Updated News From Kaup

ಈ ಗ್ರಾಮೀಣ ಕನ್ನಡ ಶಾಲೆಯನ್ನು ಸಕಾ೯ರ ಉಳಿಸಿ ಬೆಳೆಸಲಿ

Thumbnail
Posted On: 14 Oct 2020, 05:39 PM

ಹಿರಿಯಡ್ಕದಿಂದ 9 ಕಿ.ಮೀ ದೂರವಿರುವ ಪಂಚನಬೆಟ್ಟು ವಿದ್ಯಾವಧ೯ಕ ಪ್ರೌಢ ಶಾಲೆ ಕಳೆದ 30 ವಷ೯ಗಳಿಂದ ನಿರಂತರವಾಗಿ ಸಾವಿರಾರು ಮಂದಿ ವಿದ್ಯಾಥಿ೯ಗಳಿಗೆ ವಿದ್ಯಾದಾನ ನೀಡಿದೆ. ಈ ಶಾಲೆಯಲ್ಲಿ ಪಾಠದೊಂದಿಗೆ ಪಠ್ಯತೆರ ಚಟುವಟಿಕೆಗಳಿಗೂ ಕೂಡ ಹೆಚ್ಚಿನ ಆದ್ಯತೆ ನೀಡಲಾಗಿದೆ.ವಿಶಾಲವಾದ ಆಟದ ಮೈದಾನ, ಮಕ್ಕಳಿಗೆ ಎಲ್ಲಾ ಕ್ರೀಡಾ ಚಟುವಟಿಕೆ ನಡೆಸಲು ಕ್ರೀಡಾ ಸಲಕರಣೆ, ರಂಗಭೂಮಿ ಚಟುವಟಿಕೆಗೆ ರಂಗ ತರಬೇತಿ ವೇದಿಕೆ, ಬೇರೆ ಬೆಲ್ಲೆಯಿಂದ ಬರುವ ವಿದ್ಯಾಥಿ೯ಗಳಿಗೆ ಅನುಕೂಲವಾಗಲು ವಿದ್ಯಾಥಿ೯ ವಸತಿ ನಿಲಯ ಸೇರಿದಂತೆ ಬಿಸಿಯೂಟ ಯೋಜನೆಯು ಜಾರಿಯಲ್ಲಿದೆ ಅನುದಾನಿತ ಶಾಲೆಯಾದರೂ ಕೂಡ ಯಾವುದೇ ಖಾಸಗಿ ಶಾಲೆಗೆ ಸರಿಸಮಾನವಾದ ಎಲ್ಲಾ ರೀತಿಯ ಸೌಕಯ೯ ಈ ಶಾಲೆಯಲ್ಲಿರುವುದು ಅಭಿನಂದನೀಯ. ಉತ್ತಮ ಫಲಿತಾಂಶ ಕೂಡ ಈ ಶಾಲೆಯ ಕೀತಿ೯ಗೆ ಮತ್ತೊಂದು ಗರಿಯಾಗಿದೆ. ಆದರೆ ಕಳೆದ 2 ವಷ೯ಗಳಿಂದ ವಿದ್ಯಾಥಿ೯ಗಳ ಸಂಖ್ಯೆ ಕಡಿಮೆಯ ಕಾರಣ ನೀಡಿ ಶಿಕ್ಷಣ ಇಲಾಖೆಯು ಶಾಲೆಯನ್ನು ಬಂದ್ ಮಾಡುವ ಕುರಿತು ನೋಟಿಸ್ ನೀಡಿದೆ. ಕಳೆದ ವಷ೯ ಗ್ರಾಮಸ್ಥರ ಒತ್ತಾಯದ ಕಾರಣ ಇಲಾಖೆಯು ಈ ನಿಧಾ೯ರ ಕೈಬಿಟ್ಟಿತ್ತು ಆದರೆ ಈ ವಷ೯ ವಿಧ್ಯಾಥಿ೯ಗಳ ದಾಖಲಾತಿಗೆ ಅನುಮತಿ ನೀಡಿಲ್ಲ.ಆಡಳಿತ ಮಂಡಳಿಯ ಅಧ್ಯಕ್ಷ ನರಸಿಂಹ ಎ ಸೇರಿದಂತೆ ಸದಸ್ಯರು ಶಾಲೆಯ ಅಗತ್ಯತೆಯ ಬಗ್ಗೆ ಇಲಾಖೆಯ ಅಧಿಕಾರಿಗಳಿಗೆ ಮನವರಿಕೆ ಮಾಡಿದರೂ ಪ್ರಯೋಜನವಾಗಿಲ್ಲ. ಶಾಲೆಯನ್ನು ಉಳಿಸಲು ವಿದ್ಯಾಥಿ೯ ಯ ಹೋರಾಟ: ಶಾಲೆಯನ್ನು ಮುಚ್ಚುವ ವಿರುದ್ಧ ಶಾಲೆಯ ವಿದ್ಯಾಥಿ೯ನಿ ವಷಿ೯ತಾ ಆರ್ ರವರು ಪ್ರಧಾನಿಯವರಿಗೆ ಪತ್ರ ಬರೆದು ಶಾಲೆಯನ್ನು ಉಳಿಸುವಂತೆ ಆಗ್ರಹಿಸಿದ್ದರು. ಈ ಬಗ್ಗೆ ಸ್ವತಃ ಪ್ರಧಾನ ಮಂತ್ರಿ ಕಾಯಾ೯ಲಯದಿಂದ ಪತ್ರ ಬಂದಿದ್ದು ಅಗತ್ಯ ಕ್ರಮಕ್ಕಾಗಿ ಸಕಾ೯ರದ ಮುಖ್ಯ ಕಾಯ೯ದಶಿ೯ಗೆ ಆದೇಶ ನೀಡಿತ್ತು.ಈ ವಿದ್ಯಾಥಿ೯ಯ ನಡೆಗೆ ಇದೀಗ ವ್ಯಾಪಕ ಮೆಚ್ಚುಗೆ ಪಾತ್ರವಾಗಿದೆ. ಈ ಶಾಲೆ ಮುಚ್ಚಿದರೆ ಇಲ್ಲಿನ ವಿದ್ಯಾಥಿ೯ಗಳಿಗೆ ತೊಂದರೆಯಾಗುತ್ತದೆ. ಸುಮಾರು 8 ಕಿ.ಮೀ ದೂರದ ಇತರ ಶಾಲೆಗೆ ತೆರಳಬೇಕಾಗುತ್ತದೆ. ಸಕಾ೯ರ ಒಂದು ಕಡೆಯಲ್ಲಿ ಕನ್ನಡ ಶಾಲೆಯನ್ನು ಉಳಿಸುವ ಬಗ್ಗೆ ಮಾತನಾಡುತ್ತದೆ. ಆದರೆ ಮತ್ತೊಂದೆಡೆ ಈ ಹಳ್ಳಿಯ ಕನ್ನಡ ಶಾಲೆಯನ್ನು ಮುಚ್ಚಲು ಹೊರಟಿರುವುದು ದುರಂತದ ವಿಷಯ. ಈಗಾಲಾದರೂ ಸಕಾ೯ರ ಈ ಶಾಲೆಯನ್ನು ಉಳಿಸಿ ಶಿಕ್ಷಕರನ್ನು ನೇಮಿಸಿ ಶಾಲೆಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕಾಗಿದೆ. ಶಾಲೆಯು ಉಳಿಯಲಿ ಮತ್ತಷ್ಟ್ರ ಮಕ್ಕಳಿಗೆ ವಿದ್ಯೆ ನೀಡಲಿ. ✍️ ರಾಘವೇಂದ್ರ ಪ್ರಭು,ಕವಾ೯ಲು ಶಿಕ್ಷಣ ಪ್ರೇಮಿ

ಇತ್ತೀಚೆಗೆ ನಿಧನರಾದ ದೈವಾರಾಧಕ ಮುನಿಯಾಲು ಮುಟ್ಲುಪಾಡಿಯ ಅರುಣ್ ಪೂಜಾರಿ ಕುಟುಂಬಕ್ಕೆ ಆರ್ಥಿಕ ನೆರವು

Thumbnail
Posted On: 14 Oct 2020, 05:01 PM

ಅಖಿಲ ಭಾರತ ತುಳುನಾಡ ದೈವಾರಾಧಕರ ಒಕ್ಕೂಟ ಉಡುಪಿ ಜಿಲ್ಲೆ ಹೆಬ್ರಿ ಘಟಕದ ವತಿಯಿಂದ ಇತ್ತೀಚೆಗೆ ನಿಧನರಾದ ದೈವದ ಸೇವೆ ಮಾಡುತ್ತಿದ್ದ ಮುನಿಯಾಲು ಮುಟ್ಲುಪಾಡಿಯ ಅರುಣ್ ಪೂಜಾರಿ ಕುಟುಂಬಕ್ಕೆ ಆರ್ಥಿಕ ನೆರವು ನೀಡಲಾಯಿತು. ಈ ಸಂದರ್ಭದಲ್ಲಿ ಅಖಿಲ ಭಾರತ ತುಳುನಾಡ ದೈವಾರಾಧಕರ ಒಕ್ಕೂಟದ ಉಡುಪಿ ಜಿಲ್ಲಾಧ್ಯಕ್ಷ ರವಿ ಶೆಟ್ಟಿ ಮಣಿಪಾಲ, ಪ್ರಧಾನ ಕಾರ್ಯದರ್ಶಿ ವಿನೋದ್ ಶೆಟ್ಟಿ, ಕೋಶಾಧಿಕಾರಿ ಶ್ರೀಧರ ಪೂಜಾರಿ ಬೈಕಾಡಿ, ಉಪಾಧ್ಯಕ್ಷ ಅನೀಶ್ ಕೋಟ್ಯಾನ್, ದಯೇಶ್ ಕೋಟ್ಯಾನ್, ಹೆಬ್ರಿ ಘಟಕದ ಅಧ್ಯಕ್ಷ ಸುಕುಮಾರ್ ಪೂಜಾರಿ ಮುದ್ರಾಡಿ, ಉಪಾಧ್ಯಕ್ಷ ವಿಠ್ಠಲ ಪೂಜಾರಿ ಹೆಬ್ರಿ ಬೀಡು, ಕಾರ್ಯದರ್ಶಿ ಅಣ್ಣಿ ಪಾಣಾರ, ಕೋಶಾಧಿಕಾರಿ ಅರುಣ್ ಪಾತ್ರಿ ಬೆಪ್ಡೆ, ರಂಗ ಪಾಣಾರ, ನರಸಿಂಹ ಮುಂಡಾಡಿಜಡ್ಡು, ಸದಸ್ಯರಾದ ಮಾಧವ ಪಾಣಾರ ಶಿವಪುರ, ಸಂತೋಷ್ ಪೂಜಾರಿ ಮುದ್ರಾಡಿ, ಮುದ್ದು ಪೂಜಾರಿ ಮುದ್ರಾಡಿ, ಪ್ರವೀಣ ಪಾಣಾರ ಶಿವಪುರ, ಗುಂಡು ಪರವ ಚೇರ್ಕಾಡಿ, ಸಂತೋಷ ಆರ್.ಡಿ, ಕೊರಗ ಪೂಜಾರಿ ಮುಟ್ಲುಪಾಡಿ, ರಾಮ ಪೂಜಾರಿ ಮುಟ್ಲುಪಾಡಿ ಉಪಸ್ಥಿತರಿದ್ದರು.

ಬ್ಲೂ ಫ್ಲಾಗ್ ಮಾನ್ಯತೆ ಉಡುಪಿ ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೊಸ ಕೊಡುಗೆಯಾಗಲಿದೆ

Thumbnail
Posted On: 12 Oct 2020, 10:38 PM

ಉಡುಪಿಯ ಪಡುಬಿದ್ರೆಯ ಕಡಲ ತೀರ(ಬೀಚ್) ಪ್ರತಿಷ್ಠಿತ ಅಂತರಾಷ್ಟ್ರೀಯ ಬ್ಲೂ ಫ್ಲಾಗ್ ಮಾನ್ಯತೆ ಪಡೆದಿದೆ.ಈ ಮೂಲಕ ಉಡುಪಿ ಜಿಲ್ಲೆ ಅಂತರಾಷ್ಟ್ರ ಮಟ್ಟದಲ್ಲಿ ಮತ್ತೊಮ್ಮೆ ಗುರುತಿಸಿಕೊಳ್ಳಲು ಸಾಧ್ಯವಾಗಿದೆ. ಕಾಸರಕೋಡಿನಲ್ಲಿರುವ ಇಕೋ ಬೀಚ್ ಹಾಗೂ ಪಡುಬಿದ್ರಿಯ ಬೀಚ್ ಗಳು ತನ್ನ ಮೊದಲ ಪ್ರಯತ್ನದಲ್ಲೇ ಅಂತರಾಷ್ಟ್ರೀಯ ಮಾನ್ಯತೆ ಪಡೆಯುವಲ್ಲಿ ಯಶಸ್ವಿಯಾಗಿದೆ.ಇದು ಜಿಲ್ಲೆಯ ಘನತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದರೆ ತಪ್ಪಾಗಲಾರದು. ಈ ಎರಡೂ ಬೀಚ್ ಗಳಲ್ಲಿ ಪ್ರವಾಸಿಗರು ಕುಳಿತುಕೊಳ್ಳುವ ಆಸನಗಳಿಂಡ ಹಿಡಿದು ಕುಡಿಯುವ ನೀರು, ಮಕ್ಕಳ ಆಟಿಕೆಗಳು, ಜೀವರಕ್ಷಕ ಸಿಬ್ಬಂದಿ ಹಾಗೂ ಮುಖ್ಯವಾಗಿ ಕಡಲತೀರದ ಸ್ವಚ್ಛತೆ ಸೇರಿ ಎಲ್ಲವೂ ಅಚ್ಚುಕಟ್ಟಾಗಿದೆ. ದೇಶದಲ್ಲಿ ಒಟ್ಟಾರೆ ಹನ್ನೆರಡು ಕಡಲ ತೀರಗಳು ಬ್ಲೂ ಫ್ಲಾಗ್ ಮಾನ್ಯತೆ ಪಡೆದಿದ್ದು ಕರ್ನಾಟಕ ಹೊರತುಪಡಿಸಿ ಕೇರಳದ ಕಪ್ಪಾಡ್, ಆಂಧ್ರಪ್ರದೇಶದ ಋಷಿಕೊಂಡ, ಒಡಿಶಾದ ಗೋಲ್ಡನ್, ಮತ್ತು ಅಂಡಮಾನ್‌ ದ್ವೀಪದ ರಾಧಾನಗರ, ಗುಜರಾತ್‌ನ ಶಿವರಾಜಪುರ, ಡಿಯುನ ಘೋಗ್ಲಾ,ಬೀಚ್ ಗಳಿಗೆ ಈ ಗೌರವ ದೊರಕಿದೆ. ಬ್ಲೂ ಫ್ಲಾಗ್ ಬಗ್ಗೆ: ಕಡಲ ತೀರ (ಬೀಚ್) ಗಳಲ್ಲಿನ ಸ್ವಚ್ಚತೆ, ಪರಿಸರ ಸ್ನೇಹಿ ವಾತಾವರಣ ಮತ್ತಿತರೆ ಅಂಶಗಳನ್ನು ಪರಿಗಣಿಸಿ ಪರಿಸರ ಶಿಕ್ಷಣಕ್ಕಾಗಿ ವೇದಿಕೆ(ಎಫ್.ಇ.ಇ) ಈ ಬ್ಲೂ ಫ್ಲಾಗ್ ಪ್ರಮಾಣ ಪತ್ರ ನೀಡುತ್ತದೆ. ಇಂತಹಾ ಪ್ರಮಾಣಪತ್ರ ಪಡೆದ ಬೀಚ್ ಗಳಲ್ಲಿ ನೀಲಿ ಬಣ್ಣದ ಧ್ವಜವನ್ನು ಆರೋಹಣ ಮಾಡಲಾಗುವುದು. ವಿದೇಶಗಳಲ್ಲಿ ಇಂತಹಾ ಪ್ರಮಾಣಪತ್ರ ಪಡೆದ ಬೀಚ್ ಗಳಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಹಾಗಾಗಿ ಭಾರತೀಯ ಪ್ರವಾಸೋದ್ಯಮ ಅಭಿವೃದ್ದಿ ದೃಷ್ಟಿಯಿಂದ ಇಂತಹಾ ಪ್ರಮಾಣಪತ್ರ ಪಡೆಯುವುದು ಅತ್ಯಂತ ಪ್ರಮುಖವಾಗಿದೆ. ಉಡುಪಿ ಜಿಲ್ಲೆಗೆ ಪ್ರವಾಸೋದ್ಯಮ ಕ್ಷೇತ್ರಕ್ಕೆ ಕೊಡುಗೆ: ಇದರಿಂದ ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರ ಬಲಗೊಳ್ಳುವಲ್ಲಿ ಸಂಶಯವಿಲ್ಲ. ಅಂತರಾಷ್ಟ್ರೀಯ ಮಾನ್ಯತೆಯಿಂದ ದೇಶ ವಿದೇಶದ ಜನರು ಇಲ್ಲಿಗೆ ಬರುತ್ತಾರೆ. ಹೀಗಾಗಿ ಅಭಿವೃದ್ಧಿಯ ನಿಟ್ಟಿನಲ್ಲಿ ಹೊಸ ಭಾಷ್ಯ ಬರೆಯಲು ಸಾಧ್ಯವಾಗಬಹುದಾಗಿದೆ. ಮುಂದಿನ ದಿನಗಳಲ್ಲಿ ಕಾಪು, ಮಲ್ಪೆ, ಹೂಡೆ ಬೀಚ್ ಗಳು ಮಾನ್ಯತೆ ಪಡೆಯಲು ಸಹಾಯವಾಗಬಹುದು. ಜನತೆಯು ಈ ಬೀಚ್ ಗಳ ಸ್ವಚ್ಚತೆಯ ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗಿದೆ.ಕೇವಲ ಸಕಾ೯ರವನ್ನು ಕಾಯದೆ ಬೀಚ್ ಗಳ ಸ್ವಚ್ಚತೆ ಮಾಡಿದರೆ ಈ ಮಾನ್ಯತೆಗೆ ಮತ್ತಷ್ಟು ಮೆರುಗು ಬರುತ್ತದೆ. ✍️ ರಾಘವೇಂದ್ರ ಪ್ರಭು,ಕವಾ೯ಲು ಯುವ ಲೇಖಕ

ಉಡುಪಿಯಲ್ಲಿ ಶಾಲೆಗೆರಡು ಗಿಡ ಅಭಿಯಾನ ಕಾಯ೯ಕ್ರಮ

Thumbnail
Posted On: 12 Oct 2020, 01:41 PM

ಉಡುಪಿ :- ನವ್ಯ ಚೇತನ ಶಿಕ್ಷಣ ಸಂಶೋಧನೆ, ಕಲ್ಯಾಣ ಟ್ರಸ್ಟ್, ಮಲಬಾರ್ ಗೋಲ್ಡ್ & ಡೈಮoಡ್ಸ್, ಉಡುಪಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ಕ್ರಿಶ್ಚಿಯನ್ ಪಿ.ಯು ಕಾಲೇಜು, ಸಹಯೋಗದಿಂದ ನವ್ಯ ಚೇತನ ಶಿಕ್ಷಣ ಸಂಶೋಧನೆ, ಕಲ್ಯಾಣ ಟ್ರಸ್ಟ್ ನ ಶಾಲೆಗೆರಡು ಗಿಡ ಅಭಿಯಾನದ ಅಂಗವಾಗಿ ಕಾಲೇಜಿನ ಆವರಣದಲ್ಲಿ ವನಮಹೋತ್ಸವ ಕಾಯ೯ಕ್ರಮ ಅ.11 ರಂದು ನಡೆಯಿತು. ಕಾಯ೯ಕ್ರಮವನ್ನು ಉದ್ದೇಶಿಸಿ ಮಾತನಾಡಿದ , ಉಡುಪಿ ಕಾನೂನು ಸೇವಾ ಪ್ರಾಧಿಕಾರ ಮತ್ತು ಸಿವಿಲ್ ನ್ಯಾಯಾಧೀಶೆ ಕಾವೇರಿ ಗಿಡ ನೆಟ್ಟು ಶುಭ ಹಾರೈಸಿದರು. ಟ್ರಸ್ಟಿನ ಅಧ್ಯಕ್ಷರಾದ ಡಾ. ಶಿವಾನಂದ ನಾಯಕ್ ಅವರು ಮಾತನಾಡಿ ಗಿಡ ನೆಟ್ಟು ಪೋಷಿಸುವುದು ನಮ್ಮ ಹವ್ಯಾಸವಾಗಬೇಕು. ಪರಿಸರ ಮಾಲಿನ್ಯ ತಡೆಯಲು ಈ ಕೆಲಸ ನಿರಂತರವಾಗಿ ಮಾಡಬೇಕು ಎಂದರು. ಈ ಸಂದಭ೯ದಲ್ಲಿ ಮಲಬಾರ್ ಗೋಲ್ಡ್ ನ ಪ್ರಬಂಧಕ ರಾಘವೇಂದ್ರ ನಾಯಕ್, ತನ್ಜಿಮ್, ಕಾಲೇಜಿನ ನಾಗರಾಜ್ ಗುಳ್ಳಾಡಿ, ಸ್ವಚ್ಚ ಭಾರತ್ ಫ್ರೆಂಡ್ಸ್ ಸಂಯೋಜಕ ರಾಘವೇಂದ್ರ ಪ್ರಭು, ಕವಾ೯ಲು ,ರಫೀಕ್ ಖಾನ್ ಕಾಲೇಜಿನ ಸಿಬ್ಬoದಿಗಳು ಉಪಸ್ಥಿತರಿದ್ದರು.

ಬೆಳ್ಮಣ್ ಜೇಸಿಐ ಸಂಸ್ಥೆಗೆ ನೂತನ ಅಧ್ಯಕ್ಷ, ಕಾರ್ಯದರ್ಶಿ ಆಯ್ಕೆ

Thumbnail
Posted On: 12 Oct 2020, 12:02 PM

ಬೆಳ್ಮಣ್ಣು ಜೇಸಿಐನ 2021ನೇ ಸಾಲಿನ ಅಧ್ಯಕ್ಷರಾಗಿ ಜೇಸಿ. ಕೃಷ್ಣ ಪವರ್ ಮತ್ತು ಕಾರ್ಯದರ್ಶಿಯಾಗಿ ಜೇಸಿ. ಸತೀಶ್ ಪೂಜಾರಿ ಅಬ್ಬನಡ್ಕ ಆಯ್ಕೆಯಾಗಿರುತ್ತಾರೆ.

ಕಾಪು ತಾಲೂಕಿನ ಪಡುಬಿದ್ರಿ ಬೀಚ್ ಗೆ ಅಂತರಾಷ್ಟ್ರೀಯ ಬ್ಲೂ ಫ್ಲ್ಯಾಗ್ ಮಾನ್ಯತೆ

Thumbnail
Posted On: 12 Oct 2020, 11:52 AM

ಪಡುಬಿದ್ರಿಯ ಕಾಮಿನಿ ನದಿಯು ಸಮುದ್ರ ಸೇರುವ ಕಡಲ ತೀರದ ಪ್ರದೇಶವು ಬ್ಲೂ ಫ್ಲ್ಯಾಗ್ ಪ್ರಮಾಣ ಪತ್ರದೊಂದಿಗೆ ಅಂತರಾಷ್ಟ್ರೀಯ ಮಾನ್ಯತೆಯನ್ನು ಪಡೆದುಕೊಂಡಿದೆ. ಭಾರತವು ಮೊದಲ ಪ್ರಯತ್ನದಲ್ಲಿಯೇ 8 ಬೀಚ್ ಗಳಿಗೆ ಅಂತರಾಷ್ಟ್ರೀಯ ಬ್ಲೂ ಫ್ಲ್ಯಾಗ್ ಪ್ರಮಾಣಪತ್ರ ಪಡೆದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅದರಲ್ಲಿ ಪಡುಬಿದ್ರಿ ಬೀಚ್ ಕೂಡ ಸೇರಿದೆ. ಮೂವತ್ತಮೂರು ಮಾನದಂಡಗಳ ಆಧಾರದ ಮೇಲೆ ಬ್ಲೂ ಫ್ಲ್ಯಾಗ್ ಅಂತರಾಷ್ಟ್ರೀಯ ಮಟ್ಟದ ಮಾನ್ಯತೆಯನ್ನು ಡೆನ್ಮಾರ್ಕ್ ನ ಫೌಂಡೇಶನ್ ಫಾರ್ ಎನ್ವಿರಾನ್ಮೆಂಟ್ ಎಜುಕೇಶನ್ ಸಂಸ್ಥೆ ನೀಡಿದೆ. ಆ ಮೂಲಕ ವಿಶ್ವಭೂಪಟದಲ್ಲಿ ಪಡುಬಿದ್ರಿ ಕಡಲ ಕಿನಾರೆಯು ರಾರಾಜಿಸಲಿದೆ.

ಮಾನವೀಯತೆಗೆ ಮತ್ತೆ ಸ್ಪಂದಿಸಿದ ಪಡುಬಿದ್ರಿ ಭಗವತಿ ಗ್ರೂಫ್

Thumbnail
Posted On: 12 Oct 2020, 09:17 AM

ಪಡುಬಿದ್ರಿ ಆ 11 :- ಉಡುಪಿ ಜಿಲ್ಲೆಯ ಉಚ್ಚಿಲ ಗ್ರಾಮದ ಮಹಾಲಕ್ಷ್ಮಿ ನಗರದ ಹಿರಿಯರಾದ ಶ್ರೀಮತಿ ಇಂದಿರಾ ಪೂಜಾರಿಯವರ ವೈದ್ಯಕೀಯ ಚಿಕಿತ್ಸೆಗಾಗಿ ಪಡುಬಿದ್ರಿ ಭಗವತಿ ಗ್ರೂಫ್ ಕೈಜೋಡಿಸಿದ್ದು,ಇಂದು ರೂ.12000/- ಆ ಕುಟುಂಬಕ್ಕೆ ಹಸ್ತಾಂತರಿಸಲಾಯ್ತು. ಈ ಸಂದರ್ಭದಲ್ಲಿ ಭಗವತಿ ಗ್ರೂಫ್ ನ ಶ್ರೀ ಸಂದೇಶ್ ಶೆಟ್ಟಿ, ಶ್ರೀ ಮಹೇಶ್ ಕುಮಾರ್ ಉಚ್ಚಿಲ, ಶ್ರೀ ಅಜಯ್ ಪಾದೆಬೆಟ್ಟು, ಶ್ರೀ ಸಂತೋಷ್ ಕುಲಾಲ್ ಗುರ್ಮೆರ್,ಶ್ರೀ ಶೈಲೇಶ್ ಪೂಜಾರಿ ಪಾದೆಬೆಟ್ಟು,ಶ್ರೀ ರವಿ ಪಾದೆಬೆಟ್ಟು,ಶ್ರೀ ಅವಿನಾಶ್ ಉಚ್ಚಿಲ ಉಪಸ್ಥಿತರಿದ್ದರು.

ಪಡುಬೆಳ್ಳೆ ಯುವ ಸ್ಫೂರ್ತಿ ತಂಡ,ಎಡ್ಮೆರ್ ದ ಜವನೆರ್ ಲಕ್ಕಿಡಿಪ್ ಬಹುಮಾನ ವಿತರಣೆ

Thumbnail
Posted On: 11 Oct 2020, 08:33 PM

ಯುವಸ್ಫೂರ್ತಿ ಕಲಾ ಮತ್ತು ಕ್ರೀಡಾ ಸಂಘ (ರಿ) ಪಡುಬೆಳ್ಳೆ ಮತ್ತು ಎಡ್ಮೆರ್ ದ ಜವನೆರ್ ಎಡ್ಮೆರ್ದ ಜವನೆರ್ ವತಿಯಿಂದ ನಡೆದ ಲಕ್ಕಿ ಡಿಪ್ ನ ಬಹುಮಾನವನ್ನು (11/10/2020) ಲಕ್ಕಿಡಿಪ್ ವಿಜೇತರಿಗೆ ಚೆಕ್ ಮೂಲಕ ನೀಡಲಾಯಿತು. ತಂಡದ ಮುಖ್ಯಸ್ಥರು ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು.

ಹಿರಿಯಡ್ಕದಲ್ಲಿ "ಹಿರಿಯರೆಡೆಗೆ ನಮ್ಮ ನಡಿಗೆ" ಎಂಬ ಕಾಯ೯ಕ್ರಮ

Thumbnail
Posted On: 10 Oct 2020, 02:59 PM

ಹಿರಿಯಡಕ -: - ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ, ಕ.ಸಾ.ಪ ಅಜೆಕಾರು ಹೋಬಳಿ ಸಮಿತಿ ಮತ್ತು ಆದಿ ಗ್ರಾಮೋತ್ಸವ ವತಿಯಿಂದ ಹಿರಿಯರೆಡೆಗೆ ನಮ್ಮ ನಡಿಗೆ ಎಂಬ ಕಾಯ೯ಕ್ರಮದ ಅಂಗವಾಗಿ ಅ.10ರಂದು ಪಂಚನಬೆಟ್ಟು ಪ್ರೌಡಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ನರಸಿಂಹ ಎ ರವರನ್ನು ಅವರ ಮನೆಯಲ್ಲಿ ಅಪೂವ೯ ಸಾಧಕ ಗೌರವ ನೀಡಿ ಸನ್ಮಾನಿಸಲಾಯಿತು. ಈ ಸಂದಭ೯ದಲ್ಲಿ ಮಾತನಾಡಿದ ಅವರು, ಮಕ್ಕಳಿಗೆ ನಮ್ಮ ನೆಲದ ಗುಣವನ್ನು ತಿಳಿಸುವ ಶಿಕ್ಷಣದ ಅಗತ್ಯವಿದೆ.ಗ್ರಾಮದಲ್ಲಿ ಶಿಕ್ಷಣ ಕೇಂದ್ರಗಳು ಸ್ಥಾಪನೆ ಆದರೆ ಗ್ರಾಮಗಳ ಅಭಿವೃದ್ಧಿ ಸಾಧ್ಯವಾಗುತ್ತದೆ.ಮಕ್ಕಳ ಭವಿಷ್ಯದ ತಳಹದಿ ಗಟ್ಟಿಯಾಗಲು ಇದು ಅಗತ್ಯವಿದೆ ಎಂದರು.ಲೋಕಕ್ಕೆ ದೀಪ ಹಚ್ಚಲು ನಮಗೆ ಅಸಾಧ್ಯ ಆದರೆ ನಮ್ಮ. ಸುತ್ತ ಬೆಳಕಿನ ದೀಪ ಹಚ್ಚಬಹುದು ಶಿಕ್ಷಣ ಇದಕ್ಕೆ ಪೂರಕ ಎಂದು ಹೇಳಿದರು. ನಿವೃತ್ತ ಮುಖ್ಯ ಶಿಕ್ಷಕ ಮೌರೀಸ್ ತಾಮ್ರೋ ವಿದ್ಯಾಥಿ೯ಗಳು ಶಿಸ್ತಿನ ಸಿಪಾಯಿ ಆಗಬೇಕು. ಆಂಗ್ಲ ಮಾಧ್ಯಮ ಶಿಕ್ಷಣದ ಭರಾಟೆಯಿಂದ ಕನ್ನಡ ಶಾಲೆಗಳು ಮುಚ್ಚುತ್ತಿರುವುದು ದುಃಖಕರ ಇದರ ಉಳಿವಿಗಾಗಿ ಎಲ್ಲರೂ ಒಂದಾಗಬೇಕೆಂದರು. ಸಮಿತಿ ಸಂಚಾಲಕ ಪತ್ರಕತ೯ ಶೇಖರ ಅಜೆಕಾರು ಪ್ರಸ್ತಾವನೆಗೈದರು.ಸೌಮ್ಯಶ್ರೀ ಅಜೆಕಾರ್ ವoದಿಸಿದರು.ರಾಘವೇಂದ್ರ ಪ್ರಭು'ಕವಾ೯ಲು ನಿರೂಪಿಸಿದರು.ಕಾಯ೯ಕ್ರಮದಲ್ಲಿ ರವೀಂದ್ರ ಆಚಾರ್ ಉಪಸ್ಥಿತರಿದ್ದರು.

ಹೆಬ್ರಿ ಠಾಣೆಯಲ್ಲಿ ಕರಿಮಣಿ ಸರ ಒಪ್ಪಿಸಿ ಪ್ರಾಮಾಣಿಕತೆ ಮೆರೆದ ವಿಶ್ವನಾಥ್ ಕಾಮತ್

Thumbnail
Posted On: 10 Oct 2020, 11:00 AM

ಹೆಬ್ರಿ ಬಸ್ ನಿಲ್ದಾಣದ ವಠಾರದಲ್ಲಿ ಸಿಕ್ಕಿದ ಕರಿಮಣಿ ಸರವನ್ನು ಹೆಬ್ರಿ ಪೊಲೀಸ್ ಠಾಣೆಯಲ್ಲಿ ವಾರಿಸುದಾರಿಗೆ ಹಿಂದಿರುಗಿಸಲಾಯಿತು. ಸಿಕ್ಕ ಕರಿಮಣಿ ಸರವನ್ನು ಪ್ರಾಮಾಣಿಕತೆಯಿಂದ ಠಾಣೆಗೆ ಒಪ್ಪಿಸಿದ ವಿಶ್ವನಾಥ್ ಕಾಮತ್ ಸಂತೆಕಟ್ಟೆ ಅವರನ್ನು ಠಾಣೆಯಲ್ಲಿ ಗೌರವ ಪೂರ್ವಕವಾಗಿ ಅಭಿನಂದಿಸಲಾಯಿತು.