Updated News From Kaup

ನಾಗರಪಂಚಮಿ - ಪ್ರಕೃತಿಗೆ ಮಾನವ ಕೃತಜ್ಞತೆ ಹೇಳುವ ದಿನ

Thumbnail
Posted On: 09 Aug 2024, 09:01 AM

ಇಂದು ನಾಗರ ಪಂಚಮಿ. ಪ್ರಕೃತಿಯನ್ನು ಪೂಜಿಸುವ ವಿಶಿಷ್ಟ ಹಬ್ಬವಾದ ನಾಗಾರಾಧನೆ ಈ ಭೂಮಂಡಲದಲ್ಲಿ ಇಂದು- ನಿನ್ನೆಯದಲ್ಲ. ವಿಶ್ವದ ಎಲ್ಲಾ ಭಾಗಗಳ ಧರ್ಮ- ಪುರಾಣ ಮತ್ತು ಜನಪದಗಳಲ್ಲಿ ನಾಗನ ಪ್ರಾಮುಖ್ಯ ಇತ್ತೆಂಬುದಕ್ಕೆ ಸಾಕಷ್ಟು ಪುರಾವೆಗಳು ದೊರೆತಿವೆ. ನಮ್ಮ ಪೂರ್ವಜರು ನಾಗನನ್ನು ದೇವತೆಗಳ ಸಾಲಿಗೆ ಸೇರಿಸಿ 'ನಾಗದೇವತೆ' ಎಂದರು. ಪರಿಸರ ಸಮತೋಲನದ ವಿಷಯದಲ್ಲಿ ಅನ್ಯ ಜೀವಜಂತುಗಳ ಜೊತೆಗೆ ನಾಗನಿಗೂ ಆದ್ಯತೆ ನೀಡಲು ಮರೆಯಲಿಲ್ಲ. ಕೃಷಿಪ್ರಧಾನ ಭಾರತದಲ್ಲಿ ನಾಗನು ಕೃಷಿಯನ್ನು ನಾಶ ಮಾಡುವ ಇತರ ಜಂತುಗಳನ್ನು ನಿಯಂತ್ರಿಸಿ ಧಾನ್ಯವನ್ನು ರಕ್ಷಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಹಾವು ನಿಜವಾಗಿಯೂ ನಿರುಪದ್ರವಿ ಜೀವಿ. ಅದಕ್ಕೆ ಕಿವಿ ಕೇಳಿಸುವುದಿಲ್ಲ, ಕೇವಲ ಸಪ್ಪಳವನ್ನು ಗ್ರಹಸಿ ತನ್ನ ಬೇಟೆಯನ್ನು ಅದು ಕಂಡುಕೊಳ್ಳುತ್ತದೆ. ಅದು ತಾನಾಗಿಯೇ ಯಾರಿಗೂ ಕಚ್ಚುವುದಿಲ್ಲ, ಮೆಟ್ಟಿದಲ್ಲದೇ ಹಾವು ಕಚ್ಚದು ಎಂಬ ಮಾತು ಕೇಳಿದ್ದಿರಲ್ಲವೇ? ಶ್ರಾವಣ ಮಾಸದಲ್ಲಿ ನಾಗಪೂಜೆ ಪುನರ್ಜನ್ಮದ ಸಂಕೇತ ಹಾವು ಎಂಬುದು ಹುಟ್ಟು , ಸಾವು - ಪುನರ್ಜನ್ಮದ ಸಂಕೇತ. ಆಗಾಗ ತನ್ನ ಪೊರೆಯನ್ನು ಕಳಚಿ ಹೊಸ ಜನ್ಮವನ್ನು ಪಡೆಯುತ್ತದೆ. ನಮ್ಮ ಹಿಂದೂ ಧರ್ಮವೂ ಇದನ್ನೇ ಪ್ರತಿಪಾದಿಸುತ್ತದೆ. ಶ್ರಾವಣಮಾಸ ಎಂದರೆ ಮಳೆ ಬೀಳುವ ಸಮಯ , ಈ ಸಮಯ ನಾಗನ ಬಿಲಗಳಲ್ಲಿ ನೀರುತುಂಬುತ್ತವೆ , ಆದ್ದರಿಂದ ನಾಗಗಳು ಬಿಲದಿಂದ ಹೊರಬರುತ್ತವೆ ,ಹೊಲಗದ್ದೆಗಳಲ್ಲಿ ಸುತ್ತಾಡುತ್ತವೆ. ಫಸಲು ಹಾಳುಮಾಡುವ ಜಂತುಗಳನ್ನು ತಿಂದು ಫಸಲು ಹಾಳಾಗದಂತೆ ನೋಡಿಕೊಳ್ಳುತ್ತವೆ. ಹೀಗಾಗಿ ಶ್ರಾವಣ ಮಾಸದಲ್ಲಿ ನಾಗಪೂಜೆಗೆ ಆದ್ಯತೆ ನೀಡುತ್ತಾ ಬಂದಿದ್ದೇವೆ. ದೋಷಗಳನ್ನು ಅತಿಶಯೋಕ್ತಿ ನಾಗಕುಲದವರು ಇಂದ್ರಾದಿ ದೇವತೆಗಳಂತೆ ನಾಗಕುಲದವರು ಕಶ್ಯಪ ಮುನಿಗಳಿಂದ ಕದ್ರೂ ಎಂಬ ನಾಗಮಾತೆಯಿಂದ ಜನಿಸಿದೆ. ಹೀಗಾಗಿ ಜ್ಞಾನಿಗಳು ದೇವತೆಗಳನ್ನು ಗೌರವಿಸಿದಂತೆ ನಾಗಗಳನ್ನು ಗೌರವಿಸುತ್ತಾರೆ. ಗೀತೆಯಲ್ಲಿ ಹೇಳಿದಂತೆ ನಮಗೆ ತಿಳಿಯದಿದ್ದರೂ ಈ ಪೂಜೆ ಭಗವಂತನ ಪೂಜೆಯೇ ಆಗುತ್ತದೆ. ತಿಳಿದು ಪೂಜಿಸಿದರಂತೂ ಅದು ಅತ್ಯಂತ ವಿಶೇಷ. ಈ ಹಬ್ಬ ಪ್ರಕೃತಿಗೆ ಮಾನವ ಕೃತಜ್ಞತೆ ಹೇಳುವ ದಿನ :ಹಬ್ಬಗಳು ಆರಂಭವಾದಂತೆ ಸಂಬಂಧವನ್ನು ಬೆಳಸಲಿಕ್ಕೆ ಹಬ್ಬಗಳು ಬರುವುದು ಮನುಷ್ಯ ಮನುಷ್ಯರ ಸಂಬಂಧವನ್ನು ಬೆಳಸಲಿಕ್ಕೆ ಮತ್ತು ಗಟ್ಟಿಗೊಳಿಸಲಿಕ್ಕೆ. ನಾಗಪಂಚಮಿ ಬಂತೂ ಎಂದರೆ ಹಬ್ಬಗಳು ಆರಂಭವಾದಂತೆ , ನಾಗನಕಟ್ಟೆಗೆ ಹೋಗಿ ನಾಗನಿಗೆ ಹಾಲು ಎಳನೀರು ಆಭಿಷೇಕ ಮಾಡಿ ಬರುವುದೆಂದರೆ ಎಲ್ಲಿಲ್ಲದ ಸಂಭ್ರಮ . ದೊಡ್ಡ ದೊಡ್ಡ ಮರಗಳ ನಡುವೆ ಬುಡದಲ್ಲಿ ನಾಗನ ಕಲ್ಲುಗಳೂ ,ಪಕ್ಕದಲ್ಲಿ ಕೆರೆ ಅಬ್ಬಬ್ಬಾ ಆ ಪರಿಸರವೇ ನಮ್ಮಲ್ಲಿ ಭಯ ಭಕ್ತಿ ಹುಟ್ಟಿಸುತ್ತಿತ್ತು! ಆದರೆ ಇಂದು ಅದಕ್ಕೆ ಗುಡಿಯನ್ನು ಕಟ್ಟಿಸಿ ಮೂಲ ಸ್ವರೂಪವೇ ಮಾಯವಾಗಿ ಸಿಮೆಂಟ್ ಗೋಡೆಗಳ ನಡುವೆ ಬಂಧಿಸಲ್ಪಟ್ಟಿವೆ. ಮಾನವನ ಅಧಿಕ ಪ್ರಸಂಗದಿಂದ ನಾಗಬನದಲ್ಲಿರುವ ಮರಗಳನ್ನು ಕಡಿದು ಅಲ್ಲಿ ನಾಗ ಬನ ಕಾಂಕ್ರಿಟ್ ನಿಂದ ತಯಾರಿಸಿ ತೋರಿಕೆಯ ಪ್ರಸಂಗವಾಗುತ್ತಿದೆ. ನಾಗಗಳು ಈ ಕಾಂಕ್ರಿಟ್ ಬನಕ್ಕೆ ಬರಲಿಕ್ಕಿಲ್ಲ ಈ ರೀತಿಯಾಗಿ ಅದರ ಆವಾಸ ಸ್ಥಾನ ಇರುದಿಲ್ಲ ಹೀಗಾಗಿ ನಾವೆಲ್ಲರೂ ಮೂಲ ನಾಗಬನಗಳನ್ನು ರಕ್ಷಣಿ ಮಾಡಬೇಕಾಗಿದೆ. ಖ್ಯಾತ ಉರಗ ತಜ್ಞ ಗುರುರಾಜ ಸನಿಲ್ ಮಾತಿನಂತೆ ಹೇಳುದಾದರೆ ನಾಗಬನದಲ್ಲಿ ಈ ಹಿಂದೆ ಸುಮಾರು 30-40 ಪ್ರಭೇದದ ಗಿಡ ಮರಗಳಿದ್ದವು ಇದರಿಂದ ಪ್ರಕೃತಿಯ ರಕ್ಷಣೆ ನಡೆಯುತ್ತಿತ್ತು ಆದರೆ ಇಂದು ಅದರ ಚಿತ್ರಣ ಬದಲಾಗಿದೆ. ಮನುಷ್ಯನಿಂದ ಈ ಪ್ರಕೃತಿಗೆ ಯಾವುದೇ ಲಾಭ ಇರಲಾರದು ಆದರೆ ಪ್ರಕೃತಿಯ ನೆರವಿಲ್ಲದೆ ಖಂಡಿತ ಬದುಕು ಅಸಾಧ್ಯ.ಇಂತಹ ಶ್ರೇಷ್ಠ ಪ್ರಕೃತಿಗೆ ನಾಗ ಆರಾಧನೆ ಮೂಲಕ ಕೃತಜ್ಞತೆ ಸಲ್ಲಿಸುವ ಈ ಹಬ್ಬ ನಾಗ ಬನ ಗಳ ರಕ್ಷಣಿ ಮತ್ತು ಸ್ವಚ್ಚ ನಾಗ ಪಂಚಮಿಯತ್ತ ನಮ್ಮ ಚಿತ್ತವಿರಲಿ. ✍

ಉಡುಪಿ : ಕನ್ನಡ ಚಲನಚಿತ್ರ - ಉಡುಪಿ ನ್ಯೂಸ್ ಮುಹೂರ್ತ

Thumbnail
Posted On: 08 Aug 2024, 08:28 PM

ಉಡುಪಿ : ಶ್ರೀ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಕನ್ನಡ ಚಲನಚಿತ್ರ ಉಡುಪಿ ನ್ಯೂಸ್ ನ ಮುಹೂರ್ತ ಜರಗಿತು. ಈ ಸಂದರ್ಭ ಚಲನಚಿತ್ರದ ನಿರ್ದೇಶಕರಾದ ಯಧುಕೃಷ್ಣ, ನಿರ್ಮಾಪಕ ಪಾಪ್ ಸಿನಿಮಾಸ್ ಅಂಡ್ ಜಿ ರ್ ಕೆ ಪ್ರೊಡಕ್ಷನ್, ಲೈನ್ ಪ್ರೊಡ್ಯೂಸರ್ ವಾಧಿರಾಜ್ ಉಪ್ಪೂರು, ಸಂಗೀತ ಸಂದೇಶ್ ಬಾಬಣ್ಣ, ಡಿಒಪಿ ಮಹಾಬಲೇಶ್ವರ ಹೊಳ್ಳ, ಸಂಕಲನ ಸುಬ್ರಮಣ್ಯ ಹೊಳ್ಳ, ಪ್ರಸಾದನ ಪ್ರಭಾಕರ್ ಬೆದ್ರ, ಕಾಸ್ಟ್ಯೂಮ್ ಟಿಕೆನೋ ಡಿಸೈನ್ಸ್, ಆರ್ಟ್ ಡೈರೆಕ್ಟರ್ ದೇವಿ ಪ್ರಕಾಶ್, ಸಹ ನಿರ್ದೇಶಕ ಅನಿಶ್ ಪಿ ಸಿ, ಪ್ರೊಡಕ್ಷನ್ ಮ್ಯಾನೇಜರ್ ಮಹೇಶ್ ಸಹಾಯಕ ನಿರ್ದೇಶಕ ಶ್ರವಣ್ ರೈ, ಯೂನಿಟ್ ಜಿ ರ್ ಕೆ ಸ್ಟುಡಿಯೋ ಬ್ಯಾಂಗಲೋರ್, ಪಿ ರ್ ಓ ನಾಗೇಂದ್ರ, ಪಬ್ಲಿಸಿಟಿ ಡಿಸೈನರ್ ಅಂತೋನಿ ಸ್ಟೆಫೆನ್, ನಟರಾದ ಕರಣ್ ಪೂಜಾರಿ, ಸ್ವಾತಿ, ಪ್ರಕಾಶ್ ಶೆಟ್ಟಿ, ನಿಧಿ, ಶ್ರೀ ನಾಯ್ಕ್ , ಪ್ರತ್ಯುಷಾ ಪ್ರವೀಣ್ ರಾಜ್, ಜಗಪತಿ ಬಾಬು, ರವಾನ್ ಕಟ್ಟಿ ಮಿತ್ರ, ವಿನಯ ಪ್ರಸಾದ್, ಮಲ್ಲಿಕಾ ಶರಾವತಿ, ವಿ ರ್ ಸತೀಶ್ ಆಚಾರ್ಯ ವರಂಗ, ವಸಂತ ಕುಮಾರ ಉಪಸ್ಥಿತರಿದ್ದರು.

ಆಗಸ್ಟ್ 11 : ಪಡುಬಿದ್ರಿಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಆಟಿದ ತಮ್ಮನ

Thumbnail
Posted On: 08 Aug 2024, 08:01 PM

ಪಡುಬಿದ್ರಿ : ಗ್ರಾಮೀಣ ಕಾಂಗ್ರೆಸ್ ಪಡುಬಿದ್ರಿ, ಮಹಿಳಾ ಕಾಂಗ್ರೆಸ್ ಪಡುಬಿದ್ರಿ ಹಾಗೂ ಯುವ ಕಾಂಗ್ರೆಸ್ ಪಡುಬಿದ್ರಿ ಇದರ ಆಶ್ರಯದಲ್ಲಿ ಆಗಸ್ಟ್ 11, ಆದಿತ್ಯವಾರ ಪೂರ್ವಾಹ್ನ ಗಂಟೆ 9.30 ಕ್ಕೆ ಸರಿಯಾಗಿ ಸುಜಾತಾ ಆಡಿಟೋರಿಯಂ ಸಭಾಂಗಣದ ಕಾಂಗ್ರೆಸ್ ಹಿರಿಯ ಮುತ್ಸದ್ದಿ ದಿ.ವೈ ಹಿರಿಯಣ್ಣ ಸಭಾ ವೇದಿಕೆಯಲ್ಲಿ ಆಟಿದ ತಮ್ಮನ ತುಳುನಾಡಿನ ಆಚಾರ ವಿಚಾರಗಳು ನಶಿಸಿ ಹೋಗದಂತೆ ಯುವ ಪೀಳಿಗೆಗೆ ಪ್ರೇರಣೆ ನೀಡುವ ಅಮೋಘ ಕಾರ್ಯಕ್ರಮದ ಜೊತೆಗೆ ವಿಶೇಷ ಆಕರ್ಷಣೆಯಾಗಿ ನೃತ್ಯೋತ್ಸವ ವೈಭವ ಜರುಗಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಗ್ರಾಮೀಣ ಕಾಂಗ್ರೆಸ್ ಸಮಿತಿ ಪಡುಬಿದ್ರಿ ಅಧ್ಯಕ್ಷರಾದ ಕರುಣಾಕರ್ ಎಮ್ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶ್ರೀ ದುರ್ಗಾದೇವಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪಣಿಯೂರು : ಶೈಕ್ಷಣಿಕ ಪರಿಕರಗಳ ವಿತರಣೆ

Thumbnail
Posted On: 07 Aug 2024, 09:24 PM

ಕಾಪು : ಶ್ರೀ ದುರ್ಗಾದೇವಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪಣಿಯೂರು ಇಲ್ಲಿ 2024 -25 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಅದಾನಿ ಫೌಂಡೇಶನ್ ವತಿಯಿಂದ ವಿದ್ಯಾರ್ಥಿಗಳಿಗೆ ನೀಡಲಾದ ಶೈಕ್ಷಣಿಕ ಪರಿಕರಗಳನ್ನು ಬೆಳಪು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಡಾ| ದೇವಿ ಪ್ರಸಾದ್ ಶೆಟ್ಟಿ ವಿತರಿಸಿದರು. ಅದಾನಿ ಸಂಸ್ಥೆಯಿಂದ ಮಕ್ಕಳಿಗಾಗಿ ಕೊಡೆ, ನೋಟ್ಸ್ ಪುಸ್ತಕ, ಬ್ಯಾಗು ಹಾಗೂ ಮಹೇಶ್ ಬೆಳಪು ಇವರು ವಿದ್ಯಾರ್ಥಿಗಳಿಗೆ ಉಚಿತ ಐಡಿ ಕಾರ್ಡ್ ನೀಡಿದರು. ಈ ಸಂದರ್ಭ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಭೋಜ ದೇವಾಡಿಗ, ಉಪಾಧ್ಯಕ್ಷರಾದ ಸುಜಯ, ಮಹೇಶ್ ಬೆಳಪು, ಶಾಲಾ ಪ್ರಭಾರ ಮುಖ್ಯೋಪಾಧ್ಯಾಯರಾದ ಸಾವಿತ್ರಿ, ಶಾಲಾ ಶಿಕ್ಷಕ ವೃಂದ, ಮಕ್ಕಳು, ಪೋಷಕರು ಉಪಸ್ಥಿತರಿದ್ದರು.

ಕಾಪು : ನಿಸರ್ಗ ಫ್ರೆಂಡ್ಸ್ ವತಿಯಿಂದ ಶಂಕರಪುರ ಇನ್ನಂಜೆ ಮಾರ್ಕೆಟ್ ರಸ್ತೆಯಲ್ಲಿ ಶ್ರಮದಾನ

Thumbnail
Posted On: 07 Aug 2024, 09:16 PM

ಕಾಪು : ನಿಸರ್ಗ ಫ್ರೆಂಡ್ಸ್ (ರಿ.) ಇದರ ವತಿಯಿಂದ ಶಂಕರಪುರ ಇನ್ನಂಜೆ ಮಾರ್ಕೆಟ್ ರಸ್ತೆಯಲ್ಲಿ ಸಾರ್ವಜನಿಕರು ಸಂಚರಿಸಲು ಅನಾನುಕೂಲ ವಾಗುತ್ತಿದ ಗಿಡ, ಪೊದೆಗಳನ್ನು ಕಡಿದು ಸ್ಥಳೀಯ ಗ್ರಾಮಸ್ಥರ ಸಹಕಾರ ದೊಂದಿಗೆ ಸ್ವಚ್ಚ ಗೊಳಿಸಲಾಯಿತು. ಗಿಡ, ಪೊದೆಗಳು ರಸ್ತೆಯನ್ನು ಆವರಿಸಿಕೊಂಡಿದ್ದು, ಅಪಘಾತಗಳು ಸಂಭವಿಸುತ್ತಿದವು. ಇಲ್ಲಿನ ಸ್ವಚ್ಛತೆಯ ಮೂಲಕ ನಿಸರ್ಗ ಫ್ರೆಂಡ್ಸ್ ನ ಸದಸ್ಯರು ಆದರ್ಶ ಮೆರೆದಿದ್ದಾರೆ.

ಕಾಪು : ಅಗಲಿದ ಜಯಕರ ಸುವರ್ಣರಿಗೆ ನುಡಿ ನಮನ

Thumbnail
Posted On: 07 Aug 2024, 05:49 PM

ಕಾಪು : ಉಡುಪಿ ಜಿಲ್ಲಾ ಕಾರ್ಯ ಸಂಘದ ಮಾಜಿ ಅಧ್ಯಕ್ಷ ಜಯಕರ ಸುವರ್ಣ ಅವರಿಗೆ ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಬುಧವಾರ ನುಡಿ ನಮನವನ್ನು ಸಂಘದ ಕಛೇರಿಯಲ್ಲಿ ಸಲ್ಲಿಸಲಾಯಿತು. ಸಂಘದ ಅಧ್ಯಕ್ಷ ಹರೀಶ್ ಹೆಜ್ಮಾಡಿ, ಮಾಜಿ ಅಧ್ಯಕ್ಷ ರಾಕೇಶ್ ಕುಂಜೂರು, ಜಿಲ್ಲಾ ಸಮಿತಿಯ ಉಪಾಧ್ಯಕ್ಷ ಬಾಲಕೃಷ್ಣ ಪೂಜಾರಿ ನುಡಿ ನಮನ ಸಲ್ಲಿಸಿದರು. ಸಂಘದ ಕೋಶಾಧಿಕಾರಿ ಹೇಮನಾಥ ಪಡುಬಿದ್ರಿ, ಜಿಲ್ಲಾ ಸಮಿತಿಯ ವಿಜಯ ಉಚ್ಚಿಲ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ದ.ಕ, ಉಡುಪಿ ಜಿಲ್ಲೆ : ಕಾಪು ವಲಯದ 33ನೇ ವಾರ್ಷಿಕ ಸಭೆ

Thumbnail
Posted On: 05 Aug 2024, 07:38 PM

ಕಾಪು : ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಸಂಘಟನೆ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ (ರಿ.) ದಕ್ಷಿಣ ಕನ್ನಡ - ಉಡುಪಿ ಜಿಲ್ಲೆ ಕಾಪು ವಲಯದ 33ನೇ ವಾರ್ಷಿಕ ಸಭೆ ಉಚ್ಚಿಲ ಮಹಾಲಕ್ಷ್ಮಿ ಸಭಾಭವನದಲ್ಲಿ ನಡೆಯಿತು. ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯ ಜಿಲ್ಲಾಧ್ಯಕ್ಷ ಪದ್ಮಪ್ರಸಾದ್ ಜೈನ್ ಸಭೆಯನ್ನು ಉದ್ಘಾಟಿಸಿದರು. ಕಾಪು ವಲಯದ ಅಧ್ಯಕ್ಷ ಸಚಿನ್ ಉಚ್ಚಿಲ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಎಸ್.ಕೆ.ಪಿ.ಎ ದಕ್ಷಿಣ ಕನ್ನಡ -ಉಡುಪಿ ಜಿಲ್ಲೆ ಉಪಾಧ್ಯಕ್ಷ ರಮೇಶ್ ಕಲಾಶ್ರೀ, ಎಸ್.ಕೆ.ಪಿ.ಎ ಸಂಘಟನಾ ಕಾರ್ಯದರ್ಶಿ ಕೃಷ್ಣರಾವ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ ಬಂಟ್ವಾಳ, ಎಸ್.ಕೆ.ಪಿ.ಎ. ವಿವಿಧೋದ್ದೇಶ ಸಹಕಾರಿ ಸಂಘ ನಿ. ನಿರ್ದೇಶಕ ರವಿಕುಮಾರ್ ಕಟಪಾಡಿ, ಎಸ್.ಕೆ.ಪಿ.ಎ.ಕಾಪು ವಲಯ ಗೌರವಾಧ್ಯಕ್ಷ ಕರುಣಾಕರ ನಾಯಕ್, ಜಿಲ್ಲಾ ಕಟ್ಟಡ ಸಮಿತಿ ವಲಯ ಪ್ರತಿನಿಧಿ ವಿನೋದ್ ಕಾಂಚನ್, ವಲಯದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಭಟ್, ವಲಯದ ಉಪಾಧ್ಯಕ್ಷರುಗಳಾದ ಸಂತೋಷ್ ಕಾಪು ಮತ್ತು ಸತೀಶ್ ಎರ್ಮಾಳು, ವಲಯದ ಕೋಶಾಧಿಕಾರಿ ಕಿರಣ್ ಕಾಪು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪಡುಬಿದ್ರಿ ರೋಟರಿ ಕ್ಲಬ್ ಮತ್ತು ಇನ್ನರ್ ವೀಲ್ ಕ್ಲಬ್ ವತಿಯಿಂದ ಆಟಿದ ಗಮ್ಮತ್ತ್

Thumbnail
Posted On: 04 Aug 2024, 05:29 PM

ಪಡುಬಿದ್ರಿ : ಜಾನಪದ ಶೃೆಲಿಯ ಬದುಕು, ಆಹಾರ ಪದ್ದತಿಗಳು ಇಂದಿಗೂ ರೋಗ ಮುಕ್ತ ಜೀವನಕ್ಕೆ ಶಕ್ತಿಯಾಗಿದೆ. ಇಂದಿನ ಅಧುನಿಕ ಆಹಾರ ಪದ್ದತಿಗಳು ಮನುಷ್ಯನ ಆಯುಷ್ಯವನ್ನು ನುಂಗಿ ಬಿಡುತ್ತಿದೆ. ಹಿಂದಿನ ಹಿರಿಯರ ಜೀವನ ನಮ್ಮಗೆಲ್ಲ ಮಾದರಿಯಾಗಿದೆ.‌ ಸೂರ್ಯನ ಬೆಳಕು ಕಡೆಮೆಯಾದಂತೆ ಅಟಿ ತಿಂಗಳಲ್ಲಿ ರೋಗರೋಜಿನ ಗಳು ಹೆಚ್ಚಾಗುತ್ತಿದ್ದವು. ಇದಕ್ಕಾಗಿ ವಿವಿಧ ಗಿಡ ಮೂಲಿಕೆಗಳ ಕಷಾಯ, ಆಹಾರ ಪದಾರ್ಥಗಳನ್ನು ಸೇವಿಸುತ್ತಿದ್ದರು ಎಂದು ಸುರತ್ಕಲ್ ರಿದಮ್ ಫೌಂಡೇಶನ್ ನಿರ್ದೇಶಕ ಸುಧಾಕರ್ ಸಾಲ್ಯಾನ್ ‌ಹೇಳಿದರು. ಅವರು ಪಡುಬಿದ್ರಿ ‌ರೋಟರಿ ಕ್ಲಬ್ ‌ಮತ್ತು ಇನ್ನರ್ ವೀಲ್ ಕ್ಲಬ್ ವತಿಯಿಂದ ಪಡುಬಿದ್ರಿ ಸಹಕಾರ ‌ಸಂಗಮದಲ್ಲಿ ನಡೆದ ಆಟಿದ ಗಮ್ಮತ್ತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭ ತುಳು ಸಾಹಿತಿ, ಜಾನಪದ ವಿದ್ವಾಂಸ ಸುಧಾಕರ್ ಸಾಲ್ಯಾನ್ ರವರನ್ನು ಸನ್ಮಾನಿಸಲಾಯಿತು. ರೋಟರಿ ಅಧ್ಯಕ್ಷೆ ತಸ್ನೀನ್ ಅರಾ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ರೋಟರಿ ಪೂರ್ವಾಧ್ಯಕ್ಷ ಪಿ.ಕೃಷ್ಣ ಬಂಗೇರ, ಇನ್ನರ್ ವೀಲ್ ಅಧ್ಯಕ್ಷೆ ರಾಜೇಶ್ವರಿ ಅವಿನಾಶ್, ರೋಟರಿ ಕಾರ್ಯದರ್ಶಿ ಹೇಮಲತಾ ಸುವರ್ಣ, ಕಾರ್ಯಕ್ರಮ ನಿರ್ದೇಶಕರಾದ ಪುಷ್ಪಲತಾ ಗಂಗಾಧರ್, ಸುನೀತಾ ಭಕ್ತವತ್ಸಲ ಉಪಸ್ಥಿತರಿದ್ದರು. ತಸ್ನೀನ್ ಅರಾ ಸ್ವಾಗತಿಸಿದರು. ಸಂತೋಷ್ ಪಡುಬಿದ್ರಿ ಪ್ರಸ್ತಾವನೆಗೃೆದರು. ಬಿ.ಎಸ್ ಆಚಾರ್ಯ ನಿರೂಪಿಸಿದರು. ಸ್ನೇಹಾ ಪ್ರವೀಣ್ ವಂದಿಸಿದರು. ಆಟಿ ತಿಂಗಳ ವಿಶೇಷ ಆಹಾರ ಪದಾರ್ಥಗಳನ್ನು ಉಣ ಬಡಿಸಲಾಯಿತು.

ಪಲಿಮಾರು : ಹೊೖಗೆ ಫ್ರೆಂಡ್ಸ್ ವತಿಯಿಂದ ಆಟಿ ಅಮಾವಾಸ್ಯೆಯ ಔಷಧೀಯ ಕಷಾಯ ವಿತರಣೆ

Thumbnail
Posted On: 04 Aug 2024, 05:15 PM

ಪಲಿಮಾರು : ಹೊೖಗೆ ಫ್ರೆಂಡ್ಸ್ ಹೊೖಗೆ (ರಿ.) ಪಲಿಮಾರು ಸಂಸ್ಥೆಯ ವತಿಯಿಂದ ಸತತ ಐದನೇ ವರುಷದ ಆಟಿ ಅಮಾವಾಸ್ಯೆಯ ಔಷಧೀಯ ಕಷಾಯ ವಿತರಿಸಲಾಯಿತು. ಪಲಿಮಾರು ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನ ಅರ್ಚಕರಾದ ಶ್ರೀನಿವಾಸ ಉಡುಪ, ಶರತ್ ಉಡುಪ, ಹೊೖಗೆ ಫ್ರೆಂಡ್ಸ್ ಸಂಸ್ಥೆಯ ಅಧ್ಯಕ್ಷರಾದ ರಿತೇಶ್ ದೇವಾಡಿಗ, ಉಪಾಧ್ಯಕ್ಷ ಸಂತೋಷ್ ದೇವಾಡಿಗ, ಕಾರ್ಯದರ್ಶಿ ಸತೀಶ ಕುಮಾರ್, ರಾಘವೇಂದ್ರ ಸುವರ್ಣ, ಜ್ಞಾನೇಶ್ , ಲಕ್ಷ್ಮಣ್ ಕೋಟ್ಯಾನ್, ಅರುಣ್ ಪೂಜಾರಿ, ರೋಷನ್, ಶ್ರೀನಿತ್, ಶ್ರೀಜಿತ್, ಅಂಕಿತ್, ಸಂಪತ್ ಉಪಸ್ಥಿತರಿದ್ದರು.

ತೆಂಕ ಎರ್ಮಾಳು ಅಟೋ ರಿಕ್ಷಾ ನಿಲ್ದಾಣಕ್ಕೆ ಸಿಮೆಂಟ್ ಬೆಂಚ್‌ಗಳ ಕೊಡುಗೆ

Thumbnail
Posted On: 04 Aug 2024, 04:57 PM

ಎರ್ಮಾಳು : ತೆಂಕ ಎರ್ಮಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಅಟೋ ರಿಕ್ಷಾ ನಿಲ್ದಾಣಕ್ಕೆ ಬಹುದಿನಗಳ ಬೇಡಿಯ ಸಿಮೆಂಟ್ ಬೆಂಚ್‌ಗಳನ್ನು ದಾನಿಯೋರ್ವರು ನೀಡಿದ್ದು, ಈ ಸಂದರ್ಭ ಅವರನ್ನು ಎರ್ಮಾಳು ಅಟೋ ಯೂನಿಯನ್ ವತಿಯಿಂದ ಗೌರವಿಸಲಾಯಿತು. ಪೂಂದಾಡು ಕುಟ್ಟಿ ಪೂಜಾರಿಯವರ ಪುತ್ರ ದಿನೇಶ್ ಪೂಜಾರಿಯವರು ಸುಮಾರು ಇಪ್ಪತ್ತು ಸಾವಿರ ರೂಪಾಯಿ ಮೌಲ್ಯದ ನಾಲ್ಕು ಸಿಮೆಂಟ್ ಬೆಂಚ್‌ಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಈ ಸಂದರ್ಭ ಎರ್ಮಾಳು ಅಟೋ ಚಾಲಕ ಮಾಲಕ ಸಂಘದ ಅಧ್ಯಕ್ಷ ಸುರೇಶ್ ಎರ್ಮಾಳ್, ಉಪಾಧ್ಯಕ್ಷ ರಾಜು ಪೂಜಾರಿ, ಕಾರ್ಯದರ್ಶಿ ಭರತ್ ಶೆಟ್ಟಿಗಾರ್, ಕೋಶಾಧಿಕಾರಿ ನದೀಮ್, ತೆಂಕ ಗ್ರಾ.ಪಂ. ಸದಸ್ಯರಾದ ಸಂತೋಷ್, ಮನೋಜ್ ಹಾಗೂ ಅಟೋ ಯೂನಿಯನ್ ಸದಸ್ಯರು ಉಪಸ್ಥಿತರಿದ್ದರು.