Updated News From Kaup

ಕೊಂಕಣ್ ರೈಲ್ವೇಸ್ನಿಂದ ಜಿಲ್ಲಾ ಆರೋಗ್ಯ ಇಲಾಖೆಗೆ ವಾಹನ ಹಸ್ತಾಂತರ

Posted On: 30-03-2022 10:17PM

ಉಡುಪಿ : ಕೊಂಕಣ್ ರೈಲ್ವೇಸ್ ಮುಂಬೈ ಇವರ ವತಿಯಿಂದ ಸಿ.ಎಸ್.ಆರ್ (ಸಾಮಾಜಿಕ ಹೊಣೆಗಾರಿಕೆ ಕಾರ್ಯನೀತಿ) ಅನುದಾನದಡಿಯಲ್ಲಿ ಮಹೇಂದ್ರ ಬೊಲೇರೋ ವಾಹನವನ್ನು ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ, ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಮುಖಾಂತರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ನಾಗಭೂಷಣ ಉಡುಪ ಹೆಚ್ ಇವರಿಗೆ ಹಸ್ತಾಂತರಿಸಲಾಯಿತು.

ಏಪ್ರಿಲ್ 1 : ಶಿವದೂತೆ ಗುಳಿಗೆ ಯಶಸ್ಸಿನ ಬಳಿಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಇವರ ಮತ್ತೊಂದು ತುಳು ನಾಟಕ ಮಣಿಕಂಠ ಮಹಿಮೆ ಉಡುಪಿಯಲ್ಲಿ ಪ್ರಥಮ ಪ್ರದರ್ಶನ

Posted On: 28-03-2022 11:23PM

ಉಡುಪಿ : ತುಳುನಾಡು ಅಲ್ಲದೇ ಬೇರೆ ಬೇರೆ ಕಡೆಯಲ್ಲಿ ಅದ್ಭುತ ಪ್ರದರ್ಶನ ನೀಡಿರುವ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಇವರ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಶಿವದೂತೆ ಗುಳಿಗೆ ತಂಡದಿಂದ ಮತ್ತೊಂದು ಸಂಚಲನ ಮೂಡಿಸುವ ತುಳು ನಾಟಕ ಮಣಿಕಂಠ ಮಹಿಮೆ ರೋಯಲ್ ಫ್ರೆಂಡ್ಸ್, ಮಲ್ಪೆ-ಉಡುಪಿ ಪ್ರಾಯೋಜಕತ್ವದಲ್ಲಿ ಉಡುಪಿ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಉಡುಪಿಯ ಅಜ್ಜರಕಾಡುವಿನಲ್ಲಿರುವ ಉಡುಪಿ ಪುರಭವನದಲ್ಲಿ ಏಪ್ರಿಲ್‌ 1 ರಂದು ಸಂಜೆ 6:30ಕ್ಕೆ ಪ್ರಥಮ ಪ್ರದರ್ಶನವಾಗಲಿದೆ.

ಎಐಐಯು ಸಾಫ್ಟ್ ಬಾಲ್ ಟೂರ್ನಮೆಂಟ್ನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಲಿರುವ ವಿಧಾತ್ ಶೆಟ್ಟಿ

Posted On: 28-03-2022 10:57PM

ಶಿರ್ವ : ಇಲ್ಲಿನ ಸಂತ ಮೇರಿ ಮಹಾವಿದ್ಯಾಲಯದ ತೃತೀಯ ಬಿಸಿಎ ವಿದ್ಯಾರ್ಥಿ ವಿಧಾತ್ ಶೆಟ್ಟಿ ಆಂಧ್ರಪ್ರದೇಶದ ಗುಂಟೂರಿನಲ್ಲಿ ಇರುವ ಆಚಾರ್ಯ ನಾಗಾರ್ಜುನ ಯುನಿವರ್ಸಿಟಿಯಲ್ಲಿ ಮಾರ್ಚ್ 24ರಿಂದ 30ರವರೆಗೆ ನಡೆಯಲಿರುವ ಆಲ್ ಇಂಡಿಯಾ ಇಂಟರ್ ಯೂನಿವರ್ಸಿಟಿ ಸಾಫ್ಟ್ ಬಾಲ್ ಟೂರ್ನಮೆಂಟ್ ನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಲಿದ್ದಾರೆ ಎಂದು ಪ್ರಾಂಶುಪಾಲರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಬ್ರಹ್ಮಶ್ರೀ ನಾರಾಯಣಗುರು ಭಜನಾ ಮಂದಿರ ಪಡುಕರೆ : 86ನೇ ವಾರ್ಷಿಕ ಮಂಗಲೋತ್ಸವ

Posted On: 28-03-2022 10:49PM

ಉಡುಪಿ : ಬ್ರಹ್ಮಶ್ರೀ ನಾರಾಯಣಗುರು ಭಜನಾ ಮಂದಿರ (ರಿ.) ಪಡುಕರೆ ಇದರ 86ನೇ ವಾರ್ಷಿಕ ಮಂಗಲೋತ್ಸವವು ಮಾಚ್೯ 28 ರಿಂದ ಏಪ್ರಿಲ್ 03 ರವರೆಗೆ ಜರಗಲಿದೆ.

ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಏಪ್ರಿಲ್ 1ರಿಂದ 15ರವರೆಗೆ ಪುನರ್ ಪ್ರತಿಷ್ಠೆ, ಬ್ರಹ್ಮಕಲಶ ಪುಣ್ಯೋತ್ಸವ, ರಥೋತ್ಸವ, ಚತು:ಪವಿತ್ರ ನಾಗಮಂಡಲೋತ್ಸವ

Posted On: 28-03-2022 08:34PM

ಉಚ್ಚಿಲ : ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಶ್ರೀ ಕ್ಷೇತ್ರ ಉಚ್ಚಿಲ ಇದರ ಪುನರ್ ಪ್ರತಿಷ್ಠೆ, ಬ್ರಹ್ಮಕಲಶ ಪುಣೋತ್ಸವ, ರಥೋತ್ಸವ, ಚತುಃಪವಿತ್ರ ನಾಗಮಂಡಲೋತ್ಸವ ಕಾರ್ಯಕ್ರಮಗಳು ಏಪ್ರಿಲ್ 1 ರ ಶುಕ್ರವಾರದಿಂದ 15 ನೇ ತಾರೀಕಿನವರೆಗೆ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರು ಜಿರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ನಾಡೋಜ ಡಾ|ಜಿ ಶಂಕರ್ ಹೇಳಿದರು. ಅವರು ಗುರುವಾರ ಉಚ್ಚಿಲ ಮೊಗವೀರ ಭವನದಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಯುವವಾಹಿನಿ ಕಾಪು ಘಟಕದ 2022 ನೇ ಸಾಲಿನ ಪದಗ್ರಹಣ, ಸಮ್ಮಾನ

Posted On: 28-03-2022 08:29PM

ಕಾಪು,ಮಾ.28 : ಯುವವಾಹಿನಿ (ರಿ.) ಕಾಪು ಘಟಕದ 2022ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಕಾಪು ಜೇಸಿಐ ಭವನದಲ್ಲಿ ಜರಗಿತು.

ಪಾಂಗಾಳ ಗುಡ್ಡೆ ಬ್ರಹ್ಮ ಬೈದೇರುಗಳ ಗರಡಿಯಲ್ಲಿ ಹರಕೆಯ ಹೂವಿನ ಪೂಜೆ ಸಲ್ಲಿಸಿದ ಸಚಿವ ಸುನೀಲ್ ಕುಮಾರ್

Posted On: 27-03-2022 10:38PM

ಕಟಪಾಡಿ : ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಇಂಧನ ಇಲಾಖೆಯ ಸಚಿವರಾದ ಸುನೀಲ್ ಕುಮಾರ್ ಹಾಗೂ ಅವರ ಕುಟುಂಬಸ್ಥರು ಮಾಚ್೯ 27 ರಂದು ಪಾಂಗಾಳ ಗುಡ್ಡೆ ಬ್ರಹ್ಮ ಬೈದೇರುಗಳ ಗರಡಿಯಲ್ಲಿ ಹರಕೆಯ ಹೂವಿನ ಪೂಜೆಯನ್ನು ಸಲ್ಲಿಸಿದರು.

ಅವರಾಲು : ಧೂಮಾವತಿ ದೈವಸ್ಥಾನ - ವರ್ಷಾವಧಿ ನೇಮೋತ್ಸವ

Posted On: 27-03-2022 06:12PM

ಹೆಜಮಾಡಿ : ಅವರಾಲು ಶ್ರೀ ಧೂಮಾವತಿ ದೈವಸ್ಥಾನದ ವರ್ಷಾವಧಿ ನೇಮೋತ್ಸವವು ಮಾಚ್೯ 29 ಮತ್ತು 30 ರಂದು ಜರಗಲಿದೆ.

ಇನ್ನಂಜೆಯಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ವತಿಯಿಂದ ಸಂತಸದ ಶಿಬಿರ - ಸುದರ್ಶನ ಕ್ರಿಯಾ, ಯೋಗ, ಪ್ರಾಣಯಾಮ, ಧ್ಯಾನ, ಜ್ಞಾನಗಳ ಸುಂದರ ಮಿಶ್ರಣ

Posted On: 25-03-2022 10:36PM

ಕಾಪು : ಜೀವನದಲ್ಲಿ ಸಂತೋಷ, ಯಶಸ್ವಿ ಮತ್ತು ಆರೋಗ್ಯವಾಗಿರಬೇಕೆನ್ನುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ವತಿಯಿಂದ ಸಂತಸದ ಶಿಬಿರ (ಸುದರ್ಶನ ಕ್ರಿಯಾ, ಯೋಗ, ಪ್ರಾಣಯಾಮ, ಧ್ಯಾನ, ಜ್ಞಾನಗಳ ಸುಂದರ ಮಿಶ್ರಣ) ಮಾಚ್೯ 28 ರಿಂದ ಏಪ್ರಿಲ್‌ 2ರವರೆಗೆ ಬೆಳಿಗ್ಗೆ ಘಂಟೆ 5 ರಿಂದ 7ರವರೆಗೆ ಇನ್ನಂಜೆ ಶಾಲೆಯ ಹತ್ತಿರದ ದಾಸ ಭವನದಲ್ಲಿ ನಡೆಯಲಿದೆ.

ಹೆಜಮಾಡಿ : ಸುರತ್ಕಲ್ ಟೋಲ್ ಗೇಟ್ ತೆರವಿಗೆ ಆಗ್ರಹಿಸಿ ಬೃಹತ್ ಪಾದಯಾತ್ರೆಗೆ ಚಾಲನೆ

Posted On: 22-03-2022 12:03PM

ಹೆಜಮಾಡಿ : ಸುರತ್ಕಲ್‌ನ ಎನ್.ಐ.ಟಿ.ಕೆ. ಬಳಿಯ ಟೋಲ್ ಗೇಟನ್ನು ಶೀಘ್ರವಾಗಿ ತೆರವುಗೊಳಿಸುವಂತೆ ಆಗ್ರಹಿಸಿ ಮಾಚ್೯ 22ರಂದು ಬೃಹತ್ ಪಾದಯಾತ್ರೆಗೆ ವಿವಿಧ ಪಕ್ಷ, ಸಂಘ-ಸಂಸ್ಥೆ ಮತ್ತು ಸಂಘಟನೆಗಳ ಮುಖಂಡರ ಸಮ್ಮುಖದಲ್ಲಿ ಹೆಜಮಾಡಿ ಟೋಲ್ ಗೇಟ್ ಬಳಿ ಚಾಲನೆ ನೀಡಲಾಯಿತು.