Updated News From Kaup
ಬ್ರಹ್ಮಾವರದ ಆಶ್ರಮವಾಸಿಗಳ ಸಮ್ಮುಖದಲ್ಲಿ ಗಣೇಶ ಹಬ್ಬ ಆಚರಣೆ
Posted On: 23-08-2020 09:21AM
ಗಿರಿಜಾ ಕೃಷ್ಣ ಪೂಜಾರಿ ಚಾರಿಟೇಬಲ್ ಟ್ರಸ್ಟ್ (ರಿ.) ಕೂರಾಡಿ. ಅಪ್ಪ-ಅಮ್ಮ ಅನಾಥಾಲಯ ಬ್ರಹ್ಮಾವರ ಮೊದಲ ವಷ೯ದ ಗಣೇಶೋತ್ಸವ ಬ್ರಹ್ಮಾವರ: - ಅಪ್ಪ ಅಮ್ಮ"ಅನಾಥಾಲಯ (ಉಚಿತ ಸೇವೆ ) ಪ್ರಥಮ ವರ್ಷದ ಗಣೇಶೋತ್ಸವವನ್ನು ಆಶ್ರಮವಾಸಿಗಳಿಗಾಗಿ ಆಚರಿಸಲಾಯಿತು.ಈ ಸಂದಭ೯ದಲ್ಲಿ ಗಣಹೋಮ, ವಿಶೇಷ ಪೂಜೆ ಮತ್ತು ಸಹಭೋಜನ ನೆರವೇರಿತು. ಈ ಸಂದಭ೯ದಲ್ಲಿ ಉದ್ಯಮಿಗಳಾದ ಶ್ರೀಕಾಂತ್ ಶೆಣೈ, ಮೋಹನ್ ಶೆಟ್ಟಿ, ಸ್ವಚ್ಚ ಭಾರತ್ ಫ್ರೆಂಡ್ಸ್ ಸಂಯೋಜಕ ರಾಘವೇಂದ್ರ ಪ್ರಭು,ಕವಾ೯ಲು, ಉದಯ ನಾಯ್ಕ್, ಟ್ರಸ್ಟ್ ನ ಪ್ರಮುಖರಾದ ಗಿರಿಜಾ ಕೃಷ್ಣ ಪೂಜಾರಿ,ಆಶ್ರಮದ ಮುಖ್ಯಸ್ಥರಾದ ಪ್ರಶಾಂತ್ ಪೂಜಾರಿ ಕೂರಾಡಿ ಮುಂತಾದವರಿದ್ದರು.
ಚೌತಿಗೊಂದು ಚಿಂತನೆ ಬಂದು ಹೋಗುವ ಗಣಪತಿ
Posted On: 22-08-2020 08:25AM
| ಆರಾಧನೆಯ ಪೂರ್ವಾಪರ | ಆಗಮಿಸಿ , ಪೂಜೆಗೊಂಡು , ನಿರ್ಗಮಿಸುವ ಅಥವಾ ಆಹ್ವಾನಿಸಿ , ಆವಾಹಿಸಿ , ಪೂಜಿಸಿ ವಿಸರ್ಜಿಸುವ ದೇವರುಗಳಲ್ಲಿ "ಗಣಪತಿ" ಒಬ್ಬ . ಋತುಮಾನಕ್ಕೆ ಅನುಗುಣವಾಗಿ ನಿರ್ದಿಷ್ಟ ದಿನಗಳಲ್ಲಿ ಬಂದು ಹೋಗುವ ಈ ದೇವರುಗಳ ಆರಾಧನಾ ವಿಧಾನವು ಎಷ್ಟು ವೈಭವದಿಂದ ನಡೆದರೂ ತಾತ್ಕಾಲಿಕ ಕಲ್ಪನೆ ಮತ್ತು ಅನುಸಂಧಾನ ಆಧರಿತವಾಗಿರುವುದು ಗಮನಾರ್ಹ .ವರ್ಷಪೂರ್ತಿ ಬೇರೆಬೇರೆ ಸಂದರ್ಭಗಳಲ್ಲಿ ಇಂತಹ ದೇವರುಗಳ ಆಗಮನವಾಗುತ್ತಿರುತ್ತದೆ .ಶ್ರದ್ದೆಯ ಆರಾಧನೆ ನಡೆದು ಆ ದೇವರುಗಳನ್ನು ಬೀಳ್ಕೊಡಲಾಗುತ್ತದೆ . ಜನಪದರ ಆಟಿಯಅಜ್ಜಿ , ಸೋಣದ ಬಲೀಂದ್ರನತಾಯಿ , ಹೊಸ್ತಿಲಿನ ದೇವರು, ತೆನೆಕಟ್ಟುವ ಆಚರಣೆ , ತುಳುವರ ಪರ್ಬದ ಬಲೀಂದ್ರ , ಕೆಡ್ಡಸದ ಭೂಮಿತಾಯಿ , ಬಿಸುಕಣಿ ಹಾಗೂ ಶಿಷ್ಟದ ಗೌರಿ - ಗಣೇಶ , ನವರಾತ್ರಿಯ ಶಕ್ತಿಪೂಜೆ ,ದೀಪಾವಳಿಯ ಬಲೀಂದ್ರ ಮುಂತಾದ ದೇವರುಗಳು ತಾತ್ಕಾಲಿಕವಾಗಿ ನೆಲೆಗೊಂಡು , ಪೂಜೆಗೊಂಡು ನಿರ್ಗಮಿಸುವಂತವರು .ಈ ಸ್ಥಿರವಲ್ಲದ ಉಪಾಸನೆಗೆ ಮಣ್ಣಿನಮೂರ್ತಿ, ಕಲಶ ,ದೀಪ , ಸ್ವಸ್ತಿಕೆ(ಸುತ್ತೆ) ಮುಂತಾದ ಸಂಕೇತಗಳು ಮಾಧ್ಯಮಗಳಾಗುತ್ತವೆ . ಗೌರಿ - ಗಣೇಶರಿಗೆ ಮಣ್ಣಿನ ಮೂರ್ತಿಯಲ್ಲಿ ಪೂಜೆ .ಗಣೇಶನ ಎಷ್ಟೇ ಭೀಮಗಾತ್ರದ ಪ್ರತಿಮೆಯನ್ನಾದರೂ ಮಣ್ಣಿನಲ್ಲೆ ರಚಿಸುವುದು ,ಪೂಜೆಯ ಬಳಿಕ ನೀರಿನಲ್ಲಿ ವಿಸರ್ಜಿಸುವುದು . ನವರಾತ್ರಿಯ ಸಂದರ್ಭ ಕಲಶದಲ್ಲಿ ಆವಾಹನೆ - ಪೂಜೆ , ಸ್ವಸ್ತಿಕೆಯಲ್ಲಿ ಆರಾಧನೆ ಮತ್ತು ಶಾರದೆಯ ಮಣ್ಣಿನ ಮೂರ್ತಿಯ ಪೂಜೆ - ವಿಸರ್ಜನೆ ಇತ್ಯಾದಿ ವಿಶಿಷ್ಟ ವಿಧಾನದಲ್ಲಿ ಉಪಾಸನೆಗಳು ನಡೆದು ಬಂದಿದೆ . ಪೊಲಿ ( ಸಮೃದ್ಧಿ)ಯನ್ನು ತೆನೆಯ ರೂಪದಲ್ಲಿ ಮನೆ ತುಂಬಿಸಿಕೊಳ್ಳುವ ಆಚರಣೆ , ಬಲೀಂದ್ರನನ್ನು ದೀಪದಲ್ಲಿ - ಬೆಳೆಯ ಸಮೃದ್ಧಿಯಲ್ಲಿ ಕಾಣುವುದು , ಮನೆಯಂಗಳದಲ್ಲಿ ಬೂದಿಯಲ್ಲಿ ಬರೆಯುವ ರಂಗವಲ್ಲಿ ಹಾಗೂ ಅದರಲ್ಲಿರಿಸುವ ಮಂಗಳ ದ್ರವ್ಯಗಳಲ್ಲಿ ಕೆಡ್ಡಸದ ಆಚರಣೆಯ ಭೂಮಿತಾಯಿಯನ್ನು ಪೂಜಿಸುವುದು , ಮಂಗಳದ್ರವ್ಯಗಳೊಳಗೊಂಡ 'ವಿಷುಕಣಿ'ಯಲ್ಲಿ ಯುಗಾದಿಯ ಅಥವಾ ಹೊಸ ವರ್ಷದ ಭವಿಷ್ಯದ ದೇವರನ್ನು ಗುರುತಿಸುವುದು ಮುಂತಾದ ಕ್ರಮಗಳೆಲ್ಲ ತಾತ್ಕಾಲಿಕ ನೆಲೆಯಲ್ಲಿ ನೆರವೇರುತ್ತಿವೆ . ಅಂದರೆ ಈ ಸಂದರ್ಭಗಳಲ್ಲಿ ಪೂಜೆಗೊಳ್ಳುವ ನಂಬಿಕೆಗಳೆಲ್ಲ ಬಂದುಹೋಗುವ ಶ್ರದ್ಧೆಗಳಾಗಿವೆ .ಅಂತೆಯೇ ನಮ್ಮ ಗಣಪತಿ ಬಂದು ಹೋಗುವ ದೇವರುಗಳಲ್ಲಿ ಒಬ್ಬ . • ತಾಯಿ ಗೌರಿಯೊಂದಿಗೆ ಪ್ರತಿವರ್ಷ ಆಗಮಿಸಿ ಪೂಜೆಗೊಂಡು ನಿರ್ಗಮಿಸುವ ಗಣಪನ ಆರಾಧನೆಯಲ್ಲಿ ತಾಯಿ ಗೌರಿಗೂ ಪ್ರಾಧಾನ್ಯವಿದೆ .ಮೊದಲು "ಗೌರಿ ತೃತೀಯ , ಬಳಿಕ ಗಣೇಶ ಚತುರ್ಥಿ" ಇದರಿಂದ ಆದಿಪೂಜಿತನಾದರೂ ಮೊದಲು ತಾಯಿಗೆ ಪೂಜೆ . ಇಂದಿನ ಆಡಂಬರದ ವೈಭವೋಪೇತ ಗಣಪತಿ ,ದುರ್ಗೆಯರ ,ಬಲೀಂದ್ರನ ಉಪಾಸನಾ ವಿಧಾನಗಳ ಬಹು ವಿಸ್ತ್ರತ ಅಲಂಕಾರದ ಮರೆಯಲ್ಲಿ ಜನಸಾಮನ್ಯರ ಚಿಂತನೆಗೆ ಆಧಾರಗಳು ದೊರೆಯುತ್ತವೆ. ಸರಳ - ಸುಂದರ ಜನಪದೀಯ ಅನುಸಂಧಾನವು ಅಲ್ಲೆ ನಿಚ್ಚಳವಾಗಿರುತ್ತವೆ. ಏಕೆಂದರೆ ಜನಪದರ ಮನಸ್ಸುಗಳು ಕಲ್ಪಸಿದ ,ಆ ಆಲೋಚನೆಗಳನ್ನೆ ಮೂರ್ತಸ್ವರೂಪಕ್ಕೆ ಇಳಿಸಿದ ಪೂಜಾವಿಧಾನ - ಪ್ರತೀಕಗಳ ಚಿಂತನೆಗಳು ಸುಪ್ತವಾಗಿ ಗಮನ ಸೆಳೆಯುತ್ತಿರುತ್ತವೆ . ಸಹಜ ,ಮುಗ್ಧ ಚಿಂತನೆಯಿಂದ ವೈದಿಕದ ವೈಭವೋಪೇತ ಸೃಷ್ಟಿಯವರೆಗೆ ; ಬೇಟೆ ಸಂಸ್ಕೃತಿಯಿಂದ ಆರಂಭಿಸಿ ಆಧುನಿಕ ಜೀವನ ಶೈಲಿಯ ಹರವಿನಲ್ಲಿ ಮಣ್ಣಿನ ಮಗ ಮಹಾಕಾಯ ಮಹಾಗಣಪತಿಯ ಸ್ವೀಕಾರ ಮತ್ತು ಪೂಜಾವಿಧಾನಗಳಿಗೆ ರೋಚಕ ಇತಿಹಾಸವಿದೆ. ವಿಶ್ವದಾದ್ಯಂತ ಮಾನ್ಯತೆ ಇದೆ . ಒಂದು ಸಂಸ್ಕೃತಿಯ ಸಂಕೇತವಾಗಿ , ಒಬ್ಬ ಗಣವಾಗಿ , ಬ್ರಹ್ಮಣಸ್ಪತಿಯಾಗಿ , ಗಣಾಧ್ಯಕ್ಷನಾಗಿ ಈ ವಿನಾಯಕ ಆಧ್ಯಾತ್ಮಿಕ ಪ್ರಪಂಚದಲ್ಲಿ ಏರಿದ ಎತ್ತರ ಊಹಿಸಲಸಾಧ್ಯ .ಆಸ್ತಿಕ ,ನಾಸ್ತಿಕ ಭೇದವಿಲ್ಲದೆ ಬಹುಮಾನ್ಯನಾದ ದೇವರು ಗಣಪತಿ .ಜಾತಿ - ಮತ - ಪಂಥಗಳ ಕಟ್ಟುಪಾಡುಗಳನ್ನು ಮೀರಿ ವಿಶ್ವವ್ಯಾಪಿಯಾಗಿ ತನ್ನ ಆಕರ್ಷಕ ವರ್ಚಸ್ಸಿನ ಮೂಲಕ ವಿಶ್ವವಂದ್ಯನಾದ ದೇವರು ವಿಶ್ವಂಬರ ಮೂರ್ತಿಯಾಗಿ ಬೆಳೆದದ್ದು ,ಜನಮಾನಸದಲ್ಲಿ ಸ್ಥಾಯೀ ಸ್ಥಾನವನ್ನು ಪಡೆದದ್ದು ಮಾತ್ರ ಸತ್ಯ .
ಬಂಟಕಲ್ಲು - ಕೊಂಕಣಿ ಮಾನ್ಯತಾ ದಿನಾಚರಣೆ
Posted On: 20-08-2020 08:09PM
ಕೊಂಕಣಿ ಬಾಷೆಯನ್ನು 1992 ರ ಅಗೋಷ್ಟ್ 20 ರಂದು ಸಂವಿಧಾನದ 8 ನೇ ಪರಿಚ್ಚೇದಕ್ಕೆ ಸೇರಿಸಲಾಯಿತು. ಕೊಂಕಣಿ ಬಾಷೆಗೆ ಸಂವಿಧಾನಿಕ ಸ್ಥಾನ ಮಾನ ಸಿಕ್ಕಿದ ಈ ದಿನವನ್ನು ಕೊಂಕಣಿ ಮಾನ್ಯತಾ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಬಂಟಕಲ್ಲು ರಾಜಾಪುರ ಸಾರಸ್ವತ ಯುವ ವೃಂದದ ಆಶ್ರಯದಲ್ಲಿ ಕೊಂಕಣಿ ಮಾನ್ಯತಾ ದಿನಾಚರಣೆಯನ್ನು ಬಂಟಕಲ್ಲು ದೇವಸ್ಥಾನದ ವಠಾರದಲ್ಲಿ ಆಚರಿಸಲಾಯಿತು.
ಬಿರುವೆರ್ ಕಾಪು ಸೇವಾ ಟ್ರಸ್ಟ್ 2020ನೇ ಸಾಲಿನ ವಿದ್ಯಾರ್ಥಿ ವೇತನ ಅರ್ಜಿ ಅಹ್ವಾನ
Posted On: 18-08-2020 10:21AM
ಕಾಪು ತಾಲೂಕಿನಲ್ಲಿ ಎರಡನೇ ಬಾರಿಗೆ ಬಿರುವೆರ್ ಕಾಪು ಸೇವಾ ಟ್ರಸ್ಟ್ ಇದರ ವತಿಯಿಂದ ಕಾಪು ತಾಲೂಕಿನ ಬಿಲ್ಲವ ಸಮಾಜದ ವಿದ್ಯಾರ್ಥಿಗಳಿಗೆ *ಜ್ಞಾನ ದೀವಿಗೆ 2020* ಎಂಬ ಯೋಜನೆಯಲ್ಲಿ ವಿದ್ಯಾರ್ಥಿ ವೇತನ ನೀಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಆರ್ಥಿಕವಾಗಿ ಹಿಂದುಳಿದಿದ್ದು ಹಿಂದಿನ ತರಗತಿಯಲ್ಲಿ ಕಲಿಕೆಯಲ್ಲಿ ಶೇಕಡಾ 85% ಗಿಂತ ಹೆಚ್ಚು ಅಂಕಗಳಿಸಿದ್ದರೆ ಆತನು ಅಥವಾ ಆಕೆಯು *ಜ್ಞಾನ ದೀವಿಗೆ 2020* ಯೋಜನೆಯ ಫಲಾನುಭವಿಯಾಗಬಹುದು (ವಿ.ಸೂ : ಬಿರುವೆರ್ ಕಾಪು ಸೇವಾ ಟ್ರಸ್ಟ್ ಪರಿಶೀಲಿಸಿದ ಅರ್ಜಿಯಲ್ಲಿ ಯೋಜನೆಗೆ ಅರ್ಹರಾದವರು ಮಾತ್ರ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು.. )
ಆನ್ ಲೈನ್ ಜೂಜಿಗೆ ತೀಲಾಂಜಲಿ ಹಾಕಬೇಕಾಗಿದೆ
Posted On: 18-08-2020 08:51AM
ದಿನ ಬೆಳಗಾದರೆ ಸಾಕು ಮೊಬೈಲ್ನಲ್ಲಿ ಸಾಮಾಜಿಕ ಜಾಲತಾಣ ನೋಡಿದಾಗ ನಮಗೆ ನೋಡಲು ಸಿಗುವುದು ರಮ್ಮಿ ಆಡಿ ಕ್ಯಾಶ್ ಗೆಲ್ಲಿ ಇಂತಹ ಹಾದಿ ತಪ್ಪಿಸುವಂತಹ ಮೆಸೇಜ್ ಗಳು ಮತ್ತು ಜಾಹೀರಾತುಗಳು,ಇದನ್ನು ನೋಡಿದವರು ತಪ್ಪಿಯೂ ಹಣ ಕೊಟ್ಟು ಆಡಿದರೆ ನಿಮ್ಮ ಕಥೆ ಮುಗಿಯಿತು ಕಾರಣ ಈ ಜೂಜು ನಿಮ್ಮ ಮನೆಹಾಳು ಮಾಡುವುದು ಖಂಡಿತ.ಈ ರಮ್ಮಿ ರೀತಿಯ ಆನ್ ಲೈನ್ ಗೇಮ್ಸ್ ಗಳು ಇಂದು ದೇಶದೆಲ್ಲೆಡೆ ವ್ಯಾಪಕವಾಗಿ ಹರಡಿದೆ,ಇದರಿಂದ ಬಹಳಷ್ಟು ಜನರು ಸಂಕಷ್ಟ ಅನುಭವಿಸಿದ್ದಾರೆ. ಅನೇಕರು ತಾವು ಉಳಿತಾಯ ಮಾಡಿದ ಹಣವನ್ನು ಕಳೆದುಕೊಂಡು, ಈ ಜೂಜು ಆಡಲು ಬೇರೆಯವರ ಬಳಿ ಸಾಲ ಮಾಡಿಕೊಂಡು ಆ ಸಾಲ ತೀರಿಸಲು ಸಾಧ್ಯವಾಗದೆ ಕೊನೆಗೆ ನೇಣಿಗೆ ಶರಣಾಗುತ್ತಿದ್ದಾರೆ.ಅದೇ ರೀತಿ ಅನೇಕ ಮಂದಿ ತಮ್ಮ ಮನೆ, ಆಸ್ತಿ-ಪಾಸ್ತಿ ಮಾರುತ್ತಿರುವುದು ನಮಗೆ ಕಾಣಸಿಗುತ್ತದೆ. ಅಂದಾಜು ಸುಮಾರು 2 ಸಾವಿರಕ್ಕೂ ಅಧಿಕ ವೆಬ್ಸೈಟ್ಗಳು ಭಾರತದಲ್ಲಿ ಆನ್ಲೈನ್ ಗ್ಯಾಂಬ್ಲಿಂಗ್ ಪ್ರೋತ್ಸಾಹ ನೀಡುತ್ತಿವೆ. ಈ ರೀತಿಯ ಜೂಜು ಆಡಲು ಜಾಹೀರಾತು ನೀಡುವ ವವರು ಪ್ರಖ್ಯಾತ ಚಲನಚಿತ್ರ ನಟರು ಅದೇ ರೀತಿ ಕ್ರಿಕೇಟ್ ಆಟಗಾರರಾಗಿರುವುದು ದುರಂತದ ವಿಷಯ. ಈ ರೀತಿಯ ಜೂಜು ಯುವ ಜನರ ಮೇಲೆ ಎಷ್ಟು ಪರಿಣಾಮ ಬೀರಿದೆ ಎಂದರೆ ಈ ಘಟನೆಯೇ ಸಾಕ್ಷಿಯಾಗಿದೆ. ಚೈನ್ನೈ ನಗರದಲ್ಲಿ ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ವ್ಯಕ್ತಿ ಒನ್ಲೈನ್ ಜೂಜಿನ ಮಾಯಾಜಾಲಕ್ಕೆ ಬಿದ್ದು,ಯಾರೋ ಕಸ್ಟಮರ್ ಕೊಟ್ಟಿದ್ದ ಬಂಗಾರವನ್ನು ಬೇರೆ ಅಂಗಡಿಯಲ್ಲಿ ಮಾರಿ ಅದನ್ನು ಒನ್ಲೈನ್ ಜೂಜಿಗೆ ಕಟ್ಟಿ ಅದರಲ್ಲಿ ತನ್ನೆಲ್ಲಾ ಹಣವನ್ನು ಕಳೆದುಕೊಂಡು ಕೊನೆಗೆ ಸಮಾಜದದಲ್ಲಿ ಮಯಾ೯ದೆಗೆ ಹೆದರಿ ರೈಲಿಗೆ ತಲೆ ಕೊಟ್ಟು ತನ್ನ ಜೀವನ ತ್ಯಜಿಸಿರುತ್ತಾನೆ. ಆಂಧ್ರಪ್ರದೇಶ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಅನೇಕರು ಆನ್ಲೈನ್ ಜೂಜಿಗೆ ಸಿಲುಕಿ ನೇಣು ಬಿಗಿದುಕೊಂಡವರ ಕಥೆಯನ್ನು ನಾವು ಪತ್ರಿಕೆಗಳಲ್ಲಿ ಓದಿದ್ದೇವೆ. ಈ ಜೂಜಿನ ವಿಷಯದ ಕುರಿತು ಇದರ ಆಳಕ್ಕೆ ಹೋದರೆ ಅನೇಕ ರೀತಿಯ ದಂತ ಕಥೆಗಳನ್ನು ನಾವು ನೋಡಬಹುದು. ಈ ಜೂಜಿಗೆ ಇನ್ನೆಷ್ಟು ಯುವಕರು ಬಲಿ ತೆಗೆದುಕೊಳ್ಳಬೇಕೋ ತಿಳಿಯದು. ನಾವು ನಮ್ಮ ಮಕ್ಕಳಿಗೆ ಮೊಬೈಲ್ ಕೊಡುವಾಗ ಎಷ್ಟು ಎಚ್ಚರವಹಿಸಬೇಕಾಗಿದೆ.,ಆಗಾಗ ಮಕ್ಕಳ ಮೊಬೈಲ್ ಅನ್ನು ನೋಡುತ್ತಾ ಇರಬೇಕಾದ ಪರಿಸ್ಥಿತಿ ಇದೆ.ಈಗ ಎಲ್ಲ ಕಡೆ ಆನ್ ಲೈನ್ ತರಗತಿ ನಡೆಯುವ ಸಂದಭ೯ದಲ್ಲಿ ಮಕ್ಕಳು ಈ ರೀತಿಯ ಅನ್ ಲೈನ್ ಜೂಜಿನ ಖೆಡ್ಡಕ್ಕೆ ಬೀಳುವ ಸಂದಭ೯ವಿದೆ ಹೀಗಾಗಿ ಪೋಷಕರು ಈ ಬಗ್ಗೆ ಗಮನ ಹರಿಸಬೇಕಾದ ಸ್ಥಿತಿಯಿದೆ.
ಮೂಕ ಪ್ರಾಣಿಗಳ ನೋವಿಗೆ ಮಿಡಿಯುತ್ತಿರುವ ಕಾಪು ತುಳುನಾಡ ಹಿಂದೂ ಸೇನೆ
Posted On: 17-08-2020 07:20PM
ಕಳೆದ ಸ್ವಲ್ಪ ದಿನಗಳ ಹಿಂದೆಯಷ್ಟೇ ಸ್ಥಾಪನೆಯಾದ ತುಳುನಾಡ ಹಿಂದೂ ಸೇನೆ ಮೂಕ ಪ್ರಾಣಿಗಳ ನೋವಿಗೆ ಮಿಡಿಯುತ್ತಿದ್ದು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ..
ಕಾಜಾರಗುತ್ತು ಶ್ರೀ ಸಾಯಿ ನೂತನ ಸ್ವಸಹಾಯ ಸಂಘ ಉದ್ಘಾಟನೆ
Posted On: 16-08-2020 10:15PM
ಉಡುಪಿ :- ಶ್ರೀ ಕ್ಷೇ.ಧ.ಗ್ರಾ ಯೋಜನೆ ಉಡುಪಿ ಇದರ ಕಾಜಾರ ಗುತ್ತು ಒಕ್ಕೂಟ ಇದರ ನೂತನ ಸ್ವ.ಸಹಾಯ ಸಂಘದ ಉದ್ಘಾಟನೆ ಆ.16 ರಂದು ನಡೆಯಿತು. ಶ್ರೀ ಸಾಯಿ ಸ್ವ-ಸಹಾಯ ಸಂಘದ ಪದಾಧಿಕಾರಿಗಳಿಗೆ ದಾಖಲಾತಿ ಪುಸ್ತಕಗಳನ್ನು ಹಸ್ತಾಂತರಿಸಲಾಯಿತು. ಅದ್ಯಕ್ಷ ನಿತೀಶ್ ನಾಯಕ್, ಪದಾಧಿಕಾರಿಗಳು ಉಪಸ್ಥಿತರಿದ್ದರು. ಸೇವಾ ಪ್ರತಿನಿಧಿಗಳಾದ ಶ್ಯಾಮಲ, ಮೀರಾ ನಾಯಕ್ , ಒಕ್ಕೂಟದ ಅಧ್ಯಕ್ಷೆ ಸೌಮ್ಯ, ಶಿವಶಕ್ತಿ ಸಂಘದ ಸದಸ್ಯೆಯರು ಭಾಗವಹಿಸಿದ್ದರು.
ನೀಲಾವರ ಗೋಶಾಲೆಗೆ ಹುಲ್ಲು ನೀಡುವ ಮೂಲಕ ಗೋವಿಗಾಗಿ ಮೇವು ಅಭಿಯಾನ
Posted On: 16-08-2020 08:18PM
ಉಡುಪಿ :- "ಸಕ್ಷಮಾ ಉಡುಪಿ " ಇದರ ವತಿಯಿಂದ ಸ್ಪoದನ ವಿಶೇಷ ಮಕ್ಕಳ ಪ್ರನರ್ವಸತಿ ಕೇಂದ್ರ ಮತ್ತು ಯುವ ವಿಚಾರ ವೇದಿಕೆ ಇದರ ಸಹಕಾರದಲ್ಲಿ ನೀಲಾವರ ಶ್ರೀ ಪೇಜಾವರ ಮಠದ ಗೋ ಶಾಲೆಗೆ " ಗೋವಿಗಾಗಿ ಮೇವು " ಹಸಿರು ಹುಲ್ಲು ನೀಡುವ ಕಾಯ೯ಕ್ರಮ ಆ.16 ಆದಿತ್ಯವಾರ ನಡೆಯಿತು. ಸುರಿಯುವ ಮಳೆಯನ್ನು ಲೆಕ್ಕಿಸದೆ ವಿಶೇಷ ಮಕ್ಕಳು ಮತ್ತು ಸದಸ್ಯರು ಸಂತೆಕಟ್ಟೆ ಕಲ್ಯಾಣಪುರ ರಸ್ತೆಯ ಬದಿಯಲ್ಲಿರುವ ಹುಲ್ಲನ್ನು ಕಟಾವು ಮಾಡಿ ನೀಡಲಾಯಿತು. ಈ ಸಂದಭ೯ದಲ್ಲಿ ಶ್ರೀ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀಥ೯ ಶ್ರೀಪಾದರು ತಂಡದ ಸದಸ್ಯರನ್ನು ಗೌರವಿಸಿದರು. ಕಾಯ೯ಕ್ರಮದಲ್ಲಿ ಮೂಡಬಿದ್ರೆ ಆಳ್ವಾಸ್ ಎಜುಕೇಶನ್ ನ ಡಾ|| ಮೋಹನ್ ಆಳ್ವ ,ಬಿಲ್ಲಾಡಿ ಗ್ರಾ.ಪಂ ಮಾಜಿ ಅಧ್ಯಕ್ಷ ಗೋವಿಗಾಗಿ ಮೇವು ಅಭಿಯಾನದ ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಸ್ಪoದನ ಸಂಸ್ಥೆಯ ಉಮೇಶ್, ಜನಾಧ೯ನ್,ಸಕ್ಷಮಾ ಅಧ್ಯಕ್ಷೆ ಲತಾ ಭಟ್,ಕಾಯ೯ದಶಿ೯ ರಾಘವೇಂದ್ರ ಪ್ರಭು, ಕವಾ೯ಲು, ಸುಬ್ರಮಣ್ಯ ಆಚಾಯ೯, ಯೋಗೀಶ್, ಉದಯ ನಾಯ್ಕ ಮುಂತಾದವರಿದ್ದರು.
ಉಡುಪಿ ತಾಲೂಕು ಪಂಚಾಯತ್ ನೂತನ ಪದಾಧಿಕಾರಿಗಳ ಆಯ್ಕೆ
Posted On: 15-08-2020 08:37PM
ಉಡುಪಿ ತಾಲೂಕು ಪಂಚಾಯತ್ ಅಧ್ಯಕ್ಷೆಯಾಗಿ ಸಂಧ್ಯಾ ಕಾಮತ್ ಹಾಗು ಉಪಾಧ್ಯಕ್ಷರಾಗಿ ಶರತ್ ಬೈಲಕೆರೆ ಇವರು ಆಯ್ಕೆಯಾಗಿದ್ದಾರೆ ಅಭಿನಂದನೆಗಳು : ಕೋಟಿ ಚೆನ್ನಯ ಫ್ರೆಂಡ್ಸ್, ಉಡುಪಿ
ಬಂಟಕಲ್ಲು ಪರಿಸರದಲ್ಲಿ 74 ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ
Posted On: 15-08-2020 07:45PM
ನಾಗರಿಕ ಸೇವಾ ಸಮಿತಿ (ರಿ) ಬಂಟಕಲ್ಲು ಹಾಗೂ ಕಾರು ಚಾಲಕರ ಮತ್ತು ಮಾಲಕರ ಸಂಘ ಬಂಟಕಲ್ಲು ಇವರ ಜಂಟಿ ಆಶ್ರಯದಲ್ಲಿ 74 ನೇ ಸ್ವಾತಂತ್ರೋತ್ಸವ ದಿನಾಚರಣೆ ಕಾರ್ಯಕ್ರಮವು ಇಂದು ಬಂಟಕಲ್ಲು ಪೇಟೆಯಲ್ಲಿ ನಡೆಯಿತು. ಬಂಟಕಲ್ಲು ಕಾರು ಚಾಲಕ ಮಾಲಕರ ಸಂಘದ ಗೌರವಾಧ್ಯಕ್ಷರಾದ ಶ್ರಿ ಮಾದವ ಕಾಮತ್ ರವರು ಧ್ವಜಾರೋಹಣಗೈದು ಮತ್ತು ಶುಭಾಶಯ ಕೋರಿದರು.
