Updated News From Kaup
ಮೂಳೂರಿನಲ್ಲಿ ಮರದ ತುಂಡುಗಳನ್ನು ಸಾಗಿಸುತ್ತಿದ್ದ ಟೆಂಪೋ ಪಲ್ಟಿ
Posted On: 08-10-2020 04:56PM
ಕಾಪು : ರಾಷ್ಟ್ರೀಯ ಹೆದ್ದಾರಿ 66ರ ಮೂಳೂರಿನಲ್ಲಿ ಮರದ ತುಂಡುಗಳನ್ನು ಸಾಗಿಸುತ್ತಿದ್ದ ಟೆಂಪೋ ಮಗುಚಿ ಬಿದ್ದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.
ಟೆಂಪೋ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಚಾಲಕ ಮತ್ತು ನಿರ್ವಾಹಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಾಪು ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಕಳತ್ತೂರು ಚರಣ್ ಕುಲಾಲ್ ಗೆ ಹುಟ್ಟೂರ ಸನ್ಮಾನ
Posted On: 06-10-2020 10:42PM
ಕಾಪು :(04/10/2020)ಕುಲಾಲ ಸಮಾಜ (ರಿ) ಕಳತ್ತೂರು ಒಕ್ಕೂಟ ದ ವತಿಯಿಂದ ಊರಿನ ಪ್ರತಿಭಾವಂತ ವಿದ್ಯಾರ್ಥಿ ಚರಣ್ ಈ ಬಾರಿಯ SSLC ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯೊಂದಿಗೆ ಉತ್ತೀರ್ಣರಾಗಿದ್ದು ತನ್ನ ಊರ ಕುಲಾಲ ಸಮಾಜದ ಗಣ್ಯರ ಜೊತೆ ಗೌರವ ಸನ್ಮಾನದ ಕ್ಷಣ.
ಕಾಪು : ವೈ.ಯು.ಯಶಸ್ವಿ ಆಚಾರ್ಯ “ಸರಸ್ವತಿ ಪುರಸ್ಕಾರ” ರಾಜ್ಯ ಪ್ರಶಸ್ತಿಗೆ ಆಯ್ಕೆ
Posted On: 06-10-2020 03:36PM
ಕಾಪು : ಉಡುಪಿ ಜಿಲ್ಲೆ ಕಾಪು ತಾಲೂಕು ಕಲ್ಯಾದ ಉಮೇಶ ಆಚಾರ್ಯ, ಶೀಲಾವತಿ ಆಚಾರ್ಯ ದಂಪತಿ ಪುತ್ರಿಯಾದ ವೈ.ಯು. ಯಶಸ್ವಿ ಆಚಾರ್ಯ ಅವರಿಗೆ 2019-20ನೇ ಸಾಲಿನ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ 614(ಶೇ.98.24) ಆಂಕ ಪಡೆದಿರುವ ಇವರ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನ ದಾವಣಗೆರೆ-ಸಾಲಿಗ್ರಾಮ ಅವರು ನೀಡಲ್ಪಡುವ ಸರಸ್ವತಿ ಪುರಸ್ಕಾರ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಲಾಕ್ಡೌನ್ ಸಂದರ್ಭದಲ್ಲಿ ಬೆಳ್ಮಣ್ ರೋಟರಿಯ ಸಾಮಾಜಿಕ ಕಾರ್ಯಕ್ರಮಗಳು ಶ್ಲಾಘನೀಯ
Posted On: 06-10-2020 10:40AM
ಕೊರೊನಾ ಮಹಾಮಾರಿಯ ಈ ಸಂದರ್ಭದಲ್ಲಿ ಬೆಳ್ಮಣ್ ರೋಟರಿಯ ಸಾಮಾಜಿಕ ಕಾರ್ಯಕ್ರಮಗಳು ಶ್ಲಾಘನೀಯ :- ರೋ| ಪಿ ಎಚ್ ಎಫ್ ಡಾ| ಅರುಣ್ ಹೆಗ್ಡೆ.
111 ಸವಂತ್ಸರ ಪೂರೈಸಿದ ಹಿರಿಯ ಜೀವಕ್ಕೆ ರೋಟರಿ ಬೆಳ್ಮಣ್ ವತಿಯಿಂದ ಸಮ್ಮಾನ
Posted On: 05-10-2020 02:02AM
ರೋಟರಿ ಕ್ಲಬ್ ಬೆಳ್ಮಣ್ ಇಂದು ಹಿರಿಯ ನಾಗರಿಕರಿಗೆ ಗೌರವ ಸಲ್ಲಿಸುವ ಸಲುವಾಗಿ 111ಸಂವತ್ಸರಗಳನ್ನು ಯಶಸ್ವಿಯಾಗಿ ಪೂರೈಸಿ ಇಂದಿಗೂ ತಮ್ಮ ದೈನಂದಿನ ಚಟುವಟಿಕೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿರುವ ಸೂಡ ನಿವಾಸಿ ನರ್ಸಿ ಮೂಲ್ಯ ಇವರಿಗೆ ಸಮ್ಮಾನಿಸಿ ಗೌರವಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಸಂಸ್ಥೆಯ ಅಧ್ಯಕ್ಷ ರೋ| ಶುಭಾಷ್ ಕುಮಾರ್ ವಹಿಸಿ ಎಲ್ಲರನ್ನು ಸ್ವಾಗತಿಸಿದರು. ಮುಖ್ಯ ಅತಿಥಿಗಳಾಗಿ ವಲಯ 5 ರ ಮಾಜಿ ಸಾಹಯಕ ಗವರ್ನರ್ ರೋ| ಪಿ ಎಚ್ ಎಫ್ ಸೂರ್ಯಕಾಂತ ಶೆಟ್ಟಿ ಗೌರವಾರ್ಪಣೆ ಕಾಯಕವನ್ನು ನಡೆಸಿಕೊಟ್ಟರು. ಅತಿಥಿಗಳಾಗಿ ವಲಯ 5 ರ ವಲಯ ಸೇನಾನಿ ರೋ| ಸುರೇಶ್ ರಾವ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಪೂರ್ವಾಧ್ಯಕ್ಷ ರೋ| ಪಿ ಎಚ್ ಎಫ್ ರನೀಶ್ ಆರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ಸಂಸ್ಥೆಯ ಕಾರ್ಯದರ್ಶಿ ರೋ| ರವಿರಾಜ್ ಶೆಟ್ಟಿ ವಂದಿಸಿದರು. ರೋಟರಿ ಸಂಸ್ಥೆಯ ಸದಸ್ಯ ರಾಜೇಶ್ ಸಾಲ್ಯಾನ್ ಹಾಗೂ ನರ್ಸಿ ಮೂಲ್ಯ ಇವರ ಕುಟುಂಬ ಸದಸ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ದೇವಸ್ಥಾನ ,ದೈವಸ್ಥಾನ ,ಚಾವಡಿ, ಮನೆ ಹೆಸರನ್ನು ತುಳುವಿನಲ್ಲಿ ಬರೆಯೋಣ
Posted On: 05-10-2020 01:55AM
ತುಳು ಭಾಷೆಯ ಲಿಪಿಯನ್ನು ಆಸಕ್ತಿಯಿಂದ ಗಮನಿಸುವ , ಕಲಿಯುವ , ಬರೆಯುವ ,ಬರೆಯಿಸುವ ಒಂದು ಅಭಿಯಾನ ಆರಂಭವಾಗಿದೆ. ನಾವು ಮಾತನಾಡುವ ಭಾಷೆಯನ್ನು ಅದೇ ಭಾಷೆಯ ಲಿಪಿಯಲ್ಲಿ ಬರೆಯುವ ಅವಕಾಶವಿದೆ - ಅವಕಾಶಇತ್ತು ; ಆದರೆ ನಾವದನ್ನು ಶತಮಾನಗಳಷ್ಟು ಹಿಂದೆಯೇ ಮರೆತಿದ್ದೆವು ಅಥವಾ ಕಲಿಯುವ ಕುರಿತು ನಿರ್ಲಕ್ಷ್ಯ ತಾಳಿದ್ದೆವೋ ಗೊತ್ತಿಲ್ಲ. ಅಂತೂ ತುಳುಲಿಪಿ ಬಳಕೆಯಿಂದ ಮರೆಯಾಗಿತ್ತು .
ಇನ್ನಂಜೆಯಲ್ಲೊಂದು ಉಪಯೋಗಕ್ಕೆ ಬಾರದ ಎಟಿಎಮ್
Posted On: 05-10-2020 01:44AM
ಬ್ಯಾಂಕುಗಳು ವಿಲೀನ ಪ್ರಕ್ರಿಯೆ ಒಂದೆಡೆ ಗ್ರಾಹಕರಿಗೆ ಕೊಂಚ ಕಿರಿಕಿರಿ ಎನಿಸಿದರೂ ತಮ್ಮ ಅಗತ್ಯತೆಗೆ ಬೇಕಾದ ಹಣವನ್ನು ತೆಗೆಯಲು ಎಟಿಮ್ ಗಳನ್ನು ಬಳಸುವುದು ಸಾಮಾನ್ಯ. ಆದರೆ ಶಂಕರಪುರ ಬ್ಯಾಂಕ್ ಆಫ್ ಬರೋಡದ ಇನ್ನಂಜೆಯ ಎಟಿಎಮ್ ಅಗತ್ಯಕ್ಕೆ ಹಣ ಬೇಕಾದವರಿಗೆ ತೆಗೆಯಲು ಸಾಧ್ಯವಾಗುತ್ತಿಲ್ಲ. ಕಾರಣ ಅದೆಷ್ಟೋ ದಿವಸದಿಂದ ಸ್ಥಬ್ದವಾಗಿದ್ದು ಅದರ ಬಗ್ಗೆ ಸಂಬಂಧಪಟ್ಟ ಬ್ಯಾಂಕಿನವರಿಗೆ ತಿಳಿಸಿದರೂ ಏನೂ ಪ್ರಯೋಜನವಾಗದ ಸ್ಥಿತಿಯಾಗಿದೆ. ಇನ್ನಾದರು ಸಂಬಂಧಪಟ್ಟ ಬ್ಯಾಂಕ್ ನವರು ಗ್ರಾಹಕರ ಹಿತದೃಷ್ಟಿಯಿಂದ ಇನ್ನಂಜೆಯ ಎಟಿಎಮ್ ನ್ನು ಸರಿಪಡಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಹೋಟೆಲ್ ಉದ್ಯಮಿ ಗಂಗಾಧರ್ ಎನ್ ಶೆಟ್ಟಿ ಅಗ್ರಿಪಾಡ ಇನ್ನಿಲ್ಲ
Posted On: 05-10-2020 12:29AM
ಮುಂಬೈ ಅಗ್ರಿಪಾಡ ನಿವ್ ಉಡುಪಿ ನಿಕೇತನ್ ಮಾಲಕ ಹಾಗೂ ಉದ್ಯಮಿ ಗಂಗಾಧರ್ ಎನ್ ಶೆಟ್ಟಿ (67) ಕಳೆದ 03/10/2020 ರ ಶನಿವಾರ ಬೆಳಿಗ್ಗೆ ಸ್ವರ್ಗಸ್ಥರಾಗಿದ್ದಾರೆ.
ಮಡುಂಬು ಪಡ್ನಗುತ್ತು, ಪಡುಮನೆ ಸುಶೀಲ ಶೆಟ್ಟಿ ಹಾಗೂ ನಾರಾಯಣ ಶೆಟ್ಟಿ ದಂಪತಿಗಳ ಮಗನಾಗಿ 1953 ರಂದು ಜನಿಸಿದ ಗಂಗಾಧರ್ ಎನ್ ಶೆಟ್ಟಿಯವರು ಧಾರ್ಮಿಕ ಕ್ಷೇತ್ರಕ್ಕೂ ತನ್ನದೇ ಆದ ಅನೇಕ ಕೊಡುಗೆಗಳನ್ನು ನೀಡಿದ್ದಾರೆ.
ಕಟಪಾಡಿ ಕಾರುಣ್ಯ ವೃದಾಶ್ರಮಕ್ಕೆ ಕಂಪ್ಯೂಟರ್ ಟೇಬಲ್ ಕೊಡುಗೆ
Posted On: 04-10-2020 09:11PM
ಉಚಿತ ಕಂಪ್ಯೂಟರ್ ಟೇಬಲ್ ಕೊಡುಗೆ ದಿನಾಂಕ 04.10.2020 ಇಂದು "ಆಸರೆ" ಹೆಲ್ಪಿಂಗ್ ಹ್ಯಾಂಡ್ಸ್ (ರಿ.) ಉಡುಪಿ ತಂಡವು ಕಟಪಾಡಿಯ ಕಾರುಣ್ಯ ವೃದ್ಧಾಶ್ರಮಕ್ಕೆ ಭೇಟಿನೀಡಿ ಉಚಿತ ಕಂಪ್ಯೂಟರ್ ಟೇಬಲ್ ಅನ್ನು ಕೊಡುಗೆಯಾಗಿ ನೀಡಲಾಯಿತು. "ಆಸರೆ" ತಂಡದ ಅಧ್ಯಕ್ಷರು ಆದ ಡಾ.ಕೀರ್ತಿ ಪಾಲನ್ ಕಂಪ್ಯೂಟರ್ ಟೇಬಲ್ ಅನ್ನು ಹಸ್ತಾಂತರಿಸಿದರು. ಟೇಬಲ್ ಮಾಡಲು ಸಹಕರಿಸಿದ ಅಶೋಕ್ ಆಚಾರ್ಯ ಬಸ್ತಿ, ಹಿರಿಯಡ್ಕ ಹಾಗೂ ಜಗದೀಶ್ ಬಂಟಕಲ್ ಉಪಸ್ಥಿತರಿದ್ದರು.
ಇನ್ನಂಜೆ ರೋಟರಿ ಸಮುದಾಯದಳ ಉದ್ಘಾಟನೆ ಮತ್ತು ಪದಪ್ರಧಾನ ಸಮಾರಂಭ
Posted On: 04-10-2020 01:22PM
ರೋಟರಿ ಶಂಕರಪುರ ವಲಯ-5 ರೋಟರಿ ಜಿಲ್ಲೆ 3182 ನೂತನ ರೋಟರಿ ಸಮುದಾಯ ದಳ ಇದರ ಉದ್ಘಾಟನಾ ಮತ್ತು ಪದಪ್ರಧಾನ ಸಮಾರಂಭ ಇಂದು ಇನ್ನಂಜೆಯಲ್ಲಿ ನಡೆಯಿತು.
