Updated News From Kaup
ಕಾಪು : ಮಹಾದೇವಿ ಪ್ರೌಢಶಾಲೆಯ ನಿವೃತ ದೈಹಿಕ ಶಿಕ್ಷಕ ರಾಘವೇಂದ್ರ ಬಾಯರಿ ಇನ್ನಿಲ್ಲ
Posted On: 13 Jan 2021, 02:43 PM
ಕಾಪು : ಮಹಾದೇವಿ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಸಾರ್ಥಕ ಸೇವೆಯನ್ನು ಮಾಡಿ ನಿವೃತ್ತಿಯನ್ನು ಹೊಂದಿದ ಶ್ರೀ ರಾಘವೇಂದ್ರ ಬಾಯರಿಯವರು ಅಲ್ಪಕಾಲದ ಅಸೌಖ್ಯದಿಂದ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಅಗಲಿದ ದಿವ್ಯಾತ್ಮಕ್ಕೆ ಶ್ರೀ ಭಗವಂತನು ಚಿರಶಾಂತಿಯನ್ನು ಕರುಣಿಸಲಿ.
ಮಂಗಳೂರಿನ ಈ ಅಜಾನುಬಾಹು ಪೊಲೀಸ್ ನ ಕೆಲಸ ನೋಡಿದ್ರೆ ನೀವು ದಂಗಾಗೋದು ಗ್ಯಾರಂಟಿ..ಅವರೇ ವಿಜಯ ಕಾಂಚನ್ ಬೈಕಂಪಾಡಿ
Posted On: 13 Jan 2021, 12:07 PM
ತುಂಬಾ ಸಮಯದಿಂದ ಇವರ ಬಗ್ಗೆ ಬರೆಯಬೇಕು ಎಂದುಕೊಂಡಿದ್ದೆ, ಆದರೆ ಕಾಲವೇ ಕೂಡಿಬಂದಿರಲಿಲ್ಲ.. ಪೊಲೀಸ್ ಇಲಾಖೆಯಲ್ಲಿ ಇದ್ದುಕೊಂಡು ಇಷ್ಟೊಂದು ಸಾಧನೆ ಮಾಡಲು ಸಾಧ್ಯವೇ..? ಅದು ಕೂಡ ಯುವಕರನ್ನು ನಾಚಿಸುವಂತ ಸಾಧನೆ. ನಾನು ಇವರನ್ನು ತುಂಬಾ ಹತ್ತಿರದಿಂದ ಬಲ್ಲೆ. ಮಂಗಳೂರಿನಲ್ಲಿದ್ದಾಗ ವಾರಕ್ಕೆ ಮೂರು ನಾಲ್ಕು ಸಲ ಭೇಟಿಯಾಗುತ್ತಿದ್ದೆವು, ಆದರೆ ಇತ್ತೀಚೆಗೆ ಕೊರೊನದಿಂದಾಗಿ ಇವರ ಭೇಟಿ ಬಹಳ ಕಡಿಮೆಯಾಗಿತ್ತು. ಮೊನ್ನೆ ಕುದ್ರೋಳಿಯಲ್ಲಿ ನಡೆದ ರಾಜ್ಯಮಟ್ಟದ ಸೀನಿಯರ್ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಇವರು ಬೆಳ್ಳಿ ಪದಕ ಪಡೆದ ತುಣುಕೊಂದು ನಮ್ಮ ವಾಟ್ಸಪ್ ಗ್ರೂಪ್ ಗೆ ಬಂದಿತ್ತು. ಯುವಕರು ಭಾಗವಹಿಸುವ ಸ್ಪರ್ಧೆಯಲ್ಲಿ 52 ವರ್ಷದವರು ಪೈಪೋಟಿ ಕೊಡಲು ಸಾಧ್ಯವೇ..? ಅದಕ್ಕೆ ಹೇಳಿದ್ದು ಹಿರಿಯರು ಸಾಧನೆಗೆ ಯಾವುದೇ ಪ್ರಾಯ ಅಡ್ಡಿ ಬರುವುದಿಲ್ಲ ಎಂದು. ಅವರ ಮನೆಗೆಲ್ಲ ಭೇಟಿಕೊಟ್ಟಾಗ ಫಲಕಗಳನ್ನು ನೋಡುವುದೇ ಒಂದು ಖುಷಿ. ನಾನು ಇಷ್ಟೆಲ್ಲಾ ಹೇಳಿದ್ದು ಯಾರ ಬಗ್ಗೆ ಅಂದುಕೊಂಡಿರಾ... ಮಂಗಳೂರು ಪೊಲೀಸ್ ಇಲಾಖೆಯಲ್ಲಿ ಅಜಾತಶತ್ರು, ಸ್ನೇಹಜೀವಿ, ಪೊಲೀಸ್ ಇಲಾಖೆಯಲ್ಲಿ ದೊಡ್ಡಗಾತ್ರದ ಅಜಾನುಬಾಹು. ಅದುವೇ ನಮ್ಮ ಪ್ರೀತಿಯ ವಿಜಯ ಕಾಂಚನ್ ಬೈಕಂಪಾಡಿ (ಇವರ ಗುರುಗಳು ಬಾಲಾಂಜನೇಯ ವ್ಯಾಯಾಮ ಶಾಲೆ ಮಂಗಳೂರು, ಏಕಲವ್ಯ ಪ್ರಶಸ್ತಿ ವಿಜೇತ ' ಸತೀಶ್ ಕುದ್ರೋಳಿ.) ಬನ್ನಿ ಇವರ ಸಾಧನೆಯ ವಿವರಗಳನ್ನು ತಿಳಿಸುತ್ತೇನೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ 6 -ಸಲ ಭಾಗವಹಿಸಿದ್ದಾರೆ. 1.ಜಪಾನ್ ನಲ್ಲಿ -ಬೆಳ್ಳಿ ಪದಕ 2.ಫಿಲಿಪೈನ್ಸ್ ನಲ್ಲಿ -ಕಂಚಿನ ಪದಕ 3.ರಷ್ಯಾದಲ್ಲಿ -ಬೆಳ್ಳಿ ಪದಕ 4.ದುಬೈ ಯಲ್ಲಿ - ಬೆಳ್ಳಿ ಪದಕ 5.ಅಮೇರಿಕಾದಲ್ಲಿ ನಡೆದ ವರ್ಲ್ಡ್ ಚಾಂಪಿಯನ್ ಸಿಪ್ ನಲ್ಲಿ -2 ಚಿನ್ನದ ಪದಕ 6.ಭಾರತದಲ್ಲಿ- ಚಿನ್ನದ ಪದಕ (ಬೆಸ್ಟ್ ಲಿಫ್ಟರ್ ) ರಾಷ್ಟ್ರೀಯ ಮಟ್ಟದಲ್ಲಿ- 8.ಬಾರಿ ಭಾಗವಹಿಸಿದ್ದಾರೆ ಅದರಲ್ಲಿ ಭಾರತದ ಬಲಿಷ್ಠ ಕ್ರೀಡಾಪಟು - 2 ಸಲ. (STRONG MAN OF INDIA ) ಪೊಲೀಸ್ ಇಲಾಖೆಯಲ್ಲಿ ಅನೇಕ ಕೇಸ್ ನಲ್ಲಿ ಅಪರಾಧಿಗಳನ್ನು ಬಂಧಿಸಿ, ಕಂಬಿ ಎನಿಸುವ ಹಾಗೆ ಮಾಡಿದ್ದರಿಂದ ಅವರಿಗೆ 2012 ರಲ್ಲಿ ಮುಖ್ಯಮಂತ್ರಿಯಿಂದ ಚಿನ್ನದ ಪದಕ ಕೂಡ ಸಿಕ್ಕಿದೆ . ಹಾಗೆಯೇ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಮತ್ತು ಏಕಲವ್ಯ ಪ್ರಶಸ್ತಿ ವಿಜೇತೆ 'ಬೋಳ ಅಕ್ಷತಾ ಪೂಜಾರಿ ' ಇವರು ವಿಜಯ್ ಕಾಂಚನ್ ಇವರ ಶಿಷ್ಯೆಯಾಗಿದ್ದಾರೆ. ಹಾಗೂ ಅನೇಕ ಮಂದಿಯನ್ನು ಕಿನ್ನಿಗೋಳಿಯಲ್ಲಿರುವ ವೀರಮಾರುತಿ ವ್ಯಾಯಾಮ ಶಾಲೆಯಲ್ಲಿ ತರಬೇತಿ ಕೊಟ್ಟು ಪ್ರಶಸ್ತಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ವರುಷಗಳ ಹಿಂದೆ ಕುದ್ರೋಳಿ ದಸರಾದ ಸಂದರ್ಭದಲ್ಲಿ ಬಾಹುಬಲಿಯ ವೇಷ ತೊಟ್ಟು ಎಲ್ಲರ ಗಮನ ಸೆಳೆದಿದ್ದರು. ನೀವೇನಾದರೂ ಇವರಿಗೆ ಶುಭಾಶಯಗಳು ಹೇಳಬೇಕೆಂದರೆ ಪಾಂಡೇಶ್ವರದಲ್ಲಿರುವ ಎಕೊನಾಮಿಕ್ ಅಂಡ್ ನಾರ್ಕೋಟಿಕ್ಸ್ ಕ್ರೈಂ ಸ್ಟೇಷನ್ ನಲ್ಲಿ ASI ಕರ್ತವ್ಯ ನಿರ್ವಹಿಸುತ್ತಾ ಇದ್ದಾರೆ. ಲೇಖನ : ವಿಶು
ಬಂಟಕಲ್ಲು : ಗುರು ರಾಘವೇಂದ್ರ ಸ್ವಾಮಿಗಳ ಪೀಠಕ್ಕೆ ಪಂಚಲೋಹದ ವೃಂದಾವನ ಪ್ರಭಾವಳಿ ಸಮರ್ಪಣೆ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಭಜನಾ ಮಂಗಲೋತ್ಸವ
Posted On: 13 Jan 2021, 11:46 AM
ಶ್ರೀ ಗುರು ರಾಘವೇಂದ್ರ ಸಮಾಜ ಸೇವಾ ಮಂಡಳಿ ವತಿಯಿಂದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಪ್ರತಿಷ್ಠಾ ಮಹೋತ್ಸವದ ಪ್ರಯುಕ್ತ ವೇದಮೂರ್ತಿ ಶ್ರೀ ನಾಗರಾಜ ಭಟ್ ಕಲ್ಯಾಲು ಇವರ ನೇತೃತ್ವದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಭಜನಾ ಮಂಗಲೋತ್ಸವ ಇಂದು (ಬುಧವಾರ) 92 ಹೇರೂರು, ಬಂಟಕಲ್ಲು ಇಲ್ಲಿ ನಡೆಯಲಿದೆ. ಬೆಳಿಗ್ಗೆ 6:30ರಿಂದ ರಾಘವೇಂದ್ರ ಸುಪ್ರಭಾತ, 8ಕ್ಕೆ ವೃಂದಾವನ ಪ್ರಭಾವಳಿ ಸಮರ್ಪಣೆ, 10ಕ್ಕೆ ಸಾರ್ವಜನಿಕ ಸತ್ಯನಾರಾಯಣ ಪೂಜೆ, 12ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, 12:30ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ ಸಂಜೆ 4ರಿಂದ ವಿವಿಧ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ, ರಾತ್ರಿ 8ಕ್ಕೆ ಭಜನಾ ಮಂಗಲ, ಮಹಾ ಪೂಜೆ, ಪ್ರಸಾದ ವಿತರಣೆ ನಡೆಯಲಿದೆ. 92 ಹೇರೂರು ಗ್ರಾಮದ ಅಡ್ವೆಗುತ್ತು ಮನೆತನದ ದಿ| ಮೆಣ್ಪ ಪ್ರಭುರವರ ಪುತ್ರ ಶ್ರೀನಿವಾಸ ಪ್ರಭು, ಪತ್ನಿ ಮತ್ತು ಮಕ್ಕಳು ಶ್ರೀ ರಾಘವೇಂದ್ರ ಸ್ವಾಮಿಗಳ ಪೀಠಕ್ಕೆ ಪಂಚಲೋಹದ ವೃಂದಾವನ ಪ್ರಭಾವಳಿಯನ್ನು ಸೇವೆಯ ರೂಪದಲ್ಲಿ ಮಂಗಳವಾರ ಸಲ್ಲಿಸಿದರು.
ಉಡುಪಿ ಜಿಲ್ಲೆಯಲ್ಲಿ ಜನವರಿ 19ಕ್ಕೆ ಹೋಟೆಲ್ ಕಾರ್ಮಿಕರ ಸಮಾವೇಶ
Posted On: 12 Jan 2021, 05:32 PM
ಸರಕಾರದ ಸವಲತ್ತುಗಳನ್ನು ಪಡೆಯುವ ಉದ್ದೇಶವನ್ನು ಹೊತ್ತು ಕರ್ನಾಟಕ ರಾಜ್ಯ ಕಾರ್ಮಿಕರ ಸಂಘ ಉಡುಪಿ ಜಿಲ್ಲಾ ಘಟಕದ ಆಶ್ರಯದಲ್ಲಿ ಹೋಟೆಲ್ ಕಾರ್ಮಿಕರ ಸಮಾವೇಶ ಇದೇ ಬರುವ 19ರಂದು ಬೆಳಿಗ್ಗೆ 11ಕ್ಕೆ ಅಮೃತ್ ಕನ್ವೆನ್ಷನ್ ಸೆಂಟರ್ ಮಾರಣಕಟ್ಟೆ, ಚಿತ್ತೂರು ಇಲ್ಲಿ ನಡೆಯಲಿದೆ. ಅತಿಥಿಗಳಾಗಿ ಅಮೃತ್ ಕನ್ವೆನ್ಷನ್ ಸೆಂಟರ್ ನ ಪ್ರದೀಪ್ ಶೆಟ್ಟಿ, ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ವಿಧಾನಸಭಾ ಸಭಾಧ್ಯಕ್ಷರಾದ ಪ್ರತಾಪ್ ಚಂದ್ರ ಶೆಟ್ಟಿ, ಕುಂದಾಪುರ ತಾಲೂಕು ಎಂಎಲ್ಎ ಹಾಲಾಡಿ ಶ್ರೀನಿವಾಸ ಶೆಟ್ಟಿ, ಬೈಂದೂರು ಶಾಸಕರಾದ ಸುಕುಮಾರ ಶೆಟ್ಟಿ, ಮಾಜಿ ಶಾಸಕರಾದ ಗೋಪಾಲ ಪೂಜಾರಿ, ವಕೀಲರಾದ ಜಯಚಂದ್ರ ಶೆಟ್ಟಿ, ಹೈದರಾಬಾದ್ ಹೋಟೆಲ್ ಉದ್ಯಮಿ ಕೃಷ್ಣಮೂರ್ತಿ ಮಂಜರ್ ಮಾರಣಕಟ್ಟೆ, ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷರಾದ ಕಿರಣ್ ಹೆಗ್ಡೆ ಅಂಪಾರು ಭಾಗವಹಿಸಲಿದ್ದಾರೆ.
ಅಡ್ವೆ ವಾಮನ್ ಸಾಲಿಯಾನ್ ನಿಧನ
Posted On: 12 Jan 2021, 05:16 PM
ಅಲ್ಪಕಾಲದ ಅಸೌಖ್ಯದಿಂದ ಅಡ್ವೆ ವಾಮನ್ ಸಾಲಿಯಾನ್ ಇಂದು ನಿಧನರಾದರು. ದಕ್ಷಿಣ ಕನ್ನಡ ಜಿಲ್ಲಾ ರೌಡಿ ನಿಗ್ರಹ ದಳ, ಕರಾವಳಿ ಕಾವಲು ಪೊಲೀಸ್ ಹಾಗೂ ವಿವಿಧ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸೀರುತ್ತಾರೆ. ಮುಲ್ಕಿ ಠಾಣೆಯ ASI ಆಗಿ ನಿವೃತ್ತಿ ಹೊಂದಿದ್ದರು. ಹಲವಾರು ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದರು.
ಪಡುಬಿದ್ರಿಯಲ್ಲಿ ಎವಲ್ಯೂಷನ್ ಜಿಮ್ ಆಂಡ್ ಫಿಟ್ನೆಸ್ 14ರಂದು ಶುಭಾರಂಭ
Posted On: 12 Jan 2021, 02:29 PM
ಎವಲ್ಯೂಷನ್ ಜಿಮ್ ಆಂಡ್ ಫಿಟ್ನೆಸ್ ಇದರ ಎರಡನೇ ಶಾಖೆ ಪಡುಬಿದ್ರಿ ರಾಷ್ಟ್ರೀಯ ಹೆದ್ದಾರಿಯ ಸಾಸ್ ಬಿಲ್ಡಿಂಗ್ ನ 2ನೇ ಮಹಡಿಯಲ್ಲಿ ಇದೇ ಬರುವ ಗುರುವಾರ ಬೆಳಗ್ಗೆ 11 ಗಂಟೆಗೆ ಶುಭಾರಂಭಗೊಳ್ಳಲಿದೆ. ಮುಖ್ಯ ಅತಿಥಿಗಳಾಗಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ, ನೋಟರಿ ವಕೀಲರಾದ ಪದ್ಮರಾಜ್ ಆರ್., ಪಡುಬಿದ್ರಿ ಸಿ.ಎ ಬ್ಯಾಂಕ್ ಅಧ್ಯಕ್ಷರಾದ ವೈ.ಸುಧೀರ್ ಕುಮಾರ್ ಭಾಗವಹಿಸಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9535426679
ಗಿರಿಜಾ ಪೂಜಾರ್ತಿ ಕೆಂಚನಕೆರೆ ನಿಧನ
Posted On: 12 Jan 2021, 02:01 PM
ಕಾಪು : ಬಗ್ಗ ತೋಟ ಕುಟುಂಬಸ್ಥರಾದ ಗಿರಿಜಾ ಪೂಜಾರ್ತಿ ಕೆಂಚನಕೆರೆ (ಬಗ್ಗ ತೋಟ) ಇಂದು ಬೆಳಿಗ್ಗೆ ದೈವಾಧೀನರಾಗಿದ್ದಾರೆ.
ಕಾಪುವಿನಲ್ಲಿ ಶುಭಾರಂಭಗೊಳ್ಳಲಿದೆ ವಿನೂತನ ಶೈಲಿಯ ಹೇರ್ ಸ್ಟೂಡಿಯೋ
Posted On: 12 Jan 2021, 01:15 AM
ಕಾಪು ಮುಖ್ಯರಸ್ತೆಯಲ್ಲಿರುವ ಸ್ಮಾಲ್ ವರ್ಲ್ಡ್ ಕಟ್ಟಡದ ಶಾಪ್ ನಂ #126 ರಲ್ಲಿ ಇದೇ ಬರುವ ಜನವರಿ 14 ರಂದು ಯೂನಿಕ್ ಹೇರ್ ಸ್ಟೂಡಿಯೋ ಶುಭಾರಂಭಗೊಳ್ಳಲಿದೆ. ಹೇರ್ ಕಟ್, ಬಿಯರ್ಡ್ ಟ್ರಿಮ್, ಬಾಡಿ ಸ್ಪಾ , ಸ್ಕಿನ್ ಕೇರ್ ಇನ್ನಿತರ ಸೇವೆಗಳು ಲಭ್ಯವಿರುತ್ತವೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಅಮಿತ್ ಸಾಲ್ಯಾನ್ - 9967483666
ಯುವ ಜನರ ಸ್ಫೂರ್ತಿ ಸ್ವಾಮಿ ವಿವೇಕಾನಂದರು
Posted On: 11 Jan 2021, 10:51 PM
ಸ್ವಾಮಿ ವಿವೇಕಾನಂದರ ಸ್ಫೂರ್ತಿದತ್ತವಾದ ನುಡಿಗಳನ್ನು ಕಂಡಾಗ ಅವರೆಷ್ಟು ಭರವಸೆಯನ್ನು ನಮ್ಮ ದೇಶದ ಯುವ ಜನಾಂಗದ ಮೇಲೆ ಹೊಂದಿದ್ದರು ಎಂಬುದು ಅರಿವಾಗುತ್ತದೆ. ನನ್ನ ಭರವಸೆಯೆಲ್ಲ ಇಂದಿನ ಯುವಪೀಳಿಗೆಯ ಮೇಲೆ ನಿಂತಿದೆ. ಯುವಜನರನ್ನು ಒಂದುಗೂಡಿಸಿ ಸಂಘಬದ್ಧರಾಗಿ ದುಡಿಯುವಂತೆ ಮಾಡಲು ನಾನು ಜನ್ಮತಾಳಿದ್ದೇನೆ. ಅವರ ವಾಣಿ ಯುವಜನರ ಮೇಲೆ ಅವರು ಇಟ್ಟ ನಂಬಿಕೆಗೆ ಸಾಕ್ಷಿಯಾಗಿದೆ. ಸ್ವಾಮಿ ವಿವೇಕಾನಂದರ ಸ್ಫೂರ್ತಿದತ್ತವಾದ ನುಡಿಗಳನ್ನು ನೋಡಿದರೆ ಅವರೆಷ್ಟು ಭರವಸೆಯನ್ನು ನಮ್ಮ ದೇಶದ ಯುವ ಜನಾಂಗದ ಮೇಲೆ ಹೊಂದಿದ್ದರು ಎಂಬುದು ಅರಿವಾಗುತ್ತದೆ. ಈ ಪಾಂಚಜನ್ಯ ಸದೃಶ ವಾಣಿಯು ಮೊಳಗಿ 158 ವರ್ಷಗಳೇ ಕಳೆದಿವೆ. ಆದರೆ ಈ ಭರವಸೆಯ ನುಡಿಗಳನ್ನು ಕಾರ್ಯರೂಪಕ್ಕೆ ತರುವುದರಲ್ಲಿ ಅದೆಷ್ಟರ ಮಟ್ಟಿಗೆ ನಾವು ಸಫಲರಾಗಿದ್ದೇವೆ ಎಂಬುದು ಯೋಚಿಸಬೇಕಾದ ಸಂಗತಿ. ನಮ್ಮ ಶಿಕ್ಷಣ ನಿಜವಾದ ಶಿಕ್ಷಣವಲ್ಲ ನಾವು ಯುವಜನಾಂಗಕ್ಕೆ ನೀಡುತ್ತಿರುವ ಶಿಕ್ಷ ಣ ನಿಜವಾದ ಅರ್ಥದಲ್ಲಿ ಶಿಕ್ಷ ಣವೇ ಅಲ್ಲ! ನಿಜವಾದ ವಿದ್ಯಾಭ್ಯಾಸವೇ ಅಲ್ಲ, ಬದಲಾಗಿ ಕೇವಲ ಹೊಟ್ಟೆಪಾಡಿಗೆ ಹಾಗೂ ಸ್ವಾರ್ಥ ಜೀವನಕ್ಕೆ ಸೀಮಿತವಾಗಿರುವ ವಿದ್ಯಾಭ್ಯಾಸ ಎನ್ನಬಹುದು. ಸ್ವಾಮಿ ವಿವೇಕಾನಂದರ ದೃಷ್ಟಿಯಲ್ಲಿ ನಿಜವಾದ ವಿದ್ಯೆ ಒಬ್ಬನನ್ನು ಸ್ವಾವಲಂಬಿಯಾಗಿ ಮಾಡಬೇಕು. ನಿಮಗೆ ಶಾಲೆ ಕಾಲೇಜುಗಳಲ್ಲಿ ದೊರೆಯುತ್ತಿರುವ ವಿದ್ಯೆಯಿಂದ ಅಜೀರ್ಣ ರೋಗಗ್ರಸ್ಥರ ಗುಂಪಿಗೆ ಸೇರಿರುವಿರಿ. ನೀವು ಕೇವಲ ಯಂತ್ರದಂತೆ ಕೆಲಸ ಮಾಡುತ್ತಾ ಶುದ್ಧ ಸೋಮಾರಿಗಳಾಗುವಿರಿ? ಎನ್ನುವ ಅವರ ಮಾತು ಇಂದಿಗೂ ಪ್ರಸ್ತುತ. ಸ್ವಾಮಿ ವಿವೇಕಾನಂದರ ಪ್ರಕಾರ 'ನಿಜವಾದ ವಿದ್ಯೆ ಎಂದರೆ ಸರ್ವರಲ್ಲಿಯೂ ಅಡಗಿರುವ ಆ ಚೈತನ್ಯವನ್ನು ಅರಿತು ಇಡೀ ವಿಶ್ವವೇ ನಮ್ಮದು' ಎಂಬ ಉದಾತ್ತ ಭಾವನೆಯಿಂದ 'ವಿಶ್ವಮಾನವ ತತ್ತ್ವ'ವನ್ನು ಅಳವಡಿಸಿಕೊಂಡು ಬಾಳುವುದಾಗಿದೆ'. ಸ್ವಾಮೀಜಿ ಅವರು ಶಿಕ್ಷ ಣದ ಬಗ್ಗೆ ಮತ್ತೊಂದು ಸಂದೇಶ ನೀಡುತ್ತಾರೆ......'ಶಿಕ್ಷ ಣವೆಂದರೆ ನಿಮ್ಮ ತಲೆಯಲ್ಲಿ ತುಂಬಿಕೊಂಡ ವಿಷಯ ಸಂಗ್ರಹವಲ್ಲ, ರಕ್ತಗತವಾಗದೆ ಅದು ಜೀವಾವಧಿ ಚೆಲ್ಲಾಡುತ್ತಿರುವುದು. ಜೀವನ ವಿಕಾಸಕ್ಕೆ ಸಹಾಯ ಮಾಡುವ ಪುರುಷ ಸಿಂಹರನ್ನು ಮಾಡುವ, ಶುದ್ಧ ಚಾರಿತ್ರ್ಯ ಸಂಪನ್ನರನ್ನಾಗಿ ಮಾಡುವ, ಶುದ್ಧ ಚಾರಿತ್ರ್ಯ ಸಂಪನ್ನರನ್ನಾಗಿ ಮಾಡುವ ಭಾವಗಳನ್ನು ರಕ್ತಗತ ಮಾಡಿಕೊಳ್ಳುವಂತಹ ಶಿಕ್ಷ ಣವಿರಬೇಕು' 'ಭಾರತದ ಮೇಲೆ ಸ್ವಾಮಿ ವಿವೇಕಾನಂದರಿಗಿದ್ದ ಅನುರಾಗ ಅತ್ಯಪಾರ. ಅವರ ಎದೆಬಡಿತದಲ್ಲಿ ಭಾರತ ಕೇಳಿ ಬರುತ್ತಿತ್ತು. ಅವರ ಧಮನಿ ಧಮನಿಗಳಲ್ಲಿ ಭಾರತ ಮಿಡಿಯುತ್ತಿತ್ತು. ಅವರ ಕನಸು ನನಸುಗಳೆಲ್ಲೆಲ್ಲಾ ಭಾರತವೇ ತುಂಬಿತ್ತು. ಅಷ್ಟೇ ಅಲ್ಲ, ಸ್ವತಃ ಅವರೇ ಭಾರತವಾಗಿ ಬಿಟ್ಟಿದ್ದರು. ಭಾರತದ ಸಾಕಾರ ಮೂರ್ತಿಯೇ ಅವರಾಗಿದ್ದರು. ಭಾರತಾಂಬೆಯ ಆಧ್ಯಾತ್ಮಿಕತೆ, ಪಾವಿತ್ರ್ಯತೆ, ಜ್ಞಾನ, ಶಕ್ತಿ ಮತ್ತು ಧ್ಯೇಯಗಳ ಶ್ರೇಷ್ಠತಮ ಲಾಂಛನವಾಗಿದ್ದರು ಅವರು. ಅವರು ಭಾರತವೇ ಆಗಿದ್ದರು' ಎನ್ನುತ್ತಾರೆ ಸೋದರಿ ನಿವೇದಿತಾ. ನವ ಭಾರತ ನಿಮಿ೯ಸೋಣ ಯುವ ಜನಾಂಗ ಈ ಅಮೃತವಾಣಿಯನ್ನು ಆಲಿಸಿಯಾದರೂ ತಮ್ಮ ದೇಶಪ್ರೇಮ, ದೇಶಭಕ್ತಿಯನ್ನು ವೃದ್ಧಿಪಡಿಸಿಕೊಂಡು ದೇಶೋದ್ಧಾರಕ್ಕೆ ಕಂಕಣಬದ್ಧರಾಗಬೇಕಾದ ಪವಿತ್ರ ಸಂದರ್ಭವೇ ಸ್ವಾಮಿ ವಿವೇಕಾನಂದರ ಜನ್ಮದಿನೋತ್ಸವ. ಸ್ವಾಮಿ ವಿವೇಕಾನಂದರು ಈ ನಿಟ್ಟಿನಲ್ಲಿ ಯುವ ಜನತೆಗೆ ತಿಳಿಸಿದ ಸಿಂಹವಾಣಿ ಹೀಗಿದೆ; 'ನಮಗೆ ಬೇಕಾಗಿರುವುದು ಎಲ್ಲವನ್ನೂ ತ್ಯಾಗ ಮಾಡಿ ದೇಶಕ್ಕಾಗಿ ತಮ್ಮ ಜೀವನವನ್ನೇ ಅರ್ಪಿಸುವಂತಹ ಕೆಲವು ಮಂದಿ ಯುವಕರು...' ಎಂತಹ ಭರವಸೆಯ ನುಡಿಗಳಿವು. ಆದರೆ ದುರದೃಷ್ಟವಶಾತ್ ಈ ತೆರನಾದ ಯುವಶಕ್ತಿಯನ್ನು ನಾವು ಕಾಣುವುದು ವಿರಳ. ಸ್ವಾಮಿ ವಿವೇಕಾನಂದರು ದೇಶದ ಯುವ ಜನತೆಯ ಮೇಲೆ ಅಪಾರ ವಿಶ್ವಾಸವಿಟ್ಟಿದ್ದರು. ಆದರೆ ಆ ವಿಶ್ವಾಸವೆಲ್ಲಾ ಹುಸಿಯಾದಂತಿದೆ. ಬನ್ನಿ! ಭಾರತೀಯ ಯುವ ಜನತೆ, ಟೊಂಕಕಟ್ಟಿ ನವ ಭಾರತದ ನಿರ್ಮಾಣದ ಹಾದಿಯಲ್ಲಿ ಸಾಗೋಣ, ಈ ದೇಶವೇ ನಮ್ಮ ದೈವವಾಗಿರಲಿ. ಈ ದೇಶಕ್ಕೆ ನಾವು ಏನು ಬೇಕಾದರೂ ತ್ಯಜಿಸೋಣ! ಭಾರತಾಂಬೆಯನ್ನು ಸದೃಢಗೊಳಿಸೋಣ, ಇದೇ ನಮ್ಮ ಉದ್ದೇಶವಾಗಿರಲಿ, ದೇಶವಿರುವುದು ಯುವಕರ ಶಕ್ತಿಯಿಂದ ಎಂಬುದನ್ನು ಮರೆಯದಿರಿ. ನಮ್ಮ ಉದ್ದೇಶ ಸದುದ್ದೇಶವಾಗಿರಲಿ.ಭಾರತ ವನ್ನು ಜಗತ್ತಿನ ಶ್ರೇಷ್ಠ ದೇಶ ವಾಗಿ ಮಾಡೋಣ ಸ್ವಚ್ಚ ಭಾರತಕ್ಕಾಗಿ ಯುವ ಜನಾಂಗ ಒಂದಾಗಬೇಕಾಗಿದೆ. ಬದಲಾಗುವುದು ಈ ದೇಶ ನೀ ಬದಲಾದರೆ ಸರಿಯಾಗುವುದು ಸಮಾಜ ನೀ ಮೊದಲಾದರೆ. ಲೇಖನ :ರಾಘವೇಂದ್ರ ಪ್ರಭು,ಕವಾ೯ಲು ಯುವ ಲೇಖಕ
ನಾಟಕ ಅಕಾಡೆಮಿ ವಾರ್ಷಿಕ ಗೌರವ ಪ್ರಶಸ್ತಿ ಪುರಸ್ಕೃತರಾದ ಭಾಸ್ಕರ್ ಮಣಿಪಾಲ
Posted On: 11 Jan 2021, 06:00 PM
ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ನೀಡುವ 2019 - 20ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಯನ್ನು ರಂಗನಟ, ಹಲವಾರು ಕಿರುಚಿತ್ರ, ಚಲನಚಿತ್ರಗಳಲ್ಲಿ ನಟಿಸಿರುವ ಭಾಸ್ಕರ್ ಮಣಿಪಾಲ ಅವರಿಗೆ ತುಮಕೂರು ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಪ್ರದಾನ ಮಾಡಲಾಯಿತು. ತುಮಕೂರಿನ ಶ್ರೀ ಕ್ಷೇತ್ರ ಸಿದ್ದಗಂಗಾ ಮಠದ ಶ್ರೀ ಮನ್ನಿರಂಜನ ಪ್ರಣವಸ್ವರೂಪಿ ಸಿದ್ದಗಂಗಾ ಸ್ವಾಮಿಗಳು ಪ್ರಶಸ್ತಿ ಪ್ರದಾನ ಮಾಡಿದರು. ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷ ಪ್ರೊ. ಭೀಮಸೇನ ಆರ್, ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಬಿ. ಜ್ಯೋತಿ ಗಣೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಎಸ್. ರಂಗಪ್ಪ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
