Updated News From Kaup

ಊರಿನ ರಸ್ತೆಗೆ ಕಾಯಕಲ್ಪ ನೀಡಿದ 80 ವಯಸ್ಸಿನ ಶ್ರೀನಿವಾಸ ಮೂಲ್ಯರಿಗೆ ಕುಲಾಲ ಸಂಘದಿಂದ ಸನ್ಮಾನ

Posted On: 13-02-2025 07:32PM

ಕಾರ್ಕಳ : ತಾಲೂಕಿನ ಮರ್ಣೆ ಪಂಚಾಯತ್ ನ ಒಂದು ಭಾಗದ ರಸ್ತೆಯನ್ನು 50 ವರ್ಷದಿಂದ ಶ್ರೀನಿವಾಸ್ ಮೂಲ್ಯ ಎನ್ನುವ 80 ವರ್ಷದ ವೃದ್ಧ ರಿಪೇರಿ ಮಾಡುತ್ತಿರುವುದು ಗಮನಾರ್ಹವಾಗಿದೆ.

ಫೆ. 14 : ಹರಿದ್ವಾರದಿಂದ ಕಾಪು ಹೊಸ ಮಾರಿಗುಡಿ ಸನ್ನಿಧಾನಕ್ಕೆ ಗಂಗಾಜಲ

Posted On: 11-02-2025 04:43PM

ಕಾಪು : ಶ್ರೀ ಹೊಸ ಮಾರಿಗುಡಿಯಲ್ಲಿ ಫೆ.25 ರಿಂದ ಮಾ. 5 ರವರೆಗೆ ಜರಗಲಿರುವ ಪ್ರತಿಷ್ಠಾ ಬ್ರಹ್ಮಕಲಶೋತ್ಸದ ಪೂರ್ವಭಾವಿಯಾಗಿ ಫೆ.14 ರಂದು ಬೆಳಿಗ್ಗೆ 9:30 ಕ್ಕೆ ನವಕುಂಭಗಳಲ್ಲಿ ಗಂಗಾಜಲ ಆಗಮಿಸಲಿದೆ ಎಂದು ಗಂಗಾಜಲ ಸ್ವಾಗತ ಸಮಿತಿಯ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಹೇಳಿದರು. ಅವರು ಕಾಪು ಬ್ರಹ್ಮಕಲಶೋತ್ಸವ ಸಮಿತಿಯ ಕಚೇರಿಯಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಪಡುಬಿದ್ರಿ ಸಿ.ಎ. ಸೊಸೈಟಿ : ಅಧ್ಯಕ್ಷರಾಗಿ ವೈ.ಸುಧೀರ್ ಕುಮಾರ್, ಉಪಾಧ್ಯಕ್ಷರಾಗಿ ಗುರುರಾಜ್ ಪೂಜಾರಿ ಅವಿರೋಧವಾಗಿ ಆಯ್ಕೆ

Posted On: 11-02-2025 02:58PM

ಪಡುಬಿದ್ರಿ : ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ಇದರ ಮುಂದಿನ ಐದು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ವೈ.ಸುಧೀರ್ ಕುಮಾರ್, ಉಪಾಧ್ಯಕ್ಷರಾಗಿ ಗುರುರಾಜ್ ಪೂಜಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕಾಪುವಿನಲ್ಲಿ ಬಿ. ಐ. ಇ. ವಾರ್ಷಿಕ ಪರೀಕ್ಷೆ ಸಂಪನ್ನ

Posted On: 09-02-2025 11:24PM

ಕಾಪು : ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಷನ್ ಕರ್ನಾಟಕ, ರಾಜ್ಯ ಮಟ್ಟದಲ್ಲಿ ನಡೆಸುವ ವಾರ್ಷಿಕ ಪರೀಕ್ಷೆಯು ಕಾಪು ವರ್ತುಲದ ಸೆಂಟರ್ 166ರ ವಿದ್ಯಾರ್ಥಿಗಳಿಗೆ ಕಾಪುವಿನ ಹೋಟೆಲ್ ಕೆ. 1 ನ ಸಭಾಂಗಣದಲ್ಲಿ ನಡೆಯಿತು.

ಕಾಪು ಶ್ರೀ ಹೊಸ ಮಾರಿಗುಡಿಗೆ ಶ್ರೀ ಕ್ಷೇತ್ರ ದಂಡತೀರ್ಥ ಮಠದಿಂದ ಬೃಹತ್ ಶೋಭಾಯಾತ್ರೆ

Posted On: 09-02-2025 09:22PM

ಕಾಪು : ಜೀರ್ಣೋದ್ದಾರದೊಂದಿಗೆ ಬ್ರಹ್ಮಕಲಶೋತ್ಸವಕ್ಕೆ ಸಿದ್ಧಗೊಳ್ಳುತ್ತಿರುವ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ನೂತನ ಸ್ವರ್ಣ ಗದ್ದುಗೆ, ರಜತ ರಥ, ಬೃಹತ್ ಗಂಟೆ, ಸಹಿತ ಸ್ವರ್ಣಾಭರಣಗಳ ಶೋಭಾಯಾತ್ರೆಯು ಭಾನುವಾರ ನಡೆಯಿತು. ಕೃಷ್ಣಾಪುರ ಮಠದ ಶ್ರೀ ವಿದ್ಯಾಶ್ರೀ ಸಾಗರ ಸ್ವಾಮೀಜಿ ಸ್ವರ್ಣ ಗದ್ದುಗೆಯನ್ನು ಅನಾವರಣಗೊಳಿಸಿದರು. ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ವಾಸುದೇವ ಶೆಟ್ಟಿ ಪುರಮೆರವಣಿಗೆಗೆ ಚಾಲನೆ ನೀಡಿದರು.

ಕಾಂತಾವರ ಕುಲಾಲ ಸಂಘದ ಉದ್ಘಾಟನೆ, ಲಾಂಛನ ಬಿಡುಗಡೆ, ಸನ್ಮಾನ, ನೂತನ ಪದಾಧಿಕಾರಿಗಳ ಆಯ್ಕೆ

Posted On: 09-02-2025 07:32AM

ಕಾರ್ಕಳ : ತಾಲೂಕಿನ ಕಾಂತಾವರದ ಬೇಲಾಡಿಯ ಶ್ರೀ ಪುಂಡರೀಕ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಸಂಘದ ಅಧ್ಯಕ್ಷರಾದ ವಿಠಲ ಮೂಲ್ಯ ಬೇಲಾಡಿ ಅಧ್ಯಕ್ಷತೆಯಲ್ಲಿ ಸಂಘದ ಉದ್ಘಾಟನೆ ನಡೆಯಿತು.

ಫೆ. 10 ರಿಂದ 16 : ಪರಿಚಯ ಪ್ರತಿಷ್ಠಾನ, ಪಾಂಬೂರು ಪ್ರಸ್ತುತಿಯಲ್ಲಿ ಪರಿಚಯ ರಂಗೋತ್ಸವ 2025

Posted On: 08-02-2025 07:22PM

ಶಿರ್ವ : ಬೆಳ್ಳೆ ಗ್ರಾಮದ ಪಾಂಬೂರಿನಲ್ಲಿ ಪರಿಚಯ ಪ್ರತಿಷ್ಠಾನ (ರಿ) ಪಾಂಬೂರು ಇದರ ಆಶ್ರಯದಲ್ಲಿ ಫೆ. 10 ಸೋಮವಾರದಿಂದ ಫೆ. 16 ಭಾನುವಾರ ಪರ್ಯಂತ 7 ದಿನಗಳ "ಪರಿಚಯ ರಂಗೋತ್ಸವ 2025" ಪಾಂಬೂರು ರಂಗಪರಿಚಯದಲ್ಲಿ ನಡೆಯಲಿದೆ.

ಕರಂದಾಡಿ ಶ್ರೀ ವಿಷ್ಣುಮೂರ್ತಿ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶಾಭಿಷೇಕ ಸಂಪನ್ನ

Posted On: 07-02-2025 08:01PM

ಕಾಪು : ಜೀರ್ಣೋದ್ಧಾರಗೊಂಡ ಕರಂದಾಡಿ ಶ್ರೀ ವಿಷ್ಣುಮೂರ್ತಿ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ವಿಷ್ಣುಮೂರ್ತಿ ದೇವರಿಗೆ ಸಹಸ್ರ ಪರಿಕಲಶ ಸಹಿತ ಬ್ರಹ್ಮಕಲಶಾಭಿಷೇಕ ಗುರುವಾರ ನೆರವೇರಿತು. ದೇವಳದ ಪ್ರಧಾನ ತಂತ್ರಿಗಳಾದ ಕಳತ್ತೂರು ಉದಯ ತಂತ್ರಿಗಳ ನೇತೃತ್ವದಲ್ಲಿ, ಪ್ರಧಾನ ಅರ್ಚಕರಾದ ಸುಬ್ರಹ್ಮಣ್ಯ ಮಂಜಿತ್ತಾಯರವರ ಸಹಭಾಗಿತ್ವದಲ್ಲಿ ಬ್ರಹ್ಮಕಲಶ ಮಹೋತ್ಸವ ಧಾರ್ಮಿಕ ವಿಧಿಗಳು ಸಂಪನ್ನಗೊಂಡವು. ಉತ್ಸವ ಬಲಿ, ಶ್ರೀ ಬ್ರಹಲಿಂಗೇಶ್ವರ, ನಾಗದೇವರಿಗೆ ಪೂಜೆ, ಪಲ್ಲಪೂಜೆ ನಡೆಯಿತು.

ಶ್ರೀ ನಾರಾಯಣ ಗುರು ಯುವ ವೇದಿಕೆ ಉಡುಪಿ : ಶ್ರೀ ಶಂಭುಕಲ್ಲು ವೀರಭದ್ರ ಕ್ಷೇತ್ರ ಮಹಾತ್ಮೆ ಯಕ್ಷಗಾನ ಪ್ರದರ್ಶನ

Posted On: 07-02-2025 01:26PM

ಉಡುಪಿ : ಒಂದೇ ಜಾತಿ, ಒಂದೇ ಧರ್ಮ, ಒಬ್ಬರೇ ದೇವರು ಎಂಬ ಸಾರ್ವಕಾಲಿಕ ಸತ್ಯ ಸಂದೇಶದ ಯುಗ ಪ್ರವರ್ತಕ ಬ್ರಹ್ಮಶ್ರೀ ನಾರಾಯಣ ಗುರುಗಳ ಆದರ್ಶಗಳನ್ನು ಮುಖ್ಯ ತತ್ವವಾಗಿಸಿಕೊಂಡು ಅಸ್ತಿತ್ವದಲ್ಲಿರುವ ಶ್ರೀ ನಾರಾಯಣ ಗುರು ಯುವ ವೇದಿಕೆ (ರಿ.) ಉಡುಪಿ ಇದರ ಪ್ರಥಮ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಫೆಬ್ರವರಿ 8 ಶನಿವಾರದಂದು ಉದ್ಯಾವರದ ಶ್ರೀ ಶಂಭುಕಲ್ಲು ವೀರಭದ್ರ ದೇವಸ್ಥಾನದ ಬಳಿ 'ವರ್ಷದ ಹರ್ಷ' ಕಾರ್ಯಕ್ರಮ ಜರುಗಲಿದೆ ಎಂದು ಸಂಘಟನೆಯ ಪ್ರಕಟಣೆ ತಿಳಿಸಿದೆ.

ಉಚ್ಚಿಲ ಪೇಟೆಯಲ್ಲಿನ ಸಮಸ್ಯೆ: ಸಮಿತಿ ಸ್ಥಳ ಪರಿಶೀಲನೆ ; ಸಭೆ ; ಜಿಲ್ಲಾಧಿಕಾರಿಗೆ ಶಿಫಾರಸು

Posted On: 06-02-2025 04:44PM

ಉಚ್ಚಿಲ : ಉಚ್ಚಿಲ ಪೇಟೆಯ ರಾ.ಹೆ.66 ರಲ್ಲಿ ನಿರಂತರ ಅಪಘಾತ ಮತ್ತು ಸಾವಿನ ಸಂಖ್ಯೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸುರಕ್ಷತಾ ಕ್ರಮಗಳನ್ನು ಅಳವಡಿಸುವ ಬಗ್ಗೆ ಉಡುಪಿ ಜಿಲ್ಲಾಧಿಕಾರಿ ರಚಿಸಿದ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಸಿದ್ದಲಿಂಗಪ್ಪ ಅಧ್ಯಕ್ಷತೆಯ ಸಮಿತಿಯು ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಕಾಪು ತಹಶಿಲ್ದಾರ್ ಕಚೇರಿಯಲ್ಲಿ ಸಭೆ ನಡೆಸಲಾಯಿತು.