Updated News From Kaup

ಪಡುಬಿದ್ರಿಯಲ್ಲಿ ನಾರಾಯಣಗುರುಗಳ 92ನೇ ಪುಣ್ಯತಿಥಿ ಅಂಗವಾಗಿ ಉಪನ್ಯಾಸ

Posted On: 23-09-2020 09:01AM

ನಾರಾಯಣಗುರುಗಳ ಸಂದೇಶವನ್ನು ಅರಿತು, ಅಳವಡಿಸಿಕೊಳ್ಳುವ ಅನಿವಾರ್ಯತೆಯಿದೆ. ಅವರ ಸಂದೇಶಗಳು ಬದುಕಿಗೆ ಸಮರ್ಪಕವಾಗುವಂತಹ ಗಳು. ಅಂದಿನ ಅವರ ಚಿಂತನೆಯಿಂದ ಇಂದು ಬದಲಾವಣೆಯತ್ತ ನಾವು ಸಾಗುತ್ತಿದ್ದೇವೆ ಎಂದು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ನರೇಶ್ ಕುಮಾರ್ ಸಸಿಹಿತ್ಲು ಹೇಳಿದರು. ಬ್ರಹ್ಮಶ್ರೀ ನಾರಾಯಣಗುರುಗಳ 92 ನೇ ಪುಣ್ಯತಿಥಿಯ ಅಂಗವಾಗಿ ಪಡುಬಿದ್ರಿಯ ಬ್ರಹ್ಮಶ್ರೀ ನಾರಾಯಣಗುರು ಸಭಾಗೃಹದಲ್ಲಿ ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘ (ರಿ.) ಪಡುಬಿದ್ರಿ ಮತ್ತು ಯುವವಾಹಿನಿ (ರಿ.) ಪಡುಬಿದ್ರಿ ಘಟಕದ ಜಂಟಿ ಆಶ್ರಯದಲ್ಲಿ ನಡೆದ ಸಮಾಜದಲ್ಲಿ ಸಮಾನತೆಯನ್ನು ಸಾರುವಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳು ಎಂಬ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಹೋಂ ಡಾಕ್ಟರ್ ಫೌಂಡೇಶನ್ ನಿಂದ ಬೆಳಕು ಯೋಜನೆಯಡಿ ಸಹಾಯಧನ ವಿತರಣೆ

Posted On: 21-09-2020 10:34PM

ಉಡುಪಿ :- ಹೋಂ ಡಾಕ್ಟರ್ ಫೌಂಡೇಶನ್ ಇದರ ಬೆಳಕು ಯೋಜನೆಯಡಿ ನಿಟ್ಟೂರಿನ ಅಂತಿಮ ಬಿ.ಎಸ್.ಸಿ ವಿದ್ಯಾರ್ಥಿ ಕಾರ್ತಿಕ್ ಗೆ ಕಾಲೇಜು ಶುಲ್ಕ ರೂ.10 ಸಾವಿರ ಹಾಗು ಆನ್ಲೈನ್ ಕ್ಲಾಸ್ ಗಾಗಿ ಒಂದು ಆಂಡ್ರಾಯ್ಡ್ ಮೊಬೈಲ್ ಕೊಡಲಾಯಿತು.

ಉಡುಪಿಯಲ್ಲಿರುವ ಅಣ್ಣಪ್ಪ ಪಂಜುರ್ಲಿ ದೈವದ ಪಾದದ ಗುರುತು

Posted On: 21-09-2020 10:55AM

ಉಡುಪಿ ಜಿಲ್ಲೆಯಲ್ಲಿ ಹಲವಾರು ವರ್ಷಗಳ ಇತಿಹಾಸ ಇರುವ ಕೊಡವೂರು ಕಂಗಟ್ಟು ಅಣ್ಣಪ್ಪ ಪಂಜುರ್ಲಿ ದೈವಸ್ಥಾನ. ಧರ್ಮಸ್ಥಳದ ನಂತರ ದೊಡ್ಡದಾದ ಅಣ್ಣಪ್ಪ ಪಂಜುರ್ಲಿ ಕ್ಷೇತ್ರವಿದ್ದರೆ. ಅದುವೇ ಕೊಡವೂರು ಕಂಗಟ್ಟು ಅಣ್ಣಪ್ಪ ಪಂಜುರ್ಲಿ ದೈವಸ್ಥಾನ.

ಕಾಪುವಿನ ನೆರೆಪೀಡಿತ ಪ್ರದೇಶಕ್ಕೆ ಶಾಸಕ ಲಾಲಾಜಿ ಆರ್ ಮೆಂಡನ್ ಭೇಟಿ

Posted On: 20-09-2020 11:42PM

ಉಡುಪಿ :- ಕಾಪು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ನೆರೆ ಪೀಡಿತ ಪ್ರದೇಶಗಳಾದ ಬೆಳ್ಳoಪಳ್ಳಿ, ಪೆಡೂ೯ರು, ಹಿರಿಯಡಕ,ಬಜೆ ಮುಂತಾದ ಪ್ರದೇಶಗಳಿಗೆ ಕಾಪು ಶಾಸಕ ಲಾಲಾಜಿ ಆರ್.ಮೆಂಡನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು ಈ ಸಂಧಭ೯ದಲ್ಲಿ ಮಾತನಾಡಿದ ಅವರು ನೆರೆ ಪೀಡಿತರಿಗೆ ಮನೆ ಕಳೆದುಕೊಂಡವರಿಗೆ ಈಗಾಗಲೇ ಪರಿಹಾರ ನೀಡುವ ಬಗ್ಗೆ ಜಿಲ್ಲಾಧಿಕಾರಿಯವರಲ್ಲಿ ಚಚೆ೯ ನಡೆಸಿದ್ದು ಅತೀ ಶೀಘ್ರದಲ್ಲಿ ಪರಿಹಾರ ಧನ ನೀಡಲಾಗುವುದು ಎಂದರು.ಉಡುಪಿ ತಾ.ಪಂ ಅಧ್ಯಕ್ಷೆ ಸಂಧ್ಯಾ ಕಾಮತ್, ಮೊಗವೀರ ಮಹಾಜನ ಸಭಾ ಅಧ್ಯಕ್ಷ ಜಯ ಕೋಟ್ಯಾನ್, ಯುವ ನಾಯಕ ಸುಬೋದ್, ಸಾಮಾಜಿಕ ಕಾಯ೯ಕತ೯ ರಾಘವೇಂದ್ರ ಕವಾ೯ಲು ಮುಂತಾದವರಿದ್ದರು.
ವರದಿ : ರಾಘವೇಂದ್ರ ಪ್ರಭು ಕರ್ವಾಲು

ಇನ್ನಂಜೆಯಲ್ಲಿ ಒಂದು ವಾರದ ತುಳು ಲಿಪಿ ಕಾರ್ಯಾಗಾರ ಇಂದು ಕೊನೆಯ ದಿನ

Posted On: 20-09-2020 05:37PM

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಜೈ ತುಳುನಾಡು (ರಿ.), ಇನ್ನಂಜೆ ಯುವತಿ ಮಂಡಲ (ರಿ.) ಇವರ ಜಂಟಿ ಆಶ್ರಯದಲ್ಲಿ ಇನ್ನಂಜೆ ದಾಸಭವನದಲ್ಲಿ ತಾರೀಕು 14/09/2020ನೇ ಸೋಮವಾರದಿಂದ 20/09/2020 ನೇ ಆದಿತ್ಯವಾರದ ವರೆಗೆ "ಬಲೇ ತುಳು ಲಿಪಿ ಕಲ್ಪುಗ" ಅನ್ನುವಂತಹ ತುಳುಲಿಪಿ ಕಾರ್ಯಗಾರ ನಡೆದಿದ್ದು. ತುಳು ಲಿಪಿ ಶಿಕ್ಷಕರಾದ ಉಷಾ ಎನ್ ಪೂಜಾರಿ ಮತ್ತು ಅಕ್ಷತಾ ಕುಲಾಲ್ ತುಳು ಲಿಪಿ ಕಾರ್ಯಾಗಾರದಲ್ಲಿ ತುಳು ಲಿಪಿಯನ್ನು ಕಲಿಸಿ ಕೊಟ್ಟಿರುತ್ತಾರೆ.. ತುಳು ಲಿಪಿ ಕಾರ್ಯಗಾರ ಇಂದು ಕೊನೆಯ ದಿನವಾಗಿತ್ತು.. ಇನ್ನಂಜೆ ಗ್ರಾಮದ 40 ರಿಂದ 50 ಮಕ್ಕಳು ತುಳು ಲಿಪಿ ಕಲಿಯಲು ಉತ್ಸುಕತೆಯಿಂದ ದಿನಾಲೂ ಆಗಮಿಸುತ್ತಿದ್ದು. ತುಳು ಲಿಪಿ ಕಾರ್ಯಾಗಾರದ ಸಂಪೂರ್ಣ ಪ್ರಯೋಜನವನ್ನು ಇನ್ನಂಜೆ ಗ್ರಾಮಸ್ಥರು ಪಡೆಯುತ್ತಿದ್ದಾರೆ. ನಮ್ಮ ಕಾಪು ಚಾನೆಲ್ ನಲ್ಲಿ ವಿಡಿಯೋ ರೆಕಾರ್ಡಿಂಗ್ ಮಾಡಿದ್ದು, ಯುಟ್ಯೂಬ್ ಚಾನೆಲ್ ನಲ್ಲಿ ವಿಡಿಯೋ ವನ್ನು ಅಪ್ಲೋಡ್ ಮಾಡಲಾಗುವುದು.. ಈ ವಿಡಿಯೋ ವನ್ನು ತುಳು ಲಿಪಿ ಕಲಿಯಲು ಆಸಕ್ತಿ ಇರುವವರು ಸದುಪಯೋಗಪಡಿಸಿಕೊಳ್ಳಬಹುದು..

ಕುಂಜೂರು‌ ದೇವಳ ಜಲಾವೃತ ನೆರೆನೀರು ನೆನಪಿಸಿದ ಪುರಾಣ

Posted On: 20-09-2020 03:37PM

ಇಂತಹ ಸತತ ಮಳೆ ಸುರಿಯುವ ಸಂದರ್ಭಗಳಲ್ಲಿ ಎಲ್ಲೂರು ಗ್ರಾಮದ ಕುಂಜೂರು ಶ್ರೀದುರ್ಗಾ ದೇವಸ್ಥಾನವು ನೆರೆ ನೀರು ಏರಿ ಜಲಾವೃತವಾಗುವುದು ಸಹಜ .
ದೇವಳದ ಒಳಾಂಗಣದಲ್ಲಿ ಒಂದು ಅಡಿಯಷ್ಟು ನೀರು ತುಂಬಿದರೆ , ಹೊರ ಅಂಗಣದಲ್ಲಿ ಮೂರು ಅಡಿ ಎತ್ತರಕ್ಕೆ ನೀರು.
ಇಂತಹ ನಿರಂತರ ಮಳೆ ಸುರಿಯುವ ವೇಳೆ ನಮ್ಮ ಜಿಲ್ಲೆಯ ಹಲವು ದೇವಳಗಳು ಜಲಾವೃತ್ತವಾಗುವುದು .ಮೂಲಸ್ಥಾನ ಬಿಂಬದ ಪಾದದವರೆಗೆ ನೀರು ಎತ್ತರಿಸುವುದನ್ನು ನಾವು ಕೇಳುತ್ತೇವೆ , ದೂರದರ್ಶನದಲ್ಲಿ ಕಾಣುತ್ತೇವೆ ,ಪತ್ರಿಕೆಗಳಲ್ಲಿ ಓದುತ್ತೇವೆ .

ಪಡುಬಿದ್ರಿ : ಐ ಆ್ಯಮ್ ಸೇವಿಂಗ್ ಮೈ ಬೀಚ್ ಧ್ವಜಾರೋಹಣ

Posted On: 19-09-2020 05:37PM

ಪಡುಬಿದ್ರಿಯ ಬ್ಲೂ ಫ್ಲ್ಯಾಗ್ ಬೀಚಿನಲ್ಲಿ ಆಯೋಜಿಸಿದ್ದ ಐ ಆ್ಯಮ್ ಸೇವಿಂಗ್ ಮೈ ಬೀಚ್ ಕಾರ್ಯಕ್ರಮದ ಅಂಗವಾಗಿ ಕಾಪು ಶಾಸಕರಾದ ಲಾಲಾಜಿ ಆರ್. ಮೆಂಡನ್ ಧ್ವಜಾರೋಹಣ ಮಾಡಿದರು. ಈ ಸಂದರ್ಭ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್, ಉಡುಪಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಶೀಲಾ ಕೆ. ಶೆಟ್ಟಿ, ಜಿಲ್ಲಾ ಪಂಚಾಯತ್ ಸದಸ್ಯ ಶಶಿಕಾಂತ್ ಪಡುಬಿದ್ರಿ, ತಾಲುಕ್ ಪಂಚಾಯತ್ ನಿಕಟಪೂರ್ವಾಧ್ಯಕ್ಷೆ ನೀತಾ ಗುರುರಾಜ್, ಕಾಪು ತಹಶೀಲ್ದಾರ್ ಮಹಮ್ಮದ್ ಇಸಾಕ್, ಅಸೋಸಿಯೇಷನ್ ಆಫ್ ಕೋಸ್ಟಲ್ ಟೂರಿಸಂನ ಅಧ್ಯಕ್ಷ ಮನೋಹರ್ ಶೆಟ್ಟಿ, ಸುಕುಮಾರ್ ಶ್ರೀಯಾನ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ್ ನಾಯಕ್, ಬ್ಲೂ ಫ್ಲ್ಯಾಗ್ ಬೀಚಿನ ಪ್ರಬಂಧಕ ವಿಜಯ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ನವರಾತ್ರಿ ಅಮ್ಮನ ಆರಾಧನೆ

Posted On: 19-09-2020 12:46PM

'ಪಿತೃಪಕ್ಷ' - ಮಹಾಲಯ ಪಕ್ಷವು ಮಹಾಲಯ ಅಮಾವಾಸ್ಯೆಯೊಂದಿಗೆ ಮುಗಿದೊಡನೆ , ಶುದ್ಧ ಪಾಡ್ಯದಿಂದ "ಮಾತೃಪಕ್ಷ".

ಒಂದು ಸೀಯಾಳಕ್ಕೆ ಜೀವ ಉಳಿಸುವ ಎಲ್ಲೂರು ಸೀಮೆಯ ಒಡೆಯ ವಿಶ್ವೇಶ್ವರ

Posted On: 18-09-2020 10:39PM

ಎಳೆದೇರನಿಗೆ ಎಳನೀರ ಕಾಣಿಕೆ
ಎಲ್ಲೂರಿನ ಎಳೆದೇರ ( ಶಿವ ) ನಿಗೆ ಎಳನೀರಿಗಿಂತ ಪ್ರಿಯವಾದುದು ಮತ್ತೊಂದಿಲ್ಲ!
ಬಡವ , ಬಲ್ಲಿದ ಭೇದವಿಲ್ಲದೆ ಭಕ್ತರೆಲ್ಲರೂ ಅರ್ಪಿಸುವ ಎಳನೀರಿನ ಮೇಲೆ ವಿಶ್ವನಾಥನಿಗೆ ವಿಶೇಷ ಮೋಹ . ಆದುದರಿಂದಲೇ ವಾರವೊಂದಕ್ಕೆ ಕನಿಷ್ಠ 2000 ಎಳನೀರು ರುದ್ರನಿಗೆ ಅಭಿಷೇಕವಾಗುತ್ತದೆ.

ಉಡುಪಿಯಲ್ಲಿ ಸರ್ಕಾರದ ಶುಲ್ಕ ಪಾವತಿಸಿ ಉಚಿತ ಐಟಿಐ ವಿದ್ಯಾಭ್ಯಾಸ

Posted On: 18-09-2020 12:10AM

ಪರಮ ಪೂಜ್ಯ ಶ್ರೀ ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿಯವರ ಶುಭ ಆಶೀರ್ವಾದದೊಂದಿಗೆ ಶ್ರೀ ಶ್ರೀ ಬ್ರಹ್ಮಾನಂದ ಸ್ವಾಮೀಜಿಯವರ ಮಾರ್ಗದರ್ಶನ ಹಾಗೂ ಅಧ್ಯಕ್ಷತೆಯೊಂದಿಗೆ ವಿದ್ಯಾರ್ಥಿಗಳ ಭವಿಷ್ಯದ ಆಶಾಕಿರಣ ಆತ್ಮಾನಂದ ಸರಸ್ವತಿ ಐ.ಟಿ.ಐ ಕಾಲೇಜು ಮಾನ್ಯ ಬಿಲ್ಲಾಡಿ