Updated News From Kaup
ಮಂಗಳೂರು ಮಡಗಾಂವ್ ಪ್ಯಾಸೆಂಜರ್ ರೈಲು ಪುನರಾರಂಭಿಸುವಂತೆ ಮುಖ್ಯಮಂತ್ರಿಯವರಲ್ಲಿ ಮನವಿ
Posted On: 18 Jan 2021, 09:58 PM
ಮಂಗಳೂರು ಮಡಗಾಂವ್ ಪ್ಯಾಸೆಂಜರ್ ರೈಲು ಸ್ಥಗಿತಗೊಂಡು 9 ತಿಂಗಳು ಕಳೆದಿದ್ದು ಕರಾವಳಿ ಕರ್ನಾಟಕ ಭಾಗದ ರೈತರು, ಆರ್ಥಿಕವಾಗಿ ಹಿಂದುಳಿದವರು ಹಾಗೂ ಸಣ್ಣ ವ್ಯಾಪಾರಿಗಳ ವ್ಯಾಪಾರ ವಹಿವಾಟಿಗೆ ತೊಂದರೆಯಾಗಿದೆ. ಸಾಮಾನ್ಯ ಜನರ ಹಿತದೃಷ್ಟಿಯಿಂದ ಈ ರೈಲನ್ನು ಅತಿ ಶೀಘ್ರದಲ್ಲಿ ಪುನರಾರಂಭಗೊಳಿಸಲು ಸ್ವಚ್ಛ ಭಾರತ್ ಫ್ರೆಂಡ್ಸ್ ವತಿಯಿಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಲ್ಲಿ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಶಾಸಕ ಕೆ. ರಘುಪತಿ ಭಟ್, ಮಂಗಳೂರು ವಿಭಾಗ ಪ್ರಭಾರಿ ಕೆ. ಉದಯಕುಮಾರ್ ಶೆಟ್ಟಿ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ. ರಾಘವೇಂದ್ರ ಕಿಣಿ, ಸ್ವಚ್ಛ ಭಾರತ್ ಫ್ರೆಂಡ್ಸ್ ಸಂಚಾಲಕ ಗಣೇಶ್ ಪ್ರಸಾದ್ ಜಿ. ನಾಯಕ್, ಜಿಲ್ಲಾ ಸಂಯೋಜಕ ರಾಘವೇಂದ್ರ ಪ್ರಭು ಕರ್ವಾಲು, ತಾಲೂಕು ಸಂಯೋಜಕರುಗಳಾದ ಜಗದೀಶ್ ಶೆಟ್ಟಿ, ಉದಯ ನಾಯ್ಕ್ ಉಪಸ್ಥಿತರಿದ್ದರು.
ಸಹಸ್ರ ಪೂರ್ಣ ಚಂದ್ರ ದರ್ಶನ ಹಾಗೂ ಕನಕಾಭಿಷೇಕ ಧಾರ್ಮಿಕ ಕಾರ್ಯಕ್ರಮದಲ್ಲಿ ಗಿಡಗಳ ವಿತರಣೆ
Posted On: 18 Jan 2021, 06:32 PM
ಪಡುಬಿದ್ರಿ : ಇಲ್ಲಿಯ ಗಂಗೂ ಹೊಸಮನೆಯ ಪಿ.ಎಚ್.ಪಾರ್ಥಸಾರಥಿ - ಶ್ರೀಮತಿ ಶಾಂತಾ ಪಾರ್ಥಸಾರಥಿ ಅವರು ತಮ್ಮ 'ಸಹಸ್ರ ಪೂರ್ಣ ಚಂದ್ರ ದರ್ಶನ ಹಾಗೂ ಕನಕಾಭಿಷೇಕ' ಧಾರ್ಮಿಕ ಕಾರ್ಯಕ್ರಮದಲ್ಲಿ ಮುನ್ನೂರು ವಿವಿಧ ಜಾತಿಯ ಗಿಡಗಳನ್ನು ವಿತರಿಸಿ ತಮ್ಮ ಪರಿಸರ ಪ್ರೀತಿಯನ್ನು ಮೆರೆದರು. ಭಾರತೀಯ ಕಿಸಾನ್ ಸಂಘದ ಪಡುಬಿದ್ರಿ ವಿಭಾಗದ ಮಾಜಿ ಅಧ್ಯಕ್ಷರಾಗಿದ್ದ ಪಾರ್ಥಸಾರಥಿಯವರು ಕಿಸಾನ್ ಸಹಜ ಪರಿಸರ ರಕ್ಷಣೆ - ಪರಿಸರ ಬೆಳವಣಿಗೆಯ ಕಾಳಜಿವುಳ್ಳವರಾಗಿದ್ದು ಬಂಧು ಬಾಂಧವರು ,ಅಭಿಮಾನಿಗಳು ,ಸಮಾಜದ ಗಣ್ಯರು ಭಾಗವಹಿಸುವ ಈ ಸಂದರ್ಭವನ್ನು ಸಸಿಗಳ ವಿತರಣೆಗೆ ಬಳಸಿಕೊಂಡಿದ್ದು ಧಾರ್ಮಿಕ ಕಾರ್ಯಕ್ರಮದಲ್ಲಿ ಪರಿಸರ ರಕ್ಷಣೆ ಅಭಿಯಾನದ ಅಳವಡಿಕೆಯ ಸಾಧ್ಯತೆಯನ್ನು ಸ್ವತಃ ಕಾರ್ಯಗತಗೊಳಿಸಿ ಕಿರಿಯರಿಗೆ ಮಾದರಿಯಾದರು. ವೇ.ಮೂ. ಶ್ರೀನಿವಾಸ ಭಟ್ ಅವರಿಗೆ ಮೊದಲು ಪಾರಿಜಾತ ಹೂವಿನ ಗಿಡವನ್ನು ವಿತರಿಸಿ ಗಿಡಗಳನ್ನು ವಿತರಿಸುವ ಪ್ರಕ್ರಿಯೆಆರಂಭಿಸಲಾಯಿತು .ಭಾರತ ಕಿಸಾನ್ ಸಂಘದ ಮಾಜಿ ಕಾರ್ಯದರ್ಶಿ ಸದಾಶಿವ ಆಚಾರ್ಯ ಅವರು ಉಪಸ್ಥಿತರಿದ್ದರು.ವಿಘ್ನೇಶ ಕುಮಾರ್ ,ಸಂಪತ್ ಕುಮಾರ್, ಮತ್ತು ಗಣೇಶ ಐತಾಳ್ ಕಾರ್ಯಕ್ರಮ ಸಂಯೋಜಿಸಿದ್ದರು.
ಮಟ್ಟು ಗುಳ್ಳ ಬೆಳೆಗಾರರ ಸಂಘದ ಅಧ್ಯಕ್ಷರಾಗಿ ಸುನೀಲ್ ಡಿ. ಬಂಗೇರ
Posted On: 18 Jan 2021, 06:22 PM
ಮಟ್ಟು ಗುಳ್ಳ ಬೆಳೆಗಾರರ ಸಂಘದ ಅಧ್ಯಕ್ಷರಾಗಿ ಸುನೀಲ್ ಡಿ. ಬಂಗೇರ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಮೋಹನ್ ರಾವ್, ಕಾರ್ಯದರ್ಶಿ ರೋಷನ್ ಮಟ್ಟು, ಜೊತೆ ಕಾರ್ಯದರ್ಶಿ ಜಗದೀಶ್ ಬಿ. ಪೂಜಾರಿ, ಖಜಾಂಚಿಯಾಗಿ ಎಮ್. ಲಕ್ಷ್ಮಣ ರಾವ್, ಸದಸ್ಯರಾಗಿ ಐಲಿನ್ ಪ್ರಭಾವತಿ, ಮಹೇಶ್ ಪೂಜಾರಿ, ಶಶಿಧರ್ ಡಿ. ಕೋಟ್ಯಾನ್, ಪ್ರಶಾಂತ್ ಕುಮಾರ್, ಸದಾನಂದ ಸಾಲಿಯಾನ್, ಅವಿನಾಶ್ ಮಟ್ಟು, ಅಶೋಕ್ ಡಿ. ಕೋಟ್ಯಾನ್, ಸದಾನಂದ ಡಿ. ಸುವರ್ಣ, ಉಮೇಶ್, ವಿಠ್ಠಲ ಪೂಜಾರಿ ಆಯ್ಕೆಯಾಗಿರುತ್ತಾರೆ.
ಹೆಜಮಾಡಿ ಬಂದರಿಗೆ 19ರಂದು ಮುಖ್ಯಮಂತ್ರಿಯಿಂದ ಶಿಲಾನ್ಯಾಸ
Posted On: 17 Jan 2021, 01:24 PM
ಮೀನುಗಾರರ ಸುದೀರ್ಘ ಹೋರಾಟದ ಫಲವಾಗಿ ಕಾಪು ತಾಲೂಕಿನ ಹೆಜಮಾಡಿ ಕೋಡಿಯಲ್ಲಿ ₹ 180.8 ಕೋಟಿಯ ವಿವಿಧ ಸವಲತ್ತುಗಳ ಕಾರ್ಯಯೋಜನೆಯ ಮೀನುಗಾರಿಕಾ ಬಂದರು ಕಾಮಗಾರಿಗೆ ಇದೇ ಬರುವ 19ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶಿಲಾನ್ಯಾಸ ಮಾಡಲಿದ್ದಾರೆ.
ಪಡುಬಿದ್ರಿ : ಜನವರಿ 19ರಿಂದ ಖಡ್ಗೇಶ್ವರಿ ಬ್ರಹ್ಮಸ್ಥಾನದಲ್ಲಿ ಢಕ್ಕೆಬಲಿ ಸೇವೆ ಆರಂಭ
Posted On: 17 Jan 2021, 01:15 PM
ಇತಿಹಾಸ ಪ್ರಸಿದ್ಧ ಶ್ರೀ ಖಡ್ಗೇಶ್ವರಿ ಬ್ರಹ್ಮಸ್ಥಾನದಲ್ಲಿ ದ್ವೈವಾರ್ಷಿಕವಾಗಿ ನಡೆಯುವ ಢಕ್ಕೆಬಲಿ ಸೇವೆಯು ಇದೇ ಬರುವ ಜನವರಿ 19 ಮಂಗಳವಾರದಿಂದ ಆರಂಭವಾಗಿ ಮಾರ್ಚ್ 6 ನೇ ತಾರೀಖಿಗೆ ಹಗಲು ತಂಬಿಲ ಸೇವೆ ನೀಡಿದ ಭಕ್ತಾದಿಗಳ ಸೇವೆಯೊಂದಿಗೆ ಮಂಡಲ ವಿಸರ್ಜನೆ ನಡೆಯಲಿದೆ. ಈ ಬಾರಿ ಒಟ್ಟು 24 ಢಕ್ಕೆ ಬಲಿ ಸೇವೆಗಳು ನಡೆಯಲಿದ್ದು, ಇದರಲ್ಲಿ ಇದೇ ಬರುವ 23 ರಂದು ಮುರುಡಿ ಬ್ರಹ್ಮಸ್ಥಾನದಲ್ಲಿ ಮತ್ತು 26ರಂದು ಹೆಜಮಾಡಿ ಬ್ರಹ್ಮಸ್ಥಾನದಲ್ಲಿ ಢಕ್ಕೆ ಬಲಿ ಸೇವೆ ನಡೆಯಲಿದೆ. ಈ ಬಾರಿ ಕೋವಿಡ್ -19 ಹಿನ್ನೆಲೆಯಲ್ಲಿ ಸರಳವಾಗಿ ನಡೆಯಲಿದೆ ಎಂದು ತಿಳಿಸಿದ್ದಾರೆ.
ಅದಮಾರು ರೈಲ್ವೆ ಹಳಿಯಲ್ಲಿ ವ್ಯಕ್ತಿಯೋರ್ವನ ಶವ ಪತ್ತೆ
Posted On: 17 Jan 2021, 12:24 PM
ಪಡುಬಿದ್ರಿ ಠಾಣಾ ವ್ಯಾಪ್ತಿಯ ಅದಮಾರು ಕುಂಜೂರು ರೈಲ್ವೆ ಹಳಿಯ ಬಳಿ ವ್ಯಕ್ತಿಯೋರ್ವನ ಮೃತ ದೇಹ ಪತ್ತೆಯಾಗಿದೆ. ಬಾಗಲಕೋಟೆ ಮೂಲದ ಹುಲ್ಲಪ್ಪ ಹೆಸರಿನ ಈ ವ್ಯಕ್ತಿ ವಿವಾಹಿತನಾಗಿದ್ದು 2 ಮಕ್ಕಳು ಇದ್ದಾರೆ ಎಂದು ತಿಳಿದು ಬಂದಿದೆ. ಆತ್ಮಹತ್ಯೆಗೆ ಕಾರಣವೇನೆಂದು ಇದುವರೆಗೂ ತಿಳಿದು ಬಂದಿಲ್ಲ. ಕಾಪುವಿನ ಸಮಾಜ ಸೇವಕ ಸೂರಿ ಶೆಟ್ಟಿ ಮತ್ತು ನಾಗರಾಜರ ಸಹಾಯದಿಂದ ಆಂಬುಲೆನ್ಸ್ಮೂಲಕ ಶವವನ್ನು ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಶವಾಗಾರದಲ್ಲಿ ಇಡಲಾಗಿದೆ. ಸ್ಥಳಕ್ಕೆ ಪಡುಬಿದ್ರಿ ಠಾಣಾ ಪೋಲಿಸರು ಭೇಟಿ ನೀಡಿದ್ದಾರೆ.
ಯಕ್ಷರಂಗದಲ್ಲಿ ಅರಳಬೇಕಾದ ಪ್ರತಿಭೆಗೆ ಕಾಡುತ್ತಿದೆ ಅನಾರೋಗ್ಯ ಸಮಸ್ಯೆ - ಆರ್ಥಿಕ ಸಹಾಯದ ನಿರೀಕ್ಷೆಯಲ್ಲಿದೆ ಈ ಕುಟುಂಬ
Posted On: 16 Jan 2021, 07:23 PM
ಮಂಗಳೂರು : ಶೈಕ್ಷಣಿಕ ಮತ್ತು ಯಕ್ಷಗಾನ ರಂಗದಲ್ಲಿ ಬೆಳೆಯುತ್ತಾ ಬರುತ್ತಿರುವ ಪ್ರತಿಭಾವಂತ ಪಿಯುಸಿ ವಿದ್ಯಾರ್ಥಿ ಕೇರಳ ಮೂಲದ ಜಿತೇಶ್ ಕುಮಾರ್ ರೈ ಮೂತ್ರ ಪಿಂಡಗಳ ಸಮರ್ಪಕ ಬೆಳವಣಿಗೆಯಿಲ್ಲದೇ ಆಪತ್ತಿಗೆ ಸಿಲುಕಿದ್ದಾರೆ. ತನ್ನ ಗಾಂಭೀರ್ಯದ ವೇಷಗಳಿಂದ ರಂಗದಲ್ಲಿ ಇತರರನ್ನು ರಂಜಿಸುತ್ತಿದ್ದ ಬಾಲಕ ಈಗ ತನ್ನ ಜೀವಕ್ಕಾರು ಆಸರೆ ಎಂಬ ಆತಂಕಕ್ಕೆ ಸಿಲುಕಿ, ಆಸ್ಪತ್ರೆಯಲ್ಲಿ ಮಲಗಿದ್ದು, ಮಗನನ್ನು ಹಠಾತ್ ಆಗಿ ಕಾಡಿದ ಅನಾರೋಗ್ಯದ ಚಿಕಿತ್ಸೆಗಾಗಿ ಹಣ ಹೊಂದಿಸಿಕೊಳ್ಳಲು ಆತನ ಮನೆಯವರು ಪರದಾಡುವಂತಾಗಿದೆ. ಮಂಜೇಶ್ವರ ತಾಲೂಕಿನ ಕಾಟುಕುಕ್ಕೆ ದಂಬೆಕ್ಕಾನ ನಿವಾಸಿ ವಿಶ್ವನಾಥ ರೈ ಮತ್ತು ಪುಷ್ಪಾವತಿ ದಂಪತಿಯ ಪುತ್ರ, ಪುತ್ತೂರು ದರ್ಬೆ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ನಡೆಸುತ್ತಿದ್ದ ಜಿತೇಶ್ ಕುಮಾರ್ ರೈ ಅನಾರೋಗ್ಯದಿಂದ ಬಳಲುತ್ತಿರುವ ಬಾಲಕ. ಏಳನೇ ತರಗತಿಯಿಂದಲೇ ಯಕ್ಷಗಾನ ಕಲೆಯತ್ತ ತಿರುಗಿದ ಜಿತೇಶ್ ಕುಮಾರ್ ಬಾಲ ಕಲಾವಿದರ ಮೇಳದಲ್ಲಿ ಪ್ರಬುದ್ಧ ಕಲಾವಿದನಾಗಿ ಮೆರೆಯುತ್ತಾ ಬಂದಿದ್ದು, ಯಕ್ಷ ಕಲಾವಿದನಾಗಿ ಸುಬ್ರಹ್ಮಣ್ಯ, ಕೃಷ್ಣ, ವಿಷ್ಣು, ಚಂಡ-ಮುಂಡ ಸಹಿತ ವಿವಿಧ ವೇಷಗಳನ್ನು ಧರಿಸುತ್ತಾ ಆ ಪಾತ್ರಗಳಿಗೆ ಜೀವ ತುಂಬುತ್ತಾ ಬರುತ್ತಿದ್ದನು. ಪ್ರಬುದ್ಧ ಕಲಾವಿದನಾಗಿ ಬೆಳೆಯುತ್ತಿರುವ ಹಂತದಲ್ಲೇ ಅನಾರೋಗ್ಯದ ಬರಸಿಡಿಲು ಬಡಿದಿದ್ದು, ಪಿಯುಸಿ ಶಿಕ್ಷಣವನ್ನೂ ಅರ್ಧಕ್ಕೇ ಮೊಟಕುಗೊಳಿಸುವಂತಾಗಿದೆ. ಮೂತ್ರ ಪಿಂಡ ಬೆಳವಣಿಗೆಯಿಲ್ಲದೇ ತೊಂದರೆ ಅನುಭವಿಸುತ್ತಿರುವ ವಿದ್ಯಾರ್ಥಿ ಜಿತೇಶ್ ಕುಮಾರ್ ರೈ ಅವರಿಗೆ ವಾರಕ್ಕೆ ಎರಡು ಬಾರಿ ಡಯಾಲಿಸಿಸ್ ನಡೆಸ ಬೇಕಿದ್ದು, ತಿಂಗಳಿಗೆ ಕನಿಷ್ಟ 30 ಸಾವಿರ ರೂಪಾಯಿ ಖರ್ಚಾಗುತ್ತದೆ. ಡಯಾಲಿಸಿಸ್ಗೆ ವರ್ಷಕ್ಕೆ 3 ಲಕ್ಷ ರೂ. ಖರ್ಚಾಗಲಿದೆ. ಕಿಡ್ನಿ ಟ್ರಾನ್ಸ್ಫರ್ಗೆ 6 ಲಕ್ಷ ರೂ.ವರೆಗೆ ಖರ್ಚು ಅಂದಾಜಿಸಲಾಗಿದೆ. ಪ್ರಸ್ತುತ ಮಂಗಳೂರಿನ ಯೇನಪೋಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕನ ಕುಟುಂಬದ ಪರಿಸ್ಥಿತಿಯು ತೀರಾ ಹದಗೆಟ್ಟು ಹೋಗಿದ್ದು, ಅವನ ಚಿಕಿತ್ಸೆಯ ವೆಚ್ಚವನ್ನು ಭರಿಸಲಾಗದೇ ಕಂಗಾಲಾಗಿದ್ದಾರೆ. ಆರ್ಥಿಕವಾಗಿ ಸಧೃಢವಲ್ಲದ ಜಿತೇಶ್ ಕುಮಾರ್ನ ಅನಾರೋಗ್ಯ ಮತ್ತು ಕುಟುಂಬದ ಪರಿಸ್ಥಿತಿಯನ್ನು ಗಮನಿಸಿದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕ ವರ್ಗ ಮತ್ತು ಆಡಳಿತ ಸಿಬಂದಿ ವರ್ಗ ಈಗಾಗಲೇ ಒಂದು ಲಕ್ಷ ರೂ. ಸಹಾಯಧನವನ್ನು ಸಂಗ್ರಹಿಸಿ, ಆತನ ಮನೆಯವರಿಗೆ ನೀಡಿದೆ. ಆದರೆ ಜಿತೇಶ್ ಕುಮಾರ್ನ ಪೂರ್ಣ ಚಿಕಿತ್ಸೆಗೆ ದೊಡ್ಡ ಮೊತ್ತದ ಹಣಕಾಸಿನ ನೆರವಿನ ಅಗತ್ಯವಿದ್ದು, ಸಹೃದಯಿಗಳು ಹಣಕಾಸಿನ ನೆರವನ್ನು ನೀಡುವ ಮೂಲಕ ಆತನ ಪ್ರಾಣ ಉಳಿಸುವ ಕಾರ್ಯದಲ್ಲಿ ಕೈ ಜೋಡಿಸುವಂತೆ ಹೆತ್ತವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಕಲಿಕೆಯಲ್ಲಿ ಡಿಸ್ಟ್ರಿಂಕ್ಷನ್ ವಿದ್ಯಾರ್ಥಿಯಾಗಿರುವ ಜಿತೇಶ್ ಕುಮಾರ್ ಕಾಲೇಜಿನ ಅಧ್ಯಾಪಕ ವೃಂದದವರ ಅಚ್ಚು ಮೆಚ್ಚಿನ ವಿದ್ಯಾರ್ಥಿ. ಸಹಪಾಠಿಗಳಿಗೆ ಪ್ರಿಯನೂ ಹೌದು. ಕಲಿಕೆಯೊಂದಿಗೆ ಯಕ್ಷಗಾನ ಕ್ಷೇತ್ರದಲ್ಲೂ ಬಾಲ ಕಲಾವಿದನಾಗಿ ಮಿಂಚುತ್ತಾ ಸಾಗಿ ಬಂದಿರುವ ಜಿತೇಶ್ ಕುಮಾರ್ನ ಚಿಕಿತ್ಸೆಗೆ ನೆರವಾಗುವ ಸಹೃದಯಿ ದಾನಿಗಳು, ಜಿತೇಶ್ ಕುಮಾರ್ ಬ್ಯಾಂಕ್ ಆಫ್ ಬರೋಡಾ, ಕಾಟುಕುಕ್ಕೆ ಶಾಖೆ, ಖಾತೆ ಸಂಖ್ಯೆ : 68710100004325, IFSC : BARB0VJKTKE ಅಥವಾ ವಿಶ್ವನಾಥ ರೈ, ಬ್ಯಾಂಕ್ ಆಫ್ ಬರೋಡಾ, ಕಾಟುಕುಕ್ಕೆ ಶಾಖೆ, ಖಾತೆ ಸಂಖ್ಯೆ : 68710100002731, IFSC : BARB0VJKTKE ಇಲ್ಲಿಗೆ ತಮ್ಮ ಹಣಕಾಸಿನ ನೆರವನ್ನು ರವಾನಿಸಬಹುದು. ಅಥವಾ ವಿಶ್ವನಾಥ್ ರೈ ಅವರ ದೂರವಾಣಿ ಸಂಖ್ಯೆ : 09447295345 ಇವರನ್ನು ಸಂಪರ್ಕಿಸ ಬಹುದಾಗಿದೆ.
ಅಮ್ಮ ಇರೆನ ಜೋಕುಲೆಂಕುಲು ಭಜನೆ ಮಲ್ಪುವ ತುಳು ಭಕ್ತಿ ಗೀತೆ ವಿಜಯ್ ಶೆಟ್ಟಿ ಮೂಡುಬೆಳ್ಳೆ ಕ್ರಿಯೇಷನ್ಸ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ
Posted On: 16 Jan 2021, 05:22 PM
ಭಾವಗೀತೆ, ಭಕ್ತಿಗೀತೆ, ಚಿತ್ರಗೀತೆಗೆ, ಭಾವತುಂಬಿ ಸಮರ್ಪಣಾ ಭಾವದಿಂದ ಹಾಡುವ ಹಾಡುಗಾರ ವಿಜಯ್ ಶೆಟ್ಟಿ ಮೂಡುಬೆಳ್ಳೆ. ಇವರ ಮಧುರ ಕಂಠಕ್ಕೆ ಮಾರು ಹೋಗದವರೇ ಇಲ್ಲ. ವಿಜಯರ ಹಾಡಿನಲ್ಲಿ ಕೇವಲ ಹಾಡು ಮಾತ್ರವಿರುವುದಿಲ್ಲ. ಅಲ್ಲಿ ಭಾವ ತುಂಬಿ ಗಾಯನದಲ್ಲಿ ಲೀನವಾಗುವ ತನ್ಮಯತೆ ಇರುತ್ತದೆ. ಶಾರದೆಯ ಗುಡಿಯಲ್ಲಿ ಸರ್ವವನ್ನೂ ಅರ್ಪಿಸಿಕೊಂಡ ಆತ್ಮ ಸಮರ್ಪಣೆಯ ಸಾಕ್ಷಾತ್ಕಾರವಿರುತ್ತದೆ. ಜಗನ್ಮಾತೆಯ ಮಹಿಮೆಯನ್ನು ಪಾಡುವ ಸುಯೋಗ ಮತ್ತೊಮ್ಮೆ ಈ ಸಂಗೀತ ಗಾರನಿಗೆ ಒಲಿದು ಬಂದಿದೆ. ಮಕರ ಸಂಕ್ರಾಂತಿಯ ಶುಭದಿನದಂದು "ಅಮ್ಮ ಇರೆನ ಜೋಕುಲೆಂಕುಲು" ಭಕ್ತಿ ಗಾನಾಮೃತವನ್ನು ತನ್ನದೇ ಸ್ವಂತ ವಿಜಯ್ ಶೆಟ್ಟಿ ಮೂಡುಬೆಳ್ಳೆ ಕ್ರಿಯೇಷನ್ಸ್ ಎಂಬ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಳಿಸಿದ್ದಾರೆ. ಎಲ್ಲರೂ ವೀಕ್ಷಿಸಿ, ಚಾನೆಲ್ ಗೆ ಸಬ್ ಸ್ಕ್ರೈಬ್ ಮಾಡಬೇಕು ಎಂದು ವಿನಂತಿಸಿದ್ದಾರೆ.
ಉಡುಪಿ : ಸ್ವಾಮಿ ವಿವೇಕಾನಂದ ಜಯಂತಿ ಮತ್ತು ಯುವ ದಿನ ಕಾರ್ಯಕ್ರಮ
Posted On: 16 Jan 2021, 05:04 PM
ಉಡುಪಿ : ಸ್ವಾಮಿ ವಿವೇಕಾನಂದರ ಪ್ರಪಂಚಕ್ಕೆ ನೀಡಿದ ಜೀವನ ಸಂದೇಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಸಮಾಜದಲ್ಲಿ ಹೊಸ ಪರಿವತ೯ನೆ ಸಾಧ್ಯ ಎಂದು ಶಿವಾನಿ ಡಯಾಗ್ನಿಸ್ಟಿಕ್ ಮತ್ತು ರಿಸಚ್೯ ಸೆಂಟರ್ ಮುಖ್ಯಸ್ಥ ಅಭಾವಿಪ ಹಿರಿಯ ಕಾಯ೯ಕತ೯ ಡಾII ಶಿವಾನಂದ ನಾಯಕ್ ಹೇಳಿದರು. ಅವರು ಉಪ್ಪೂರು ಬಳಿಯ ಹಿಂದುಳಿದ ವಗ೯ಗಳ ಬಾಲಕರ ವಿದ್ಯಾಥಿ೯ ನಿಲಯದಲ್ಲಿ ಎಬಿವಿಪಿ ವತಿಯಿಂದ ನಡೆದ ಸ್ವಾಮಿ ವಿವೇಕಾನಂದ ಜಯಂತಿ ಮತ್ತು ಯುವ ದಿನ ಕಾರ್ಯಕ್ರಮದಲ್ಲಿ ಹೇಳಿದರು. ಸ್ವಾಮೀಜಿಯವರು ತಮ್ಮ ಇಡೀ ಜೀವನವನ್ನು ದೇಶಕ್ಕಾಗಿ ಮೀಸಲಾಗಿಟ್ಟಿದ್ದರು. ಅವರು ಯುವಕರ ಮೇಲೆಟ್ಟ ನಂಬಿಕೆ ವಿಶೇಷವಾಗಿತ್ತು. ತಮ್ಮ ಕಿರಿಯ ಪ್ರಾಯದಲ್ಲಿ ಅತ್ಯಂತ ಹಿರಿದಾದ ಕಾಯ೯ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದರು. ಸ್ವಾಮಿ ವಿವೇಕಾನಂದರು ಚಿಕಾಗೋದಲ್ಲಿ ಮಾಡಿದ ಭಾಷಣ ಚಾರಿತ್ರಿಕವಾದದ್ದು ಇಂದು ಭಾರತೀಯರಿಗೆ ವಿದೇಶದಲ್ಲಿ ಉತ್ತಮ ಗೌರವ ಸಿಗಲು ಇದು ಕಾರಣವಾಗಿದೆ ಎಂದರು. ಅತಿಥಿಯಾಗಿ ಸ್ವಚ್ಚ ಭಾರತ ಫ್ರೇoಡ್ಸ್ ಸಂಯೋಜಕ ರಾಘವೇಂದ್ರ ಪ್ರಭು,ಕವಾ೯ಲು ಪ್ರಸ್ಥಾವನೆಗೈದರು. ಕಾಯ೯ಕತ೯ ಅಶಿಷ್ ಶೆಟ್ಟಿ ನಿರೂಪಿಸಿದರು.ವಾಡ೯ನ್ ಗುರು ರಾವ್ ವಂದಿಸಿದರು.
ಮಚ್ಚಿನದಲ್ಲಿ ಜಲಜೀವನ್ ಮಿಷನ್ ಗ್ರಾಮೀಣ ಸಹಭಾಗಿತ್ವ ಕಾರ್ಯಕ್ರಮ
Posted On: 16 Jan 2021, 04:58 PM
ಬೆಳ್ತಂಗಡಿ ತಾಲೂಕಿನ ಮಚ್ಚಿನ ಗ್ರಾ.ಪಂಚಾಯತಿಯಲ್ಲಿ ಜಲಜೀವನ್ ಮಿಷನ್ ಕಾರ್ಯಚಟುವಟಿಕೆಯಡಿ ಸಮುದಾಯ ಸಂಸ್ಥೆ ವತಿಯಿಂದ ಗ್ರಾಮೀಣ ಸಹಭಾಗಿತ್ವ ಕಾರ್ಯಕ್ರಮ ನಡೆಸಲಾಯಿತು. ಜೆಜೆಎಮ್ ಐಇಸಿ/ಹೆಚ್.ಆರ್.ಡಿ ಜಿಲ್ಲಾ ಮುಖ್ಯಸ್ಥ ಶಿವರಾಮ ಪಿ.ಬಿ ಗ್ರಾಮ ಕ್ರಿಯಾ ಯೋಜನೆ ಮತ್ತು ಪಿ.ಆರ್.ಎ ಕುರಿತು ಮಾಹಿತಿ ನೀಡಿದರು. ಗ್ರಾಮ ಪಂಚಾಯತ್ ಆವರಣದಲ್ಲಿ ಗ್ರಾಮಸ್ಥರ ಸಹಕಾರದಲ್ಲಿ ನಕ್ಷೆ ಬಿಡಿಸಿ ಗ್ರಾಮದ ಸಂಪೂರ್ಣ ಚಿತ್ರಣ ಬಿತ್ತರಿಸಲಾಯಿತು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೌರಿಶಂಕರ್ ,ನೂತನ ಪಂಚಾಯತ್ ಸದಸ್ಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಸಹಾಯಕಿಯರು, ಗ್ರಾಮಸ್ಥರು ಉಪಸ್ಥಿತರಿದ್ದರು. ಜೆಜೆಎಮ್ ಸಿಬ್ಬಂದಿಗಳಾದ ಚರಣ್ ರಾಜ್,ಫಲಹಾರೇಶ್, ಮಹಾಂತೇಶ್, ರಘುಚಂದ್ರ ಶೆಟ್ಟಿ,ಸದಾಶಿವ,ಈಶ್ವರ್ ಅವರು ಸಹಕರಿಸಿದರು.
