Updated News From Kaup

ಕುಂದಾಪುರ : ಸರಕಾರಿ ಜಮೀನನ್ನು ಕೃಷಿ ಭೂಮಿ ಎಂದು ಅಕ್ರಮವಾಗಿ ಮಹಿಳೆಯೋರ್ವರಿಗೆ ಮಂಜೂರಾತಿ ; ದೂರು ದಾಖಲು

Posted On: 19-09-2024 08:47PM

ಕುಂದಾಪುರ : ಹೊಂಬಾಡಿ ಮಂಡಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಗ್ರಾಮಲೆಕ್ಕಿಗ, ರಾಜಸ್ವ ನಿರೀಕ್ಷರು ಮತ್ತು ತಹಸೀಲ್ದಾ‌ರ್ ಸರಕಾರಿ ಜಮೀನನ್ನು ಕೃಷಿ ಭೂಮಿ ಎಂದು ಪರಿಶೀಲಿಸಿ ಅಕ್ರಮವಾಗಿ ಮಹಿಳೆಯೋರ್ವರಿಗೆ ಮಂಜೂರಾತಿ ಮಾಡಿದ ಕುರಿತು ಪತ್ರಕರ್ತ ಕಿರಣ್ ಪೂಜಾರಿ ಜಿಲ್ಲಾಧಿಕಾರಿ ಸಹಿತ ಸಂಬಂಧಿತ ಇಲಾಖೆಗಳಿಗೆ ದೂರನ್ನು ನೀಡಿದ್ದಾರೆ.

ಸಾರ್ವಜನಿಕರ ಕರೆ ಮತ್ತು ದೂರಿನ್ವಯ ಪ್ರಸ್ತುತ ಹೊಂಬಾಡಿ ಮಂಡಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಗ್ರಾಮಲೆಕ್ಕಿಗ, ರಾಜಸ್ವ ನಿರೀಕ್ಷರು ಮತ್ತು ತಹಸೀಲ್ದಾ‌ರ್ ಸರಕಾರಿ ಜಮೀನನ್ನು ಕೃಷಿ ಭೂಮಿ ಎಂದು ಪರಿಶೀಲಿಸಿ ಅಕ್ರಮವಾಗಿ ಗುಲಾಬಿ ಶೇಡ್ತಿ ಅವರಿಗೆ ಮಂಜೂರಾತಿ ಮಾಡಿ ಕಾನೂನೂ ಬಾಹಿರವಾಗಿ ಮಂಜೂರಾತಿ ಮಾಡಿರುವ ಕುರಿತು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಮಂಜೂರಾತಿ ಆದೇಶ ಮಾಡಿದ್ದು, ಲೋಪ ದೋಷದಿಂದ ಕೂಡಿದೆ. ಆದೇಶ ನಂಬ್ರ ಎಡಿಎಸ್.ಎನ್ ಸಿ ಆರ್. ಡಿ ಆರ್.01/2020-21 ರ ಆದೇಶ ನೀಡಿದ ಆದೇಶವನ್ನು ಪುನ‌ರ್ ಪರಿಶೀಲಿಸಿ RRT/CR/596/2023-24 ಫೈಲ್ ನಲ್ಲಿ ಇರುವ ಎಲ್ಲಾ ಕಡತವನ್ನು ಪರಿಶೀಲಿಸಬೇಕು. ಒಂದು ವೇಳೆ ಅಕ್ರಮ ನಡೆದ್ದದ್ದು ಹೌದು ಎಂದು ಕಂಡು ಬಂದರೆ ಈ ಅಕ್ರಮದಲ್ಲಿ ಭಾಗಿಯಾದ ಎಲ್ಲಾ ಸರಕಾರಿ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈ ಗೊಳ್ಳಬೇಕೆಂದು ಉಲ್ಲೇಖಿಸಿದ್ದಾರೆ.

ಗ್ರಾಹಕರ ಗಮನಕ್ಕೆ - ಮಹಾಲಕ್ಷ್ಮಿ ಗಾರ್ಮೆಂಟ್ಸ್ ಪಾಂಗಾಳದಿಂದ ಕಾಪುವಿಗೆ ಸ್ಥಳಾಂತರ

Posted On: 17-09-2024 10:25PM

ಜನರ ಅಚ್ಚುಮೆಚ್ಚಿನ ಮಹಾಲಕ್ಷ್ಮಿ ಗಾರ್ಮೆಂಟ್ಸ್ ಪಾಂಗಾಳ ಮಳಿಗೆಯು ಇನ್ನು ಮುಂದೆ ಕಾಪು ಪೇಟೆಯ ಸುಪ್ರೀಮ್ ಮೆಡಿಕಲ್ ನ ಹತ್ತಿರ ಮುಖ್ಯ ರಸ್ತೆ ಕಾಪು ಇಲ್ಲಿಗೆ ಸ್ಥಳಾಂತರಗೊಂಡಿದೆ. ಗ್ರಾಹಕರು ನಮ್ಮೊಂದಿಗೆ ಸಹಕರಿಸಬೇಕಾಗಿ ವಿನಂತಿ.

ಕಾಪು ಮಾರಿಯಮ್ಮ, ಉಚ್ಚಂಗಿ ದೇವಿಯ ಪ್ರತಿಷ್ಠಾ ಬ್ರಹ್ಮಕಲಶೋತ್ಸವ : ನವದುರ್ಗಾ ಲೇಖನ ಯಜ್ಞ - ಗ್ರಾಮ ಸಮಿತಿ, ವಾರ್ಡ್ ಸಮಿತಿಗಳ ಸಭೆ

Posted On: 16-09-2024 07:49PM

ಕಾಪು : ವಿಧಾನಸಭಾ ಕ್ಷೇತ್ರದ ಪ್ರತಿಯೊಂದು ಗ್ರಾಮ ಮತ್ತು ಪುರಸಭಾ ವ್ಯಾಪ್ತಿಯ ಪ್ರತಿಯೊಂದು ವಾರ್ಡ್ಗಳಲ್ಲಿ ಸಮಿತಿ ರಚಿಸಲಾಗಿದ್ದು ಈ ಎಲ್ಲಾ ಸಮಿತಿಯ ಮುಖ್ಯ ಸಂಚಾಲಕರು ಹಾಗೂ ಸಂಚಾಲಕರುಗಳಿಗೆ ಮಾರಿಯಮ್ಮ ಮತ್ತು ಉಚ್ಚಂಗಿ ದೇವಿಯ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ಭಾನುವಾರ ಕರೆದ ಸಭೆಯಲ್ಲಿ ಸುಮಾರು 300ಕ್ಕೂ ಅಧಿಕ ಮಂದಿ ಈ ಸಭೆಯಲ್ಲಿ ಪಾಲ್ಗೊಂಡಿದ್ದರು.

ನವದುರ್ಗಾ ಲೇಖನ ಯಜ್ಞ ಸಮಿತಿಯ ಅಧ್ಯಕ್ಷರಾದ ಕೆ.ರಘುಪತಿ ಭಟ್ ನವದುರ್ಗಾ ಲೇಖನ ಯಜ್ಞದ ಬಗ್ಗೆ, ಕಚೇರಿಯಲ್ಲಿ ಮತ್ತು ವೆಬ್ಸೈಟ್ ನಲ್ಲಿ ನೋಂದಾಯಿಸುವ ಬಗ್ಗೆ ತಿಳಿಸಿದರು. ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಮತ್ತು ಕಾಪು ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಎಲ್ಲರೂ ಒಂದಾಗಿ ಕಾಪುವಿನ ಅಮ್ಮನ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ತಯಾರಾಗೋಣ, ಇದರ ಪೂರ್ವಭಾವಿಯಾಗಿ ನಡೆಯಲಿರುವ ನವದುರ್ಗಾ ಲೇಖನ ಯಜ್ಞದಲ್ಲಿ ಪ್ರತಿಯೊಬ್ಬರು 9ರ ಒಂದು ತಂಡವನ್ನು ರಚಿಸಿಕೊಂಡು, ಲೇಖನವನ್ನು ಬರೆದು ಅಮ್ಮನಿಗೆ ಸಮರ್ಪಿಸೋಣ, ಇದು ಅಮ್ಮ ನಮಗೆ ನೀಡಿರುವ ಅವಕಾಶ ಎಂದರು.

ಈ ಸಂದರ್ಭದಲ್ಲಿ ಅಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯಾ, ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ, ಉಪಾಧ್ಯಕ್ಷರಾದ ಮಾಧವ ಆರ್. ಪಾಲನ್, ಮನೋಹರ್ ಎಸ್. ಶೆಟ್ಟಿ, ಕಾಪು ಪುರಸಭಾ ವ್ಯಾಪ್ತಿಯ ವಾರ್ಡ್ ಸಮಿತಿಯ ಪ್ರಧಾನ ಸಂಚಾಲಕ ಶ್ರೀಕರ ಶೆಟ್ಟಿ ಕಲ್ಯಾ ಮತ್ತಿತರರು ಉಪಸ್ಥಿತರಿದ್ದರು.

ರೇಣುಕಾ ಜೋಗಿ ಪ್ರಾರ್ಥಿಸಿದರು. ನವದುರ್ಗಾ ಲೇಖನ ಯಜ್ಞ ಸಮಿತಿಯ ಪ್ರಧಾನ ಕಾರ್ಯದರ್ಶಿ, ಯೋಗೀಶ್ ವಿ ಶೆಟ್ಟಿ ಸ್ವಾಗತಿಸಿದರು. ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ ವಾಸುದೇವ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನವದುರ್ಗಾ ಲೇಖನ ಯಜ್ಞ ಸಮಿತಿಯ ಸಂಘಟನಾ ಕಾರ್ಯದರ್ಶಿ ಸಂದೀಪ್ ಕುಮಾರ್ ಮಂಜ ಮತ್ತು ಅನಿಲ್ ಕುಮಾರ್ ಕಾಪು ಕಾರ್ಯಕ್ರಮವನ್ನು ನಿರೂಪಿಸಿದರು. ಗ್ರಾಮ ಸಮಿತಿಯ ಪ್ರಧಾನ ಸಂಚಾಲಕ ಅರುಣ್ ಶೆಟ್ಟಿ ಪಾದೂರು ವಂದಿಸಿದರು.

ಹೆಜಮಾಡಿ, ಪಡುಬಿದ್ರಿ, ಎರ್ಮಾಳಿನಲ್ಲಿ ಈದ್ ಮಿಲಾದ್ ಸಂಭ್ರಮ

Posted On: 16-09-2024 07:33PM

ಪಡುಬಿದ್ರಿ : ಪ್ರವಾದಿ ಮುಹಮ್ಮದ್ ಪೈಗಂಬರ್ ಜನ್ಮದಿನಾಚರಣೆಯು ಕಾಪು ತಾಲ್ಲೂಕಿನ ಪಡುಬಿದ್ರಿ, ಹೆಜಮಾಡಿ, ಎರ್ಮಾಳಿನಲ್ಲಿ ಸೋಮವಾರ ಸಂಭ್ರಮ ಸಡಗರದಿಂದ ಆಚರಿಸಲಾಯಿತು.

ಹೆಜಮಾಡಿಯಲ್ಲಿ ಕನ್ನಂಗಾರ್ ಜಮಾಅತ್‌ನಿಂದ ಕನ್ನಂಗಾರ್ ಜುಮ್ಮಾ ಮಸೀದಿಯಿಂದ ಹೊರಟ ಜಾಥಾವು ಹೆಜಮಾಡಿ ಪೇಟೆ, ಗುಂಡಿ, ಎನ್.ಎಸ್ ರೋಡ್, ಬೀಡಿನ ಗುಡ್ಡೆ ಮೂಲಕ ರಾಷ್ಟ್ರೀಯ ಹೆದ್ದಾರಿಯಾಗಿ ಕನ್ನಂಗಾರ್ ಜುಮ್ಮಾ ಮಸೀದಿಗೆ ಪ್ರವೇಶಿಸಿತು. ಜಾಥಾದಲ್ಲಿ ಮದ್ರಸ ವಿದ್ಯಾರ್ಥಿಗಳ ದಫ್ ಪ್ರದರ್ಶನ ನಡೆಯಿತು.

ಪಡುಬಿದ್ರಿ ಜುಮ್ಮಾ ಮಸೀದಿ ವತಿಯಿಂದ ನಡೆದ ಮೀಲಾದ್ ರ‍್ಯಾಲಿಗೆ ಕಂಚಿನಡ್ಕ ಜುಮ್ಮಾ ಮಸೀದಿಯಲ್ಲಿ ಚಾಲನೆ ನೀಡಲಾಯಿತು. ಕಂಚಿನಡ್ಕ ಮಸೀದಿಯಿಂದ ಹೊರಟ ರ‍್ಯಾಲಿಯು ಪಡುಬಿದ್ರಿ-ಕಾರ್ಕಳ ರಾಜ್ಯ ಹೆದ್ದಾರಿ ಮೂಲಕ ರಾಷ್ಟ್ರೀಯ ಹೆದ್ದಾರಿ ಪಡುಬಿದ್ರಿ ತಲುಪಿ ಮಾರ್ಕೆಟ್ ರಸ್ತೆಯಾಗಿ ಪಡುಬಿದ್ರಿ ಮಸೀದಿ ಪ್ರವೇಶಿಸಿತು. ಮದ್ರಸ ವಿದ್ಯಾರ್ಥಿಗಳಿಂದ ಆಕರ್ಷಕ ಸ್ಕೌಟ್ ಗಮನಸೆಳೆಯಿತು.

ಎರ್ಮಾಳು ಜುಮಾ ಮಸೀದಿ ವತಿಯಿಂದ ನಡೆದ ಮೀಲಾದ್ ರ‍್ಯಾಲಿಯು ಬಡಾ ಎರ್ಮಾಳು ಮಸೀದಿಯಿಂದ ಹೊರಟು ಎರ್ಮಾಳು ಜುಮ್ಮಾ ಮಸೀದಿಗೆ ತಲುಪಿತು.

ಬಡಾ ಎರ್ಮಾಳು ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ : 71ನೇ ವಾರ್ಷಿಕ ಮಹಾಸಭೆ

Posted On: 16-09-2024 05:36PM

ಎರ್ಮಾಳು : ವಿದ್ಯಾಭ್ಯಾಸ, ಆರ್ಥಿಕತೆ, ರಾಜಕೀಯದ ಕೊರತೆಯಿದ್ದ ಸಂದರ್ಭದಲ್ಲಿಯೂ ಮೀನುಗಾರ ಸಮಾಜದ ಹಿರಿಯರ ಚಿಂತನೆಯಿಂದ ಭವಿಷ್ಯದ ಹಿತದೃಷ್ಟಿಯಿಂದ ಬಡಾ ಎರ್ಮಾಳು ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ ಸ್ಥಾಪನೆಯಾಗಿದೆ. ಸೊಸೈಟಿಯ ಬೆಳವಣಿಗೆಗೆ ಗ್ರಾಹಕರು, ಷೇರುದಾರರು, ನಿರ್ದೇಶಕರ ಸಹಕಾರ ಮೂಲ ಕಾರಣ. ಉಚ್ಚಿಲ ಶಾಖೆಯಲ್ಲಿ 4 ಲಕ್ಷ ಲಾಭಾಂಶ ಆಗಿದ್ದು, 4 ಕೋಟಿಯ ವ್ಯವಹಾರವಾಗಿದೆ. ಶೇ.12 ಡಿವಿಡೆಂಡ್ ನೀಡಲಾಗುವುದು ಎಂದು ಸೊಸೈಟಿಯ ಅಧ್ಯಕ್ಷರಾದ ದಿನೇಶ್ ಎರ್ಮಾಳು ಹೇಳಿದರು. ಅವರು ಬಡಾ ಎರ್ಮಾಳು ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ ಇದರ 2023-24 ನೇ ಸಾಲಿನ 71ನೇ ವಾರ್ಷಿಕ ಮಹಾಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಸನ್ಮಾನ /ವಿದ್ಯಾರ್ಥಿ ವೇತನ ವಿತರಣೆ : ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆಗೈದ ಕುಂದಾಪುರ ಸರಕಾರಿ ಆಸ್ಪತ್ರೆಯ ವೈದ್ಯ ಡಾ| ನಾಗೇಶ್ ರವರಿಗೆ ವೈದ್ಯವಾರಿಧಿ ಚಂದ್ರ ಬಿರುದು, ಖ್ಯಾತ ಈಜು ತಜ್ಞ ಈಶ್ವರ್ ಮಲ್ಪೆ ಅವರಿಗೆ ಶರಧಿ ಚಂದ್ರಮ ಬಿರುದು, ಮೊಗವೀರ ಸಮಾಜದ ಹಿರಿಯರಾದ ಪುರಂದರ ಕೆ ಸಾಲ್ಯಾನ್ ಇವರನ್ನು, ಕರಾಟೆಯಲ್ಲಿ ಸಾಧನೆಗೈದ ಬಾಲಪ್ರತಿಭೆ ಸಾನ್ವಿತ್ ಆರ್ ಮೆಂಡನ್ ರನ್ನು ಸನ್ಮಾನಿಸಲಾಯಿತು. ಅತ್ಯಧಿಕ ಅಂಕ ಗಳಿಸಿದ ಸೊಸೈಟಿಯ ಗ್ರಾಹಕರ ಮಕ್ಕಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.

ಅಗಲಿದ ಸೊಸೈಟಿಯ ಸದಸ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸೊಸೈಟಿಯ ಅಧ್ಯಕ್ಷರಾದ ದಿನೇಶ್ ಎರ್ಮಾಳು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಸೊಸೈಟಿಯ ಉಪಾಧ್ಯಕ್ಷರಾದ ದಿಲೀಪ್ ಕುಮಾರ್, ನಿರ್ದೇಶಕರಾದ ಸುಂದರ್ ಸುವರ್ಣ, ಲೋಕೇಶ್, ಶೋಭ ಅಮೀನ್, ರಾಘವ ಕೋಟ್ಯಾನ್, ಲಕ್ಷ್ಮಣ ಸುವರ್ಣ, ಆಶಾ ಕುಂದರ್, ವಿಠಲ್ ಸುವರ್ಣ, ಶಿವಾಜಿ, ಕಾರ್ಯನಿರ್ವಹಣಾಧಿಕಾರಿ ಅನುಷ, ಸಲಹೆಗಾರರಾದ ಚಂದ್ರಕಾಂತ್, ಎರ್ಮಾಳು ಬಡಾ ಮೊಗವೀರ ಮಹಾಸಭಾದ ಉಪಾಧ್ಯಕ್ಷ ಪುರಂದರ ಕೆ ಸಾಲ್ಯಾನ್, ಮೊಗವೀರ ಸಮಾಜದ ಸಂಘಗಳ ಪ್ರಮುಖರಾದ ಆಶಾ ಪುತ್ರನ್, ಗೀತೇಶ್, ಮೀನಾಕ್ಷಿ ಸಾಲ್ಯಾನ್, ಆರತಿ, ಕುಶಾಲಾಕ್ಷಿ, ಶಾಖಾ ವ್ಯವಸ್ಥಾಪಕಿ ಅಶ್ವಿನಿ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

ಲಕ್ಷ್ಮಣ್ ಕೆ ಸುವರ್ಣ ಪ್ರಾರ್ಥಿಸಿದರು. ಸೊಸೈಟಿ ಅಧ್ಯಕ್ಷ ದಿನೇಶ್ ಎರ್ಮಾಳು ಸ್ವಾಗತಿಸಿದರು. ಕಾರ್ಯನಿರ್ವಹಣಾಧಿಕಾರಿ ಅನುಷ ವಾರ್ಷಿಕ ವರದಿ ಮಂಡಿಸಿದರು. ಶಿಕ್ಷಕ ದೇವಿಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

ಕಾಂತಾವರ : ಬೇಲಾಡಿ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಜೀಣೋದ್ಧಾರ ಬ್ರಹ್ಮಕಲಶ ನಡೆಸುವ ಬಗ್ಗೆ ಪೂರ್ವಭಾವಿ ಸಭೆ

Posted On: 16-09-2024 03:43PM

ಕಾಂತಾವರ : ಗ್ರಾಮದ ಬೇಲಾಡಿ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಬ್ರಹ್ಮ ಬೈದರ್ಕೆಳ ಯುವ ಸೇವಾ ಸಮಿತಿಯಿಂದ ಪಂಚಕಜ್ಜಾಯ ಸೇವೆ ಮತ್ತು ಜೀಣೋದ್ಧಾರ ಬ್ರಹ್ಮಕಲಶ ನಡೆಸುವುದರ ಬಗ್ಗೆ ಪೂರ್ವಭಾವಿ ಸಭೆ ನಡೆಯಿತು.

ಕಾರ್ಯಕ್ರಮದಲ್ಲಿ ಬ್ರಹ್ಮ ಬೈದರ್ಕಳ ಯುವ ಸೇವಾ ಸಮಿತಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

ಅಕ್ಷಯಧಾರ ಕ್ರೆಡಿಟ್ ಸೊಸೈಟಿ ಕಾಪು : ವಾರ್ಷಿಕ ಮಹಾಸಭೆ

Posted On: 16-09-2024 03:32PM

ಕಾಪು : ಪರಿಸರದ ಜನಪ್ರಿಯ ಆರ್ಥಿಕ ಸಂಸ್ಥೆ ಅಕ್ಷಯಧಾರ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ 2023–24ನೇ ಸಾಲಿನ ವಾರ್ಷಿಕ ಮಹಾಸಭೆ ಕಾಪು ಭಾಸ್ಕರ ಸೌಧದಲ್ಲಿ ಜರಗಿತು. ಸೊಸೈಟಿಯ ಅಧ್ಯಕ್ಷ ಲವ ಕರ್ಕೇರ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಆರ್ಥಿಕ ಸಂಸ್ಥೆ ಮಧ್ಯಮ ವರ್ಗದ, ಸಣ್ಣ ಉದ್ದಿಮೆದಾರರ ಅಗತ್ಯತೆಗಳಿಗೆ ಸ್ಪಂದಿಸಿ, ಅವರ ಬೆಳವಣಿಗೆಗೆ ಪೂರಕವಾಗಿ ಸೇವೆ ಸಲ್ಲಿಸುತ್ತಿದೆ. ಸೊಸೈಟಿಯು ಗ್ರಾಹಕರಿಗೆ ಗುಣಮಟ್ಟದ ಸೇವೆ, ಸೌಲಭ್ಯ ನೀಡುತ್ತಿದ್ದು, ನಮ್ಮ ಸಂಸ್ಥೆಯ ಬೆಳವಣಿಗೆಗೆ ಸಹಕರಿಸಿ ಎಂದರು. ಶೇರುದಾರರಿಗೆ, ಠೇವಣಿದಾರರಿಗೆ ಹಾಗೂ ವಿವಿಧ ಖಾತೆಗಳನ್ನು ತೆರೆದು ಬ್ಯಾಂಕಿನ ಅಭಿವೃದ್ಧಿಗೆ ಸಹಕರಿಸಿದ ಎಲ್ಲಾ ಗ್ರಾಹಕರಿಗೂ ಅಭಿನಂದನೆ ಸಲ್ಲಿಸಿದರು.

ಸೊಸೈಟಿಯ ಷೇರುದಾರರಾದ ಉಮನಾಥ ಬಂಗೇರ, ಶೀಲ ರಾಜ್ ಪುತ್ರನ್ ಪೊಲಿಪು, ಸೀತಾರಾಮ್ ಸಾಲಿಯನ್, ಸುಂದರ್ ಸುವರ್ಣ ಪೊಲಿಪು, ಸೀತಾಲಕ್ಷ್ಮಿ ಬ್ಯಾಂಕಿನ ಅಭಿವೃದ್ಧಿಯ ಬಗ್ಗೆ ಸಲಹೆ ಸೂಚನೆ ನೀಡಿದರು. ಈ ಸಂಧರ್ಭ ಸೊಸೈಟಿಯ ಶೇರುದಾರರಾದ ಹಾಗೂ ಸಂಸ್ಥೆಯ ಮಾರ್ಗದರ್ಶಕರಾಗಿದ್ದ ಈ ಬಾರಿ ಕಾಪು ಪುರಸಭೆಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಹರಿಣಾಕ್ಷಿ ದೇವಾಡಿಗ ಅವರನ್ನು ಸೊಸೈಟಿಯ ಪರವಾಗಿ ಸನ್ಮಾನಿಸಲಾಯಿತು.

ಸೊಸೈಟಿಯ ಉಪಾಧ್ಯಕ್ಷರು, ನಿರ್ದೇಶಕರುಗಳು, ಸಿಬ್ಬಂದಿ, ಶೇರುದಾರರು, ಗ್ರಾಹಕರು, ಠೇವಣಿದಾರರು ಉಪಸ್ಥಿತರಿದ್ದರು.

ನಿರ್ದೇಶಕ ಶಿವರಾಮ್ ಆಚಾರ್ಯ ಸ್ವಾಗತಿಸಿದರು. ಕಾರ್ಯದರ್ಶಿ ಅಮಿತಾ ದೇವಾಡಿಗ ವಾರ್ಷಿಕ ವರದಿಯನ್ನು ಮಂಡಿಸಿದರು. ಸೊಸೈಟಿಯ ನಿರ್ದೇಶಕ ಜಗದೀಶ್ ಮೆಂಡನ್ ಗತ ವರ್ಷದ ಆಯ ವ್ಯಯ ಪಟ್ಟಿ ವಾಚಿಸಿದರು. ನಿರ್ದೇಶಕ ಪ್ರದೀಪ್ ಕುಮಾರ್ ಉಳಿಯರಗೋಳಿ ಸನ್ಮಾನಿತರನ್ನು ಪರಿಚಯಿಸಿದರು. ಅಮಿತಾ ದೇವದಾಸ್ ವಂದಿಸಿದರು.

ಉಚ್ಚಿಲ ರೋಟರಿ ಕ್ಲಬ್ ವತಿಯಿಂದ ಇಂಜಿನಿಯಸ್೯ ದಿನಾಚರಣೆ ; ಸನ್ಮಾನ

Posted On: 16-09-2024 03:21PM

ಉಚ್ಚಿಲ : ಉಚ್ಚಿಲ ರೋಟರಿ ಕ್ಲಬ್ ವತಿಯಿಂದ ಇಂಜಿನಿಯಸ್೯ ದಿನಾಚರಣೆ ಆಚರಿಸಲಾಯಿತು.

ಇಂಜಿನಿಯಸ್೯ ದಿನದ ಪ್ರಯುಕ್ತ ಇಂಜಿನಿಯರ್ ಅರಿಫ್ ಕಾಸಿಂ ಉಚ್ಚಿಲ ಇವರನ್ನು ಸನ್ಮಾನಿಸಲಾಯಿತು.

ಉಚ್ಚಿಲ ರೋಟರಿ ಕ್ಲಬ್ ಅಧ್ಯಕ್ಷರಾದ ಇಬಾದುಲ್ಲ ಅಧ್ಯಕ್ಷತೆ ‌ವಹಿಸಿದ್ದರು.

ಈ ಸಂದರ್ಭ ಉಚ್ಚಿಲ ರೋಟರಿಯ ಕಾರ್ಯದರ್ಶಿ ಸತೀಶ್ ಕುಂಡಂತಾಯ, ರೋಟರಿ ‌ಕಾರ್ಕಳದ ಅಧ್ಯಕ್ಷರಾದ ಇಕ್ಬಾಲ್ ಅಹ್ಮದ್, ಉಪಾಧ್ಯಕ್ಷ ಬಾಲಕೃಷ್ಣ ದೇವಾಡಿಗ, ಕಾರ್ಯದರ್ಶಿ ಗಣೇಶ್ ಸಾಲ್ಯಾನ್, ಮಮತಾ ಶೆಟ್ಟಿ, ಚೇತನ್ ನಾಯಕ್, ಉಚ್ಚಿಲ ರೋಟರಿ ಕ್ಲಬ್ ಪದಾಧಿಕಾರಿಗಳಾದ ಅಚ್ಯುತ ಶೆಣೈ, ನಜ್ಮ, ಚಂದ್ರಹಾಸ ಪೂಜಾರಿ, ಶೇಖಬ್ಬ, ಶಿಮಾಜ್, ಸುಧಾಕರ್, ಇಂಟರ್ಯಾಕ್ಟ್ ಕ್ಲಬ್ ಸಂಯೋಜಕರಾದ ಸುರೇಶ್ ‌ಆಚಾರ್ಯ, ರಾಜೇಶ್ ಉಪಸ್ಥಿತರಿದ್ದರು.

ಚಿಕಿತ್ಸೆಗೆ ಸಹಾಯದ ನಿರೀಕ್ಷೆಯಲ್ಲಿ ಪಡುಬಿದ್ರಿ ಧನ್ವಂತರಿ ಮಾರ್ಗದ ನಿವಾಸಿ

Posted On: 15-09-2024 11:40AM

ಪಡುಬಿದ್ರಿ : ಶ್ವಾಸಕೋಶದ ಸಮಸ್ಯೆಯಿಂದ ಉಡುಪಿಯ ಆದರ್ಶ ಹಾಸ್ಪಿಟಲ್ನಲ್ಲಿ ಸುಮಾರು 15 ದಿನಗಳಲ್ಲಿ 5 ಲಕ್ಷ ಬಿಲ್ಲು ಪಾವತಿಸಿ, ಇದೀಗ ಮತ್ತೆ ಚಿಕಿತ್ಸೆಗೆ ಉಡುಪಿಯ ಮಿಷನ್ ಹಾಸ್ಪಿಟಲ್ ನಲ್ಲಿ ಇದ್ದು ಜೀವನ್ಮರಣ ಸ್ಥಿತಿಯಲ್ಲಿರುವ ವ್ಯಕ್ತಿ ಪಡುಬಿದ್ರಿಯ ಧನ್ವಂತರಿ ಮಾರ್ಗದ ನಿವಾಸಿ ಕೃಷ್ಣ ಮೂಲ್ಯ.

ಇವರ ಕುಟುಂಬ ಇದ್ದ ಎಲ್ಲಾ ಹಣವನ್ನು ಆಸ್ಪತ್ರೆಗೆ ಪಾವತಿಸಿ ಇದೀಗ ದಾನಿಗಳಿಂದ ಸಹಾಯದ ನಿರೀಕ್ಷೆಯಲ್ಲಿದ್ದಾರೆ.

ಕೃಷ್ಣ ಮೂಲ್ಯರಿಗೆ ನೆರವು ನೀಡುವವರು ಅವರ ಮಗಳ ಗೂಗಲ್ ಪೆ ನಂಬರ್ ಗೆ ಅಥವಾ ಕೃಷ್ಣ ಮೂಲ್ಯರ ಬ್ಯಾಂಕ್ ಖಾತೆಗೆ ಹಣ ಕಳುಹಿಸಬಹುದು Gpay number:9632492659 Krishna moolya ac 01382200051071 IFSC CNRB0010138 padubidri

ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಹ್ಯಾಕೋತ್ಸವ 2024 ಸಂಪನ್ನ

Posted On: 14-09-2024 09:29PM

ಬಂಟಕಲ್ಲು : ಶ್ರೀ ಮಧ್ವ ವಾದಿರಾಜ ಮಹಾವಿದ್ಯಾಲಯದ ಗಣಕಯಂತ್ರ ವಿಭಾಗವು ಸಂಸ್ಥೆಯ ಇನ್ನೋವೇಶನ್ ಘಟಕ, ಐಎಸ್‌ಟಿಇ ಘಟಕ ಮತ್ತು ಐಇಇಇ ವಿದ್ಯಾರ್ಥಿ ಘಟಕದ ಸಹಯೋಗದೊಂದಿಗೆ ನಡೆಸಿದ ರಾಷ್ಟ್ರ ಮಟ್ಟದ 36 ಗಂಟೆಗಳ ಹ್ಯಾಕೋತ್ಸವ 2024 ಇದರ ಸಮಾರೋಪ ಸಮಾರಂಭವು ಕಾಲೇಜಿನ ಆವರಣದಲ್ಲಿ ನಡೆಯಿತು.

ಪ್ರೈಮ್ ಸೋಪಿಕ್ ಟೆಕ್ನಾಲಜೀಸ್, ಮಂಗಳೂರು ಇದರ ಸಹ ಸಂಸ್ಥಾಪಕರು ಮತ್ತು ಹಿರಿಯ ತಾಂತ್ರಿಕ ಅಧಿಕಾರಿ ದುರ್ಗಾ ಪ್ರಸಾದ್ ಶೆಟ್ಟಿ ಮಾತನಾಡಿ, ಇಂತಹ ಹ್ಯಾಕಥಾನ್‌ನಲ್ಲಿ ವಿದ್ಯಾರ್ಥಿಗಳು ಭಾಗವಹಿಸುವುದರಿಂದ ವಿದ್ಯಾರ್ಥಿಗಳು ಪಡೆಯಬಹುದಾದ ತಾಂತ್ರಿಕ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದರು. ಪ್ರಾಚೀನ ಕಾಲದಲ್ಲಿದ್ದ ತಾಂತ್ರಿಕ ಪ್ರಗತಿಯ ಬಗ್ಗೆ ತಿಳಿಸಿದರು. ಸಂಸ್ಥೆಯು ಇಂತಹ ಕಾರ್ಯಕ್ರಮವನ್ನು ಆಯೋಜಿಸಿದಕ್ಕಾಗಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಸಂಸ್ಥೆಯ ಕಾರ್ಯದರ್ಶಿಗಳಾದ ರತ್ನಕುಮಾರ್‌ರವರು ಮಾತನಾಡಿ, ನಕಲಿ ಕರೆ ಪತ್ತೆ, ವಂಚನೆಯಂತಹ ಸಾಮಾಜಿಕ ಸಮಸ್ಯೆಯನ್ನು ಬಗೆಹರಿಸಲು ಇಂತಹ ಕಾರ್ಯಕ್ರಮಗಳು ಪ್ರಮುಖ ವೇದಿಕೆಯಾಗಿದೆ ಎಂದರು.

ಸಂಸ್ಥೆಯ ಪ್ರಾಂಶುಪಾಲರಾದ ಡಾ. ತಿರುಮಲೇಶ್ವರ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಹ್ಯಾಕೋತ್ಸವದಲ್ಲಿ ನೆಹರು ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ, ಕೊಯಂಬತ್ತೂರ್ ಇಲ್ಲಿನ ವಿದ್ಯಾರ್ಥಿಗಳ "ಸ್ಟೇಲ್ ಅಪ್" ತಂಡವು ಪ್ರಥಮ ಸ್ಥಾನ ಪಡೆದು ಟ್ರೋಫಿಯೊಂದಿಗೆ 40 ಸಾವಿರ ರೂಪಾಯಿ ನಗದು ಬಹುಮಾನವನ್ನು ಪಡೆದುಕೊಂಡಿತು. ವಿಶ್ವಕರ್ಮ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ, ಪುಣೆ, ವಿದ್ಯಾರ್ಥಿಗಳ "ಟೀಮ್ 7'' ತಂಡವು ದ್ವಿತೀಯ ಸ್ಥಾನ ಪಡೆದು 25 ಸಾವಿರ ರೂಪಾಯಿ ನಗದು ಬಹುಮಾನವನ್ನು ಪಡೆದುಕೊಂಡಿತು, ಎಂಐಟಿ ಮಣಿಪಾಲದ ವಿದ್ಯಾರ್ಥಿಗಳ "ಆಕ್ಟೇವಿಯನ್' ತಂಡ ಮತ್ತು ಶ್ರೀ ಸಾಯಿರಾಮ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ "ಎಲ್ಸನ್ - ಸರ್ಕ್ಸ್" ತಂಡವು 12ಸಾವಿರ ನಗದು ಬಹುಮಾನದೊಂದಿಗೆ ತೃತೀಯ ಸ್ಥಾನವನ್ನು ಪಡೆದುಕೊಂಡಿತು. ಎನ್‌ಎಂಐಇಟಿ, ಪುಣೆ, ವಿದ್ಯಾರ್ಥಿಗಳ "ಟೀಮ್ ಯುಗ" ತಂಡವು 10 ಸಾವಿರ ನಗದು ಬಹುಮಾನದೊಂದಿಗೆ ಅತ್ಯುತ್ತಮ ಯೋಜನೆ ಪ್ರಶಸ್ತಿಯನ್ನು ಪಡೆದುಕೊಂಡಿತು.