Updated News From Kaup
ಭಾರತ್ ಬ್ಯಾಂಕ್ ಮಾಜಿ ಅಧ್ಯಕ್ಷ, ಬಿಲ್ಲವ ಮುಖಂಡ ಜಯ ಸಿ ಸುವರ್ಣ ಇನ್ನಿಲ್ಲ
Posted On: 21 Oct 2020, 11:25 AM
ಶ್ರೀ ಜಯ ಸಿ ಸುವರ್ಣ (ಭಾರತ್ ಬ್ಯಾಂಕಿನ ಮಾಜಿ ಅಧ್ಯಕ್ಷರು) ಅವರ ಸ್ವರ್ಗೀಯ ವಾಸಸ್ಥಾನಕ್ಕೆ ತೆರಳಿದ್ದಾರೆ ಎಂದು ತಿಳಿಸಲು ತುಂಬಾ ದುಃಖವಾಗಿದೆ. ಮುಂಬಯಿಯಲ್ಲಿ ಹೊಟೇಲ್ ಉದ್ಯಮಿಯಾಗಿದ್ದ ಜಯ ಸಿ.ಸುವರ್ಣ ಅವರು ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡು, ಮುಂಬಯಿ ಭಾರತ್ ಕೋ-ಅಪರೇಟಿವ್ ಬ್ಯಾಂಕ್ ನ ಅಧ್ಯಕ್ಷರಾಗಿ, ಅಭಿವೃದ್ಧಿಯ ರೂವಾರಿಯಾಗಿದ್ದರು. ಬಿಲ್ಲವ ಭವನ ಮುಂಬಯಿ ಮತ್ತು ಮಹಾಮಂಡಲ ಭವನ ಮುಲ್ಕಿ ಇದರ ನಿರ್ಮಾತೃ ಆಗಿದ್ದರು. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವರ ಅಂತ್ಯಕ್ರಿಯೆ ಇಂದು (ಬುಧವಾರ) ಮಧ್ಯಾಹ್ನ 3.00 ರ ಸುಮಾರಿಗೆ ನಡೆಯಲಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಮೃತರು ಪತ್ನಿ, ನಾಲ್ವರು ಪುತ್ರರು ಮತ್ತು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
ಕಾಪು ವೆಂಕಟರಮಣ ದೇವಸ್ಥಾನಕ್ಕೆ ನೂತನ ರಜತ ಮುಖ ಮತ್ತು ಬೆಳ್ಳಿಯ ಆರತಿ ಸಮರ್ಪಣೆ
Posted On: 19 Oct 2020, 04:37 PM
ಶ್ರೀ ವೆಂಕಟರಮಣ ದೇವಸ್ಥಾನ, ಕಾಪು ಇಲ್ಲಿ ನವರಾತ್ರಿ ಸಂದರ್ಭದಲ್ಲಿ ನಿತ್ಯ ಜರಗುವ ದುರ್ಗಾ ನಮಸ್ಕಾರ ಪೂಜೆಗೆ ಶ್ರೀಮತಿ ಪ್ರತಿಮಾ ಪ್ರವೀಣ್ ಶೆಣೈ (USA) ಇವರು ನೂತನ ಬೆಳ್ಳಿಯ ಆರತಿ ಹಾಗೂ ಶ್ರೀ ಲಕ್ಷ್ಮೀನಾರಾಯಣ ಭಟ್ ಮತ್ತು ಕುಟುಂಬಸ್ಥರು ನೂತನ ದೇವಿಯ ರಜತ ಮುಖವನ್ನು ಸಮರ್ಪಿಸಿದರು.
ಕಾಪು ಬೀಚ್ ನಲ್ಲಿ ಯುವಕರಿಬ್ಬರು ನೀರು ಪಾಲು
Posted On: 18 Oct 2020, 11:53 PM
ಕಾಪು, ಅ. 18 : ಬೆಂಗಳೂರಿನ ಯುವಕರಿಬ್ಬರು ರವಿವಾರ ಸಂಜೆ ಕಾಪು ಬೀಚ್ ನಲ್ಲಿ ನೀರು ಪಾಲಾಗಿದ್ದಾರೆ.
ಕಾರ್ತಿಕ್ ಮತ್ತು ರೂಪೇಶ್ ಎಂಬವರು ನೀರು ಪಾಲಾಗಿದ್ದು, ರೂಪೇಶ್ ಎಂಬಾತನ ಶವ ಮೇಲಕ್ಕೆತ್ತಲಾಗಿದೆ.
ಬೆಂಗಳೂರಿನಿಂದ ಬಂದ 5 ಮಂದಿ ಯುವಕರ ತಂಡ ರವಿವಾರ ಸಂಜೆ ಕಾಪು ಬೀಚ್ ನಲ್ಲಿ ಆಟವಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ನೀರು ಪಾಲಾಗುತ್ತಿದ್ದ ರೂಪೇಶ್ ನನ್ನು ಬೀಚ್ ನಿರ್ವಾಹಕ ಪ್ರಶಾಂತ್ ಕರ್ಕೇರ, ವಿನೀತ್, ಪ್ರಥಮ್, ದಯೋದರ ಪುತ್ರನ್, ಚಂದ್ರಹಾಸ ಜೊತೆಗೂಡಿ ರಕ್ಷಿಸುವ ಪ್ರಯತ್ನ ಮಾಡಿದ್ದರು.
ಮೇಲಕ್ಕೆ ತಂದು ಆಕ್ಸಿಜನ್ ನೀಡಲಾಯಿತಾದರೂ ಅಷ್ಟರಲ್ಲೇ ಮೃತಪಟ್ಟಿದ್ದನು. ನೀರಿನಲ್ಲಿ ಮುಳುಗಿದ ಯುವಕನಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆ ಮುಂದುವರಿಸಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.
ಇನ್ನಂಜೆ ಕುಜುಂಬ ಮನೆಯ ಗುಲಾಬಿ ಎಚ್.ಪೂಜಾರಿ ಇನ್ನಿಲ್ಲ
Posted On: 18 Oct 2020, 04:16 PM
ಕಾಪು ತಾಲೂಕಿನ ಇನ್ನಂಜೆ ಗ್ರಾಮದ ಗುಲಾಬಿ ಪೂಜಾರಿ (66) ಅವರು ಅಕ್ಟೋಬರ್ 17 ರಂದು ಅನಾರೋಗ್ಯದ ಕಾರಣ ನಿಧಾನ ಹೊಂದಿದರು. ಇನ್ನಂಜೆ ಕುಜುಂಬ ಮನೆಯವರಾದ ಗುಲಾಬಿ ಅವರು ಪತಿ ಹಿರಿಯಣ್ಣ ಪೂಜಾರಿ, 3 ಪುತ್ರರನ್ನು ಹಾಗೂ ಒಬ್ಬಳು ಪುತ್ರಿಯನ್ನು ಮತ್ತು ಅಪಾರ ಬಂಧುಗಳನ್ನು ಅಗಲಿದ್ದಾರೆ. ಮೃತರ ಅಂತ್ಯ ಕ್ರಿಯೆಯು ಆ.18 ರಂದು ಬೆಳ್ಳಿಗೆ ನೆರವೇರಿದ್ದು,ಕುಟುಂಬಸ್ಥರು,ಊರ ಜನರು ಉಪಸ್ಥಿತರಿದ್ದರು.
ಸ್ವರ ಮನ್ಮಥನ ಕಂಠದಲ್ಲಿ ಮೂಡಿಬಂದ "ಶಿರ್ವದ ತುಡರ್" ತುಳು ಆಲ್ಬಮ್ ಸಾಂಗ್
Posted On: 17 Oct 2020, 04:53 PM
ಶಿರ್ವ ಕ್ರಿಯೇಶನ್ಸ್ ಅರ್ಪಿಸುವ "ಶಿರ್ವದ ತುಡರ್" ನ್ಯಾರ್ಮದ ಶ್ರೀ ಧರ್ಮ ಜಾರಂದಾಯೆ ಅನ್ನುವ ತುಳು ಆಲ್ಬಮ್ ಸಾಂಗ್.
ವಿ ಸುಬ್ಬಯ್ಯ ಹೆಗ್ಡೆ ನ್ಯಾರ್ಮ ಇವರ ಸಲಹೆ ಸಹಕಾರ ದೊಂದಿಗೆ, ಪ್ರಸಾದ್ ಬಂಗೇರ ಇನ್ನಂಜೆ ನಿರ್ಮಾಣದ, ತುಳುನಾಡ ಕಲಶ ಬಿರುದಾಂಕಿತ ಶ್ರೀ ಜಿ, ಎಸ್, ಗುರುಪುರ ಇವರ ಸಾಹಿತ್ಯದಲ್ಲಿ, ಸ್ವರ ಮನ್ಮಥ ಬಿರುದಾಂಕಿತ ವಿ.ಜೆ ಮಧುರಾಜ್ ಗುರುಪುರ ಇವರ ಕಂಠದಲ್ಲಿ ಅದ್ಭುತವಾಗಿ ಮೂಡಿ ಬಂದಿದ್ದು.
ಶಿರ್ವ ನ್ಯಾರ್ಮ ಧರ್ಮ ಜಾರಂದಾಯನ ಭಕ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ
ವಿಡಿಯೋ ವೀಕ್ಷಿಸಲು ಇಲ್ಲಿ ಒತ್ತಿರಿ
ಕ್ಲಿಕ್ ಮಾಡಿ
ಸಾರ್ವಜನಿಕರಿಗೆ ತಲೆನೋವಾಗಿದ್ದ ಮಾನಸಿಕ ಅಸ್ವಸ್ಥನ ಚಿಕಿತ್ಸೆಗೆ ನೆರವಾದ ಕುಂದಾಪುರ ಪಿ.ಎಸ್.ಐ ಸದಾಶಿವ ಆರ್ ಗವರೋಜಿ
Posted On: 17 Oct 2020, 10:35 AM
ಕಳೆದ 2 ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಬಿಹಾರ ಮೂಲದ ಮಾನಸಿಕ ಅಸ್ವಸ್ಥ ಯುವಕನೊರ್ವ ಅರೆ ನಗ್ನ ಅವಸ್ಥೆಯಲ್ಲಿ ಕುಂದಾಪುರದ ಬೀದಿಯಲ್ಲಿ ತನ್ನ ಭಯಾನಕ ವರ್ತನೆಯಿಂದ ಸಾರ್ವಜನಿಕ ವಲಯದಲ್ಲಿ ಆಂತಕ ಸ್ರಷ್ಟಿಸಿದ್ದ ಸುದ್ದಿ ವಾಟ್ಸಪ್ಪ್ ನಲ್ಲಿ ಹರಿದಾಡಿತ್ತು. ವೇಗವಾಗಿ ನಡೆಯುತ್ತಾ ಸಾರ್ವಜನಿಕರ ಮೇಲೆ ಮುಗಿ ಬೀಳುವ ಈತನಿಂದ ಈಗಾಗಲೇ ಹಲವರು ಮಾರಕ ಹಲ್ಲೆಗೊಳಗಾಗಿದ್ದಾರೆ. ಅಲ್ಲದೇ ಮಹಿಳೆಯರ ಬೆಂಬತ್ತುವ ಈತ ನೇರವಾಗಿ ಅವರ ದೇಹದ ಮೇಲೆ ಕೈಹಾಕುತ್ತಿರುವ ಘಟನೆಗಳು ನಡೆದಿದ್ದು ವಿದ್ಯಾರ್ಥಿನಿಗಳ ಸಹಿತ ಇನ್ನಿತರ ಮಹಿಳೆಯರು ಈತನ ವಿಕಾರತೆಗೆ ಸಿಲುಕಿದ್ದಾರೆನ್ನಲಾಗಿದೆ. ಸಂಬಂಧ ಪಟ್ಟ ಇಲಾಖೆಗಳು ಕೂಡಲೇ ಈತನ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ ಎಂದು ಮ್ಯಾನರ್ ವಾಟ್ಸಪ್ಪ್ ಗ್ರೂಪ್ ನಲ್ಲಿ ಹಾಕಿದ್ದು ಇದಕ್ಕೆ ಆದಷ್ಟು ಬೇಗ ಸಾಮಾಜಿಕ ಕಾರ್ಯಕರ್ತರು ಸ್ಪಂದಿಸಬೇಕು ಎಂದು ರವಿ ಮ್ಯಾನರ್ ವಿನಂತಿಸಿದ್ದರು. ಈ ಸುದ್ದಿ ತಿಳಿದ ಕೂಡಲೇ ಸಾಮಾಜಿಕ ಕಾರ್ಯಕರ್ತ ಮತ್ತು ಕುಂದಾಪರ ಮಿತ್ರ ವರದಿಗಾರ ಕಿರಣ್ ಪೂಜಾರಿಯವರು ಕುಂದಾಪುರ ಪಿ.ಎಸ್.ಐ ಸದಾಶಿವ ಆರ್ ಗವರೋಜಿ ಅವರ ಗಮನಕ್ಕೆ ತಂದು, ದಿನಾಂಕ 15/10/2020ರಂದು ಬೆಳಿಗ್ಗೆ ಆ ವ್ಯಕ್ತಿಯ ಚಲನವಲನ್ನು ಗಮನಿಸಿದ್ದ ಕಿರಣ್ ರವರು ಕೂಡಲೇ ಪಿ.ಎಸ್.ಐ ಸದಾಶಿವ ಆರ್ ಗವರೋಜಿರವರಿಗೆ ಮಾಹಿತಿ ನೀಡಿ, ಕುಂದಾಪುರ ಪೊಲೀಸ್ ಸುಧಾಕರ್, ರಾಘವೇಂದ್ರ, ಆನಂದ ಹಾಗೂ ಸ್ಥಳೀಯ ಪುರಸಭೆ ಸದಸ್ಯರಾದ ಪ್ರಭಾಕರ ಮತ್ತು ಹುಸೈನ್ ಹೈಕಾಡಿ ಅವರ ನೆರವಿನೊಂದಿಗೆ ಮಾನಸಿಕ ಅಸ್ವಸ್ಥನ ಮನವೊಲಿಸಿ ಅವರನ್ನು ಕೋಟ ನಾಗರಾಜ್ ರವರ ಆಂಬುಲೆನ್ಸ್ ನಲ್ಲಿ ಉಡುಪಿ ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ಚಿಕ್ಸಿತೆಗೆ ಕೊಂಡೊಯ್ಯಲಾಗಿದೆ. ಇದರಿಂದ ಜನತೆಗೆ ನೆಮ್ಮದಿ ದೊರೆತ್ತಿದ್ದು, ಕುಂದಾಪುರ ಪೊಲೀಸರ ಮಾನವೀಯ ಕಾರ್ಯಕ್ಕೆ ಕುಂದಾಪುರ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಲಯದ ಆದೇಶ ಪಡೆದು ಧಾರವಾಡ ನಿಮ್ಹಾನ್ಸ್ ಆಸ್ಪತ್ರೆಗೆ ಕೋಡಿಯ NMA ಆಸ್ಪತ್ರೆಯವರ ಹಾಗೂ ಜೆಸಿಐ ಕುಂದಾಪುರ ಸಿಟಿಯ ಸ್ಥಾಪಕ ಅಧ್ಯಕ್ಷ ಹುಸೈನ್ ಹೈಕಾಡಿ, nmaಯ ಶಾಬಾನ್ ಹಂಗಳೂರ್, nmaಯ ಅಧ್ಯಕ್ಷ ರಫೀಕ್ ಬಿಎಸ್ಎಫ್ ಇವರ ಸಹಕಾರದಿಂದ ಆಂಬುಲೆನ್ಸ್ ಮೂಲಕ ಸಿಬ್ಬಂದಿವರ ಭದ್ರತೆಯಲ್ಲಿ ಚಿಕಿತ್ಸೆಗೆ ಕಳುಹಿಸಲಾಗಿದೆ.
ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಗೆ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಭೇಟಿ
Posted On: 16 Oct 2020, 12:43 PM
ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ (ನಿ.) ಪಡುಬಿದ್ರಿಗೆ ಮಾಜಿ ಸಂಸದ ಹಾಗು ವಿಧಾನ ಪರಿಷತ್ ಸದಸ್ಯರಾದ ಬಿ.ಕೆ. ಹರಿಪ್ರಸಾದ್ ಭೇಟಿನೀಡಿದರು. ಈ ಸಂದರ್ಭ ಮಾತನಾಡಿದ ಅವರು ಪಡುಬಿದ್ರಿ ಸೊಸೈಟಿಯ ಕಾರ್ಯಚಟುವಟಿಕೆಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಕೊರೊನಾದಂತಹ ಕ್ಲಿಷ್ಟಕರ ಸಂದರ್ಭದಲ್ಲಿ ಸಹಕಾರಿಸಂಸ್ಥೆಗಳು ಜನರ ಜೀವನ ಮಟ್ಟವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದೆ ಎಂದು ತಿಳಿಸಿದರು. ಈ ಸಂದರ್ಭ ಸೊಸೈಟಿಯ ಅಧ್ಯಕ್ಷ ರಾದ ವೈ. ಸುಧೀರ್ ಕುಮಾರ್, ಸೊಸೈಟಿಯ ನಿರ್ದೇಶಕರಾದ ಶಿವರಾಮ ಎನ್. ಶೆಟ್ಟಿ , ರಾಜಾರಾಮ ರಾವ್, ಮಾಧವ ಆಚಾರ್ಯ, ಯಶವಂತ , ಶ್ರೀಮತಿ ಸುಚರಿತಾ ಎಲ್ ಅಮೀನ್, ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿಶ್ಮಿತ ಪಿ.ಎಚ್ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಪಡುಬಿದ್ರಿ ರೋಟರಿ ಮತ್ತು ಇನ್ನರ್ ವೀಲ್ ಕ್ಲಬ್ ಪ್ರತಿಭಾ ಸಮ್ಮಿಲನ-2020 ಸಾಂಸ್ಕೃತಿಕ ಸ್ಪರ್ಧಾ ಸಮಾರೋಪ ಸಮಾರಂಭ
Posted On: 15 Oct 2020, 09:56 PM
ಪಡುಬಿದ್ರಿ ರೋಟರಿ ಕ್ಲಬ್ ಹಾಗು ಇನ್ನರ್ ವೀಲ್ ಕ್ಲಬ್ ವತಿಯಿಂದ ಪ್ರತಿಭಾ ಸಮ್ಮಿಲನ-2020 ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ ವನ್ನು ಪಡುಬಿದ್ರಿ ಸಿ.ಎ ಬ್ಯಾಂಕ್ ಅಧ್ಯಕ್ಷ ವೈ.ಸುಧೀರ್ ಕುಮಾರ್ ಉದ್ಘಾಟಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ನಮ್ಮ ಜೀವನದಲ್ಲಿರುವ ಒತ್ತಡ ಕಡಿಮೆಯಾಗುತ್ತದೆ. ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಕಲೆ ಎಂಬುದು ಯಾವತ್ತೂ ನಾಶವಾಗದ ಸಂಪತ್ತು. ಕಲೆಯನ್ನು ಪ್ರಸ್ತುತ ಪಡಿಸಲು ಇಂತಹ ವೇದಿಕೆಗಳನ್ನು ಸದುಪಯೋಗ ಪಡೆದುಕೂಳ್ಳಬೇಕು. ಪ್ರತಿಭೆಯನ್ನು ಗುರುತಿಸುವ ಕೆಲಸವನ್ನು ಮಾಡುತಿರುವ ರೋಟರಿ ಕ್ಲಬ್ ನ ಕೆಲಸ ಶ್ಲಾಘನೀಯ ಎಂದರು. ಪಡುಬಿದ್ರಿ ರೋಟರಿ ಅಧ್ಯಕ್ಷ ಕೇಶವ್ ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು.ಈ ಸಂದರ್ಭದಲ್ಲಿ ಇನ್ನರ್ ವೀಲ್ ಕ್ಲಬ್ ಅಧ್ಯಕೆ ಆಶಾ ಸುಕುಮಾರ್, ಯುವ ಉದ್ಯಮಿ ಸುಧೀರ್ ಕರ್ಕೇರ ಹೆಜಮಾಡಿ ,ತುಳು ಚಲನಚಿತ್ರ ನಟಿ ರಂಜಿತಾ ಶೇಟ್, ಸಂಗೀತ ಕಲಾವಿದ ಚಂದ್ರಕಾಂತ್ ಆಚಾರ್ಯ ಉಪಸ್ಥಿತರಿದ್ದರು. ಸನ್ಮಾನ :ತುಳು ಚಲನಚಿತ್ರನಟ ಅರವಿಂದ್ ಬೋಳಾರ್ ಹಾಗು ದಾಯ್ಜಿವಲ್ಡ್ ಸುದ್ದಿ ಸಂಪಾದಕ ಹಾಗು ನಿರೂಪಕ ಚೇತನ್ ಶೆಟ್ಟಿ ಮಂಗಳೂರು ಹಾಗು ರೋಟರಿ ಕ್ಲಬ್ ನ ಪೂರ್ವ ಅಧ್ಯಕ್ಷರು ಗಳಾದ ವೈ. ಸುಧೀರ್ ಕುಮಾರ್, ರಮೀಜ್ ಹುಸೇನ್, ಅಬ್ದುಲ್ ಹಮೀದ್ , ಗಣೇಶ್ ಅಚಾರ್ಯ ಎರ್ಮಾಳ್ , ರಿಯಾಜ್ ಮುದರಂಗಡಿ ಹಾಗು ಪೂರ್ವ ಕಾರ್ಯದರ್ಶಿಗಳಾದ ಬಿ.ಯಸ್ ಅಚಾರ್ಯ, ಸುಧಾಕರ್ ಕೆ. ಸಂತೋಷ್ ಪಡುಬಿದ್ರಿರವರನ್ನು ಸಾನ್ಮಾನಿಸಿ ಗೌರವಿಸಲಾಯಿತು. ಸ್ಪರ್ಧಾ ವಿಜೇತರ ವಿವರ :- ಮಿಮಿಕ್ರಿ: ಪ್ರಥಮ- ಮಹಮ್ಮದ್ ಅತೀಫ್ , ದ್ವಿತೀಯ- ಬಿ.ಯಸ್ ಅಚಾರ್ಯ. ಏಕಪಾತ್ರಭಿನಯ : ಪ್ರಥಮ- ಯಶೋಧ ಪಡುಬಿದ್ರಿ. ದ್ವಿತೀಯ- ಬಿ.ಯಸ್ ಆಚಾರ್ಯ ,ಸಂಗೀತ ವೈಯಕ್ತಿಕ ವಿಭಾಗ: ಪ್ರಥಮ- ಸ್ವಾತಿ ಗಣೇಶ್ ದ್ವಿತೀಯ- ತೌಫೀಕ್ ಪಡುಬಿದ್ರಿ. ಸಂಗೀತ ಡ್ಯೂಯೆಟ್ ವಿಭಾಗ :-ಪ್ರಥಮ- ವೇಣುಗೋಪಾಲ ಶೆಟ್ಚಿ ಹಾಗು ಗುಣವತಿ, ದ್ವಿತೀಯ- ಮಹಮ್ಮದ್ ಅತೀಫ್ ಹಾಗು ಗೀತಾ ಅರುಣ್. ಸಂಗೀತ ಗುಂಪು ವಿಭಾಗ :- ಪ್ರಥಮ -ಇನ್ನರ್ ವೀಲ್ ಕ್ಲಬ್ ಪಡುಬಿದ್ರಿ.ದ್ವಿತೀಯ- ಬಿ.ಯಸ್ ಅಚಾರ್ಯ ತಂಡ. ನೃತ್ಯ ವೈಯಕ್ತಿಕ ವಿಭಾಗ :- ಪ್ರಥಮ -ಅದ್ವಿತ್ ಕುಮಾರ್, ದ್ವಿತೀಯ- ಶಿಲ್ಪಾಶ್ರೀ.ನೃತ್ಯ ಗಂಪು ವಿಭಾಗ:-ಪ್ರಥಮ -ಯಶೋಧ ತಂಡ. ದ್ವಿತೀಯ- ಇನ್ನರ್ ವೀಲ್ ತಂಡ. ಪ್ರಹಸನ:- ಪ್ರಥಮ -ಇನ್ನರ್ ವೀಲ್ ತಂಡ , ದ್ವಿತೀಯ :- ಬಿ.ಯಸ್ ಅಚಾರ್ಯ ತಂಡ. ಪ್ರತಿ ವಿಭಾಗದಲ್ಲಿ ವಿಜೇತರಿಗೆ ಪ್ರಥಮ , ದ್ವಿತೀಯ ಬಹುಮಾನ ನೀಡಿ ಗೌರವಿಸಲಾಯಿತು ಹಾಗು ಅತೀ ಹೆಚ್ಚು ಬಹುಮಾನ ಪಡೆದ ಯಶೋಧ ಮತ್ತು ತಂಡ "ಪ್ರತಿಭಾ ಸಮ್ಮಿಲನ -2020 " ರ ಚಾಂಪಿಯನ್ ಪ್ರಶಸ್ತಿ ಪಡೆದುಕೊಂಡರು. ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆಯನ್ನು ರೋಟರಿ ಅಧ್ಯಕ್ಷ ಕೇಶವ್ ಸಾಲ್ಯಾನ್ ವಹಿಸಿದರು. ತುಳು ಚಲನಚಿತ್ರ ನಟ ಅರವಿಂದ್ ಬೋಳಾರ್, ದಾಯ್ಜಿವಲ್ಡ್ ಸುದ್ದಿ ಸಂಪಾದಕ ಹಾಗು ನಿರೂಪಕ ಚೇತನ್ ಶೆಟ್ಟಿ ಮಂಗಳೂರು , ಮಾಜಿ ತಾ.ಪಂ.ಸದಸ್ಯ ನವೀನ್ ಚಂದ್ರ ಶೆಟ್ಟಿ, ವಲಯ ಸಹಾಯಕ ಗವರ್ನರ್ ನವೀನ್ ಅಮೀನ್ ಶಂಕರ್ ಪುರ, ವಲಯ ಸಂಯೋಜಕ ರಮೀಜ್ ಹುಸೇನ್, ಪಡುಬಿದ್ರಿ ಯುತ್ ಫೌಂಡೇಶನ್ ಅಧ್ಯಕ್ಷ ಅಬ್ದುಲ್ ಹಮೀದ್ ಕಾರ್ಯಕ್ರಮದ ನಿರ್ದೇಶಕರಾದ ಗೀತಾ ಅರುಣ್ ಹಾಗು ಸಂತೋಷ್ ಪಡುಬಿದ್ರಿ, ಸುಧಾಕರ್ ಕೆ. ಉಪಸ್ಥಿತರಿದ್ದರು. ರೋಟರಿ ಕಾರ್ಯದರ್ಶಿ ಮಹಮ್ಮದ್ ನಿಯಾಜ್ ವಂದಿಸಿ . ಬಿ.ಯಸ್. ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.
ಪೋಲೀಸರ ಕರೆಗೆ ಸ್ಪಂದಿಸಿ ಹದ್ದನ್ನು ರಕ್ಷಿಸಿದ ಶಿವಾನಂದ ಮುನ್ನ ಕಾಪು
Posted On: 15 Oct 2020, 03:07 PM
ಕಾಪುವಿನ ಜನರ ಕಷ್ಟಕ್ಕೆ ಮಿಡಿಯುವ ಸಂಘಟನೆ ಅಂತ ಇದ್ರೆ ಅದು ತುಳುನಾಡ ಹಿಂದೂ ಸೇನೆ. ಈಗಾಗಲೇ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದ ಅನೇಕ ಮೂಕ ಪ್ರಾಣಿಗಳ ಶೂಸ್ರುಸೆ ಮಾಡಿರುವ ಶಿವಾನಂದ ಪೂಜಾರಿ (ಮುನ್ನ) ತುಳುನಾಡ ಹಿಂದೂ ಸೇನೆಯ ಕಾರ್ಯಕರ್ತರಾಗಿದ್ದು. ಇತ್ತೀಚಿನ ಕೆಲವು ದಿನಗಳ ಹಿಂದೆ ಜನವಸತಿ ಇರುವ ಪ್ರದೇಶದಲ್ಲಿ ಒಂದೆರಡು ಹೆಬ್ಬಾವುಗಳನ್ನು ಹಿಡಿದು ಕಾಪುವಿನಲ್ಲಿ ಬಾರಿ ಸುದ್ದಿಯಾಗಿದ್ದರು. ಇಂದು ಬೆಳಿಗ್ಗೆ ಹೈವೇ ಪ್ಯಾಟ್ರೋಲ್ ಎ.ಎಸ್.ಐ ರಾಜೇಂದ್ರ ಮನಿಯಾನಿಯವರು ಹದ್ದುವೊಂದು ಗಾಯಳುವಾಗಿ ಬಿದ್ದಿದ್ದನ್ನು ಕಂಡು ಶಿವಾನಂದ್ (ಮುನ್ನ) ಇವರಿಗೆ ಪೋನಾಯಿಸಿದರು. ರಾಜೇಂದ್ರ ಮನಿಯಾನಿಯವರ ಕರೆಗೆ ಸ್ಪಂದಿಸಿದ ಶಿವಾನಂದ್ ಮುನ್ನ ತಕ್ಷಣ ಸ್ಥಳಕ್ಕೆ ಧಾವಿಸಿ ಹದ್ದಿಗೆ ಪ್ರಥಮ ಚಿಕಿತ್ಸೆ ನೀಡಿದರು ಮತ್ತು ಅರಣ್ಯ ಇಲಾಖೆಗೆ ಹಸ್ತಾಂತರಿಸಿದರು.
ಕೊರೊನಾ ಕಷ್ಟಕಾಲದಲ್ಲಿ ನಷ್ಟದಲ್ಲಿದೆ ಸಾಂಪ್ರದಾಯಿಕ ಶೈಲಿಯ ಕರಕುಶಲ ವಸ್ತುಗಳು
Posted On: 14 Oct 2020, 10:32 PM
ತುಂಬಾ ಬಡತನದ ಬೇಗೆಯಿಂದ ಬಳಲುತ್ತಿರುವ ಕುಟುಂಬಗಳು ಕಾರ್ಕಳ ತಾಲೂಕಿನ ಕಡ್ತಲದ ಚೆನ್ನಿಬೆಟ್ಟು ಸಮೀಪದಲ್ಲಿವೆ .ಲಾಕ್ಡೌನ್ ತುಂಬಾ ನೋವು ತಂದುಕೊಟ್ಟಿದೆ .ಈ ವಿಷಯವನ್ನು ಇಲ್ಲಿ ಉಲ್ಲೆಖಿಸಲೇಬೇಕು . ಕೋಲ ಕಟ್ಟಳೆಗಳು ಹೀಗೆ ಸಾಂಪ್ರದಾಯಿಕ ಶೈಲಿಯ ತುಳುನಾಡಿನ ಕಲೆಯನ್ನು ಉಳಿಸಿಕೊಂಡು ಕಲಿಸಿಕೊಂಡು ಬರುವ ಜನರು ಅವರು . ಸುಧಾಕರಣ್ಣ ಕೋಲ ಮೊದಲಾದ ವೇಷಗಳನ್ನು ಹಾಕುತ್ತ ಕೋಲ ಕಟ್ಟುವಲ್ಲಿ ತುಳುನಾಡಿನಲ್ಲಿ ತುಂಬಾ ಹೆಸರನ್ನು ಪಡೆದ ವ್ಯಕ್ತಿ ತುಂಬಾ ಸರಳ ವ್ಯಕ್ತಿತ್ವ ಅವರದ್ದು. ಈಗ ಕೋಲಗಳು ಇಲ್ಲ ಲಾಕ್ಡೌನ್ ಇಡಿ ಜೀವನದ ಅನ್ನವನ್ನೆ ಕಿತ್ತುಕೊಂಡಂತಿದೆ .ಆದರೆ ಅವರು ಸುಮ್ಮನೆ ಕುಳಿತ ವ್ಯಕ್ತಿ ಅಂತು ಅಲ್ಲವೆ ಅಲ್ಲ ,ಆದರೂ ತಮ್ಮ ಕುಲಕಸುಬು ಏಡಿ ಹಿಡಿಯುವ ಗೂರಿಗಳು, ಕೋಳಿ ಸಾಕುವ ಗೂಡುಗಳು ಗೊಬ್ಬರದ ಬುಟ್ಟಿ ಗಳು ,ಗೂಡುದೀಪಗಳು ಹೀಗೆ ವಿವಿಧ ಆಕಾರದ ಬಿದಿರಿನ ಕೋಲುಗಳಿಂದ ತಯಾರಿಸುತ್ತಾರೆ .ಅವರ ಜೊತೆ ಜಗ್ಗು ಪರವ ಕೂಡ ಭತ್ತದ ಗಳಗೆಗಳನ್ನು ಮಾಡುತ್ತಾರೆ. ಅಂಗಡಿಗಳಲ್ಲಿ ಮಾರಾಟಕ್ಕೆ ಇಟ್ಟರೆ ಸೇಲ್ ಅಗ್ತಾ ಇಲ್ಲ .ಜನರಿಗೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ. ಸುಂದರ ಪರವ ಒಳ್ಳೆಯ ಗೊಬ್ಬರದ ಬಟ್ಟಿ ಮಾಡುತ್ತಾರೆ . ಹೀಗೆ ಹಲವಾರು ವಿವಿಧ ರೀತಿಯ ಕರಕುಶಲ ವಸ್ತುಗಳನ್ನು ಮಾಡುತ್ತಾ ಬರುತ್ತಿರುವ ಕುಟುಂಬಗಳು. ಬಿದಿರಿನ ಕಡ್ಡಿಗಳಿಗಾಗಿ ನೂರಾರು ಕಿ.ಮಿ ನಡೆದು ಶ್ರಮ ಪಡುತ್ತಾರೆ. ಅವರಿಗೆ ವಿದ್ಯೆ ಕಲಿತವರಲ್ಲ. ಬದುಕಿಗೆ ಆಧಾರವೆ ಕೊಲಗಳು. ಆದರೆ ಈಗಿನ ಪರಿಸ್ಥಿಗೆ ಹೊಂದಿಕೊಳ್ಳಬೇಕಾದರೆ ಕುಲಕಸುಬು ಕರಕುಶಲ ವಸ್ತುಗಳನ್ನು ತಯಾರಿಸುತಿದ್ದಾರೆ. ಭತ್ತ ಹೋರುವ ಬುಟ್ಟಿ ಹಾಗು ಅಕ್ಕಿ ಗೇರುವ ತಡಪೆಗಳನ್ನು ಬಾಬಣ್ಣ ಮಾಡುತ್ತಾರೆ ಅವರದ್ದು ಅಧ್ಬುತ ಕಲೆ.ಆದರೆ ಈಗಿನ ಪರಿಸ್ಥಿತಿ ತುಂಬಾ ಕಷ್ಟದ್ದಾಗಿದೆ. ಅವರಿಗೆ ಸ್ಪಂದಿಸಲು ಸಾಧ್ಯ ವಾಗುತಿಲ್ಲ.ಮನೆಯಲ್ಲಿ ಬುಟ್ಟಿ ಗೂರಿಗಳು ಮಾಡಿಟ್ಟು ವಾರಗಳೆ ಕಳೆದಿವೆ . ಮಾರಾಟವಾಗದೆ ಕಷ್ಟ ಅನುಭವಿಸುತಿದ್ದಾರೆ. ದಯವಿಟ್ಟು ನಿಮಗೆ ಗುರಿಗಳು ಕೋಳಿ ಗೂಡುಗಳು ಗೂಡುದೀಪಗಳು, ಹೀಗೆ ವಿವಿಧ ಅಕಾರದ ಕಲೆಗಳು ಬಲ್ಲವರು. ಅವರು ಶ್ರಮಿಕ ವ್ಯಕ್ತಿಗಳು.ನಿಮಗೆ ಯಾವುದಾದರೂ ಬೇಕಾದರೆ ದಯವಿಟ್ಟು ಸ್ಪಂದಿಸಿ ಅವರ ಶ್ರಮಕ್ಕೆ ಮನ್ನಣೆ ಕೊಟ್ಟರೆ ತುಂಬಾ ಖುಷಿ ಪಡುತ್ತಾರೆ. ದಯವಿಟ್ಟು ಎಲ್ಲರಿಗೂ ಕಳುಹಿಸಿ ಅವರ ಶ್ರಮಕ್ಕೆ ಸ್ಪಂದಿಸಿ ; ಗೂರಿಗಳು ಕೋಳಿಗೂಡುಗಳಿಗಾಗಿ ಸುಧಾಕರ್ ಅವರ ಮೊಬೈಲ್ ಸಂಖ್ಯೆ : +917760485701 ಗಳಗೆ ಗೂರಿಗಳು ಜಗ್ಗು 8497077496 ಗೊರಬುಗಳು ಗೊಬ್ಬರ ಬಟ್ಟಿಗಳು ಸುಂದರ :9632813329 ಅಕ್ಕಿ ಗೇರುವ ತಡಪೆಗಳಿಗಾಗಿ ಬಾಬು : 8105307574 ದಯವಿಟ್ಟು ಸ್ಪಂದಿಸಿ ನಿಮ್ಮವನು, ರಾಂ ಅಜೆಕಾರು
