Updated News From Kaup
ಕೊರೋನಾದೊಂದಿಗೆ ಬದುಕು ಮಿತವಾಗಿರಲಿ - ರಾಘವೇಂದ್ರ ಪ್ರಭು ಕರ್ವಾಲು

Posted On: 07-07-2020 07:16PM
ಕೊರೊನಾ ಎಂಬ ಈ ಹೆಸರು ಕೇಳಿದರೆ ಈಡೀ ವಿಶ್ವವೇ ಗಾಬರಿಯಾಗುವ ಪರಿಸ್ಥಿತಿಯಿದೆ. ಸೋಂಕಿತರ ಪ್ರಮಾಣ ಹೆಚ್ಚಿದರೂ ಈವರೆಗೆ ಸರಿಯಾದ ಮದ್ದು ಬಂದಿಲ್ಲ.ಉದ್ಯಮಿಯಿಂದ ಕೂಲಿ ಕಾಮಿ೯ಕರಿಗೆ ಅದೇ ರೀತಿ ಶ್ರೀಮಂತರಿಂದ ಬಡವವರಿಗೂ ಯಾರನ್ನು ಬಿಟ್ಟಿಲ್ಲ ಹೀಗಾಗಿ ಈಗ ಎಲ್ಲರೂ ಸಮಾನ ದುಃಖಿಗಳಾಗುವ ಪರಿಸ್ಥಿತಿ ಎದುರಾಗಿದೆ. ಸಕಾ೯ರಗಳು ಯಾವುದೇ ರೀತಿಯ ಕ್ರಮಗಳನ್ನು ಕೈಗೊಂಡರೂ ನಾವೆಲ್ಲರೂ ಜೀವ ಮತ್ತು ಜೀವನದ ಈ ಹೋರಾಟದಲ್ಲಿ ಗೆದ್ದು ಬರಬೇಕಾಗಿದೆ ಹೀಗಾಗಿ ಇನ್ನು ಮುಂದೆ ನಾವು ಸಿಂಪಲ್ಲಾಗಿ ಜೀವನದ ಚಕ್ರವನ್ನು ಓಡಿಸಬೇಕಾಗಿದೆ. ದುಂದು ವೆಚ್ಚ ಬೇಡ: - ಮದುವೆ ಸಮಾರಂಭ' ಪಾಟಿ೯ ಚಿನ್ನಾಭರಣ ಅಗತ್ಯಕ್ಕಿಂತ ಹೆಚ್ಚು ಹೆಚ್ಚು ಖಚು೯ ಮಾಡದೆ ಜೀವನ ಸಾಗಲಿ ಗೆಳೆಯರೇ, ಸರಳವಾದ ಕಾಯ೯ಕ್ರಮ ಮಾಡೋಣ: - ಹಬ್ಬ ಹರಿದಿನಗಳು'ಶುಭ ಸಮಾರಂಭ' ಭೂರಿ ಬೋಜನ, ಅಲಂಕಾರ ಮುಂತಾದ ಕಾಯ೯ಗಳನ್ನು ಸರಳವಾಗಿ ಮಾಡೋಣ. ಧಾಮಿ೯ಕ ಕಾಯ೯ಕ್ರಮ : - ಪೂಜೆ, ಪುನಸ್ಕಾರ ಜಾತ್ರೆ ಮುಂತಾದ ಧಾಮಿ೯ಕ ಕಾಯ೯ಗಳನ್ನು ಸರಳವಾಗಿ ಮಾಡಲು ಸಾಧ್ಯ .ಹೀಗಾಗಿ ಖಚು೯ ಕಡಿಮೆ ಇರಲಿ ಭಕ್ತಿ ಹೆಚ್ಚಿರಲಿ. ಸಕಾ೯ರಿ ಶಾಲೆಗಳತ್ತ ಗಮನ ನೀಡೋಣ : - ಇಂದು ನಮ್ಮ ಪ್ರತಿಷ್ಟೆಯ ಪಣದಿಂದ ನಾವು ಹೆಚ್ಚಿನವರು ಲಕ್ಷಾ೦ತರ ರೂಪಾಯಿ ಶುಲ್ಕ ನೀಡಿ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ದಾಖಲಾತಿ ಮಾಡುತ್ತೇವೆ .ಯಾಕೆ ನಾವು ನಮ್ಮ ಮಕ್ಕಳನ್ನು ಸಕಾ೯ರಿ ಶಾಲೆಗಳಿಗೆ ಸೇರಿಸಬಾರದು ಯೋಚನೆ ಮಾಡೋಣ ಅತೀ ಕಡಿಮೆ ಶುಲ್ಕದಲ್ಲಿ ಶಿಕ್ಷಣ ಪಡೆಯಲು ಸಾಧ್ಯ. ಸ್ವದೇಶಿ ವಸ್ತುಗಳಿಗೆ ಆದ್ಯತೆ ನಿಡೋಣ : -ಪ್ರಧಾನಿಯವರು ಕರೆ ನೀಡಿದಂತೆ ಮೊಕಲ್ ಫಾರ್ ಲೋಕಲ್ ಎಂಬಂತೆ ವಿದೇಶಿ ವಸ್ತುಗಳ ಬಳಕೆ ಕಡಿಮೆ ಮಾಡೋಣ .ನಮ್ಮ ದೇಶದಲ್ಲಿ ಅದರಲ್ಲಿಯೂ ನಮ್ಮ ಹಳ್ಳಿಯಲ್ಲಿ ತಯಾರಾಗುವ ವಸ್ತುಗಳನ್ನು ಖರೀದಿ ಮಾಡಿ ಅದಕ್ಕೆ ಪ್ರೋತ್ಸಾಹ ನೀಡೋಣ ಇದರಿಂದ ದೇಶದಲ್ಲಿ ನಮ್ಮ ಖರೀದಿಯಿಂದ ಹೊಸ ಉದ್ಯೋಗ ಸೃಷ್ಠಿಯಾಗಲು ದಾರಿಯಾಗುತ್ತದೆ. ಯಾಕೆ ನಾವೆಲ್ಲರೂ ಈ ನಿಟ್ಟಿನಲ್ಲಿ ಮುನ್ನುಡಿ ಬರೆಯಬಾರದು? ತಿಂಗಳ ಖಚು೯ ಕಡಿಮೆ ಮಾಡಿ: ಹೆಚ್ಚಿನವರಿಗೆ ನಿತ್ಯ ಪೇಟೆಗೆ ಹೋಗಿ ಏನಾದರೂ ವಸ್ತುವನ್ನು ಅಗತ್ಯವಿಲ್ಲದಿದ್ದರೂ ಖರೀದಿ ಮಾಡುವುದು ರೂಡಿಯಾಗಿದೆ ಇದರಿಂದ ನಮ್ಮ ಆಧಾಯದ ದೊಡ್ಡ ಪಾಲು ನಷ್ಟವಾಗುತ್ತದೆ. ಹೀಗಾಗಿ ಖಚು೯ ಬದಲು ಉಳಿತಾಯ ಮಾಡೋಣ. ಮಿತವಾಗಿ ಬಳಸಿ: - ನೀರು,ವಿದ್ಯುತ್, ಇಂಧನ ಮುಂತಾದ ನೈಸಗಿ೯ಕ ಸಂಪನ್ಮೂಲಗಳ ಬಳಕೆ ಕಡಿಮ ಇರಲಿ .ಕಾರಿನ ಬದಲು ಬೈಕ್ ಇರಲಿ ಯಾಕೆಂದರೆ ನಾವು ಇದರಿಂದಾಗಿ ಬಹಳಷ್ಟು ಇಂಧನ ಉಳಿಸಬಹುದಾಗಿದೆ. ಕಚೇರಿಗಳಿಗೆ ಖಾಸಗಿ ಕೆಲಸಕ್ಕೆ ನಿತ್ಯ ಸ್ವಂತ ವಾಹನದಲ್ಲಿ ಓಡಾಡುದಕ್ಕೆ ದಿನಕ್ಕೆ 400 - 500 ರೂ.ಖಚು೯ ಮಾಡುವರಿದ್ದಾರೆ ಹೀಗಾಗಿ ಇದನ್ನ ಉಳಿಸಲು ಸಕಾ೯ರಿ ಸಾರಿಗೆ ಬಳಕೆ ಮಾಡೋಣ ಇದರಿಂದಾಗಿ ಇಂಧನಕ್ಕಾಗಿ ಖಚು೯ ಮಾಡುವ ಮೊತ್ತವನ್ನು ಉಳಿಸಬಹುದಾಗಿದೆ. ಮನೆಯಲ್ಲಿ ತಿಂಡಿ ತಿನಸು ತಯಾರಿಸೋಣ .. :- ಪ್ರತಿಯೊಂದಕ್ಕೆ ಹೊಟೇಲ್ ಗೆ ಕಾಯುವ ಸ್ಥಿತಿ ನಮಗೆ ಬೇಡ ನಮಗೆ ಬೇಕಾದ ಅಡುಗೆಯನ್ನು ನಾವು ತಯಾರಿಸಿದರೆ ಉತ್ತಮ ಆರೋಗ್ಯ ಅಲ್ಲದೆ ಹಣವನ್ನು ಉಳಿಸ ಬಹುದಾಗಿದೆ. ಮನೆಗೆ ಬೇಕಾದ ತರಕಾರಿ ನಾವು ಬೆಳೆಸೋಣ . - ಪ್ರತಿಯೊಂದು ತರಕಾರಿಗೆ ಮತ್ತೊಬ್ಬರನ್ನು ಅವಲಂಬಿಸುದನ್ನು ಬಿಟ್ಟು ನಮ್ಮ ಮನೆಗೆ ಬೇಕಾದ ತರಕಾರಿ ಯಾಕೆ ನಾವು ಬೆಳೆಸಬಾರದು. ಪ್ಲಾಟ್ ನಲ್ಲಿ ವಾಸ ಮಾಡುವವರು ಗೋಣಿ ಚೀಲದಲ್ಲಿ ತರಕಾರಿ ಮಾಡಬಹುದು. ಕಿಚನ್ ಗಾಡ೯ನ ಮಾಡುದರಿಂದ ಮಾನಸಿಕ ನೆಮ್ಮದಿ, ವ್ಯಾಯಾಮ ಅದೇ ರೀತಿ ತರಕಾರಿಗೆ ತಿಂಗಳಲ್ಲಿ ಖಚು೯ ಮಾಡುವ ಸಾವಿರಾರು ರೂ. ಉಳಿತಾಯ ಮಾಡಬಹುದು. ಹೈನುಗಾರಿಕೆ, ಮಲ್ಲಿಗೆ ಬೇಸಾಯ ಮಾಡಿದರೆ ಮನೆಯ ಖಚು೯ ಇದರಿಂದ ಗಳಿಸಬಹುದು. ದುಶ್ಚಟದಿ೦ದ ದೂರ ಸಾಗೋಣ : - ಮಧ್ಯಪಾನ, ಬೀಡಿ ಸಿಗರೇಟ್ ಇತ್ಯಾದಿ ಚಟದಿಂದ ವಿಮುಕ್ತಿಯಾಗಬೇಕು. ಇತ್ತಿಚೆಗೆ ಡೌನ್ ಸಮಯದಲ್ಲಿ ಮಧ್ಯ ಬಂದ್ ಆಗಿತ್ತು ನಂತರ ದ ದಿನದಲ್ಲಿ ಓಪನ್ ಆದಾಗ ಜನರು ಚೀಲ ಹಿಡಿದು ನೂರಾರು ಮೀಟರ್ ಸರದಿ ಸಾಲಲ್ಲಿ ಕಾದು ಮಧ್ಯ ಪಡೆದ ಉದಾ : ನಮ್ಮ ಮುಂದೆ ಇದೆ ಹೀಗಾಗಿ ಈ ಚಟ ಕೆ ಹಾಕುವ ಹಣವನ್ನು ಆರೋಗ್ಯಕ್ಕೆ ಬಳಕೆ ಮಾಡೋಣ. ತಿಂಗಳ ಬಜೆಟ್ ಮಾಡಿ ಅ ದರಂತೆ ಜೀವನ ಸಾಗಿಸೋಣ: - ಯಾವ ರೀತಿ ಕಂಪೆನಿಗಳು ಸಕಾ೯ರ ಬಜೆಟ್ ಮಾಡುತ್ತಾವೆ ಯೋ ಅದೇ ರೀತಿ ನಾವು ತಿಂಗಳ ಆಧಾಯ ಮತ್ತು ಖಚು ೯ ಪಟ್ಟಿ ತಯಾರಿಸಿ ಅದರಂತೆ ಕಾಯ೯ ನಿವ೯ಹಿಸೋಣ. ಈ ರೀತಿ ಮಾಡಿದಾಗ ಅನಾವಶ್ಯಕ ಖಚು೯ಗಳಿಗೆ ಬ್ರೇಕ್ ಹಾಕಬಹುದು. ಅಲ್ಲದೆ ಉಳಿತಾಯವನ್ನು ಮೊದಲು ಮಾಡಿ ನಂತರ ಖಚಿ೯ನ ಬಾಪ್ತಿಗೆ ಹಣ ಹೊಂದಾಣಿಕೆ ಮಾಡಬಹುದು. ಸುಂದರ ಜೀವನಕ್ಕೆ ಬಜೆಟ್ ದಾರಿಯಾಗಲು ಸಾಧ್ಯ. ಸಕಾ೯ರದ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಿ:- ಸಕಾ೯ರ ದ ವಿವಿಧ ಯೋಜನೆಗಳು ಕೇವಲ ಕಾಗದ ಪತ್ರಗಳಿಗೆ ಸೀಮಿತವಾಗಿದೆ ಇದರ ಪ್ರಯೋಜನ ನಾವು ಕಾನೂನು ನಿಯಮಗಳಿಗೆ ಒಳಪಟ್ಟು ಪಡೆಯಬೇಕು. ಉದಾ..ಆಯುಷ್ಮಾನ್ ಭಾರತ, ಉಜ್ವಲ ,ಪಡಿತರ ಯೋಜನೆಗಳ ಲಾಭ ಪಡೆಯಬೇಕು. ಬ್ಯಾಂಕ್ ಖಾತೆಯನ್ನು ಹೊಂದುವ ಮೂಲಕ ಈ ಯೋಜನೆಯನ್ನು ಪಡೆಯಬಹುದು. ಪಡಿತರದ ದುರುಪಯೋಗ ಮಾಡದೆ ಇದನ್ನು ಸದ್ಬಳಕೆ ಮಾಡಬೇಕು. ಉಳಿತಾಯಕ್ಕೆ ಇರುವ ದಾರಿಯನ್ನು ಹುಡುಕಿ :- ಈ ಕೊರೋನಾ ನಮಗೆ ಉಳಿತಾಯದ ಮಹತ್ವ ತಿಳಿಸಿದೆ. ನಮ್ಮ ಉಳಿತಾಯವನ್ನು ಸುರಕ್ಷಿತ ಯೋಜನೆಯಲ್ಲಿ ತೊಡಗಿಸಬೇಕು. ಉದಾ.. ಜೀವವಿಮೆ, ಅಂಚೆ ಕಚೇರಿ, ಬ್ಯಾಂಕ್ ಮುಂತಾದ ಸಂಸ್ಥೆಯಲ್ಲಿ ಲಭ್ಯವಿರುವ ಉಳಿತಾಯ ಯೋಜನೆಯಲ್ಲಿ ಹಣ ತೊಡಗಿಸಬೇಕು ಇದರಿಂದ ನಮ್ಮ ಹಣಕ್ಕೆ ಸರಿಯಾದ ಮೌಲ್ಯ ಸಿಗಲು ಸಾಧ್ಯ.ಬಡ್ಡಿಯ ಆಸೆಗೆ ಬೇರೆ ಅಸುರಕ್ಷಿತ ಮೂಲದಲ್ಲಿ ಉಳಿತಾಯ ಹೊಡಿಕೆ ಮಾಡಿದರೆ ನಮ್ಮ ಹಣ ಮತ್ತೊಬ್ಬರ ಪಾಲಾಗಬಹುದು. ಸ್ವಉದ್ಯೋಗಕ್ಕೆ ಗಮನ ನೀಡಿದರೆ ನಾವು ಹಲವಾರು ಜನರಿಗೆ ಉದ್ಯೋಗ ನೀಡಬಹುದು. ಉದಾ. ಹೈನುಗಾರಿಕೆ, ಕೃಷಿ ಸಂಬಂಧಿಸಿದ ಕೈಗಾರಿಕೆಗಳು ಕೃಷಿಯನ್ನು ಸಕಾ೯ರದಿಂದ ಲಭಿಸುವ ಬಾಡಿಗೆ ಆಧಾರಿತ ಯಂತ್ರ ಗಳ ಮೂಲಕ ಆಧುನಿಕ ಮಾದರಿಯಲ್ಲಿ ಮಿಶ್ರ ಬೆಳೆ ಕೃಷಿ ಮಾಡಿದರೆ ಉತ್ತಮ ಲಾಭ ಗಳಿಸಲು ಸಾಧ್ಯ. ಅಲ್ಲದೆ ನಾವು ಬೆಳೆದ ವಸ್ತುಗಳನ್ನು ನಾವೇ ಮಾರಾಟ ಮಾಡಿದಾಗ ಉತ್ತಮ ಬೆಲೆ ಸಿಗಲು ಸಾಧ್ಯ.ಈಗಾಗಲೇ ಎ.ಪಿ.ಎಂಸಿಯಲ್ಲಿ ಯಾರು ಬೇಕಾದರೂ ತಮ್ಮ ಕೃಷಿ ವಸ್ತುವನ್ನು ಮಾರಾಟ ಮಾಡಲು ಸಕಾ೯ರ ಅವಕಾಶ ನೀಡಿದೆ. ಅದೇ ರೀತಿ ಸಾಮಾಜಿಕ ಜಾಲ ತಾಣಗಳ ಬಳಕೆ ಮಾಡಿಯೂ ವಿವಿಧ ರೀತಿಯ ವಸ್ತುಗಳನ್ನಾ ಮಾರಾಟ ಮಾಡುವ ವ್ಯವಹಾರ ಮಾಡಬಹುದು.ಡೋರ್ ಡೆಲಿವರಿ ವ್ಯವಹಾರ, ಹೊಸ ತನದ ವ್ಯವಹಾರವು ಮುಂದೆ ಹೊಸ ಬದುಕು ಸಾಗಿಸಲು ಪ್ರೇರಣೆ ಒದಗಿಸಲು ಸಾಧ್ಯವಾಗಬಹುದು. ಈ ಕೊರೋನಾ ನಮಗೆ ಮತ್ತಷ್ಟು ಎತ್ತರಕ್ಕೆ ಬೆಳೆಯಲು ಅವಕಾಶ ನೀಡಿದೆ.ಕವಿ ವಾಣಿಯoತೆ ನಡೆ ಮುoದೆ ನಡೆ ಮುಂದೆ ನುಗ್ಗಿ ನಡೆ ಮುಂದೆ " ಎಂಬಂತೆ ಜೀವನಕ್ಕಾಗಿ ಹೋರಾಟ ನಡೆಸಿ ಕರೋನಾದೊಂದಿಗೆ ಸಾಗೋಣ. ರಾಘವೇಂದ್ರ ಪ್ರಭು,ಕವಾ೯ಲು ಯುವ ಲೇಖಕ, ವೈದ್ಯಕೀಯ ಪ್ರತಿನಿಧಿ
ಉಡುಪಿ : ಆಯುಷ್ಮಾನ್ ಕಾರ್ಡ್ ಇದ್ದಲ್ಲಿ ಖಾಸಗಿ ಆಸ್ಪತ್ರೆಯಲ್ಲೂ ಕೊರೊನ ಚಿಕಿತ್ಸೆ

Posted On: 07-07-2020 07:03PM
ಉಡುಪಿ ಜುಲೈ 7 (ಕರ್ನಾಟಕ ವಾರ್ತೆ): ರಾಜ್ಯ ಸರಕಾರದ ಆದೇಶದಂತೆ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ, ಖಾಸಗಿ ಆಸ್ಪತ್ರೆಗಳಲ್ಲಿ ಸಹ ಕೋವಿಡ್ 19 ಸೋಂಕಿತರು ಚಿಕಿತ್ಸೆಯನ್ನು ಪಡೆಯಬಹುದಾಗಿದ್ದು, ಇದಕ್ಕಾಗಿ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ಹೊಂದಿರಬೇಕಾಗುತ್ತದೆ. ಇದನ್ನು ಬಿಪಿಎಲ್, ಎಪಿಎಲ್ ಹಾಗೂ ಕಾರ್ಡ್ ಇಲ್ಲದವರು ಸಹ ಸೇರಿದಂತೆ, ವಿವಿಧ ಸರ್ಕಾರಿ ನೌಕರರಿಗೆ ಈ ಕಾರ್ಡ್ ಪಡೆಯಲು ಅವಕಾಶವಿರುತ್ತದೆ. ಆದ್ದರಿಂದ ಸಾರ್ವಜನಿಕರು ಸದರಿ ಯೋಜನೆಯ ಸದುಪಯೋಗ ಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ. ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ ಮಾಡಿಸಿಕೊಳ್ಳಲು, ನಿಮ್ಮ ಹತ್ತಿರದ ಸೇವಾ ಸಿಂಧು ಕೇಂದ್ರದಲ್ಲಿ ಕಾಗದದ ಪ್ರತಿ 10 ರೂ ಹಾಗೂ ಸ್ಮಾರ್ಟ್ ಕಾರ್ಡ್ ಪ್ರತಿಗೆ 35 ರೂ ಪಾವತಿಸಿ ಪಡೆದುಕೊಳ್ಳಬಹುದು, ಹೆಚ್ಚಿನ ಮಾಹಿತಿಗಾಗಿ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಂಪರ್ಕಿಸುವAತೆ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಉಡುಪಿ ಜಿಲ್ಲಾ ಸರ್ಕಾರಿ ಕೋವಿಡ್ ಲ್ಯಾಬ್ ಕಾರ್ಯ ನಿರ್ವಹಣೆಗೆ ಸಿದ್ದ

Posted On: 07-07-2020 04:54PM
ಉಡುಪಿ ಜುಲೈ 7 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳನ್ನು ಪತ್ತೆ ಹಚ್ಚಲು , ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಸರ್ಕಾರಿ ಕೋವಿಡ್ ಲ್ಯಾಬ್ ನಿರ್ಮಾಣದ ಕಾರ್ಯ ಸಂಪೂರ್ಣಗೋಂಡಿದ್ದು, ಯಾವುದೇ ಸಮಯದಲ್ಲಿ ಅಧಿಕೃತವಾಗಿ ತನ್ನ ಪರೀಕ್ಷಾ ಕಾರ್ಯ ಆರಂಭಿಸಲಿದೆ. ಇದರಿಂದ ಜಿಲ್ಲೆಯ ಕೋವಿಡ್ ಶಂಕಿತರ ಗಂಟಲು ದ್ರವದ ಪರೀಕ್ಷೆಯನ್ನು ಇತರೆ ಜಿಲ್ಲೆಗಳಿಗೆ ಕಳುಹಿಸುವ ಅಗತ್ಯ ಇಲ್ಲವಾಗಲಿದ್ದು, ಜಿಲ್ಲೆಯಲ್ಲಿ ಪ್ರಕರಣಗಳ ವರದಿ ಇಲ್ಲಿಯೇ ಪಡೆಯಲು ಸಾಧ್ಯವಾಗಲಿದೆ. ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್-19 ಲ್ಯಾಬ್ ನಿರ್ಮಾಣಕ್ಕೆ 1 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಪ್ರಯೋಗಾಲಯ ಯಂತ್ರಗಳು ಮತ್ತು ಉಪಕರಣಗಳ ಸರಬರಾಜು ಅಗಿದ್ದು, ಲ್ಯಾಬ್ ನಿರ್ಮಾಣದ ಕಟ್ಟಡದ ಕಾಮಗಾರಿಗೆ 45 ಲಕ್ಷ ರೂ ವೆಚ್ಚವಾಗಿದೆ, ಪ್ರಯೋಗಾಲಯದಲ್ಲಿ ಕಾರ್ಯ ನಿರ್ವಹಿಸಲು 1 ಮೈಕ್ರೋ ಬಯೋಲಜಿಸ್ಟ್ ಹಾಗೂ 8 ಮಂದಿ ಲ್ಯಾಬ್ ಟೆಕ್ನೀಷಿಯನ್ ಗಳನ್ನು ನೇಮಕ ಮಾಡಿಕೊಂಡಿದ್ದು, ಮೈಕ್ರೋ ಬಯೋಲಾಜಿಸ್ಟ್ ಹಾಗೂ ಇಬ್ಬರು ಲ್ಯಾಬ್ ಟೆಕ್ನೀಷಿಯನ್ ಗಳಿಗೆ ನಿಮಾನ್ಸ್ ನಲ್ಲಿ ಅಗತ್ಯ ತರಬೇತಿ ನೀಡಲಾಗಿದೆ. ನಿಮಾನ್ಸ್ ಮೂಲಕ 5 ಸ್ಯಾಂಪಲ್ ಗಳನ್ನು ಪ್ರಾಯೋಗಿಕ ಪರೀಕ್ಷೆಗಾಗಿ ಉಡುಪಿ ಸರ್ಕಾರಿ ಕೋವಿಡ್ ಪ್ರಯೋಗಾಲಯಕ್ಕೆ ನೀಡಿದ್ದು, ಈ ಸ್ಯಾಂಪಲ್ ಗಳನ್ನು ಪರೀಕ್ಷಿಸಿ, ಈಗಾಗಲೇ ವರದಿಯನ್ನು ನಿಮಾನ್ಸ್ ಗೆ ಕಳುಹಿಸಲಾಗಿದ್ದು, ಈ ವರದಿ ನಿಮಾನ್ಸ್ ನ ವರದಿಯೊಂದಿಗೆ ಸರಿಯಾದಲ್ಲಿ , ಜಿಲ್ಲೆಯ ಸರ್ಕಾರಿ ಪ್ರಯೋಗಾಲಯದಲ್ಲಿ ಕೋವಿಡ್-19 ಮಾದರಿಗಳ ಪರೀಕ್ಷೆ ಆರಂಭವಾಗಲಿದೆ , ಮುಂದಿನ 2 ದಿನದೊಳಗೆ ನಿಮಾನ್ಸ್ನ ವರದಿ ಬರಲಿದೆ ಎನ್ನುತ್ತಾರೆ ಜಿಲ್ಲಾ ಆಸ್ಪತ್ರೆಯ ಸರ್ಜನ್ ಡಾ. ಮಧುಸೂಧನ್ ನಾಯಕ್. ಸಂಪೂರ್ಣ ಹವಾನಿಯಂತ್ರಿತವಾಗಿರುವ ಈ ಪರೀಕ್ಷಾ ಲ್ಯಾಬ್ ನಲ್ಲಿ , ಒಂದು ಬಾರಿಗೆ 96 ಸ್ಯಾಂಪಲ್ ಗಳ ಪರೀಕ್ಷೆ ಮಾಡಬಹುದಾಗಿದ್ದು, ಪರೀಕ್ಷಾ ವರದಿಗಾಗಿ 4 ರಿಂದ 6 ಗಂಟೆಗಳ ಅವಧಿ ತೆಗೆದುಕೊಳ್ಳಲಿದೆ, ಈ ಪ್ರಕಾರದಲ್ಲಿ ಈ ಲ್ಯಾಬ್ ನಲ್ಲಿ ದಿನಕ್ಕೆ ಗರಿಷ್ಠ 300 ಸ್ಯಾಂಪಲ್ ಗಳ ಪರೀಕ್ಷಾ ವರದಿ ಪಡೆಯಬಹುದಾಗಿದೆ. ಸ್ಯಾಂಪಲ್ ನ ಸ್ವೀಕೃತಿಯಿಂದ , ವರದಿಯವರೆಗೆ ಸಂಪೂರ್ಣ ಆನ್ ಲೈನ್ ನಲ್ಲಿ ಮಾಹಿತಿ ದಾಖಲಿಸವುದು ಸೇರಿದಂತೆ ಐ.ಸಿ.ಎಂ.ಆರ್ ಮಾರ್ಗಸೂಚಿಯನ್ವಯ ಕಾರ್ಯ ನಿರ್ವಹಿಸಲಾಗುವುದು. ಲ್ಯಾಬ್ ನಲ್ಲಿ ಪಿಪಿಇ ಕಿಟ್ ಗಳನ್ನು ಧರಿಸಿಯೇ ಪರೀಕ್ಷೆ ನಡೆಸಬೇಕಾಗಿದ್ದು, ಟೆಸ್ಟಿಂಗ್ ಕಾರ್ಯ ನಿರ್ವಹಣೆ ಕುರಿತಂತೆ, ಬೆಂಗಳೂರಿನ ನಿಮ್ಹಾನ್ಸ್ ನಲ್ಲಿ ಸಂಪೂರ್ಣ ತರಬೇತಿ ಪಡೆಯಲಾಗಿದೆ, ಸ್ಯಾಂಪಲ್ ಗಳನ್ನು ಆರಂಭದಲ್ಲಿ ಪ್ರೋಸೆಸಿಂಗ್ ಕೊಠಡಿಯಲ್ಲಿ ಸ್ವೀಕರಿಸಿ, ಬಯೋ ಸೇಪ್ಟಿ ಕ್ಯಾಬಿನಿಟ್ ನಲ್ಲಿಟ್ಟು ನಂತರ ಪಾಸ್ ಬಾಕ್ಸ್ ಮೂಲಕ ಪರೀಕ್ಷ ಕೊಠಡಿಗೆ ತಲುಪಿಸಿ, ಕೊನೆಗೆ ಆರ್.ಟಿ.ಪಿ.ಸಿ.ಆರ್ ಯಂತ್ರವಿರುವ ಕೊಠಡಿಗೆ ತಲುಪಿಸಿ ಅಲ್ಲಿರುವ ಯಂತ್ರದಲ್ಲಿ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಲ್ಯಾಬ್ ನ ಮೈಕ್ರೋ ಬಯಾಲಜಿಸ್ಟ್ ಡಾ. ಆನೀಟ್ ಡಿಸೋಜಾ ತಿಳಿಸಿದರು. ಒಂದು ಸ್ಯಾಂಪಲ್ ನ ಪರೀಕ್ಷೆಗೆ ಟೆಸ್ಟ್ ಕಿಟ್ ಗಳು ಮತ್ತು ಇತರೆ ಅಗತ್ಯ ಸುರಕ್ಷತಾ ವಸ್ತುಗಳ ಬಳಕೆಯ ವೆಚ್ಚ ಸೇರಿದಂತೆ ರೂ.1600 ವೆಚ್ಚವಾಗಲಿದ್ದು, ಈ ಎಲ್ಲಾ ವೆಚ್ವನ್ನು ಜಿಲ್ಲಾ ಪ್ರಾಕೃತಿಕ ವಿಕೋಪ ನಿಧಿಯಿಂದ ಭರಿಸಲಾಗುವುದು ಎಂದು ಜಿಲ್ಲಾ ಸರ್ಜನ್ ತಿಳಿಸಿದ್ದಾರೆ.
ಅನುಮತಿಯಿಲ್ಲದೇ ಸಭೆ ಸಮಾರಂಭ ನಡೆಸಿದಲ್ಲಿ ಪ್ರಕರಣ ದಾಖಲು

Posted On: 07-07-2020 04:38PM
ಉಡುಪಿ ಜುಲೈ 7 (ಕರ್ನಾಟಕ ವಾರ್ತೆ): ಉಡುಪಿ ಜಿಲ್ಲೆಯಲ್ಲಿ ಪ್ರಸ್ತುತ ಕೋವಿಡ್-19 Posiಣive ಪ್ರಕರಣಗಳು ದಿನೇ ದಿನೇ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿರುವುದು ಗಂಭೀರದ ವಿಷಯವಾಗಿದ್ದು, ಜಿಲ್ಲೆಯಲ್ಲಿ ಯಾವುದೇ ಪೂರ್ವಾನುಮತಿ ಇಲ್ಲದೆ, ನಿಯಮ ಬಾಹಿರವಾಗಿ ಹುಟ್ಟುಹಬ್ಬದ ಆಚರಣೆ, ಮೆಹಂದಿ ಕಾರ್ಯಕ್ರಮಗಳು, ಸನ್ಮಾನ ಕಾರ್ಯಕ್ರಮ ಮುಂತಾದವುಗಳು ನಡೆಯುತ್ತಿದ್ದು, ಇಂತಹ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ ಎಂಬ ಅಂಶವನ್ನು ಸಂಘಟಕರು ಅರಿತುಕೊಳ್ಳಬೇಕು. ಇಂತಹ ಕಾರ್ಯಕ್ರಮಗಳು ಕೋವಿಡ್ -19ನ್ನು ಹರಡುವಂತಹದಾಗಿದ್ದು, ಈ ಕಾರ್ಯಕ್ರಮಗಳ ಸಂಘಟಕರ ಮೇಲೆ ಕಡ್ಡಾಯವಾಗಿ ಪ್ರಕರಣ ದಾಖಲಿಸಿ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ ನೀಡಿದ್ದಾರೆ. ಪೂರ್ವಾನುಮತಿಯ ಮೇರೆಗೆ ಜರುಗುವ ಮದುವೆ / ಇತರೆ ಸಭೆ ಸಮಾರಂಭ, ಸನ್ಮಾನ ಇತ್ಯಾದಿ ಕಾರ್ಯಕ್ರಮಗಳಲ್ಲಿ ಸರ್ಕಾರದ ಆದೇಶದನ್ವಯ , ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಗ್ಲೌಸ್, ಮಾಸ್ಕ್, ಸ್ಯಾನಿಟೈಸರ್ ಬಳಕೆ, ಶುಚಿತ್ವ ಕಾಪಾಡಿಕೊಳ್ಳುವಿಕೆಗೆ ಹಾಗೂ ಇತರ ಎಸ್.ಓ.ಪಿ. ಕ್ರಮಗಳು ಯಥಾ ರೀತಿಯಲ್ಲಿ ಪಾಲನೆಯಾಗುತ್ತಿರುವ ಬಗ್ಗೆ ಖಾತರಿಪಡಿಸಿಕೊಳ್ಳಲು ಸಂಬAಧಿಸಿದ ತಹಶೀಲ್ದಾರರು/ ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿಗಳು/ ಉಡುಪಿ ನಗರಸಭೆ ಪೌರಾಯುಕ್ತರು / ಮುಖ್ಯಾಧಿಕಾರಿಗಳು/ ಗ್ರಾಮ ಲೆಕ್ಕಾಧಿಕಾರಿಗಳು/ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು/ ಹಾಗೂ ಆಯಾ ಇಲಾಖಾ ಸಿಬ್ಬಂದಿ ವರ್ಗದವರು ಖುದ್ದಾಗಿ ಭೇಟಿ ನೀಡಿ ಖಚಿತಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಉಡುಪಿಯ ಲಕ್ಷ್ಮೀ ನಗರದಲ್ಲಿ ಯುವಕನೋರ್ವನ ಬರ್ಬರ ಹತ್ಯೆ

Posted On: 07-07-2020 12:36PM
ಉಡುಪಿಯ ಲಕ್ಷೀ ನಗರದ ಬಳಿ ಯುವಕನೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.ಲಕ್ಷ್ಮೀ ನಗರ ಶಾಲೆಯ ಹಿಂಭಾಗದಲ್ಲಿ ಹತ್ಯೆಯಾದ ಯುವಕನ ಶವ ಪತ್ತೆಯಾಗಿದೆ. ಕೊಲೆಯಾದ ಯುವಕ ಮಲ್ಪೆ ಮೀನುಗಾರಿಕೆ ಬೊಟ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದ ಯೋಗಿಶ್ ಎನ್ನುವವನಾಗಿದ್ದು.ಹಣಕಾಸಿನ ವಿಚಾರದಿಂದ ಕೊಲೆ ಮಾಡಲಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ರೌಡಿ ಶೀಟರ್ ವಕ್ವಾಡಿ ಪ್ರವೀಣ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಸುಜೀತ್ ಪಿಂಟೋ ಈ ಯುವಕನ ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ. ಸುಜೀತ್ ಪಿಂಟೋ ಹಾಗೂ ಅತನ ಅಣ್ಣ ಬಡ್ಡಿ ವ್ಯವಹಾರ ನಡೆಸುತ್ತಿದ್ದು ,ಯೋಗಿಶನಿಗೆ ಹಣ ನೀಡಿದ್ದರು ಎನ್ನಲಾಗಿದೆ. ಹಣ ವಾಪಸ್ಸು ಕೇಳಲು ಇವರಿಬ್ಬರು ಸಂತೇಕಟ್ಟೆಯ ಬಾರ್ ಒಂದರಲ್ಲಿ ಕುಳಿತಿದ್ದ ಯೋಗಿಶನನ್ನು ಭೇಟಿಯಾಗಿದ್ದರು.ಅಲ್ಲಿ ಕೊಲೆಯಾದ ಯುವಕ ಹಾಗೂ ಸುಜಿತ್ ಪಿಂಟೋ ಗುಂಪು ಗಲಾಟೆ ನಡೆಸಿದ್ದರು ಎನ್ನುವ ಮಾಹಿತಿ ತಿಳಿದು ಬಂದಿದೆ. ಬಳಿಕ ಲಕ್ಷ್ಮೀನಗರದ ಶಾಲೆ ಬಳಿ ಬಂದಾಗ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದು ಹತ್ಯೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ಉಡುಪಿಯಲ್ಲಿ ಕೆಲಸ ಕಳೆದುಕೊಂಡು ಬಾಡಿಗೆ ಮನೆಯಲ್ಲಿರುವ ಕುಟುಂಬಕ್ಕೆ ನೆರವು

Posted On: 06-07-2020 10:41PM
ಉಡುಪಿ :- ಕೊರೋನಾ ಪ್ರಭಾವದಿಂದ ಕೆಲಸ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಬನ್ನಂಜೆ ಬಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಕುಟುಂಬವು ಸಹಾಯಕ್ಕಾಗಿ ಕರೋನಾ ವಾರಿಯರ್ಸ್ ಉಡುಪಿ ತಂಡವನ್ನು (21 ಭಾಷೆಗಳ ಅಡಿಯೋ ಕ್ಲಿಪ್ ಮೂಲಕ) ಸಂಪಕಿ೯ಸಿದ್ದರು.ತಂಡವು ವಿವಿಧ ದಾನಿಗಳ ಮೂಲಕ ಸಂಗ್ರಹಿಸಿದ ಸುಮಾರು 5 ಸಾವಿರ ರೂ ಮೌಲ್ಯದ ಜೀನಸಿ ಸಾಮಾಗ್ರಿ ಗಳನ್ನು ಅವರ ಮನೆಗೆ ಭೇಟಿ ನೀಡಿ ನೀಡಿತ್ತು.ಈ ಸಂದಭ೯ದಲ್ಲಿ ಸಂಯೋಜಕ ದೀಪಕ್ ಶೆಣ್ಯ್ ,ರಾಘವೇಂದ್ರ ಪ್ರಭು,ಕವಾ೯ಲು ಮುಂತಾದವರಿದ್ದರು.
ಕೊರೋನ ನಿಯಂತ್ರಣಕ್ಕೆ ರಚಿಸಿರುವ ತಂಡಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು

Posted On: 06-07-2020 10:33PM
ಉಡುಪಿ ಜುಲೈ 6 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಕೊರೋನ ನಿಯಂತ್ರಣ ಮತ್ತು ಸಾರ್ವಜನಿಕರ ಆರೋಗ್ಯ ಸುರಕ್ಷತೆಗಾಗಿ ರಾಜ್ಯ ಸರ್ಕಾರದ ಸೂಚನೆಯಂತೆ ರಚಿಸಲಾಗಿರುವ 14 ತಂಡಗಳು ಮಹತ್ವದ ಜವಾಬ್ದಾರಿ ಹೊಂದಿದ್ದು, ಪರಸ್ಪರ ಸಮನ್ವಯದಿಂದ ತಮಗೆ ನಿಯೋಜಿಸಿರುವ ಕಾರ್ಯಗಳನ್ನು, ಯಾವುದೇ ಲೋಪಗಳಿಗೆ ಆಸ್ಪದ ನೀಡದಂತೆ ಕಾರ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದ್ದಾರೆ. ಅವರು ಸೋಮವಾರ, ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ, ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೋವಿಡ್ -19 ಪಾಸಿಟಿವ್ ಬಂದ ವ್ಯಕ್ತಿಗಳನ್ನು ಸ್ಥಳಾಂತರಿಸಲು ರಚಿಸಲಾಗಿರುವ ತಂಡದ ಸಿಬ್ಬಂದಿ ಐ.ಸಿ.ಎಂಆರ್ ಪೋರ್ಟಲ್ ನಲ್ಲಿ ಪಾಸಿಟಿವ್ ವರದಿ ಬಂದ ಕೂಡಲೇ ಸಂಬAದಪಟ್ಟ ರೋಗಿಯನ್ನು ತಕ್ಷಣ ಆಸ್ಪತ್ರೆಗೆ ಸ್ಥಾಂತರಿಸಲು ವ್ಯವಸ್ಥೆ ಮಾಡಬೇÃಕು , ಜಿಲ್ಲೆಯಲ್ಲಿ ಆಂಬುಲೆನ್ಸ್ ಮಾನಟರಿಂಗ್ ಸಿಸ್ಟಂ ಜಾರಿಗೊಳಿಸಿದ್ದು, ವ್ಯಕ್ತಿಯ ಮನೆಗೆ ಸಮೀಪದ ಆರೋಗ್ಯ ಕೇಂದ್ರದಲ್ಲಿರುವ ಆಂಬುಲೆನ್ಸ್ ಸಹಾಯದೊಂಗಿಗೆ ನಿಗಧಿತ ಆಸ್ಪತ್ರೆಗೆ ದಾಖಲಿಸಬೇಕು, ತುರ್ತು ಅಗತ್ಯವಿದ್ದಲ್ಲಿ ಖಾಸಗಿ ಆಸ್ಪತ್ರೆಯ ಅಂಬುಲೆನ್ಸ್ ಗಳನ್ನು ಬಳಿಸಿಕೊಳ್ಳುವಂತೆ ಸೂಚಿಸಿದ ಜಿಲ್ಲಾಧಿಕಾರಿ ಜಿ.ಜಗದೀಶ್, ಯಾವುದೇ ಕಾರಣಕ್ಕೂ ಪಾಸಿಟಿವ್ ವರದಿ ಬಂದ ವ್ಯತಿಯನ್ನು ಆಸ್ಪತ್ರೆಗೆ ದಾಖಲಿಸುವಲ್ಲಿ ವಿಳಂಬ ಸಲ್ಲದು ,. ವಿಳಂಬವಾದಲ್ಲಿ ಇತರರಿಗೂ ಹರಡುವ ಸಂಭವ ಹೆಚ್ಚು ಎಂದು ಹೇಳಿದರು. ಜಿಲ್ಲೆಯಲ್ಲಿ ಬೆಡ್ ಮಾನಿಟರಿಂಗ್ ಸಿಸ್ಟಂ ಯೋಜನೆ ಸಿದ್ದಪಡಿಸಲಾಗುತ್ತಿದ್ದು, ಇದರಿಂದ ಯಾವ ಆಸ್ಪತ್ರೆಯಲ್ಲಿ ಎಷ್ಟು ಬೆಡ್ ಗಳು ಖಾಲಿ ಇವೆ, ಸಮೀಪದ ಆಸ್ಪತ್ರೆ ಎಲ್ಲಿದೆ , ಆ ಆಸ್ಪತ್ರೆಯಲ್ಲಿ ಏನು ಸೌಲಭ್ಯಗಳಿವೆ ಎಂಬ ಮಾಹಿತಿ ಕೂಡಲೆ ಲಭ್ಯವಾಗಲಿದ್ದು, ವೃಥಾ ಆಸ್ಪತ್ರೆಗೆ ಅಲೆಯುವುದು ತಪ್ಪಲಿದೆ, ಜಿಲ್ಲೆಯಲ್ಲಿ ಈಗಾಗಲೇ ವಿವಿಧ ಆಸ್ಪತ್ರೆಗಳಲ್ಲಿ 2400 ಬೆಡ್ ಗಳನ್ನು ಕೋವಿಡ್-19 ರೋಗಿಗಳಿಗೆ ಮೀಸಲಿಡಲಾಗಿದ್ದು, ಮುಂಜಾಗ್ರತೆಗಾಗಿ ಇನ್ನೂಂದು ಸುಸಜ್ಜಿತ ಕೋವಿಡ್-19 ಆಸ್ಪತ್ರೆ ಸಿದ್ದಪಡಿಸಿರುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದರು. ಜಿಲ್ಲೆಯ ಎಲ್ಲಾ ಸರಕಾರಿ ಆಸ್ಪತ್ರೆಯ ನಸ್ ð ಗಳಿಗೆ ಐ.ಸಿ.ಯು ನಲ್ಲಿ ಕಾರ್ಯ ನಿರ್ವಹಣೆಯ ವಿಧಾನ ಕುರಿತಂತೆ ಮಣಿಪಾಲದ ಕೆಎಂಸಿ ಯಲ್ಲಿ ವಿಶೇಷ ತರಬೇತಿಗೆ ನಿಯೋಜಿಸುವಂತೆ ಆರೋಗ್ಯ ಇಲಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು. ಕೋವಿಡ್-19 ರೋಗಿಯ ಸಂಪರ್ಕ ಪತ್ತೆ ಹಚ್ಚುವುದನ್ನು ತ್ವರಿತವಾಗಿ ಮಾಡಿ, ಆತನ ಮೊಬೈಲ್ ನ ಸಿಡಿಆರ್ ಮೂಲಕ ಪ್ರಾಥಮಿಕ ಸಂಪರ್ಕಿತರ ಮಾಹಿತಿ ಪಡೆಯಿರಿ, ರೋಗಿಯ ಸಂಪರ್ಕದ ಮಾಹಿತಿ ಪಡೆಯುವಲ್ಲಿ ವಿಳಂಬವಾದಲ್ಲಿ ಅದು ಇಡೀ ಸಮಾಜಕ್ಕೆ ಕಂಟಕವಾಗಲಿದೆ, ಸಂಪರ್ಕ ದ ಮಾಹಿತಿ ಪಡೆಯಲು ಪ್ರತಿ ತಾಲೂಕಿಗೆ ವಿವಿಧ ಇಲಾಖೆಯ 50 ಮಂದಿ ಸಿಬ್ಬಂದಿಯನ್ನು ನಿಯೋಜಿಸಿ, ಅವರಿಗೆ ಅಗತ್ಯ ತರಬೇತಿ ನೀಡಿ, ಈ ತಂಡದಲ್ಲಿ ಅತ್ಯಂತ ಕ್ಷಿಪ್ರ ಮತ್ತು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುವಂತೆ ಸೂಚನೆ ನೀಡಿದರು. ಜಿಲ್ಲೆಯಲ್ಲಿ ಶೀತ, ಕೆಮ್ಮ, ನಗಡಿ, ಜ್ವರದಿಂದ ಬಳಲುತ್ತಿರುವ ರೋಗಿಗಳ ವಿವರ ನೀಡದ ಖಾಸಗಿ ಆಸ್ಪತ್ರೆ ಮತ್ತು ಕ್ಲಿನಿಕ್ ಗಳ ಲೈಸೆನ್ಸ್ ರದ್ದುಗೊಳಿಸುವುದಾಗಿ ಎಚ್ಚರಿಕೆ ನೀಡಿದ ಡಿಸಿ, ಪ್ರತಿದಿನ ವರದಿ ನೀಡುವಂತೆ ಹಾಗೂ ಶೀಘ್ರದಲ್ಲಿ ಪ್ರಕರಣ ಪತ್ತೆ ಹಚ್ಚಿದ್ದಲ್ಲಿ ಸಮುದಾಯಕ್ಕೆ ಹರಡದಂತೆ ತಡೆಯಲು ಮತ್ತು ರೋಗಿಯ ಜೀವ ಉಳಿಸಲು ಸಾಧ್ಯವಾಗಲಿದೆ, ಎಲ್ಲಾ ಆಶಾ ಮತ್ತು ಆರೋಗ್ಯ ಕಾರ್ಯಕರ್ತೆಯರು ಪ್ರತಿ ದಿನ ತಮ್ಮ ವ್ಯಾಪ್ತಿಯ ಮನೆಗಳಿಗೆ ಭೇಟಿ ನೀಡಿ, ಶೀತ, ಕೆಮ್ಮ, ನಗಡಿ, ಜ್ವರದಿಂದ ಬಳಲುತ್ತಿರುವ ರೋಗಿಗಳ ವರದಿ ನೀಡಬೇಕು, ಇಂತಹ ಲಕ್ಷಣಗಳಿದ್ದು , ರೋಗಿಯ ತಪಾಸಣೆ ಬಿಟ್ಟು ಹೋಗಿ , ಆ ವ್ಯಕ್ತಿಗೆ ಕೋವಿಡ್ ನಿಂದ ಮರಣ ಸಂಭವಿಸಿದ್ದಲ್ಲಿ , ಸಂಬAದಪಟ್ಟ ವ್ಯಾಪ್ತಿಯ ಸಿಬ್ಬಂದಿಗಳ ನಿರ್ಲಕ್ಷö್ಯತನದ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ ನೀಡಿದರು. ಕಂಟೈನ್ಮೆAಟ್ ವಲಯದ ಕುರಿತು ನಿಯಮ ಬದಲಾಗಿದ್ದು, ಸ್ಥಳಿಯವಾಗಿ 2-3 ಪ್ರಕರಣ ಕಂಡುಬAದಲ್ಲಿ ಸಂಬAದಪಟ್ಟ ವ್ಯಕ್ತಿಯ ಮನೆಯ ಬದಲಾಗಿ , ಇಡೀ ಗ್ರಾಮವನ್ನು ಸೀಲ್ ಡೌನ್ ಮಾಡಿ , ಆ ಭಾಗದಲ್ಲಿನ ಸಾರ್ವಜನಿಕರನ್ನು ವ್ಯಾಪಕವಾಗಿ ಪರೀಕ್ಷೆಗೆ ಒಳಪಡಿಸಬೇಕು, ಜಿಲ್ಲೆಯಲ್ಲಿ ಪ್ರತಿದಿನ 650 ಮಂದಿಯ ಸ್ಯಾಂಪಲ್ ಪರೀಕ್ಷೆ ನಡೆಸುವಂತೆ ನಿರ್ದೇಶನವಿದ್ದು, ಜಿಲ್ಲೆಯ ಒಂದೇ ಬಾಗದಲ್ಲಿ ಸ್ಯಾಂಪಲ್ ತೆಗೆಯದೇ , ಜಿಲ್ಲೆಯಾದ್ಯಂತ ವಿವಿಧ ವರ್ಗಗಳಿಗೆ ಸೇರಿದ ಸಾರ್ವಜನಿಕರ ಸ್ಯಾಂಪಲ್ ತೆಗದು ಪರೀಕ್ಷೆ ನೆಡೆಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು. ಜಿಲ್ಲೆಯಲ್ಲಿ ಕೋವಿಡ್ ವಾರಿರ್ಸ್ ಗಳಿಗೆ ಸನ್ಮಾನ ಕಾರ್ಯಕ್ರಮಗಳು ನಡೆಯುತ್ತಿದ್ದು, ಇಂತಹ ಕಾರ್ಯಕ್ರಮಗಳಲ್ಲಿ ಯಾವುದೇ ಸಾಮಾಜಿಕ ಅಂತರ ಪಾಲನೆಯಾಗುತ್ತಿಲ್ಲ,ಇನ್ನು ಮುಂದೆ ಇಂತಹ ಸನ್ಮಾನ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಿಬ್ಬಂದಿಗಳಿಗೆ ಹಾಗೂ ಇಂತಹ ಕಾರ್ಯಕ್ರಮ ಆಯೋಜಿಸುವ ಸ್ವಯಂ ಸಂಸ್ಥೆಗಳು ಮತ್ತು ಆಯೋಜಕರ ವಿರುದ್ದವೂ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ ಜಿಲ್ಲಾಧಿಕಾರಿ ಜಿ.ಜಗದೀಶ್, ಕೋವಿಡ್ ನಿಯಂತ್ರಣ ನಿಯಮಗಳನ್ವಯ ಈ ರೀತಿಯ ಯಾವುದೇ ಸಮಾರಂಭಗಳನ್ನು ನಡೆಸುವುದಕ್ಕೆ ಅನುಮತಿ ಇಲ್ಲ , ಕೋವಿಡ್ ವಿರುದ್ದದ ನಿಜವಾದ ಹೋರಾಟ ಈಗ ಆರಂಭವಾಗಿದೆ, ಸನ್ಮಾನ ಕಾರ್ಯಕ್ರಮ ಮಾಡಿಕೊಂಡು ಮರೆಯುವ ಗಳಿಗೆ ಇದಲ್ಲ, ಕೊರೋನಾ ಮುಗಿದ ನಂತರ ಪ್ರತಿಯೊಬ್ಬರಿಗೂ ಜಿಲ್ಲಾಡಳಿತದಿಂದಲೇ ಸನ್ಮಾನ ಆಯೋಜಿಸಲಾಗುವುದು ಎಂದರು. ಜಿಲ್ಲೆಯಲ್ಲಿ ಕೋವಿಡ್ ನಿಂದ ಮರಣ ಸಂಭವಿಸಿದಲ್ಲಿ , ಶವಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡುವಂತೆ ರಚಿಸಲಾಗಿರುವ ತಂಡವು, ಎಲ್ಲಾ ನಗರ ಸ್ಥಳಿಯ ಸಂಸ್ಥೆಗಳಲ್ಲಿ ನಿಗಧಿತ ಜಾಗ ಗುರುತಿಸಿರುವಂತೆ ಹಾಗೂ ನಿಯಮಗಳನ್ವಯ ಯಾವುದೇ ಲೋಪವಾಗದಂತೆ ಶವ ಸಂಸ್ಕಾರ ನಡೆಸುವಂತೆ ತಿಳಿಸಿದರು. ಕೋವಿಡ್ ನಿಯಂತ್ರಣಕ್ಕೆ ರಚಿಸಲಾಗಿರುವ ತಂಡಗಳಿಗೆ , ಸಂದರ್ಭಗಳಿಗೆ ತಕ್ಕಂತೆ ಸ್ವಯಂ ನಿರ್ಧಾರ ಕೈಗೊಳ್ಳುವ ಸಂಪೂರ್ಣ ಅಧಿಕಾರ ನೀಡಿದ್ದು, ಯಾವುದೇ ಸಂದರ್ಭದಲ್ಲಿ ಲೋಪಗಳಾದಲ್ಲಿ ಸಂಬAದಪಟ್ಟ ತಂಡ ಮುಖ್ಯಸ್ಥರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕಿರಣ್ ಫೆಡ್ನೇಕರ್, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಹಾಗೂ 14 ತಂಡಗಳ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು.
ಪಾಸಿಟಿವ್ ವರದಿಯೊಂದಿಗೆ ಆಗಮಿಸಿದಲ್ಲಿ ಕ್ರಿಮಿನಲ್ ಮೊಕದ್ದಮೆ : ಜಿಲ್ಲಾಧಿಕಾರಿ ಜಿ.ಜಗದೀಶ್

Posted On: 06-07-2020 10:21PM
ಉಡುಪಿ ಜುಲೈ 6 (ಕರ್ನಾಟಕ ವಾರ್ತೆ): ಜಿಲ್ಲೆಗೆ ವಿವಿಧ ರಾಜ್ಯಗಳಿಂದ ಆಗಮಿಸುತ್ತಿರುವ ಸಾರ್ವಜನಿಕರು, ಖಾಸಗಿ ಲ್ಯಾಬ್ ಗಳಲ್ಲಿ ನೀಡಿರುವ ತಮ್ಮ ಕೋವಿಡ್-19 ಪರೀಕ್ಷಾ ವರದಿ ಬರುವ ಮುನ್ನವೇ ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಜಿಲ್ಲೆಗೆ ಆಗಮಿಸಿದ ನಂತರ ಅವರ ವರದಿಯು ಪಾಸಿಟಿವ್ ಆಗಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಲ್ಲಿ, ಅಂತಹ ವ್ಯಕ್ತಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ ನೀಡಿದ್ದಾರೆ. ಹೊರರಾಜ್ಯದಿಂದ ಬರುವ ವ್ಯಕ್ತಿಗಳು ತಮ್ಮ ಕೋವಿಡ್ 19 ಪರೀಕ್ಷಾ ವರದಿ ಬಂದ ನಂತರವೇ ಜಿಲ್ಲೆಗೆ ಬರಬೇಕು, ಖಾಸಗಿ ಲ್ಯಾಬ್ ಗಳೂ ಸಹ ಅಂತಹ ವ್ಯಕ್ತಿಗಳ ವರದಿಯನ್ನು ಸಂಬAದಪಟ್ಟ ಜಿಲ್ಲಾಡಳಿತಕ್ಕೆ ತಿಳಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು. ಜಿಲ್ಲೆಯಲ್ಲಿ ಬಸ್ ಗಳಲ್ಲಿ ಸಾಮಾಜಿಕ ಅಂತರ ಪಾಲನೆಯಾಗದೇ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ಜಿ.ಜಗದೀಶ್, ಇಂತಹ ಬಸ್ ಗಳ ವಿರುದ್ದ ಇದುವರೆಗೂ ಪ್ರಕರಣ ದಾಖಲಿಸದ ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ನೋಟೀಸ್ ನೀಡುವಂತೆ ಸೂಚಿಸಿದರು. ಎಲ್ಲಾ ತಹಸೀಲ್ದಾರ್ ಗಳು ತಮ್ಮ ವ್ಯಾಪ್ತಿಯಲ್ಲಿ ಸಂಚರಿಸಿಸುವ ಬಸ್ ಗಳಲ್ಲಿ , ನಿಗಧಿತ ಸಂಖ್ಯೆಗಿAತ ಹೆಚ್ಚಿನ ಪ್ರಯಾಣಿಕರು ಕಂಡುಬAದಲ್ಲಿ , ಹೆಚ್ಚುವರಿ ಪ್ರಯಾಣಿಕರನ್ನು ಕೆಳಗಿಳಿಸಿ, ಬಸ್ ನ ಚಾಲಕ ಮತ್ತು ಕಂಡಕ್ಟರ್ ವಿರುದ್ದ ಪ್ರಕರಣ ದಾಖಲಿಸುವಂತೆ ಹಾಗೂ ಹೆಚ್ಚ್ಚುವರಿ ಪ್ರಯಾಣಿಕರಿಗೆ ಆರ್.ಟಿ.ಓ ಮೂಲಕ ಮತ್ತೊಂದು ಬಸ್ ವ್ಯವಸ್ಥೆ ಕಲ್ಪಿಸುವಂತೆ ಸೂಚನೆ ನೀಡಿದರು. ಜಿಲ್ಲೆಯ ಎಲ್ಲಾ ಖಾಸಗಿ ಬಸ್ ಮಾಲೀಕರಿಗೆ ಮತ್ತು ಆರ್.ಟಿ.ಓ ಅಧಿಕಾರಿಗಳಿಗೆ ಈ ಹಿಂದೆಯೇ ಸಭೆ ನೆಡೆಸಿ, ಬಸ್ ಗಳಲ್ಲಿ ಸಾಮಾಜಿಕ ಅಂತರ ಪಾಲನೆಗೆ ಸೂಚನೆಗಳನ್ನು ನೀಡಿದ್ದರೂ , ಸಹ ಇನ್ನೂ ಇದರ ಉಲ್ಲಂಘನೆ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.
ಗ್ರಾಮೀಣಾಭಿವೃದ್ಧಿಯಲ್ಲಿ ಸಂಘ ಸಂಸ್ಥೆಗಳ ಪಾತ್ರ ಬಹುಮುಖ್ಯ

Posted On: 05-07-2020 10:17PM
ನಂದಳಿಕೆ.05, ಜುಲೈ :- ಯುವ ಜನತೆ ತಮ್ಮ ಬಿಡುವಿನ ವೇಳೆಯನ್ನು ಸಮಾಜಮುಖಿ ಕಾಯ೯ದಲ್ಲಿ ತೊಡಗಿಸಿಕೊಂಡರೆ ಗ್ರಾಮೀಣ ಮಟ್ಟದ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಜೇಸಿಐ ವಲಯ ತರಬೇತುದಾರ ರಾಘವೇಂದ್ರ ಪ್ರಭು,ಕವಾ೯ಲು ಹೇಳಿದರು. ಅವರು ಜೇಸಿಐ ಬೆಳ್ಮಣ್, ನೆಹರುಯುವ ಕೇಂದ್ರ ನಂದಳಿಕೆ ಅಬ್ಬನಡ್ಕ ಶ್ರೀ ದುಗಾ೯ ಪರಮೇಶ್ವರಿ ಫ್ರ್oಡ್ಸ್ ಕ್ಲಬ್ ಇದರ ಆಶ್ರಯದಲ್ಲಿ ಕ್ಲಬ್ ನ ರಂಗಮಂದಿರದಲ್ಲಿ "ಗ್ರಾಮೀಣಾಭಿವೃದ್ಧಿಯಲ್ಲಿ ಸಂಘ ಸಂಸ್ಥೆಗಳ ಪಾತ್ರ ''ಎಂಬ ಕುರಿತು ನಡೆದ ತರಬೇತಿ ಕಾಯಾ೯ಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು. ಎಲ್ಲದಕ್ಕೂ ಸಕಾ೯ರವನ್ನು ಕಾಯದೆ ಸಂಘ ಸಂಸ್ಥೆಗಳು ಅಭಿವೃದ್ಧಿ ನಡೆಸಲು ಸಾಧ್ಯ ಅದೇ ರೀತಿ ಮೂಲಭೂತ ಅವಶ್ಯಕತೆ ಕೊರತೆ ಬಗ್ಗೆ ಸಕಾ೯ರ ದ ಗಮನ ಸೆಳೆಯಬಹುದು ಎಂದರು. ಉದ್ಘಾಟನೆ ನೆರವೇರಿಸಿದ ಸ್ವಚ್ಚ ಭಾರತ ಪ್ರೇoಡ್ಸ್ ನ ಸ್ಥಾಪಕ, ಸಂಚಾಲಕ ಗಣೀಶ್ ಪ್ರಸಾದ ಜಿ.ನಾಯಕ್ ಯುವ ಜನರು ಸಂಘ ಸಂಸ್ಥೆಗಳಲ್ಲಿ ಸೇರುವ ಮೂಲಕ ವಿವಿಧ ಅಭಿವೃದ್ಧಿ ಪರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬಹುದು ಎಂದರು. ಜೇಸಿ ಅಧ್ಯಕ್ಷ, ಇಂದಾರು ಸತ್ಯನಾರಾಯಣ ಭಟ್ ಅಧ್ಯಕ್ಷತೆ ವಹಿಸಿದ್ದರು.ಕ್ಲಬ್ ಅಧ್ಯಕ್ಷ ಅಬ್ಬನಡ್ಕ ಸತೀಶ ಪೂಜಾರಿ, ಕಾಯ೯ದಶಿ೯ ಪ್ರಶಾಂತ್ ಪೂಜಾರಿ, ಮಹಿಳಾ ಕಾಯ೯ದಶಿ೯ ವೀಣಾ ಹರೀಶ್ ಪೂಜಾರಿ, ಜೆಸಿರೆಟ್ ಸೌಜನ್ಯ ಸತೀಶ್ ಕೋಟ್ಯಾನ್, ಜೆಜೆಸಿ ಸಂದೀಪ್ ಕುಲಾಲ್ ಮುಂತಾದವರಿದ್ದರು.
ಮಹಮ್ಮದನ್ ಯುವಕರ ತಂಡದಿಂದ ನಡ್ಸಾಲುವಿನಲ್ಲಿ ತಾತ್ಕಾಲಿಕ ರಸ್ತೆ ದುರಸ್ತಿ

Posted On: 05-07-2020 04:03PM
ನಡ್ಸಾಲು.05, ಜುಲೈ : ದೀನ್ ಸ್ಟ್ರೀಟ್ ಪ್ರವೇಶಿಸುವ ರಸ್ತೆ ಮಳೆ ನೀರು ಹರಿದು ಹೋಗಲು ವ್ಯವಸ್ಥೆ ಇಲ್ಲದ ಕಾರಣ ರಸ್ತೆ ತುಂಬಾ ನೀರು ನಿಂತು ಜನರು ನಡೆದುಕೊಂಡು ಹೋಗಲು ಮತ್ತು ವಾಹನದಲ್ಲಿ ಹೋಗಲು ತುಂಬಾ ಕಷ್ಟಕರವಾಗುತ್ತಿತ್ತು. ಎಷ್ಟು ಬಾರಿ ಪಂಚಾಯಿತಿಗೆ ತಿಳಿಸಿದರು ಕೂಡ ಪ್ರಯೋಜನವಾಗಲಿಲ್ಲ ಇದನ್ನು ಸ್ಥಳೀಯ ಮಹಮ್ಮದನ್ ಯುವಕರು ತಂಡ ಸೇರಿ ತಾತ್ಕಾಲಿಕವಾಗಿ ನೀರು ಹರಿದು ಹೋಗಲು ವ್ಯವಸ್ಥೆ ಮಾಡಿ ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿ ಮತ್ತು ಜನಪ್ರತಿನಿಧಿಗಳು ಇದನ್ನು ಆದಷ್ಟು ಬೇಗ ಸರಿಪಡಿಸಿ ಕೊಡಬೇಕಾಗಿ ತಮ್ಮಲ್ಲಿ MOHAMMADAN HELPING HAND ವಿನಂತಿಸಿಕೊಳ್ಳುತ್ತಿದ್ದಾರೆ