Updated News From Kaup

ಮೊಬೈಲ್ನಲ್ಲಿ ಲೋನ್ ಆ್ಯಪ್ ಗಳನ್ನು ಬಳಸುವಾಗ ಜಾಗೃತರಾಗಿ ; ಪೋಲೀಸ್ ಇಲಾಖೆಯಿಂದ ಎಚ್ಚರಿಕೆ

Posted On: 12-01-2022 07:00PM

ಮಂಗಳೂರು : ಸುರತ್ಕಲ್ ಠಾಣಾ ವ್ಯಾಪ್ತಿಯಲ್ಲಿ ಸುಶಾಂತ ಕುಮಾರ್ (26) ಎನ್ನುವಾತ ತಾನು ಕೆಲಸ ಮಾಡುವ ಸ್ಥಳದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಆತನು ತನ್ನ ಡೆತ್‌ನೋಟ್‌ನಲ್ಲಿ ಸಾಲ ಮಾಡಿರುವುದಾಗಿ ಹಾಗೂ ಆನ್‌ಲೈನ್‌ ಲೋನ್ ಬಗ್ಗೆ ನಮೂದಿಸಿದ್ದು, ಆನ್‌ಲೈನ್ ಲೋನ್ ಆ್ಯಪ್ ನವರು ಕಿರುಕುಳ ನೀಡಿದ್ದು ಎಂದು ನಮೂದಿಸಿದ್ದ ಈ ಬಗ್ಗೆ ಸುರತ್ಕಲ್ ಠಾಣೆ ಪ್ರಕರಣ ದಾಖಲಾಗಿರುತ್ತದೆ. ಇದೀಗ ಸಾರ್ವಜನಿಕರು ಅಂತಹ ಆ್ಯಪ್ ಗಳ ಬಗ್ಗೆ ಜಾಗರೂಕರಾಗಿರಬೇಕೆಂದು ಎಚ್ಚರಿಸಿದ್ದಾರೆ.

ಲೋನ್ ಆ್ಯಪ್ ಪ್ರಾರಂಭದಲ್ಲಿ ಚೈನದಲ್ಲಿ ಆರಂಭವಾಗಿದ್ದು, ನ್ಯೂಯ್ಡ ಲೋನ್ ಆ್ಯಪ್ ಎನ್ನುವ ಆ್ಯಪ್ ಕೂಡ ಚಾಲನೆಯಲ್ಲಿ ಇತ್ತು. ಅಂದರೆ ಈ ಆ್ಯಪ್‌ನ್ನು ಇನ್‌ಸ್ಟಾಲ್‌ ಮಾಡುವಾಗ ಬತ್ತಲೆ ಫೋಟೋವನ್ನು ಪಡೆಯುತ್ತಿದ್ದು, ಒಂದು ವೇಳೆ ಸರಿಯಾಗಿ ಲೋನ್ ಕಟ್ಟದಿದ್ದರೆ ಬೇರೆಯವರಿಗೆ ಕಳುಹಿಸುವುದಾಗಿಯೂ ಹೆದರಿಸುತ್ತಿದ್ದರು.

ಭಾರತದಲ್ಲಿ ಸುಮಾರು 600ಕ್ಕಿಂತ ಹೆಚ್ಚು ಲೋನ್‌ ಆ್ಯಪ್‌ಗಳು ಇದ್ದು, ಇವುಗಳಿಗೆ ಯಾವುದೇ ಆರ್‌ಬಿಐನಿಂದ ಮಾನ್ಯತೆ ಇರುವುದಿಲ್ಲ. ಇವುಗಳು ಪ್ಲೇಸ್ಟೋರ್‌ನಲ್ಲಿ ಡೌನ್‌ಲೋಡ್ ಮಾಡುವಂತ ಆ್ಯಪ್ ಆಗಿದ್ದು, ಇನ್‌ಸ್ಟಾಲ್‌ ಮಾಡುವಾಗ ಅನೇಕ ಅನುಮತಿಯನ್ನು ಕೇಳುತ್ತಾರೆ. ಉದಾಹರಣೆಗೆ ಕಾಂಟಾಕ್ಟ್, ವಿಡಿಯೋ ಫೋಟೋ ಕ್ಯಾಮಾರ ಇತ್ಯಾದಿಗಳಿಗೆ ಅನುಮತಿಯನ್ನು ಕೇಳುತ್ತಾರೆ. ಎಲ್ಲಾದಕ್ಕೂ ಎಸ್ ಎಸ್ ಹಾಕಿ ಇನ್ ಸ್ಟಾಲ್ ಮಾಡಿದ ನಂತರ ಸಣ್ಣ ಪ್ರಮಾಣದ ಸಾಲ ಅಂದರೆ ರೂ 3000/- ಅಥವಾ 5000/- ಹಣ ನೀಡುತ್ತಾರೆ. ನಂತರ ಸಾಲವನ್ನು ಹಿಂತಿರುಗಿಸುವಾಗ 30 ರಿಂದ 60 % ಬಡ್ಡಿಯನ್ನು ವಿಧಿಸಿ ಸಾಲ ಚುಕ್ತ ಮಾಡಲು ಹೇಳುತ್ತಾರೆ. ಒಂದು ವೇಳೆ ಸಾಲವನ್ನು ಹಿಂದುರಿಗಿಸಲು ಇದ್ದಲ್ಲಿ ಅವರ ಕಾಂಟಾಕ್ಟ್, ನಂಬ್ರಗೆ ಪೋನ್ ಮಾಡಿ ಲೋನ್ ಪಡೆದವರ ಬಗ್ಗೆ ಹೇಳುವುದಾಗಿಯೂ, ಯಾವುದಾದರೂ ಫೋಟೋ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವುದಾಗಿ ಹೆದರಿಸುತ್ತಾರೆ. ಕ್ರೇಡಿಟ್ ರೇಟ್ ಕಡಿಮೆಯಾಗುತ್ತದೆ. ನಿಮ್ಮ ಮೇಲೆ 420, ಚೀಟಿಂಗ್ ಕೇಸ್ ಬುಕ್ ಮಾಡುವುದಾಗಿ ಹೇಳುತ್ತಾರೆ. ಕೆಲವೊಮ್ಮೆ ಪ್ರಕರಣ ದಾಖಲಾಗಿವೆ ಎಂದು ಹೇಳಿ ನಕಲಿ ಎಫ್‌ಐಆರ್‌ಯನ್ನು ಕಳಿಸುತ್ತಾರೆ. ನಿಮಗೆ ಇನ್ನು ಮುಂದೆ ಯಾವುದೇ ಬ್ಯಾಂಕಿನ ಸಾಲ ಸಿಗುವುದಿಲ್ಲ ಎಂದು ಹೆದರಿಸುತ್ತಾರೆ.

ಸಾರ್ವಜನಿಕರು ಇಂತಹ ಲೋನ್‌ ಆ್ಯಪ್‌ನ್ನು ಡೌನ್‌ಲೋಡ್ ಮಾಡಬಾರದು ಇತರ ಯಾವುದೇ ಆ್ಯಪ್ ಡೌನ್‌ಲೋಡ್ ಮಾಡಿದರೂ ಕೂಡ ನಿಮ್ಮ ಮೊಬೈಲ್ ಕಾಂಟ್ಯಾಕ್ಟ್, ವಿಡಿಯೋ, ಫೋಟೋಸ್ ನೋಡಲು ಅನುಮತಿಯನ್ನು ನೀಡಬಾರದು. ಯಾವುದೇ ಲೋನ್ ಆ್ಯಪ್ ನ್ನು ಇನ್ ಸ್ಟಾಲ್ ಮಾಡುವಾಗ ಎಸ್ ಎಸ್ ಎಂದು ಎಲ್ಲಾದಕ್ಕೂ ಅನುಮತಿ ನೀಡಿ ತೊಂದರೆಯಲ್ಲಿ ಸಿಕ್ಕಿಹಾಕಿಕೊಳ್ಳಬಾರದು. ಅತ್ಯಂತ ಕಡಿಮೆ ಸಾಲವನ್ನು ನೀಡಿ ದುಬಾರಿ ಹಣವನ್ನು ಪಡೆಯುವುದು. ಒಂದು ವೇಳೆ ಲೋನ್ ಕಟ್ಟದಿದ್ದಲ್ಲಿ ನಿಮ್ಮ ಮೊಬೈಲ್‌ನಲ್ಲಿರುವ ಎಲ್ಲಾ ಮಾಹಿತಿಯನ್ನು ಇಟ್ಟುಕೊಂಡು ಹೆದರಿಸುವ ಮತ್ತು ಬ್ಲಾಕ್‌ಮೇಲ್ ಮಾಡಿ ಹಣವನ್ನು ವಸೂಲು ಮಾಡುತ್ತಿದ್ದು ಸಾರ್ವಜನಿಕರು ಜಾಗ್ರತೆ ವಹಿಸಬೇಕು ಎಂದು ಪೋಲಿಸ್ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಮದುವೆಯ ವಾಹನದಂತೆ ಸಿಂಗರಿಸಿ ಗೋವುಗಳ ಅಕ್ರಮ ಸಾಗಾಟ ; 16 ಗೋವುಗಳ ರಕ್ಷಣೆ

Posted On: 12-01-2022 05:06PM

ಕಾಪು : ಬಜರಂಗದಳ ಮತ್ತು ಕಾಪು-ಶಿರ್ವ ಪೋಲೀಸರ ಕಾರ್ಯಾಚರಣೆಯಲ್ಲಿ ಇನ್ನೋವ ಕಾರು ಮತ್ತು ಪಿಕಪ್ ವಾಹನದಲ್ಲಿ ಅಕ್ರಮವಾಗಿ ಕದ್ದೊಯ್ಯುತ್ತಿದ್ದ 16 ಗೋವುಗಳ ರಕ್ಷಣೆ ಮಾಡಲಾಗಿದೆ.

ಈ ಸಂದರ್ಭ ಎರಡು ದನ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ.

ಪೋಲೀಸರ ಮತ್ತು ಹಿಂದೂ ಕಾರ್ಯಕರ್ತರ ಕಣ್ಣು ತಪ್ಪಿಸಲು ಗೋ ಕಳ್ಳತನದ ವಾಹನವನ್ನು ಮದುವೆಯ ವಾಹನದಂತೆ ಸಿಂಗರಿಸಲಾಗಿತ್ತು.

ಅತಿ ವೇಗವಾಗಿ ಚಲಾಯಿಸುತ್ತಿದ್ದ ಇನ್ನೋವ ಮತ್ತು ಪಿಕಪ್ ವಾಹನವನ್ನು ಬಜರಂಗದಳದ ಕಾರ್ಯಕರ್ತರು ತಮ್ಮ ವಾಹನಗಳನ್ನು ಅಡ್ಡ ಇಟ್ಟು ವಾಹನವನ್ನು ವಶಪಡಿಸಿಕೊಳ್ಳಲಾಗಿತ್ತು.

ಆದಿಶಕ್ತಿ ಮಹಿಳಾ ಸಹಕಾರಿ ಸಂಘ ಮೂಡುಸಗ್ರಿ, ಉಡುಪಿ ವತಿಯಿಂದ ಸುಮಾ ನಾಯ್ಕ್ ರಿಗೆ ಸನ್ಮಾನ

Posted On: 12-01-2022 04:24PM

ಉಡುಪಿ : ಆದಿಶಕ್ತಿ ಮಹಿಳಾ ಸಹಕಾರಿ ಸಂಘ ಮೂಡುಸಗ್ರಿ ಉಡುಪಿ ಇದರ ಎರಡನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಉಡುಪಿ ನಗರ ಪ್ರಾಧಿಕಾರದ ಸದಸ್ಯರಾದ ಸುಮಾ ನಾಯ್ಕ್ ಅವರನ್ನು ಸಂಘದ ವತಿಯಿಂದ ಗೌರವಿಸಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಊರಿನ ಹಿರಿಯರಾದ ಉಡುಪಿ ಬಬ್ಬರ್ಯಯುವ ಸೇವ ಸಮಿತಿ ಗೌರವಾಧ್ಯಕ್ಷರಾದ ಚಂದ್ರಶೇಖರ್ ಶೆಟ್ಟಿ ನೆರವೇರಿಸಿದರು.

ಈ ಸಂದರ್ಭದಲ್ಲಿ ಗೌರವ ಅಧ್ಯಕ್ಷರಾದ ಗೀತಾ ಎಸ್ ಭಟ್, ಸುಲೋಚನ ಶೆಟ್ಟಿ, ಜಯಲಕ್ಷ್ಮಿ ಶೆಟ್ಟಿ, ಪೂರ್ಣಿಮಾ, ಮಾಲತಿ, ವಸಂತಿ, ಪುಷ್ಪ, ಸುನಿತಾ, ವಿದ್ಯಾಶ್ರೀ, ಸುಗಂಧಿ, ಜ್ಯೋತಿ, ಶಶಿಕಲಾ, ಸರ್ವ ಸದಸ್ಯರು ಉಪಸ್ಥಿತರಿದ್ದರು.

ಸಂಘದ ಅಧ್ಯಕ್ಷರಾದ ಪ್ರಿಯ ಸ್ವಾಗತಿಸಿದರು. ಆಶಾ ವಂದಿಸಿದರು.

ಕಾಪು ಕುಲಾಲ ಯುವ ವೇದಿಕೆ ವತಿಯಿಂದ ಚಿಕಿತ್ಸೆಗೆ ನೆರವು

Posted On: 12-01-2022 12:03PM

ಕಾಪು : ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಕಾಪುವಿನ ಸಾಂತೂರು ಗ್ರಾಮದ ಕಾಂಜರಕಟ್ಟೆಯಲ್ಲಿ ವಾಸವಾಗಿರುವ ಯೋಗೀಶ್ ಕುಲಾಲ್ ಅವರ ಚಿಕಿತ್ಸೆಗೆ ಸಹಾಯ ಮಾಡುವಂತೆ ಅನೇಕ ವಾಟ್ಸಪ್ ಗ್ರೂಪ್ನಲ್ಲಿ ಹಂಚಿ ನೆರವಿಗಾಗಿ ವಿನಂತಿ ಮಾಡಲಾಗಿತ್ತು.

ಈ ಮಾಹಿತಿಗೆ ತಕ್ಷಣ ಸ್ಪಂದಿಸಿದ ಕಾಪು ಕುಲಾಲ ಯುವ ವೇದಿಕೆ ನಿಕಟ ಪೂರ್ವ ಅಧ್ಯಕ್ಷರು ಉದಯ ಕುಲಾಲ್ ನೆರವಿನ ಸಹಾಯದ ಜವಾಬ್ದಾರಿ ಹೊತ್ತು ಈ ನಿಮಿತ್ತ ಸಹೃದಯಿ ದಾನಿಗಳ ಬೆಂಬಲದಿಂದ ಒಟ್ಟುಗೂಡಿದ ಸಹಾಯ ಧನವನ್ನು ಮಂಗಳವಾರ ಮಣಿಪಾಲ ಆಸ್ಪತ್ರೆಗೆ ತೆರಳಿ ನೀಡಲಾಯಿತು. ಹನಿಗೂಡಿ ಹಳ್ಳ ಅನ್ನುವಂತೆ ದಾನಿಗಳಿಂದ ಸಂಗ್ರಹಿಸಿದ ಸಹಾಯಧನ ಒಟ್ಟು ರೂ. 29,700 ಅವರಿಗೆ ನೀಡಲಾಯಿತು.

ಹಣ ಹಸ್ತಾಂತರ ಸಂದರ್ಭ ಶಂಕರ್ ಕುಲಾಲ್ ಪೆರಂಪಳ್ಳಿ, ಸುನಿಲ್ ಎಸ್ ಮೂಲ್ಯ, ಸುಮಂತ್ ಕುಲಾಲ್ ಪಾದೂರು, ಪ್ರಭಾಕರ್ ಇನ್ನ, ಉದಯ ಕುಲಾಲ್ ಉಪಸ್ಥಿತರಿದ್ದರು.. ಸಕಾಲದಲ್ಲಿ ನೆರವು ನೀಡಿ ಸಹಕರಿಸಿದ ಎಲ್ಲಾ ಸಹೃದಯಿ ಬಾಂಧವರಿಗೆ ಕಾಪು ಕುಲಾಲ ಯುವ ವೇದಿಕೆ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು. ಬಡವರ ಕಣ್ಣೀರು ಒರೆಸುವ ಕಾಪು ಕುಲಾಲ ಯುವ ವೇದಿಕೆಯ ಸೇವಾ ಕಾರ್ಯಕ್ಕೆ ಶ್ಲಾಘನೆಗೆ ಪಾತ್ರವಾಯಿತು.

ನೆರವು ನೀಡಲು ಇಚ್ಛಿಸುವವರಿಗೆ ಯೋಗೀಶ್ ಕುಲಾಲ್ ಅವರ ಬ್ಯಾಂಕ್ ಅಕೌಂಟ್ ಮಾಹಿತಿ : Name :Yogish Bangera A/c No:026922010000117 IFSC CODE :UBINO902691 Bank:Union Bank Of India Branch :nandikooru Google pay:6361693202(Yogish bangera )

ಹಿಂದೂ ದೈವ ದೇವರುಗಳ ಅವಹೇಳನಗೈದವರ ವಿರುದ್ಧ ಸಾಮೂಹಿಕ ಪ್ರಾರ್ಥನೆ

Posted On: 12-01-2022 11:40AM

ಉಡುಪಿ :ವಿಶ್ವ ಹಿಂದೂ ಪರಿಷದ್ ಬಜರಂಗದಳ ಉಡುಪಿ ಜಿಲ್ಲೆ ವತಿಯಿಂದ ಕಳೆದ ಹಲವಾರು ಸಮಯಗಳಿಂದ ಹಿಂದೂ ದೈವ ದೇವರುಗಳ ಬಗ್ಗೆ ಅಪಹಾಸ್ಯ ಮತ್ತು ವಿಕೃತಿಯಾಗಿ ಅಶ್ಲೀಲವಾಗಿ ಚಿತ್ರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಬಿಂಬಿಸುತ್ತಿರುವ ಮತ್ತು ಕೊರಗಜ್ಜ ದೈವ ದೇವರ ವೇಷ ಧರಿಸಿ ಅವಮಾನ ಮಾಡಿರುವವರ ವಿರುದ್ಧ ಉಡುಪಿಯ ಬೊಬ್ಬರ್ಯ ಕಾಂತೇರಿ ಜುಮಾದಿ ಕಲ್ಕುಡ ಕೊರಗಜ್ಜ ಪರಿವಾರ ದೈವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಲಾಯಿತು.

ಈ ಸಂದರ್ಭದಲ್ಲಿ ನಗರ ಸಭೆಯ ಮಾಜಿ ಸದಸ್ಯ ಶ್ಯಾಮ್ ಪ್ರಸಾದ್ ಕುಡ್ವ, ವಿಶ್ವ ಹಿಂದೂ ಪರಿಷದ್ ನಗರ ಕಾರ್ಯದರ್ಶಿ ಅವಿನಾಶ್ ಶೇರಿಗಾರ್, ಅಖಿಲ ಭಾರತ ತುಳುನಾಡ ದೈವಾರಾಧಕರ ಒಕ್ಕೂಟ (ರಿ.) ಉಡುಪಿ ಜಿಲ್ಲೆ ಇದರ ಪ್ರಧಾನ ಕಾರ್ಯದರ್ಶಿ ಹಾಗೂ ಬೊಬ್ಬರ್ಯ ಯುವ ಸೇವಾ ಸಮಿತಿ ಇದರ ಗೌರವ ಅಧ್ಯಕ್ಷರಾದ ವಿನೋದ್ ಶೆಟ್ಟಿ, ಪೇಜಾವರ ಮಠದ ಮಹೇಶ್ ಕುಲಕರ್ಣಿ, ಬೊಬ್ಬರ್ಯ ಯುವ ಸೇವಾ ಸಮಿತಿ ಅಧ್ಯಕ್ಷರಾದ ವರದಾಸ್ ಕಾಮತ್, ರಾಮಚಂದ್ರ ಭಟ್ ಹಾಗೂ ಸಂಘಟನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.

ಲಾಕ್ ಡೌನ್ ಹಾಗೂ ನೈಟ್ ಕರ್ಫ್ಯೂ ಸಮಸ್ಯೆ : ದೈವಾರಾಧಕರ ಒಕ್ಕೂಟದಿಂದ ಸಚಿವ ಸುನಿಲ್ ಕುಮಾರ್ ಮತ್ತು ಶಾಸಕ ರಘುಪತಿ ಭಟ್ ರವರಿಗೆ ಮನವಿ

Posted On: 11-01-2022 02:24PM

ಉಡುಪಿ : ದೈವಾರಾಧಕರ ಒಕ್ಕೂಟ ಉಡುಪಿ ಮಂಗಳೂರು ಹಾಗೂ ಹೋರಾಟ ಸಮಿತಿ ವತಿಯಿಂದ ಇಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ, ಕಾರ್ಕಳ ಶಾಸಕರಾದ ಸುನಿಲ್ ಕುಮಾರ್ ಮತ್ತು ಉಡುಪಿ ಶಾಸಕರಾದ ರಘುಪತಿ ಭಟ್ ಅವರನ್ನು ಭೇಟಿಯಾಗಿ ಈ ವರ್ಷದ ಮೂರನೇ ಬಾರಿಯ ಲಾಕ್ ಡೌನ್ ಹಾಗೂ ನೈಟ್ ಕರ್ಫ್ಯೂನಿಂದ ಪ್ರಸ್ತುತ ದಿವಸಗಳಲ್ಲಿ ದೈವಾರಾಧಕರಿಗೆ ಆಗುತ್ತಿರುವ ಸಮಸ್ಯೆಗಳನ್ನು ಅವರೊಂದಿಗೆ ತಿಳಿಸಿ ಮನವಿ ಸಲ್ಲಿಸಲಾಯಿತು.

ಮನವಿಯನ್ನು ಸ್ವೀಕರಿಸಿದ ಸಚಿವರು ಮತ್ತು ಶಾಸಕರು ನಿಮ್ಮ ಸಮಸ್ಯೆಗೆ ಸ್ಪಂದಿಸಲು ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸುಧಾಕರ ಅಮೀನ್, ವಿನೋದ್ ಶೆಟ್ಟಿ, ಸುಧಾಕರ್ ಶೆಟ್ಟಿ, ಸುಕುಮಾರ್ ಪೂಜಾರಿ, ಪ್ರವೀಣ್ ಶೆಟ್ಟಿ, ಅಶೋಕ್ ಶೆಟ್ಟಿ, ನವೀನ್ ಪಾತ್ರಿ ಕುಂಜಿಬೆಟ್ಟು, ನರಸಿಂಹ ಪರವ, ಉಗ್ಗಪ್ಪ ಪರವ, ಪಾಂಡುರಂಗ ಪಾನರ, ಸುಧಾಕರ್ ಪಾಣಾರ, ರಂಗ ಪಾಣಾರ, ಸಮಿತ ಶೆಟ್ಟಿ, ಯತಿನ್ ಶೆಟ್ಟಿ, ಸದಾನಂದ ಸಾಲಿಯಾನ್, ಸಚಿನ್ ಸಾಲಿಯಾನ್, ಯತಿನ್ ಶೆಟ್ಟಿ, ಸದಸ್ಯರು ಉಪಸ್ಥಿತಿಯಿದ್ದರು.

ಕೋವಿಡ್-19 ಮುನ್ನೆಚ್ಚರಿಕಾ ಡೋಸ್ ನೀಡುವ ಕಾರ್ಯಕ್ರಮಕ್ಕೆ ಚಾಲನೆ

Posted On: 10-01-2022 08:11PM

ಉಡುಪಿ : ಜಿಲ್ಲೆಯಲ್ಲಿನ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಹಾಗೂ 60 ವರ್ಷ ಮೇಲ್ಪಟ್ಟ ಅಸ್ವಸ್ಥತೆ ಹೊಂದಿರುವ ಫಲಾನುಭವಿಗಳು ಸಹ ಕೋವಿಡ್ -19 ಮುನ್ನೆಚ್ಚರಿಕಾ ಡೋಸ್ ತಪ್ಪದೇ ಪಡೆಯುವಂತೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು. ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನ ಉಡುಪಿ ಜಿಲ್ಲೆ ಸಹಯೋಗದಲ್ಲಿ, ಜಿಲ್ಲಾ ಆಯುಷ್ ಆಸ್ಪತ್ರೆಯಲ್ಲಿ ಕೋವಿಡ್-19 ಮುನ್ನೆಚ್ಚರಿಕಾ ಡೋಸ್ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಇತ್ತೀಚೆಗೆ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿದ್ದು, ಇದನ್ನು ನಿಭಾಯಿಸಲು ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರ ಸೇವೆಯು ಅತ್ಯಂತ ಅಗತ್ಯವಾಗಿದ್ದು, ಇವರಿಗೆ ಕೋವಿಡ್ನಿಂದ ರಕ್ಷಣೆ ನೀಡಲು ಮತ್ತು 60 ವರ್ಷ ಮೇಲ್ಪಟ್ಟ ಅಸ್ವಸ್ಥತೆ ಹೊಂದಿರುವವರಿಗೆ ಕೋವಿಡ್ನಿಂದ ಹೆಚ್ಚಿನ ಅಪಾಯವಾಗುವುದನ್ನು ತಪ್ಪಿಸಲು ಮುನ್ನೆಚ್ಚರಿಕಾ ಡೋಸ್ ನೀಡಲಾಗುತ್ತಿದ್ದು, ಜಿಲ್ಲೆಯಲ್ಲಿ ಈಗಾಗಲೇ ಪ್ರಥಮ ಮತ್ತು ದ್ವಿತೀಯ ಡೋಸ್ ಲಸಿಕೆ ನೀಡುವಲ್ಲಿ ಅತ್ಯಂತ ಹೆಚ್ಚಿನ ಪ್ರಗತಿ ಆಗಿದ್ದು, ಮುನ್ನೆಚ್ಚರಿಕಾ ಡೋಸ್ ನೀಡುವಲ್ಲಿ ಸಹ ಸಂಪೂರ್ಣ ಗುರಿ ಸಾಧಿಸಲು ಯೋಜನೆ ರೂಪಿಸಲಾಗಿದೆ ಎಂದರು.

ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿ, ಜಿಲ್ಲೆಯಲ್ಲಿ ಈ ಹಿಂದಿನ ಕೋವಿಡ್ ಮೊದಲನೇ ಮತ್ತು ಎರಡನೇ ಅಲೆಯನ್ನು ಸಮರ್ಥವಾಗಿ ಎದುರಿಸಲಾಗಿದೆ. ಪ್ರಸ್ತುತ 3 ನೇ ಅಲೆಯು ಹರಡಲಾರಂಭಿಸಿದ್ದು, ಪ್ರತಿಯೊಬ್ಬರೂ ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಸೂಚಿಸುವ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ, ಜಿಲ್ಲಾ ಕೋವಿಡ್ ಲಸಿಕಾ ಉಸ್ತುವಾರಿ ಡಾ.ಎಂ.ಜಿ.ರಾಮ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಸತೀಶ್ ಆಚಾರ್ಯ ಜಿಲ್ಲಾಸ್ಪತ್ರೆಯ ವೈದ್ಯರಾದ ಡಾ.ಚಂದ್ರಶೇಖರ ಅಡಿಗ, ಡಾ.ವೇಣುಗೋಪಾಲ, ಮತ್ತಿತರರು ಉಪಸ್ಥಿತರಿದ್ದರು.

ಬೋವಿ ಜನಾಂಗಕ್ಕೆ ಪ. ಜಾತಿ ಪ್ರಮಾಣಪತ್ರ ನೀಡುವ ಬಗ್ಗೆ ಪರಿಶೀಲನೆ : ಸಚಿವ ಕೋಟ

Posted On: 10-01-2022 08:05PM

ಉಡುಪಿ: ಜಿಲ್ಲೆಯಲ್ಲಿನ ಬೋವಿ ಜನಾಂಗದವರಿಗೆ ಪ.ಜಾತಿ ಪ್ರಮಾಣ ಪತ್ರ ನೀಡಲು ಇರುವ ಸಮಸ್ಯೆಗಳ ಬಗ್ಗೆ ಜಿಲ್ಲೆಯ ಶಾಸಕರು ಮತ್ತು ಅಧಿಕಾರಿಗಳ ಸಭೆಯು, ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಬೋವಿ ಜನಾಂಗಕ್ಕೆ ಪ.ಜಾತಿ ಪ್ರಮಾಣ ಪತ್ರ ನೀಡಲು ಪ್ರಸ್ತುತ ಇರುವ ಸಮಸ್ಯೆಗಳು ಮತ್ತು ಗೊಂದಲಗಳು ಹಾಗೂ ಇವುಗಳ ನಿವಾರಣೆಗೆ ಅನುಸರಿಸಬಹುದಾದ ಮಾರ್ಗಗಳ ಬಗ್ಗೆ ವಿವರವಾದ ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸುವಂತೆ ಸೂಚಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಈ ಪ್ರಸ್ತಾವನೆಯನ್ನು ಪರಿಶೀಲಿಸಿ, ಈ ಜನಾಂಗಕ್ಕೆ ಪ.ವರ್ಗದ ಪ್ರಮಾಣಪತ್ರ ನೀಡುವ ಕುರಿತಂತೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ, ಪ್ರಮಾಣಪತ್ರ ನೀಡಲು ಪರಿಗಣಿಸಬಹುದಾದ ಅಂಶಗಳ ಕುರಿತು ಸರ್ಕಾರದಿಂದ ಸೂಕ್ತ ನಿರ್ದೇಶನ ನೀಡಲಾಗುವುದು ಎಂದರು.

ಸಭೆಯಲ್ಲಿ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್, ಉಡುಪಿ ಶಾಸಕ ರಘುಪತಿ ಭಟ್, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಬೈಂದೂರು ಶಾಸಕ ಸುಕುಮಾರ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ರಾಜ್ಯ ಎಸ್.ಸಿ.ಪಿ -ಟಿ.ಎಸ್.ಪಿ ಕೋಶದ ನಿರ್ದೇಶಕಿ ಊರ್ಮಿಳಾ, ಹಿಂದುಳಿದ ವರ್ಗಗಳ ಇಲಾಖೆಯ ಅಪರ ನಿರ್ದೇಶಕ ಪ್ರದೀಪ್, ಜಿ.ಪಂ. ಉಪ ಕಾರ್ಯದರ್ಶಿ ಕಿರಣ್ ಫಡ್ನೇಕರ್, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಅನಿತಾ ಮಡ್ಲೂರು ಹಾಗೂ ಜಿಲ್ಲೆಯ ಎಲ್ಲಾ ತಹಸೀಲ್ದಾರ್ಗಳು ಉಪಸ್ಥಿತರಿದ್ದರು.

ಸಾಲದ ಹೊರೆ : ಯುವಕ ಆತ್ಮಹತ್ಯೆ

Posted On: 10-01-2022 04:59PM

ಮುಲ್ಕಿ : ಸಾಲದ ಹೊರೆಯಿಂದ ಕಿನ್ನಿಗೋಳಿ ಸಮೀಪದ ಪಕ್ಷಿಕೆರೆಯ ಯುವಕನೋರ್ವ ಕೆಲಸದ ಸಂದರ್ಭ ಕಚೇರಿಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುರತ್ಕಲ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸನ್ ರೈಸ್ ಕಾರ್ಪೋರೇಷನ್ ಕುಳಾಯಿ ಇಲ್ಲಿ ಉದ್ಯೋಗಿಯಾಗಿದ್ದ ಕಿನ್ನಿಗೋಳಿ ಸಮೀಪದ ಪಕ್ಷಿಕೆರೆಯ ಸುಶಾಂತ್ (26) ಎಂಬಾತ ಆನ್ ಲೈನ್ ಸಾಲದ ಹೊರೆಯಿಂದ ಅದನ್ನು ಪಾವತಿಸಲಾಗದೆ ಕೆಲಸದ ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ದಯವಿಟ್ಟು ಕ್ಷಮಿಸಿ ನನಗೆ ಯಾರ ನಂಬಿಕೆಯನ್ನು ಉಳಿಸಲಾಗಲಿಲ್ಲ. ಹಣದ ವಿಷಯದಲ್ಲಿ ತೊಂದರೆಯಾಗಿದೆ. ಆನ್ ಲೈನ್ ಸಾಲದವರು ಕರೆ ಮಾಡಿದರೆ ನಿಧನನಾಗಿದ್ದಾನೆ ಎಂದು ತಿಳಿಸಿ ಎಂದು ಡೆತ್ ನೋಟ್ ಬರೆದು ಆತ್ಮಹತ್ಯೆ ಶರಣಾಗಿದ್ದಾನೆ.

ದೊಡ್ಡನಗುಡ್ಡೆ : ಪಂಚ ಜುಮಾದಿ ದೈವಸ್ಥಾನದ ವಠಾರದ ಸ್ವಚ್ಛತಾ ಕಾರ್ಯಕ್ರಮ

Posted On: 09-01-2022 10:13PM

ಉಡುಪಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ (ರಿ.) ಉಡುಪಿ ಮಣಿಪಾಲ ವಲಯ, ಶಿವಳ್ಳಿ ಎ ಕಾರ್ಯಕ್ಷೇತ್ರ, ಪ್ರಜ್ಞಾ ಒಕ್ಕೂಟದ ವತಿಯಿಂದ ದೊಡ್ಡನಗುಡ್ಡೆ ಪಂಚ ಜುಮಾದಿ ದೈವಸ್ಥಾನದ ವಠಾರದಲ್ಲಿ ಶ್ರದ್ಧಾ ಕೇಂದ್ರ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು.

ಪಂಚ ಜುಮಾದಿ ದೈವಸ್ಥಾನದ ಗುರಿಕಾರರು ನಿತಿನ್ ಪೂಜಾರಿ, ಹಾಗೂ ಅಖಿಲ ಭಾರತ ತುಳುನಾಡ ದೈವಾರಾಧಕರ ಒಕ್ಕೂಟ (ರಿ.) ಉಡುಪಿ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ಹಾಗೂ ಪಂಚ ಜುಮಾದಿ ದೈವಸ್ಥಾನದ ಪ್ರಧಾನ ಅರ್ಚಕರಾದ ವಿನೋದ್ ಶೆಟ್ಟಿ ಹಾಗೂ ದೈವಸ್ಥಾನದ ಟ್ರಸ್ಟಿ ಸದಸ್ಯರಾದ ನಿತ್ಯಾನಂದ ಜೋಗಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಒಕ್ಕೂಟದ ಪದಾಧಿಕಾರಿಗಳಾದ ಜ್ಯೋತಿ ಹರಿಣಾಕ್ಷಿ, ಸೇವಪ್ರತಿನಿಧಿ ಪ್ರೀತಿ ಉಪಸ್ಥಿತರಿದ್ದರು.