Updated News From Kaup
ಪಡುಬಿದ್ರಿ : ಪವರ್ ಮ್ಯಾನ್ ಗಳ ಪವರ್ ಗೆ ಸಿಕ್ಕ ಮರ-ಗಿಡಗಳು

Posted On: 10-05-2020 02:34PM
ಈಗಾಗಲೇ ಬಹಳ ಪ್ರ(ಕು)ಖ್ಯಾತಿಗೆ ಹೆಸರಾದ ಪಡುಬಿದ್ರಿ ಮೆಸ್ಕಾಂನ ಕಾರ್ಯವೈಖರಿ ಯಾವ ರೀತಿಯಾಗಿರುತ್ತದೆ ಎಂದು ಯಾರಿಗೂ ತಿಳಿಯದು. ಪಡುಬಿದ್ರಿಯ ಮುರುಡಿ ಬ್ರಹ್ಮಸ್ಥಾನದ ಬಳಿಯ ಗದ್ದೆ ಸಮೀಪದ ರಸ್ತೆಯ ಬಳಿ ಇರುವ ತಂತಿಗಳಿಗೆ ತಾಗದ ಗಿಡಗಳನ್ನು ಕಡಿದು ತಮ್ಮ ಪವರ್ ತೋರಿದ್ದಾರೆ. ಇದೇ ಇವರ ಸಾಧನೆ. ಯಾವ ಮರ ತಾಗುತ್ತದೋ ಅದನ್ನು ಕಡಿಯಲು ಶ್ರಮವಹಿಸಬೇಕಾಗಿರುವುದರಿಂದ ಅದನ್ನು ಬಿಟ್ಟು ತಂತಿಯಿಂದ ಅನತಿ ದೂರದಲ್ಲಿರುವ ಗಿಡಗಳನ್ನು ಕಡಿದಿದ್ದಾರೆ. ಸಾರ್ವಜನಿಕರು ಸಂಚರಿಸುವ ದಾರಿಯಾದರೂ ಕಡಿದ ಮರಗಳನ್ನು ಹಾಗೆಯೇ ಬಿಟ್ಟು ಹೋಗುವುದು ಇವರ ಹವ್ಯಾಸವಾಗಿದೆ. ಇನ್ನಾದರೂ ಮೆಸ್ಕಾಂನವರು ಇದರ ಬಗ್ಗೆ ಯೋಚಿಸಲಿ. ಅದೇ ರೀತಿ ಮಳೆಗಾಲಕ್ಕೂ ಮುನ್ನ ತಂತಿಗೆ ತಾಗುವ ಮರ-ಗಿಡಗಳನ್ನು ಕಡಿಯಲಿ ಅದನ್ನು ಬಿಟ್ಟು ತಂತಿಗೆ ತಾಗದ ಮರಗಿಡಗಳನ್ನು ಕಡಿಯಬಾರದು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಅಪ್ಪ ಅಮ್ಮ ಅನಾಥಾಲಯದಲ್ಲಿ ಗುರೂಜಿ ಸಾಯಿಈಶ್ವರರಿಂದ ಅಮ್ಮಂದಿರ ದಿನ ಆಚರಣೆ

Posted On: 10-05-2020 01:34PM
ಉಡುಪಿ(10ಮೇ/2020): ಬ್ರಹ್ಮಾವರದ "ಅಪ್ಪ ಅಮ್ಮ ಅನಾಥಾಲಯ"ಕ್ಕೆ ಶಂಕರಪುರ ಸಾಯಿಬಾಬಾ ಮಂದಿರದ ಗುರೂಜಿ ಸಾಯಿಈಶ್ವರ್ ಬೇಟಿ ನೀಡಿ ಅಮ್ಮಂದಿರ ದಿನ ಆಚರಣೆಯಲ್ಲಿ ಭಾಗವಹಿಸಿದರು. ಪ್ರಶಾಂತ್ ಪೂಜಾರಿ ಕೂರಾಡಿಯವರು ನಡೆಸುತ್ತಿರುವ ಗಿರಿಜಾ ಕೃಷ್ಣ ಪೂಜಾರಿ ಚಾರಿಟೇಬಲ್ ಟ್ರಸ್ಟ್ (ರಿ) ಇದರ "ಅಪ್ಪ ಅಮ್ಮ ಅನಾಥಾಲಯ" ಬ್ರಹ್ಮಾವರ ಇಲ್ಲಿ ಅಮ್ಮಂದಿರ ದಿನ ಆಚರಣೆಗೆ ಗುರೂಜಿ ಸಾಯಿಈಶ್ವರ್ ಆಶ್ರಮಕ್ಕೆ ಬೇಟಿ ನೀಡಿ ಆಶ್ರಮ ನಿವಾಸಿಗಳಿಗೆ ಆಶಿರ್ವಾದ ನೀಡಿದರು. ಈ ಸಂದರ್ಭದಲ್ಲಿ ಆಶ್ರಮದ ಮೇಲ್ವಿಚಾರಕರಾದ ಪ್ರಶಾಂತ್ ಪೂಜಾರಿ ಕೂರಾಡಿ, ದಾಮೋದರ ಶರ್ಮ, ಸತೀಶ್ ದೇವಾಡಿಗ ಕಾಪು, ಗಣೇಶ್ ಪಾಲನ್ ಶಂಕರಪುರ ಉಪಸ್ಥಿತರಿದ್ದರು.
ಉಡುಪಿ : ಮೂರ್ತೆದಾರರಿಗೂ ಪರಿಹಾರ ಘೋಷಣೆಗೆ ಪ್ರವೀಣ್ ಎಮ್ ಪೂಜಾರಿ ಮನವಿ

Posted On: 09-05-2020 08:41AM
ಕೊರೋನಾ ಮಹಾಮಾರಿಗೆ ಇಡಿ ಜಗತ್ತೆ ತತ್ತರಿಸಿ ಹೋಗಿರುವ ಸಂಧರ್ಭದಲ್ಲಿ ರೈತ ಬಂಧು ಎನಿಸಿಕೊಂಡಿರುವ ಸನ್ಮಾನ್ಯ ಮುಖ್ಯ ಮಂತ್ರಿಗಳಾದ ಬಿ. ಎಸ್. ಯಡಿಯೂರಪ್ಪನವರು ಕೋವಿಡ್ -19 ಸಂತ್ರಸ್ತರಿಗಾಗಿ, ಬಡ ಜನರ ಕಷ್ಟವನ್ನು ಅರಿತುಕೊಂಡು ಸರಕಾರದಿಂದ ರೂ 1,610/- ಕೋಟಿ ನೆರವು ಘೋಷಣೆ ಮಾಡಿದ್ದಾರೆ. ಈ ಪರಿಹಾರ ಘೋಷಣೆಯನ್ನು ಮಾನ್ಯ ಮುಖ್ಯ ಮಂತ್ರಿಗಳು ಕರಾವಳಿ ಭಾಗದಲ್ಲಿ ಸಂಕಷ್ಟಕ್ಕೀಡಾಗಿರುವ ತೆಂಗು ಕೃಷಿಕರಾದ ಮೂರ್ತೆದಾರ (ತುಳುವಿನಲ್ಲಿ ಕಲಿ ಎನ್ನುತ್ತಾರೆ) ವೃತ್ತಿ ನಿರತ ಕಾರ್ಮಿಕರಿಗೆ ಸೂಕ್ತ ಪರಿಹಾರ ಘೋಷಿಸಬೇಕೆಂದು, ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ (ರಿ. ), ಉಡುಪಿ. ಜಿಲ್ಲಾಧ್ಯಕ್ಷರಾದ ಪ್ರವೀಣ್ ಎಂ ಪೂಜಾರಿಯವರು ಮತ್ತು ಸದಸ್ಯರು ತೆಂಗು ಕೃಷಿಕರಾದ ಮೂರ್ತೆದಾರರ (ಕಲಿ) ಪರವಾಗಿ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿ ಅವರಿಗೂ ಸೂಕ್ತ ಪರಿಹಾರ ನೀಡಬೇಕೆಂದು ಮನವಿಯಲ್ಲಿ ಕೋರಿದ್ದಾರೆ.
ಉಡುಪಿ : ಹೊರದೇಶ ಮತ್ತು ಹೊರರಾಜ್ಯದಿಂದ ಬರುವವರಿಗೆ ಕ್ವಾರಂಟೈನ್ಗೆ ಸಕಲ ಸಿದ್ಧತೆ

Posted On: 08-05-2020 06:29PM
ಉಡುಪಿ ಮೇ 8: ಜಿಲ್ಲೆಗೆ ವಿದೇಶಗಳಿಂದ ಮತ್ತು ಹೊರಾಜ್ಯದಿಂದ ಬರುವವರ ಕ್ವಾರಂಟೈನ್ ಗೆ ಎಲ್ಲಾ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಕ್ವಾರಂಟೈನ್ ಗಾಗಿ ಜಿಲ್ಲೆಯ ಖಾಸಗಿ ಶಾಲಾ ಮತ್ತು ಕಾಲೇಜುಗಳ ತಮ್ಮ ವ್ಯಾಪ್ತಿಯ ಕಟ್ಟಡಗಳು ಮತ್ತು ಹಾಸ್ಟೆಲ್ ಗಳನ್ನು ಜಿಲ್ಲಾಡಳಿತ ಕೋರಿದ ಕೂಡಲೇ ಬಿಟ್ಟುಕೊಡುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ. ಅವರು ಶುಕ್ರವಾರ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆದ, ಜಿಲ್ಲೆಯ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲಾ ಮುಖ್ಯೋಪಧ್ಯಾಯರುಗಳ, ವಸತಿ ಶಾಲೆಗಳ ಮುಖ್ಯಸ್ಥರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದುವರೆಗೂ ಕೋವಿಡ್-19 ವಿರುದ್ದ ಹೋರಾಟದಲ್ಲಿ ಜಿಲ್ಲಾಡಳಿತ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದು, ಮುಂದೆ ವಿದೇಶದಿಂದ ಮತ್ತು ಹೊರರಾಜ್ಯದಿಂದ ಆಗಮಿಸುವ ಜಿಲ್ಲೆಯ ಜನರಿಂದ , ಪ್ರಸ್ತುತ ಜಿಲ್ಲೆಯಲ್ಲಿನ ನಾಗರೀಕರನ್ನು ಕೋವಿಡ್ ನಿಂದ ರಕ್ಷಿಸುವುದು ಅತ್ಯಂತ ಸವಾಲಿನ ಕೆಲಸ, ಇದಕ್ಕಾಗಿ ವಿದೇಶದಿಂದ ಮತ್ತು ಹೊರರಾಜ್ಯದಿಂದ ಬರುವವರ ಕ್ವಾರಂಟೈನ್ ಗೊಳಿಸಬೇಕಾಗಿದ್ದು, ಇದಕ್ಕಾಗಿ ಜಿಲ್ಲೆಯ ಸರಕಾರಿ ಹಾಸ್ಟೆಲ್ ಗಳು, ಖಾಸಗಿ ಹಾಸ್ಟಲ್ ಗಳು ಮತ್ತು ಶಾಲಾ ಕಾಲೇಜುಗಳನ್ನು, ವಸತಿ ಶಾಲೆಗಳನ್ನು ಬಳಸಿಕೊಳ್ಳಲಾಗುತ್ತಿದ್ದು, ಜಿಲ್ಲಾಡಳಿತ ಸೂಚಿಸ ಕೂಡಲೇ ಸಂಬAದಪಟ್ಟ ಸಂಸ್ಥೆಗಳು , ಯಾವುದೇ ಸಬೂಬುಗಳನ್ನು ನೀಡದೇ ಕೂಡಲೇ ತಮ್ಮ ಕಟ್ಟಡವನ್ನು ಜಿಲ್ಲಾಡಳಿತಕ್ಕೆ ಬಿಟ್ಟು ಕೊಡುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು, ಕಟ್ಟಡಕ್ಕೆ ಸಣ್ಣಪುಟ್ಟ ದುರಸ್ತಿಗಳಿದ್ದರೆ ತಕ್ಷಣ ಮಾಡಿಸುವಂತೆ ತಿಳಿಸಿದರು. ಕ್ವಾರಂಟೈನ್ ಗಾಗಿ ಬಳಸಕೊಳ್ಳುವ ಸರಕಾರಿ ಹಾಸ್ಟೆಲ್ ಗಳು, ಖಾಸಗಿ ಹಾಸ್ಟಲ್ ಗಳು ಮತ್ತು ಶಾಲಾ ಕಾಲೇಜುಗಳನ್ನು , ಕ್ವಾರಂಟೈನ್ ಮುಗಿದ ಕೂಡಲೇ ಸಂಪೂರ್ಣವಾಗಿ ಸ್ವಾನಿಟೈಸ್ ಮಾಡಿ, ಯಾವುದೇ ಸಂದರ್ಭದಲ್ಲಿ ಕೋವಿಡ್-19 ಕಂಡುಬರದ ರೀತಿಯಲ್ಲಿ ಎಲ್ಲಾ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಮರಳಿ ಬಿಟ್ಟು ಕೊಡಲಾಗುವುದು ಎಂದು ಜಿಲ್ಲಾಧಿಕರಿ ತಿಳಿಸಿದರು. ಈಗಾಗಲೇ ಜಿಲ್ಲೆಗೆ ಹೊರರಾಜ್ಯದಿಂದ ಬರಲು ಪ್ರಥಮ ಹಂತದಲ್ಲಿ ಸುಮಾರು 6000 ಮಂದಿ ನೊಂದಾಯಿಸಿಕೊAಡು ಕಾಯುತ್ತಿದ್ದು, ಇವರಿಗೆ ರಾಜ್ಯ ಸರ್ಕಾರ ಅನುಮತಿ ನೀಡಿದ ಕೂಡಲೇ ಜಿಲ್ಲೆಗೆ ಇವರ ಪ್ರವೇಶ ಆರಂಭವಾಗಲಿದೆ, ಮೊದಲಿಗೆ ಇವರನ್ನು ಜಿಲ್ಲಾ ಗಡಿಯಲ್ಲಿ ಆರೋಗ್ಯ ತಪಾಸಣೆ ಮಾಡಿ, ಪೊಲೀಸ್ ಎಸ್ಕಾರ್ಟ್ ನೊಂದಿಗೆ ಸಂಬAದಪಟ್ಟ ತಾಲೂಕಿನ ಕ್ವಾರಂಟೈನ್ ಕೇಂದ್ರಗಳಿಗೆ ಕಳುಹಿಸಲಾಗುವುದು, ಆರೋಗ್ಯ ಪರೀಕ್ಷೆಯಲ್ಲಿ ರೋಗ ಲಕ್ಷಣ ಕಂಡು ಬಂದಲ್ಲಿ ಆಸ್ಪತ್ರೆಗೆ ದಾಖಲು ಮಾಡಲಾಗುವುದು, ಹೋಟೆಲ್ ಗಳಲ್ಲಿ ಕ್ವಾರಂಟೈನ್ ಆಗಬಯಸುವವರು ಹೋಟೆಲ್ ನ ವೆಚ್ಚವನ್ನು ತಮ್ಮ ಖರ್ಚಿನಲ್ಲಿ ಭರಿಸಬೇಕು, ಜಿಲ್ಲಾಡಳಿತ ವ್ಯವಸ್ಥೆ ಮಾಡುವ ಕೇಂದ್ರಗಳಲ್ಲಿ ಉತ್ತಮ ರೀತಿಯಲ್ಲಿ ಉಚಿತ ಊಟೋಪಚಾರಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದ ಜಿಲ್ಲಾಧಿಕಾರಿ ಜಿ.ಜಗದೀಶ್, ವಿದೇಶದಿಂದ ಬರುವವರನ್ನು ಪ್ರತ್ಯೆಕವಾಗಿ ಸಿಂಗಲ್ ರೂಂ ಗಳಲ್ಲಿ ಕ್ವಾರಂಟೈನ್ ಮಾಡಲು ವ್ಯವಸ್ಥೆ ಮಾಡಲಾಗಿದೆ , ವಿದೇಶದಿಂದ ಮತ್ತು ಹೊರರಾಜ್ಯದಿಂದ ಜಿಲ್ಲೆಗೆ ಸುಮಾರು 20000 ಮಂದಿ ಆಗಮಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು. ಲಾಕ್ಡೌನ್ ಅವಧಿಯಲ್ಲಿ ಜಿಲ್ಲೆಯಲ್ಲಿದ್ದ ವಲಸೆ ಕಾರ್ಮಿಕರಿಗೆ ಅತ್ಯುತ್ತಮ ರೀತಿಯಲ್ಲಿ ಅಗತ್ಯ ಸೌಲಭ್ಯ ಒದಗಿಸುವಲ್ಲಿ ಮತ್ತು ಲಾಕ್ ಡೌನ್ ನಿರ್ಭಂಧಗಳನ್ನು ಇಡೀ ರಾಜ್ಯದಲ್ಲೇ ಅತ್ಯಂತ ಶಿಸ್ತಿನಿಂದ ಅತ್ಯುತ್ತಮವಾಗಿ ಪಾಲಿಸಿದ ನಾಗರೀಕರು ಎಂಬ ಹೆಗ್ಗಳಿಕೆ ಜಿಲ್ಲೆಗೆ ಇದೆ, ಹೊರಗಿನಿಂದ ಬರುವ ವ್ಯಕ್ತಿಗಳಿಂದ ಜಿಲ್ಲೆಯ 13 ಲಕ್ಷ ಜನರನ್ನು ಕೋವಿಡ್ ಸೋಂಕು ಹರಡದ ಕುರಿತಂತೆ , ಜಿಲ್ಲಾಡಳಿದ ಎಲ್ಲಾ ಅಧಿಕಾರಿಗಳು ಉತ್ತಮ ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿದ್ದು, ಕಟ್ಟುನಿಟ್ಟಿನ ಕ್ರಮಗಳನ್ನು ಆಯೋಜಿಸಿ, ಯಾವುದೇ ಒತ್ತಡಗಳಿಗೆ ಮಣಿಯದೇ ಜಿಲ್ಲೆಯ ಜನರ ಆರೋಗ್ಯಕ್ಕೆ ಪ್ರಥಮ ಆದ್ಯತೆ ನೀಡುವಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು. ಜಿಲ್ಲಾ ಕರೋನಾ ನೋಡೆಲ್ ಅಧಿಕಾರಿ ಡಾ. ಪ್ರಶಾಂತ್ ಭಟ್ ಮಾತನಾಡಿ, ಜಿಲ್ಲೆಯಲ್ಲಿ ಈಗಾಗಲೇ 12 ಚೆಕ್ ಪೋಸ್ಟ್ ಗಳನ್ನು ಆರಂಬಿಸಲಾಗಿದ್ದು, ಹೊರಗಿನಿಂದ ಬರುವವರಿಗೆ ಚೆಕ್ ಪೊಸ್ಟ್ ಗಳಲ್ಲಿ ಆರೋಗ್ಯ ತಪಾಸಣೆ ನಡೆಸಿ ಪ್ರವೇಶ ನೀಡಲಾಗುತ್ತಿದೆ, ಕ್ವಾರಂಟೈನ್ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುವ ಸಂಬAದಪಟ್ಟ ಸಂಸ್ಥೆಗಳ ಅಗತ್ಯ ಸಿಬ್ಬಂದಿಗೆ ತರಬೇತಿ ನೀಡಲಾಗುವುದು ಎಂದು ತಿಳಿಸಿದರು. ಜಿಲ್ಲೆಯ ಎಲ್ಲಾ ತಹಸೀಲ್ದಾರ್ ಗಳು ತಮ್ಮ ವ್ಯಾಪ್ತಿಯಲ್ಲಿರುವ ಶಾಲೆ , ಕಾಲೇಜು ಮತ್ತು ಹಾಸ್ಟೆಲ್ ಗಳ ಹಾಗೂ ಹೋಟೆಲ್ ಗಳ ವಿವರಗಳನ್ನು ಸಂಗ್ರಹಿಸಿಕೊAಡು, ಅಗತ್ಯವಿರುವಡೆಯಲ್ಲಿ ಎಲ್ಲಾ ಮೂಲಭೂತ ಅಗತ್ಯಗಳೊಂದಿಗೆ, ಜಿಲ್ಲಾಡಳಿತ ಸೂಚಿಸಿದ ಕೂಡಲೇ ಕ್ವಾರಂಟೈನ್ ಕೇಂದ್ರ ತೆರೆಯಲು ಸಿದ್ದವಾಗಿರುವಂತೆ ಡಿಸಿ ಜಿ.ಜಗದೀಶ್ ಸೂಚಿಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು, ಡಿಹೆಚ್ಓ ಡಾ.ಸುದೀರ್ ಚಂದ್ರ ಸೂಡಾ, ಡಿಡಿಪಿಐ ಶೇಷಶಯನ ಕಾರಿಂಜ ಉಪಸ್ಥಿತರಿದ್ದರು.ಜಿಲ್ಲೆಯ ಎಲ್ಲಾ ಸರಕಾರಿ ಮತ್ತು ಖಾಸಗಿ ಶಾಲಾ ಕಾಲೇಜುಗಳ, ವಸತಿಶಾಲೆಗಳ ಪ್ರಾಂಶುಪಾಲರು, ಮುಖ್ಯಸ್ಥರು ಉಪಸ್ಥಿತರಿದ್ದರು.
ಕಾಪು : ಹಗಲಿನಲ್ಲೂ ಉರಿಯುತ್ತಿರುವ ಬೀದಿ ದೀಪಗಳಿಗೆ ಹೊಣೆ ಯಾರು?

Posted On: 08-05-2020 05:10PM
ಕಾಪು : ತಾಲೂಕಿನಲ್ಲಿ ಈಗಾಗಲೇ ವಿದ್ಯುತ್ ಕಡಿತವಾಗುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಕಾಪು ವಿನಿಂದ ಬೀಚ್ ಕಡೆಗೆ ಹೋಗುವ ದಾರಿಯಲ್ಲಿ ಸೂಕ್ತ ವಿದ್ಯುತ್ ನಿರ್ವಹಣೆಯಾಗುತ್ತಿಲ್ಲ. ಇಲ್ಲಿ ಹಗಲಿನಲ್ಲಿಯೂ ವಿದ್ಯುತ್ ದೀಪಗಳು ಉರಿಯುತ್ತಿದ್ದರೂ ಅಧಿಕಾರಿಗಳಾಗಲಿ, ಗ್ರಾಪಂ ಸದಸ್ಯರು ಅಥವಾ ಅಧ್ಯಕ್ಷರಾಗಲಿ ಕ್ರಮಕೈಗೊಂಡಿಲ್ಲ. ಇದರಿಂದಾಗಿ ವಿದ್ಯುತ್ ಪೋಲಾಗುತ್ತಿದೆ. ಹಗಲಿನಲ್ಲೂ ವಿದ್ಯುತ್ ದೀಪ ಉರಿಯುತ್ತಿರುವುದು ಯಾರ ಕಣ್ಣಿಗೂ ಬಿದ್ದಿಲ್ಲವೆನಿಸುತ್ತಿದೆ. ಮಧ್ಯಾಹ್ನ ಮೂರು ಗಂಟೆಯಾದರೂ ವಿದ್ಯುತ್ ದೀಪ ಉರಿಯುತ್ತಿರುವುದನ್ನು ಗ್ರಾಮಸ್ಥರಾಗಲಿ, ನಿರ್ವಹಣೆ ಮಾಡುವವರಾಗಲಿ ಗಮನಹರಿಸಿಲ್ಲದಿರುವುದು ವಿಪರ್ಯಾಸವಾಗಿದೆ. ಇದೇ ಕಂಬದ ಪಕ್ಕದಲ್ಲಿರುವ ಇನ್ನು ಕೆಲವೊಂದು ಕಂಬಗಳಲ್ಲೂ ಕೂಡ ವಿದ್ಯುತ್ ದೀಪ ಉರಿಯುತ್ತಿದ್ದು. ಬೀದಿ ದೀಪದ ಬಳಕೆ ಹಗಲಿನ ಸಮಯದಲ್ಲೂ ಸಹ ಯಾವುದೇ ಹಂಗಿಲ್ಲದಂತೆ ಉರಿಯುತ್ತಿರುವುದು ಕಂಡು ಬಂದಿದೆ. ಸ್ಥಳೀಯ ಗ್ರಾಮಸ್ಥರು ಇತ್ತ ಗಮನ ಹರಿಸಬೇಕು. ಪೋಲಾಗುತ್ತಿರುವ ವಿದ್ಯುತ್ನ್ನು ಉಳಿಸುವ ನಿಟ್ಟಿನಲ್ಲಿ ಮಟ ಮಟ ಮಧ್ಯಾಹ್ನದ ಸಮಯದಲ್ಲೂ ಸಹ ಉರಿಯುತ್ತಿರುವ ವಿದ್ಯುತ್ ದೀಪವನ್ನು ರಾತ್ರಿ ಸಮಯದಲ್ಲಿ ಮಾತ್ರ ಉಪಯೋಗಿಸಬೇಕು ಹಾಗೂ ಸ್ವಿಚ್ ಬೋರ್ಡ್ ಇದ್ದಲ್ಲಿ ಬೆಳಿಗಿನ ಜಾವ ವಿದ್ಯುತ್ ದೀಪ ಬೆಳಗುತ್ತಿದ್ದುದ್ದನ್ನು ಕಂಡಾಗ ಮೇಸ್ಕಾಂನವರನ್ನು ಅಥವಾ ಗ್ರಾ.ಪಂನವರನ್ನು ಕಾಯದೇ ಆರಿಸುವ ಕಾರ್ಯಕ್ಕೆ ಸಾರ್ವಜನಿಕರೇ ಮುಂದಾಗಬೇಕು. ಸ್ವಯಂ ಪ್ರೇರಿತರಾಗಿ ಪೋಲಾಗುವುದನ್ನು ತಡೆಯಿರಿ, ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಬೀದಿ ದೀಪಗಳ ನಿರ್ವಹಣೆ ಮಾಡುವವರಿಗೆ ವಿದ್ಯುತ್ ಪೋಲಾಗುತ್ತಿರುವುದ ಬಗ್ಗೆ ಅರಿವು ಮೂಡಿಸಿ ಸಮರ್ಪಕವಾಗಿ ಕಾರ್ಯ ನಿರ್ವಹಣೆ ಮಾಡುವಂತೆ ತಾಕೀತು ಮಾಡಬೇಕು. ವಿದ್ಯುತ್ ಸೋರಿಕೆ ಸಮಸ್ಯೆ ಅರ್ಧದಷ್ಟು ಹತೋಟಿಗೆ ಬರುವುದು. ಇದರ ಜೊತೆಗೆ ಗ್ರಾಮದ ಜನರು ಸಹ ಈ ಬಗ್ಗೆ ಅರಿವು ಹೊಂದಿರಬೇಕು. ತಮ್ಮ ತಮ್ಮ ಗ್ರಾಮಗಳಲ್ಲಿ ಬೆಳಗ್ಗಿನ ವೇಳೆ ಅನಗತ್ಯವಾಗಿ ವಿದ್ಯುತ್ ಪೋಲಾಗುತ್ತಿದ್ದರೆ, ಅದನ್ನು ತಡೆಯಲು ಮುಂದಾಗುವಂತೆ ಪ್ರೇರೇಪಿಸಿದರೆ ಶಾಶ್ವತವಾಗಿ ಪರಿಹಾರ ಕಾಣಲು ಸಾಧ್ಯ ವಾಗುತ್ತದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಹಗಲಿನಲ್ಲಿ ವಿದ್ಯುತ್ ದೀಪ ಉರಿಯುತ್ತಿದ್ದರೆ ತಕ್ಷಣ ಆರಿಸುವ ಕಾರ್ಯವಾಗಬೇಕು. ಇದರಿಂದ ವಿದ್ಯುತ್ ಉಳಿತಾಯವಾಗಬೇಕು. ಮಧ್ಯಾಹ್ನವಾದರೂ ಬೀದಿ ದೀಪಗಳು ಉರಿಯುತ್ತಿರುವುದು. ಹೀಗಾಗಿ ಸಂಬಂಧ ಪಟ್ಟ ಅಧಿಕಾರಿಗಳು ನಿರ್ವಹಣೆ ಮಾಡಿ ವಿದ್ಯುತ್ ಉಳಿತಾಯ ಮಾಡಬೇಕಿದೆ.
ಕಟಪಾಡಿ : ನೀರಿನ ಸಮಸ್ಯೆ ನೀಗಲು ಅನುದಾನ ದೊರೆತರೂ ಕೊರೊನದಿಂದ ವಿಳಂಬ

Posted On: 08-05-2020 01:09PM
ಕಟಪಾಡಿ ಜೆ ಎನ್ ನಗರದಲ್ಲಿ ಪ್ರತಿ ವರ್ಷವೂ ಬೇಸಿಗೆ ಕಾಲದಲ್ಲಿ ಮಾರ್ಚ್, ಏಪ್ರಿಲ್, ಮೇ ತಿಂಗಳಿನಲ್ಲಿ ನೀರಿನ ಸಮಸ್ಯೆ ಎದುರಾಗುತ್ತಿದ್ದು. ಈ ವರ್ಷವೂ ನೀರಿನ ಸಮಸ್ಯೆ ಎದುರಾಗಿದೆ, ಇಂದು ಬೆಳಿಗ್ಗೆ ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾಂಜಲಿ ಎಮ್ ಸುವರ್ಣ ಅವರು ತಮ್ಮ ಸ್ವಂತ ಖರ್ಚಿನಿಂದ ನೀರಿನ ಟ್ಯಾಂಕರ್ ವ್ಯವಸ್ಥೆ ಮಾಡಿದರು, ವಾರಕ್ಕೆ ಮೂರು ಬಾರಿ ಟ್ಯಾಂಕರ್ ನಿಂದ ನೀರನ್ನು ಒದಗಿಸಲಾಗುತ್ತದೆ ಎಂದರು. ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಗೀತಾಂಜಲಿ ಸುವರ್ಣ ಅವರು, ಪ್ರತಿ ವರ್ಷವೂ ಈ ಪ್ರದೇಶದಲ್ಲಿ ನೀರಿನ ಸಮಸ್ಯೆ ತೀವ್ರವಾಗಿ ಕಾಡುತ್ತಿದ್ದು ಕಳೆದ ಬಾರಿಯು ಟ್ಯಾಂಕರ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಕಳೆದ ಬಾರಿ ಜಿಲ್ಲಾ ಪಂಚಾಯತ್ ವತಿಯಿಂದ 8 ಲಕ್ಷ ಅನುದಾನ ದೊರೆತಿದ್ದು ಸ್ಥಳಾವಕಾಶ ದೊರೆಯದ ಕಾರಣ ಯೋಜನೆಯನ್ನು ಸ್ಥಗಿತಗೊಳಿಸಲಾಗಿತ್ತು, ಆದರೇ ಈ ಬಾರಿ ಜಿಲ್ಲಾ ಪಂಚಾಯತ್ ವತಿಯಿಂದ 10 ಲಕ್ಷ ಅನುದಾನ ಹಾಗೂ ಸ್ಥಳಾವಕಾಶ ಕೂಡ ಕೂಡ ದೊರೆತಿದ್ದು. ಕೊರೊನ ಎಂಬ ಮಹಾಮಾರಿಯ ಅಟ್ಟಹಾಸದಿಂದ ಈ ಕೆಲಸಕ್ಕೆ ಅಡ್ಡಗಾಲು ಇಟ್ಟಂತಾಗಿದೆ. ಮುಂದಿನ ದಿನಗಳಲ್ಲಿ ಈ ಸಮಸ್ಯೆಗೆ ಖಂಡಿತವಾಗಿಯೂ ಶಾಶ್ವತ ಪರಿಹಾರ ದೊರಕಿಸುವಲ್ಲಿ ಸಫಲರಾಗುತ್ತೇವೆ ಎಂದು ಭರವಸೆಯಿತ್ತರು. ಈ ಸಂದರ್ಭದಲ್ಲಿ ಉಡುಪಿ,ಚಿಕ್ಕಮಗಳೂರು ಜಿಲ್ಲಾ ಸಂಸದೆ ಶೋಭಾ ಕರಂದ್ಲಾಜೆ, ಕಾಪು ವಿಧಾನ ಸಭಾ ಕ್ಷೇತ್ರದ ಶಾಸಕ ಲಾಲಾಜಿ ಆರ್ ಮೆಂಡನ್, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಸುರೇಶ್ ಶೆಟ್ಟಿ ಗುರ್ಮೆ, ವೀಣಾ ಶೆಟ್ಟಿ, ಪವಿತ್ರ ಶೆಟ್ಟಿ, ಗುರುಪ್ರಸಾದ್, ಶ್ರೀಕಾಂತ್ ನಾಯಕ್, ಗೋಪಾಲಕೃಷ್ಣ ರಾವ್, ಸಂತೋಷ್ ಕುಮಾರ್, ಸುಕೇಶ್, ದಿಲೀಪ್ ಹಾಗೂ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಪಡುಬಿದ್ರಿಯ ಮಧ್ವನಗರ ನಿವಾಸಿಗಳಿಗೆ ಆಹಾರ ಸಾಮಾಗ್ರಿಗಳ ವಿತರಣೆ

Posted On: 07-05-2020 07:34PM
ಕೊರೊನ ಮಹಾಮಾರಿಯಿಂದ ಜನರು ತೊಂದರೆಗೊಳಗಾಗುತ್ತಿದ್ದಾರೆ. ಆ ನಿಟ್ಟಿನಲ್ಲಿ ತಮ್ಮಿಂದಾದಷ್ಟು ಸಹಾಯ ಮಾಡಲೇಬೇಕೆನ್ನುವ ಉದಾರ ಮನಸ್ಸಿನಿಂದ ಪಿ.ಎಸ್ ನಟರಾಜ್ ಭಟ್ ಮತ್ತು ರಾಮಚಂದ್ರ ನಾವಡ ಹಾಗು ಸುಧಾ ನಾವಡ ದಂಪತಿಗಳಿಂದ ಪಡುಬಿದ್ರಿ ಬೀಚ್ ಸಮೀಪದ ಮಧ್ವನಗರದ ಸುಮಾರು 70 ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಪತ್ರಕರ್ತರಾದ ರವಿ ಬಿ. ಅಂಚನ್, ಸ್ಥಳೀಯರು ಮತ್ತು ಫಲಾನುಭವಿಗಳು ಉಪಸ್ಥಿತರಿದ್ದರು.
ಶಂಕರಪುರ ಸಾಯಿ ಬಾಬಾ ಮಂದಿರದಿಂದ ಆಟೋ ಚಾಲಕರಿಗೆ ಕಿಟ್ ವಿತರಣೆ

Posted On: 06-05-2020 10:43AM
ಉಡುಪಿ(6ಮೇ/2020): ಶಂಕರಪುರ, ಸುಭಾಷ್ ನಗರ, ಇನ್ನಂಜೆ , ಸಾಲ್ಮರ, ಕುರ್ಕಾಲ್ ಅಟೋ ನಿಲ್ದಾಣಗಳ ಆಟೋ ಚಾಲಕರಿಗೆ ಶಂಕರಪುರ ಶ್ರೀ ಸಾಯಿಬಾಬಾ ಮಂದಿರದ ಗುರೂಜಿ ಸಾಯಿಈಶ್ವರ್ ಕಿಟ್ ವಿತರಣೆ ಮಾಡಿದರು. ಒಟ್ಟು 90 ಆಟೋ ಚಾಲಕರಿಗೆ ಕಿಟ್ ವಿತರಣೆ ಮಾಡಿದ ಗುರೂಜಿ ಸಾಯಿಈಶ್ವರ್ ಮಾತನಾಡಿ "ಶಂಕರಪುರ ಶ್ರೀ ಸಾಯಿಬಾಬಾ ಮಂದಿರ ಜೀರ್ಣೋದ್ಧಾರ ಮಾಡಲು ದಾನಿಗಳು ನೀಡಿದ ದೇಣಿಗೆಯನ್ನು ಕರೋನಾ ಸಂತ್ರಸ್ತರಿಗೆ ನೆರವಿಗೆ ಉಪಯೋಗಿಸುತ್ತಿದ್ದು, ಅಟೋ ಚಾಲಕರು ಅನೇಕ ದಿನದಿಂದ ಲಾಕ್ ಡೌನ್ ಹಿನ್ನೆಲೆಯಲ್ಲಿ ಕಷ್ಟದಲ್ಲಿ ಇದ್ದು ನಾವು ನೀಡಿದ ಸ್ವಲ್ಪ ಸಹಾಯ ಅಕ್ಷಯವಾಗಲಿ" ಎಂದು ಹರಸಿದರು. ಮಂದಿರದ ದಾನಿಗಳಾದ ಆಶಿಶ್ ಕೆನೆಟ್ ಮಾರ್ಟಿಸ್ ಪರವಾಗಿ ಜೋಯಿಲ್ಲನ್ ಪಿರೇರ ಉಪಸ್ಥಿತಿ ಇದ್ದರು. ಮಂದಿರದ ಟ್ರಸ್ಟೀ ವಿಶ್ವನಾಥ ಸುವರ್ಣ, ಜಿ.ಪಂ.ಸದಸ್ಯೆ ಗೀತಾಂಜಲಿ ಸುವರ್ಣ, ಗ್ರಾ.ಪಂ.ಮಾಜಿ ಅಧ್ಯಕ್ಷ ಅಶೋಕ್ ರಾವ್, ವಿಜಯ್ ಕುಂದರ್, ಪ್ರಕಾಶ್ ಆಚಾರ್ಯ, ಪುರಂದರ್ ಸಾಲ್ಯಾನ್, ಗಣೇಶ್ ಪಾಲನ್, ಮನೋಹರ್ ಶಂಕರಪುರ, ಸತೀಶ್ ದೇವಾಡಿಗ, ಅಮಿತ್ ಬಜಪೆ ಉಪಸ್ಥಿತರಿದ್ದರು.
ಎರ್ಮಾಳು; ಬಡ ಅಶಕ್ತರಿಗೆ ದಿನಸಿ ಸಾಮಾಗ್ರಿ ವಿತರಣೆ

Posted On: 05-05-2020 06:32PM
ಕೋವಿಡ್ 19 ವಾರಿಯರ್, ಎರ್ಮಾಳು ಶ್ರೀನಿಧಿ ಅಂಗನವಾಡಿ ಕಾರ್ಯಕರ್ತೆ ಶಶಿಕಲಾ ನವೀನ್ ಅವರು ಗುರುತಿಸಿದ 16 ತೀರಾ ಬಡ ಕುಟುಂಬಗಳಿಗೆ ದಾನಿಗಳಾದ ಎರ್ಮಾಳು ಹೊಸಮನೆ ಡಿ.ಎಂ. ಶೆಟ್ಟಿ, ಪ್ರತಿಭಾ ಡಿ. ಶೆಟ್ಟಿ ದಂಪತಿ, ಮತ್ತು ಜಯಂತಿ ಚೌಟ ಅವರು ಕೊಡಮಾಡಿದ ಅಕ್ಕಿ ಸಹಿತ ನಿತ್ಯ ಬಳಕೆಯ ದಿನಸಿ ಸಾಮಾಗ್ರಿಗಳನ್ನು ಎರ್ಮಾಳು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಬಳಿ ಮೇ 5ರಂದು ವಿತರಿಸಲಾಯಿತು. ಕೋವಿಡ್ 19 ಕಾರ್ಯಕರ್ತೆಯಾಗಿ ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸುವ ಸಂದರ್ಭ ಈ ಬಡ ಕುಟುಂಬಗಳನ್ನು ಗುರುತಿಸಿ ಸ್ವತಃ ಮುತುವರ್ಜಿ ವಹಿಸಿ ದಾನಿಗಳ ಸಹಕಾರ ಪಡೆದುಕೊಂಡು ಶಶಿಕಲಾ ನವೀನ್ ಅವರು ಆಹಾರದ ಕಿಟ್ ವಿತರಣೆಗೆ ಸಹಕರಿಸಿದ್ದಾರೆ ಈ ಸಂದರ್ಭ ದಾನಿಗಳು ಕೋವಿಡ್ 19 ವಾರಿಯರ್ ಶಶಿಕಲಾ ನವೀನ್ ಅವರನ್ನು ಅಭಿನಂದಿಸಿದರು.
ಪಡುಬಿದ್ರಿ : ಲಾಕ್ಡೌನ್ ಸಡಿಲಿಕೆ, ಸಾಮಾಜಿಕ ಅಂತರ, ನಿಯಮ ಪಾಲಿಸದ ಜನತೆ

Posted On: 05-05-2020 01:35PM
ಇಂದಿನಿಂದ ಉಡುಪಿ ಜಿಲ್ಲೆಯಲ್ಲಿ ಬೆಳಿಗ್ಗೆ 7ರಿಂದ ಸಂಜೆ7 ರವರೆಗೆ ಲಾಕ್ಡೌನ್ ಸಡಿಲಿಕೆ ಮಾಡಲಾಗಿದೆ. ಪಡುಬಿದ್ರಿ ಪೇಟೆಭಾಗದಲ್ಲಿ ಕೆಲವು ಕಡೆಯಲ್ಲಿ ಜನರು ಸಾಮಾಜಿಕ ಅಂತರ ಕಾಯದೆ ಅಗತ್ಯ ವಸ್ತುಗಳ ಖರೀದಿ ಮಾಡುತ್ತಿರುವುದು ಕಂಡು ಬಂದಿದೆ. ಈ ಬಗ್ಗೆ ಅಂಗಡಿ ಮಾಲೀಕರುಗಳು ಮೌನವಹಿಸಿದ್ದಾರೆ. ನಿನ್ನೆಯಂತೆ ಇಂದು ಮದ್ಯ ಖರೀದಿಸಲು ಜನ ಸಾಲಿನಲ್ಲಿ ನಿಂತಿರುವ ದೃಶ್ಯ ಸಾಮಾನ್ಯವಾಗಿತ್ತು. ಗಡಿಭಾಗದಲ್ಲಿಯೂ ಜನರು ಏನೇನೋ ಸಬೂಬು ನೀಡಿ ಬರಲು ಪ್ರಯತ್ನಿಸುವುದು ಕಂಡು ಬಂದಿದೆ. ಪೇಟೆಯಲ್ಲಿ ವಾಹನಗಳಲ್ಲಿ ಇಂತಿಷ್ಟೇ ಜನ ಪ್ರಯಾಣಿಸಬೇಕೆಂಬ ನಿಯಮವಿದ್ದರೂ ಜನ ಪಾಲಿಸುತ್ತಿಲ್ಲ. ಈ ಬಗ್ಗೆ ಪೋಲೀಸರು ಮೌನವಹಿಸಿರುವುದು ಕಂಡು ಬಂದಿದೆ.