Updated News From Kaup
ಇತ್ತೀಚೆಗೆ ನಿಧನರಾದ ದೈವಾರಾಧಕ ಮುನಿಯಾಲು ಮುಟ್ಲುಪಾಡಿಯ ಅರುಣ್ ಪೂಜಾರಿ ಕುಟುಂಬಕ್ಕೆ ಆರ್ಥಿಕ ನೆರವು
Posted On: 14-10-2020 05:01PM
ಅಖಿಲ ಭಾರತ ತುಳುನಾಡ ದೈವಾರಾಧಕರ ಒಕ್ಕೂಟ ಉಡುಪಿ ಜಿಲ್ಲೆ ಹೆಬ್ರಿ ಘಟಕದ ವತಿಯಿಂದ ಇತ್ತೀಚೆಗೆ ನಿಧನರಾದ ದೈವದ ಸೇವೆ ಮಾಡುತ್ತಿದ್ದ ಮುನಿಯಾಲು ಮುಟ್ಲುಪಾಡಿಯ ಅರುಣ್ ಪೂಜಾರಿ ಕುಟುಂಬಕ್ಕೆ ಆರ್ಥಿಕ ನೆರವು ನೀಡಲಾಯಿತು.
ಬ್ಲೂ ಫ್ಲಾಗ್ ಮಾನ್ಯತೆ ಉಡುಪಿ ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೊಸ ಕೊಡುಗೆಯಾಗಲಿದೆ
Posted On: 12-10-2020 10:38PM
ಉಡುಪಿಯ ಪಡುಬಿದ್ರೆಯ ಕಡಲ ತೀರ(ಬೀಚ್) ಪ್ರತಿಷ್ಠಿತ ಅಂತರಾಷ್ಟ್ರೀಯ ಬ್ಲೂ ಫ್ಲಾಗ್ ಮಾನ್ಯತೆ ಪಡೆದಿದೆ.ಈ ಮೂಲಕ ಉಡುಪಿ ಜಿಲ್ಲೆ ಅಂತರಾಷ್ಟ್ರ ಮಟ್ಟದಲ್ಲಿ ಮತ್ತೊಮ್ಮೆ ಗುರುತಿಸಿಕೊಳ್ಳಲು ಸಾಧ್ಯವಾಗಿದೆ. ಕಾಸರಕೋಡಿನಲ್ಲಿರುವ ಇಕೋ ಬೀಚ್ ಹಾಗೂ ಪಡುಬಿದ್ರಿಯ ಬೀಚ್ ಗಳು ತನ್ನ ಮೊದಲ ಪ್ರಯತ್ನದಲ್ಲೇ ಅಂತರಾಷ್ಟ್ರೀಯ ಮಾನ್ಯತೆ ಪಡೆಯುವಲ್ಲಿ ಯಶಸ್ವಿಯಾಗಿದೆ.ಇದು ಜಿಲ್ಲೆಯ ಘನತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದರೆ ತಪ್ಪಾಗಲಾರದು.
ಉಡುಪಿಯಲ್ಲಿ ಶಾಲೆಗೆರಡು ಗಿಡ ಅಭಿಯಾನ ಕಾಯ೯ಕ್ರಮ
Posted On: 12-10-2020 01:41PM
ಉಡುಪಿ :- ನವ್ಯ ಚೇತನ ಶಿಕ್ಷಣ ಸಂಶೋಧನೆ, ಕಲ್ಯಾಣ ಟ್ರಸ್ಟ್, ಮಲಬಾರ್ ಗೋಲ್ಡ್ & ಡೈಮoಡ್ಸ್, ಉಡುಪಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ಕ್ರಿಶ್ಚಿಯನ್ ಪಿ.ಯು ಕಾಲೇಜು, ಸಹಯೋಗದಿಂದ ನವ್ಯ ಚೇತನ ಶಿಕ್ಷಣ ಸಂಶೋಧನೆ, ಕಲ್ಯಾಣ ಟ್ರಸ್ಟ್ ನ ಶಾಲೆಗೆರಡು ಗಿಡ ಅಭಿಯಾನದ ಅಂಗವಾಗಿ ಕಾಲೇಜಿನ ಆವರಣದಲ್ಲಿ ವನಮಹೋತ್ಸವ ಕಾಯ೯ಕ್ರಮ ಅ.11 ರಂದು ನಡೆಯಿತು.
ಬೆಳ್ಮಣ್ ಜೇಸಿಐ ಸಂಸ್ಥೆಗೆ ನೂತನ ಅಧ್ಯಕ್ಷ, ಕಾರ್ಯದರ್ಶಿ ಆಯ್ಕೆ
Posted On: 12-10-2020 12:02PM
ಬೆಳ್ಮಣ್ಣು ಜೇಸಿಐನ 2021ನೇ ಸಾಲಿನ ಅಧ್ಯಕ್ಷರಾಗಿ ಜೇಸಿ. ಕೃಷ್ಣ ಪವರ್ ಮತ್ತು ಕಾರ್ಯದರ್ಶಿಯಾಗಿ ಜೇಸಿ. ಸತೀಶ್ ಪೂಜಾರಿ ಅಬ್ಬನಡ್ಕ ಆಯ್ಕೆಯಾಗಿರುತ್ತಾರೆ.
ಕಾಪು ತಾಲೂಕಿನ ಪಡುಬಿದ್ರಿ ಬೀಚ್ ಗೆ ಅಂತರಾಷ್ಟ್ರೀಯ ಬ್ಲೂ ಫ್ಲ್ಯಾಗ್ ಮಾನ್ಯತೆ
Posted On: 12-10-2020 11:52AM
ಪಡುಬಿದ್ರಿಯ ಕಾಮಿನಿ ನದಿಯು ಸಮುದ್ರ ಸೇರುವ ಕಡಲ ತೀರದ ಪ್ರದೇಶವು ಬ್ಲೂ ಫ್ಲ್ಯಾಗ್ ಪ್ರಮಾಣ ಪತ್ರದೊಂದಿಗೆ ಅಂತರಾಷ್ಟ್ರೀಯ ಮಾನ್ಯತೆಯನ್ನು ಪಡೆದುಕೊಂಡಿದೆ.
ಮಾನವೀಯತೆಗೆ ಮತ್ತೆ ಸ್ಪಂದಿಸಿದ ಪಡುಬಿದ್ರಿ ಭಗವತಿ ಗ್ರೂಫ್
Posted On: 12-10-2020 09:17AM
ಪಡುಬಿದ್ರಿ ಆ 11 :- ಉಡುಪಿ ಜಿಲ್ಲೆಯ ಉಚ್ಚಿಲ ಗ್ರಾಮದ ಮಹಾಲಕ್ಷ್ಮಿ ನಗರದ ಹಿರಿಯರಾದ ಶ್ರೀಮತಿ ಇಂದಿರಾ ಪೂಜಾರಿಯವರ ವೈದ್ಯಕೀಯ ಚಿಕಿತ್ಸೆಗಾಗಿ ಪಡುಬಿದ್ರಿ ಭಗವತಿ ಗ್ರೂಫ್ ಕೈಜೋಡಿಸಿದ್ದು,ಇಂದು ರೂ.12000/- ಆ ಕುಟುಂಬಕ್ಕೆ ಹಸ್ತಾಂತರಿಸಲಾಯ್ತು. ಈ ಸಂದರ್ಭದಲ್ಲಿ ಭಗವತಿ ಗ್ರೂಫ್ ನ ಶ್ರೀ ಸಂದೇಶ್ ಶೆಟ್ಟಿ, ಶ್ರೀ ಮಹೇಶ್ ಕುಮಾರ್ ಉಚ್ಚಿಲ, ಶ್ರೀ ಅಜಯ್ ಪಾದೆಬೆಟ್ಟು, ಶ್ರೀ ಸಂತೋಷ್ ಕುಲಾಲ್ ಗುರ್ಮೆರ್,ಶ್ರೀ ಶೈಲೇಶ್ ಪೂಜಾರಿ ಪಾದೆಬೆಟ್ಟು,ಶ್ರೀ ರವಿ ಪಾದೆಬೆಟ್ಟು,ಶ್ರೀ ಅವಿನಾಶ್ ಉಚ್ಚಿಲ ಉಪಸ್ಥಿತರಿದ್ದರು.
ಪಡುಬೆಳ್ಳೆ ಯುವ ಸ್ಫೂರ್ತಿ ತಂಡ,ಎಡ್ಮೆರ್ ದ ಜವನೆರ್ ಲಕ್ಕಿಡಿಪ್ ಬಹುಮಾನ ವಿತರಣೆ
Posted On: 11-10-2020 08:33PM
ಯುವಸ್ಫೂರ್ತಿ ಕಲಾ ಮತ್ತು ಕ್ರೀಡಾ ಸಂಘ (ರಿ) ಪಡುಬೆಳ್ಳೆ ಮತ್ತು ಎಡ್ಮೆರ್ ದ ಜವನೆರ್ ಎಡ್ಮೆರ್ದ ಜವನೆರ್ ವತಿಯಿಂದ ನಡೆದ ಲಕ್ಕಿ ಡಿಪ್ ನ ಬಹುಮಾನವನ್ನು (11/10/2020) ಲಕ್ಕಿಡಿಪ್ ವಿಜೇತರಿಗೆ ಚೆಕ್ ಮೂಲಕ ನೀಡಲಾಯಿತು. ತಂಡದ ಮುಖ್ಯಸ್ಥರು ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು.
ಹಿರಿಯಡ್ಕದಲ್ಲಿ "ಹಿರಿಯರೆಡೆಗೆ ನಮ್ಮ ನಡಿಗೆ" ಎಂಬ ಕಾಯ೯ಕ್ರಮ
Posted On: 10-10-2020 02:59PM
ಹಿರಿಯಡಕ -: - ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ, ಕ.ಸಾ.ಪ ಅಜೆಕಾರು ಹೋಬಳಿ ಸಮಿತಿ ಮತ್ತು ಆದಿ ಗ್ರಾಮೋತ್ಸವ ವತಿಯಿಂದ ಹಿರಿಯರೆಡೆಗೆ ನಮ್ಮ ನಡಿಗೆ ಎಂಬ ಕಾಯ೯ಕ್ರಮದ ಅಂಗವಾಗಿ ಅ.10ರಂದು ಪಂಚನಬೆಟ್ಟು ಪ್ರೌಡಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ನರಸಿಂಹ ಎ ರವರನ್ನು ಅವರ ಮನೆಯಲ್ಲಿ ಅಪೂವ೯ ಸಾಧಕ ಗೌರವ ನೀಡಿ ಸನ್ಮಾನಿಸಲಾಯಿತು.
ಹೆಬ್ರಿ ಠಾಣೆಯಲ್ಲಿ ಕರಿಮಣಿ ಸರ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ವಿಶ್ವನಾಥ್ ಕಾಮತ್
Posted On: 10-10-2020 11:00AM
ಹೆಬ್ರಿ ಬಸ್ ನಿಲ್ದಾಣದ ವಠಾರದಲ್ಲಿ ಸಿಕ್ಕಿದ ಕರಿಮಣಿ ಸರವನ್ನು ಹೆಬ್ರಿ ಪೊಲೀಸ್ ಠಾಣೆಯಲ್ಲಿ ವಾರಿಸುದಾರಿಗೆ ಹಿಂದಿರುಗಿಸಲಾಯಿತು.
ಕುಡಿಯುವ ನೀರು ಪೋಲು ಕೇಳುವವರು ಯಾರು ಇಲ್ಲವೇ? ವರದಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ
Posted On: 08-10-2020 05:01PM
ಹಿರಿಯಡಕ -ಉಡುಪಿ ಮುಖ್ಯ ರಸ್ತೆಯಲ್ಲಿ (ಅಂಜಾರು ಕ್ರಾಸ್) ಸ್ಯಾಬ್ ಒಡೆದು ಕಳೆದ 10 ದಿನದಿಂದ ನಿರಂತರವಾಗಿ ಕುಡಿಯುವ ನೀರು ಚರಂಡಿ ಸೇರುತ್ತಿತ್ತು ಸ್ಥಳೀಯರ ಪ್ರಕಾರ ದಿನಕ್ಕೆ ಅಂದಾಜು ಹತ್ತು ಸಾವಿರ ಲೀಟರ್ ನೀರು ಚರಂಡಿಗೆ ಹೋಗುತ್ತಿತ್ತು.ಈ ರಸ್ತೆಯ ಪಕ್ಕದಲ್ಲಿ ನಿರಂತರವಾಗಿ ನೀರು ಹರಿಯುತ್ತಿರುದರಿಂದ ಕೆಸರು ಉಂಟಾಗಿ ರಸ್ತೆಯಲ್ಲಿ ನಡೆದಾಡುವ ಪಾದಚಾರಿಗಳಿಗೂ ತೊಂದರೆಯಾಗಿತ್ತು. ನಮ್ಮ ಕಾಪು ವೆಬ್ಸೈಟ್ ನಲ್ಲಿ ರಾಘವೇಂದ್ರ ಪ್ರಭು ಕರ್ವಾಲು ಅವರ ವರದಿಯನ್ನು ಗಮನಿಸಿದ ಜಿಲ್ಲಾಧಿಕಾರಿಯವರು ಸ್ಯಾಬ್ ನ್ನು ಅಧಿಕಾರಿಗಳ ಮೂಲಕ ದುರಸ್ತಿಗೊಳಿಸಿ ನೀರು ಪೋಲಾಗುವುದನ್ನು ತಡೆದಿದ್ದಾರೆ.ಈ ಬಗ್ಗೆ ನಾಗರೀಕರು ಕೃತಜ್ಞತೆ ಸಲ್ಲಿಸಿದ್ದಾರೆ.
