Updated News From Kaup
ಲಯನ್ಸ್ ಕ್ಲಬ್ ಉಡುಪಿ ಕರಾವಳಿಯಿಂದ ಪತ್ರಿಕಾ ವಿತರಕರ ದಿನಾಚರಣೆ
Posted On: 04 Sep 2021, 11:11 PM
ಉಡುಪಿ : ಲಯನ್ಸ್ ಕ್ಲಬ್ ಉಡುಪಿ ಕರಾವಳಿ ವತಿಯಿಂದ ಪತ್ರಿಕಾ ವಿತರಕರ ದಿನಾಚರಣೆಯನ್ನು ಆಚರಿಸಲಾಯಿತು. ಬಂಟಕಲ್ಲು ಪರಿಸರದಲ್ಲಿ ಸುಮಾರು 20 ವರ್ಷಗಳಿಂದ ಪತ್ರಿಕೆ ವಿತರಕರಾಗಿರುವ ಕೆ. ಆರ್. ಪಾಟ್ಕರ್ ರವರನ್ನು ಅವರ ಮನೆಯಲ್ಲಿ ಲಯನ್ಸ್ ಉಡುಪಿ ಕರಾವಳಿ ವತಿಯಿಂದ ಗೌರವಿಸಲಾಯಿತು. ಈ ಸಂದರ್ಭ ರಮಾನಂದ ಶೆಟ್ಟಿಗಾರ್ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಪತ್ರಿಕಾ ದಿನಾಚರಣೆಯ ಮಹತ್ವ ಬಗ್ಗೆ ತಿಳಿಸಿ ಕೆ.ಆರ್. ಪಾಟ್ಕರ್ ರವರನ್ನು ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಕೆ. ಆರ್. ಪಾಟ್ಕರ್ ರವರು ಸನ್ಮಾನಕ್ಕೆ ಕೃತಜ್ಞತೆ ತಿಳಿಸಿ ಪತ್ರಿಕಾ ವಿತರಣೆ ವೃತ್ತಿಯನ್ನು ತಾನು ಗೌರವಿಸಿ, ಈ ವೃತ್ತಿಯನ್ನು ತುಂಬಾ ಪ್ರೀತಿಸುವುದು ಮಾತ್ರವಲ್ಲದೆ ಈ ಬಗ್ಗೆ ಹೆಮ್ಮೆ ಪಡುವುದಾಗಿ ತಿಳಿಸಿದರು. ತನಗಿಂದು ದೊರೆತಿರುವ ಸ್ಥಾನ ಮಾನಗಳಿಗೆ ಈ ವೃತ್ತಿಯೇ ಕಾರಣ ಎಂದರು. ನಿಕಟಪೂರ್ವ ಅಧ್ಯಕ್ಷ ಅನಂತರಾಮ ವಾಗ್ಲೆ, ರತ್ನಾಕರ ಕಾಮತ್, ಗ್ರಾ.ಪಂ ಸದಸ್ಯೆ ವೈಲೇಟ್ ಕಸ್ತಲಿನೋ, ಅನಿತಾ ಮೆಂಡೋನ್ಸಾ, ಸಂಗೀತಾ ಪಾಟ್ಕರ್, ರಚಿತಾ ಪಾಟ್ಕರ್ ಉಪಸ್ಥಿತರಿದ್ದರು. ಅಧ್ಯಕ್ಷ ರವೀಂದ್ರ ಆಚಾರ್ಯರವರು ಸ್ವಾಗತಿಸಿ, ಕಾರ್ಯದರ್ಶಿ ರಾಘವೇಂದ್ರ ನಾಯಕ್ ವಂದಿಸಿದರು.
ಶಿರ್ವ : ಗ್ರಾಮ ಪಂಚಾಯತ್, ಎಸ್.ವೈ.ಎಸ್, ಎಸ್.ಎಸ್.ಎಫ್ ತಂಡದಿಂದ ಶಾಲೆಗಳ ಸ್ಯಾನಿಟೈಝೇಶನ್
Posted On: 04 Sep 2021, 05:53 PM
ಕಾಪು : ಉಡುಪಿ ಜಿಲ್ಲೆಯಲ್ಲಿ ಸೋಮವಾರದಿಂದ ಪ್ರಾಥಮಿಕ ಶಾಲೆಗಳ ಮಕ್ಕಳ ಭೌತಿಕ ತರಗತಿಗಳು ಆರಂಭವಾಗುತ್ತಿರುವ ಹಿನ್ನಲೆಯಲ್ಲಿ ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯ ಐದು ಪ್ರಾಥಮಿಕ ಶಾಲೆಗಳು ಹಾಗೂ ಎರಡು ಪ.ಪೂರ್ವ ಕಾಲೇಜುಗಳನ್ನು ಶಿರ್ವ ಗ್ರಾಮ ಪಂಚಾಯತ್ ವತಿಯಿಂದ ತೋಪನಂಗಡಿ ಎಸ್.ವೈ.ಎಸ್ ಮತ್ತು ಎಸ್.ಎಸ್.ಎಫ್ ತಂಡದ ಸಹಕಾರದಿಂದ ಸ್ಯಾನಿಟೈಝೇಶನ್ ಮಾಡಿಸಲಾಯಿತು. ಶಿರ್ವ ಗ್ರಾ.ಪಂ ಅಧ್ಯಕ್ಷ ಕೆ. ಆರ್. ಪಾಟ್ಕರ್, ಅಭಿವೃದ್ದಿ ಅಧಿಕಾರಿ ಅನಂತಪದ್ಮನಾಭ ನಾಯಕ್ , ಹಿಂದು ಹಿ.ಪ್ರಾ ಶಾಲಾ ಮುಖ್ಯ ಶಿಕ್ಷಕಿ ಶಾಲಿನಿ, ಸಹಾಯ್ ತಂಡದ ಸದಸ್ಯರು, ಶಿಕ್ಷಕಿಯರು ಉಪಸ್ಥಿತರಿದ್ದರು.
ಶಿರ್ವ: ಸಂತ ಮೇರಿ ಮಹಾವಿದ್ಯಾಲಯದಲ್ಲಿ ಸ್ವಚ್ಛಸರ್ವೇಕ್ಷಣ ಜನಾಂದೋಲನ - 2021
Posted On: 03 Sep 2021, 11:32 AM
ಶಿರ್ವ: ಗ್ರಾಮೀಣ ನೈರ್ಮಲ್ಯವನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಮಂತ್ರಾಲಯವು ಸ್ವಚ್ಛಸರ್ವೆಕ್ಷಣ ಜನಾಂದೋಲನ 2021 ಕಾರ್ಯಕ್ರಮಕ್ಕೆ ಸ್ವಚ್ಛ ಭಾರತ್ ಅಭಿಯಾನದಡಿಯಲ್ಲಿ ಗ್ರಾಮೀಣ ಸಮುದಾಯದಲ್ಲಿ ಸ್ವಚ್ಛತೆ, ಶುಚಿತ್ವ ಮತ್ತು ನೈರ್ಮಲ್ಯದ ಮಹತ್ವದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ರಾಷ್ಟ್ರ ವ್ಯಾಪಿ ಚಾಲನೆ ನೀಡಿದೆ. ಇದರ ಪ್ರಯುಕ್ತ ಶಿರ್ವ ಸಂತ ಮೇರಿ ಮಹಾವಿದ್ಯಾಲಯದ ಎನ್.ಸಿ.ಸಿ, ಎನ್.ಎಸ್.ಎಸ್, ಹಾಗು ರೋವರ್ಸ್ ಮತ್ತು ರೇಂಜರ್ಸ್ ಘಟಕದ ವತಿಯಿಂದ ವಿದ್ಯಾರ್ಥಿಗಳಿಗೆ ಸ್ವಚ್ಚತೆ ಮತ್ತು ಅದನ್ನು ಸಮರ್ಪಕವಾಗಿ ತಮ್ಮ ಸುತ್ತಲ ಮನೆ, ಪರಿಸರಗಳಿಗೆ ಅನ್ವಯವಾಗುವಂತೆ ಕಾರ್ಯರೂಪಗೊಳಿಸುವಲ್ಲಿ ಸ್ವಚ್ಚತಾ ಸರ್ವೇಕ್ಷಣ ಪ್ರತಿಜ್ಞಾ ವಿಧಾನವನ್ನು ಪ್ರಾಂಶುಪಾಲರಾದ ಡಾ| ಹೆರಾಲ್ಡ್ ಐವನ್ ಮೋನಿಸ್ ನೆರವೇರಿಸಿಕೊಟ್ಟರು. ಎನ್.ಸಿ.ಸಿ ಕ್ಯಾಡೆಟ್ ಸೀನಿಯರ್ ಅಂಡರ್ ಆಫೀಸರ್ ಭಟ್ ರಾಮದಾಸ್ ಸತೀಶ್, ಕ್ಯಾಡೆಟ್ ಜೂನಿಯರ್ ಆಫೀಸರ್ ಪ್ರವಿತ ಆಚಾರ್ಯ, ರಿಯಾನ್ ರಿಷಿ ಆಲ್ಫೋನ್ಸೋ, ಕಂಪನಿ ಸಾರ್ಜೆಂಟ್ ಮೇಜರ್ ಪ್ರತಿಮ, ಕ್ವಾರ್ಟರ್ ಮಾಸ್ಟರ್ ರೈನ್ ಅಂದ್ರಾದೆ, ಎನ್ ಎಸ್ ಎಸ್ ಘಟಕದ ವಿದ್ಯಾರ್ಥಿ ನಾಯಕರಾದ ಅಕ್ಷಯ್, ಸುರೇಖಾ, ವೈಷ್ಣವಿ, ಅಪೇಕ್ಷಾ,ರೋವರ್ಸ್ ಮತ್ತು ರೇಂಜರ್ಸ್ ಘಟಕದ ವಿದ್ಯಾರ್ಥಿ ನಾಯಕರಾದ ಫ್ರಾಂಕ್ಲಿನ್ ಮತಾಯಸ್ ಮತ್ತು ಪ್ರತೀಕ್ಷಾ ಉಪಸ್ಥಿತರಿದ್ದರು.
ಶಿರ್ವ ಗ್ರಾ.ಪಂ ನ SLRM ಘಟಕದ ಪೌರಕಾರ್ಮಿಕರೊಂದಿಗೆ ಹುಟ್ಟು ಹಬ್ಬ ಆಚರಿಸಿದ ಗ್ರಾ.ಪಂ. ಸದಸ್ಯೆ ವೈಲೆಟ್ ಕಸ್ತಲಿನೋ
Posted On: 03 Sep 2021, 11:22 AM
ಕಾಪು : ಸಾಮಾನ್ಯವಾಗಿ ಜನರು ತಮ್ಮತಮ್ಮ ಹುಟ್ಟು ಹಬ್ಬವನ್ನು ಕುಟುಂಬ ಸದಸ್ಯರೊಂದಿಗೆ ಅಥವಾ ಹೊಟೇಲುಗಳಲ್ಲಿ ಆಚರಿಸುವುದು ಸಾಮಾನ್ಯ. ಆದರೆ ಶಿರ್ವ ಗ್ರಾಮ ಪಂಚಾಯತ್ ಸದಸ್ಯೆ ವೈಲೆಟ್ ಕಸ್ತಲಿನೋರವರು ತಮ್ಮ ಹುಟ್ಟುಹಬ್ಬವನ್ನು ತಮ್ಮದೇ ಗ್ರಾಮ ಪಂಚಾಯತ್ ನ ಎಸ್.ಎಲ್.ಆರ್.ಎಮ್ ( ಕಸ, ತ್ಯಾಜ್ಯ ಸಂಗ್ರಹ ಮತ್ತು ವಿಂಗಡನಾ ಕೇಂದ್ರ) ಘಟಕದ ಪೌರಕಾರ್ಮಿಕರೊಂದಿಗೆ ಆಚರಿಸಿ ಮಾದರಿ ಎನಿಸಿದ್ದಾರೆ. ಘಟಕದಲ್ಲಿ ಕೇಕ್ ಕತ್ತರಿಸಿ, ಪೌರಕಾರ್ಮಿಕರಿಗೆ ಕೇಕ್ ತಿನ್ನಿಸಿ ಹುಟ್ಟುಹಬ್ಬ ಆಚರಿಸಿದರು. ನಂತರ ಘಟಕದ ಎಲ್ಲಾ ಪೌರಕಾರ್ಮಿಕರಿಗೆ ಊಟದ ವ್ಯವಸ್ಥೆಯನ್ನೂ ಮಾಡಿದ್ದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ. ಆರ್. ಪಾಟ್ಕರ್ ರವರು ಮಾತನಾಡಿ ಎಲ್ಲಾ ಗ್ರಾ.ಪಂ ಸದಸ್ಯರು ಇದನ್ನು ಅನುಸರಿಸುವಂತಾಗಲಿ. ಇದರಿಂದ ಘಟಕದ ಪೌರಕಾರ್ಮಿಕರಿಗೆ ಪ್ರೋತ್ಸಾಹ ನಿಡಿದಂತಾಗುತ್ತದೆ ಎಂದರು. ಶಿರ್ವ ಗ್ರಾ.ಪಂ ಅಭಿವೃದ್ದಿ ಅಧಿಕಾರಿ ಅನಂತಪದ್ಮನಾಭ ನಾಯಕ್, ಶಿರ್ವ ಪೊಲೀಸ್ ಠಾಣಾ ಠಾಣಾಧಿಕಾರಿ ಶ್ರೀಶೈಲಾ ಮುರಗೋಡು ರವರು ಈ ರೀತಿಯ ಹುಟ್ಟುಹಬ್ಬ ಆಚರಣೆಗೆ ಶ್ಲಾಘನೆ ವ್ಯಕ್ತಪಡಿಸಿದರು. ಘಟಕದ ಮೇಲ್ವಿಚಾರಕ ಕಿಶೋರ್ ರವರು ಘಟಕದ ಪರವಾಗಿ ಕೃತಜ್ಞತೆ ಸಲ್ಲಿಸಿದರು. ಲಯನ್ಸ್ ಕ್ಲಬ್ ಉಡುಪಿ ಕರಾವಳಿಯ ಕಾರ್ಯದರ್ಶಿ ರಾಘವೇಂದ್ರ ನಾಯಕ್, ಶಿರ್ವ ಪೋಲಿಸ್ ಠಾಣಾ ಸಿಬ್ಬಂದಿ ಪ್ರಸಾದ್, ಘಟಕದ ಸಿಬ್ಬಂದಿ ಉಪಸ್ಥಿತರಿದ್ದರು.
ಉಡುಪಿ : ಮುದ್ರಣ ಯಂತ್ರಗಳ ಪ್ರಾತ್ಯಕ್ಷಿಕೆ
Posted On: 03 Sep 2021, 11:14 AM
ಉಡುಪಿ : ವೈಷ್ಣವಿ ಎಂಟರ್ಪ್ರೈಸಸ್ ಮಂಗಳೂರು ಮತ್ತು ಉಡುಪಿ ಜಿಲ್ಲಾ ಮುದ್ರಣಾಲಯಗಳ ಮಾಲಕರ ಸಂಘ ಉಡುಪಿ ಇವರ ಸಹಯೋಗದಲ್ಲಿ Epson ಮುದ್ರಣ ಯಂತ್ರಗಳ ಪ್ರಾತ್ಯಕ್ಷಿಕೆಯು ಆದಿ ಉಡುಪಿಯ ತಾರಸ್ ಪ್ರಿಂಟ್ ಕಾರ್ನರ್ ಬೈದಶ್ರೀ ಬಿಲ್ಡಿಂಗ್ ನಲ್ಲಿ ಜರಗಿತು. ಬೈದಶ್ರೀ ಅಧ್ಯಕ್ಷರಾದ ದಾಮೋದರ ಕಲ್ಮಾಡಿ ಉದ್ಘಾಟನೆಯನ್ನು ನೆರವೇರಿಸಿದರು. ಮುಖ್ಯ ಅತಿಥಿಯಾಗಿ Epson ಮಾರ್ಕೆಟಿಂಗ್ ಹೆಡ್ ಶಂಕರ ನಾರಾಯಣನ್, ಮುದ್ರಣಾಲಯ ಮಾಲಕರ ಸಂಘದ ಅಧ್ಯಕ್ಷರಾದ ಎಮ್. ಮಹೇಶ್ ಕುಮಾರ್, ಗೌರವ ಸಲಹೆಗಾರರಾದ ಅಶೋಕ್ ಶೆಟ್ಟಿ, ಕೋಶಾಧಿಕಾರಿ ಸುಧೀರ್ ಡಿ, ಬಂಗೇರ, ಸದಸ್ಯರಾದ ರಮೇಶ್ ಕುಂದರ್ ಮತ್ತು ವೈಷ್ಣವಿ ಎಂಟರ್ಪ್ರೈಸಸ್ ನ ಮೋಹನ್ ದಾಸ್ ನಾಯಕ್, ಕಾರ್ತಿಕ್ ಹರೀಶ್, ರಾಜೇಶ್ ಸೀತಾರಾಮ್ ಹಾಗೂ ಚೆಲುವ ರಾಜ್ ಪೆರಂಪಳ್ಳಿ, ಶೇಖರ್ ಪೂಜಾರಿ, ಶ್ರೀಮತಿ ರೂಪ ಉಪಸ್ಥಿತರಿದ್ದರು.
ಮನಪಾ ಮೆಡಿಕಲ್ ಆಫೀಸರ್ ಹಾಗೂ ಆರೋಗ್ಯ ಸಲಹೆಗಾರರಾಗಿ ಡಾ| ಎಂ. ಅಣ್ಣಯ್ಯ ಕುಲಾಲ್ ಉಳ್ತೂರು ನೇಮಕ
Posted On: 02 Sep 2021, 11:05 AM
ಮಂಗಳೂರು : ಮಂಗಳೂರು ಮನಪಾ ವ್ಯಾಪ್ತಿಯಲ್ಲಿ ಕೋವಿಡ್, ಮಲೇರಿಯಾ, ಡೆಂಗ್ಯೂ, ಚಿಕನ್ಗುನ್ಯ ಸಹಿತ ವಿವಿಧ ರೋಗಗಳ ಪರಿಣಾಮಕಾರಿ ನಿಭಾವಣೆ ಅಗತ್ಯ ಇದ್ದುದನ್ನ ಮನಗೊಂಡು, ವೆನ್ಲೋಕ್ ಆಸ್ಪತ್ರೆಯಲ್ಲಿ ಕೋವಿಡ್ ಮೆಡಿಕಲ್ ಆಫೀಸರ್ ಹಾಗೂ ಸಾರ್ವಜನಿಕ ವೈದ್ಯಕೀಯ ಸಂಪರ್ಕ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿ ಜಿಲ್ಲಾಡಳಿತದ ಗಮನ ಸೆಳೆದಿದ್ದ ಡಾ| ಎಂ. ಅಣ್ಣಯ್ಯ ಕುಲಾಲ್ ಉಳ್ತೂರು ಇವರನ್ನ ಮನಪಾ ಮೆಡಿಕಲ್ ಆಫೀಸರ್ ಹಾಗೂ ಆರೋಗ್ಯ ಸಲಹಾಗಾರರನ್ನಾಗಿ ನೇಮಕಾತಿ ಮಾಡಲಾಗಿದೆ.
ರೋಟರಿ ಕ್ಲಬ್ಗಳ ಸಂಯುಕ್ತ ಆಶ್ರಯದಲ್ಲಿ ಸೋಲಾರ್ ವಿದ್ಯುತ್ ಸಂಪರ್ಕ
Posted On: 02 Sep 2021, 10:36 AM
ಉಡುಪಿ : ರೋಟರಿ ಜಿಲ್ಲೆ 3150 ರ ಹೈದರಾಬಾದ್ ಕ್ಲಬ್ ಮತ್ತು ರೋಟರಿ ಜಿಲ್ಲೆ 3182 ರ ಕಲ್ಯಾಣಪುರ ಹಾಗೂ ಸೈಬ್ರಕಟ್ಟೆ ರೋಟರಿ ಸಂಸ್ಥೆಗಳ ವತಿಯಿಂದ ಪಕ್ಕಿಬೆಟ್ಟು ಗ್ರಾಮದ ನಿವಾಸಿಯಾದ ಲೀಲಾವತಿ ಗಾಣಿಗ ಇವರ ಮನೆಗೆ ಸೋಲಾರ್ ವಿದ್ಯುತ್ ದೀಪದ ವ್ಯವಸ್ಥೆಯನ್ನು ರೋಟರಿ ರೋಶ್ನಿ ಕಾರ್ಯಕ್ರಮದಡಿ ಒದಗಿಸಿಕೊಡಲಾಯಿತು. ರೋಟರಿ ನಿಕಟಪೂರ್ವ ಜಿಲ್ಲಾ ಗವರ್ನರ್ ರಾಜಾರಾಂ ಭಟ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ವಿವಿಧ ಕಾರಣಗಳಿಂದಾಗಿ ಇವತ್ತಿನವರೆಗೂ ವಿದ್ಯುತ್ ಬೆಳಕನ್ನು ಹೊಂದಲು ವಿಫಲರಾದ ಸುಮಾರು 65 ವಯೋಮಾನದ ಇವರು ಇಂದು ಸಣ್ಣ ನೆಮ್ಮದಿಯ ಬದುಕು ಕಾಣುವಂತಾಗಿದೆ ಎಂದು ಹೇಳಿ ಯಾವುದೇ ಭೌಗೋಳಿಕ ಮಿತಿ ಹೊಂದದ ರೋಟರಿಯ ಬಾಂಧವ್ಯ ಮತ್ತು ಸದಸ್ಯರುಗಳ ನಿಸ್ವಾರ್ಥ ಸೇವೆಯನ್ನು ಕೊಂಡಾಡಿದರು. ವೇದಿಕೆಯಲ್ಲಿ ಕಲ್ಯಾಣಪುರ ಹಾಗೂ ಸೈಬ್ರಕಟ್ಟೆ ರೋಟರಿ ಕ್ಲಬ್ ಗಳ ಅಧ್ಯಕ್ಷ ರಾದ ಶಂಭುಶಂಕರ್, ಪ್ರಸಾದ್ ಭಟ್, ಕಾರ್ಯದರ್ಶಿಗಳಾದ ಪ್ರಕಾಶ್, ಅಣ್ಣಯ್ಯ ದಾಸ್, ವಲಯ ಸೇನಾನಿಯವರುಗಳಾದ ಬ್ರಾಯನ್ ಡಿಸೋಜ, ವಿಜಯ್ ಕುಮಾರ್ ಶೆಟ್ಟಿ , ನಿಕಟಪೂರ್ವ ಜಿಲ್ಲಾ ಕಾರ್ಯದರ್ಶಿ ಅಲೆನ್ ಲೂವಿಸ್, ಸತೀಶ್, ಬ್ಯಾಪ್ಟಿಸ್ಟ್ ಡಯಾಸ್ ಮತ್ತಿತರ ರೋಟರಿ ಗಣ್ಯರು ಉಪಸ್ಥಿತರಿದ್ದರು.
ರೋಟರಿ ಕ್ಲಬ್ಗಳ ಸಂಯುಕ್ತ ಆಶ್ರಯದಲ್ಲಿ ಸೋಲಾರ್ ವಿದ್ಯುತ್ ಸಂಪರ್ಕ
Posted On: 02 Sep 2021, 10:35 AM
ಉಡುಪಿ : ರೋಟರಿ ಜಿಲ್ಲೆ 3150 ರ ಹೈದರಾಬಾದ್ ಕ್ಲಬ್ ಮತ್ತು ರೋಟರಿ ಜಿಲ್ಲೆ 3182 ರ ಕಲ್ಯಾಣಪುರ ಹಾಗೂ ಸೈಬ್ರಕಟ್ಟೆ ರೋಟರಿ ಸಂಸ್ಥೆಗಳ ವತಿಯಿಂದ ಪಕ್ಕಿಬೆಟ್ಟು ಗ್ರಾಮದ ನಿವಾಸಿಯಾದ ಲೀಲಾವತಿ ಗಾಣಿಗ ಇವರ ಮನೆಗೆ ಸೋಲಾರ್ ವಿದ್ಯುತ್ ದೀಪದ ವ್ಯವಸ್ಥೆಯನ್ನು ರೋಟರಿ ರೋಶ್ನಿ ಕಾರ್ಯಕ್ರಮದಡಿ ಒದಗಿಸಿಕೊಡಲಾಯಿತು. ರೋಟರಿ ನಿಕಟಪೂರ್ವ ಜಿಲ್ಲಾ ಗವರ್ನರ್ ರಾಜಾರಾಂ ಭಟ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ವಿವಿಧ ಕಾರಣಗಳಿಂದಾಗಿ ಇವತ್ತಿನವರೆಗೂ ವಿದ್ಯುತ್ ಬೆಳಕನ್ನು ಹೊಂದಲು ವಿಫಲರಾದ ಸುಮಾರು 65 ವಯೋಮಾನದ ಇವರು ಇಂದು ಸಣ್ಣ ನೆಮ್ಮದಿಯ ಬದುಕು ಕಾಣುವಂತಾಗಿದೆ ಎಂದು ಹೇಳಿ ಯಾವುದೇ ಭೌಗೋಳಿಕ ಮಿತಿ ಹೊಂದದ ರೋಟರಿಯ ಬಾಂಧವ್ಯ ಮತ್ತು ಸದಸ್ಯರುಗಳ ನಿಸ್ವಾರ್ಥ ಸೇವೆಯನ್ನು ಕೊಂಡಾಡಿದರು. ವೇದಿಕೆಯಲ್ಲಿ ಕಲ್ಯಾಣಪುರ ಹಾಗೂ ಸೈಬ್ರಕಟ್ಟೆ ರೋಟರಿ ಕ್ಲಬ್ ಗಳ ಅಧ್ಯಕ್ಷ ರಾದ ಶಂಭುಶಂಕರ್, ಪ್ರಸಾದ್ ಭಟ್, ಕಾರ್ಯದರ್ಶಿಗಳಾದ ಪ್ರಕಾಶ್, ಅಣ್ಣಯ್ಯ ದಾಸ್, ವಲಯ ಸೇನಾನಿಯವರುಗಳಾದ ಬ್ರಾಯನ್ ಡಿಸೋಜ, ವಿಜಯ್ ಕುಮಾರ್ ಶೆಟ್ಟಿ , ನಿಕಟಪೂರ್ವ ಜಿಲ್ಲಾ ಕಾರ್ಯದರ್ಶಿ ಅಲೆನ್ ಲೂವಿಸ್, ಸತೀಶ್, ಬ್ಯಾಪ್ಟಿಸ್ಟ್ ಡಯಾಸ್ ಮತ್ತಿತರ ರೋಟರಿ ಗಣ್ಯರು ಉಪಸ್ಥಿತರಿದ್ದರು.
ಮಜೂರು : ಶ್ರೀ ಬ್ರಹ್ಮ ಬೈದರ್ಕಳ ಗರೋಡಿಯಲ್ಲಿ ವಾರ್ಷಿಕ ಹೂವಿನ ಪೂಜೆ
Posted On: 01 Sep 2021, 04:17 PM
ಕಾಪು : ಕಾಪು ತಾಲೂಕಿನ ಮಜೂರು, ಉಳಿಯಾರಗೋಳಿ, ಕರಂದಾಡಿ, ಪಂಜಿತ್ತೂರು, ಮಡುಂಬು, ಉಂಡಾರು ಗ್ರಾಮಗಳಿಗೆ ಸಂಬಂಧಿಸಿದ ಮಜೂರಿನ ಶ್ರೀ ಬ್ರಹ್ಮ ಬೈದರ್ಕಳ ಗರೋಡಿಯ ವಾರ್ಷಿಕ ಹೂವಿನ ಪೂಜೆಯು ಶನಿವಾರ (4-9-21) ಸಂಜೆ 3 ಗಂಟೆಗೆ ಜರಗಲಿದೆ. ಕೋವಿಡ್ ಮಾರ್ಗಸೂಚಿಯ ಅನ್ವಯದಂತೆ ಈ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಉಡುಪಿ ವಿಧಾನ ಸಭಾ ಕ್ಷೇತ್ರದಲ್ಲಿ 3 ನೇ ಸ್ಥಾನದಲ್ಲಿ ಶ್ರೀ ನಾರಾಯಣಗುರು ಆಂಗ್ಲ ಮಾಧ್ಯಮ ಶಾಲೆ ಮಲ್ಪೆ
Posted On: 01 Sep 2021, 01:27 PM
ಉಡುಪಿ : ಶ್ರೀ ನಾರಾಯಣಗುರು ಆಂಗ್ಲ ಮಾಧ್ಯಮ ಶಾಲೆ ಮಲ್ಪೆ ಇಲ್ಲಿನ ವಿದ್ಯಾರ್ಥಿಗಳಾದ ಸಾತ್ವಿಕ್ ಪಿ ಭಟ್ 625 ರಲ್ಲಿ 625 ಮತ್ತು ಜೆರೊಹ್ಯಾಮ್ ಲೋಯ್ಡ್ ಮಾಬೆನ್ 625 ರಲ್ಲಿ 623 ದಾಖಲೆಯ ಅಂಕ ತೆಗೆದಿರುತ್ತಾರೆ. ಪರೀಕ್ಷೆಗೆ ಹಾಜರಾದ 100 ವಿದ್ಯಾರ್ಥಿಗಳಲ್ಲಿ 10 ವಿದ್ಯಾರ್ಥಿಗಳು ಉನ್ನತ ಶ್ರೇಣಿ, 35 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ ಮತ್ತು ಉಳಿದ ಮಕ್ಕಳು 60% ಕಿಂತ ಹೆಚ್ಚು ಅಂಕ ತೆಗೆದು ಶಾಲೆಗೆ ಕೀರ್ತಿಯನ್ನು ತಂದಿರುತ್ತಾರೆ. ಫಲಿತಾಂಶದಲ್ಲಿ ಶಾಲೆಯು ಉಡುಪಿ ವಿಧಾನ ಸಭಾ ಕ್ಷೇತ್ರದಲ್ಲಿ 3 ನೇ ಸ್ಥಾನದಲ್ಲಿರುವುದು ಶಾಲೆಯ ಈ ಸಾಲಿನ ಸಾಧನೆಯಾಗಿರುತ್ತದೆ. ಈ ಸಾಧನೆಗಾಗಿ ಎಲ್ಲಾ ವಿದ್ಯಾರ್ಥಿಗಳಿಗೂ, ಇದಕ್ಕೆ ತುಂಬಾ ಶ್ರಮವಹಿಸಿದ ಮುಖ್ಯ ಶಿಕ್ಷಕರು, ಮುಖ್ಯ ಶಿಕ್ಷಕಿ, ಶಿಕ್ಷಕ - ಶಿಕ್ಷಕಿಯರು ಹಾಗೂ ಶಿಕ್ಷಕೇತರ ವೃಂದದವರು ಹಾಗೂ ಮಕ್ಕಳ ಪೋಷಕರಿಗೆ ಶಾಲಾಡಳಿತ ಮಂಡಳಿ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು.
