Updated News From Kaup
ಕೋವಿಡ್ ಲಸಿಕೆ ನೀಡಲು ಡೇಟಾ ಬೇಸ್ ಸಿದ್ದಪಡಿಸಿ: ಜಿಲ್ಲಾಧಿಕಾರಿ ಜಿ.ಜಗದೀಶ್
Posted On: 29 Oct 2020, 06:50 PM
ಉಡುಪಿ : ಕೋವಿಡ್19 ಗೆ ಲಸಿಕೆ ತಯಾರಿಕೆಯು ಅಂತಿಮ ಹಂತದಲ್ಲಿದ್ದು, ಕೇಂದ್ರ ಸರ್ಕಾರದ ನಿರ್ದೇಶನದಂತೆ, ಲಸಿಕೆಯನ್ನು ಪ್ರಾಥಮಿಕ ಹಂತದಲ್ಲಿ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿಗಳು, ಮತ್ತು ಸಹಾಯಕ ಸಿಬ್ಬಂದಿಗಳಿಗೆ ನೀಡಬೇಕಿದ್ದು, ಇದಕ್ಕಾಗಿ ಜಿಲ್ಲೆಯಲ್ಲಿರುವ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಕ್ಷೇತ್ರದ ಸಿಬ್ಬಂದಿಗಳ ಮಾಹಿತಿಯ ಡೇಟಾಬೇಸ್ ನ್ನು ಶೀಘ್ರದಲ್ಲಿ ಸಿದ್ದಪಡಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿ. ಜಗದೀಶ್ ಸೂಚಿಸಿದರು. ಅವರು ಗುರುವಾರ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ , ಕೋವಿಡ್ ಲಸಿಕಾ ಜಿಲ್ಲಾ ಲಸಿಕಾ ಕಾರ್ಯಪಡೆ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೋವಿಡ್19 ಲಸಿಕೆ ನೀಡಲು ಜಿಲ್ಲೆಯಲ್ಲಿ ಕೆಪಿಎಂಇ ಕಾಯ್ದೆಯಡಿ ನೊಂದಣಿಯಾಗಿ ವೈದ್ಯಕೀಯ ಸೇವೆ ಒದಗಿಸುತ್ತಿರುವ 982 ಖಾಸಗಿ ಸಂಸ್ಥೆಗಳು ಹಾಗೂ 92 ಸರಕಾರಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ, ವೈದ್ಯರು, ಶುಶ್ರೂಶಕರು, ಲ್ಯಾಬ್ ಟೆಕ್ನೀಷಿಯನ್ ಗಳು, ಸಹಾಯಕ ಸಿಬ್ಬಂದಿ ಸೇರಿದಂತೆ ಪ್ರತಿಯೊಬ್ಬರ ವಿವರಗಳನ್ನು ಸಮಗ್ರವಾಗಿ ದಾಖಲಿಸಿಕೊಳ್ಳುವಂತೆ ಸೂಚಿಸಿದ ಜಿಲ್ಲಾಧಿಕಾರಿ ಜಿ.ಜಗದೀಶ್, ನಂತರದ ಹಂತದಲ್ಲಿ ವೃದ್ದರು ಮತ್ತು ದುರ್ಬಲ ವ್ಯಕ್ತಿಗಳಿಗೆ ಲಸಿಕೆ ನೀಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದರು. ಜಿಲ್ಲೆಯಲ್ಲಿ ಮಕ್ಕಳಿಗೆ ನೀಡುವ ನಿಗಧಿತ ಲಸಿಕೆಗಳನ್ನು ಯಾವುದೇ ಕಾರಣಕ್ಕೂ ತಪ್ಪಿಸದಂತೆ ಸೂಚಿಸಿದ ಜಿಲ್ಲಾಧಿಕಾರಿ ನಿರಂತರವಾಗಿ ಕಾಯಕ್ರಮಗಳನ್ನು ಆಯೋಜಿಸಿ ಲಸಿಕೆ ನೀಡಿ, ಲಾಕ್ಡೌನ್ ಸಮಯದಲ್ಲಿ ಕುಂಠಿತಗೊAಡಿರುವ ಗುರಿಯನ್ನು ಪೂರ್ಣಗೊಳಿಸುವಂತೆ ಸೂಚಿಸಿದರು. ಹೆರಿಗೆ ವೇಳೆ ತಾಯಿ ಮರಣವನ್ನು ತಪ್ಪಿಸಲು ಎಲ್ಲಾ ರೀತಿಯ ಗರಿಷ್ಠ ಪ್ರಯತ್ನ ಮಾಡಿ, ಗರ್ಭಿಣಿಯರಿಗೆ ಹೆರಿಗೆ ವೇಳೆ ಸಮಸ್ಯೆ ಕಂಡು ಬರುವ ಸಾಧ್ಯತೆಯಿದ್ದಲ್ಲಿ ಅವರ ಚಿಕಿತ್ಸೆಗೆ ಮುಂಚಿತವಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದರು. ಜಿಲ್ಲೆಯಲ್ಲಿ ಕೋವಿಡ್ -19 ಪ್ರಮಾಣ ಕಡಿಮೆಯಾಗುತ್ತಿದ್ದು, ಸಾವುಗಳು ಸಹ ಕಡಿಮೆಯಾಗಿವೆ, ಸಾರ್ವಜನಿಕರು , ಕೋವಿಡ್ ಸಂಪೂರ್ಣವಾಗಿ ನಾಶವಾಗುವವರೆಗೆ ಸಾಮಾಜಿಕ ಅಂತರ ಪಾಲನೆ ಮತ್ತು ಮಾಸ್ಕ್ ಧರಿಸುವುದನ್ನು ನಿತ್ಯದ ರೂಡಿಯನ್ನಾಗಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಡಾ. ನವೀನ್ ಭಟ್, ಡಿಹೆಚ್ಓ ಡಾ. ಸುಧೀರ್ ಚಂದ್ರ ಸೂಡಾ, ಜಿಲ್ಲಾ ಸರ್ಜನ್ ಡಾ.ಮಧುಸೂದನ್ ನಾಯಕ್, ಆರೋಗ್ಯ ಇಲಾಖೆಯ ಅಧಿಕಾರಿಗಳು , ಖಾಸಗಿ ಆಸ್ಪತ್ರೆಗಳ ವೈದ್ಯರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಎಂ.ಜಿ.ರಾಮ ಸ್ವಾಗತಿಸಿ, ವಂದಿಸಿದರು.
ಕಾಪು ಪುರಸಭೆಗೆ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
Posted On: 29 Oct 2020, 11:07 AM
23 ಸದಸ್ಯ ಬಲ ಹೊಂದಿರುವ ಕಾಪು ಪುರಸಭೆಯ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಅನಿಲ್ ಕುಮಾರ್ ಹಾಗೂ ಕಾಂಗ್ರೆಸ್ ಬೆಂಬಲಿತ ಮಾಲಿನಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ. ಪುರಸಭಾ ವ್ಯಾಪ್ತಿಯಲ್ಲಿ ಮೂಲ ಸೌಕರ್ಯಕ್ಕೆ ಒತ್ತು ನೀಡುವಲ್ಲಿ ಶ್ರಮಿಸುವುದಾಗಿ ನೂತನ ಅಧ್ಯಕ್ಷರಾದ ಅನಿಲ್ ಕುಮಾರ್ ತಿಳಿಸಿದ್ದಾರೆ.
ಕಾಪುವಿನಲ್ಲಿ ಶಾಸಕರಿಂದ ವಿದ್ಯುತ್ಚಾಲಿತ ಸೈಕಲ್ ಶೋರೂಮ್ ಉದ್ಘಾಟನೆ
Posted On: 29 Oct 2020, 10:36 AM
ಕಾಪು ತಾಲೂಕು ಕಚೇರಿ ಹತ್ತಿರದ ಪೊಲಿಪು ಮೀನುಗಾರರ ಸಹಕಾರಿ ಸಂಘ ಕಟ್ಟಡದಲ್ಲಿರುವ ಎಸ್ಸೆಲ್ ಎನರ್ಜಿ ಮುದ್ರೆಯ ಎಲೆಕ್ಟ್ರಿಕಲ್ ಸೈಕಲ್ ಶೋರೂಮ್ ವಿಘ್ನೇಶ್ವರ ಎಂಟರ್ಪ್ರೈಸಸ್ ನ್ನು ಕಾಪು ಶಾಸಕರಾದ ಲಾಲಾಜಿ ಆರ್. ಮೆಂಡನ್ ಉದ್ಘಾಟಿಸಿ ಸಂಸ್ಥೆಗೆ ಶುಭಹಾರೈಸಿದರು. ಈ ಸಂದರ್ಭದಲ್ಲಿ ಗಂಗಾಧರ ಸುವರ್ಣ, ಲೀಲಾಧರ್ ಶೆಟ್ಟಿ, ಕೇಶವ ಜಿ ಮೆಂಡನ್, ಕೃಷ್ಣ ಕರ್ಕೇರ ಮೊದಲಾದವರು ಉಪಸ್ಥಿತರಿದ್ದರು.
ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಉಡುಪಿ, ದಕ್ಷಿಣಕನ್ನಡ ಜಿಲ್ಲೆಯ 5 ಮಂದಿ ಹಾಗೂ ಒಂದು ಸಂಸ್ಥೆ ಆಯ್ಕೆ
Posted On: 29 Oct 2020, 10:18 AM
ಕರ್ನಾಟಕ ಸರಕಾರದಿಂದ ನೀಡಲ್ಪಡುವ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ರಾಜ್ಯೋತ್ಸವ ಪ್ರಶಸ್ತಿಯಾಗಿದೆ. ಈ ಬಾರಿ 65ನೇ ವರ್ಷಾಚರಣೆಯ ಪ್ರಯುಕ್ತ 65 ಮಂದಿ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಗುತ್ತದೆ., ಕಲೆ, ಸಾಹಿತ್ಯ, ರಂಗಭೂಮಿ,ಸಿನಿಮಾ, ಸಂಗೀತ,ನೃತ್ಯ, ಜಾನಪದ, ಯಕ್ಷಗಾನ, ಬಯಲಾಟ, ಶಿಲ್ಪಕಲೆ, ಚಿತ್ರಕಲೆ, ಸಮಾಜಸೇವೆ, ಸಂಕೀರ್ಣ, ಪತ್ರಿಕೋದ್ಯಮ/ ಮಾಧ್ಯಮ, ಕ್ರೀಡೆ, ವೈದ್ಯಕೀಯ, ಶಿಕ್ಷಣ, ಕೃಷಿ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸಾಧಕರನ್ನು ಆಯ್ಕೆ ಮಾಡಲಾಗುತ್ತದೆ. ಉಡುಪಿ ಜಿಲ್ಲೆಗೆ ಈ ಬಾರಿ ಸಮಾಜಸೇವೆಯಲ್ಲಿ ಮಣೆಗಾರ್ ಮೀರಾನ್ ಸಾಹೇಬ್, ನ್ಯಾಯಾಂಗದಲ್ಲಿ ಎಂ.ಕೆ.ವಿಜಯಕುಮಾರ್ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದಿರುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ವಲೇರಿಯನ್ ಡಿಸೋಜ (ವಲ್ಲಿ ವಗ್ಗ), ಸಂಗೀತ ಕ್ಷೇತ್ರದಲ್ಲಿ ಕೆ. ಲಿಂಗಪ್ಪ ಶೇರಿಗಾರ ಕಟೀಲು, ಹೊರನಾಡು ಕನ್ನಡಿಗ ದಕ್ಷಿಣ ಕನ್ನಡ ಜಿಲ್ಲೆಯ ಮೂಲದ ಕುಸುಮೋದರದೇರಣ್ಣ ಶೆಟ್ಟಿ ಕೇಲ್ತಡ್ಕ, ಸಂಘ-ಸಂಸ್ಥೆಯಲ್ಲಿ ಧರ್ಮಸ್ಥಳದ ಧರ್ಮೋತ್ಥಾನ ಟ್ರಸ್ಟ್ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದುಕೊಂಡಿದೆ. ನವೆಂಬರ್ ಒಂದು ಕನ್ನಡ ರಾಜ್ಯೋತ್ಸವದಂದು ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಕಾಪುವಿನಲ್ಲಿ ಸಾರ್ವಜನಿಕರಿಗೆ ಉಪಯೋಗಕ್ಕೆ ಬಾರದ ಕುಡಿಯುವ ನೀರಿನ ಯಂತ್ರ ಶೋಗೆ ಇಟ್ಟಿದ್ದಾರೆಯೇ ?
Posted On: 28 Oct 2020, 09:10 AM
ಕಳೆದ ಕೆಲವು ತಿಂಗಳ ಹಿಂದಷ್ಟೇ ನಮ್ಮ ಕಾಪು ವೆಬ್ ಪೋರ್ಟಲ್ ನಲ್ಲಿ ಕುಡಿಯುವ ನೀರಿನ ಯಂತ್ರದ ಬಗ್ಗೆ ವರದಿ ಮಾಡಿತ್ತು.. ಇಲ್ಲಿಯವರೆಗೆ ಯಾವುದೇ ಅಧಿಕಾರಿಗಳ ಪ್ರತಿಕ್ರಿಯೆಯೂ ವ್ಯಕ್ತವಾಗಿಲ್ಲ. ಸರ್ವಿಸ್ ರೋಡ್ ನಲ್ಲಿ ಉಡುಪಿ, ಮಂಗಳೂರು ಎಕ್ಸ್ಪ್ರೆಸ್ ಬಸ್ ನಿಲ್ಲುವ ಜಾಗದಲ್ಲಿ ಈ ಯಂತ್ರ ಇದೆ. ಉದಯ ಕಿಚನೆಕ್ಸ್ಟ್ ಎದುರುಗಡೆ ಮತ್ತು ಅಯ್ಯಂಗಾರ್ ಬೇಕರಿಯ ಹತ್ತಿರದಲ್ಲಿ ಇರುವ ಕುಡಿಯುವ ನೀರಿನ ಯಂತ್ರ ಇದಾಗಿದ್ದು.. ಈ ಯಂತ್ರ ಸರ್ಕಾರದಿಂದ ಅಥವಾ ದಾನಿಗಳಿಂದ ಬಂದ ಯಂತ್ರ ಆಗಿರಬಹುದು ಆದರೇ ಅಧಿಕಾರಿಗಳ ನಿರ್ಲಕ್ಷ್ಯತನ ನೋಡಿ ಯಂತ್ರ ವರ್ಕ್ ಆಗದೇ ಇದ್ದರು ಕೂಡಾ ಹಾಗೆ ಬಿಟ್ಟಿದ್ದಾರೆ.. ಒಂದೋ ಯಂತ್ರವನ್ನು ಅಲ್ಲಿಂದ ಎತ್ತಂಗಡಿ ಮಾಡಿ ಅಥವಾ ಸಾರ್ವಜನಿಕರಿಗೆ ಉಪಯೋಗವಾಗುವಂತೆ ದಿನದ 24 ಗಂಟೆ ನೀರು ಬರುವಂತೆ ಮಾಡಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಸ್ನೇಹ ಜೀವಿಯಿಂದ ನವರಾತ್ರಿತಿಳಿವು, ಗೌರವಾರ್ಪಣೆ , ಶುಭಹಾರೈಕೆ
Posted On: 27 Oct 2020, 03:57 PM
ಕಟಪಾಡಿ : ಉಡುಪಿಯ ಗಣೇಶ ರಾವ್ ಎಲ್ಲೂರು ಇವರ ಸಾರಥ್ಯದ ಕಲೆ , ಸಾಹಿತ್ಯ , ಸಂಸ್ಕೃತಿಗಾಗಿ ಸೇವೆ ಸಲ್ಲಿಸುತ್ತಿರುವ. "ಸ್ನೇಹ ಜೀವಿ ಉಡುಪಿ" ಸಂಸ್ಥೆಯು ತನ್ನ ಯಕ್ಷಗಾನ - ನಾಟಕ ರಂಗಭೂಮಿಯ ವಿದ್ಯಾರ್ಥಿಗಳಿಗಾಗಿ ನವರಾತ್ರಿ ಆಚರಣೆಯ ಮಹತ್ವದ ಕುರಿತು ಉಪನ್ಯಾಸ ಹಾಗೂ ಹಿರಿಯ ಕಲಾವಿದರಿಗೆ ಗೌರವಾರ್ಪಣೆ , ವಿದ್ಯಾರ್ಥಿಗಳಿಬ್ಬರ ಹುಟ್ಟುಹಬ್ಬವನ್ನು ಕಟಪಾಡಿಯ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನದಲ್ಲಿ ಆಯೋಜಿಸಿತ್ತು . ಈ ಸಂದರ್ಭದಲ್ಲಿ ಎಲ್ಲೂರಿನ ಹಿರಿಯ ಯಕ್ಷಗಾನ ಸಂಘಟಕ, ವೇಷಧಾರಿ ಶ್ರೀನಿವಾಸ ಉಪಾಧ್ಯಾಯ ಅವರನ್ನು ಅಭಿನಂದಿಸಿ ಗೌರವಿಸಲಾಯಿತು. ದೇವಸ್ಥಾನದ ಪ್ರಭಂದಕರಾದ ರಮೇಶ್ ಆಚಾರ್ಯ ಮತ್ತು ದೇವಸ್ಥಾನದ. ಸಿಬ್ಬಂದಿ ಶ್ರೀಮತಿ ಲೀಲಾ ಇವರನ್ನು ಅಭಿನಂದಿಸಲಾಯಿತು.ವಿದ್ಯಾರ್ಥಿಗಳಾದ ಸಂಗೀತಾ ಮತ್ತು ಸಂಧ್ಯಾ ಅವರ ಹುಟ್ಟು ಹಬ್ಬವನ್ನು ಆಚರಿಸಿ ಶುಭ ಹಾರೈಸಲಾಯಿತು . ಗುರುಗಳಾದ ,ಜಾನಪದ ಸಂಶೋಧಕ , ಹಾಗೂ ಸಾಹಿತಿ ಕೆ. ಎಲ್ . ಕುಂಡತಾಯ ಇವರು ವಿದ್ಯಾರ್ಥಿಗಳಿಗೆ ನವರಾತ್ರಿಯ ಬಗ್ಗೆ ಉಪನ್ಯಾಸ ನೀಡಿದರು. ಹೆತ್ತ ಅವ್ವೆ ಯಿಂದ ನೆಲದವ್ವೆಯನ್ನು ಅರಿತು ಮುಂದೆ ಜಗದವ್ವೆಯನ್ನು ಕಾಣುವುದೇ ಮಾತೃ - ಪ್ರಕೃತಿ - ಶಕ್ತಿ ಆರಾಧನೆಯ ಮೂಲ ಎಂದು ವಿವರಿಸಿದರು. ಪ್ರಕಾಶ್ ಆಚಾರ್ಯ ಇನ್ನಂಜೆ ,ಹರೀಶ್ ಆಚಾರ್ಯ ಕಳತ್ತೂರು, ಆಲ್ವಿನ್ ಪ್ರಕಾಶ್ ಮೇನೇಜಸ್ ಶ್ರೀಮತಿ ಲಕ್ಷ್ಮೀ , ಶ್ರೀಮತಿ ಶಾಂತಿ ಶ್ರೀದರ್ ಮೊದಲಾದವರು ಉಪಸ್ಥಿತರಿದ್ದರು .ಕುಮಾರಿ ಸಂದ್ಯಾ ,ಸಂಗೀತಾ , ಪ್ರಜ್ಞಾ ಪ್ರಾರ್ಥಿಸಿ, ಗಣೇಶ ರಾವ್ ಎಲ್ಲೂರು ಪ್ರಾಸ್ತಾವಿಸಿ, ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ರಂಜಿತ್ ಭಂಡಾರಿ ವಂದಿಸಿದರು.
ಕಾಪುವಿನಲ್ಲಿ ಪ್ರಥಮಬಾರಿಗೆ ಎಸ್ಸೆಲ್ ಎನರ್ಜಿ ಮುದ್ರೆಯ ಎಲೆಕ್ಟ್ರಿಕಲ್ ಸೈಕಲ್ ಶೋರೂಮ್ ಶುಭಾರಂಭ
Posted On: 27 Oct 2020, 01:02 PM
ಮಾಲಿನ್ಯಮುಕ್ತ ಪರಿಸರವನ್ನು ಪೋಷಿಸುವ ದಿಸೆಯಲ್ಲಿ ಯಾವುದೇ ದಾಖಲಾತಿ, ಲೈಸೆನ್ಸ್, ಇನ್ಶೂರೆನ್ಸ್ ನ ಅಗತ್ಯವಿಲ್ಲದ ಇಲೆಕ್ಟ್ರಿಕಲ್ ಸೈಕಲ್ ಶೋರೂಮ್ ಪ್ರಪ್ರಥಮ ಬಾರಿಗೆ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಪೊಲಿಪು ಮೀನುಗಾರರ ಸಹಕಾರಿ ಸಂಘ, ಕಾಪು ತಾಲೂಕು ಕಛೇರಿ ಹತ್ತಿರದ ವಿಘ್ನೇಶ್ವರ ಎಂಟರ್ಪ್ರೈಸಸ್ ಕಾಪು ಇಲ್ಲಿ ನಾಳೆ (28-10-20) ಬೆಳಿಗ್ಗೆ 10:30ಕ್ಕೆ ಶುಭಾರಂಭಗೊಳ್ಳಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸುಧಾಕರ್ ಬಂಗೇರ : 8277483732
ಬಂಟಕಲ್ಲ್ ಲಯನ್ಸ್ ಕ್ಲಬ್ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಮೊಬೈಲ್ ವಿತರಣೆ
Posted On: 26 Oct 2020, 07:39 PM
ಕೊರೊನಾ ಹಿನ್ನೆಲೆಯಲ್ಲಿ ಶಾಲೆಗಳು ಪ್ರಾರಂಭವಾಗದ ಸನ್ನಿವೇಶದಲ್ಲಿ ಮಕ್ಕಳಿಗೆ ಆನ್ಲೈನ್ ತರಗತಿಗಳು ನಡೆಯುತ್ತಿದ್ದು ಮೊಬೈಲ್ ಸೌಲಭ್ಯಗಳು ವಂಚಿತ ಮಕ್ಕಳಿಗೆ ಕಲಿಕೆಗೆ ಯಾವುದೇ ರೀತಿಯ ತೊಂದರೆಯಾಗಬಾರದೆಂದು ದಾನಿಗಳ ನೆರವಿನಿಂದ ಬಂಟಕಲ್ಲ್ ಲಯನ್ಸ್ ಕ್ಲಬ್ ವತಿಯಿಂದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಮೊಬೈಲ್ ವಿತರಿಸಲಾಯಿತು. ಮುಂದಿನ ದಿನಗಳಲ್ಲಿ ದಾನಿಗಳ ನೆರವಿನಿಂದ ಮತ್ತಷ್ಟು ವಿದ್ಯಾರ್ಥಿಗಳಿಗೆ ನೆರವನ್ನು ನೀಡಲಿದ್ದೇವೆ ಎಂದು ಲಯನ್ಸ್ ಕ್ಲಬ್ ಬಂಟಕಲ್ಲ್ ಅಧ್ಯಕ್ಷರಾದ ವಿಜಯ್ ಧೀರಜ್ ತಿಳಿಸಿದರು. ನಾಗಿರಕ ಸಮಿತಿಯ ಅಧ್ಯಕ್ಷರಾದ ರಾಮರಾಯ ಮೊಬೈಲ್ ಅನುಕೂಲತೆ ಮತ್ತು ಅನನುಕೂಲತೆಗಳ ಬಗ್ಗೆ ತಿಳಿಸಿದರು. ಈ ಸಂದರ್ಭ ಲಯನ್ಸ್ ಕ್ಲಬ್ ಬಂಟಕಲ್ಲ್ ನ ಕಾರ್ಯದರ್ಶಿ ಅರುಂದತಿ ಪ್ರಭು ಉಪಸ್ಥಿತರಿದ್ದರು
ಇನ್ನಂಜೆಯಲ್ಲಿ ಮಾತೃಶಕ್ತಿ ಮತ್ತು ದುರ್ಗಾವಾಹಿನಿ ಘಟಕದ ಪೂರ್ವಭಾವಿ ಸಭೆ
Posted On: 25 Oct 2020, 10:42 PM
ಇನ್ನಂಜೆ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದ ವಿಶ್ವ ವಲ್ಲಭ ಘಟಕದ ಜೊತೆಗೆ ಮಾತೃಶ್ರೀ ಘಟಕ ಮತ್ತು ದುರ್ಗಾ ಶಕ್ತಿ ಘಟಕವನ್ನು ಮಾಡುವ ಸಲುವಾಗಿ ಇಂದು ಮಡುಂಬು ವಿದ್ವಾನ್ ಕೆ.ಪಿ ಶ್ರೀನಿವಾಸ್ ತಂತ್ರಿಗಳ ಮನೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು. ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ನ ಅಧ್ಯಕ್ಷರಾದ ಕೆ.ಪಿ ಶ್ರೀನಿವಾಸ್ ತಂತ್ರಿ, ಭಜರಂಗದಳದ ಸಂಚಾಲಕರಾದ ರಾಜೇಶ್ ನಿಸರ್ಗ, ಮಾಲಿನಿ ಇನ್ನಂಜೆ , ಗೊರಕ್ಷಾ ಪ್ರಮುಖ್ ರವಿ ಕಲ್ಯಾಲು, ವಿದ್ಯಾರ್ಥಿ ಪ್ರಮುಖ್ ಕಾರ್ತಿಕ್ ಮಡುಂಬು, ಸಾಮಾಜಿಕ ಜಾಲತಾಣ ಪ್ರಮುಖ್ ಪೃಥ್ವಿರಾಜ್ ಮಡುಂಬು, ವಿಶ್ವ ಹಿಂದೂ ಪರಿಷತ್ ಸದಸ್ಯರು,ಭಜರಂಗ ದಳದ ಕಾರ್ಯಕರ್ತರು ಹಾಗೂ ಮಾತೃ ಶಕ್ತಿ ಮತ್ತು ದುರ್ಗಾವಾಹಿನಿ ಸೇರ್ಪಡೆಗೊಳ್ಳಲಿರುವ ಸದಸ್ಯರು ಉಪಸ್ಥಿತರಿದ್ದರು.. ಕಾರ್ಯದರ್ಶಿ ನಿತೇಶ್ ಕಲ್ಯಾಲು ಕಾರ್ಯಕ್ರಮ ನಿರೂಪಿಸಿ, ಧನ್ಯವಾದಗೈದರು.
ಕಾಪು ಮಾರಿಯಮ್ಮನ ಆದಿಸ್ಥಳದಲ್ಲಿ ರಾಜಮನೆತನದವರು ಬಳಸಿದ ಖಡ್ಗಕ್ಕೆ ಆಯುಧ ಪೂಜೆ
Posted On: 25 Oct 2020, 10:14 PM
ಕಾಪು ಮಾರಿಯಮ್ಮ ದೇವಸ್ಥಾನದ ಆಧಿಸ್ಥಳವಾಗಿರುವ ಶ್ರೀ ತ್ರಿಶಕ್ತಿ ಸನ್ನಿಧಾನ ಕೋಟೆಮನೆ. ಇಂದಿನ ನವರಾತ್ರಿ ಅಲಂಕಾರ, ಹಾಗೂ ನೂರಾರು ವರ್ಷದ ಹಿಂದೆ ಇಲ್ಲಿನ ರಾಜ ಮನೆತನದವರು ಉಪಯೋಗಿಸಿದ ಖಡ್ಗಕ್ಕೆ ಆಯುಧ ಪೂಜೆ ಪ್ರಯುಕ್ತ ಖಡುಬು ಬಡಿಸುವ ಸಂಪ್ರದಾಯ ನೆರವೇರಿತು.
