Updated News From Kaup

ಅದಮಾರು ರೈಲ್ವೆ ಹಳಿಯಲ್ಲಿ ವ್ಯಕ್ತಿಯೋರ್ವನ ಶವ ಪತ್ತೆ

Thumbnail
Posted On: 17 Jan 2021, 12:24 PM

ಪಡುಬಿದ್ರಿ ಠಾಣಾ ವ್ಯಾಪ್ತಿಯ ಅದಮಾರು ಕುಂಜೂರು ರೈಲ್ವೆ ಹಳಿಯ ಬಳಿ ವ್ಯಕ್ತಿಯೋರ್ವನ ಮೃತ ದೇಹ ಪತ್ತೆಯಾಗಿದೆ. ಬಾಗಲಕೋಟೆ ಮೂಲದ ಹುಲ್ಲಪ್ಪ ಹೆಸರಿನ ಈ ವ್ಯಕ್ತಿ ವಿವಾಹಿತನಾಗಿದ್ದು 2 ಮಕ್ಕಳು ಇದ್ದಾರೆ ಎಂದು ತಿಳಿದು ಬಂದಿದೆ. ಆತ್ಮಹತ್ಯೆಗೆ ಕಾರಣವೇನೆಂದು ಇದುವರೆಗೂ ತಿಳಿದು ಬಂದಿಲ್ಲ. ಕಾಪುವಿನ ಸಮಾಜ ಸೇವಕ ಸೂರಿ ಶೆಟ್ಟಿ ಮತ್ತು ನಾಗರಾಜರ ಸಹಾಯದಿಂದ ಆಂಬುಲೆನ್ಸ್‌ಮೂಲಕ ಶವವನ್ನು ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಶವಾಗಾರದಲ್ಲಿ ಇಡಲಾಗಿದೆ. ಸ್ಥಳಕ್ಕೆ ಪಡುಬಿದ್ರಿ ಠಾಣಾ ಪೋಲಿಸರು ಭೇಟಿ ನೀಡಿದ್ದಾರೆ.

ಯಕ್ಷರಂಗದಲ್ಲಿ ಅರಳಬೇಕಾದ ಪ್ರತಿಭೆಗೆ ಕಾಡುತ್ತಿದೆ ಅನಾರೋಗ್ಯ ಸಮಸ್ಯೆ - ಆರ್ಥಿಕ ಸಹಾಯದ ನಿರೀಕ್ಷೆಯಲ್ಲಿದೆ ಈ ಕುಟುಂಬ

Thumbnail
Posted On: 16 Jan 2021, 07:23 PM

ಮಂಗಳೂರು : ಶೈಕ್ಷಣಿಕ ಮತ್ತು ಯಕ್ಷಗಾನ ರಂಗದಲ್ಲಿ ಬೆಳೆಯುತ್ತಾ ಬರುತ್ತಿರುವ ಪ್ರತಿಭಾವಂತ ಪಿಯುಸಿ ವಿದ್ಯಾರ್ಥಿ ಕೇರಳ ಮೂಲದ ಜಿತೇಶ್ ಕುಮಾರ್ ರೈ ಮೂತ್ರ ಪಿಂಡಗಳ ಸಮರ್ಪಕ ಬೆಳವಣಿಗೆಯಿಲ್ಲದೇ ಆಪತ್ತಿಗೆ ಸಿಲುಕಿದ್ದಾರೆ. ತನ್ನ ಗಾಂಭೀರ್ಯದ ವೇಷಗಳಿಂದ ರಂಗದಲ್ಲಿ ಇತರರನ್ನು ರಂಜಿಸುತ್ತಿದ್ದ ಬಾಲಕ ಈಗ ತನ್ನ ಜೀವಕ್ಕಾರು ಆಸರೆ ಎಂಬ ಆತಂಕಕ್ಕೆ ಸಿಲುಕಿ, ಆಸ್ಪತ್ರೆಯಲ್ಲಿ ಮಲಗಿದ್ದು, ಮಗನನ್ನು ಹಠಾತ್ ಆಗಿ ಕಾಡಿದ ಅನಾರೋಗ್ಯದ ಚಿಕಿತ್ಸೆಗಾಗಿ ಹಣ ಹೊಂದಿಸಿಕೊಳ್ಳಲು ಆತನ ಮನೆಯವರು ಪರದಾಡುವಂತಾಗಿದೆ. ಮಂಜೇಶ್ವರ ತಾಲೂಕಿನ ಕಾಟುಕುಕ್ಕೆ ದಂಬೆಕ್ಕಾನ ನಿವಾಸಿ ವಿಶ್ವನಾಥ ರೈ ಮತ್ತು ಪುಷ್ಪಾವತಿ ದಂಪತಿಯ ಪುತ್ರ, ಪುತ್ತೂರು ದರ್ಬೆ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ನಡೆಸುತ್ತಿದ್ದ ಜಿತೇಶ್ ಕುಮಾರ್ ರೈ ಅನಾರೋಗ್ಯದಿಂದ ಬಳಲುತ್ತಿರುವ ಬಾಲಕ.  ಏಳನೇ ತರಗತಿಯಿಂದಲೇ ಯಕ್ಷಗಾನ ಕಲೆಯತ್ತ ತಿರುಗಿದ ಜಿತೇಶ್ ಕುಮಾರ್ ಬಾಲ ಕಲಾವಿದರ ಮೇಳದಲ್ಲಿ ಪ್ರಬುದ್ಧ ಕಲಾವಿದನಾಗಿ ಮೆರೆಯುತ್ತಾ ಬಂದಿದ್ದು, ಯಕ್ಷ ಕಲಾವಿದನಾಗಿ ಸುಬ್ರಹ್ಮಣ್ಯ, ಕೃಷ್ಣ, ವಿಷ್ಣು, ಚಂಡ-ಮುಂಡ ಸಹಿತ ವಿವಿಧ ವೇಷಗಳನ್ನು ಧರಿಸುತ್ತಾ ಆ ಪಾತ್ರಗಳಿಗೆ ಜೀವ ತುಂಬುತ್ತಾ ಬರುತ್ತಿದ್ದನು. ಪ್ರಬುದ್ಧ ಕಲಾವಿದನಾಗಿ ಬೆಳೆಯುತ್ತಿರುವ ಹಂತದಲ್ಲೇ ಅನಾರೋಗ್ಯದ ಬರಸಿಡಿಲು ಬಡಿದಿದ್ದು, ಪಿಯುಸಿ ಶಿಕ್ಷಣವನ್ನೂ ಅರ್ಧಕ್ಕೇ ಮೊಟಕುಗೊಳಿಸುವಂತಾಗಿದೆ. ಮೂತ್ರ ಪಿಂಡ ಬೆಳವಣಿಗೆಯಿಲ್ಲದೇ ತೊಂದರೆ ಅನುಭವಿಸುತ್ತಿರುವ ವಿದ್ಯಾರ್ಥಿ ಜಿತೇಶ್ ಕುಮಾರ್ ರೈ ಅವರಿಗೆ ವಾರಕ್ಕೆ ಎರಡು ಬಾರಿ ಡಯಾಲಿಸಿಸ್ ನಡೆಸ ಬೇಕಿದ್ದು, ತಿಂಗಳಿಗೆ ಕನಿಷ್ಟ 30 ಸಾವಿರ ರೂಪಾಯಿ ಖರ್ಚಾಗುತ್ತದೆ. ಡಯಾಲಿಸಿಸ್‌ಗೆ ವರ್ಷಕ್ಕೆ 3 ಲಕ್ಷ ರೂ. ಖರ್ಚಾಗಲಿದೆ. ಕಿಡ್ನಿ ಟ್ರಾನ್ಸ್‌ಫರ್‌ಗೆ 6 ಲಕ್ಷ ರೂ.ವರೆಗೆ ಖರ್ಚು ಅಂದಾಜಿಸಲಾಗಿದೆ. ಪ್ರಸ್ತುತ ಮಂಗಳೂರಿನ ಯೇನಪೋಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕನ ಕುಟುಂಬದ ಪರಿಸ್ಥಿತಿಯು ತೀರಾ ಹದಗೆಟ್ಟು ಹೋಗಿದ್ದು, ಅವನ ಚಿಕಿತ್ಸೆಯ ವೆಚ್ಚವನ್ನು ಭರಿಸಲಾಗದೇ ಕಂಗಾಲಾಗಿದ್ದಾರೆ. ಆರ್ಥಿಕವಾಗಿ ಸಧೃಢವಲ್ಲದ ಜಿತೇಶ್ ಕುಮಾರ್‌ನ ಅನಾರೋಗ್ಯ ಮತ್ತು ಕುಟುಂಬದ ಪರಿಸ್ಥಿತಿಯನ್ನು ಗಮನಿಸಿದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕ ವರ್ಗ ಮತ್ತು ಆಡಳಿತ ಸಿಬಂದಿ ವರ್ಗ ಈಗಾಗಲೇ ಒಂದು ಲಕ್ಷ ರೂ. ಸಹಾಯಧನವನ್ನು ಸಂಗ್ರಹಿಸಿ, ಆತನ ಮನೆಯವರಿಗೆ ನೀಡಿದೆ. ಆದರೆ ಜಿತೇಶ್ ಕುಮಾರ್‌ನ ಪೂರ್ಣ ಚಿಕಿತ್ಸೆಗೆ ದೊಡ್ಡ ಮೊತ್ತದ ಹಣಕಾಸಿನ ನೆರವಿನ ಅಗತ್ಯವಿದ್ದು, ಸಹೃದಯಿಗಳು ಹಣಕಾಸಿನ ನೆರವನ್ನು ನೀಡುವ ಮೂಲಕ ಆತನ ಪ್ರಾಣ ಉಳಿಸುವ ಕಾರ್ಯದಲ್ಲಿ ಕೈ ಜೋಡಿಸುವಂತೆ ಹೆತ್ತವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಕಲಿಕೆಯಲ್ಲಿ ಡಿಸ್ಟ್ರಿಂಕ್ಷನ್ ವಿದ್ಯಾರ್ಥಿಯಾಗಿರುವ ಜಿತೇಶ್ ಕುಮಾರ್ ಕಾಲೇಜಿನ ಅಧ್ಯಾಪಕ ವೃಂದದವರ ಅಚ್ಚು ಮೆಚ್ಚಿನ ವಿದ್ಯಾರ್ಥಿ. ಸಹಪಾಠಿಗಳಿಗೆ ಪ್ರಿಯನೂ ಹೌದು. ಕಲಿಕೆಯೊಂದಿಗೆ ಯಕ್ಷಗಾನ ಕ್ಷೇತ್ರದಲ್ಲೂ ಬಾಲ ಕಲಾವಿದನಾಗಿ ಮಿಂಚುತ್ತಾ ಸಾಗಿ ಬಂದಿರುವ ಜಿತೇಶ್ ಕುಮಾರ್‌ನ ಚಿಕಿತ್ಸೆಗೆ ನೆರವಾಗುವ ಸಹೃದಯಿ ದಾನಿಗಳು, ಜಿತೇಶ್ ಕುಮಾರ್ ಬ್ಯಾಂಕ್ ಆಫ್ ಬರೋಡಾ, ಕಾಟುಕುಕ್ಕೆ ಶಾಖೆ, ಖಾತೆ ಸಂಖ್ಯೆ : 68710100004325, IFSC : BARB0VJKTKE ಅಥವಾ ವಿಶ್ವನಾಥ ರೈ, ಬ್ಯಾಂಕ್ ಆಫ್ ಬರೋಡಾ, ಕಾಟುಕುಕ್ಕೆ ಶಾಖೆ, ಖಾತೆ ಸಂಖ್ಯೆ : 68710100002731, IFSC : BARB0VJKTKE ಇಲ್ಲಿಗೆ ತಮ್ಮ ಹಣಕಾಸಿನ ನೆರವನ್ನು ರವಾನಿಸಬಹುದು. ಅಥವಾ ವಿಶ್ವನಾಥ್ ರೈ ಅವರ ದೂರವಾಣಿ ಸಂಖ್ಯೆ : 09447295345 ಇವರನ್ನು ಸಂಪರ್ಕಿಸ ಬಹುದಾಗಿದೆ.

ಅಮ್ಮ ಇರೆನ ಜೋಕುಲೆಂಕುಲು ಭಜನೆ ಮಲ್ಪುವ ತುಳು ಭಕ್ತಿ ಗೀತೆ ವಿಜಯ್ ಶೆಟ್ಟಿ ಮೂಡುಬೆಳ್ಳೆ ಕ್ರಿಯೇಷನ್ಸ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ

Thumbnail
Posted On: 16 Jan 2021, 05:22 PM

ಭಾವಗೀತೆ, ಭಕ್ತಿಗೀತೆ, ಚಿತ್ರಗೀತೆಗೆ, ಭಾವತುಂಬಿ ಸಮರ್ಪಣಾ ಭಾವದಿಂದ ಹಾಡುವ ಹಾಡುಗಾರ ವಿಜಯ್ ಶೆಟ್ಟಿ ಮೂಡುಬೆಳ್ಳೆ. ಇವರ ಮಧುರ ಕಂಠಕ್ಕೆ ಮಾರು ಹೋಗದವರೇ ಇಲ್ಲ. ವಿಜಯರ ಹಾಡಿನಲ್ಲಿ ಕೇವಲ ಹಾಡು ಮಾತ್ರವಿರುವುದಿಲ್ಲ. ಅಲ್ಲಿ ಭಾವ ತುಂಬಿ ಗಾಯನದಲ್ಲಿ ಲೀನವಾಗುವ ತನ್ಮಯತೆ ಇರುತ್ತದೆ. ಶಾರದೆಯ ಗುಡಿಯಲ್ಲಿ ಸರ್ವವನ್ನೂ ಅರ್ಪಿಸಿಕೊಂಡ ಆತ್ಮ ಸಮರ್ಪಣೆಯ ಸಾಕ್ಷಾತ್ಕಾರವಿರುತ್ತದೆ. ಜಗನ್ಮಾತೆಯ ಮಹಿಮೆಯನ್ನು ಪಾಡುವ ಸುಯೋಗ ಮತ್ತೊಮ್ಮೆ ಈ ಸಂಗೀತ ಗಾರನಿಗೆ ಒಲಿದು ಬಂದಿದೆ. ಮಕರ ಸಂಕ್ರಾಂತಿಯ ಶುಭದಿನದಂದು "ಅಮ್ಮ ಇರೆನ ಜೋಕುಲೆಂಕುಲು" ಭಕ್ತಿ ಗಾನಾಮೃತವನ್ನು ತನ್ನದೇ ಸ್ವಂತ ವಿಜಯ್ ಶೆಟ್ಟಿ ಮೂಡುಬೆಳ್ಳೆ ಕ್ರಿಯೇಷನ್ಸ್ ಎಂಬ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಳಿಸಿದ್ದಾರೆ. ಎಲ್ಲರೂ ವೀಕ್ಷಿಸಿ, ಚಾನೆಲ್ ಗೆ ಸಬ್ ಸ್ಕ್ರೈಬ್ ಮಾಡಬೇಕು ಎಂದು ವಿನಂತಿಸಿದ್ದಾರೆ.

ಉಡುಪಿ : ಸ್ವಾಮಿ ವಿವೇಕಾನಂದ ಜಯಂತಿ ಮತ್ತು ಯುವ ದಿನ ಕಾರ್ಯಕ್ರಮ

Thumbnail
Posted On: 16 Jan 2021, 05:04 PM

ಉಡುಪಿ : ಸ್ವಾಮಿ ವಿವೇಕಾನಂದರ ಪ್ರಪಂಚಕ್ಕೆ ನೀಡಿದ ಜೀವನ ಸಂದೇಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಸಮಾಜದಲ್ಲಿ ಹೊಸ ಪರಿವತ೯ನೆ ಸಾಧ್ಯ ಎಂದು ಶಿವಾನಿ ಡಯಾಗ್ನಿಸ್ಟಿಕ್ ಮತ್ತು ರಿಸಚ್೯ ಸೆಂಟರ್ ಮುಖ್ಯಸ್ಥ ಅಭಾವಿಪ ಹಿರಿಯ ಕಾಯ೯ಕತ೯ ಡಾII ಶಿವಾನಂದ ನಾಯಕ್ ಹೇಳಿದರು. ಅವರು ಉಪ್ಪೂರು ಬಳಿಯ ಹಿಂದುಳಿದ ವಗ೯ಗಳ ಬಾಲಕರ ವಿದ್ಯಾಥಿ೯ ನಿಲಯದಲ್ಲಿ ಎಬಿವಿಪಿ ವತಿಯಿಂದ ನಡೆದ ಸ್ವಾಮಿ ವಿವೇಕಾನಂದ ಜಯಂತಿ ಮತ್ತು ಯುವ ದಿನ ಕಾರ್ಯಕ್ರಮದಲ್ಲಿ ಹೇಳಿದರು. ಸ್ವಾಮೀಜಿಯವರು ತಮ್ಮ ಇಡೀ ಜೀವನವನ್ನು ದೇಶಕ್ಕಾಗಿ ಮೀಸಲಾಗಿಟ್ಟಿದ್ದರು. ಅವರು ಯುವಕರ ಮೇಲೆಟ್ಟ ನಂಬಿಕೆ ವಿಶೇಷವಾಗಿತ್ತು. ತಮ್ಮ ಕಿರಿಯ ಪ್ರಾಯದಲ್ಲಿ ಅತ್ಯಂತ ಹಿರಿದಾದ ಕಾಯ೯ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದರು. ಸ್ವಾಮಿ ವಿವೇಕಾನಂದರು ಚಿಕಾಗೋದಲ್ಲಿ ಮಾಡಿದ ಭಾಷಣ ಚಾರಿತ್ರಿಕವಾದದ್ದು ಇಂದು ಭಾರತೀಯರಿಗೆ ವಿದೇಶದಲ್ಲಿ ಉತ್ತಮ ಗೌರವ ಸಿಗಲು ಇದು ಕಾರಣವಾಗಿದೆ ಎಂದರು. ಅತಿಥಿಯಾಗಿ ಸ್ವಚ್ಚ ಭಾರತ ಫ್ರೇoಡ್ಸ್ ಸಂಯೋಜಕ ರಾಘವೇಂದ್ರ ಪ್ರಭು,ಕವಾ೯ಲು ಪ್ರಸ್ಥಾವನೆಗೈದರು. ಕಾಯ೯ಕತ೯ ಅಶಿಷ್ ಶೆಟ್ಟಿ ನಿರೂಪಿಸಿದರು.ವಾಡ೯ನ್ ಗುರು ರಾವ್ ವಂದಿಸಿದರು.

ಮಚ್ಚಿನದಲ್ಲಿ ಜಲಜೀವನ್ ಮಿಷನ್ ಗ್ರಾಮೀಣ ಸಹಭಾಗಿತ್ವ ಕಾರ್ಯಕ್ರಮ

Thumbnail
Posted On: 16 Jan 2021, 04:58 PM

ಬೆಳ್ತಂಗಡಿ ತಾಲೂಕಿನ ಮಚ್ಚಿನ ಗ್ರಾ.ಪಂಚಾಯತಿಯಲ್ಲಿ ಜಲಜೀವನ್ ಮಿಷನ್ ಕಾರ್ಯಚಟುವಟಿಕೆಯಡಿ ಸಮುದಾಯ ಸಂಸ್ಥೆ ವತಿಯಿಂದ ಗ್ರಾಮೀಣ ಸಹಭಾಗಿತ್ವ ಕಾರ್ಯಕ್ರಮ ನಡೆಸಲಾಯಿತು. ಜೆಜೆಎಮ್ ಐಇಸಿ/ಹೆಚ್.ಆರ್.ಡಿ ಜಿಲ್ಲಾ ಮುಖ್ಯಸ್ಥ ಶಿವರಾಮ ಪಿ.ಬಿ ಗ್ರಾಮ ಕ್ರಿಯಾ ಯೋಜನೆ ಮತ್ತು ಪಿ.ಆರ್.ಎ ಕುರಿತು ಮಾಹಿತಿ ನೀಡಿದರು. ಗ್ರಾಮ ಪಂಚಾಯತ್ ಆವರಣದಲ್ಲಿ ಗ್ರಾಮಸ್ಥರ ಸಹಕಾರದಲ್ಲಿ ನಕ್ಷೆ ಬಿಡಿಸಿ ಗ್ರಾಮದ ಸಂಪೂರ್ಣ ಚಿತ್ರಣ ಬಿತ್ತರಿಸಲಾಯಿತು‌. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೌರಿಶಂಕರ್ ,ನೂತನ ಪಂಚಾಯತ್ ಸದಸ್ಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಸಹಾಯಕಿಯರು, ಗ್ರಾಮಸ್ಥರು ಉಪಸ್ಥಿತರಿದ್ದರು. ಜೆಜೆಎಮ್ ಸಿಬ್ಬಂದಿಗಳಾದ ಚರಣ್ ರಾಜ್,ಫಲಹಾರೇಶ್, ಮಹಾಂತೇಶ್, ರಘುಚಂದ್ರ ಶೆಟ್ಟಿ,ಸದಾಶಿವ,ಈಶ್ವರ್ ಅವರು ಸಹಕರಿಸಿದರು.

ಸ್ವಚ್ಛ ಭಾರತ ಸ್ವಚ್ಛ ಮಂಗಳೂರು ಅಭಿಯಾನದಲ್ಲಿ ಬಾಸ್ಕಿ ಅರ್ಬ್ ಗ್ರೂಪ್ ನೇತೃತ್ವದ 90ನೇ ದಿನದತ್ತ ಸ್ವಚ್ಛತಾ ಕಾರ್ಯ

Thumbnail
Posted On: 16 Jan 2021, 04:53 PM

ಸ್ವಚ್ಛ ಭಾರತ ಸ್ವಚ್ಛ ಮಂಗಳೂರು ಅಭಿಯಾನದ ಪರಿಕಲ್ಪನೆಯಲ್ಲಿ ಇಷ್ಟರವರೆಗೇ 89 ದಿನಗಳ ಸ್ವಯಂ ಪ್ರೇರಿತ ಸ್ವಚ್ಛತೆ ಮಾಡಿ ಇದೇ ಬರುವ ತಾರೀಕು 17/01/2021ನೇ ದಿನದಂದು 90ನೇ ದಿನದತ್ತ ದಿಟ್ಟ ಹೆಜ್ಜೆ ಇಡುತ್ತಿರುವ ಸಂಸ್ಥೆ ಬಾಸ್ಕಿ ಅರ್ಬ್ ಗ್ರೂಪ್. ಯಾವುದೇ ಪ್ರಚಾರವನ್ನೂ ಬಯಸದ ಬಾಸ್ಕಿ ಅರ್ಬ್ ಗ್ರೂಪ್'ನ ಶ್ರೇಯಸ್ ಹೊಳ್ಳ, ಹರ್ಷ ಕೋಟ್ಯಾನ್, ಹಾಗೂ ಕು। ಮನೀಷ ಮತ್ತು ಪ್ರಥಮದಲ್ಲಿ ಜೊತೆಗೆ ಸಹಕರಿಸಿದ ಸಂಕೇತ್ ಬೆಂಗ್ರೆ ಹಾಗೂ ಶಿಲ್ಪ ಬೆಂಗ್ರೆ ಇವರುಗಳ ಮುಂದಾಳತ್ವದಲ್ಲಿ ನಡೆಯುತ್ತಿದೆ. ಮಂಗಳೂರಿನ ಸಮೀಪದ ತೋಟ ಬೆಂಗ್ರೆ ಗ್ರಾಮದ ಯುವಕ ಯುವತಿಯರು ಹಾಗೂ ಮಕ್ಕಳನ್ನು ಒಗ್ಗೂಡಿಸಿ, ಪ್ರತಿನಿತ್ಯ ತೋಟ ಬೆಂಗ್ರೆ ಬೀಚ್ ನಲ್ಲಿ ದಿನಾಲು ಗಾಳಿ-ಬಿಸಿಲನ್ನು ಲೆಕ್ಕಿಸದೆ, ತಮ್ಮ ಸ್ವಂತ ಖರ್ಚಿನಲ್ಲಿ ತೋಟ ಬೆಂಗ್ರೆ ಬೀಚ್ ಬದಿ ಹಾಗೂ ನದಿ ಬದಿಯಲ್ಲಿ ಕಸ ಕಡ್ಡಿಗಳನ್ನು ಸತತವಾಗಿ ಸ್ವಚ್ಛ ಮಾಡುತ್ತಿದ್ದಾರೆ. ಇವರ ಈ ನಿಸ್ವಾರ್ಥ ಸೇವೆಯನ್ನು ಸರಕಾರ ಹಾಗೂ ಜಿಲ್ಲಾಡಳಿತ ಗುರುತಿಸುವಂತಾಗಬೇಕಿದೆ.

ಸುಳ್ಯ ತಾಲೂಕು ಪಂಚಾಯತಿಯಲ್ಲಿ ಜಲಜೀವನ್ ಮಿಷನ್ ಕಾರ್ಯಾಗಾರ

Thumbnail
Posted On: 14 Jan 2021, 08:44 PM

ದ.ಕ ಜಿಲ್ಲಾ ಪಂಚಾಯತ್ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ,ಸ್ವಚ್ಛ ಭಾರತ್ ಮಿಷನ್ ಮತ್ತು ತಾಲೂಕು ಪಂಚಾಯತ್ ಸುಳ್ಯ ಇದರ ಸಹಭಾಗಿತ್ವದಲ್ಲಿ ಜಲಜೀವನ್ ಮಿಷನ್ ಯೋಜನೆಯ ಅನುಷ್ಠಾನ ಬೆಂಬಲಿತ ಸಂಸ್ಥೆ ಸಮುದಾಯ ತುಮಕೂರು (ರಿ.) ಇದರ ವತಿಯಿಂದ ಸುಳ್ಯ ತಾಲೂಕು ಪಂಚಾಯತಿಯ ಪಯಸ್ವಿನಿ ಸಭಾಂಗಣದಲ್ಲಿ ತಾಲೂಕಿನ ವಿವಿಧ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಜಲಜೀವನ್ ಮಿಷನ್ ಕಾರ್ಯಾನುಷ್ಠಾನದ ಕುರಿತು ಕಾರ್ಯಾಗಾರವನ್ನು ಬುಧವಾರ ಹಮ್ಮಿಕೊಳ್ಳಲಾಗಿತ್ತು. ತಾಲೂಕು ಪಂಚಾಯತ್ ಲೆಕ್ಕಾಧಿಕಾರಿ ಹರೀಶ್ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬಳಿಕ ಜೆಜೆಎಮ್ ಇದರ ಜಿಲ್ಲಾ ಐಇಸಿ ಮತ್ತು ಹೆಚ್.ಆರ್.ಡಿ ವಿಭಾಗದ ಮುಖ್ಯಸ್ಥ ಶಿವರಾಮ್ ಪಿ.ಬಿ ಮತ್ತು ಇಂಜಿನಿಯರ್ ಅಶ್ವಿನ್ ಕುಮಾರ್ ಅವರು ಕಾರ್ಯಚಟುಚಟಿಕೆ ಹಾಗೂ ತಾಂತ್ರಿಕ ವಿಷಯಗಳ ಕುರಿತು ಮಾಹಿತಿ ನೀಡಿದರು. ಕಾರ್ಯಾಗಾರದಲ್ಲಿ ವಿವಿಧ ಗ್ರಾಮ ಪಂಚಾಯತುಗಳ ಅಭಿವೃದ್ಧಿ ಅಧಿಕಾರಿಗಳು ಭಾಗವಹಿಸಿದ್ದರು. ಸ್ವಚ್ಛ ಭಾರತ್ ಮಿಷನ್ ಇದರ ಪವನ್ ಸಹಕರಿಸಿದರು. ಜೆಜೆಎಮ್ ಐಇಸಿ ದಯಾನಂದ ಮಯ್ಯಾಳ, ಮಹಾಂತೇಶ್ ಹಿರೇಮಠ್ ಕಾರ್ಯಕ್ರಮ ಆಯೋಜಸಿದ್ದರು.

ಕಾಪು ವೆಂಕಟರಮಣ ದೇವಸ್ಥಾನಕ್ಕೆ ಇನ್ವರ್ಟರ್ ಕೊಡುಗೆ

Thumbnail
Posted On: 14 Jan 2021, 08:38 PM

ಕಾಪು ವೆಂಕಟರಮಣ ದೇವಸ್ಥಾನಕ್ಕೆ ನೂತನ ಇನ್ವರ್ಟರನ್ನು ಶ್ರೀ ಗೋಕುಲದಾಸ್ ಕಾಮತ್ ಮತ್ತು ಕುಟುಂಬ , ಕಲ್ಯ, ಕಾಪು ಇವರು ಸೇವಾರ್ಥವಾಗಿ ಸಮರ್ಪಿಸಿದರು.

ಬಂಟಕಲ್ಲು : ಚಿನ್ನದ ಪದಕ ಪಡೆದ ಕುಮಾರಿ ರಶ್ಮಿತರವರಿಗೆ ನಾಗರಿಕ ಸಮಿತಿಯಿಂದ ಅಭಿನಂದನೆ

Thumbnail
Posted On: 14 Jan 2021, 08:32 PM

ಬೆಂಗಳೂರಿನ ರಾಜೀವಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ನಡೆಸಿದ ಬಿ.ಎಸ್ಸಿ ಪದವಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕವನ್ನು ಪಡೆದ ಬಂಟಕಲ್ಲು ಮಾಣಿಪಾಡಿ ಶ್ರೀ ರಮೇಶ ಮೂಲ್ಯ ಮತ್ತು ಶ್ರೀಮತಿ ಗೀತಾ ಮೂಲ್ಯರವರ ಪುತ್ರಿ ಕುಮಾರಿ ರಶ್ಮಿತರವರಿಗೆ ಬಂಟಕಲ್ಲು ನಾಗರಿಕ ಸೇವಾ ಸಮಿತಿ (ರಿ.)ರವರು ಅವರ ಮನೆಗೆ ತೆರಳಿ ಅಭಿನಂದನೆ ತಿಳಿಸಿದರು. ನಾಗರಿಕ ಸೇವಾ ಸಮಿತಿ ಅಧ್ಯಕ್ಷ ಕೆ. ಆರ್ ಪಾಟ್ಕರ್ ರವರು ರಶ್ಮಿತಾರನ್ನು ಸಮಿತಿ ಪರವಾಗಿ ಅಭಿನಂದಿಸಿದರು. ಇವರ ಸಾಧನೆ ನಮ್ಮ ಊರಿಗೆ ಹೆಮ್ಮೆಯ ವಿಚಾರವಾಗಿದೆ ಎಂದು ತಿಳಿಸಿ ಅವರ ಭವಿಷ್ಯದ ಜೀವನಕ್ಕೆ ಶುಭ ಹಾರೈಸಿದರು. ಮಂಗಳೂರಿನ ಎ.ಜೆ ವೈದ್ಯಕೀಯ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಯಾಗಿದ್ದ ರಶ್ಮಿತಾ ಶ್ವಾಸಕೋಶದ ಚಿಕಿತ್ಸೆ ( ರೆಸ್ಪಿರೇಟರಿ ಥೆರಫಿಸ್ಟ್) ಬಗ್ಗೆ ವಿಶೇಷ ಅಧ್ಯಯನ ಮಾಡಿ ಚಿನ್ನದ ಪದಕ ಗಳಿಸಿದ್ದರು. ನಾಗರೀಕ ಸೇವಾ ಸಮಿತಿಯ ಕಾರ್ಯದರ್ಶಿ ದಿನೇಶ್ ದೇವಾಡಿಗ, ಶಿರ್ವ ಗ್ರಾ.ಪಂ ಸದಸ್ಯರಾದ ಸತೀಶ್ ಬಂಟಕಲ್ಲು, ಶ್ರೀಮತಿ ವೈಲೆಟ್ ಕ್ಯಸ್ತಲಿನೊ, ಸಮಿತಿಯ ಅನಂತರಾಮ ವಾಗ್ಲೆ, ರವೀಂದ್ರ ಆಚಾರ್ಯ, ರಾಘವೇಂದ್ರ, ರಶ್ಮಿತರ ತಾಯಿ ಶ್ರೀಮತಿ ಗೀತಾ ಮೂಲ್ಯ , ಶಾಂತ ಕುಲಾಲ್, ಆಶಾ ರಾವ್ ಗಂಗಾಧರ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ಬಂಟಕಲ್ಲು : ರಾತ್ರಿ ಮಲಗಿದ್ದ ವ್ಯಕ್ತಿ ಬೆಳಿಗ್ಗೆ ಬಾವಿಯಲ್ಲಿ ಶವವಾಗಿ ಪತ್ತೆ

Thumbnail
Posted On: 13 Jan 2021, 07:42 PM

ಶಿರ್ವ ಠಾಣಾ ವ್ಯಾಪ್ತಿಯ ಬಂಟಕಲ್ಲು ಹೇರೂರು ಬಾವಿಯಲ್ಲಿ ಶವ ಪತ್ತೆ ಸುಮಾರು 69 ವರ್ಷ ಪ್ರಾಯದ ಜಾನ್ ಡಿಸೋಜ ರಾತ್ರಿ ಮನೆಯಲ್ಲಿ ಊಟ ಮಾಡಿ ಮಲಗಿದ ಜಾನ್ ಡಿಸೋಜ ಬೆಳಿಗ್ಗೆ ನಾಪತ್ತೆಯಾಗಿದ್ದರು ಹುಡುಕಾಡಿದಾಗ ಮನೆಯ ಬಾವಿಯಲ್ಲಿ ಶವ ಇರುವುದು ಪತ್ತೆಯಾಗಿದೆ. ಮಲ್ಪೆಯ ಈಜು ತಜ್ಞ ಈಶ್ವರ್ ಬಾವಿಯಲ್ಲಿ ಮುಳುಗಿ ಶವ ಮೇಲೆ ತರಲು ಸಹಕರಿಸಿದರು. ಶಿರ್ವ ಠಾಣೆಯಲ್ಲಿ ಘಟನೆ ನಡೆದಿದ್ದು ಸ್ಥಳಕ್ಕೆ ಆಗಮಿಸಿ ಶವವನ್ನು ಮಹಜರಿಗೆ ಕಳಿಸಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ ಪೊಲೀಸರ ತನಿಖೆಯಿಂದ ಗೊತ್ತಾಗಬೇಕಾಗಿದೆ.