Updated News From Kaup

ನವರಾತ್ರಿ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಪ್ರಯುಕ್ತ ವನಮಹೋತ್ಸವ

Posted On: 24-10-2020 11:07PM

ಉಡುಪಿ: ನವ್ಯಚೇತನ ಶಿಕ್ಷಣ ಸಂಶೋಧನೆ ಮತ್ತು ಕಲ್ಯಾಣ ಟ್ರಸ್ಟ್ ಮತ್ತು ಸ್ವಚ್ಛ ಭಾರತ್ ಫ್ರೆಂಡ್ಸ್ ವತಿಯಿಂದ ನವ್ಯಚೇತನ ಟ್ರಸ್ಟಿನ ಶಾಲೆಗೆರಡು ಗಿಡ ಅಭಿಯಾನದ ಅಂಗವಾಗಿ ನವರಾತ್ರಿ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯ ಪ್ರಯುಕ್ತ ಅ.23 ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಗತಿನಗರ ಇಲ್ಲಿಯ ವಠಾರದಲ್ಲಿ ಗಿಡಗಳನ್ನು ನೆಡಲಾಯಿತು .

ಕರೋನಾ ದೂರವಾಗುವತ್ತ ಹೆಜ್ಜೆ, ಎಲ್ಲರೂ ಕೋವಿಡ್ ನಿಯಮ ಪಾಲಿಸೋಣ

Posted On: 24-10-2020 11:00PM

ಕಳೆದ 8 ತಿಂಗಳಿಂದ ನಿರಂತರವಾಗಿ ದೇಶದ ಚಿತ್ರಣ ಬದಲು ಮಾಡಿದ ಜನರ ಜೀವನಕ್ಕೆ ಸಂಕಷ್ಟದ ಹೊಸ ಅಥ೯ ನೀಡಿದ ಕರೋನಾ ಕಳೆದ 2ವಾರದಿಂದ ದೇಶದಲ್ಲಿ ಸೇರಿದಂತೆ ಉಡುಪಿ ಜಿಲ್ಲೆಯಲ್ಲಿ ನಿಧಾನಗತಿಯಲ್ಲಿ ಇಳಿಮುಖವಾಗುತ್ತಿರುವುದು ಸಂತೋಷದ ವಿಷಯ ದೇಶದಲ್ಲಿ ಗುಣಮುಖ ಪ್ರಮಾಣ ಶೇ.83 ಕ್ಕೆ ಏರಿದೆ ಅದೇ ರೀತಿ ಮರಣ ಪ್ರಮಾಣ ಶೇ.1.5 ರಷ್ಟು ಇಳಿದಿರುವುದು ಶುಭ ಸಂದೇಶ.ಉಡುಪಿ ಜಿಲ್ಲೆಯಲ್ಲಿ 1300 ರಷ್ಟು ಸಕ್ರೀಯ ಕೇಸಗಳಿದ್ದು, ಮರಣ ಪ್ರಮಾಣ ಅದೇ ರೀತಿ ಹೊಸ ಪ್ರಕರಣಗಳು ಕೂಡ ಕಡಿಮೆಯಾಗುತ್ತಿರುವುದು ಜನತೆ ನಿಟ್ಟುಸಿರು ಬಿಡುವಂತಾಗಿದೆ.ಇದೇ ರೀತಿ ಮುಂದುವರೆದರೆ ಜನವರಿ ಒಳಗೆ ಸಂಪೂಣ೯ ನಿಯಂತ್ರಣಕ್ಕೆ ಬರಬಹುದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಜಿಲ್ಲೆಯ ದಶಕದ ಕನಸು ನನಸಾಗುವ ಸಮಯ

Posted On: 24-10-2020 10:51PM

ಉಡುಪಿ ಜಿಲ್ಲಾ ಸಕಾ೯ರಿ ಆಸ್ಪತ್ರೆಯನ್ನು 250 ಬೆಡ್ ಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವ ಬ್ರಹತ್ ಯೋಜನೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿರುವುದು ಉಡುಪಿ ಜಿಲ್ಲೆಗೆ ವರವಾಗಿ ಪರಿಣಮಿಸಿದೆ. ಜಿಲ್ಲೆ ಯ ಜನರ ಬೇಡಿಕೆಯನ್ನು ಸಕಾ೯ರ ಈ ಮೂಲಕ ಈಡೇರಿಸಿರುವುದು ಅಭಿನಂದನೀಯವಾಗಿದೆ.ಉಡುಪಿ ಜಿಲ್ಲೆಯಾಗಿ 23 ವರ್ಷಗಳು ಕಳೆದಿದ್ದರೂ ಉಡುಪಿ ಜನತೆಯ ಬಹು ಬೇಡಿಕೆಯ ಈ ಯೋಜನೆ ಹಲವಾರು ವರ್ಷಗಳ ಕಾಲ ಕನಸಾಗಿಯೇ ಉಳಿದಿತ್ತು. ಜೆ.ಹೆಚ್ ಪಟೇಲ್ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಉದ್ಘಾಟನೆಗೊಂಡ ಈ ಜಿಲ್ಲೆಯು, ಸರಿಯಾದ ಜಿಲ್ಲಾಸ್ಪತ್ರೆಯನ್ನು ಹೊಂದಿರಲಿಲ್ಲ ಕೇವಲ ತಾಲೂಕು ಆಸ್ಪತ್ರೆಯಾಗಿತ್ತು. ಈ ಬಗ್ಗೆ ಹಲವಾರು ಸಂಘ ಸಂಸ್ಥೆಗಳು ಪ್ರತಿಭಟನೆ ನಡೆಸಿದ್ದವು. ಅಲ್ಲದೆ ಹಲವಾರು ಬಾರಿ ಜಿಲ್ಲೆಯ ಜನಪ್ರತಿನಿಧಿಗಳು ಸದನದಲ್ಲಿ ಈ ಕುರಿತು ಧ್ವನಿ ಎತ್ತಿದ ಸಂದರ್ಭದಲ್ಲಿ ರಾಜ್ಯ ಸರ್ಕಾರ ಕೇವಲ ಭರವಸೆಯನ್ನು ನೀಡಿದ್ದು ಬಿಟ್ಟರೆ ಯಾವುದೇ ಕಾಯ೯ ನಡೆದಿರಲಿಲ್ಲ.ಆದರೆ ಈ ಬಾರಿ ಅದು ಕಾಯ೯ ಗತಗೊಂಡಿರುವುದು ಅತ್ಯಂತ ಸಂತೋಷದ ವಿಷಯ.

ಮಾದರಿಯಾದ ಪುಸ್ತಕ ಬಿಡುಗಡೆ ಕಾಯ೯ಕ್ರಮ

Posted On: 24-10-2020 10:45PM

ಉಡುಪಿ : ನ್ಯಾಯವಾದಿ, ಯುವ ಲೇಖಕ ಮೊಹಮ್ಮದ್ ಸುಹಾನ್ ಸಾಸ್ತಾನ ಅವರ 8ನೇ ಕೃತಿ “ಸುಹಾನ ಸೋಪಾನ” ಇಂದು ಅರ್ಥಪೂರ್ಣ ರೀತಿಯಲ್ಲಿ ಅಜ್ಜರಕಾಡು ಹುತಾತ್ಮ ಸೈನಿಕ ಸ್ಮಾರಕದ ಬಳಿ ಬಿಡುಗಡೆಯಾಯಿತು. ಸ್ವಚ್ಛ ಭಾರತ್ ಫ್ರೆಂಡ್ಸ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ನ್ಯಾಯವಾದಿ ಅಲೆವೂರು ಮಾಧವ ಆಚಾರ್ಯ ಮತ್ತು ಬಡಗುಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ ಪುಸ್ತಕ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಹಿರಿಯ ನ್ಯಾಯವಾದಿ ಅಲೆವೂರು ಮಾಧವ ಆಚಾರ್ಯ ರವರು, ಬರೆಯುವ ಆಸಕ್ತಿ ಕಡಿಮೆಯಾಗುತ್ತಿರುವ ಈ ಕಾಲಘಟ್ಟದಲ್ಲಿ ನ್ಯಾಯವಾದಿಯೊಬ್ಬರು ಬಿಡುವು ಮಾಡಿಕೊಂಡು ವಿದ್ಯಾರ್ಥಿಗಳ ಜೀವನಕ್ಕೆ ದಾರಿದೀಪ ಆಗುವಂತಹ ಪುಸ್ತಕ ಬರೆದಿರುವ ವಿಚಾರ ಶ್ಲಾಘನೀಯ. ಯುವಜನತೆ ಸನ್ಮಾರ್ಗದಲ್ಲಿ ನಡೆಯಲು ವಿಶೇಷವಾಗಿ ಶ್ರಮ ವಹಿಸುತ್ತಿರುವ ಸುಹಾನ್ ಸಾಸ್ತಾನ್ ಅವರ ಲೇಖನಿಯಿಂದ ಇನ್ನಷ್ಟು ಕೃತಿಗಳು ಹೊರಬರಲಿ ಎಂದು ಶುಭ ಹಾರೈಸಿದರು.

ಗತದಲ್ಲಿ ಕೋಟೆ ಮಾರಿಯಾಗಿ, ಪ್ರಚಲಿತ ಕಾಪುದ ಅಪ್ಪೆ ಮಾರಿಯಮ್ಮಳಾಗಿ ಭಕುತ ಜನರ ಕಾಪಾಡುವ ಶಕ್ತಿ

Posted On: 24-10-2020 05:18PM

ಆದಿಮ - ಶಿಷ್ಟ ಸಂಸ್ಕೃತಿಗಳ ಸಮನ್ವಯವಾದ ಭಾರತೀಯ ಸಂಸ್ಕೃತಿಯ ಉಸಿರು "ಜಾನಪದ ಮನೋಧರ್ಮ".ಸಾನ್ನಿಧ್ಯವಿದೆ ಎಂದು ಪೂಜೆಯಲ್ಲ, ಪೂಜೆ ನಡೆಯುತ್ತಿರುವಂತೆಯೇ ಸಾನ್ನಿಧ್ಯ ಸನ್ನಿಹಿತವಾಗುವ ನಂಬಿಕೆ ಹಾಗೂ ಸಾನ್ನಿಧ್ಯವನ್ನು ಪ್ರತಿಷ್ಠಾಪಿಸಿ ಸಾನ್ನಿಧ್ಯ ಇದೆ ಎಂಬ ನಂಬಿಕೆಯೊಂದಿಗೆ ಪೂಜೆ ಮಾಡುವುದು . ಕಟ್ಟಳೆಗಳೇ ಪ್ರಧಾನವಾಗುವ ಕಟ್ಟಡಗಳಿಗೆ ಮಹತ್ವ ಇಲ್ಲದ ಚಿಂತನೆಯಿಂದ ಕಟ್ಟಳೆ ಹಾಗೂ ಕಟ್ಟಡಗಳೆರಡೂ ಮುಖ್ಯ ಎಂಬ ಶ್ರದ್ಧೆಯಿಂದ ಆರಾಧನೆ ನೆರವೇರಿಸುವ ಹಂತ ತಲುಪಿದರೂ ಮೂಲವನ್ನು ಸುಪ್ತವಾಗಿ ಹೊಂದಿರುವುದು ನಮ್ಮ ಉಪಾಸನಾ ವಿಧಾನದಲ್ಲಿ ನಿಚ್ಚಳ . ಕರಾವಳಿ ಕರ್ನಾಟಕದ ಉಡುಪಿ ಜಿಲ್ಲೆಯ‌ ಕಾಪುವಿನ ಮಾರಿ , ಮಾರಿಯಮ್ಮಳಾಗಿ, ಮಾರಿಯಮ್ಮ ದೇವರಾಗಿ ವಿವಿಧ ಸ್ವರೂಪದ ನಿಷ್ಠಾಂತರಗೊಂಡು ಗದ್ದುಗೆ - ಗುಡಿ - ದೇವಸ್ಥಾನ ಸಂಕಲ್ಪಗಳಲ್ಲಿ ವ್ಯಕ್ತಗೊಂಡುದುದನ್ನು ಗಮನಿಸ ಬಹುದು . ಸಮೂಹ ಪೂಜೆ ಹಾಗೂ ಬಹುದೇವತಾ ಆರಾಧನೆಗಳನ್ನು ಸ್ವೀಕರಿಸಿರುವ ನಮ್ಮ ತುಳುನಾಡಿನ ಉಪಾಸನಾ ಪ್ರಕಾರಗಳಲ್ಲಿ‌ 'ಮಾರಿ'ಯಕಲ್ಪನೆ ಮತ್ತು ಅನುಸಂಧಾನ ಸಾಮೂಹಿಕವಾಗಿ ಮಾತ್ರ ರೂಢಿಯಲ್ಲಿವೆ .ಮಾರಿಗೆ ನೆರವೇರುವ ಪೂಜೆಯಲ್ಲಿ ಪಾಲ್ಗೊಂಡು ಮುಂದುವರಿದ ಆಚರಣೆಗಳು ಮನೆಗಳಲ್ಲಿ ನಡೆಯುವುದಿದೆ .

ಕೊಪ್ಪಲಂಗಡಿ ವಾಸುದೇವ ದೇವಸ್ಥಾನದಲ್ಲಿ ಮಹಿಳಾ ಭಜನಾ ತಂಡಕ್ಕೆ ಕಾಪು ಶಾಸಕರಿಂದ ಚಾಲನೆ

Posted On: 23-10-2020 04:52PM

ಕಾಪು ಕೊಪ್ಪಲಂಗಡಿ ವಾಸುದೇವ ದೇವಸ್ಥಾನದಲ್ಲಿ ಮಹಿಳಾ ಭಜನಾ ತಂಡಕ್ಕೆ ಕಾಪು ಶಾಸಕ ಲಾಲಾಜಿ ಮೆಂಡನ್ ರಿಂದ ಚಾಲನೆ.

ಅಂಗವೈಕಲ್ಯವನ್ನು ಮೆಟ್ಟಿ ನಿಂತು ಸಾಧನೆ ತೋರಿದ ದೇಹದಾಡ್ಯ ಪಟು ಜಗದೀಶ್ ಪೂಜಾರಿ

Posted On: 21-10-2020 04:08PM

ತನ್ನ ದೇಹದ ಅಂಗವೈಕಲ್ಯತೆಯ ಬಗ್ಗೆ ಯಾವುದೇ ಕೀಳರಿಮೆ ಎಣಿಸದೆ ದೇಹದಾಡ್ಯ ಪಟುವಾಗಿ ಹಲವಾರು ಸ್ಪರ್ಧೆಗಳಲ್ಲಿ ಪ್ರಶಸ್ತಿ ಪಡೆದು ಕೊಂಡಿರುವುದು ಮಾತ್ರವಲ್ಲದೆ ಈಗ ನೂರಾರು ಜನರಿಗೆ ಫಿಟ್ನೆಸ್ ಹೇಳಿ ಕೊಡುವ ಗುರುವಾಗಿ ಮಿಂಚುತ್ತಿದ್ದಾರೆ ಜಗದೀಶ್ ಪೂಜಾರಿ.

ಶ್ರೀ ಚೌಡೇಶ್ವರಿ ದೇವಿ ದೇವಸ್ಥಾನ ಕಟಪಾಡಿ ನವರಾತ್ರಿ ಪೂಜಾ ಕಾರ್ಯಕ್ರಮ

Posted On: 21-10-2020 03:58PM

ಕಟಪಾಡಿಯ ಏಣಗುಡ್ಡೆಯ ದುರ್ಗಾನಗರ ಶ್ರೀ ಚೌಡೇಶ್ವರಿ ದೇವಿಯ ಸನ್ನಿಧಾನದಲ್ಲಿ ನವರಾತ್ರಿ ಪ್ರಯುಕ್ತ 17-10-2020ರಿಂದ 25-10-2020ರವರೆಗೆ ಪ್ರತಿದಿನ ಸಂಜೆ 6ರಿಂದ ಭಜನಾ ಕಾರ್ಯಕ್ರಮ ಮತ್ತು 7: 30ಕ್ಕೆ ಮಹಾಪೂಜೆ ನಡೆಯಲಿದೆ.

ಎಲ್ಲೂರಿನಲ್ಲಿ ಲಲಿತ ಪಂಚಮಿ ಪ್ರಯುಕ್ತ ಚಂಡಿಕಾಯಾಗ

Posted On: 21-10-2020 03:02PM

ಕಾಪು.20, ಅಕ್ಟೋಬರ್ : ಕಾಶಿ ಸಮಾನವಾದ ಎಲ್ಲೂರು ಶ್ರೀ ವಿಶ್ವೇಶ್ವರ ದೇವಸ್ಥಾನದಲ್ಲಿ ನವರಾತ್ರಿಯ ವಿಶೇಷ ಸಂದರ್ಭದಲ್ಲಿ ಲಲಿತ ಪಂಚಮಿ ಪ್ರಯುಕ್ತ ಅನ್ನ ಪೂರ್ಣೇಶ್ವರಿ ದೇವರಿಗೆ ಚಂಡಿಕಾ ಯಾಗ ಜರಗಿತು. ಈ ಸಂದರ್ಭದಲ್ಲಿ ಅರ್ಚಕರು, ದೇವಸ್ಥಾನದ ಆಡಳಿತ ಮಂಡಳಿ ಮತ್ತು ಭಕ್ತರು ಉಪಸ್ಥಿತರಿದ್ದರು.

ಭಾರತ್ ಬ್ಯಾಂಕ್ ಮಾಜಿ ಅಧ್ಯಕ್ಷ, ಬಿಲ್ಲವ ಮುಖಂಡ ಜಯ ಸಿ ಸುವರ್ಣ ಇನ್ನಿಲ್ಲ

Posted On: 21-10-2020 11:25AM

ಶ್ರೀ ಜಯ ಸಿ ಸುವರ್ಣ (ಭಾರತ್ ಬ್ಯಾಂಕಿನ ಮಾಜಿ ಅಧ್ಯಕ್ಷರು) ಅವರ ಸ್ವರ್ಗೀಯ ವಾಸಸ್ಥಾನಕ್ಕೆ ತೆರಳಿದ್ದಾರೆ ಎಂದು ತಿಳಿಸಲು ತುಂಬಾ ದುಃಖವಾಗಿದೆ.