Updated News From Kaup

ಕಳತ್ತೂರು ಆರೋಗ್ಯ ಉಪ ಕೇಂದ್ರಕ್ಕೆ ಕುಡಿಯುವ ನೀರಿನ ಟ್ಯಾಂಕ್ ಕೊಡುಗೆ

Posted On: 17-05-2022 05:08PM

ಕಾಪು : ಕಾಪು ಪರಿಸರದ ಸಮಾಜ ಸೇವೆಯಲ್ಲಿ ರಾಷ್ಟೀಯ ಪ್ರಶಸ್ತಿ ಪುರಸ್ಕೃತರುಗಳಾದ ಕಾಪು ಸಮಾಜ ಸೇವಾ ವೇದಿಕೆ ಅಧ್ಯಕ್ಷರಾದ ಮೊಹಮ್ಮದ್ ಫಾರೂಕ್ ಚಂದ್ರನಗರ ಜನಸಂಪ್ರ್ಕ ಜನಸೇವಾ ವೇದಿಕೆ ಅಧ್ಯಕ್ಷರಾದ ದಿವಾಕರ ಬಿ ಶೆಟ್ಟಿ ಕಳತ್ತೂರು,ಉಭಯ ವೇದಿಕೆ ಸಂಚಾಲಕರುಗಳಾದ ದಿವಾಕರ ಡಿ ಶೆಟ್ಟಿ ಕಳತ್ತೂರು ಇವರು ವೈಯಕ್ತಿಕವಾಗಿ ಕಳತ್ತೂರು ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಆರೋಗ್ಯ ಉಪ ಕೇಂದ್ರ ಕಳತ್ತೂರುಗೆ 1000 ಲೀಟರ್ ನ ಕುಡಿಯುವ ನೀರಿನ ಟ್ಯಾಂಕ್ ಕೊಡುಗೆಯಾಗಿ ಹಸ್ತಾಂತರಿಸಿದರು.)

ಕಾಪು : ಮುಂಬೈ ಪೊಲೀಸ್ ಉಪ ಮಹಾನಿರೀಕ್ಷಕ ವೀರೇಶ್ ಪ್ರಭುರವರಿಂದ ಶಿಲಾ ಸೇವೆ, ಶಿಲಾ ಪುಷ್ಪ ಸಮರ್ಪಣೆ

Posted On: 17-05-2022 04:44PM

ಕಾಪು : ಪೊಲೀಸ್ ಉಪ ಮಹಾನಿರೀಕ್ಷಕ, ಡಿಐಜಿ ಮುಂಬೈ ಕ್ರೈಮ್ ವೀರೇಶ್ ಪ್ರಭು, ಬೈಕಲ, ಮುಂಬೈ ಇವರು ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ 9 ಶಿಲಾ ಸೇವೆ ನೀಡಿ, ಶಿಲಾ ಪುಷ್ಪ ಸಮರ್ಪಣೆ ಮಾಡಿದರು.

ಅಕ್ರಮ ಗೋಸಾಗಾಟ, ಕಸಾಯಿಖಾನೆಗಳ ವಿರುದ್ಧ ಕ್ರಮ ಕೈಗೊಳ್ಳಲು ಮನವಿ ; ಬೃಹತ್ ಪ್ರತಿಭಟನೆಯ ಎಚ್ಚರಿಕೆ

Posted On: 16-05-2022 11:36PM

ಪಡುಬಿದ್ರಿ : ವಿಶ್ವ ಹಿಂದು ಪರಿಷದ್, ಬಜರಂಗದಳ ಕಾಪು ಪ್ರಖಂಡ ವತಿಯಿಂದ ಪಡುಬಿದ್ರಿ ಸುತ್ತ ಮುತ್ತ ನಡೆಯುವ ಅಕ್ರಮ ಗೋಸಾಗಾಟ, ಕಸಾಯಿಖಾನೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮೇ. 16ರಂದು ಪಡುಬಿದ್ರಿ ಪೋಲಿಸ್ ಠಾಣೆಗೆ ಮನವಿ ನೀಡಲಾಯಿತು.

ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ ; ಜಿಲ್ಲಾಡಳಿತದಿಂದ ಪ್ರಕಟನೆ

Posted On: 16-05-2022 10:19PM

ಉಡುಪಿ : ಭಾರತೀಯ ಹವಾಮಾನ ಇಲಾಖೆ ಹೊರಡಿಸಿರುವ ಮುನ್ಸೂಚನೆಯಂತೆ ಕರ್ನಾಟಕದ ಕರಾವಳಿ ಭಾಗದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯು ಮುಂದುವರಿಯುವ ಸಾಧ್ಯತೆಯಿರುವ ಕಾರಣ ಮೇ 17 ಮತ್ತು 19ರವರೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಮತ್ತು ದಿನಾಂಕ 16 ರಂದು ರೆಡ್ ಅಲರ್ಟ್ ಘೋಷಿಸಲಾಗಿದೆ.

ಮಾಸ್ಟರ್ ಪ್ರಥಮ್ ಕಾಮತ್ ಕಟಪಾಡಿ ಇವರಿಗೆ ಸಂಗಮ ರತ್ನ ರಾಷ್ಟ್ರೀಯ ಪ್ರಶಸ್ತಿ

Posted On: 16-05-2022 09:59PM

ಕಟಪಾಡಿ : ಡಾ| ಶಿವಕುಮಾರ ಸ್ವಾಮೀಜಿಯವರ ಜಯಂತಿ ಅಂಗವಾಗಿ ಸಂಗಮ ಸಮಾವೇಶ ಸಮಾರಂಭ ಮತ್ತು ಜನಸ್ಪಂದನ ಪತ್ರಿಕೆಯ 13ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ನೀಡಲಿರುವ ಸಂಗಮ ರತ್ನ ರಾಷ್ಟ್ರೀಯ ಪ್ರಶಸ್ತಿಗಾಗಿ ಬಹುಮುಖ ಪ್ರತಿಭೆ ಮಾ.ಪ್ರಥಮ್ ಕಾಮತ್ ಕಟಪಾಡಿ ಇವರು ಆಯ್ಕೆಯಾಗಿರುತ್ತಾರೆ.

ಉಡುಪಿ ಜಿಲ್ಲಾ ಕುಲಾಲ ಕುಂಬಾರ ಸಂಘಟನೆ ಇಡೀ ರಾಜ್ಯಕ್ಕೆ ಮಾದರಿ : ಡಾ.ಎಂ.ಅಣ್ಣಯ್ಯ ಕುಲಾಲ್ ಉಳ್ತೂರು

Posted On: 16-05-2022 08:44PM

ಉಡುಪಿ : ಜಿಲ್ಲಾ ಕುಲಾಲ ಕುಂಬಾರ ಸಂಘಟನೆಗಳ ಒಗ್ಗಟ್ಟು ಇಡೀ ರಾಜ್ಯಕ್ಕೆ ಮಾದರಿ, ಹಿರಿ ಕಿರಿಯ ನಾಯಕರುಗಳನ್ನ ಗಟ್ಟಿಯಾಗಿ ಬೆಸೆದು ಕ್ರೀಡಾ ಸಂಘಟನೆಯ ಮೂಲಕ ಸಾಮಾಜಿಕ ಶೈಕ್ಷಣಿಕ ಆರ್ಥಿಕ ಮತ್ತೂ ರಾಜಕೀಯ ಹೋರಾಟಗಳ ಮೂಲಕ, ಇಡೀ ರಾಜ್ಯದ ಯುವ ಸಂಘಟನೆ ಗಳಿಗೆ ಪ್ರೇರಣೆ ಆಗುವಂತೆ ಬೆಳೆದು ನಿಂತ ಉಡುಪಿ ಜಿಲ್ಲಾ ಯುವ ವೇದಿಕೆ ಅದರ ಬೆಳವಣಿಗೆಗೆ ಕಾರಣರಾದ ಜಿಲ್ಲೆಯ ಎಲ್ಲಾ ಹಿರಿಯ ಯುವ ವೇಧಿಕೆಯ ನಾಯಕರುಗಳಿಗೆ ಇದರ ಶ್ರೇಯಸ್ಸು ಸಲ್ಲಬೇಕು. ಎಂದು ಡಾ.ಎಂ.ಅಣ್ಣಯ್ಯ ಕುಲಾಲ್ ಉಳ್ತೂರು ಹೇಳಿದರು. ಅವರು ಕಾರ್ಕಳದಲ್ಲಿ ಕುಲಾಲ ಟ್ರೋಫಿ ಉದ್ಘಾಟಿಸಿ ಮಾತನಾಡಿದರು.

ವಿಶ್ವಭಾರತಿ ಕಾಪು ವತಿಯಿಂದ ಸಮಾಜ ಸೇವಕ ಫಾರೂಕ್ ಚಂದ್ರನಗರ, ಸಾಯಿನಾಥ್ ಶೇಟ್ ಕುಂದಾಪುರ ಹಾಗೂ ಪ್ರಭಾಕರ ಆಚಾರ್ಯ ಮೂಡುಬೆಳ್ಳೆಗೆ ಸಮ್ಮಾನ

Posted On: 16-05-2022 05:58PM

ಕಾಪು : ವಿಶ್ವಭಾರತಿ ಕಾಪು ವತಿಯಿಂದ ಸ್ವದೇಶಿ ಮೇಳದ ಸಭಾಂಗಣ ವೇದಿಕೆಯಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಮೊಹಮ್ಮದ್ ಫಾರೂಕ್ ಚಂದ್ರನಗರ, ಸಾಯಿನಾಥ್ ಶೇಟ್ ಕುಂದಾಪುರ ಹಾಗೂ ಕಲಾವಿದ ಪ್ರಭಾಕರ ಆಚಾರ್ಯ ಮೂಡುಬೆಳ್ಳೆ ಇವರಿಗೆ ಸನ್ಮಾನ ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಶ್ರೀಕೃಷ್ಣ ದರ್ಶನ ಬಿಡುಗಡೆ

Posted On: 16-05-2022 04:56PM

ಮುಂಬಯಿ : ಇಲ್ಲಿಯ ಸಯಾನ್ ಗೋಕುಲದ ಗೋಪಾಲಕೃಷ್ಣ ದೇವರ ಪುನಃ ಪ್ರತಿಷ್ಠೆ - ಬ್ರಹ್ಮಕಲಶಾಭಿಷೇಕ ಧಾರ್ಮಿಕ - ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪ ಸಮಾರಂಭವು ಷಣ್ಮುಖಾನಂದ ಸಭಾಗೃಹದಲ್ಲಿ ನಡೆಯಿತು.

ಶಿರ್ವ ಟು ಕಾಪು ; ಕಾಪು ಟು ಶಿರ್ವ - ಪಿಎಸ್ಐಗಳ ವರ್ಗಾವಣೆ

Posted On: 15-05-2022 04:26PM

ಕಾಪು : ಸರಕಾರದ ಆದೇಶದಂತೆ ಶಿರ್ವ ಠಾಣೆಯ ಪಿಎಸ್ಐ ಶ್ರೀಶೈಲ ಡಿ ಮುರಗೊಡ್ ಕಾಪು ಠಾಣೆಗೆ ವರ್ಗಾವಣೆಗೊಂಡಿದ್ದಾರೆ.

ಪಡುಬಿದ್ರಿ ಪಂಚಾಯತ್ಗೆ ಕಸ ಸಾಗಾಟ ವಾಹನ ಕೊಡುಗೆ

Posted On: 15-05-2022 10:35AM

ಪಡುಬಿದ್ರಿ : ಅದಾನಿ ಫೌಂಡೇಶನ್ ಹಾಗೂ ಉಡುಪಿ ಪವರ್ ಕಾರ್ಪೋರೇಷನ್ ಸಿಎಸ್‌ಆರ್ ನಿಧಿಯಿಂದ ಪಡುಬಿದ್ರಿ ಗ್ರಾಮ ಪಂಚಾಯತ್ ಗೆ ಸುಮಾರು 8.50 ಲಕ್ಷ ರೂ. ವೆಚ್ಚದ ಕಸ ಸಾಗಾಟ ವಾಹನವನ್ನು ಪಡುಬಿದ್ರಿ ಗ್ರಾಮ ಪಂಚಾಯತ್ ವಠಾರದಲ್ಲಿ ಮೇ 14 ರಂದು ಅದಾನಿ ಸಮೂಹ ಸಂಸ್ಥೆಯ ಅಧ್ಯಕ್ಷ ಕಿಶೋರ್ ಆಳ್ವ ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷ ರವಿ ಶೆಟ್ಟಿ ಪಾದೆಬೆಟ್ಟು ಅವರಿಗೆ ಹಸ್ತಾಂತರಿಸಿದರು.