುವ ಸಮಾರಂಭದಲ್ಲಿ ನೀಡಲಾಗುವುದು.
ಕಾಪು ಪುರಸಭೆಯ ನೂತನ ಅಧ್ಯಕ್ಷರಿಗೆ ಜೆಸಿ ವತಿಯಿಂದ ಗೌರವಾಪ೯ಣೆ
Posted On: 30 Oct 2020, 07:55 PM
ಕಾಪು:- ಕಾಪು ಜೇಸಿಐ ನ ಪೂವ೯ ಅಧ್ಯಕ್ಷ ಹಾಗೂ ಪೂವ೯ ವಲಯಾಧಿಕಾರಿ ಯಾಗಿ ಉತ್ತಮ ಸೇವೆ ಸಲ್ಲಿಸಿದ ಕಾಪು ಪುರಸಭೆಯ ನೂತನ ಅಧ್ಯಕ್ಷ ಅನಿಲ್ ಕುಮಾರ್ ರವರನ್ನು ಜೇಸಿ ವತಿಯಿಂದ ಅ.30 ರಂದು ಶುಕ್ರವಾರ ಸನ್ಮಾನಿಸಲಾಯಿತು. ಈ ಸಂದಭ೯ದಲ್ಲಿ ಮಾತನಾಡಿದ ಪೂವ೯ ರಾಷ್ಟ್ರೀಯ ಉಪಾಧ್ಯಕ್ಷ ಸದಾನಂದ ನಾವಡ, ಜೇಸಿಯಲ್ಲಿ ಸಾಧನೆ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿರುವ ಇವರು ಮಾದರಿ ಅಧ್ಯಕ್ಷರಾಗಿ ಮೂಡಿ ಬರಲಿ ಎಂದು ಶುಭ ಹಾರೈಸಿದರು. ಈ ಸಂದಭ೯ದಲ್ಲಿ ಪುರಸಭಾ ಅಧ್ಯಕ್ಷರು ಕೃತಜ್ಞತೆ ವ್ಯಕ್ತಪಡಿಸಿದರು.ಈ ಸಂದಭ೯ದಲ್ಲಿ ರಾಷ್ಟ್ರೀಯ ಕಾಯ೯ನಿವಾ೯ಹಕ ಉಪಾಧ್ಯಕ್ಷ ಸಂದೀಪ್ ಕುಮಾರ್, ಪೂವ೯ ವಲಯಾಧ್ಯಕ್ಷರಾದ ರಾಕೇಶ್ ಕುಂಜೂರು, ಸಂತೋಷ್ ಜಿ, ಪೂವ೯ ವಲಯಾಧಿಕಾರಿಗಳಾದ ಸುಹಾನ್ ಸಾಸ್ತಾನ, ಸತೀಶ್ ಪೂಜಾರಿ, ಸೌಮ್ಯ ರಾಕೇಶ್, ಸುಧಾಕರ್ ಕಾಕ೯ಳ,ರಾಘವೇಂದ್ರ ಪ್ರಭು,ಕವಾ೯ಲು, ಆಡಳಿತ ವಿಭಾಗದ ನಿದೇ೯ಶಕ ರಾಯನ್ ಕ್ರಾಸ್ತಾ ಮುಂತಾದವರಿದ್ದರು
ಹುಟ್ಟು ಹಬ್ಬದಂದು ಬಂಟಕಲ್ಲ್ ಲಯನ್ಸ್ ಅಧ್ಯಕ್ಷರಾದ ವಿಜಯ್ ಧೀರಜ್ ರಿಂದ ಶ್ಲಾಘನೀಯ ಕಾರ್ಯ
Posted On: 30 Oct 2020, 07:45 PM
ಸಮಾಜಸೇವೆಯ ಬಗ್ಗೆ ಆಸಕ್ತಿಯಿದ್ದು ಈಗಾಗಲೇ ಹಲವಾರು ಸಮಾಜಮುಖಿ ಸೇವೆಗಳನ್ನು ಮಾಡಿರುವ ಬಂಟಕಲ್ಲ್ ಲಯನ್ಸ್ ಕ್ಲಬ್ ಅಧ್ಯಕ್ಷರಾದ ವಿಜಯ್ ಧೀರಜ್ ಬಂಟಕಲ್ಲ್ ಇಂದು ತಮ್ಮ ಹುಟ್ಟು ಹಬ್ಬದ ಅಂಗವಾಗಿ ಜೀವ ನಿಧಿ ಸಂಘಟನೆಯೊಂದಿಗೆ MY BIRTHDAY BLOOD DONATION ಎಂಬ ಪೋಸ್ಟರ್ ಅನ್ನು ಬಿಡುಗಡೆ ಮಾಡುವುದರೊಂದಿಗೆ ಪ್ರತಿಯೊಬ್ಬರೂ ನಿಮ್ಮ ಜನ್ಮದಿನದ ಸಂದರ್ಭದಲ್ಲಿ ದಯವಿಟ್ಟು ರಕ್ತದಾನ ಮಾಡಿ ಮತ್ತು ನೀವು 3 ಜನರಿಗೆ ಜೀವ ನೀಡುವ ಮೂಲಕ ಅದನ್ನು ಆಚರಿಸಿ ಎಂದು ವಿನಂತಿಸಿದ್ದಾರೆ. ಇದಲ್ಲದೆ ತೀರಾ ಬಡ ಕುಟುಂಬದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೋರ್ವಳ ಒಂದು ವರ್ಷದ ಸಂಪೂರ್ಣ ಶಾಲೆಯ ಖರ್ಚು ವೆಚ್ಚದ ಜವಾಬ್ಧಾರಿ ತೆಗೆದುಕೊಂಡು ಅವರಿಗೆ ಈಗಾಗಲೇ 20 ಸಾವಿರದ ಚೆಕ್ ಹಸ್ತಾಂತರಿಸಿರುತ್ತಾರೆ. ಇವರ ಈ ಕಾರ್ಯಕ್ಕೆ ಸರ್ವರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.
ಪ್ರಾಮಾಣಿಕತೆ ಮೆರೆದ ಕಾಪು ಪುರಸಭೆಯ ಪೌರ ಕಾರ್ಮಿಕರು
Posted On: 30 Oct 2020, 01:21 PM
ಕಾಪು ಪುರಸಭಾ ವ್ಯಾಪ್ತಿಯ ಮಲ್ಲಾರು ಕೊಪ್ಪಲಂಗಡಿ ಅನಸೂಯ ಎನ್ ಕ್ಲೇವ್ ನಲ್ಲಿ ಕಸದ ಜತೆ ಕಳೆದು ಹೋಗಿರುವ 16 ಗ್ರಾಂ ತೂಕದ ಚಿನ್ನದ ಬ್ರಾಸ್ ಲೆಟ್ ನ್ನು ಅದರ ವಾರಸುದಾರರಿಗೆ ವಾಪಾಸು ನೀಡುವ ಮೂಲಕ ಕಾಪು ಪುರಸಭಾ ಕಾರ್ಮಿಕರು ಪ್ರಾಮಾಣಿಕತೆ ಮೆರೆದಿದ್ದಾರೆ. ವಾರಸುದಾರರು ನಗದು ಪುರಸ್ಕಾರ ನೀಡಿ ಗೌರವಿಸುವ ಮೂಲಕ ಕೃತಜ್ಞತೆ ಸಲ್ಲಿಸಿದರು.
25ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ವಿಕ್ರಂ ಕಾಪು ಮತ್ತು ಸುಜಯ ವಿಕ್ರಂ ದಂಪತಿ
Posted On: 29 Oct 2020, 11:34 PM
ಪ್ರೀತಿಯ ಮಧುರತೆಗೆ ಮದುವೆಯೆಂಬ ಬೆಸುಗೆಯು ಕೂಡಿ ಸುಂದರ ಸಂಸಾರಕ್ಕೆ ದೀವಿಗೆಯ ಜೋಡಿಯಾದ ವಿಕ್ರಂ ಕಾಪು ಮತ್ತು ಸುಜಯ ವಿಕ್ರಂರವರಿಗೆ ಸಂತಸದ ಸಂಭ್ರಮ ಅದುವೇ ಮದುವೆ ವಾರ್ಷಿಕೋತ್ಸವವ ನೆನಪಿಸುವ ದಿನ. ಕಾಪು ಬಿಲ್ಲವ ಸಂಘದ ಅಧ್ಯಕ್ಷರಾಗಿ, ಜನಾನುರಾಗಿಯಾಗಿರುವ ವಿಕ್ರಂ ಕಾಪು ಅವರಿಗೆ ಸಹಧರ್ಮಿಣಿಯಾಗಿ ಸುಜಯ ವಿಕ್ರಂರವರ ಸಂಪೂರ್ಣ ಸಹಕಾರವಿದೆ. ಇವರ ಮದುವೆಯ 25ನೇ ವಾರ್ಷಿಕೋತ್ಸವವನ್ನು ಆಚರಿಸಲಿದ್ದಾರೆ.
