Updated News From Kaup

ಅ. 5 ಮತ್ತು 6 : ಅಯೋಧ್ಯ ಟೈಗಸ್೯ ಇದರ ಪ್ರಥಮ ವರ್ಷದ ಪಿಲಿ ಪಜ್ಜೆ ; ಊದು ಕಾರ್ಯಕ್ರಮ, ಲೋಬನ ಸೇವೆ

Thumbnail
Posted On: 20 Sep 2024, 06:57 PM

ಕಾಪು : ಅಯೋಧ್ಯ ಟೈಗಸ್೯ ಇದರ ಅಬ್ಬರದ ಪ್ರಥಮ ವರ್ಷದ ಪಿಲಿ ಪಜ್ಜೆಯ ಊದು ಕಾರ್ಯಕ್ರಮ ಅಕ್ಟೋಬರ್ 5, ಸಂಜೆ ಗಂಟೆ 6:30 ಕ್ಕೆ ಮತ್ತು ಅಕ್ಟೋಬರ್ 6, ಸಂಜೆ 8 ಗಂಟೆಗೆ ಲೋಬನ ಸೇವೆಯು ಕಾಪುವಿನ ಪೊಲಿಪು ಶ್ರೀ ಲಕ್ಷ್ಮೀನಾರಾಯಣ ಸಭಾ ಮಂಟಪದಲ್ಲಿ ಜರಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಾಜಿ ಕೆ. ಉಮ್ಮರಬ್ಬ ಚಂದ್ರನಗರ ಇವರಿಗೆ ನುಡಿ ನಮನ

Thumbnail
Posted On: 19 Sep 2024, 10:36 PM

ಕಾಪು : ಚಂದ್ರನಗರ ಕಳತ್ತೂರಿನಲ್ಲಿ ಸುಮಾರು 35 ವರ್ಷಗಳಿಂದ ಜನರಲ್ ಸ್ಟೋರ್ ನಡೆಸುತ್ತಿದ್ದ ಸರಳ ಸಜ್ಜನ ವ್ಯಕ್ತಿ ಸಾಮಾಜಿಕ ಧಾರ್ಮಿಕ ಮುಖಂಡ ಬಟರ್ ಫ್ಲೈ ಗೆಸ್ಟ್ ಹೌಸ್ ನ ನಿರ್ದೇಶಕ ಹಾಜಿ ಕೆ. ಉಮ್ಮರಬ್ಬ ಇತ್ತೀಚಿಗೆ ನಿಧನರಾಗಿದ್ದು, ಆವರ ನುಡಿ ನಮನ ಕಾರ್ಯಕ್ರಮವು ಕಳತ್ತೂರು ಚಂದ್ರನಗರದ ಲೋಕೇಶ್ ಭಟ್ ಹಾಗೂ ದಿನೇಶ್ ಆಚಾರ್ಯ ಐಶ್ವರ್ಯ ಇವರ ನೇತೃತ್ವದಲ್ಲಿ ನುಡಿನಮನ ಕಾರ್ಯಕ್ರಮವು ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಇವರ ಅಧ್ಯಕ್ಷತೆಯಲ್ಲಿ ಕುಶಲ ಶೇಖರ್ ಶೆಟ್ಟಿ ಇಂಟರ್ ನ್ಯಾಷನಲ್ ಅಡಿಟೋರಿಯಮ್ ನಲ್ಲಿ ನಡೆಯಿತು. ವಿನಯ ಕುಮಾರ್ ಸೊರಕೆ ಮಾತನಾಡಿ ಹಾಜಿ ಉಮ್ಮರಬ್ಬನವರ ಜೀವನ ಪ್ರತಿಯೊಬ್ಬರನ್ನು ಆತ್ಮೀಯತೆಯಿಂದ ಕಂಡು ಸಮಾಜದಲ್ಲಿ ಶಾಂತಿ ನೆಮ್ಮದಿಗೆ ಅವರು ಇನ್ನೊಂದು ಹೆಸರು ತಪ್ಪಾಗಲಾರದು. ಅವರ ಸಮಾಜ ಸೇವೆಯನ್ನು ಗುರುತಿಸಿ ಗುಣಗಾನ ಮಾಡಿದರು. ಕಾಪು ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆ ಮಾತನಾಡಿ, ನಾವು ಒಂದೇ ಊರಿನವರಾಗಿ ಬಾಲ್ಯದ ಒಡನಾಟದ ಬಗ್ಗೆ ಸ್ಮರಿಸಿದರು. ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು, ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಾ. ಗಣೇಶ್ ಗಂಗೊಳ್ಳಿ, ಬದ್ರಿಯಾ ಜುಮ್ಮಾ ಮಸೀದಿ ಮಜೂರು ಮಲ್ಲಾರು ಧರ್ಮ ಗುರುಗಳಾದ ಅಬ್ದುಲ್ ರಶೀದ್ ಸಖಾಪಿ, ಕೊಟ್ಟಾರಿ ಕಟ್ಟೆ ಅಶ್ವಥ ಕಟ್ಟೆ ಸಮಿತಿ ಅಧ್ಯಕ್ಷ ರಾಘವೇಂದ್ರ ಭಟ್ ಕಳತ್ತೂರು, ಜನ ಸೇವಾ ಜನ ಸಂಪರ್ಕ ವೇದಿಕೆ ಕಾಪು ಅಧ್ಯಕ್ಷರಾದ ದಿವಾಕರ್ ಬಿ ಶೆಟ್ಟಿ, ಜೀವ ವಿಮಾ ಪ್ರತಿನಿಧಿ ದಿವಾಕರ್ ಡಿ ಶೆಟ್ಟಿ, ಬಳಕೆದಾರರ ವೇದಿಕೆ ಗೌರವ ಅಧ್ಯಕ್ಷರಾದ ಹಾಜಿ ಕೆ.ಅಬೂಬಕ್ಕರ್ ಪರ್ಕಳ, ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಅಧ್ಯಕ್ಷರಾದ ಶರ್ಪುದ್ದಿನ್ ಶೇಖ್, ಅಯ್ಯಣ್ಣ ಹಿರಿಯ ಪ್ರಾರ್ಥಮಿಕ ಶಾಲೆ ಸಂಚಾಲಕರಾದ ಪ್ರವೀಣ್ ಕುಮಾರ್ ಗುರ್ಮೆ, ಕುತ್ಯಾರು ಗ್ರಾಮ ಪಂಚಾಯತ್ ಸದಸ್ಯ ಸ್ಲಾನಿ ಲೆಸ್ ಕೊರ್ದಾ, ಅನಿವಾಸಿ ಭಾರತಿಯ ಉದ್ಯಮಿ ರಜಬ್ ಪರ್ಕಳ, ಉಮಾತ್ಮ ಇದಿನಬ್ಬ ಫ್ಯಾಮಿಲಿ ಮಜೂರು ನಿರ್ದೇಶಕರಾದ ಬಾವು ಚಂದ್ರನಗರ, ಹಾಜಿ ಉಮ್ಮರಬ್ಬನವರ ಪುತ್ರ ಸಮಾಜ ಸೇವಕ ಡಾ. ಮೊಹಮ್ಮದ್ ಫಾರೂಕ್ ಚಂದ್ರನಗರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಭಿನಂದನಾ ಸಮಿತಿ ಸದಸ್ಯರಾದ ರಾಜೇಶ್ ಮೂಲ್ಯ, ಕೃಷ್ಣ ಕುಲಾಲ್ ಕುತ್ಯಾರು, ಜಾನ್ಸನ್ ಕರ್ಕಡ, ಶಶಿಕಾಂತ್ ಆಚಾರ್ಯ,ಅಲ್ವಿನ್ ಕುತ್ಯಾರು, ಗ್ಲಾಡಿಸ್ ಅಲ್ಮೆಡ ಕಳತ್ತೂರು ಸಭೆಯ್ಲಲಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಮುಖ್ಯ ಶಿಕ್ಷಕರಾದ ನಿರ್ಮಲ್ ಕುಮಾರ್ ಹೆಗ್ಡೆ ನಿರೂಪಿಸಿದರು.

ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ : ಶಿಕ್ಷಕರ ದಿನಾಚರಣೆ

Thumbnail
Posted On: 19 Sep 2024, 09:46 PM

ಕಟಪಾಡಿ : ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ನೇತೃತ್ವದಲ್ಲಿ ಉದ್ಯಾವರದ ಸರಕಾರಿ ಪ್ರೌಢಶಾಲೆ, ಪ್ರಾಥಮಿಕ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕರ ದಿನಾಚರಣೆ ನಡೆಸಲಾಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಗ್ರಾಮ ಪಂಚಾಯತ್ ಹಿರಿಯ ಸದಸ್ಯ ಲಾರೆನ್ಸ್ ಡೇಸ ಮಾತನಾಡಿ, ಶಿಕ್ಷಕರ ದಿನಾಚರಣೆಯ ಮೂಲಕ ಶಿಕ್ಷಕರನ್ನು ಅಭಿನಂದಿಸುವುದು ಅತ್ಯಂತ ಶ್ರೇಷ್ಠ ಕೆಲಸ. ವಿದ್ಯಾರ್ಥಿ ಜೀವನದಲ್ಲಿ ಮಕ್ಕಳನ್ನು ತಿದ್ದಿ ಬೆಳೆಸಿದ ಗುರುಗಳು ಪ್ರತಿಯೊಬ್ಬ ವಿದ್ಯಾರ್ಥಿಗೆ ಒಂದು ದಾರಿದೀಪ. ಸಮಾಜದಲ್ಲಿ ಶ್ರೇಷ್ಠ ನಾಗರಿಕನಾಗಿ ಬೆಳೆಯಲು ಶಿಕ್ಷಕರ ಪಾತ್ರ ಮಹತ್ವದ್ದು. ಸರಕಾರಿ ಶಾಲೆಗಳಲ್ಲಿ ಹಲವು ಸವಾಲುಗಳಿದ್ದರೂ, ಶಿಕ್ಷಕರು ಆ ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತು ವಿದ್ಯಾರ್ಥಿಗಳಲ್ಲಿ ಶ್ರೇಷ್ಠ ಫಲಿತಾಂಶ ಬರಲು ಪ್ರಯತ್ನ ಮಾಡುತ್ತಿರುವುದು ಮೆಚ್ಚುವಂಥದ್ದು ಎಂದರು. ಸರಕಾರಿ ಪ್ರಾಥಮಿಕ, ಪ್ರೌಢಶಾಲೆ ಸಹಿತ ಪದವಿಪೂರ್ವ ಕಾಲೇಜಿನ ಉಪನ್ಯಾಸಕರನ್ನು ಒಟ್ಟು 29 ಶಿಕ್ಷಕರನ್ನು ಇದೇ ಸಂದರ್ಭದಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಅಭಿನಂದಿಸಿ, ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಶಾಲಾಡಳಿತ ಮಂಡಳಿಯ ಪ್ರಮುಖರಾದ ಹರಿಶ್ಚಂದ್ರ, ಸಂತೋಷ ಸುವರ್ಣ ಬೊಳ್ಜೆ, ವಿಜಯ್ ಕುಮಾರ್ ಉದ್ಯಾವರ, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಗುರುಪ್ರಸಾದ್, ಪ್ರೌಢಶಾಲೆ ಮುಖ್ಯೋಪಾಧ್ಯಾಯಿನಿ ಮುಖಾಂಬೆ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ಕೃಷ್ಣಮೂರ್ತಿ, ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ನ ಕೋಶಾಧಿಕಾರಿ ಲ. ಅನಿಲ್ ಮಿನೇಜಸ್, ಕಾರ್ಯಕ್ರಮದ ನಿರ್ದೇಶಕರಾದ ಲ. ವಿವಿಯನ್ ಪಿರೇರಾ, ಲ. ಜೋನ್ ಗೋಮ್ಸ್ ಉಪಸ್ಥಿತರಿದ್ದರು. ಅಧ್ಯಕ್ಷ ಲ. ರೊನಾಲ್ಡ್ ರೆಬೆಲ್ಲೊ ಸ್ವಾಗತಿಸಿದರು. ಕಾರ್ಯದರ್ಶಿ ಲ. ಜೆರಾಲ್ಡ್ ಪಿರೇರಾ ವಂದಿಸಿದರು. ಲ. ಸ್ಟೀವನ್ ಕುಲಾಸೊ ಕಾರ್ಯಕ್ರಮ ನಿರೂಪಿಸಿದರು.

ಕುಂದಾಪುರ : ಸರಕಾರಿ ಜಮೀನನ್ನು ಕೃಷಿ ಭೂಮಿ ಎಂದು ಅಕ್ರಮವಾಗಿ ಮಹಿಳೆಯೋರ್ವರಿಗೆ ಮಂಜೂರಾತಿ ; ದೂರು ದಾಖಲು

Thumbnail
Posted On: 19 Sep 2024, 08:47 PM

ಕುಂದಾಪುರ : ಹೊಂಬಾಡಿ ಮಂಡಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಗ್ರಾಮಲೆಕ್ಕಿಗ, ರಾಜಸ್ವ ನಿರೀಕ್ಷರು ಮತ್ತು ತಹಸೀಲ್ದಾ‌ರ್ ಸರಕಾರಿ ಜಮೀನನ್ನು ಕೃಷಿ ಭೂಮಿ ಎಂದು ಪರಿಶೀಲಿಸಿ ಅಕ್ರಮವಾಗಿ ಮಹಿಳೆಯೋರ್ವರಿಗೆ ಮಂಜೂರಾತಿ ಮಾಡಿದ ಕುರಿತು ಪತ್ರಕರ್ತ ಕಿರಣ್ ಪೂಜಾರಿ ಜಿಲ್ಲಾಧಿಕಾರಿ ಸಹಿತ ಸಂಬಂಧಿತ ಇಲಾಖೆಗಳಿಗೆ ದೂರನ್ನು ನೀಡಿದ್ದಾರೆ. ಸಾರ್ವಜನಿಕರ ಕರೆ ಮತ್ತು ದೂರಿನ್ವಯ ಪ್ರಸ್ತುತ ಹೊಂಬಾಡಿ ಮಂಡಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಗ್ರಾಮಲೆಕ್ಕಿಗ, ರಾಜಸ್ವ ನಿರೀಕ್ಷರು ಮತ್ತು ತಹಸೀಲ್ದಾ‌ರ್ ಸರಕಾರಿ ಜಮೀನನ್ನು ಕೃಷಿ ಭೂಮಿ ಎಂದು ಪರಿಶೀಲಿಸಿ ಅಕ್ರಮವಾಗಿ ಗುಲಾಬಿ ಶೇಡ್ತಿ ಅವರಿಗೆ ಮಂಜೂರಾತಿ ಮಾಡಿ ಕಾನೂನೂ ಬಾಹಿರವಾಗಿ ಮಂಜೂರಾತಿ ಮಾಡಿರುವ ಕುರಿತು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಮಂಜೂರಾತಿ ಆದೇಶ ಮಾಡಿದ್ದು, ಲೋಪ ದೋಷದಿಂದ ಕೂಡಿದೆ. ಆದೇಶ ನಂಬ್ರ ಎಡಿಎಸ್.ಎನ್ ಸಿ ಆರ್. ಡಿ ಆರ್.01/2020-21 ರ ಆದೇಶ ನೀಡಿದ ಆದೇಶವನ್ನು ಪುನ‌ರ್ ಪರಿಶೀಲಿಸಿ RRT/CR/596/2023-24 ಫೈಲ್ ನಲ್ಲಿ ಇರುವ ಎಲ್ಲಾ ಕಡತವನ್ನು ಪರಿಶೀಲಿಸಬೇಕು. ಒಂದು ವೇಳೆ ಅಕ್ರಮ ನಡೆದ್ದದ್ದು ಹೌದು ಎಂದು ಕಂಡು ಬಂದರೆ ಈ ಅಕ್ರಮದಲ್ಲಿ ಭಾಗಿಯಾದ ಎಲ್ಲಾ ಸರಕಾರಿ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈ ಗೊಳ್ಳಬೇಕೆಂದು ಉಲ್ಲೇಖಿಸಿದ್ದಾರೆ.

ಗ್ರಾಹಕರ ಗಮನಕ್ಕೆ - ಮಹಾಲಕ್ಷ್ಮಿ ಗಾರ್ಮೆಂಟ್ಸ್ ಪಾಂಗಾಳದಿಂದ ಕಾಪುವಿಗೆ ಸ್ಥಳಾಂತರ

Thumbnail
Posted On: 17 Sep 2024, 10:25 PM

ಜನರ ಅಚ್ಚುಮೆಚ್ಚಿನ ಮಹಾಲಕ್ಷ್ಮಿ ಗಾರ್ಮೆಂಟ್ಸ್ ಪಾಂಗಾಳ ಮಳಿಗೆಯು ಇನ್ನು ಮುಂದೆ ಕಾಪು ಪೇಟೆಯ ಸುಪ್ರೀಮ್ ಮೆಡಿಕಲ್ ನ ಹತ್ತಿರ ಮುಖ್ಯ ರಸ್ತೆ ಕಾಪು ಇಲ್ಲಿಗೆ ಸ್ಥಳಾಂತರಗೊಂಡಿದೆ. ಗ್ರಾಹಕರು ನಮ್ಮೊಂದಿಗೆ ಸಹಕರಿಸಬೇಕಾಗಿ ವಿನಂತಿ.

ಕಾಪು ಮಾರಿಯಮ್ಮ, ಉಚ್ಚಂಗಿ ದೇವಿಯ ಪ್ರತಿಷ್ಠಾ ಬ್ರಹ್ಮಕಲಶೋತ್ಸವ : ನವದುರ್ಗಾ ಲೇಖನ ಯಜ್ಞ - ಗ್ರಾಮ ಸಮಿತಿ, ವಾರ್ಡ್ ಸಮಿತಿಗಳ ಸಭೆ

Thumbnail
Posted On: 16 Sep 2024, 07:49 PM

ಕಾಪು : ವಿಧಾನಸಭಾ ಕ್ಷೇತ್ರದ ಪ್ರತಿಯೊಂದು ಗ್ರಾಮ ಮತ್ತು ಪುರಸಭಾ ವ್ಯಾಪ್ತಿಯ ಪ್ರತಿಯೊಂದು ವಾರ್ಡ್ಗಳಲ್ಲಿ ಸಮಿತಿ ರಚಿಸಲಾಗಿದ್ದು ಈ ಎಲ್ಲಾ ಸಮಿತಿಯ ಮುಖ್ಯ ಸಂಚಾಲಕರು ಹಾಗೂ ಸಂಚಾಲಕರುಗಳಿಗೆ ಮಾರಿಯಮ್ಮ ಮತ್ತು ಉಚ್ಚಂಗಿ ದೇವಿಯ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ಭಾನುವಾರ ಕರೆದ ಸಭೆಯಲ್ಲಿ ಸುಮಾರು 300ಕ್ಕೂ ಅಧಿಕ ಮಂದಿ ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ನವದುರ್ಗಾ ಲೇಖನ ಯಜ್ಞ ಸಮಿತಿಯ ಅಧ್ಯಕ್ಷರಾದ ಕೆ.ರಘುಪತಿ ಭಟ್ ನವದುರ್ಗಾ ಲೇಖನ ಯಜ್ಞದ ಬಗ್ಗೆ, ಕಚೇರಿಯಲ್ಲಿ ಮತ್ತು ವೆಬ್ಸೈಟ್ ನಲ್ಲಿ ನೋಂದಾಯಿಸುವ ಬಗ್ಗೆ ತಿಳಿಸಿದರು. ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಮತ್ತು ಕಾಪು ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಎಲ್ಲರೂ ಒಂದಾಗಿ ಕಾಪುವಿನ ಅಮ್ಮನ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ತಯಾರಾಗೋಣ, ಇದರ ಪೂರ್ವಭಾವಿಯಾಗಿ ನಡೆಯಲಿರುವ ನವದುರ್ಗಾ ಲೇಖನ ಯಜ್ಞದಲ್ಲಿ ಪ್ರತಿಯೊಬ್ಬರು 9ರ ಒಂದು ತಂಡವನ್ನು ರಚಿಸಿಕೊಂಡು, ಲೇಖನವನ್ನು ಬರೆದು ಅಮ್ಮನಿಗೆ ಸಮರ್ಪಿಸೋಣ, ಇದು ಅಮ್ಮ ನಮಗೆ ನೀಡಿರುವ ಅವಕಾಶ ಎಂದರು. ಈ ಸಂದರ್ಭದಲ್ಲಿ ಅಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯಾ, ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ, ಉಪಾಧ್ಯಕ್ಷರಾದ ಮಾಧವ ಆರ್. ಪಾಲನ್, ಮನೋಹರ್ ಎಸ್. ಶೆಟ್ಟಿ, ಕಾಪು ಪುರಸಭಾ ವ್ಯಾಪ್ತಿಯ ವಾರ್ಡ್ ಸಮಿತಿಯ ಪ್ರಧಾನ ಸಂಚಾಲಕ ಶ್ರೀಕರ ಶೆಟ್ಟಿ ಕಲ್ಯಾ ಮತ್ತಿತರರು ಉಪಸ್ಥಿತರಿದ್ದರು. ರೇಣುಕಾ ಜೋಗಿ ಪ್ರಾರ್ಥಿಸಿದರು. ನವದುರ್ಗಾ ಲೇಖನ ಯಜ್ಞ ಸಮಿತಿಯ ಪ್ರಧಾನ ಕಾರ್ಯದರ್ಶಿ, ಯೋಗೀಶ್ ವಿ ಶೆಟ್ಟಿ ಸ್ವಾಗತಿಸಿದರು. ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ ವಾಸುದೇವ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನವದುರ್ಗಾ ಲೇಖನ ಯಜ್ಞ ಸಮಿತಿಯ ಸಂಘಟನಾ ಕಾರ್ಯದರ್ಶಿ ಸಂದೀಪ್ ಕುಮಾರ್ ಮಂಜ ಮತ್ತು ಅನಿಲ್ ಕುಮಾರ್ ಕಾಪು ಕಾರ್ಯಕ್ರಮವನ್ನು ನಿರೂಪಿಸಿದರು. ಗ್ರಾಮ ಸಮಿತಿಯ ಪ್ರಧಾನ ಸಂಚಾಲಕ ಅರುಣ್ ಶೆಟ್ಟಿ ಪಾದೂರು ವಂದಿಸಿದರು.

ಹೆಜಮಾಡಿ, ಪಡುಬಿದ್ರಿ, ಎರ್ಮಾಳಿನಲ್ಲಿ ಈದ್ ಮಿಲಾದ್ ಸಂಭ್ರಮ

Thumbnail
Posted On: 16 Sep 2024, 07:33 PM

ಪಡುಬಿದ್ರಿ : ಪ್ರವಾದಿ ಮುಹಮ್ಮದ್ ಪೈಗಂಬರ್ ಜನ್ಮದಿನಾಚರಣೆಯು ಕಾಪು ತಾಲ್ಲೂಕಿನ ಪಡುಬಿದ್ರಿ, ಹೆಜಮಾಡಿ, ಎರ್ಮಾಳಿನಲ್ಲಿ ಸೋಮವಾರ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಹೆಜಮಾಡಿಯಲ್ಲಿ ಕನ್ನಂಗಾರ್ ಜಮಾಅತ್‌ನಿಂದ ಕನ್ನಂಗಾರ್ ಜುಮ್ಮಾ ಮಸೀದಿಯಿಂದ ಹೊರಟ ಜಾಥಾವು ಹೆಜಮಾಡಿ ಪೇಟೆ, ಗುಂಡಿ, ಎನ್.ಎಸ್ ರೋಡ್, ಬೀಡಿನ ಗುಡ್ಡೆ ಮೂಲಕ ರಾಷ್ಟ್ರೀಯ ಹೆದ್ದಾರಿಯಾಗಿ ಕನ್ನಂಗಾರ್ ಜುಮ್ಮಾ ಮಸೀದಿಗೆ ಪ್ರವೇಶಿಸಿತು. ಜಾಥಾದಲ್ಲಿ ಮದ್ರಸ ವಿದ್ಯಾರ್ಥಿಗಳ ದಫ್ ಪ್ರದರ್ಶನ ನಡೆಯಿತು. ಪಡುಬಿದ್ರಿ ಜುಮ್ಮಾ ಮಸೀದಿ ವತಿಯಿಂದ ನಡೆದ ಮೀಲಾದ್ ರ‍್ಯಾಲಿಗೆ ಕಂಚಿನಡ್ಕ ಜುಮ್ಮಾ ಮಸೀದಿಯಲ್ಲಿ ಚಾಲನೆ ನೀಡಲಾಯಿತು. ಕಂಚಿನಡ್ಕ ಮಸೀದಿಯಿಂದ ಹೊರಟ ರ‍್ಯಾಲಿಯು ಪಡುಬಿದ್ರಿ-ಕಾರ್ಕಳ ರಾಜ್ಯ ಹೆದ್ದಾರಿ ಮೂಲಕ ರಾಷ್ಟ್ರೀಯ ಹೆದ್ದಾರಿ ಪಡುಬಿದ್ರಿ ತಲುಪಿ ಮಾರ್ಕೆಟ್ ರಸ್ತೆಯಾಗಿ ಪಡುಬಿದ್ರಿ ಮಸೀದಿ ಪ್ರವೇಶಿಸಿತು. ಮದ್ರಸ ವಿದ್ಯಾರ್ಥಿಗಳಿಂದ ಆಕರ್ಷಕ ಸ್ಕೌಟ್ ಗಮನಸೆಳೆಯಿತು. ಎರ್ಮಾಳು ಜುಮಾ ಮಸೀದಿ ವತಿಯಿಂದ ನಡೆದ ಮೀಲಾದ್ ರ‍್ಯಾಲಿಯು ಬಡಾ ಎರ್ಮಾಳು ಮಸೀದಿಯಿಂದ ಹೊರಟು ಎರ್ಮಾಳು ಜುಮ್ಮಾ ಮಸೀದಿಗೆ ತಲುಪಿತು.

ಬಡಾ ಎರ್ಮಾಳು ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ : 71ನೇ ವಾರ್ಷಿಕ ಮಹಾಸಭೆ

Thumbnail
Posted On: 16 Sep 2024, 05:36 PM

ಎರ್ಮಾಳು : ವಿದ್ಯಾಭ್ಯಾಸ, ಆರ್ಥಿಕತೆ, ರಾಜಕೀಯದ ಕೊರತೆಯಿದ್ದ ಸಂದರ್ಭದಲ್ಲಿಯೂ ಮೀನುಗಾರ ಸಮಾಜದ ಹಿರಿಯರ ಚಿಂತನೆಯಿಂದ ಭವಿಷ್ಯದ ಹಿತದೃಷ್ಟಿಯಿಂದ ಬಡಾ ಎರ್ಮಾಳು ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ ಸ್ಥಾಪನೆಯಾಗಿದೆ. ಸೊಸೈಟಿಯ ಬೆಳವಣಿಗೆಗೆ ಗ್ರಾಹಕರು, ಷೇರುದಾರರು, ನಿರ್ದೇಶಕರ ಸಹಕಾರ ಮೂಲ ಕಾರಣ. ಉಚ್ಚಿಲ ಶಾಖೆಯಲ್ಲಿ 4 ಲಕ್ಷ ಲಾಭಾಂಶ ಆಗಿದ್ದು, 4 ಕೋಟಿಯ ವ್ಯವಹಾರವಾಗಿದೆ. ಶೇ.12 ಡಿವಿಡೆಂಡ್ ನೀಡಲಾಗುವುದು ಎಂದು ಸೊಸೈಟಿಯ ಅಧ್ಯಕ್ಷರಾದ ದಿನೇಶ್ ಎರ್ಮಾಳು ಹೇಳಿದರು. ಅವರು ಬಡಾ ಎರ್ಮಾಳು ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ ಇದರ 2023-24 ನೇ ಸಾಲಿನ 71ನೇ ವಾರ್ಷಿಕ ಮಹಾಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಸನ್ಮಾನ /ವಿದ್ಯಾರ್ಥಿ ವೇತನ ವಿತರಣೆ : ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆಗೈದ ಕುಂದಾಪುರ ಸರಕಾರಿ ಆಸ್ಪತ್ರೆಯ ವೈದ್ಯ ಡಾ| ನಾಗೇಶ್ ರವರಿಗೆ ವೈದ್ಯವಾರಿಧಿ ಚಂದ್ರ ಬಿರುದು, ಖ್ಯಾತ ಈಜು ತಜ್ಞ ಈಶ್ವರ್ ಮಲ್ಪೆ ಅವರಿಗೆ ಶರಧಿ ಚಂದ್ರಮ ಬಿರುದು, ಮೊಗವೀರ ಸಮಾಜದ ಹಿರಿಯರಾದ ಪುರಂದರ ಕೆ ಸಾಲ್ಯಾನ್ ಇವರನ್ನು, ಕರಾಟೆಯಲ್ಲಿ ಸಾಧನೆಗೈದ ಬಾಲಪ್ರತಿಭೆ ಸಾನ್ವಿತ್ ಆರ್ ಮೆಂಡನ್ ರನ್ನು ಸನ್ಮಾನಿಸಲಾಯಿತು. ಅತ್ಯಧಿಕ ಅಂಕ ಗಳಿಸಿದ ಸೊಸೈಟಿಯ ಗ್ರಾಹಕರ ಮಕ್ಕಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಅಗಲಿದ ಸೊಸೈಟಿಯ ಸದಸ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸೊಸೈಟಿಯ ಅಧ್ಯಕ್ಷರಾದ ದಿನೇಶ್ ಎರ್ಮಾಳು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಸೊಸೈಟಿಯ ಉಪಾಧ್ಯಕ್ಷರಾದ ದಿಲೀಪ್ ಕುಮಾರ್, ನಿರ್ದೇಶಕರಾದ ಸುಂದರ್ ಸುವರ್ಣ, ಲೋಕೇಶ್, ಶೋಭ ಅಮೀನ್, ರಾಘವ ಕೋಟ್ಯಾನ್, ಲಕ್ಷ್ಮಣ ಸುವರ್ಣ, ಆಶಾ ಕುಂದರ್, ವಿಠಲ್ ಸುವರ್ಣ, ಶಿವಾಜಿ, ಕಾರ್ಯನಿರ್ವಹಣಾಧಿಕಾರಿ ಅನುಷ, ಸಲಹೆಗಾರರಾದ ಚಂದ್ರಕಾಂತ್, ಎರ್ಮಾಳು ಬಡಾ ಮೊಗವೀರ ಮಹಾಸಭಾದ ಉಪಾಧ್ಯಕ್ಷ ಪುರಂದರ ಕೆ ಸಾಲ್ಯಾನ್, ಮೊಗವೀರ ಸಮಾಜದ ಸಂಘಗಳ ಪ್ರಮುಖರಾದ ಆಶಾ ಪುತ್ರನ್, ಗೀತೇಶ್, ಮೀನಾಕ್ಷಿ ಸಾಲ್ಯಾನ್, ಆರತಿ, ಕುಶಾಲಾಕ್ಷಿ, ಶಾಖಾ ವ್ಯವಸ್ಥಾಪಕಿ ಅಶ್ವಿನಿ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು. ಲಕ್ಷ್ಮಣ್ ಕೆ ಸುವರ್ಣ ಪ್ರಾರ್ಥಿಸಿದರು. ಸೊಸೈಟಿ ಅಧ್ಯಕ್ಷ ದಿನೇಶ್ ಎರ್ಮಾಳು ಸ್ವಾಗತಿಸಿದರು. ಕಾರ್ಯನಿರ್ವಹಣಾಧಿಕಾರಿ ಅನುಷ ವಾರ್ಷಿಕ ವರದಿ ಮಂಡಿಸಿದರು. ಶಿಕ್ಷಕ ದೇವಿಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

ಕಾಂತಾವರ : ಬೇಲಾಡಿ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಜೀಣೋದ್ಧಾರ ಬ್ರಹ್ಮಕಲಶ ನಡೆಸುವ ಬಗ್ಗೆ ಪೂರ್ವಭಾವಿ ಸಭೆ

Thumbnail
Posted On: 16 Sep 2024, 03:43 PM

ಕಾಂತಾವರ : ಗ್ರಾಮದ ಬೇಲಾಡಿ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಬ್ರಹ್ಮ ಬೈದರ್ಕೆಳ ಯುವ ಸೇವಾ ಸಮಿತಿಯಿಂದ ಪಂಚಕಜ್ಜಾಯ ಸೇವೆ ಮತ್ತು ಜೀಣೋದ್ಧಾರ ಬ್ರಹ್ಮಕಲಶ ನಡೆಸುವುದರ ಬಗ್ಗೆ ಪೂರ್ವಭಾವಿ ಸಭೆ ನಡೆಯಿತು. ಕಾರ್ಯಕ್ರಮದಲ್ಲಿ ಬ್ರಹ್ಮ ಬೈದರ್ಕಳ ಯುವ ಸೇವಾ ಸಮಿತಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

ಅಕ್ಷಯಧಾರ ಕ್ರೆಡಿಟ್ ಸೊಸೈಟಿ ಕಾಪು : ವಾರ್ಷಿಕ ಮಹಾಸಭೆ

Thumbnail
Posted On: 16 Sep 2024, 03:32 PM

ಕಾಪು : ಪರಿಸರದ ಜನಪ್ರಿಯ ಆರ್ಥಿಕ ಸಂಸ್ಥೆ ಅಕ್ಷಯಧಾರ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ 2023–24ನೇ ಸಾಲಿನ ವಾರ್ಷಿಕ ಮಹಾಸಭೆ ಕಾಪು ಭಾಸ್ಕರ ಸೌಧದಲ್ಲಿ ಜರಗಿತು. ಸೊಸೈಟಿಯ ಅಧ್ಯಕ್ಷ ಲವ ಕರ್ಕೇರ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಆರ್ಥಿಕ ಸಂಸ್ಥೆ ಮಧ್ಯಮ ವರ್ಗದ, ಸಣ್ಣ ಉದ್ದಿಮೆದಾರರ ಅಗತ್ಯತೆಗಳಿಗೆ ಸ್ಪಂದಿಸಿ, ಅವರ ಬೆಳವಣಿಗೆಗೆ ಪೂರಕವಾಗಿ ಸೇವೆ ಸಲ್ಲಿಸುತ್ತಿದೆ. ಸೊಸೈಟಿಯು ಗ್ರಾಹಕರಿಗೆ ಗುಣಮಟ್ಟದ ಸೇವೆ, ಸೌಲಭ್ಯ ನೀಡುತ್ತಿದ್ದು, ನಮ್ಮ ಸಂಸ್ಥೆಯ ಬೆಳವಣಿಗೆಗೆ ಸಹಕರಿಸಿ ಎಂದರು. ಶೇರುದಾರರಿಗೆ, ಠೇವಣಿದಾರರಿಗೆ ಹಾಗೂ ವಿವಿಧ ಖಾತೆಗಳನ್ನು ತೆರೆದು ಬ್ಯಾಂಕಿನ ಅಭಿವೃದ್ಧಿಗೆ ಸಹಕರಿಸಿದ ಎಲ್ಲಾ ಗ್ರಾಹಕರಿಗೂ ಅಭಿನಂದನೆ ಸಲ್ಲಿಸಿದರು. ಸೊಸೈಟಿಯ ಷೇರುದಾರರಾದ ಉಮನಾಥ ಬಂಗೇರ, ಶೀಲ ರಾಜ್ ಪುತ್ರನ್ ಪೊಲಿಪು, ಸೀತಾರಾಮ್ ಸಾಲಿಯನ್, ಸುಂದರ್ ಸುವರ್ಣ ಪೊಲಿಪು, ಸೀತಾಲಕ್ಷ್ಮಿ ಬ್ಯಾಂಕಿನ ಅಭಿವೃದ್ಧಿಯ ಬಗ್ಗೆ ಸಲಹೆ ಸೂಚನೆ ನೀಡಿದರು. ಈ ಸಂಧರ್ಭ ಸೊಸೈಟಿಯ ಶೇರುದಾರರಾದ ಹಾಗೂ ಸಂಸ್ಥೆಯ ಮಾರ್ಗದರ್ಶಕರಾಗಿದ್ದ ಈ ಬಾರಿ ಕಾಪು ಪುರಸಭೆಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಹರಿಣಾಕ್ಷಿ ದೇವಾಡಿಗ ಅವರನ್ನು ಸೊಸೈಟಿಯ ಪರವಾಗಿ ಸನ್ಮಾನಿಸಲಾಯಿತು. ಸೊಸೈಟಿಯ ಉಪಾಧ್ಯಕ್ಷರು, ನಿರ್ದೇಶಕರುಗಳು, ಸಿಬ್ಬಂದಿ, ಶೇರುದಾರರು, ಗ್ರಾಹಕರು, ಠೇವಣಿದಾರರು ಉಪಸ್ಥಿತರಿದ್ದರು. ನಿರ್ದೇಶಕ ಶಿವರಾಮ್ ಆಚಾರ್ಯ ಸ್ವಾಗತಿಸಿದರು. ಕಾರ್ಯದರ್ಶಿ ಅಮಿತಾ ದೇವಾಡಿಗ ವಾರ್ಷಿಕ ವರದಿಯನ್ನು ಮಂಡಿಸಿದರು. ಸೊಸೈಟಿಯ ನಿರ್ದೇಶಕ ಜಗದೀಶ್ ಮೆಂಡನ್ ಗತ ವರ್ಷದ ಆಯ ವ್ಯಯ ಪಟ್ಟಿ ವಾಚಿಸಿದರು. ನಿರ್ದೇಶಕ ಪ್ರದೀಪ್ ಕುಮಾರ್ ಉಳಿಯರಗೋಳಿ ಸನ್ಮಾನಿತರನ್ನು ಪರಿಚಯಿಸಿದರು. ಅಮಿತಾ ದೇವದಾಸ್ ವಂದಿಸಿದರು.