Updated News From Kaup

ಮಲ್ಲಾರ್ : ವಿದ್ಯುತ್ ಇಲ್ಲದೆ ಮೂಲಭೂತ ಸೌಕರ್ಯ ವಂಚಿತರಾದ ಕುಟುಂಬ

Posted On: 18-05-2020 02:37PM

ದೇಶದ ಪ್ರಧಾನಮಂತ್ರಿಗಳು ವಿವಿಧ ರೀತಿಯ ಯೋಜನೆಗಳನ್ನು ಹೊರಡಿಸಿದ್ದರು ಕೂಡ ಕೆಲವೊಂದು ಯೋಜನೆಗಳು ಜನಸಾಮಾನ್ಯರಿಗೆ ತಲುಪುತ್ತಿಲ್ಲ. ಮಜೂರು ಮಲ್ಲಾರ್ ಭಾಗದ ರಾಣೆಕೇರಿಯಲ್ಲಿ ಅನೇಕ ಬಡಕುಟುಂಬಗಳು ವಾಸಿಸುತ್ತಿದ್ದು, ಅನೇಕರಿಗೆ ಸರ್ಕಾರದಿಂದ ದೊರೆಯುವ ಮೂಲಭೂತ ಸೌಕರ್ಯಗಳು ದೊರೆಯುತ್ತಿಲ್ಲ, ಅಧಿಕಾರಿಗಳು ಜನರಿಗೆ ಸರಕಾರದಿಂದ ದೊರೆಯುವ ಸೌಕರ್ಯಗಳ ಬಗ್ಗೆ ಮಾಹಿತಿ ನೀಡಬೇಕು ಮತ್ತು ಸೌಲಭ್ಯಗಳನ್ನು ಒದಗಿಸಬೇಕು. ಸ್ಥಳೀಯ ನಿವಾಸಿ ಪ್ರಶಾಂತ್ ಪೂಜಾರಿ ಕಾಪು ಅವರಿಗೆ ನಿನ್ನೆ ಸಂಜೆ ದೊರೆತ ಮಾಹಿತಿ ಪ್ರಕಾರ ಅವರು ರಾಣೆಕೇರಿಗೆ ಹೋಗಿದ್ದು ಕೆಲವೊಂದು ಕುಟುಂಬಗಳು ವಿದ್ಯುತ್ ಸೌಕರ್ಯವಿಲ್ಲದೆ ಇಂದೋ ನಾಳೆಯೋ ಜೋರಾದ ಗಾಳಿ ಮಳೆ ಬಂದರೆ ಬೀಳುವ ಪರಿಸ್ಥಿತಿಯಲ್ಲಿದ್ದು, ಗುಡಿಸಲಿನಲ್ಲಿ ವಾಸವಾಗಿದ್ದಾರೆ, ಈ ವಿಷಯವನ್ನು ಸಾಮಾಜಿಕ ಕಾರ್ಯಕರ್ತೆ ನೀತಾ ಪ್ರಭು ಇವರಿಗೆ ತಿಳಿಸಿದ್ದು, ನೀತಾ ಪ್ರಭು ಅವರು ತಕ್ಷಣ ಸ್ಥಳೀಯ ಜನನಾಯಕ ಶ್ರೀಕಾಂತ್ ನಾಯಕ್ ಇವರಿಗೆ ತಿಳಿಸಿದ್ದಾರೆ. ಸ್ಥಳಕಾಗಮಿಸಿ ಪರಿಶೀಲನೆ ನಡೆಸಿದ ಶ್ರೀಕಾಂತ್ ನಾಯಕ್ ಅವರು ಅಧಿಕಾರಿಗಳಿಗೆ ಕರೆ ಮಾಡಿ ಈ ವಿಚಾರದಲ್ಲಿ ಸೂಕ್ತ ಕ್ರಮ ಕೈ ಗೊಳ್ಳುವಂತೆ ಹೇಳಿದರು ಮತ್ತು ಶೀಘ್ರದಲ್ಲಿ ಇದಕ್ಕೆ ಬೇಕಾಗುವ ಕ್ರಮ ಕೈಗೊಳ್ಳುತ್ತೇನೆ ಎಂದು ಶ್ರೀಕಾಂತ್ ನಾಯಕ್ ಭರವಸೆ ನೀಡಿದರು ಈ ಸಂದರ್ಭದಲ್ಲಿ ಸುಧಾಮ್ ಶೆಟ್ಟಿ ಮತ್ತು ಸಚಿನ್ ಸುವರ್ಣ ಉಪಸ್ಥಿತರಿದ್ದರು. ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಶಾಂತ್ ಪೂಜಾರಿ ಕಾಪು, ಕಾಪು ತಾಲೂಕಿನಲ್ಲಿ ಇನ್ನು ಅನೇಕ ಇಂತಹ ಮನೆಗಳಿದ್ದು ಮೂಲಭೂತ ಸೌಕರ್ಯಗಳು ದೊರಕದೆ ಬಹಳ ಕಷ್ಟ ಪಡುತ್ತಿದ್ದಾರೆ, ಜನಸಾಮಾನ್ಯರು ಇಂತಹ ವಿಷಯಗಳನ್ನು ಅಧಿಕಾರಿಗಳಿಗೆ ಅಥವಾ ಜನಪ್ರತಿನಿಧಿಗಳಿಗೆ ತಲುಪಿಸುವ ಕಾರ್ಯ ಮಾಡಬೇಕು ಎಂದರು.

ಮುಂಬೈ ತುಳುವರು ಊರಿನಲ್ಲಿ ಕ್ವಾರಂಟೈನ್ ಆದರೂ ಸಮಾಜಸೇವೆ ಬಿಟ್ಟಿಲ್ಲ

Posted On: 18-05-2020 12:46PM

ಮುಂಬೈನಿಂದ ಬಂದು ಕ್ವಾರಂಟೈನ್ನಲ್ಲಿ ಇದ್ದು ಸುಮ್ಮನೆ ಕೂರದೆ ಅಲ್ಲಿಯೂ ಸಮಾಜ ಸೇವೆ ಮಾಡಿದ ತುಳುವರು. ಮುಂಬೈಯವರು ಯಾವತ್ತೂ ತನ್ನ ಊರಿಗೆ, ತಾಲೂಕು, ಜಿಲ್ಲೆಗಾಗಿ ಸೇವೆ ಮಾಡಿದವರು, ಅದನ್ನು ಈಗ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ನಿನ್ನೆ ಮುಂಬೈನಿಂದ ಬಂದ ಒಂದು ತಂಡವನ್ನು ಮರೋಡಿಯ ಕೂಕ್ರಬೆಟ್ಟು ಶಾಲೆಯಲ್ಲಿ ಕ್ವಾರಂಟೈನ್ ನಲ್ಲಿ ಇಡಲಾಯಿತು.. ಆದರೆ ಕ್ವಾರಂಟೈನ್ ಇದ್ದ ಸದಸ್ಯರು ಕೂತು,ಮಲಗಿ ಸಮಯ ವ್ಯರ್ಥ ಮಾಡದೆ ಶಾಲೆ ಹೊರಾಂಗಣದ ಸ್ವಚ್ಛತಾ ಕಾರ್ಯಕ್ರಮ ಶುರುಮಾಡಿದ್ದಾರೆ. ಹಾಗೂ ತೆಂಗಿನ ಮರದ ಬುಡ ಸ್ವಚ್ಛ ಮಾಡುವ ಕೆಲಸ ಮಾಡಿದರು. ಸಮಯವನ್ನು ವ್ಯರ್ಥ ಮಾಡದೆ ಸಮಾಜದ ಕೆಲಸಕ್ಕಾಗಿ ತೊಡಗಿದ ಎಲ್ಲರಿಗೂ ಧನ್ಯವಾದಗಳು..

RJ ಮನವಿಗೆ ಸ್ಪಂದಿಸಿದ ಸುಬ್ರಹ್ಮಣ್ಯ ಯುವಕ, ಯುವತಿ ವೃಂದ ಪಾದೆಬೆಟ್ಟು

Posted On: 16-05-2020 05:54PM

ಕೊರೊನಾ ಸಂದರ್ಭ ಹಲವಾರು ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳನ್ನು ವಿತರಿಸಿದ ಶ್ರೀ ಸುಬ್ರಹ್ಮಣ್ಯ ಯುವಕ,ಯುವತಿ ವೃಂದ ಪಾದೆಬೆಟ್ಟು ಪಡುಬಿದ್ರಿ ಇವರ ವತಿಯಿಂದ ನೀಡಲ್ಪಟ್ಟ ಅಕ್ಕಿಯನ್ನು ವಿಕ್ಕಿ ಮಡುಂಬು ಮತ್ತು ಆರ್ ಜೆ ಎರೋಲ್ ಮೂಲಕ ಹೆಜಮಾಡಿಯ ಅರ್ಹ ಕುಟುಂಬವೊಂದಕ್ಕೆ ನೀಡಲಾಯಿತು.

10 ವರ್ಷಗಳ 120 ಅಮಾವಾಸ್ಯೆಗಳನ್ನು ರಾಮೇಶ್ವರದಲ್ಲಿ ಕಳೆದ ಇನ್ನಂಜೆಯ ಐ ಕೃಷ್ಣಮೂರ್ತಿ

Posted On: 16-05-2020 07:33AM

ಆಸ್ತಿಕ ಅಭಿಮಾನಿಗಳಿಗೂಂದು ಸಂತಸದ ಸುದ್ದಿ! ಉಡುಪಿ ಜಿಲ್ಲೆ। ಕಾಪು ತಾಲೂಕು। ಇನ್ನಂಜೆ ಗ್ರಾಮ। ಪಲಿಮಾರು ಮಠದ ಶಿಷ್ಯವರ್ಗದವರಾದ ಐ.ಕೃಷ್ಣಮೂರ್ತಿ ಇವರು, ಇನ್ನಂಜೆಯಿಂದ ತಮಿಳುನಾಡಿನ ರಾಮೇಶ್ವರಕ್ಕೆ ಪ್ರತಿ ತಿಂಗಳ ಅಮಾವಾಸ್ಯೆಯ ಹಿಂದಿನ ದಿನಕ್ಕೆ ಸರಿಯಾಗಿ ಇಷ್ಟರವರೆಗೂ ಚಾಚು ತಪ್ಪದೆ ತೆರಳಿ, ಅಮಾವಾಸ್ಯೆಯಂದು ಅಲ್ಲಿ ಪಿತೃ ಮೋಕ್ಷವೆಂಬ ವೃತವನ್ನು ಕ್ಷೇತ್ರ ವಿಧಿಯ ರೂಪದಲ್ಲಿ ಮಾಡುತ್ತಾ ಬರುತ್ತಿದ್ದು, ಹತ್ತು ವರ್ಷಗಳ ನೂರ ಇಪ್ಪತ್ತು ಅಮಾವಾಸ್ಯೆಗಳನ್ನು ಇದೇ ಮೇ ತಿಂಗಳ 22ನೇ ತಾರೀಕಿನಂದು ಕ್ಷೇತ್ರ ವಿಧಿಯನ್ನು ಪೂರೈಸಿ, ಇನ್ನಂಜೆಗೆ ಮರಳಿ ಬಂದು, ಮುಂದಿನ ಅಮಾವಾಸ್ಯೆಯಿಂದ ಈ ವಿಧಿಯನ್ನು ಕುಂಜಾರು ಗಿರಿಯ ಪಾಜಕ ಕ್ಷೇತ್ರದಲ್ಲಿ ಮುಂದುವರಿಸಲು ನಿರ್ಧರಿಸಿರುತ್ತಾರೆ, ಹಾಗೂ ಈ ವೃತದ ಇನ್ನೊಂದು ಭಾಗವಾದ ಕಾಸರಗೋಡಿನ ಮಧೂರು ಶ್ರೀ ಮಹಾಗಣಪತಿ ದೇವಸ್ಥಾನದಿಂದ ಕೊಲ್ಲೂರು ಶ್ರೀ ಮೂಕಾಂಬಿಕೆಯ ದೇವಸ್ಥಾನದ ತನಕ, ದಿನಕ್ಕೊಂದು ದೇವಸ್ಥಾನದಲ್ಲಿ ಈ ಪಿತೃ ಮೋಕ್ಷ ಪ್ರಾಪ್ತಿಗೆ ಅನುಗ್ರಹ ರೂಪದ ಅಗ್ರ ಪೂಜೆ ಎಂಬ ಸೇವೆಯನ್ನು ನೂರ ಎಂಟು ದೇವಸ್ಥಾನಗಳಲ್ಲಿ ಸಲ್ಲಿಸಲಿದ್ದಾರೆ. ಆ ಬಳಿಕ ಸಾವಿರದ ಎಂಟು ಬ್ರಾಹ್ಮಣೋತ್ತಮರಿಗೆ ಫಲ ತಾಂಬೂಲ, ದಕ್ಷಿಣೆಯ ಬ್ರಾಹ್ಮಣಾರಾಧನೆ, ಅದರ ನಂತರ ಕನ್ಯಾಕುಮಾರಿಯಿಂದ ಬದರಿಯವರೆಗೆ ತೀರ್ಥಯಾತ್ರೆಯ ಸೇವೆಯನ್ನು ಕೈಗೊಳ್ಳಲಿದ್ದಾರೆ.ಈ ವೃತದ ಕೊನೆಯ ಅಂಗವಾಗಿ ಪ್ರಾಯಶ್ಚಿತ್ತ ಹೋಮಗಳನ್ನು ರಾಮೇಶ್ವರಂನ ದಿವ್ಯ ಸಾನಿಧ್ಯದಲ್ಲಿ ನಡೆಸಲಿದ್ದಾರೆ.. ಈ ಸಂದರ್ಭದಲ್ಲಿ, ಅ ವರ್ಗ ಈ ವರ್ಗ ಎಂಬ ಭೇದವಿಲ್ಲದೆ ಯಾರೇ ಆಗಲಿ ಈ ವೃತದ ಮೇಲೆ ಅಭಿಮಾನವಿಟ್ಟು, ಯಥಾಶಕ್ತಿ ದಕ್ಷಿಣೆಯ ರೂಪದ ದೇಣಿಗೆಯನ್ನು ಈ ವೃತದ ಯಶಸ್ಸಿಗಾಗಿ, ಕೆಳಗೆ ನಮೂದಿಸಿರುವ ಬ್ಯಾಂಕ್ ಖಾತೆಗೆ ಸಲ್ಲಿಸಬಹುದಾಗಿದೆ. M/S :- Shri Padmanandini Home Industries A/C number (Current account): 0822000100006001 IFSC: KARB0000082 Branch: Bantakal Udupi ಇತೀ, ಐ.ಕೃಷ್ಣಮೂರ್ತಿ ಅಭಿಮಾನಿಗಳು

ಚಿತ್ರಕಲೆ, ಅಭಿನಯ 'ಎಲ್ಲದಕ್ಕೂ ಸೈ' ಕಟಪಾಡಿ ಏಣಗುಡ್ಡೆಯ ಪ್ರಥಮ್ ಕಾಮತ್

Posted On: 15-05-2020 07:40PM

ಸಮಯವ ವ್ಯರ್ಥ ಮಾಡುವ ಇಂದಿನ ಮಕ್ಕಳಿಗೆ ಮಾದರಿ. ಜಾದು, ಆವೆಮಣ್ಣಿನ ಕಲಾಕೃತಿ, ಚಿತ್ರಕಲೆ, ಅಭಿನಯ ಎಲ್ಲಕ್ಕೂ ಸೈ. ಕಟಪಾಡಿ ಏಣಗುಡ್ಡೆಯ ಪ್ರಥಮ್ ಕಾಮತ್ ಸಾಮಾನ್ಯವಾಗಿ ರಜೆ ಬಂತೆಂದರೆ ಹೆತ್ತವರು ಮಕ್ಕಳ ಬಗೆಗೆ ಚಿಂತಿತರಾಗುತ್ತಾರೆ. ಕೆಲವರು ಮಕ್ಕಳನ್ನು ಬೇಸಿಗೆ ಶಿಬಿರಗಳಿಗೆ, ಮುಂದಿನ ತರಗತಿಯ ಟ್ಯೂಷನ್, ಅಜ್ಜಿಮನೆಗೆ ಕಳಿಸುತ್ತಾರೆ. ಆದರೆ ಪ್ರಸ್ತುತ ಸನ್ನಿವೇಶ ಹಾಗೆ ಇಲ್ಲ. ಕೊರೋನಾದ ಭೀತಿಯಿಂದ ಮನೆಯ ಹೊರಗೆ ಮಕ್ಕಳನ್ನು ಕಳುಹಿಸುವ ಹಾಗಿಲ್ಲ. ಬಹಳಷ್ಟು ಮಕ್ಕಳು ಮೊಬೈಲ್ ನಲ್ಲಿ ಕಾಲಹರಣ ಮಾಡುತ್ತಾರೆಂದು ಹೆತ್ತವರ ಚಿಂತೆ. ಆದರೆ ಇಲ್ಲೊಬ್ಬ ಬಾಲಕ ತಾನು ಬಿಡುವಿನ ವೇಳೆಯಲ್ಲಿ ಗುರುಗಳ ಬಳಿ ಕಲಿತ ವಿದ್ಯೆಯನ್ನು ಮನೆಯಲ್ಲಿ ಕಾರ್ಯರೂಪಕ್ಕೆ ತರುವುದಲ್ಲದೆ, ಮೊಬೈಲ್ ಹಿಡಿದುಕೊಂಡು ಸುಮ್ಮನೆ ಕಾಲ ಕಳೆಯುವ ಬದಲು ತನಗೆ ಉಪಯುಕ್ತವಾದಂತಹ ಕ್ಲೇ ಮಾಡೆಲಿಂಗ್, ಚಿತ್ರಕಲೆ, ಕರಕುಶಲ ಕಲೆ, ಅಡುಗೆ ತಯಾರಿ, ಜಾದು ಇತ್ಯಾದಿ ಕಲಿಯುತ್ತಿರುತ್ತಾನೆ. ಬಾಲ್ಯದಲ್ಲೇ ಇಂತಹ ಹಲವಾರು ಹವ್ಯಾಸಗಳನ್ನು ಮೈಗೂಡಿಕೊಂಡ ಈ ಬಾಲಕ ಕಟಪಾಡಿಯ ಏಣಗುಡ್ಡೆ ಗ್ರಾಮದ ಪ್ರಸಿದ್ಧ ನಾಟಕ,ಕಿರುಚಿತ್ರ,ಸಿನಿಮಾ ಕಲಾವಿದರಾದ ಕೆ. ನಾಗೇಶ್ ಕಾಮತ್ ಮತ್ತು ಕೆ. ಸುಜಾತ ಕಾಮತ್ ದಂಪತಿಯ ಪುತ್ರ ಕೆ. ಪ್ರಥಮ್ ಕಾಮತ್. ಕಟಪಾಡಿಯ ಎಸ್.ವಿ.ಕೆ ಆಂಗ್ಲ ಮಾಧ್ಯಮ ಶಾಲೆಯ 8ನೇ ತರಗತಿಯ ವಿದ್ಯಾರ್ಥಿಯಾಗಿರುವ ಪ್ರಥಮ್ ಕಾಮತ್ ತಾಲೂಕು, ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಿತರಾಗಿರುವುದಲ್ಲದೆ ಹಲವಾರು ಕಡೆ ಸನ್ಮಾನಿತರಾಗಿದ್ದಾರೆ. ಓರ್ವ ಬಾಲ ಜಾದುಗಾರನಾಗಿ : ಹಲವಾರು ವೇದಿಕೆಗಳಲ್ಲಿ ಸುಮಾರು 30ಕ್ಕೂ ಅಧಿಕ ಜಾದು ಪ್ರದರ್ಶನ ನೀಡಿದ್ದಾರೆ. ವಿಜಯಕರ್ನಾಟಕ ದಿನಪತ್ರಿಕೆ ಆಯೋಜಿಸಿದ್ದ ಸಮಾರಂಭವೊಂದರಲ್ಲಿ ಖಾಲಿ ಪಾತ್ರೆಗೆ ಬೆಂಕಿ ಹಾಕಿ ಮೀನುಗಳನ್ನು ತೆಗೆಯುವ ಮೂಲಕ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರನ್ನು ಅಚ್ಚರಿಪಡಿಸಿದ್ದಾರೆ. ಬಾಲ ವೇದಿಕೆ ಮಕ್ಕಳ ಪ್ರತಿಭಾ ಪ್ರದರ್ಶನದಲ್ಲಿ ಡ್ರಾಯಿಂಗ್ ವಿತ್ ಮ್ಯಾಜಿಕ್ ಪ್ರದರ್ಶನ, ಉದಯವಾಣಿ ಮತ್ತು ಗೀತಾಂಜಲಿ ಸಿಲ್ಕ್ಸ್ ಉಡುಪಿ ಇವರ ವತಿಯಿಂದ ನಡೆದ ಯಶೋಧಾಕೃಷ್ಣ ಕಾರ್ಯಕ್ರಮ, ಹೊಸ ಬೆಳಕು ಸೇವಾ ಟ್ರಸ್ಟ್ ಮಣಿಪಾಲ ಇವರ ಕಾರ್ಯಕ್ರಮದಲ್ಲಿ ಆಶ್ರಮ ವಾಸಿಗಳ ಜೊತೆ ಜಾದೂ ಪ್ರದರ್ಶನ, ಉಡುಪಿ ಜಿ.ಎಸ್.ಬಿ ಸಮಾಜದ ಘರ್ ಘರ್ ಭಜನಾಂತರಂಗದ 100ನೇ ಕಾರ್ಯಕ್ರಮದಲ್ಲಿ ಪ್ರದರ್ಶನ, ಮಕ್ಕಳ ದಿನಾಚರಣೆಯ ಅಂಗವಾಗಿ ಉಡುಪಿ ಮಲಬಾರ್ ಗೋಲ್ಡ್ & ಡೈಮಂಡ್ಸ್ ನಲ್ಲಿ ಜಾದೂ ಪ್ರದರ್ಶನ. ಇದಲ್ಲದೆ ಚಲನಚಿತ್ರ ನಟ ಶ್ರೀನಗರ ಕಿಟ್ಟಿಯವರೊಂದಿಗಿನ ಉದಯ ಟಿ.ವಿಯ 'ಸದಾ ನಿಮ್ಮೊಂದಿಗೆ' ಕಾರ್ಯಕ್ರಮದಲ್ಲಿ ಜಾದು ಪ್ರದರ್ಶನ ನೀಡಿರುತ್ತಾರೆ. ಆವೆ ಮಣ್ಣಿನ ಕಲಾಕೃತಿ ರಚನೆಯಲ್ಲಿ : ಹಲವಾರು ಕಲಾಕೃತಿಗಳನ್ನು ಆವೆಮಣ್ಣಿನಿಂದ ರಚಿಸಿದ್ದು ಇದು ಪ್ರಥಮ್ ಕಾಮತ್ ರ ನೆಚ್ಚಿನ ಹವ್ಯಾಸವಾಗಿದೆ. ಈಗಾಗಲೇ ಪ್ರತಿಭಾಕಾರಂಜಿಯಲ್ಲಿ ತಾಲೂಕು, ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ. ಇವರ ಇತ್ತೀಚಿನ ಕೊರೊನ ಲಾಕ್ಡೌನ್ ಸಮಯದಲ್ಲಿ ಬೆಂಕಿಕಡ್ಡಿ, ಸ್ಟ್ರಾ, ಆವೆಮಣ್ಣು ಬಳಸಿ ಮಾಡಿದ ಕೊರೊನ ಸಂಬಂಧಿತ ಜಾಗೃತಿ ಕಲಾಕೃತಿ ಸಾರ್ವಜನಿಕವಾಗಿ ಮೆಚ್ಚುಗೆಗೆ ಪಾತ್ರವಾಗಿದೆ. ಚಿತ್ರಕಲೆ, ಕ್ರಾಫ್ಟ್, ಛದ್ಮವೇಷ, ಅಭಿನಯದಲ್ಲಿ ಪ್ರಥಮ್ : ಚಿತ್ರಕಲೆಗೆ ಸಂಬಂಧಿಸಿದಂತೆ ಪ್ರಜಾವಾಣಿ ದೀಪಾವಳಿ ವಿಶೇಷಾಂಕ ಮಕ್ಕಳ ವರ್ಣಚಿತ್ರ ಸ್ಪರ್ಧೆಯಲ್ಲಿ 3 ಬಾರಿ ಬಹುಮಾನ ಪಡೆದವರಾಗಿದ್ದಾರೆ. ರಾಜ್ಯಮಟ್ಟದ ಕಲಾಶ್ರೀ ಶಿಬಿರ 2016 ರಲ್ಲಿ ಭಾಗವಹಿಸಿದ್ದಾರೆ‌. ನವದೆಹಲಿಯಲ್ಲಿ ನಡೆದ ರಾಷ್ಟ್ರಮಟ್ಟದ ಪೆಟ್ರೊಲಿಯಂ ಸಂರಕ್ಷಣಾ ಸಂಶೋಧನಾ ಸಂಸ್ಥೆ ನಡೆಸಿದ ಸ್ಪರ್ಧೆಯಲ್ಲಿ ಅಂತಿಮ 100 ಸ್ಪರ್ಧಿಗಳಲ್ಲಿ ಇವರೂ ಒಬ್ಬರಾಗಿ ರಾಷ್ಟ್ರಮಟ್ಟದ ಸಮಾಧಾನಕರ ಬಹುಮಾನ ಗಳಿಸಿದ್ದಾರೆ. ಪೇಪರ್ ಕ್ರಾಫ್ಟ್ ನಲ್ಲಿ ಪರಿಣಿತರಾಗಿರುವ ಇವರು ಅಡುಗೆ ತಯಾರಿಯ ಬಗೆಯೂ ಆಸಕ್ತಿ ಹೊಂದಿದ್ದಾರೆ. ಛದ್ಮವೇಷ ಸ್ಪರ್ಧೆಯಲ್ಲಿ ಮತ್ತು ಕಿರುಚಿತ್ರವೊಂದರಲ್ಲಿಯೂ ನಟಿಸಿರುವ ಇವರು ಅಭಿನಯದತ್ತವೂ ಆಕರ್ಷಿತರಾಗಿದ್ದಾರೆ. ಸಂದ ಪ್ರಶಸ್ತಿ-ಗೌರವಗಳು : ಇವರ ಚಿತ್ರಕಲೆ, ಕ್ರಾಫ್ಟ್, ಕ್ಲೇ ಮಾಡಲಿಂಗ್, ಜಾದು,ಅಭಿನಯದ ಅಸಾಧಾರಣ ಸಾಧನೆಗಾಗಿ 2019-20ನೇ ಸಾಲಿನ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ "ಹೊಯ್ಸಳ ಪ್ರಶಸ್ತಿ" ಪಡೆದವರಾಗಿರುತ್ತಾರೆ. ಕಾರ್ಕಳದಲ್ಲಿ ನಡೆದ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ "ಕರ್ನಾಟಕ ಪ್ರತಿಭಾ ರತ್ನ" ರಾಜ್ಯಮಟ್ಟದ ಗೌರವ ಪ್ರಶಸ್ತಿ ಪಡೆದಿರುತ್ತಾರೆ. ಇವರ ಪ್ರತಿಭೆ ಗುರುತಿಸಿ ಹಲವಾರು ಸಂಘ-ಸಂಸ್ಥೆಗಳಿಂದ ಗೌರವಿಸಲ್ಪಟ್ಟಿದ್ದಾರೆ. ಮಂಗಳೂರಿನ ಖಾಸಗಿ ವಾಹಿನಿ ದಾಯ್ಜಿ ವಲ್ಡ್೯ನಲ್ಲಿ ದಿನೇಶ್ ಅತ್ತಾವರ ನಡೆಸಿಕೊಡುವ ಸಂದರ್ಶನ ಕಾರ್ಯಕ್ರಮ 'ದಾಯ್ಜಿ ಸ್ಪೆಷಲ್ ಅಜ್ಜಿಡ ಕುಸಲ್' ನಲ್ಲಿ ಭಾಗವಹಿಸಿರುತ್ತಾರೆ. ಪ್ರಥಮ್ ಕಾಮತ್ ಚಿತ್ರಕಲೆ ಹಾಗು ಕ್ರಾಫ್ಟ್ ಕಲಿಕೆಯನ್ನು ರಮೇಶ್ ರಾವ್ ನೇತೃತ್ವದ ಉಡುಪಿ ದೃಶ್ಯ ಸ್ಕೂಲ್ ಆಯ ಆಟ್ಸ್೯ನಲ್ಲಿ , ಕ್ಲೇ ಮಾಡಲಿಂಗ್ ನ್ನು ವೆಂಕಿ ಪಲಿಮಾರ್ ಬಳಿ, ಜಾದೂ ಕಲೆಯನ್ನು ಅಂತರಾಷ್ಟ್ರೀಯ ಖ್ಯಾತಿಯ ಜಾದುಗಾರ ಸತೀಶ್ ಹೆಮ್ಮಾಡಿ ಬಳಿ ಕಲಿಯುತ್ತಿದ್ದಾರೆ. ಯುವ ಜನಾಂಗಕ್ಕೆ ಮಾದರಿಯಾಗಿ ಇನ್ನಷ್ಟು ಸಾಧನೆಗಳು ಇವರಿಂದಾಗಲಿ. ಆಲ್ ದಿ ಬೆಸ್ಟ್ ಪ್ರಥಮ್ ಕಾಮತ್.. ✍️ ಬರಹ - ದೀಪಕ್ ಕೆ. ಬೀರ ಪಡುಬಿದ್ರಿ

ತುಳುನಾಡ್ದ ಪ್ರತಿಭೆಲು ಆಯೋಜಿಸಿದ 'ನಲಿಪು ನವಿಲೆ' ನೃತ್ಯ ಸ್ಪರ್ಧೆಯ ಫಲಿತಾಂಶ ಪ್ರಕಟ

Posted On: 15-05-2020 07:11PM

ತುಳುನಾಡ್ದ ಪ್ರತಿಭೆಲು ಫೇಸ್ಬುಕ್ ತಂಡ ಆಯೋಜಿಸಿದ "ನಲಿಪು ನವಿಲೆ" ನೃತ್ಯ ಸ್ಪರ್ಧೆಯಲ್ಲಿ ಅನೇಕ ಸ್ಪರ್ಧಿಗಳು ಭಾಗವಹಿಸಿದ್ದು, ನಾವೆಲ್ಲರೂ ಸಂತಸ ಅನುಭವಿಸಿದ್ದೇವೆ. ಭಾಗವಹಿಸಿದ ಸ್ಪರ್ಧಿಗಳ ಕಲಾ ಉತ್ಸಾಹ ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸುವಲ್ಲಿ ತಮ್ಮ ತಯಾರಿ ನಡೆಸಿದ ರೀತಿ ನಮಗೆಲ್ಲರಿಗೂ ಸ್ಫೂರ್ತಿದಾಯಕ. ಕರಾವಳಿಯ ಪ್ರತಿಭೆಗಳಿಗೆ ಉನ್ನತ ಮಟ್ಟದ ವೇದಿಕೆ ನಿರ್ಮಾಣ ನಮ್ಮ ಉದ್ದೇಶವಾಗಿದ್ದು, ಒದಗಿಸಿದ ಅವಕಾಶವನ್ನು ಅತ್ಯುನ್ನತ ಮಟ್ಟಿನಲ್ಲಿ ಸದುಪಯೋಗ ಗೊಳಿಸಿದ ಸ್ಪರ್ಧಿಗಳನ್ನು ಕಂಡ ತುಳುನಾಡ್ದ ಪ್ರತಿಭೆಲು ತಂಡದ ಸದಸ್ಯರು ನಾವೇ ಧನ್ಯರು. ಭಾಗವಹಿಸಿದ ಸ್ಪರ್ಧಿಗಳ ಕಲಾ ಉತ್ಸಾಹ, ಚಾತುರ್ಯಕ್ಕೆ ನಮ್ಮ ತಂಡದ ಪರವಾಗಿ ಸರ್ವರಿಗೂ ಅನಂತಾನಂತ ವಂದನೆಗಳು. ಸ್ಪರ್ಧೆಯ ಫಲಿತಾಂಶ: ತೀರ್ಪುಗಾರರಾದ ಸುಜಯ್ ಶಾನಭಾಗ್ ಇವರು, ಸ್ಪರ್ಧಿಗಳ ನೃತ್ಯವನ್ನು ಕಂಡು ಈ ರೀತಿ ತೀರ್ಪು ನೀಡಿದ್ದಾರೆ: ೧) ವೃಷ್ಟಿ ನಾಯಕ್ Contestant no:೨೯ ೨) ತ್ರಿಶಾ ಪೂಜಾರಿ Contestant no:೪೧ ೩) ತನ್ವಿ ಶೆಟ್ಟಿ Contestant no:೫೫ ೪) ಖುಷಿ ಶೆಟ್ಟಿ Contestant no:೨೩ ೫) ಸಂಪೂರ್ಣ ಮತ್ತು ಸಿದ್ದಿ Contestant no:೩೩ ಸ್ಪರ್ಧೆಯ ವಿಜೇತರಿಗೆ ತುಳುನಾಡ್ದ ಪ್ರತಿಭೆಲು ತಂಡ ಶುಭಕೋರುತ್ತದೆ.

ಕಾಪು ಕರಂದಾಡಿ ನಿವಾಸಿಯ ಕ್ಯಾನ್ಸರ್ ಚಿಕಿತ್ಸೆಗೆ ಆರ್ಥಿಕ ನೆರವು ನೀಡುವಿರಾ?

Posted On: 14-05-2020 05:53PM

ಉಡುಪಿ : ಚಾಲಕರಾಗಿ ದುಡಿಯುತ್ತಿದ್ದ ಕಾಪು ಕರಂದಾಡಿ ನಿವಾಸಿ ಎಂ.ಅಶ್ರಫ್ (35) ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದು, ಇವರ ಚಿಕಿತ್ಸೆಗಾಗಿ ಆರ್ಥಿಕ ನೆರವು ನೀಡುವಂತೆ ದಾನಿಗಳಲ್ಲಿ ಮನವಿ ಮಾಡಲಾಗಿದೆ. ಚಾಲಕರಾಗಿ ದುಡಿಯುತ್ತಿದ್ದ ಇವರಿಗೆ ಕಳೆದ ಜನವರಿಯಲ್ಲಿ ಪರೀಕ್ಷೆ ಮಾಡಿದಾಗ ಕ್ಯಾನ್ಸರ್ ಕಾಯಿಲೆ ಇರುವುದು ದೃಢಪಟ್ಟಿತ್ತು. ಇದೀಗ ಅವರು ಆರೋಗ್ಯ ಕ್ಷೀಣಿಸುತ್ತಿದ್ದು, ಎದ್ದು ನಿಂತು ಕೆಲಸ ಮಾಡದ ಪರಿಸ್ಥಿತಿಯಲ್ಲಿದ್ದಾರೆ. ಇವರಿಗೆ ಒಂದು ಗಂಡು ಮತ್ತು ಎರಡು ಹೆಣ್ಣು ಮಕ್ಕಳಿದ್ದಾರೆ. ತೀರಾ ಬಡ ಕುಟುಂಬ ಇವರದ್ದಾಗಿದ್ದು, ಇವರೇ ಈ ಕುಟುಂಬದ ಆಧಾರ ಸ್ತಂಭ ಆಗಿದ್ದಾರೆ. ಆದರೆ ಈಗ ದುಡಿಯಲು ಸಾಧ್ಯವಾಗದೆ ಕುಟುಂಬ ನಿರ್ವಹಣೆ ಮತ್ತು ಚಿಕಿತ್ಸೆಗೆ ಆದಾಯ ಇಲ್ಲದೆ ಇಡೀ ಕುಟುಂಬ ಸಂಕಷ್ಟ ಪಡುತ್ತಿದೆ. ಇವರ ಚಿಕಿತ್ಸೆಗೆ ತಿಂಗಳಿಗೆ ಸುಮಾರು 40 ರಿಂದ 50 ಸಾವಿರ ರೂ. ವ್ಯಯವಾಗುತ್ತಿದೆ. ಆದುದರಿಂದ ದಾನಿಗಳು ಇವರ ಚಿಕಿತ್ಸೆಗೆ ನೆರವು ನೀಡುವಂತೆ ಮನವಿ ಮಾಡಲಾಗಿದೆ. ಎಂ.ಅಶ್ರಫ್ ಕೆ., ಕೆನರಾ ಬ್ಯಾಂಕ್ ಕಾಪು ಶಾಖೆಯ ಖಾತೆ ನಂಬರ್ 2409101008846, ಐಎಫ್‌ಎಸ್‌ಸಿ ಕೋಡ್- ಸಿಎನ್‌ಆರ್‌ಬಿ0002409 ಇಲ್ಲಿಗೆ ಹಣ ಕಳುಹಿಸಬಹುದು. ಇವರ ಮೊಬೈಲ್ ನಂಬರ್- 8970251983. ಇವರ ವಿಳಾಸ- ಹೌಸ್ ನಂಬರ್ 029, ಪಂಜಿತ್ತೂರು, ಕರಂದಾಡಿ, ಮಜೂರು, ಕಾಪು ತಾಲೂಕು, ಉಡುಪಿ ಜಿಲ್ಲೆ. 574106.

ಸುಝ್ಲಾನ್ ಫೌಂಡೇಶನ್ ವತಿಯಿಂದ 2ನೇ ಹಂತದ ಆಹಾರ ಸಾಮಾಗ್ರಿ ವಿತರಣೆ

Posted On: 14-05-2020 05:11PM

ಸುಝ್ಲಾನ್ ಫೌಂಡೇಶನ್ ನಂದಿಕೂರು, ಅವರಾಲು ಮತ್ತು ನಡ್ಸಾಲು ಗ್ರಾಮಗಳ ಹಾಲು ಉತ್ಪಾದಕ ಒಕ್ಕೂಟಗಳ ಮೂಲಕ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಕಾಪು ಶಾಸಕರಾದ ಲಾಲಾಜಿ ಮೆಂಡನ್, ಕಾಪು ತಹಶೀಲ್ದಾರ್ ಮೊಹಮ್ಮದ್ ಇಸಾಕ್, ಆಸ್ಪೆನ್ ಎಸ್ಇಝಡ್ ಜನರಲ್ ಮ್ಯಾನೇಜರ್ ಅಶೋಕ್ ಕುಮಾರ್ ಶೆಟ್ಟಿ, ಫಲಿಮಾರ್ ಪಂಚಾಯತ್ ಅಧ್ಯಕ್ಷರಾದ ಜಿತೇಂದ್ರ ಫುಟಾರ್ಡೋ, ಪಡುಬಿದ್ರಿ ಪಂಚಾಯತ್ ಅಧ್ಯಕ್ಷರಾದ ದಮಯಂತಿ ಅಮೀನ್, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ನವೀನ್ ಚಂದ್ರ ಜೆ. ಶೆಟ್ಟಿ, ಅವರಾಲು ಕರುಣಾಕರ್ ಶೆಟ್ಟಿ, ಸುಝ್ಲಾನ್ ಅಧಿಕಾರಿಗಳಾದ ಹಿಮಕರ್ ಪೂಜಾರಿ, ಪುನೀತ್ ರೈ, ಅರುಣ್ ಕುಮಾರ್ ಟಿ., ಆಸ್ಪೆನ್ ಅಧಿಕಾರಿಗಳಾದ ಜಿನರಾಜ್ ಎರ್ಮಾಳ್, ವ್ಯಾಸ ಆಚಾರ್, ಕಿರಣ್ ಕುಮಾರ್, ಸಿಎಸ್ಆರ್ ವಿಭಾಗದ ಅಧಿಕಾರಿ ಪ್ರಸಾದ್ ಕುಮಾರ್ ಮತ್ತು ಸ್ಥಳೀಯ ಹಾಲು ಒಕ್ಕೂಟದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಗರೋಡಿ ಅರ್ಚಕರ ಸಂಕಷ್ಟ, ಸರ್ಕಾರದ ಕಣ್ಣಿಗೆ ಇನ್ನು ಬಿದ್ದಿಲ್ಲವೇ.?

Posted On: 11-05-2020 08:09AM

ರಾಜ್ಯ ಸರ್ಕಾರದ ಮುಜರಾಯಿ ಇಲಾಖೆಯ ವತಿಯಿಂದ ಇಲಾಖೆಯ ಅಧೀನದಲ್ಲಿರುವ ದೇವಸ್ಥಾನಗಳ ಅರ್ಚಕರಿಗೆ ಪಡಿತರ ಕಿಟ್ ವಿತರಣೆ ಸ್ವಾಗತಾರ್ಹ, ಆದರೆ ನಮ್ಮ ಸಮಾಜದ ಒರ್ವ ಮಂತ್ರಿಯಾಗಿ ನಿಮಗೆ ನಮ್ಮ ಸಮಾಜದ ಗರೋಡಿ ಅರ್ಚಕರ ಕಷ್ಟ ಕಾಣಿಸುತ್ತಿಲ್ವೇ ಮಾನ್ಯ ಶ್ರೀನಿವಾಸ ಪೂಜಾರಿ ಅವರೇ. ಇಂತಹ ಸಂಕಷ್ಟದ ಸಮಯದಲ್ಲಿ ಎಷ್ಟೋ ಗರೋಡಿ ಅರ್ಚಕರ ಕುಟುಂಬ ಸಂಕಷ್ಟದಲ್ಲಿದ್ದು,ಅವರ ನೆರವಿಗೆ ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಎಲ್ಲಾ ಗರೋಡಿ ಅರ್ಚಕರ ಪರವಾಗಿ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ (ರಿ) ಮಾನ್ಯ ಮುಜರಾಯಿ ಇಲಾಖೆಯ ಮಂತ್ರಿಗಳಾದ ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು ಒತ್ತಾಯಿಸುತ್ತಿದ್ದೇವೆ ಎಂದು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ (ರಿ) ಜಿಲ್ಲಾ ಅಧ್ಯಕ್ಷರು ಪ್ರವೀಣ್ ಎಮ್.ಪೂಜಾರಿ ತಿಳಿಸಿದರು. ಈ ಬಗ್ಗೆ ನಮ್ಮ ಕಾಪು ನ್ಯೂಸ್ ನೊಂದಿಗೆ ಮಾತನಾಡಿದ ಪ್ರವೀಣ್ ಎಮ್ ಪೂಜಾರಿ, ಈ ಮನವಿಯನ್ನು ಮುಜರಾಯಿ ಇಲಾಖೆಯು ಪರಿಗಣಿಸಿ ಮುಂದಿನ ದಿನದಲ್ಲಿ ಎಲ್ಲಾ ಗರೋಡಿ ಅರ್ಚಕರಿಗೆ ಸೂಕ್ತ ಪರಿಹಾರ ಒದಗಿಸಿಬೇಕು ಎಂದರು.

ಕಾಪು ಭಾಗದಲ್ಲಿ ಕಿಟ್ ವಿತರಣೆ ಮತ್ತು ಆಶಾಕಾರ್ಯಕರ್ತೆಯರನ್ನು ಹುರಿದುಂಬಿಸಿದ ಕಾಪು ಕ್ಷೇತ್ರದ ಮಾಜಿ ಶಾಸಕ

Posted On: 10-05-2020 08:53PM

ಕಾಪು, ಮೇ. 10 : ಈಗಾಗಲೇ ಅನೇಕ ದಾನಿಗಳು ಕಿಟ್ ವಿತರಣೆ ಮಾಡಿದ್ದು, ಇಂದು ಕಾಪು ಕ್ಷೇತ್ರದ ಮಾಜಿ ಶಾಸಕರಾದ ಸನ್ಮಾನ್ಯ ವಿನಯ್ ಕುಮಾರ್ ಸೊರಕೆಯವರು ಮತ್ತು ಪ್ರಭಾಕರ್ ಪೂಜಾರಿಯವರು ಯಾವುದೇ ಫಲಾಪೇಕ್ಷೆ ಇಲ್ಲದೆ 250 ಕಿಟ್ಟನ್ನು ಬಿಂದಾಸ್ ಫ್ರೆಂಡ್ಸ್ ಕೈಪುಂಜಾಲು ಸದಸ್ಯರ ಸಮ್ಮುಖದಲ್ಲಿ ಕೈಪುಂಜಾಲು ಮತ್ತು ಪೊಲಿಪು ಭಾಗದ ಜನರಿಗೆ ಹಸ್ತಾಂತರಿಸಿದ್ದಾರೆ. ಕಿಟ್ ವಿತರಣೆಗೂ ಮೊದಲು ಪೊಲಿಪು, ಕೈಪುಂಜಾಲು ಭಾಗದ 6 ಜನ ಆಶಾಕಾಯಕರ್ತೆಯರಿಗೆ ಕಿಟ್ ವಿತರಿಸುವ ಮೂಲಕ ಅವರನ್ನು ಹುರಿದುಂಬಿಸುವ ಕಾರ್ಯ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆಯವರು ಇನ್ನು ಮುಂದಿನ ದಿನಗಳಲ್ಲಿಯೂ ಕೊರೊನ ವಾರಿಯರ್ಸ್ ಅಂದರೆ ಪೊಲೀಸ್ ಸಿಬ್ಬಂದಿಗಳು, ವೈದ್ಯರು ಮತ್ತು ಆಶಾಕಾರ್ಯಕರ್ತೆಯರ ಕೆಲಸ ಬಹಳ ಪ್ರಮುಖವಾದದ್ದು, ಹೊರದೇಶ ಮತ್ತು ಹೊರರಾಜ್ಯಗಳಿಂದ ಬರುವವರನ್ನು ತಪಾಸಣೆ ಮಾಡಲು ಮತ್ತು ಅವರಿಗೆ ಬೇಕಾದ ಸವಲತ್ತುಗಳನ್ನು ನೀಡಲು ನಾವು ಸಿದ್ಧರಿರಬೇಕು ಎಂದರು.. ಹಾಗೂ ಈ ಸಂದರ್ಭದಲ್ಲಿ ಪ್ರಭಾಕರ್ ಪೂಜಾರಿ ಮತ್ತು ಬಿಂದಾಸ್ ಫ್ರೆಂಡ್ಸ್ ಕೈಪುಂಜಾಲು ತಂಡದ ಸದಸ್ಯರು ಉಪಸ್ಥಿತರಿದ್ದರು..