Updated News From Kaup
ಬಂಟಕಲ್ಲು : ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘದಿಂದ ಸಿಸಿ ಟಿವಿ ಕೊಡುಗೆ ಹಾಗೂ ಪೊಲೀಸ್ ಜನ ಸಂಪರ್ಕ ಸಭೆ
Posted On: 06 Jan 2021, 09:14 PM
ಬಂಟಕಲ್ಲು ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘದವರು ಬಂಟಕಲ್ಲು ಆಸುಪಾಸು ನಡೆಯಬಹುದಾದ ಅಪರಾಧ ಕೃತ್ಯ, ಕಳ್ಳತನ , ದರೋಡೆಯಂತಹ ಅಪರಾಧಗಳ ಹಿನ್ನೆಲೆಯಲ್ಲಿ ಅದನ್ನು ತಡೆಗಟ್ಟುವ ಸಲುವಾಗಿ ಬಂಟಕಲ್ಲು ಪೇಟೆಯಲ್ಲಿ ಅಳವಡಿಸಿದ ಸಿ.ಸಿ ಕೆಮಾರ ವ್ಯವಸ್ಥೆಯನ್ನು ಶಿರ್ವ ಪೊಲೀಸ್ ಠಾಣಾಧಿಕಾರಿ ಶ್ರೀ ಶ್ರೀಶೈಲರವರು ಉದ್ಘಾಟಿಸಿದರು. ತದನಂತರ ನಡೆದ ಸಭಾಕಾರ್ಯಕ್ರಮದಲ್ಲಿ ಠಾಣಾಧಿಕಾರಿಯವರು ಇಲಾಖಾಮಾಹಿತಿಯನ್ನು ನೀಡಿ ರಸ್ತೆ ಸುರಕ್ಷತೆ, ಚಾಲನಾ ನಿಯಮಗಳನ್ನು ತಪ್ಪದೆ ಪಾಲಿಸುವಂತೆ ತಿಳಿಸಿದರು. ಇದೇ ಸಂಧರ್ಭದಲ್ಲಿ ಇತ್ತೀಚೆಗೆ ನಡೆದ ಪಂಚಾಯತ್ ಚುಣಾವಣೆಯಲ್ಲಿ ವಿಜಯಶಾಲಿಯಾದ ಸಂಘದ ಸದಸ್ಯ ಶ್ರೀ ಸತೀಶ್ ರವರನ್ನು ಸಂಘದವತಿಯಿಂದ ಅಭಿನಂದಿಸಲಾಯಿತು. ವೇದಿಕೆಯಲ್ಲಿದ್ದ ನಾಗರಿಕ ಸೇವಾ ಸಮಿತಿ (ರಿ) ಬಂಟಕಲ್ಲು ಇದರ ಅಧ್ಯಕ್ಷ ಶ್ರೀ ಕೆ. ಆರ್. ಪಾಟ್ಕರ್ ರವರು ರಿಕ್ಷಾ ಚಾಲಕ ಮಾಲಕರ ಸಂಘದವರು ನೀಡಿದ ಸಿ.ಸಿ ಕೆಮಾರ ವ್ಯವಸ್ಥೆಗೆ ಮೆಚ್ಚುಗೆ ವ್ಯಕ್ತಪಡಿಸಿ ಕೃತಜ್ಞತೆ ಸಲ್ಲಿಸಿದರು. ಬಂಟಕಲ್ಲು ಸಾರ್ವಜನಿಕ ಗಣೆಶೋತ್ಸವ ಸಮಿತಿ ಅಧ್ಯಕ್ಷ ಶ್ರೀ ಮಾಧವ ಕಾಮತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗ್ರಾ.ಪಂ ಸದಸ್ಯೆ ಶ್ರೀಮತಿ ವೈಲೆಟ್ ಕ್ಯಾಸ್ತಲಿನೊ, ಬಂಟಕಲ್ಲು ಕಾರು ಚಾಲಕ ಮಾಲಕರ ಸಂಘದ ಅಧ್ಯಕ್ಷ ಶ್ರೀ ಉಮೇಶ್ ರಾವ್ , ಶ್ರೀ ಉಮೇಶ್ ಪ್ರಭು, ಲಯನ್ಸ್ ಕ್ಲಬ್ ಉಡುಪಿ ಕರಾವಳಿ ಅಧ್ಯಕ್ಷ ಲ. ಅನಂತರಾಮ ವಾಗ್ಲೆ, ರವೀಂದ್ರ ಆಚಾರ್ಯ, ವಿನ್ಸಂಟ್ ಕ್ಯಾಸ್ತಲಿನೊ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ನವೀನ್ ಸನಿಲ್ ರವರು ಸ್ವಾಗತಿಸಿ, ಹರೀಶ್ ರವರು ಕಾರ್ಯಕ್ರಮ ನಿರೂಪಿಸಿದರು. ಸಂಘದ ಶ್ರೀ ಗೋಪಾಲ ದೇವಾಡಿಗ ರವರು ವಂದಿಸಿದರು.
ದೇರಳಕಟ್ಟೆ ಸೇವಾಶ್ರಮದಲ್ಲಿ ವೃದ್ಧರೊಂದಿಗೆ ನಗು ನಲಿವು, ಆರೋಗ್ಯ ಮಾಹಿತಿ ಶಿಬಿರ
Posted On: 05 Jan 2021, 07:20 PM
ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋದನಾ ಸಂಸ್ಥೆ (ರಿ) ಬಾಳ್ತಿಲ ಮತ್ತು ಸೇವಾಶ್ರಮ ದೇರಳಕಟ್ಟೆ ಇದರ ಸಹಯೋಗದೊಂದಿಗೆ ಸೇವಾಶ್ರಮ ದೇರಳಕಟ್ಟೆ ಇಲ್ಲಿ ಉಚಿತ ರಕ್ತಪರೀಕ್ಷೆ , ಮಧುಮೇಹ ಪರೀಕ್ಷೆ ಹಾಗೂ ಆರೋಗ್ಯ ಮಾಹಿತಿ ಶಿಬಿರ ಹಾಗೂ ವೃದ್ಧರೊಂದಿಗೆ ನಗು ನಲಿವು ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮೆಸ್ಕಾಂನ ಇಂಜಿನಿಯರ್ ಶ್ರೀ ನಿತೇಶ್ ಕುಮಾರ್ ನೆರವೇರಿಸಿ ಸಂಸ್ಥೆಯ ಸೇವೆ ಶ್ಲಾಘನೀಯ ಎಂದು ಹೇಳಿ ಸಂಸ್ಥೆಯ ಸೇವೆಗೆ ಶುಭ ಹಾರೈಸಿದರು. ಟ್ರಸ್ಟಿ ಹಾಗೂ ಖ್ಯಾತ ವೈದ್ಯರಾದ ಶ್ರೀ ಡಾ.ರಾಜೇಶ್ ಪೂಜಾರಿ ಆರೋಗ್ಯ ಮಾಹಿತಿ ನೀಡಿ ಹಾಗೂ ರಕ್ತದೊತ್ತಡ ಹಾಗೂ ಮಧುಮೇಹ ಪರೀಕ್ಷೆ ನಡೆಸಿದರು. ಕಾರ್ಯಕ್ರಮದಲ್ಲಿ ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋದನಾ ಸಂಸ್ಥೆ(ರಿ). ಬಾಳ್ತಿಲ. ಇದರ ಸಂಸ್ಥಾಪಕಿಯಾಗಿರುವ ವಕೀಲರಾದ ಶ್ರೀಮತಿ ಶ್ಯೆಲಜಾ ರಾಜೇಶ್ ರವರು ಮಾತಾನಾಡಿ ಅಮ್ಮಂದಿರು ನಮ್ಮನ್ನು ಹೊತ್ತು ಹೆತ್ತು ಸಾಕಿ ಸಲಹುತ್ತಾರೆ. ಆದರೆ ಅವರನ್ನು ಆಶ್ರಮಕ್ಕೆ ಬಿಟ್ಟು ಪ್ರೀತಿಯಿಂದ ವಂಚಿತಗೊಳಿಸುವುದು ಎಷ್ಟು ಸರಿ. ಎಂದು ಪ್ರಶ್ನಿಸಿದರು. ಅಲ್ಲದೇ ನಾವು ಮಗುವಾಗಿರುವಾಗ ಒಬ್ಬ ತಾಯಿ ನಮಗೋಸ್ಕರವಾಗಿಯೇ ಜೀವಿಸುತ್ತಾಳೆ. ಆಕೆಗೆ ವಯಸ್ಸಾದಾಗ ಅವಳನ್ನು ನಮ್ಮ ಮಗುವಂತೆ ಪ್ರೀತಿಸಿ ಎಂದು ಹೇಳಿದರು. ಆಶ್ರಮವಾಸಿಗಳಿಗೆ ಆಟೋಟಗಳನ್ನು ಏರ್ಪಡಿಸಲಾಗಿತ್ತು. ಆಶ್ರಮದ ಎಲ್ಲರಿಗೂ ಅವಶ್ಯಕ ದಿನ ಬಳಕೆ ಸಾಮಾಗ್ರಿಗಳ ಕಿಟ್ ನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಟ್ರಸ್ಟಿ ಶ್ರೀಮತಿ ಅನ್ನಪೂರ್ಣ ರಾಜೇಶ್ ಬಿ. ಸೇವಾಶ್ರಮದ ಮೇಲ್ವಿಚಾರಕ ಶ್ರೀ ಬಾಲಕೃಷ್ಣ ಉಪಸ್ಥಿತರಿದ್ದರು.
ಶ್ರೀ ಕ್ಷೇತ್ರ ಮಾರಣಕಟ್ಟೆ : ಸರಳ ಮಕರ ಸಂಕ್ರಾಂತಿ ಉತ್ಸವ
Posted On: 05 Jan 2021, 04:49 PM
ಕುಂದಾಪುರ ತಾಲೂಕಿನ ಚಿತ್ತೂರು ಶ್ರೀ ಕ್ಷೇತ್ರ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿ ಉತ್ಸವವು ಜನವರಿ 14ರಿಂದ 16ರವರೆಗೆ ಕೋವಿಡ್ ಹಿನ್ನೆಲೆಯಲ್ಲಿ ಸರಕಾರದ ಮಾರ್ಗಸೂಚಿಯಂತೆ ಸರಳವಾಗಿ ಆಚರಿಸಲಾಗುವುದು. ಸಾರ್ವಜನಿಕರಿಗೆ ಗೆಂಡ ಸೇವೆಗೆ ಅವಕಾಶವಿಲ್ಲ. ಉಳಿದಂತೆ ಎಲ್ಲ ಧಾರ್ಮಿಕ ಕಾರ್ಯಕ್ರಮಗಳು ಜರಗಲಿರುವುದು. ಮಹಾಮಂಗಳಾರತಿ ಜನವರಿ 14ರಂದು ಪೂರ್ವಾಹ್ನ 8:30 ಕ್ಕೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಪು : ಸಹಸ್ರ ಚಂಡಿಕಾಯಾಗ ಮಹೋತ್ಸವದ ಇಪ್ಪತ್ತನೇ ವರ್ಧಂತಿ ಉತ್ಸವ ಸಂಪನ್ನ
Posted On: 05 Jan 2021, 04:27 PM
ಕಾಪು ಶ್ರೀ ಹಳೇ ಮಾರಿಗುಡಿ ದೇವಳದಲ್ಲಿ ಇಂದು ದೇವಿಯ ಸನ್ನಿಧಾನದಲ್ಲಿ ಕಾಪುವಿನ ಇತಿಹಾಸದಲ್ಲೇ ಮೊದಲೆಂಬಂತೆ ಲಕ್ಷಾಂತರ ಭಕ್ತಾದಿಗಳ ಕೂಡುವಿಕೆಯಿಂದ ಒಂಬತ್ತು ದಿನಗಳ ಕಾಲ ಬಹು ವಿಜೃಂಭಣೆಯಿಂದ ಜರುಗಿದ ಸಹಸ್ರ ಚಂಡಿಕಾಯಾಗ ಮಹೋತ್ಸವದ ಇಪ್ಪತ್ತನೆಯ ವರ್ಧಂತಿ ಉತ್ಸವ ಜರಗಿತು. ಈ ಪ್ರಯುಕ್ತ ಶ್ರೀ ದೇವಿಯ ಸನ್ನಿಧಿಯಲ್ಲಿ ಪಂಚದುರ್ಗಾ ಹವನ ಪೂರ್ಣಾಹುತಿ, ಅನ್ನಸಂತರ್ಪಣೆ, ವಿಶೇಷ ಪೂಜೆ ಇತ್ಯಾದಿಗಳು ಜರುಗಿದವು.
ಇತಿಹಾಸ ಪ್ರಸಿದ್ಧ ಕಾಪು ಪಿಲಿಕೋಲಕ್ಕೆ ದಿನ ನಿಗದಿ
Posted On: 05 Jan 2021, 02:36 PM
ಬೈರುಗುತ್ತು, ದೊರೆಗಳ ಗುತ್ತು, ಪಿಲಿಚಂಡಿ ಮನೆ, ಸಾನದ ಮನೆ, ಗರಡಿ ಮನೆ ಇತ್ಯಾದಿ ಒಟ್ಟು 16 ಕಾಣಿಕೆಯ ಮನೆಗಳ ಸೇರುವಿಕೆಯಲ್ಲಿ ಇಂದು ಕಾಪು ಮಾರಿಗುಡಿಯಲ್ಲಿ ದೇವಿಯ ನುಡಿಯಂತೆ ಸರಕಾರದ ನಿಯಮಾವಳಿಗಳ ಪ್ರಕಾರ ಮೇ 18ರಿಂದ ಪ್ರಾರಂಭವಾಗಿ 22 ರಂದು ಇತಿಹಾಸ ಪ್ರಸಿದ್ಧ ಪಿಲಿ ಕೋಲ ನಡೆಸುವುದೆಂದು ದಿನ ನಿಗದಿಪಡಿಸಲಾಯಿತು. ಈ ಬಗ್ಗೆ ನಮ್ಮ ಕಾಪು ವೆಬ್ ಪೋರ್ಟಲ್ ಗೆ ತಿಳಿಸಿದ್ದಾರೆ.
ಬಂಟಕಲ್ : ಝಿಝೋ ಎಜುಕೇಷನ್ ಸೆಂಟರ್ ಉದ್ಘಾಟನೆ
Posted On: 04 Jan 2021, 07:00 PM
ಕಾಪು ತಾಲೂಕಿನ ಬಂಟಕಲ್ ಮುಖ್ಯರಸ್ತೆಯ ಮೈತ್ರಿ 3 ಕಾಂಪ್ಲೆಕ್ಸಿನ ಝಿಝೋ ಎಜುಕೇಷನ್ ಸಂಸ್ಥೆಯನ್ನು ಝಿಝೋ ಸಿಸ್ಟರ್ಸ್ ಝಿಯಾ ಮತ್ತು ಝೋ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಸೈಂಟ್ ಅಲೋಶಿಯಸ್ ಕಾಲೇಜ್ ಮಂಗಳೂರಿನ ಪ್ರಾಂಶುಪಾಲರಾದ ರೆ. ಡಾ. ಪ್ರವೀಣ್ ಮಾರ್ಟಿಸ್, ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿನ್ಸೆಂಟ್ ಆಳ್ವ, ಪಾಂಬೂರು ಹೋಲಿ ಚರ್ಚಿನ ಧರ್ಮಗುರುಗಳಾದ ರೆ. ಫಾ. ಹೆನ್ರಿ ಮಸ್ಕರೇನಸ್ ಉಪಸ್ಥಿತರಿದ್ದರು. ವಿಜಯ್ ಧೀರಜ್ ಸ್ವಾಗತಿಸಿದರು , ರಿಚಿ ವಂದಿಸಿದರು. ವಿದ್ಯಾಶ್ರೀ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.
ಗರಡಿ ಗೈಸ್ ವಾಟ್ಸ್ಯಾಪ್ ಗ್ರೂಪ್ : ವಾರ್ಷಿಕ ಸಮ್ಮಿಲನ ಮಿನದನ
Posted On: 04 Jan 2021, 06:30 PM
ಗರಡಿಯ ಧಾರ್ಮಿಕತೆಯಲ್ಲಿ ಹಿರಿಯರು ಕಿರಿಯರನ್ನು ಜೊತೆಗೂಡಿಸಿಕೊಂಡು ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವುದು ಅತ್ಯಗತ್ಯ ಎಂದು ಓಟ್ಲ ಶ್ರೀ ಬ್ರಹ್ಮಬೈದರ್ಕಳ ಗರಡಿಯ ಧರ್ಮದರ್ಶಿ ಜನಾರ್ದನ ಬಂಗೇರ ಹೇಳಿದರು. ಪಾಂಗಾಳ ಗುಡ್ಡೆ ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ ಗರಡಿ ಗೈಸ್ ವಾಟ್ಸ್ಯಾಪ್ ಗ್ರೂಪ್ ಇದರ ನಾಲ್ಕನೇ ವರ್ಷದ ವಾರ್ಷಿಕ ಸಮ್ಮಿಲನ ಮಿನದನ 2020- 21 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ರಾಣಿ ಅಬ್ಬಕ್ಕ ಪ್ರಾಚ್ಯವಸ್ತು ಸಂಗ್ರಹಾಲಯದ ಅಧ್ಯಕ್ಷರಾದ ಪ್ರೊ. ತುಕಾರಾಮ ಪೂಜಾರಿ ಯುವಜನರಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಜವಾಬ್ದಾರಿ ಹೆಚ್ಚಿಸುವಲ್ಲಿ ಮಾಧ್ಯಮದ ಪಾತ್ರ, ತೆಂಕನಿಡಿಯೂರು ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ರತ್ನಮಾಲ ಗರಡಿಗಳಲ್ಲಿ ಮಾಯಂದಾಲ್ ಆಚರಣೆ, ಪಾಂಗಾಳ ಗುಡ್ಡೆ ಗರಡಿ ಸುಧಾಕರ ಡಿ. ಅಮೀನ್ ಗರೋಡಿ ಮತ್ತು ಸಮುದಾಯದ ನಡುವೆ ಸಾಮರಸ್ಯ ಮೂಡಿಸುವಲ್ಲಿ ಗುರಿಕಾರರ ಪಾತ್ರದ ಬಗ್ಗೆ ವಿಚಾರ ಮಂಡಿಸಿದರು. ಸನ್ಮಾನ : ಹಿರಿಯ ಬೈದರ್ಕಳ ದರ್ಶನ ಪಾತ್ರಿ ಕೋಟಿ ಪೂಜಾರಿ ಸೂಡ, ಚಂದ್ರಕಾಂತ ಯಾನೆ ಕಾಂತು ಪೂಜಾರಿ ಕಲ್ಲುಗುಡ್ಡೆ, ಬೈದರ್ಕಳ ಪೂಜಾ ಪೂಜಾರಿ ವಿಶ್ವನಾಥ್ ಅಮೀನ್ ಕಳತ್ತೂರು, ಸಾಧಕ ಸುರೇಂದ್ರ ಮೋಹನ್ ರನ್ನು ಸನ್ಮಾನಿಸಲಾಯಿತು. ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪಾಂಗಾಳ ಗುಡ್ಡೆ ಗರಡಿಯ ಆಡಳಿತ ಮೊಕ್ತೇಸರ ಶೇಖರ ಜಿ. ಅಮೀನ್, ಗರಡಿ ಗುರಿಕಾರ ಜಯ ಡಿ. ಅಮೀನ್, ವಿವಿಧ ಗರಡಿಗಳ ಪ್ರಮುಖರು ಉಪಸ್ಥಿತರಿದ್ದರು. ಸಂಘಟಕ ಅರವಿಂದ ಕೋಟ್ಯಾನ್ ಕಲ್ಲುಗುಡ್ಡೆ ಸ್ವಾಗತಿಸಿ, ದಯಾನಂದ ಕರ್ಕೇರ ಉಗ್ಗೆಲ್ ಬೆಟ್ಟು ಪ್ರಸ್ತಾವನೆಗೈದರು. ಯಶ್ ಅಮೀನ್ ಪಾಂಗಾಳ ಗುಡ್ಡೆ ಗರಡಿ ವಂದಿಸಿ, ಪಾಂಡು ಕೋಟ್ಯಾನ್ ಮತ್ತು ಸಚಿನ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.
ಶಂಕರಪುರದಲ್ಲಿ ಆರಂಭವಾಗಲಿದೆ ಫಿಸಿಕ್ಸ್ ಕೋಚಿಂಗ್ ಕ್ಲಾಸಸ್
Posted On: 03 Jan 2021, 03:32 PM
2010ರಿಂದ ಉತ್ತಮ ಫಲಿತಾಂಶ ನೀಡಿರುವ ಅನುಭವದೊಂದಿಗೆ ಇದೀಗ ಉಡುಪಿ ಜಿಲ್ಲೆಯ ಶಂಕರಪುರದಲ್ಲಿ ಫಿಸಿಕ್ಸ್ ಕೋಚಿಂಗ್ ಕ್ಲಾಸಸ್ ಕರ್ನಾಟಕ ಬೋರ್ಡ್ ಮತ್ತು ಸಿಬಿಎಸ್ಇಯ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ಡಿಜಿಟಲ್ ಕ್ಲಾಸಸ್ ಮೂಲಕ ಆನ್ಲೈನ್ ಮತ್ತು ನೇರ ತರಗತಿಗಳ ಮೂಲಕ ಕೋಚಿಂಗ್ ನೀಡಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : Mrs. Nevia D'costa M.Sc (Physics) Ph.No.: 6366218099
ಪುತ್ತಿಗೆ ಮೂಲ ಮಠದ ಸ್ವರ್ಣ ನದಿ ತೀರದಲ್ಲಿ ಸ್ವಣಾ೯ರತಿ
Posted On: 03 Jan 2021, 02:28 PM
ಸ್ವಣಾ೯ರಾಧನಾ ವತಿಯಿಂದ ಪುತ್ತಿಗೆ ಮೂಲ ಮಠದ ಸ್ವಣ೯ ನದಿಯ ತೀರದಲ್ಲಿ ಸ್ವಣಾ೯ರತಿ ಕಾಯ೯ಕ್ರಮ ಜ.1 ರಂದು ಶುಕ್ರವಾರ ನಡೆಯಿತು. ಪುತ್ತಿಗೆ ಮಠದ ಕಿರಿಯ ಯತಿ ಶ್ರೀ ಸುಶ್ರೀoದ್ರ ತೀಥ೯ ಶ್ರೀಪಾದರು ಅನುಗ್ರಹ ಸಂದೇಶ ನೀಡಿ, ಗಿಡಗಳನ್ನು ನೆಟ್ಟರೆ ಸಾಲದು ಅದನ್ನು ಉಳಿಸಿ ಬೆಳೆಸಬೇಕು. ನದಿ ತೀರಗಳಲ್ಲಿ ತ್ಯಾಜ್ಯಗಳನ್ನು ಹಾಕುದನ್ನು ನಿಲ್ಲಿಸಿದಾಗ ಮಾತ್ರ ನದಿಗಳು ಪರಿಶುದ್ಧವಾಗಿ ಹರಿಯಲು ಸಾಧ್ಯ.ಈ ನಿಟ್ಟಿನಲ್ಲಿ ಪರಿಸರ ಮತ್ತು ನದಿಗಳನ್ನು ಉಳಿಸುವ ಸಂಕಲ್ಪ ಮಾಡಬೇಕೆಂದರು. ಕಾಪು ಶಾಸಕ ಲಾಲಾಜಿ ಮೆಂಡನ್ ಶುಭ ಹಾರೈಸಿದರು.ಈ ಸಂದಭ೯ದಲ್ಲಿ ಸ್ವರಣಾರಾಧನಾ ಅಭಿಯಾನದ ಪ್ರಾಯೋಜಕರಾದ ಡಾ. ನಾರಾಯಣ ಶೆಣೈ, ಸ್ವರ್ಣಾರತಿಯ ಆಯೋಜಕರಾದ, ಪ್ರಭಾಕರ ಭಟ್, ರಾಘವೇಂದ್ರ ಪ್ರಭು,ಕವಾ೯ಲು ,ಪರ್ಕಳ ಶ್ರೀ ದುರ್ಗಾ ಸಂಕೀರ್ತನ ಭಜನಾ ಮಂಡಳಿಯ ಕೆ ಚಂದ್ರಶೇಖರ ಪ್ರಭು ,ಗಣೇಶ ಪೈ, ಕಾಪು ಭಾಜಪಾ ಮಹಿಳಾ ಮೊರ್ಚಾದ ನೀತಾ ಪ್ರಭು, ಮಾಜಿ ನಗರಸಭಾ ಸದಸ್ಯ ಶ್ಯಾಮಪ್ರಸಾದ ಕುಡ್ವ, ಪರ್ಯಾವರಣ ಗತಿವಿಧಿಯ ಉಡುಪಿ ನಗರ ಕಾರ್ಯವಾಹ ಗಣೇಶ್ ಶೆಣೈ ಬೈಲೂರು, ವೀಣಾ ಶ್ರೀ ಪುತ್ತಿಗೆ ವಿದ್ಯಾಪೀಠದ ಮೆನೆಜರ್ ಹರಿಪ್ರಸಾದ ಆಚಾರ್ಯ , ರೇಡಿಯೋತಜ್ಙ ಶಾಮ್ ಭಟ್ , ಅಶ್ವಿನ್ ಮಣಿಪಾಲ, ಗಿರೀಶ್ ಮುಂತಾದವರಿದ್ದರು.ವಿದುಷಿ ಪಾವನಾ ಆಚಾರ್, ಮೃದಂಗ ವಿದ್ವಾನ್ ಬಾಲಚಂದ್ರ ಆಚಾರ್ ರವರಿಂದ ನದಿ ತೀರದಲ್ಲಿ ವೀಣಾ ವಾದನ ಕಾಯ೯ಕ್ರಮ ನಡೆಯಿತು.
ಕೋಟಿಚೆನ್ನಯರ ಜೀವನಗಾಥೆಯ ಪ್ರಬಂಧ ಸ್ಪರ್ಧೆ
Posted On: 03 Jan 2021, 02:22 PM
ಶ್ರೀ ಬ್ರಹ್ಮಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರ (ರಿ.) ಬೈದಶ್ರೀ ಆದಿಉಡುಪಿ, ಉಡುಪಿ ಸಂಸ್ಥೆಯಿಂದ 10 ವರ್ಷ ಮೇಲ್ಪಟ್ಟು 20 ವರ್ಷದೊಳಗಿನ ವಿದ್ಯಾರ್ಥಿಗಳಿಗಾಗಿ ಕೋಟಿಚೆನ್ನಯರ ಜೀವನಗಾಥೆಯ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಿರುತ್ತಾರೆ. ಸ್ವಂತ ರಚನೆಯಾಗಿ, A4 ಸೈಜಿನ 6 ಪುಟಕ್ಕೆ ಮೀರದ ಕೈಬರಹ ಅಥವಾ ಟೈಪ್ ಮಾಡಿದ ಪ್ರಬಂಧವನ್ನು ಇಮೇಲ್ ಅಥವಾ ಸಂಸ್ಥೆಯ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಬಹುದು. ಪ್ರಬಂಧ ಕಳುಹಿಸಲು ಜನವರಿ 15 ಕೊನೆಯ ದಿನವಾಗಿದೆ. ಪ್ರಥಮ ಬಹುಮಾನ ₹ 3000 ಜೊತೆಗೆ ಗ್ರಂಥ ಪುಸ್ತಕ, ದ್ವಿತೀಯ ಬಹುಮಾನ ₹ 2000, ಗ್ರಂಥ ಪುಸ್ತಕ, ತೃತೀಯ ಬಹುಮಾನ ₹ 1000, ಗ್ರಂಥ ಪುಸ್ತಕ ಮತ್ತು ಭಾಗವಹಿಸಿದ ಎಲ್ಲರಿಗೂ ಗೌರವ ಸ್ಮರಣಿಕೆ ಯಾಗಿ ಗ್ರಂಥ ಪುಸ್ತಕ ನೀಡಲಾಗುವುದು. ಬೈದಶ್ರೀ ಆದಿ ಉಡುಪಿಯಲ್ಲಿ ಜನವರಿ 26 ರಂದು ಮಧ್ಯಾಹ್ನ 3 ಗಂಟೆಗೆ ನಡೆಯುವ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುವುದು ಎಂದು ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.
