Updated News From Kaup

ಅಂಗವೈಕಲ್ಯವನ್ನು ಮೆಟ್ಟಿ ನಿಂತು ಸಾಧನೆ ತೋರಿದ ದೇಹದಾಡ್ಯ ಪಟು ಜಗದೀಶ್ ಪೂಜಾರಿ

Thumbnail
Posted On: 21 Oct 2020, 04:08 PM

ತನ್ನ ದೇಹದ ಅಂಗವೈಕಲ್ಯತೆಯ ಬಗ್ಗೆ ಯಾವುದೇ ಕೀಳರಿಮೆ ಎಣಿಸದೆ ದೇಹದಾಡ್ಯ ಪಟುವಾಗಿ ಹಲವಾರು ಸ್ಪರ್ಧೆಗಳಲ್ಲಿ ಪ್ರಶಸ್ತಿ ಪಡೆದು ಕೊಂಡಿರುವುದು ಮಾತ್ರವಲ್ಲದೆ ಈಗ ನೂರಾರು ಜನರಿಗೆ ಫಿಟ್ನೆಸ್ ಹೇಳಿ ಕೊಡುವ ಗುರುವಾಗಿ ಮಿಂಚುತ್ತಿದ್ದಾರೆ ಜಗದೀಶ್ ಪೂಜಾರಿ. ಮಂಗಳೂರಿನ ಅಡ್ಯಾರ್ ಪದವಿನ ಯಮುನಾ ಮತ್ತು ಲಿಂಗಪ್ಪ ದಂಪತಿಯ ಮೂರನೆಯ ಮಗನಾಗಿ ಜನಿಸಿದ ಇವರು ಬಾಲ್ಯದಲ್ಲಿ ಎಲ್ಲರಂತೆಯೇ ಇದ್ದರು. ತನ್ನ ಸಹೋದರನೊಂದಿಗೆ ಆಡುವಾಗ ಸೈಕಲ್ನ ಚಕ್ರಕ್ಕೆ ಕಾಲು ಸಿಲುಕಿ ಮುಂದೆ ಬಲಹೀನಗೊಂಡಿತು. ತಮ್ಮ ಕಾಲು ಬಲಹೀನಗೊಂಡಿದೆ ಎಂದು ಸುಮ್ಮನೆ ಕೂರದೆ ಅವಿರತ ಶ್ರಮ ಪಟ್ಟು ಮಾಡಿದ ಸಾಧನೆಯಿಂದ ಈಗ ಎಲ್ಲರ ಶ್ಲಾಘನೆಗೆ ಪಾತ್ರರಾಗಿದ್ದಾರೆ. ತಾಯಿಯ ಬೀಡಿ ಕಟ್ಟುವಿಕೆ, ತಂದೆಯ ಕೂಲಿಯಿಂದ ಕುಟುಂಬ ನಿರ್ವಹಣೆ ಕಷ್ಟದಲ್ಲಿ ಸಾಗುತ್ತಿದ್ದ ಸಂದರ್ಭವದು, ಚಿಕಿತ್ಸೆಗಾಗಿನ ಹಣದ ಖರ್ಚು ಪ್ರಯೋಜನವಾಗಲಿಲ್ಲ. ಬಾಲ್ಯದಲ್ಲಿ ಇಂತಹ ಕಷ್ಟ ನೋವುಗಳನ್ನುಂಡ ಜಗದೀಶ್ ರವರಿಗೆ ಸಾಧಿಸಬೇಕೆನ್ನುವ ತುಡಿತವಿತ್ತು. ಇವರ ಇಷ್ಟೆಲ್ಲಾ ಸಾಧನೆಗಳನ್ನು ಗುರುತಿಸಿ ಸ್ವಾಮೀಜಿಯವರು, ಮುಖ್ಯಮಂತ್ರಿಗಳು, ಹಾಗೂ ಹಿಂದೂ, ಮುಸ್ಲಿಂ ಕ್ರೈಸ್ತ ಹಾಗೂ ಅನೇಕ ಗಣ್ಯ ವೇಕ್ತಿಗಳು ಯಾವುದೇ ಭೇದ ಭಾವ ತೋರದೆ ಸುಮಾರ್ 68 ಬಾರಿ ಸನ್ಮಾನ,ಪ್ರಶಸ್ತಿ,ಪುರಸ್ಕರಗಳನ್ನು ನೀಡಿ ಗೌರವಿಸಿದ್ದಾರೆ.. ರಾಷ್ಟ್ರ ಮಟ್ಟದಲ್ಲಿ ಮಿಂಚಿರುವ ಇವರು ಇನ್ನಷ್ಟು ಸಾಧನೆಗಳನ್ನು ಮಾಡುವ ಹಾಗೂ ಇನ್ನಷ್ಟು ಬಾಡಿ ಬಿಲ್ಡಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಹಂಬಲವನ್ನು ಹೊಂದಿದ್ದಾರೆ. ಇವರು ಮಂಗಳೂರಿನ ಫಿಟ್ನೆಸ್ ಜಿಮ್ ನಲ್ಲಿ ಸಂದೀಪ್ ಮತ್ತು ಅಜಯ್ ಯವರಿಂದ ತನಗೆ ಅಂಗವೈಕಲ್ಯ ಇದ್ರು ಕಠಿಣ ದೈಹಿಕ ಕಸರತ್ತು ನಡೆಸಿ ಇಡೀ ರಾಷ್ಟ್ರದ ಗಮನ ಸೆಳೆದು ಇಲ್ಲಿವರೆಗೂ ತನ್ನ ಸಾಧನೆಯ ಹಾದಿಯಲ್ಲಿ ನೋವಿನ ಕ್ಷಣಗಳಲ್ಲೂ ಗೆಲವು ಕಂಡ ಅಪ್ರತಿಮ ಸಾಧಕ ನಮ್ಮ ಜಗದೀಶ್ ಪೂಜಾರಿ ಅಂತಹ ಸಂದರ್ಭದಲ್ಲಿ ತನ್ನ ಅಂಗವೈಕಲ್ಯತೆಯನ್ನು ಮೀರಿ ದೈಹಿಕ ಕಸರತ್ತಿನ ಮೂಲಕ ದೇಹದಾಡ್ಯ ಪಟುವಾಗಿ ಹೊರಹೊಮ್ಮಿದರು. ಬಡತನವಿದ್ದರೂ ಸಂಘ ಸಂಸ್ಥೆಗಳ ಆಶ್ರಯದಲ್ಲಿ , ಮಿಸ್ಟರ್ ಕದಂಬ, ಮಿಸ್ಟರ್ ವಜ್ರದೇಹಿ, ಕರ್ನಾಟಕ ಭೂಷಣ, ಮಡಿಲು ಸನ್ಮಾನ 2019, ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್, ಫ್ಯೂಚರ್ ಕಲಾಂ ಯುನಿವರ್ಸಲ್ ಬುಕ್ ಅಫ್ ರೆಕಾರ್ಡ್ ಇತ್ಯಾದಿ ಪ್ರಶಸ್ತಿಗಳನ್ನು ಗೆದ್ದು, ಸುಮಾರು 80ಕ್ಕೂಅಧಿಕ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಾರೆ. ಮುಖ್ಯಮಂತ್ರಿ ಒಳಗೊಂಡಂತೆ ಹಲವಾರು ಮಹನೀಯರಿಂದ ಸುಮಾರು 60ಕ್ಕೂ ಅಧಿಕ ಪುರಸ್ಕಾರಗಳನ್ನು ಪಡೆದಿರುತ್ತಾರೆ. ಜಗದೀಶ್ ಪೂಜಾರಿಯವರು ತನ್ನ ಪ್ರೌಢ ಶಿಕ್ಷಣದ ನಂತರ ಐಟಿಐ ಸ್ಟಡಿ ಮಾಡಿ ಕಂಪ್ಯೂಟರ್ ಶಿಕ್ಷಣ ಕೂಡ ಪಡೆದಿರುತ್ತಾರೆ ಸೋ ಪ್ರಸ್ತುತ ಇವಾಗ ಸಹ್ಯಾದ್ರಿ ಕಾಲೇಜ್ ನಲ್ಲಿ ಜಿಮ್ ಟ್ರೈನರ್ ಆಗಿ ಕಾರ್ಯನಿರ್ವಯಿಸುತ್ತಿದ್ದಾರೆ. ಈಗಾಗಲೇ ವಿಶೇಷ ಚೇತನರ ವಿಭಾಗದ ದೇಹದಾರ್ಡ್ಯ ಸ್ಪರ್ಧೆಗಳಲ್ಲಿ ಜಿಲ್ಲಾ ,ರಾಜ್ಯ ರಾಷ್ಟ್ರೀಯ ಮಟ್ಟದಲ್ಲಿ ಸುಮಾರು ನಾಲ್ವತ್ತೆಂಟು ಸ್ಪರ್ಧೆಯಲ್ಲಿ ಪಾಲ್ಗೊಂಡು ಪ್ರಶಸ್ತಿ ಗೆಲ್ಲುವ ಮೂಲಕ ತಮ್ಮ ಸಾಮರ್ಥ್ಯ ಪ್ರದರ್ಶನ ಮಾಡಿದ್ದಾರೆ. ಇವರ ಸಾಧನೆಯನ್ನು ಸರಕಾರ ಗುರುತಿಸಿ ಸೂಕ್ತ ಉದ್ಯೋಗ ದೊರಕಿಸುವಂತೆ ಅವರ ಆಸೆಯಾಗಿದೆ.

ಶ್ರೀ ಚೌಡೇಶ್ವರಿ ದೇವಿ ದೇವಸ್ಥಾನ ಕಟಪಾಡಿ ನವರಾತ್ರಿ ಪೂಜಾ ಕಾರ್ಯಕ್ರಮ

Thumbnail
Posted On: 21 Oct 2020, 03:58 PM

ಕಟಪಾಡಿಯ ಏಣಗುಡ್ಡೆಯ ದುರ್ಗಾನಗರ ಶ್ರೀ ಚೌಡೇಶ್ವರಿ ದೇವಿಯ ಸನ್ನಿಧಾನದಲ್ಲಿ ನವರಾತ್ರಿ ಪ್ರಯುಕ್ತ 17-10-2020ರಿಂದ 25-10-2020ರವರೆಗೆ ಪ್ರತಿದಿನ ಸಂಜೆ 6ರಿಂದ ಭಜನಾ ಕಾರ್ಯಕ್ರಮ ಮತ್ತು 7: 30ಕ್ಕೆ ಮಹಾಪೂಜೆ ನಡೆಯಲಿದೆ. 17 ರಂದು ಬೆಳಗ್ಗೆ ದೇವತಾ ಪ್ರಾರ್ಥನೆ, ಪುಣ್ಯಾಹ, ಪಂಚಗವ್ಯ, ಕಲಶ ಸ್ಥಾಪನೆ, ಮಹಾಪೂಜೆ. 24 ರಂದು ಬೆಳಿಗ್ಗೆ ಪುಣ್ಯಾಹವಾಚನ, ಮಧ್ಯಾಹ್ನ 12ಕ್ಕೆ ಪೂರ್ಣಾಹುತಿ, ಮಹಾಪೂಜೆ, ಶ್ರೀ ಚಂಡಿಕಾ ಹೋಮ, ಅನ್ನಸಂತರ್ಪಣೆ ಮತ್ತು 2: 30ಕ್ಕೆ ದೇವಿಯ ದರ್ಶನ ಸೇವೆ ನಡೆಯಲಿದ್ದು, ಅಂದು ಮಧ್ಯಾಹ್ನ 12 ರಿಂದ ಶ್ರೀ ಚೌಡೇಶ್ವರಿ ದೇವಿ ಕಲಾ ಬಳಗದವರಿಂದ ಭಕ್ತಿಗಾನಂಜಲಿ ನಡೆಯಲಿದೆ ಎಂದು ತಿಳಿಸಿದ್ದಾರೆ.

ಎಲ್ಲೂರಿನಲ್ಲಿ ಲಲಿತ ಪಂಚಮಿ ಪ್ರಯುಕ್ತ ಚಂಡಿಕಾಯಾಗ

Thumbnail
Posted On: 21 Oct 2020, 03:02 PM

ಕಾಪು.20, ಅಕ್ಟೋಬರ್ : ಕಾಶಿ ಸಮಾನವಾದ ಎಲ್ಲೂರು ಶ್ರೀ ವಿಶ್ವೇಶ್ವರ ದೇವಸ್ಥಾನದಲ್ಲಿ ನವರಾತ್ರಿಯ ವಿಶೇಷ ಸಂದರ್ಭದಲ್ಲಿ ಲಲಿತ ಪಂಚಮಿ ಪ್ರಯುಕ್ತ ಅನ್ನ ಪೂರ್ಣೇಶ್ವರಿ ದೇವರಿಗೆ ಚಂಡಿಕಾ ಯಾಗ ಜರಗಿತು. ಈ ಸಂದರ್ಭದಲ್ಲಿ ಅರ್ಚಕರು, ದೇವಸ್ಥಾನದ ಆಡಳಿತ ಮಂಡಳಿ ಮತ್ತು ಭಕ್ತರು ಉಪಸ್ಥಿತರಿದ್ದರು.

ಭಾರತ್ ಬ್ಯಾಂಕ್ ಮಾಜಿ ಅಧ್ಯಕ್ಷ, ಬಿಲ್ಲವ ಮುಖಂಡ ಜಯ ಸಿ ಸುವರ್ಣ ಇನ್ನಿಲ್ಲ

Thumbnail
Posted On: 21 Oct 2020, 11:25 AM

ಶ್ರೀ ಜಯ ಸಿ ಸುವರ್ಣ (ಭಾರತ್ ಬ್ಯಾಂಕಿನ ಮಾಜಿ ಅಧ್ಯಕ್ಷರು) ಅವರ ಸ್ವರ್ಗೀಯ ವಾಸಸ್ಥಾನಕ್ಕೆ ತೆರಳಿದ್ದಾರೆ ಎಂದು ತಿಳಿಸಲು ತುಂಬಾ ದುಃಖವಾಗಿದೆ. ಮುಂಬಯಿಯಲ್ಲಿ ಹೊಟೇಲ್ ಉದ್ಯಮಿಯಾಗಿದ್ದ ಜಯ ಸಿ.ಸುವರ್ಣ ಅವರು ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡು, ಮುಂಬಯಿ ಭಾರತ್ ಕೋ-ಅಪರೇಟಿವ್ ಬ್ಯಾಂಕ್ ನ ಅಧ್ಯಕ್ಷರಾಗಿ, ಅಭಿವೃದ್ಧಿಯ ರೂವಾರಿಯಾಗಿದ್ದರು. ಬಿಲ್ಲವ ಭವನ ಮುಂಬಯಿ ಮತ್ತು ಮಹಾಮಂಡಲ ಭವನ ಮುಲ್ಕಿ ಇದರ ನಿರ್ಮಾತೃ ಆಗಿದ್ದರು. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವರ ಅಂತ್ಯಕ್ರಿಯೆ ಇಂದು (ಬುಧವಾರ) ಮಧ್ಯಾಹ್ನ 3.00 ರ ಸುಮಾರಿಗೆ ನಡೆಯಲಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಮೃತರು ಪತ್ನಿ, ನಾಲ್ವರು ಪುತ್ರರು ಮತ್ತು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ಕಾಪು ವೆಂಕಟರಮಣ ದೇವಸ್ಥಾನಕ್ಕೆ ನೂತನ ರಜತ ಮುಖ ಮತ್ತು ಬೆಳ್ಳಿಯ ಆರತಿ ಸಮರ್ಪಣೆ

Thumbnail
Posted On: 19 Oct 2020, 04:37 PM

ಶ್ರೀ ವೆಂಕಟರಮಣ ದೇವಸ್ಥಾನ, ಕಾಪು ಇಲ್ಲಿ ನವರಾತ್ರಿ ಸಂದರ್ಭದಲ್ಲಿ ನಿತ್ಯ ಜರಗುವ ದುರ್ಗಾ ನಮಸ್ಕಾರ ಪೂಜೆಗೆ ಶ್ರೀಮತಿ ಪ್ರತಿಮಾ ಪ್ರವೀಣ್ ಶೆಣೈ (USA) ಇವರು ನೂತನ ಬೆಳ್ಳಿಯ ಆರತಿ ಹಾಗೂ ಶ್ರೀ ಲಕ್ಷ್ಮೀನಾರಾಯಣ ಭಟ್ ಮತ್ತು ಕುಟುಂಬಸ್ಥರು ನೂತನ ದೇವಿಯ ರಜತ ಮುಖವನ್ನು ಸಮರ್ಪಿಸಿದರು.

ಕಾಪು ಬೀಚ್ ನಲ್ಲಿ ಯುವಕರಿಬ್ಬರು ನೀರು ಪಾಲು

Thumbnail
Posted On: 18 Oct 2020, 11:53 PM

ಕಾಪು, ಅ. 18 : ಬೆಂಗಳೂರಿನ ಯುವಕರಿಬ್ಬರು ರವಿವಾರ ಸಂಜೆ ಕಾಪು ಬೀಚ್ ನಲ್ಲಿ ನೀರು ಪಾಲಾಗಿದ್ದಾರೆ.
ಕಾರ್ತಿಕ್ ಮತ್ತು ರೂಪೇಶ್ ಎಂಬವರು ನೀರು ಪಾಲಾಗಿದ್ದು, ರೂಪೇಶ್ ಎಂಬಾತನ ಶವ ಮೇಲಕ್ಕೆತ್ತಲಾಗಿದೆ. ಬೆಂಗಳೂರಿನಿಂದ ಬಂದ 5 ಮಂದಿ ಯುವಕರ ತಂಡ ರವಿವಾರ ಸಂಜೆ ಕಾಪು ಬೀಚ್ ನಲ್ಲಿ ಆಟವಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ‌.
ನೀರು ಪಾಲಾಗುತ್ತಿದ್ದ ರೂಪೇಶ್ ನನ್ನು ಬೀಚ್ ನಿರ್ವಾಹಕ ಪ್ರಶಾಂತ್ ಕರ್ಕೇರ, ವಿನೀತ್, ಪ್ರಥಮ್, ದಯೋದರ ಪುತ್ರನ್, ಚಂದ್ರಹಾಸ ಜೊತೆಗೂಡಿ ರಕ್ಷಿಸುವ ಪ್ರಯತ್ನ ಮಾಡಿದ್ದರು. ಮೇಲಕ್ಕೆ ತಂದು ಆಕ್ಸಿಜನ್ ನೀಡಲಾಯಿತಾದರೂ ಅಷ್ಟರಲ್ಲೇ ಮೃತಪಟ್ಟಿದ್ದನು. ನೀರಿನಲ್ಲಿ ಮುಳುಗಿದ ಯುವಕನಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆ ಮುಂದುವರಿಸಿದ್ದಾರೆ. ಹೆಚ್ಚಿನ‌ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

ಇನ್ನಂಜೆ ಕುಜುಂಬ ಮನೆಯ ಗುಲಾಬಿ ಎಚ್.ಪೂಜಾರಿ ಇನ್ನಿಲ್ಲ

Thumbnail
Posted On: 18 Oct 2020, 04:16 PM

ಕಾಪು ತಾಲೂಕಿನ ಇನ್ನಂಜೆ ಗ್ರಾಮದ ಗುಲಾಬಿ ಪೂಜಾರಿ (66) ಅವರು ಅಕ್ಟೋಬರ್ 17 ರಂದು ಅನಾರೋಗ್ಯದ ಕಾರಣ ನಿಧಾನ ಹೊಂದಿದರು. ಇನ್ನಂಜೆ ಕುಜುಂಬ ಮನೆಯವರಾದ ಗುಲಾಬಿ ಅವರು ಪತಿ ಹಿರಿಯಣ್ಣ ಪೂಜಾರಿ, 3 ಪುತ್ರರನ್ನು ಹಾಗೂ ಒಬ್ಬಳು ಪುತ್ರಿಯನ್ನು ಮತ್ತು ಅಪಾರ ಬಂಧುಗಳನ್ನು ಅಗಲಿದ್ದಾರೆ. ಮೃತರ ಅಂತ್ಯ ಕ್ರಿಯೆಯು ಆ.18 ರಂದು ಬೆಳ್ಳಿಗೆ ನೆರವೇರಿದ್ದು,ಕುಟುಂಬಸ್ಥರು,ಊರ ಜನರು ಉಪಸ್ಥಿತರಿದ್ದರು.

ಸ್ವರ ಮನ್ಮಥನ ಕಂಠದಲ್ಲಿ ಮೂಡಿಬಂದ "ಶಿರ್ವದ ತುಡರ್" ತುಳು ಆಲ್ಬಮ್ ಸಾಂಗ್

Thumbnail
Posted On: 17 Oct 2020, 04:53 PM

ಶಿರ್ವ ಕ್ರಿಯೇಶನ್ಸ್ ಅರ್ಪಿಸುವ "ಶಿರ್ವದ ತುಡರ್" ನ್ಯಾರ್ಮದ ಶ್ರೀ ಧರ್ಮ ಜಾರಂದಾಯೆ ಅನ್ನುವ ತುಳು ಆಲ್ಬಮ್ ಸಾಂಗ್. ವಿ ಸುಬ್ಬಯ್ಯ ಹೆಗ್ಡೆ ನ್ಯಾರ್ಮ ಇವರ ಸಲಹೆ ಸಹಕಾರ ದೊಂದಿಗೆ, ಪ್ರಸಾದ್ ಬಂಗೇರ ಇನ್ನಂಜೆ ನಿರ್ಮಾಣದ, ತುಳುನಾಡ ಕಲಶ ಬಿರುದಾಂಕಿತ ಶ್ರೀ ಜಿ, ಎಸ್, ಗುರುಪುರ ಇವರ ಸಾಹಿತ್ಯದಲ್ಲಿ, ಸ್ವರ ಮನ್ಮಥ ಬಿರುದಾಂಕಿತ ವಿ.ಜೆ ಮಧುರಾಜ್ ಗುರುಪುರ ಇವರ ಕಂಠದಲ್ಲಿ ಅದ್ಭುತವಾಗಿ ಮೂಡಿ ಬಂದಿದ್ದು. ಶಿರ್ವ ನ್ಯಾರ್ಮ ಧರ್ಮ ಜಾರಂದಾಯನ ಭಕ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ
ವಿಡಿಯೋ ವೀಕ್ಷಿಸಲು ಇಲ್ಲಿ ಒತ್ತಿರಿ
ಕ್ಲಿಕ್ ಮಾಡಿ

ಸಾರ್ವಜನಿಕರಿಗೆ ತಲೆನೋವಾಗಿದ್ದ ಮಾನಸಿಕ ಅಸ್ವಸ್ಥನ ಚಿಕಿತ್ಸೆಗೆ ನೆರವಾದ ಕುಂದಾಪುರ ಪಿ.ಎಸ್.ಐ ಸದಾಶಿವ ಆರ್ ಗವರೋಜಿ

Thumbnail
Posted On: 17 Oct 2020, 10:35 AM

ಕಳೆದ 2 ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಬಿಹಾರ ಮೂಲದ ಮಾನಸಿಕ ಅಸ್ವಸ್ಥ ಯುವಕನೊರ್ವ ಅರೆ ನಗ್ನ ಅವಸ್ಥೆಯಲ್ಲಿ ಕುಂದಾಪುರದ ಬೀದಿಯಲ್ಲಿ ತನ್ನ ಭಯಾನಕ ವರ್ತನೆಯಿಂದ ಸಾರ್ವಜನಿಕ ವಲಯದಲ್ಲಿ ಆಂತಕ ಸ್ರಷ್ಟಿಸಿದ್ದ ಸುದ್ದಿ ವಾಟ್ಸಪ್ಪ್ ನಲ್ಲಿ ಹರಿದಾಡಿತ್ತು. ವೇಗವಾಗಿ ನಡೆಯುತ್ತಾ ಸಾರ್ವಜನಿಕರ ಮೇಲೆ ಮುಗಿ ಬೀಳುವ ಈತನಿಂದ ಈಗಾಗಲೇ ಹಲವರು ಮಾರಕ ಹಲ್ಲೆಗೊಳಗಾಗಿದ್ದಾರೆ. ಅಲ್ಲದೇ ಮಹಿಳೆಯರ ಬೆಂಬತ್ತುವ ಈತ ನೇರವಾಗಿ ಅವರ ದೇಹದ ಮೇಲೆ ಕೈಹಾಕುತ್ತಿರುವ ಘಟನೆಗಳು ನಡೆದಿದ್ದು  ವಿದ್ಯಾರ್ಥಿನಿಗಳ ಸಹಿತ ಇನ್ನಿತರ ಮಹಿಳೆಯರು ಈತನ ವಿಕಾರತೆಗೆ ಸಿಲುಕಿದ್ದಾರೆನ್ನಲಾಗಿದೆ. ಸಂಬಂಧ ಪಟ್ಟ ಇಲಾಖೆಗಳು ಕೂಡಲೇ ಈತನ  ಬಗ್ಗೆ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ ಎಂದು ಮ್ಯಾನರ್ ವಾಟ್ಸಪ್ಪ್ ಗ್ರೂಪ್ ನಲ್ಲಿ ಹಾಕಿದ್ದು ಇದಕ್ಕೆ ಆದಷ್ಟು ಬೇಗ ಸಾಮಾಜಿಕ ಕಾರ್ಯಕರ್ತರು ಸ್ಪಂದಿಸಬೇಕು ಎಂದು ರವಿ ಮ್ಯಾನರ್ ವಿನಂತಿಸಿದ್ದರು. ಈ ಸುದ್ದಿ ತಿಳಿದ ಕೂಡಲೇ ಸಾಮಾಜಿಕ ಕಾರ್ಯಕರ್ತ ಮತ್ತು ಕುಂದಾಪರ ಮಿತ್ರ ವರದಿಗಾರ ಕಿರಣ್ ಪೂಜಾರಿಯವರು ಕುಂದಾಪುರ ಪಿ.ಎಸ್.ಐ ಸದಾಶಿವ ಆರ್ ಗವರೋಜಿ ಅವರ ಗಮನಕ್ಕೆ ತಂದು, ದಿನಾಂಕ 15/10/2020ರಂದು ಬೆಳಿಗ್ಗೆ ಆ ವ್ಯಕ್ತಿಯ ಚಲನವಲನ್ನು ಗಮನಿಸಿದ್ದ ಕಿರಣ್ ರವರು ಕೂಡಲೇ ಪಿ.ಎಸ್.ಐ ಸದಾಶಿವ ಆರ್ ಗವರೋಜಿರವರಿಗೆ ಮಾಹಿತಿ ನೀಡಿ, ಕುಂದಾಪುರ ಪೊಲೀಸ್ ಸುಧಾಕರ್, ರಾಘವೇಂದ್ರ, ಆನಂದ ಹಾಗೂ ಸ್ಥಳೀಯ ಪುರಸಭೆ ಸದಸ್ಯರಾದ ಪ್ರಭಾಕರ ಮತ್ತು ಹುಸೈನ್ ಹೈಕಾಡಿ ಅವರ ನೆರವಿನೊಂದಿಗೆ ಮಾನಸಿಕ ಅಸ್ವಸ್ಥನ ಮನವೊಲಿಸಿ ಅವರನ್ನು ಕೋಟ ನಾಗರಾಜ್ ರವರ ಆಂಬುಲೆನ್ಸ್ ನಲ್ಲಿ ಉಡುಪಿ ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ಚಿಕ್ಸಿತೆಗೆ ಕೊಂಡೊಯ್ಯಲಾಗಿದೆ. ಇದರಿಂದ ಜನತೆಗೆ ನೆಮ್ಮದಿ ದೊರೆತ್ತಿದ್ದು, ಕುಂದಾಪುರ ಪೊಲೀಸರ ಮಾನವೀಯ ಕಾರ್ಯಕ್ಕೆ ಕುಂದಾಪುರ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಲಯದ ಆದೇಶ ಪಡೆದು ಧಾರವಾಡ ನಿಮ್ಹಾನ್ಸ್ ಆಸ್ಪತ್ರೆಗೆ ಕೋಡಿಯ NMA ಆಸ್ಪತ್ರೆಯವರ ಹಾಗೂ ಜೆಸಿಐ ಕುಂದಾಪುರ ಸಿಟಿಯ ಸ್ಥಾಪಕ ಅಧ್ಯಕ್ಷ ಹುಸೈನ್ ಹೈಕಾಡಿ, nmaಯ ಶಾಬಾನ್ ಹಂಗಳೂರ್, nmaಯ ಅಧ್ಯಕ್ಷ ರಫೀಕ್ ಬಿಎಸ್ಎಫ್ ಇವರ ಸಹಕಾರದಿಂದ ಆಂಬುಲೆನ್ಸ್ ಮೂಲಕ ಸಿಬ್ಬಂದಿವರ ಭದ್ರತೆಯಲ್ಲಿ ಚಿಕಿತ್ಸೆಗೆ ಕಳುಹಿಸಲಾಗಿದೆ.

ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಗೆ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಭೇಟಿ

Thumbnail
Posted On: 16 Oct 2020, 12:43 PM

ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ (ನಿ.) ಪಡುಬಿದ್ರಿಗೆ ಮಾಜಿ ಸಂಸದ ಹಾಗು ವಿಧಾನ ಪರಿಷತ್ ಸದಸ್ಯರಾದ ಬಿ.ಕೆ. ಹರಿಪ್ರಸಾದ್ ಭೇಟಿನೀಡಿದರು. ಈ ಸಂದರ್ಭ ಮಾತನಾಡಿದ ಅವರು ಪಡುಬಿದ್ರಿ ಸೊಸೈಟಿಯ ಕಾರ್ಯಚಟುವಟಿಕೆಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಕೊರೊನಾದಂತಹ ಕ್ಲಿಷ್ಟಕರ ಸಂದರ್ಭದಲ್ಲಿ ಸಹಕಾರಿ‌ಸಂಸ್ಥೆಗಳು ಜನರ ಜೀವನ ಮಟ್ಟವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದೆ ಎಂದು ತಿಳಿಸಿದರು. ಈ ಸಂದರ್ಭ ಸೊಸೈಟಿಯ ಅಧ್ಯಕ್ಷ ರಾದ ವೈ. ಸುಧೀರ್ ಕುಮಾರ್, ಸೊಸೈಟಿಯ ನಿರ್ದೇಶಕರಾದ ಶಿವರಾಮ ಎನ್. ಶೆಟ್ಟಿ , ರಾಜಾರಾಮ ರಾವ್, ಮಾಧವ ಆಚಾರ್ಯ, ಯಶವಂತ , ಶ್ರೀಮತಿ ಸುಚರಿತಾ ಎಲ್ ಅಮೀನ್, ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿಶ್ಮಿತ ಪಿ.ಎಚ್ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.