Updated News From Kaup
ಆತ್ಮನಿಭ೯ರಕ್ಕೆ ವಿನೂತನ ಕೊಡುಗೆ ಫುಲ್ ಬಾಡಿ ಸ್ಯಾನಿಟೈಜರ್ - ರಾಧಾಕೃಷ್ಣ ಶೆಟ್ಟಿ
Posted On: 31 Jul 2020, 09:47 PM
ಕೊರೋನಾ ಎಂಬ ಕಣ್ಣಿಗೆ ಕಾಣದ ವೈರಸ್ ವಿಶ್ವವನ್ನೇ ಅಲುಗಾಡಿಸಿ ಬಿಟ್ಟಿದೆ. ಈ ನಿಟ್ಟಿನಲ್ಲಿ ನಮ್ಮ ದೇಶವು ಕೂಡ ಇದಕ್ಕೆ ಹೊರತಾಗಿಲ್ಲ. ಪ್ರಧಾನಿಯವರು ಹೇಳಿದಂತೆ ಆತ್ಮ ನಿಭ೯ರ ದೇಶವಾಗ ಬೇಕಾದರೆ ಭಾರತೀಯ ಉತ್ಪನಗಳಿಗೆ ಇಲ್ಲಿ ಮಾರುಕಟ್ಟೆ ಸೃಷ್ಠಿಗೊಳಿಸಬೇಕು ಭಾರತೀಯ ಉತ್ಪನ್ನಗಳು ರಫ್ತುಗೊಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ಉಡುಪಿಯ ಸಮಾಜ ಸೇವಕರೊಬ್ಬರು ತನ್ನ ವಿನೂತನ ಆನ್ವೇಷಣೆಯ ಮೂಲಕ ಸುದ್ದಿಯಲ್ಲಿದ್ದಾರೆ. ಉಡುಪಿ ದೊಡ್ದಣಗುಡ್ಡೆಯ ರಾಧಾಕೃಷ್ಣ ಶೆಟ್ಟಿ ಪಿವಿಸಿ ಪೈಪ್ ನಿಂದ ಅತಿ ಕಡಿಮೆ ವೆಚ್ಚದ ಪುಲ್ ಬಾಡಿ ಸ್ಯಾನಿಟೈಸರ್ ಸ್ಟೇ ಯಂತ್ರದ ಆನ್ವೇಷಣೆ ಮಾಡಿದ್ದಾರೆ. ಎರಡು ಬಾರಿ ವಿಫಲ ಯತ್ನದ ಹೊರತಾಗಿ ಎರಡು ತಿಂಗಳ ಶ್ರಮದಿಂದ ರೂಪಿಸಿದ ಪುಲ್ ಬಾಡಿ ಸ್ಯಾನಿಟೈಸರ್ ಸ್ಟೇ ಯಂತ್ರಕ್ಕೆ 40 ರಿಂದ 45 ಸಾವಿರ ವೆಚ್ಚವಾಗಿದೆ. ಇದೇ ಮಾದರಿಯ ಬೇರೆ ಯಂತ್ರಗಳಿಗೆ ಸುಮಾರು ಒಂದು ವರೆ ಲಕ್ಷ ರೂ ದರವಿದೆ.ಇವರು ತಯಾರಿಸಿದ ಪಿವಿಸಿ ಪೈಪ್ ಸೆನ್ಸಾರ್ ಸಕ್ಯೂ೯ಟ್ , ಟೈಮರ್ ರಿಲೇ ಎಸ್.ಎಂ.ಪಿ.ಎಸ್ ಅಳವಡಿಸಿದ ಈ ಯಂತ್ರ ಕರೆಂಟ್ ಅಥವಾ ಜನರೇಟರ್ ಮೂಲಕ ಕಾಯ೯ ನಿವ೯ಹಿಸುತ್ತದೆ. ತನ್ನ ಗೆಳೆಯರೊಬ್ಬರು ಕಳುಹಿಸಿದ ಸ್ಟೇ ಯಂತ್ರದ ಭಾವಚಿತ್ರ ನೋಡಿದ ತಕ್ಷಣ ತಾನು ಯಾಕೆ ಈ ಮಾದರಿಯ ಯಂತ್ರವನ್ನು ಸ್ಥಳೀಯ ವಸ್ತುಗಳನ್ನು ಬಳಸಿ ತಯಾರಿಸಬಾರದು ಎಂಬ ಕಲ್ಪನೆ ನನ್ನಲ್ಲಿ ಬಂತು ಸೆನ್ಸಾರ್ ಮೋಟರ್ ಯಂತ್ರ ಕೈ ಕೊಟ್ಟರೆ ಮರಳಿ ಯತ್ನದ ಬಳಿಕ ಈ ಯಂತ್ರ ತಯಾರಿಸಲು ಸಾಧ್ಯವಾಗಿದೆ ಎಂದು ಅವರು ಹೇಳುತ್ತಾರೆ. ಕೇವಲ 10 ಸೆಕೆಂಡ್ ನಲ್ಲಿ ಪುಲ್ ಬಾಡಿ ಸ್ವಾನಿ ಟೈಸ್ ಮಾಡಲು ಇದರಿಂದ ಸಾಧ್ಯ ಕೇವಲ 10 ಎಂ.ಎಲ್ ಸ್ಯಾನಿಟೈಸರ್ ಸಾಕು .8 ಗಂಟೆ ನಿರಂತರವಾಗಿ ಈ ಯಂತ್ರವನ್ನು ಚಾಲು ಇಟ್ಟರೂ ಒಂದು ಯೂನಿಟ್ ವಿದ್ಯುತ್ ಸಾಕಾಗುತ್ತದೆ. ಪುಲ್ ಬಾಡಿ ಸ್ಯಾನಿಟೈಸರ್ ಮಾಡುವ ವ್ಯಕ್ತಿ ಕಣ್ಣಿಗೆ ತಾಗದಂತೆ ಎಚ್ಚರಿಕೆ ವಹಿಸಬೇಕು ಚಮ೯ ವ್ಯಾಧಿ ಇದ್ದವರು ಇದರಿಂದ ದೂರ ಉಳಿದರೆ ಉತ್ತಮ ಎಂದು ಅವರು ಹೇಳುತ್ತಾರೆ. ಈ ಮಾದರಿಯ ಯಂತ್ರವನ್ನು.ಸಕಾ೯ರಿ ಕಚೇರಿ ಸಂಕಿಣ೯, ಕೈಗಾರಿಕೆ, ಮಾಲ್,ಸಾವ೯ಜನಿಕ ಸ್ಥಳದಲ್ಲಿ ಉಪಯೋಗ ಮಾಡಬಹುದಾಗಿದೆ. ತಾನು ಬೇರೆ ಬೇರೆ ಉದ್ಯಮಗಳನ್ನು ಸ್ಥಾಪನೆ ಮಾಡಿ ಅದನ್ನು ಬೇರೆ ಯುವಕರಿಗೆ ನಡೆಸಲು ನೀಡಿದ್ದಾರೆ. ಅತೀ ಕಡಿಮೆ ದರದಲ್ಲಿ ನಿಮಿ೯ಸಿದ ಈ ಯಂತ್ರಕ್ಕೆ ಒಳ್ಳೆಯ ಬೇಡಿಕೆಯಿದೆ. ಭಾರತ ದೇಶವು ಆತ್ಮ ನಿಭ೯ರವಾಗಲು ಎಲ್ಲರೂ ಕೊಡುಗೆ ನೀಡಬೇಕು ಎಂದು ಅವರು ಹೇಳುತ್ತಾರೆ. ಯುವಜನತೆ ಈ ರೀತಿಯ ಸಂಶೋಧನಾ ಕಾಯ೯ದಲ್ಲಿ ತೊಡಗಿಕೊಳ್ಳಲು ಕರೆ ನೀಡುವ ಅವರು, ಕರೋನಾ ಮುಕ್ತ ಸಮಾಜ ನಿಮಾ೯ಣ ಕೇವಲ ಸಕಾ೯ರ ದ ಕೆಲಸವಲ್ಲ ಪ್ರತಿಯೊಬ್ಬರೂ ಕೂಡ ಜವಾಬ್ದಾರಿ ಅರಿತು ಇರಬೇಕು ಎನ್ನುವ ರಾಧಾಕೃಷ್ಣ ಶೆಟ್ಟಿ, ದೊಡ್ಡ ಕೊಡುಗೆ ನೀಡಿದರೂ ಸರಳವಾದ ಮಾತುಗಳು ಎಲ್ಲರಿಗೂ ಮಾದರಿಯಾಗಿದೆ. ರಾಘವೇಂದ್ರ ಪ್ರಭು, ಕವಾ೯ಲು
ಸಮೃದ್ಧವಾದ ಅಷ್ಟೈಶ್ವರ್ಯ ಪಡೆಯಲು ವರಮಹಾಲಕ್ಷ್ಮಿ ವೃತ
Posted On: 31 Jul 2020, 08:29 AM
"ಲಕ್ಷಯತಿ ಪಶ್ಯತಿ ಭಕ್ತಜನಾನ್ ಇತಿ ಲಕ್ಷ್ಮೀ" . ಇದು 'ಲಕ್ಷ್ಮೀ' ಶಬ್ದದ ವ್ಯುತ್ಪತ್ತಿ . ಉಪಾಸಕರನ್ನು ಕೃಪಾಕಟಾಕ್ಷದಿಂದ ವೀಕ್ಷಿಸುವವಳೇ 'ಲಕ್ಷ್ಮೀ'. ಶ್ರೀ ಎಂಬುದು 'ಲಕ್ಷ್ಮೀ'ಯ ನಾಮಾಂತರ . ಪ್ರಭೆ ,ಶೋಭೆ , ಕೀರ್ತಿ , ಕಾಂತಿ , ವಿಭೂತಿ , ಮತಿ , ವರ್ಚಸ್ , ತೇಜಸ್ , ಸೌಂದರ್ಯ , ವೃದ್ಧಿ , ಸಿದ್ಧಿ , ಸೌಭಾಗ್ಯ ,ಕಮಲ , ಬಿಲ್ವವೃಕ್ಷ ಮುಂತಾದುವು 'ಶ್ರೀ' ಶಬ್ದಕ್ಕಿರುವ ಹಲವು ಅರ್ಥಗಳು. ಸಂಪತ್ತು ಎಂಬುದು ಸಾಮಾನ್ಯ ಅರ್ಥವಾದರೂ 'ಐಶ್ವರ್ಯ'ವೆಂಬುದು ಪ್ರಧಾನವಾದ ಅರ್ಥ ಅಥವಾ ಸಾಮಾನ್ಯ ಒಪ್ಪಿಗೆ - ತಿಳಿವಳಿಕೆ .ಈಶ್ಚರಸ್ಯ ಭಾವಃ ಐಶ್ವರ್ಯಂ . ಪರಮಾತ್ಮನ ಅನುಗ್ರಹಕಾರಕವಾದ ಗುಣ ವಿಶೇಷವೇ 'ಶ್ರೀ'. 'ಲಕ್ಷ್ಮೀ' ಸಮುದ್ರ ಮಥನದಲ್ಲಿ ಹುಟ್ಟಿದಳು . ನಾರಾಯಣನನ್ನು ವರಿಸಿ ತಾನು 'ಮಹಾಲಕ್ಷ್ಮೀ'ಯಾದಳು . ನಾರಾಯಣನು 'ಲಕ್ಷ್ಮೀನಾರಾಯಣ'ನಾದ ,ಶ್ರೀಮನ್ನಾರಾಯಣನಾದ . ಸ್ಥಿತಿಕರ್ತನಾದ - ಪಾಲನಾಧಿಕಾರಿಯಾಗಿದ್ದ ನಾರಾಯಣನು ಸಂಪತ್ತಿನ ಅಧಿದೇವತೆಯಾದ ಲಕ್ಷ್ಮೀಗೆ ವಲ್ಲಭನಾಗಿ ಸೌಭಾಗ್ಯವಂತನಾದ , ಭಕ್ತರ ಇಷ್ಟಾರ್ಥ ಅನುಗ್ರಹಿಸಲು ಸರ್ವಶಕ್ತನಾದ. ಶ್ರೀಮನ್ನಾರಾಯಣನಿಂದ 'ಲಕ್ಷ್ಮೀ' ಬಹುಮಾನ್ಯಳಾದಳು . ಶ್ರೀಮನ್ನಾರಾಯಣ ಆಕೆಯನ್ನು ಹೃದಯದಲ್ಲೆ ಧರಿಸಿಕೊಂಡ . ಹೀಗೆ ಭಾಗ್ಯವತಿಯಾದ ಲಕ್ಷ್ಮೀಯಿಂದ ಸಮೃದ್ಧವಾದ ಸ್ಥಿರಸಂಪತ್ತನ್ನು ಪಡೆಯಲು ,ಸರ್ವ ಭೋಗಭಾಗ್ಯದ ಸುಖವನ್ನು ಪಡೆಯಲು ಆಕೆಯನ್ನು ಆರಾಧಿಸುವ ಪರ್ವದಿನವು ಶ್ರಾವಣಮಾಸದ ಶುದ್ಧ ಪಕ್ಷದ ಎರಡನೇ ಶುಕ್ರವಾರ ಒದಗಿಬರುತ್ತದೆ .ಆದಿನದಂದು ಲಕ್ಷ್ಮೀಯನ್ನು ವರಗಳನ್ನು ಕೊಡುವವಳು ಅಥವಾ ಅನುಗ್ರಹಿಸುವವಳು ಎಂಬ ಅನುಸಂಧಾನದೊಂದಿಗೆ "ವರಮಹಾಲಕ್ಷ್ಮೀ" ಯನ್ನಾಗಿ ಪರಿಕಲ್ಪಸಿಕೊಂಡು ಆರಾಧಿಸುವುದು .ಕಟ್ಟು ,ಕಟ್ಟಳೆ , ನಿಯಮ , ವಿಧಿಗಳಿಗೆ ಬದ್ಧರಾಗಿ ನೋಂಪಿಯಂತೆ , ಧಾರ್ಮಿಕ ಪ್ರತಿಜ್ಞೆಯೊಂದಿಗೆ ಶ್ರದ್ಧೆಯಿಂದ ಪೂಜಿಸುವುದು ಆಗ ನಿರ್ದಿಷ್ಟ ವಿಧಿವಿಧಾನದಂತೆ ನೆರವೇರಿಸುವ ಪೂಜೆ ವ್ರತವಾಗುತ್ತದೆ. ಅದೇ : ವರಮಹಾಲಕ್ಷ್ಮೀವ್ರತ'. ನಾರಾಯಣ - ವಿಷ್ಣು ಸೂರ್ಯನಾದಾಗ ಲಕ್ಷ್ಮೀ ತಾವರೆಯಿಂದ ಜನಿಸಿದಳು . ಪರಶುರಾಮನಾದಾಗ ಈಕೆ ಭೂದೇವಿ . ರಾಮಾವತಾರದಲ್ಲಿ ಸೀತಾದೇವಿ . ಕೃಷ್ಣಾವತಾರದಲ್ಲಿ ರುಕ್ಮಿಣಿ .ಹೀಗೆ ಲಕ್ಷ್ಮೀ ಶ್ರೀಮನ್ನಾರಾಯಣನನ್ನು ಅನುಸರಿಸಿಯೇ ಬರುತ್ತಾಳೆ . ಆದರೆ ಒಮ್ಮೆ ಲಕ್ಷ್ಮೀಯೇ ಕೋಪಿಸಿಕೊಂಡು ವೈಕುಂಠವನ್ನೆ ಬಿಟ್ಟು ಧರೆಗಿಳಿಯುತ್ತಾಳೆ .ಈ ಲಕ್ಷ್ಮೀ ಯನ್ನು ಮರಳಿ ಸ್ವೀಕರಿಸಲು ನಾರಾಯಣ ಗೋವಿಂದನಾಗಿ - ಶ್ರೀನಿವಾಸನಾಗಿ ಆಕೆಯನ್ನು ಹಿಂಬಾಲಿಸುತ್ತಾ ಪದ್ಮಾವತಿಯಾಗಿದ್ದ ಲಕ್ಷ್ಮೀಯನ್ನು ಪಡೆದು ಮತ್ತೆ ಶ್ರೀಪತಿಯಾಗುತ್ತಾನೆ ಅದೇ ಸಪ್ತಗಿರಿ 'ತಿರುಪತಿ'- ಶ್ರೀಪತಿ ,ಭೂವೈಕುಂಠ . ಹಿರಣ್ಯ ಸ್ವರೂಪಳಾದ ಶ್ರೀ ಮಹಾಲಕ್ಷ್ಮೀಯು ಹಿರಣ್ಯವನ್ನು ಸದಾಕೊಡಲಿ ಎಂಬುದು ಲಕ್ಷ್ಮೀ ಸ್ತುತಿ ಎಂದೇ ಪ್ರಸಿದ್ಧವಾದ 'ಶ್ರೀಸೂಕ್ತದ' ಆಶಯ. ಶ್ರೀಸೂಕ್ತವು ನಾರಾಯಣನಿಂದ ಸದಾಕಾಲ ಅನಪಗಾಮಿನಿಯಾದ , ಜೊತೆಯಲ್ಲೇ ಇರುವ ಶ್ರೀ ಮಹಾಲಕ್ಷ್ಮೀಯ ಬೇರೆ ಬೇರೆ ಅವತಾರಗಳನ್ನು ,ರೂಪಗಳನ್ನು ವರ್ಣಿಸುತ್ತದೆ . ಲಕ್ಷ್ಮೀಯು ಚತುರ್ಭಾಹುವುಳ್ಳವಳ್ಳವಳು. ಮೇಲಿನ ಎರಡು ಕೈಗಳಲ್ಲಿ ಕಮಲದ ಹೂಗಳನ್ನು ಧರಿಸಿದವಳು .ಕೆಳಗಿನ ಕೈಗಳಿಂದ 'ವರದ' ಮತ್ತು 'ಅಭಯ' ಮುದ್ರೆಗಳನ್ನು ತೋರಿಸುತ್ತಿರುವವಳು . ಕಮಲ ಸದೃಶ ಮುಖವುಳ್ಳ ಈಕೆ ಕಮಲದಲ್ಲಿ ಕುಳಿತವಳು . ಅಷ್ಟಲಕ್ಷ್ಮೀಯಾಗಿ ಅಷ್ಟೈಶ್ವರ್ಯಗಳನ್ನು ದಯಪಾಲಿಸುವವಳು. ಆದುದರಿಂದ ಜನಪ್ರಿಯಳು , ಅದೇ ತಾನೇ ಬಹುಮಾನ್ಯತೆ. ದೇವರುಗಳೆಷ್ಟು ? ಭಾರತೀಯರಿಗೆ ದೇವರುಗಳು ಎಷ್ಟು ? ನಂಬಿಕೆ ,ಉಪಾಸನೆ ಗೊಂದಲವಿಲ್ಲವೇ ? ಹೀಗೆಂದು ವಿದೇಶಿಯೊಬ್ಬ ಕೇಳುತ್ತಾನೆ. ಹೌದಲ್ಲ....ನಮ್ಮ ದೇವತೆಗಳು , ದೇವರುಗಳನ್ನು ಲೆಕ್ಕ ಹಾಕಿದಾಗ ಅದು ಮೂವತ್ತಮೂರು ಕೋಟಿಗೂ ಹೆಚ್ಚು . ಆದರೆ ನಮಗೆ ಆರಾಧನೆಯಲ್ಲಿ ಗೊಂದಲವೇ ಇಲ್ಲ . ಒಂದೊಂದು ಉದ್ದೇಶಕ್ಕೆ , ಇಷ್ಟಾರ್ಥ ಸಿದ್ಧಿಗೆ ಒಂದೊಂದು ದೇವರು . ಮೊನ್ನೆ ನಾಗನನ್ನು ಪೂಜಿಸಿದೆವು , ಈಗ ಲಕ್ಷ್ಮೀಯನ್ನು ಆರಾಧಿಸುತ್ತೇವೆ , ಮುಂದೆ ಕೃಷ್ಣನನ್ನು ಬಳಿಕ ಗಣಪತಿಯನ್ನು , ನವದುರ್ಗೆಯರನ್ನು , ಬಲೀಂದ್ರನನ್ನು , ಶಿವನನ್ನು ಪೂಜಿಸುತ್ತೇವೆ . ವರ್ಷಪೂರ್ತಿ ಪೂಜೆ , ವ್ರತಗಳು ನಮ್ಮ ಶ್ರಮದ ಬದುಕಿನ ಅವಿಭಾಜ್ಯ ಅಂಗವಾಗಿ ಶತಮಾನಗಳಿಂದ ಸಾಗಿಬಂದಿವೆ . ತುಳುವರಿಗೆ ಮೇಲಿನ ದೇವತೆ - ದೇವರುಗಳೊಂದಿಗೆ ಸಾವಿರಮಾನಿ ದೈವಗಳು , ನೂರೆಂಟು ಗಂಡಗಣಗಳನ್ನು ವಿಧಿಯಂತೆ ಪೂಜಿಸುವ ಸಹಜ ನಂಬಿಕೆ . ಇವುಗಳಲ್ಲದೆ ಕೃಷಿ ಸಂಸ್ಕೃತಿಯೊಂದಿಗೆ ಆಚರಿಸಲ್ಪಡುವ ಆಚರಣೆಗಳು . ಇತ್ತೀಚೆಗೆ ನಮ್ಮದಲ್ಲದ ಹತ್ತಾರು ಆರಾಧನೆಗಳು ಸೇರಿಕೊಂಡಿವೆ .ಆದರೆ ಗೊಂದಲವಿಲ್ಲ , ಮನಃಪೂರ್ವಕವಾದ ಒಪ್ಪಿಗೆಗಳಿವೆ . ಇದು ಈ ದೇಶದ , ತುಳುನಾಡಿನ , ಮಣ್ಣಿನ ಆಸ್ತಿಕತೆ .ಇದು ನಮ್ಮ ಪರಂಪರೆಯಾಗಿ ವಂಶವಾಹಿನಿಯಲ್ಲಿದೆ . ಬಹುತೇಕ ಆರಾಧನೆ , ನಂಬಿಕೆಗಳೆಲ್ಲ ಏನನ್ನೊ ಪ್ರಾಪ್ತಿಸಿಕೊಳ್ಳಲೇ ಆಗಿದೆ. ಸಮೃದ್ಧಿಯನ್ನು ಬಯಸಿಯೇ ಇರುತ್ತದೆ . ಲಕ್ಷ್ಮೀ ಶಬ್ದದ ಅರ್ಥಗಳನ್ನು ಮತ್ತೊಮ್ಮೆ ಮೆಲುಕು ಹಾಕಿಕೊಂಡಾಗ ನಾವು ಬದುಕಿನಲ್ಲಿ ಬಯಸುವುದು ಪ್ರಭೆ ,ಶೋಭೆ , ಕೀರ್ತಿ , ಕಾಂತಿ , ವಿಭೂತಿ , ಮತಿ , ವರ್ಚಸ್ , ತೇಜಸ್ , ಸೌಂದರ್ಯ , ವೃದ್ಧಿ , ಸಿದ್ಧಿ , ಸೌಭಾಗ್ಯಗಳನ್ನೇ ತಾನೆ ? ಇದೇ "ಲಕ್ಷ್ಮೀ ಯ ಆರಾಧನೆ" . ಕೆ ಎಲ್ ಕುಂಡಂತಾಯ
ರೋಟರಿ ಕ್ಲಬ್ ಪಡುಬಿದ್ರಿ ಘಟಕದಿಂದ ವನಮಹೋತ್ಸವ ಕಾರ್ಯಕ್ರಮ
Posted On: 31 Jul 2020, 08:00 AM
ಪಡುಬಿದ್ರಿ : ರೋಟರಿ ಕ್ಲಬ್ ಪಡುಬಿದ್ರಿ ಇನ್ನರ್ ವಿಲ್ ಕ್ಲಬ್ ವತಿಯಿಂದ ಪಣಿಯೂರು ಪೇಜತಕಟ್ಟೆಯ ರೋಟರಿ ಸದಸ್ಯರ ಮನೆಯ ತೋಟದಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಯಿತು, ಈ ಸಂದರ್ಭದಲ್ಲಿ ರೋಟರಿಯ ಅಧ್ಯಕ್ಷರಾದ ಕೇಶವ ಸಿ ಸಾಲ್ಯಾನ್ ನಿಕಟಪೂರ್ವ ಸಹಾಯಕ ಗವರ್ನರ್ ರೋ. ಗಣೇಶ್ ಆಚಾರ್ಯ ಉಚ್ಚಿಲ, ಕಾರ್ಯದರ್ಶಿ ಮೊಹಮ್ಮದ್ ನಿಯಾಜ್, ಇನ್ನರ್ ವಿಲ್ ಅಧ್ಯಕ್ಷೆ ಆಶಾ ಸುಕುಮಾರ್, ಕಾರ್ಯದರ್ಶಿ ನೇಹಾ, ಬಿ. ಎಸ್. ಆಚಾರ್ಯ, ಗಣೇಶ್ ಆಚಾರ್ಯ ಎರ್ಮಾಳ್, ಮತ್ತಿತರರು ಉಪಸ್ಥಿತರಿದ್ದರು, ಸುಧಾಕರ್ ಕೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು
ವಿಶ್ವಹಿಂದು ಪರಿಷದ್ ಭಜರಂಗದಳ ಇನ್ನಂಜೆ 'ವಿಷ್ಣು ವಲ್ಲಭ' ಘಟಕ ಉದ್ಘಾಟನೆ
Posted On: 30 Jul 2020, 10:51 PM
ವಿಶ್ವಹಿಂದು ಪರಿಷದ್ ಭಜರಂಗದಳ ಶ್ರೀ ವಿಷ್ಣು ವಲ್ಲಭ ಘಟಕ ಇನ್ನಂಜೆ ಇದರ ಉದ್ಘಾಟನಾ ಕಾರ್ಯಕ್ರಮ ಇಂದು ಜರುಗಿತು. ನೂತನ ವಿಶ್ವ ಹಿಂದೂ ಪರಿಷತ್ ಶ್ರೀ ವಿಷ್ಣು ವಲ್ಲಭ ಘಟಕದ ಅಧ್ಯಕ್ಷರಾಗಿ ಶ್ರೀ ಕೆಪಿ ಶ್ರೀನಿವಾಸ್ ತಂತ್ರಿಗಳು ಹಾಗೂ ಭಜರಂಗದಳದ ಸಂಚಾಲಕರಾಗಿ ಶ್ರೀ ರಾಜೇಶ್ ಕುಲಾಲ್ ಇವರಿಗೆ ಜವಾಬ್ದಾರಿಯನ್ನು ನೀಡಲಾಯಿತು. ಜೊತೆಯಲ್ಲಿ ಘಟಕಕ್ಕೆ ನೂತನ ಪದಾಧಿಕಾರಿಗಳ ಜವಾಬ್ದಾರಿ ಘೋಷಣೆಯು ನಡೆಯಿತು. ಈ ಸಂಧರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ದಿನೇಶ್ ಮೆಂಡನ್, ಜಿಲ್ಲಾ ಸುರಕ್ಷಾ ಪ್ರಮುಖ್ ಶ್ರೀ ರಾಜೇಶ್ ಕೋಟ್ಯಾನ್, ಕಾಪು ಪ್ರಖಂಡ ಕಾರ್ಯದರ್ಶಿ ಜಯಪ್ರಕಾಶ್ ಪ್ರಭು ಶಿರ್ವ, ಭಜರಂಗದಳ ಕಾಪು ವಲಯ ಪ್ರಮುಖ್ ಶ್ರೀ ಸುಧೀರ್ ಕಾಪು, ಹಿಂದು ಮುಖಂಡರಾದ ಶ್ರೀ ದಿನೇಶ್ ಪಾಂಗಾಳ ಹಿರಿಯರಾದ ರವಿವರ್ಮ ಶೆಟ್ಟಿ ಇನ್ನಂಜೆ, ಶ್ರೀ ನವೀನ್ ಅಮೀನ್ ಶಂಕರಪುರ, ಆನಂದ್ ಇನ್ನಂಜೆ, ಮಾಲಿನಿ ಶೆಟ್ಟಿ ಇನ್ನಂಜೆ, ದಿವೇಶ್ ಶೆಟ್ಟಿ ಇನ್ನಂಜೆ,ಮಧುಸೂದನ್ ಆಚಾರ್ಯ, ಶ್ರೀ ಪ್ರವೀಣ್ ಶೆಟ್ಟಿ , ವಿಎಚ್ ಪಿ ಪಾಂಗಾಳ ಘಟಕದ ಅಧ್ಯಕ್ಷರಾದ ಗಿರೀಶ್ ಕುಮಾರ್, ಮತ್ತು ಶ್ರೀ ವಿಷ್ಣು ವಲ್ಲಭ ಇನ್ನಂಜೆ ಘಟಕದ ಸದಸ್ಯರು ಉಪಸ್ಥಿತರಿದ್ದರು.
ದೈವಾರಾಧಕರ ಒಕ್ಕೂಟದಿಂದ ಕಾರ್ಕಳ ಶಾಸಕರಿಗೆ ಮನವಿ
Posted On: 29 Jul 2020, 05:18 PM
ತುಲುನಾಡ ದೈವಾರದೆಕೆರ್ನ ಸಹಕಾರಿ ಒಕ್ಕೂಟ ಉಡುಪಿ ಜಿಲ್ಲೆ ಹಾಗೂ ಕಾಪು ಘಟಕ ವತಿಯಿಂದ ಕಾರ್ಕಳ ವಲಯ ಶಾಸಕರಾದ ಸುನೀಲ್ ಕುಮಾರ್ ಅವರಿಗೆ ಉಡುಪಿ ಜಿಲ್ಲಾ ಸಮಸ್ತ ದೈವ ಚಾಕ್ರಿ ವರ್ಗದವರ ಮನವಿಯನ್ನು ಕೊಡಲಾಯಿತು. ಮನವಿಯಲ್ಲಿ ದೈವ ಚಾಕ್ರಿ ವರ್ಗದವರಿಗೆ ಸರಕಾರದಿಂದ ಸಿಗಬೇಕಾದ ಸವಲತ್ತು ಹಾಗೂ ಕೋರನ ದ ತುರ್ತು ಸಂದರ್ಭದಲ್ಲಿ 150 ಜನರ ಒಳಗೆ ದೈವಸ್ಥಾನದ ಧಾರ್ಮಿಕ ಕಾರ್ಯಕ್ರಮ, ನೇಮೋತ್ಸವ, ಮಾರಿಪೂಜೆ, ದರ್ಶನ ಸೇವೆ, ಹಾಗೂ ಇತರ ಸೇವೆಗಳಿಗೆ ಸರ್ಕಾರದಿಂದ ಅನುಮತಿ ಕೊಡಬೇಕಾಗಿ ಮನವಿಯನ್ನು ಸಲ್ಲಿಸಿರುತ್ತಾರೆ. ನಂತರ ಶಾಸಕರು ಮನವಿಯನ್ನು ಪರಿಶೀಲಿಸಿ ನಿಮ್ಮ ಸಮಸ್ಯೆಗೆ ಡಿಸಿ ಅವರಿಗೆ ಹಾಗೂ ಮಾನ್ಯ ಮುಖ್ಯಮಂತ್ರಿಯವರೊಂದಿಗೆ ಚರ್ಚೆ ಮಾಡುತ್ತೇನೆ ಹಾಗೂ ಅಗಸ್ಟ್ ತಿಂಗಳಿನಲ್ಲಿ ದೈವಾರಾಧನೆ ಪಾರಂಭ ಮಾಡುವ ಹಾಗೆ ಪ್ರಯತ್ನ ಮಾಡುತ್ತೇನೆ ಎಂದು ಎಲ್ಲಾ ಸದಸ್ಯರಿಗೆ ಧೈರ್ಯ ತುಂಬಿದರು. ಈ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಜಿಲ್ಲಾಧ್ಯಕ್ಷರಾದ ರಾಘವ ಸೇರಿಗಾರ್ಪ್ರ, ಪ್ರಧಾನ ಕಾರ್ಯದರ್ಶಿಯಾದ ವಿನೋದ್ ಶೆಟ್ಟಿ, ಕೋಶಾಧಿಕಾರಿ ಶ್ರೀಧರ್ ಪೂಜಾರಿ, ರವಿ ಶೆಟ್ಟಿ, ಯೋಗೀಶ್ ಪೂಜಾರಿ, ಅನಿಶ್ ಕೋಟ್ಯಾನ್, ದಯೆಶ್ ಕೋಟ್ಯಾನ್ ಕಾರ್ಕಳ, ಘಟಕದ ಅಧ್ಯಕ್ಷರಾದ ಅಶೋಕ್ ಶೆಟ್ಟಿ, ಕಾರ್ಯದರ್ಶಿ ಸದಾನಂದ ಸಾಲಿಯಾನ್, ಕೋಶಧಿಕಾರಿ ಸುಧೀರ್ ಪೂಜಾರಿ, ರಾಜೇಶ್ ಪೂಜಾರಿ, ಸಚಿನ್, ಪವನ್ ಮಡಿವಾಳ ಮತ್ತು ಮಹೇಶ್ ಶೆಟ್ಟಿ ಉಪಸ್ಥಿತರಿದ್ದರು.
ಕಾಪು ತಾಲೂಕಿನ ಕುತ್ಯಾರು ಮೂಲ್ದೊಟ್ಟು ನಾಗಬನದ ಇತಿಹಾಸ
Posted On: 28 Jul 2020, 08:15 PM
ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯಿಂದ ಸುಮಾರು 40ಕಿಲೋಮೀಟರ್ ದೂರದ ಶಿರ್ವ-ಮಂಚಕಲ್ ಸಮೀಪದ ಕುತ್ಯಾರು ಮಾಗಣೆಯ ಮೂಲದ ಬೆಟ್ಟುವಿನಲ್ಲಿದೆ ಈ ನಾಗ ಬನ. ಸಣ್ಣ ತೋಡು ಕಳೆದು ಸಿಗುವ ಗದ್ದೆಗಳ (ಬೈಲು) ಬದಿಯಲ್ಲೇ ಎತ್ತರ ಪ್ರದೇಶದಲ್ಲಿರುವ ಈ ನಾಗ ಬನಕ್ಕೆ ಸಹಸ್ರಾರು ವರ್ಷಗಳ ಇತಿಹಾಸವಿದೆ. ಮೊಗೇರರ ಆರಾಧ್ಯ ದೈವಗಳಾದ ಮುದ್ದ-ಕಳಲ ಹಾಗೂ ತನ್ನಿಮಾನಿಗ ಮಹಾತಾಯಿ ಜನಿಸಿದ ಸ್ಥಳವಾಗಿದೆ,ಯುದ್ಧದಲ್ಲಿ ಹೋರಾಡಿ ಜಯವನ್ನು ತಂದಿತ್ತ ಮೊಗೇರರಿಗೆ ಕುತ್ಯಾರು ಬೈಲ ಸೂಡ ಅರಸರು ಸನ್ಮಾನ ಏರ್ಪಡಿಸಿದ್ದಾಗ, ಬೇಯಿಸಿದ ಅನ್ನದ ಕೊಪ್ಪರಿಗೆಗೆ ಕುತ್ಯಾರು ಬೈಲ ಮಂತ್ರಿಯು ವಿಷದ ಕಾಯಿಯನ್ನು ಬೆರೆಸಿದ ಕಾರಣ ಮೊಗೇರರ ಕುಲವೇ ವಿನಾಶದತ್ತ ಸಾಗಿದಾಗ ಮುದ್ದ, ಕಳಲ, ತನ್ನಿಮಾನಿಗ ಈ ಮೂರು ಪುಟ್ಟ ಮಕ್ಕಳು ಪವಾಡ ಸದೃಶ ಸಾವಿನಿಂದ ಪಾರಾಗಿ ಬದುಕುಳಿಯುತ್ತಾರೆ. ಇವರನ್ನು ಈ ಮೂಲ್ದೊಟ್ಟು ನಾಗಬನದ ಬಳಿ ಅರಸರು ತಂದು ‘ಪೂರ್ವ ಕಾಲದಿಂದಲೇ ಮೊಗೇರರು ನಡೆಸುತ್ತಿದ್ದ ತನುತರ್ಪಣ ವನ್ನು ಈ ಬನದಲ್ಲಿ ಅದೇ ರೀತಿ ಮುಂದುವರೆಸಿಕೊಂಡು ಬರುತ್ತೇನೆಂದು ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಪ್ರಾರ್ಥಿಸಿದರಂತೆ. ಆನಂತರ ಆ ಮಕ್ಕಳು ವೀರರಾಗಿ ಮೆರೆದು, ಧೈವತ್ವವನು ಪಡೆದು ಮೊಗೇರ ಜನಾಂಗದ ಆರಾಧ್ಯ ಧೈವವಾಗಿ ಮೂಲ್ದೊಟ್ಟು ಬನವು ಕಾರಣಿಕ ಶಕ್ತಿ ಕೇಂದ್ರವಾಗಿ,ಮೊಗೇರರ ಸಾಂಸ್ಕೃತಿಕ ಪರಂಪರೆಯಾಗಿ ಉಳಿದುಕೊಂಡಿದೆ. ನಾಗವೃಕ್ಷ,ಜಲಸಂಬಂಧಿ,ಹೀಗೆ ಬನಗಳು ಹುಟ್ಟಿಕೊಂಡಿವೆ. ನಾಗಾರಾಧನೆಯ ಪ್ರಥಮ ಹಂತವೇ ನಾಗಬನ. ಬರೀ ನಾಗನನ್ನು ಪೂಜಿಸುವ ವೈದಿಕೇತರ ಕ್ರಮ ಆದಿಮ ಸ್ಥಿತಿಯಾಗಿದೆ. ಮೂಲ್ದೊಟ್ಟು ಬನದಲ್ಲಿ ಕಾಂಕ್ರೀಟ್ ಕಟ್ಟೆಯಿಲ್ಲ. ಹಗ್ಗದ ಸಹಾಯದಿಂದ ಎತ್ತರದ ಬನ ಹತ್ತುತ್ತಿರುವ ಇಲ್ಲಿ ಕಾಂಕ್ರೀಟ್ ಮೆಟ್ಟಿಲು ನಿರ್ಮಿಸಲು ಯಾರೂ ಒಪ್ಪುವುದಿಲ್ಲ. ಆದಿ ಬನವನ್ನು ಮೂಲ ರೂಪದಲ್ಲಿಯೇ ನೈಸರ್ಗಿಕವಾಗಿ ಉಳಿಸಿಕೊಂಡಿದ್ದಾರೆ. ವೃಷಭ ಮಾಸದ (ಸಾಮಾನ್ಯವಾಗಿ ಮೇ 14ರ ಆನಂತರ ಸಿಗುವ) ಮೊದಲ ಗುರುವಾರದಂದು ಬೆಳಿಗ್ಗೆಯೇ ಮೊಗೇರರೆಲ್ಲರೂ ಬಂದು ಮೂಲದ ಬೆಟ್ಟುಗುತ್ತು ಮನೆಯಲ್ಲಿ ಬಾಯಾರಿಕೆ ಕುಡಿದು ಬನದ ಕೆಳಗಿರುವ ಗದ್ದೆಯಲ್ಲಿ ಸೇರುತ್ತಾರೆ. ಸಾಧಾರಣ 09:30ಕ್ಕೆ ಮೊಗೇರ ಗುರಿಕಾರರೊಂದಿಗೆ ಕೆಲವು ಮೊಗೇರ ಪುರುಷರು ನಾಗಬನದ ಬಳಿಗೆ ಹೋಗಿ ಗದ್ದೆಯ ಬದಿಯಲ್ಲಿ ನಿಂತು “ವರ್ಷದ ಬೇಸ್ಯ ತಿಂಗಳ ತನು ತರ್ಪಣಕ್ಕೆ ಬಂದಿದ್ದೇವೆ. ನಾವು ಮಿಂದು ಬರುವ ಹೊತ್ತಿಗೆ ನಿಜ ನಾಗ ಸಂತತಿಗಳು ಬನದಿಂದ ತೆರಳಿ ತನು ತಂಬಿಲಕ್ಕೆ ಅನುಕೂಲ ಮಾಡಿಕೊಡಬೇಕೆಂದು” ಪ್ರಾರ್ಥಿಸುತ್ತಾರೆ.ಬಳಿಕ ಪುರುಷರೆಲ್ಲರು ಸ್ನಾನಕ್ಕೆ ತೆರಳಿ ಶ್ವೇತ ವಸ್ತ್ರಧಾರಿಗಳಾಗಿ ಬಂದು ಮತ್ತೊಮ್ಮೆ ಪ್ರಾರ್ಥಿಸಿ, ಕೆಲವರು ಬನ ಪ್ರವೇಶಿಸಿ, ಅಲ್ಲಿದ್ದ ತರಗೆಲೆಗಳನ್ನು ಹೊರಹಾಕಿ, ನಾಗನ ಕಲ್ಲುಗಳನ್ನು ನೀರಿನಿಂದ ತೊಳೆಯುತ್ತಾರೆ. ಆ ಹೊತ್ತಿನಲ್ಲಿ ಹರಕೆಯಿದ್ದ ‘ಮೂರಿ’ (ನಾಗನ ಬಿಂಬವುಳ್ಳ ಮಣ್ಣಿನ ಮಡಕೆ) ಯನ್ನು ಹೊತ್ತುಕೊಂಡು ಬಂದು ನಾಗನ ಕಲ್ಲಿನ ಬಳಿ ಇಡುತ್ತಾರೆ. ತದನಂತರ ಇತರರೊಂದಿಗೆ ಮಹಿಳೆಯರೂ, ಮಕ್ಕಳೂ ಬನಕ್ಕೆ ಪ್ರವೇಶಿಸುತ್ತಾರೆ.ನಾಗನ ಕಲ್ಲುಗಳನ್ನು ಸ್ವಚ್ಛಗೊಳಿಸಿದ ಬಳಿಕ ಹಾಲು, ಜೇನು, ಸೀಯಾಳ ದಿಂದ ಮೊಗೇರ ಗುರಿಕ್ಕಾರರು ಅಭಿಷೇಕ ಮಾಡುತ್ತಾರೆ. ಆ ಬಳಿಕ ನಾಗನ ಎಲ್ಲಾ ಕಲ್ಲುಗಳಿಗೂ ಅರಶಿಣ ಹುಡಿಯನ್ನು ಸಿಂಪಡಿಸುತ್ತಾರೆ. ತದನಂತರ ಸಂಪಿಗೆ, ಕೇದಗೆ, ಮಲ್ಲಿಗೆ, ಸೇವಂತಿಗೆ, ಕನಕಾಂಬರ, ಹಿಂಗಾರ ಮೊದಲಾದ ಹೂವುಗಳಿಂದ ಶೃಂಗರಿಸುತ್ತಾರೆ. ಇದಾದ ಮೇಲೆ ತಂಬಿಲ, ಪೂಜೆ ನೆರವೇರಿಸುತ್ತಾರೆ. ಆಮೇಲೆ ಎಲ್ಲರೂ ಸರದಿಯಲ್ಲಿ ನಾಗನನ್ನು ಪ್ರಾರ್ಥಿಸಿ ಮೊಗೇರ ಗುರಿಕ್ಕಾರರಿಂದ ತೀರ್ಥ, ಪ್ರಸಾದ ಸ್ವೀಕರಿಸುತ್ತಾರೆ.ಎಲ್ಲರಿಗಿಂತ ಕೊನೆಗೆ ಗುರಿಕ್ಕಾರನು ಬನದಿಂದ ಇಳಿಯುತ್ತಾರೆ.ಗುರಿಕ್ಕಾರ ಇಳಿದ ನಂತರ ಮತ್ತೆ ಬನ ಹತ್ತಲು ಯಾರಿಗೂ ಅವಕಾಶವಿಲ್ಲ. ಅದು ಇನ್ನು ಮುಂದಿನ ವೃಷಭ ಮಾಸದ 14ರ ಆನಂತರ ಸಿಗುವ ಮೊದಲ ಗುರುವಾರವೆ. ಜೈ ತುಳುನಾಡ್
ಕಾಪು ಆಟಿ ಮಾರಿಪೂಜೆ ಸಾರ್ವಜನಿಕರಿಗೆ ದೇವಳ ಪ್ರವೇಶ ಸಂಪೂರ್ಣ ನಿಷೇದಿಸಲಾಗಿದೆ
Posted On: 28 Jul 2020, 07:53 PM
ಕಾಪು ಶ್ರೀ ದೇವಿಯ ಸನ್ನಿಧಿಯಲ್ಲಿ ವಾಡಿಕೆಯಂತೆ ನಡೆಯುವ ಕಾಲಾವಧಿ ಆಟಿ ಮಾರಿಪೂಜಾ ಜಾತ್ರೆಯನ್ನು . ಕೋರೋನ ನಿಯಂತ್ರಣ ಸರಕಾರದ ಆದೇಶದ ಮೇರೆಗೆ , ಸಾರ್ವಜನಿಕ ಸಭೆ ಸಮಾರಂಭ,ಜಾತ್ರದಿಗಳನ್ನು ಆಚರಿಸಲು ನಿರ್ಭಂಧ, ನಿತ್ಯ ರಾತ್ರಿ ಕರ್ಫ್ಯೂ ಜಾರಿ ಇರುವ ಕಾರಣ..... ತಾ.28/07/20 ಹಾಗೂ 29/07/20 ಜರಗಬೇಕಾಗಿದ್ದ ಆಟಿ ಮಾರೀಪೂಜಾ ಜಾತ್ರೆಯನ್ನು ಸುರಕ್ಷತೆಯ ದೃಷ್ಟಿಯಿಂದ ರದ್ದುಗೊಳಿಸಲಾಗಿದೆ ... ಈ ಕಾರಣ ನಾಳೆ ಹಾಗೂ ನಾಡಿದ್ದು ಶ್ರಿ ದೇವಿಯ ಸನ್ನಿಧಿಯಲ್ಲಿ ಆಟಿ ಪೂಜಾ ಕೈಂಕರ್ಯಗಳು ಸಾಂಕೇತಿಕವಾಗಿ ಸರಳ ರೀತಿಯಲ್ಲಿ ಕೇವಲ ದೇವಳದ ಅರ್ಚಕರು ಹಾಗೂ ಆಡಳಿತ ಮಂಡಳಿ ಸದಸ್ಯರ ಉಪಸ್ಥಿತಿಯಲ್ಲಿ ನೆರವೇರಿಸಲಾಗುವುದು..... ಈ ಸಂದರ್ಭ, ಭಕ್ತಾದಿಗಳಿಗೆ ಹಾಗೂ ಸಾರ್ವಜನಿಕರಿಗೆ ದೇವಳ ಪ್ರವೇಶ, ದೇವರ ಭೇಟಿ ಇತ್ಯಾದಿಗಳಿಗೆ ಸಂಪೂರ್ಣ ನಿಷೇಧ ನಿಯಮಾವಳಿ ರೂಪಿಸಲಾಗಿದೆ... ಈ ಪ್ರಯುಕ್ತ ಸರ್ವ ಭಕ್ತ ಭಾಂಧವರ ಸಹಕಾರವನ್ನು ಕೋರಲಾಗಿದೆ. ಸರ್ವ ಭಕ್ತರು ನಾಳೆ, ನಾಡಿದ್ದು ತಾವು ತಮ್ಮ ತಮ್ಮ ಮನೆಯಲ್ಲೇ ಶ್ರೀ ದೇವಿಯಲ್ಲಿ ಪ್ರಾರ್ಥನೆ ಸಲ್ಲಿಸಿ, ತಮ್ಮ ಹರಕೆ, ಕಾಣಿಕೆ , ಸೇವೆ ಇತ್ಯಾದಿಗಳನ್ನು ಮುಂದಿನ ದಿನಗಳಲ್ಲಿ ಅಥವಾ ಮುಂಬರುವ ಜಾರ್ಧೆ ಮಾರಿಪೂಜಾ ಜಾತ್ರೆ ಸಂದರ್ಭದಲ್ಲಿ ಸಮರ್ಪಿಸಲು ವಿನಂತಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9886620944 9844559928 ಆಡಳಿತ ಮಂಡಳಿ ಶ್ರೀ ಹಳೇ ಮಾರಿಯಮ್ಮ ದೇವಸ್ಥಾನ,ಕಾಪು
ಪೆರ್ಣಂಕಿಲ ರಾಜೀವಿಯವರನ್ನು ಸಮ್ಮಾನಿಸಿದ ಮಲಬಾರ್ ಗೋಲ್ಡ್ & ಡೈಮಂಡ್ಸ್
Posted On: 28 Jul 2020, 04:37 PM
ಉಡುಪಿ :- ಆಶಾ ಕಾಯ೯ಕತೆ೯ ರಿಕ್ಷಾ ಚಾಲಕಿಯಾಗಿ ನೂರಾರು ಗಭಿ೯ಣಿ ಮಹಿಳೆಯರನ್ನು ರಾತ್ರಿ ಹಗಲೆನ್ನದೆ ಆಸ್ಪತ್ರೆಗೆ ಸಾಗಿಸಲು ನೆರವಾಗುತ್ತಿರುವ ಪೆಣ೯೦ಕಿಲ ರಾಜೀವಿಯವರನ್ನು ಅವರ ಸ್ವಗ್ರಹದಲ್ಲಿ ಮಲಬಾರ್ ಗೋಲ್ಡ್ ಡೈಮಂಡ್ಸ್ ವತಿಯಿಂದ ಇಂದು ವಿಶೇಷ ರೀತಿಯಲ್ಲಿ ಗೌರವಿಸಲಾಯಿತು. ಇವರ ಸೇವಾ ಸಾಧನೆಗೆ ಉಪ ರಾಷ್ಟ್ರಪತಿಯವರು ಅಭಿನಂದನೆ ಸಲ್ಲಿಸಿರುತ್ತಾರೆ. ಈ ಸಂದಭ೯ದಲ್ಲಿ ಮಲಬಾರ್ ಗೋಲ್ಡ್ ಸ್ಟೋರ್ ಹೆಡ್ ಹಫೀಜ್ ರೆಹಮಾನ್, ಸಾವ೯ಜನಿಕ ಸಂಪಕಾ೯ಧಿಕಾರಿ ರಾಘವೇಂದ್ರ ನಾಯಕ್, ಸ್ವಚ್ಚ ಭಾರತ್ ಫ್ರೆಂಡ್ಸ್ ಸಂಯೋಜಕ ರಾಘವೇಂದ್ರ ಪ್ರಭು,ಕವಾ೯ಲು ಮುಂತಾದವರಿದ್ದರು.
ಹೆಜಮಾಡಿ : ಸುಳ್ಳು ಸುದ್ದಿಯ ವಿಡಿಯೋ ವೈರಲ್
Posted On: 28 Jul 2020, 12:49 PM
ಸೋಮವಾರದಿಂದ ಉಡುಪಿ ಜಿಲ್ಲೆಯ ಹೆಜಮಾಡಿ ಕಡಲ ಕಿನಾರೆಯಲ್ಲಿ ಸಮುದ್ರದ ಅಲೆಗಳು ಉಕ್ಕೇರಿ ಜನವಸತಿಯತ್ತ ಹರಿಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಎಲ್ಲೆಡೆ ಚರ್ಚೆಗೂ ಕಾರಣವಾಗಿತ್ತು. ಇದರಿಂದ ದೂರದ ಊರಿನಲ್ಲಿದ್ದ ಅಲ್ಲಿನ ನಿವಾಸಿಗಳು ಭಯಭೀತರಾಗಿದ್ದರು. ಆದರೆ ಇದು ಎಲ್ಲಿಯೋ ನಡೆದ ಘಟನೆಯನ್ನು ಹೆಜಮಾಡಿಯಲ್ಲಿ ಎಂದು ಬಿಂಬಿಸಲಾಗಿದ್ದು. ಇಂತಹ ಘಟನೆ ನಡೆದೇ ಇಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಇಂತಹ ವಿಡಿಯೋ ಹರಿಬಿಡುವ ದುಷ್ಕರ್ಮಿಗಳ ವಿರುದ್ಧ ಕ್ರಮಕೈಗೊಳ್ಳಬೇಕಾಗಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ರೋಟರಿ ಕಲ್ಯಾಣಪುರ ಹಾಗೂ ಸ್ವಚ್ಛಮ್ ಸರ್ವಿಸಸ್ ವತಿಯಿಂದ ಮಲ್ಪೆ ಪೊಲೀಸ್ ಠಾಣೆ ಸ್ಯಾನಿಟೈಜ್
Posted On: 28 Jul 2020, 12:44 PM
ರೋಟರಿ ಕಲ್ಯಾಣಪುರ ಹಾಗೂ ಸ್ವಚ್ಛಮ್ ಸರ್ವಿಸಸ್ ಉಡುಪಿ ವತಿಯಿಂದ ಜಂಟಿ ಯಾಗಿ ಮಲ್ಪೆ ಆರಕ್ಷಕರ ಠಾಣೆ ಯನ್ನು ಸಂಪೂರ್ಣ ಸ್ಯಾನಿಟೈಜ್ ಮಾಡಲಾಯಿತು. ಉದ್ಘಾಟನೆ ಯನ್ನು ಠಾಣಾಧಿಕಾರಿ ತಿಮ್ಮೇಶ್ ಮಾಡಿದರು. ರೋಟರಿ ಅಧ್ಯಕ್ಷ ರಾದ ರೋ. ಡೆಸ್ಮಂಡ್ ವಾಜ್ ಮಾಜಿ ಅಧ್ಯಕ್ಷ ರಾದ ರೋ. ರಾಮ ಪೂಜಾರಿ ಸ್ವಚಮ್ ಸರ್ವಿಸಸ್ ನ ಮಾಲಕರಾದ ರೋ ತಾರಾನಾಥ್ ಪೂಜಾರಿ ಮಾಜಿ ಸಹಾಯಕ ಗವರ್ನರ್ ರೋ.ಎಮ್ ಮಹೇಶ್ ಕುಮಾರ್. ಸುನಿಲ್ ಪೂಜಾರಿ ಹಾಗೂ ಪೊಲೀಸ್ ಸಿಬ್ಬಂದಿ ಗಳು ಉಪಸ್ಥಿತರಿದ್ದರು..
