Updated News From Kaup
ಕಾಪು ತಾಲೂಕಿನ ಮೂಡಬೆಟ್ಟುವಿನಲ್ಲೊಬ್ಬ ಡ್ರೋಣ್ ತಯಾರಕ ಗ್ಲೆನ್
Posted On: 17 Jul 2020, 06:55 PM
ಡ್ರೋನ್ ಗ್ಲೇನ್ ರೆಬೆಲ್ಲೋ. ನಿಜವಾದ ಡ್ರೋನ್ ಮ್ಯಾನ್ ಇಲ್ಲಿದ್ದಾನೆ! Glen Rebello ಡ್ರೋನ್ ಹಾರ್ಬೇಕಾದ್ರೆ ನಾಲ್ಕು ಫ್ಯಾನ್. ನಾಲ್ಕು ಮೋಟರ್. ಒಂದು ಬ್ಯಾಟರಿ. ಮತ್ತೊಂದು ರಿಮೋಟ್ ಸಾಕು ತಾನೇ? ಆಟಿಕೆಗಳಿಂದ ಮೋಟರ್ ಕೀಳಲಾಯ್ತು. ಕಂಪ್ಯೂಟರ್ ಸಿ.ಪಿ.ಯುನಲ್ಲಿ ಕೂಲಿಂಗ್ ಫ್ಯಾನ್ ಇರುತ್ತಲ್ಲ, ಅದನ್ನು ಖರೀದಿಸಲಾಯ್ತು. ಮತ್ತೊಂದು 9 ವೋಲ್ಟ್ ಬ್ಯಾಟರಿ ಸಿಕ್ಕಿಸಿ ಡ್ರೋನ್ ತಯಾರಿಸಿ, ರಿಮೋಟಿನ ಬಟನ್ ಒತ್ತಲಾಯ್ತು. ಅದು ಹಾರಿತಾ? ವಿಮಾನದ ಸದ್ದು ಕೇಳಿದ ಕೂಡಲೇ ಹೊರಗೆ ಬರುವ, ಮದುವೆ ಕಾರ್ಯಕ್ರಮಗಳಲ್ಲಿ ವೀಡಿಯೋ ರೆಕಾರ್ಡಿಂಗಿಗೆ ಬಳಸುವ ಡ್ರೋನ್ ಕಂಡು ಕುತೂಹಲಗೊಳ್ಳುವ ಗ್ಲೆನ್ ರೆಬೆಲ್ಲೋ ರಚಿಸಿದ ಮೊದಲ ಡ್ರೋನ್ ಅದು. ಆಗ ಕೇವಲ 9 ನೇ ತರಗತಿಯ ಹುಡುಗ. ಈಗ 18ರ ಹರೆಯವಷ್ಟೇ. ಉಡುಪಿ ಜಿಲ್ಲೆಯ ಮೂಡುಬೆಳ್ಳೆಯ ಹುಡುಗ ಆಟದ ಸಾಮಾನುಗಳಿಂದ ತಯಾರಿಸಿದ ಮೊದಲ ಡ್ರೋನ್ ಏಳಲೇ ಇಲ್ಲ. ಬೇಸರವಾಯ್ತು. ಹಠ ಮೂಡಿತು. ಕಾರಣ ಹುಡುಕತೊಡಗಿದ. ಅಂತರ್ಜಾಲದಲ್ಲಿ ಅಡ್ಡಾಡಿದ. ಒಂದಷ್ಟು ಜನರ ಪರಿಚಯ ಮಾಡ್ಕೊಂಡ. ಡ್ರೋನಿಗೆ ಬಳಸುವ ಉಪಕರಣಗಳು ಎಲ್ಲೆಲ್ಲಿ ಸಿಗುತ್ತವೆ? ಅದರ ಮೌಲ್ಯಗಳೆಷ್ಟು ಎಂದು ತಿಳಿದುಕೊಂಡ. ಬರೀ ಮೋಟರಿಗೇ ರೂ. 8,000! ಅಷ್ಟು ಹಣ ಎಲ್ಲಿದೆ? ಸ್ಕಾಲರ್ಶಿಪ್ ದುಡ್ಡು, ಅಮ್ಮ, ಅಣ್ಣ ಸಂಬಂಧಿಕರನ್ನು ಓಲೈಸಿ ಸಂಗ್ರಹಿಸಿದ ಹಣದಿಂದ ಸಲಕರಣೆಗಳನ್ನು ತರಿಸಿಕೊಂಡ. ಆದರೆ ಅದನ್ನು ಮುಟ್ಟಲು ಒಂದಿಡೀ ವರ್ಷ ಅಮ್ಮ ಬಿಡಲೇ ಇಲ್ಲ. ಎಸ್ಸೆಸ್ಸೆಲ್ಸಿ ಪರೀಕ್ಷೆ. ಡ್ರೋನ್ ನಿರ್ಮಾಣದ ಕನವರಿಕೆಯಲ್ಲೇ 10ನೇ ತರಗತಿ ಯ ಪಾಠಗಳನ್ನು ಚೆನ್ನಾಗಿ ಓದಿ, ಪರೀಕ್ಷೆ ಬರೆದು 85.6% ಅಂಕಗಳಿಸಿದ. ಪರೀಕ್ಷೆ ಮುಗಿದ ಸಂಜೆಯಿಂದಲೇ ಪ್ರಯೋಗಕ್ಕಿಳಿದ. ಆಧುನಿಕ ಸಲಕರಣೆಗಳಿಂದ ತಯಾರಿಸಿದ ಈ ಎರಡನೇ ಪ್ರಯೋಗವೂ ವಿಫಲ. ಅಲ್ಲೂ ಕುಗ್ಗಲಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಡ್ರೋನ್ ತಯಾರಿಸುವವರನ್ನು ಸಂಪರ್ಕಿಸಿದ. ಯುನೈಟೆಡ್ ಕಿಂಗ್ಡಮ್ ನ ಹವ್ಯಾಸಿ ಡ್ರೋನ್ ಹಾರಾಟಗಾರ Ashcarter ಎಂಬೊಬ್ಬರ ಸ್ನೇಹಿತನಾದ. ಅವ್ರಿಂದ ಪಾಠ ಹೇಳಿಸಿಕೊಂಡು, ಅಲ್ಲಿಂದಲೇ ಒಂದಷ್ಟು ಸಾಮಾಗ್ರಿಗಳನ್ನು, ಅಲ್ಲೇ ಕೆಲಸ ಮಾಡುವ ಅಮ್ಮನ ತಮ್ಮ ಅನಿಲ್ ಡಿಸೋಜ ಪೆರ್ನಾಲ್ ಅವರಿಗೆ ತಿಳಿಸಿ, ತರಿಸಿಕೊಂಡು ಡ್ರೋನ್ ತಯಾರಿಸಿದ. ಅದು ಹಾರಿಯೇ ಬಿಡ್ತು. ಅಲ್ಲಿಂದ ಗ್ಲೆನ್ ಕನಸು ಗರಿಗೆದರಿತು. ಫೋಟೋ, ವೀಡಿಯೋ, ಡೆಲಿವರಿ, ಕೃಷಿ ಚಟುವಟಿಕೆಗಳಿಗೆ ಡ್ರೋನ್ ಬಳಸುವುದರ ಜೊತೆಗೆ ಡ್ರೋನ್ ರೇಸಿಂಗು ಅನ್ನೋದೊಂದು ಉಂಟು ಎಂದು ಕಂಡುಕೊಂಡ. ಮಣಿಪಾಲದಲ್ಲಿ ನಡೆದೊಂದು ರೇಸಿನಲ್ಲಿ ಭಾಗವಹಿಸಿದ. ಸಾಮಾನ್ಯ ಡ್ರೋನುಗಳು ಗಂಟೆಗೆ 50 ರಿಂದ 60 ಕಿ.ಮೀ ವೇಗದಲ್ಲಿ ಚಲಿಸಿದರೆ ರೇಸಿಂಗ್ ಡ್ರೋನುಗಳ ವೇಗ ಗಂಟೆಗೆ 180 ರಿಂದ 220 ಕಿ.ಮೀ ಓಡುವುದನ್ನು ಗಮನಿಸಿದ. ಅಂತಹ ಡ್ರೋನುಗಳನ್ನೂ ತಯಾರಿಸಲು ಗ್ಲೆನ್ ಮುಂದಾದ. ಯಶಸ್ವಿಯಾದ. (https://youtu.be/4lHSuCcKbcA). ಕಳೆದ ಒಂದೂವರೆ ವರ್ಷದಲ್ಲಿ ಈ ಹುಡುಗ ಒಟ್ಟು 22 ಡ್ರೋನ್ ನಿರ್ಮಾಣ ಮಾಡಿದ್ದಾನೆ. ಸಹಜ ಕುತೂಹಲದಿಂದ ಆರಂಭಗೊಂಡು, ಹವ್ಯಾಸವಾಗಿ ಇದೀಗ ಸಣ್ಣ ಪ್ರಮಾಣದ ಉದ್ಯಮವನ್ನೂ ಕೇವಲ 18ರ ವಯಸ್ಸಿನ ಗ್ಲೆನ್ ಮಾಡುತ್ತಿದ್ದಾನೆ. "ಆರಂಭದಲ್ಲಿ ಹೊರಗಿನಿಂದ ಖರೀದಿಸುವ ಒಂದು ಡ್ರೋನಿನ ಬೆಲೆ ಕನಿಷ್ಟ ಒಂದೂವರೆ ಲಕ್ಷದ ಮೇಲಿತ್ತು. ಅದೇ, ಉಪಕರಣಗಳನ್ನು ಖರೀದಿಸಿ ತಯಾರಿಸಿದಾಗ ಕೇವಲ ₹32,000ವಷ್ಟೇ ತಗುಲಿತು. ನಿರ್ಮಾಣದ ಜೊತೆಗೆ ರಿಪೇರಿಯನ್ನೂ ಕಲಿತೆ. ಊರ ಛಾಯಾಗ್ರಾಹಾಕರುಗಳಿಗೆ, ಮುಂಬೈಯ ಕೆಲವು ಸಿನಿಮಾ ಮಂದಿಗೆ ನನ್ನ ವಿಷಯ ಗೊತ್ತಾಗಿ ಬೇಡಿಕೆ ಬರಲು ಶುರುವಾದವು" ಎನ್ನುತ್ತಾನೆ ಗ್ಲೆನ್. ಮೊನ್ನೆಯಷ್ಟೇ ದ್ವಿತೀಯ ಪಿ.ಯು.ಸಿ ಫಲಿತಾಂಶ ಬಂದಿದೆ. 72.5% ಅಂಕ ಗಳಿಸಿದ್ದಾನೆ. ಮಣಿಪಾಲದಲ್ಲಿ ಏರೋನಾಟಿಕ್ಸ್ ಇಂಜಿನಿಯರಿಂಗ್ ಕಲಿಯುವ ಆಸೆ ಹೊತ್ತಿದ್ದಾನೆ. ಜೊತೆ ಜೊತೆಗೇ ಡ್ರೋನಿನ ವ್ಯವಹಾರ. ವೀಡಿಯೋ, ರೇಸಿಂಗ್ ಡ್ರೋನುಗಳ ಜೊತೆಗೆ ವಸ್ತುಗಳ ಸಾಗಾಟ, ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವ ಕಸ್ಟಮೈಸ್ಡ್ ಡ್ರೋನ್ ಗಳನ್ನೂ ಗ್ಲೆನ್ ತಯಾರಿಸಿ ಕೊಡುತ್ತಾನೆ. "ನಾನು ಹೊಸತೇನನ್ನೂ ಸಂಶೋಧನೆ ಮಾಡಿಲ್ಲ. ಇರುವ ತಂತ್ರಜ್ಞಾನಗಳನ್ನು ಬಳಸಿ, ಕುತೂಹಲದಿಂದ ಕಲಿತು ಮಾಡುತ್ತಿದ್ದೇನೆ. ಮುಂದೆ ಹೊಸತುಗಳನ್ನು ಸಂಶೋಧಿಸುವ ಪ್ರಯತ್ನ ಮಾಡ್ತೇನೆ" ಎನ್ನುತ್ತಾನೆ ಹುಡುಗ. ಡ್ರೋನ್ ಹಾರಾಟದಲ್ಲಿನ ಕಾರ್ಯಕ್ಷಮತೆ ಕಂಡು ಹಲವು ಅವಕಾಶಗಳು ಈ ಹುಡುಗನನ್ನು ಅರಸಿಬಂದಿವೆ. ಅದರಲ್ಲಿ ಪ್ರಮುಖವಾದದ್ದು Army Yachting Node & Yachting Association of India ಮುಂಬೈಯಲ್ಲಿ ಆಯೋಜಿಸಿದ್ದ ರಾಷ್ಟ್ರ ಮಟ್ಟದ Sail India ಸ್ಪರ್ಧೆ. ಅದರ ಡ್ರೋನ್ ಚಿತ್ರೀಕರಣಕ್ಕೆ ಕರೆದದ್ದು ಉಡುಪಿಯ ಈ ಹುಡುಗ ಗ್ಲೆನ್ ನನ್ನು. (https://youtu.be/do-cs7ftMfY). ಸಣ್ಣಪ್ರಾಯದಲ್ಲೇ ಸಾಧನೆ, ಸಂಪಾದನೆ ಮಾಡುತ್ತಿರುವ ಮಗನ ಬಗ್ಗೆ ತಾಯಿ ಗ್ಲ್ಯಾಡಿಸ್ ರೆಬೆಲ್ಲೋಗೆ ಬಹಳ ಹೆಮ್ಮೆ ಇದೆ. ಮಗನ ಮುಂದೆ ಯಾವತ್ತೂ ಹೇಳಿಕೊಳ್ಳುವುದಿಲ್ಲ. ಯಾವಾಗ ನೋಡಿದರೂ ಡ್ರೋನಿನ ಕನವರಿಕೆಯಲ್ಲೇ ಇರುವ ಗ್ಲೆನ್ ಓದು, ಮುಂದಿನ ಗುರಿಯ ಬಗ್ಗೆ ಚಿಂತೆ ಅವರಿಗೆ. ಆದರೆ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೂ ಸುಲಭದಲ್ಲಿ ಮಾಡಲಾಗದ ಕೆಲಸವನ್ನು ಹೈಸ್ಕೂಲು, ಪಿಯುಸಿಯಲ್ಲೇ ಮಾಡಿ ತೋರಿಸಿದ ಗ್ಲೆನ್ ಭವಿಷ್ಯ ಖಂಡಿತವಾಗಿಯೂ ಉಜ್ವಲವಾಗಲಿದೆ. ಸರಕಾರ, ಸಂಸ್ಥೆ, ಮಾಧ್ಯಮಗಳು ಇಂತಹ ಸಹಜ ಕುತೂಹಲಿ, ಸತ್ಯ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸಬೇಕು. ಈಗ ಮೊಬೈಲ್ ಇಲ್ಲದ ಮನೆಯೇ ಇಲ್ಲ ಅನ್ನುವಂತೆ ಮುಂದೆ ಡ್ರೋನ್ ಬಳಸದ ಕ್ಷೇತ್ರವೇ ಇಲ್ಲ ಅನ್ನುವಷ್ಟರ ಮಟ್ಟಿಗೆ ಅದರ ಉಪಯೋಗಗಳಿವೆ. ಅವುಗಳನ್ನು ಗ್ಲೆನ್ ನಂತಹ ಹುಡುಗರನ್ನು ಬಳಸಿ ಪ್ರಯೋಗ, ಸಂಶೋಧನೆ, ಪ್ರಚಾರ ಮಾಡಿಸಬಹುದು. ಸ್ವಾವಲಂಬಿ, ನವ ಭಾರತ ನಿರ್ಮಾಣ ಮಾಡಬಹುದು. (ಡ್ರೋನ್ ಪ್ರತಾಪನ ಪ್ರಕರಣಗಳ ಹಿನ್ನೆಲೆಯಲ್ಲಿ ಡ್ರೋನುಗಳ ಕುರಿತು ಹೆಚ್ಚು ತಿಳಿದುಕೊಳ್ಳೋಣವೆಂದು ಉಡುಪಿಯ ಪ್ರಸಿದ್ಧ ಛಾಯಾಗ್ರಾಹಕ Focus Raghu ಮೂಡುಬೆಳ್ಳೆಯ ಗ್ಲೆನ್ ಮನೆಗೆ ನನ್ನನ್ನು ಕರೆದೊಯ್ದಿದ್ದರು. ಇಷ್ಟು ಸಣ್ಣ ವಯಸ್ಸಿನಲ್ಲೇ ಡ್ರೋನ್ ಕುರಿತ ಜ್ಞಾನ, ಆಸಕ್ತಿ, ಜೊತೆಗೆ ಉದ್ಯಮ ಕಂಡು ಸ್ಪೂರ್ತಿಯಾಗಿ ಬರೆದ ಲೇಖನವಿದು). Manjunath Kamath
ಸಾದು ಪಾಣಾರ ನೆರವಿಗೆ ಬಂದ ತುಳುನಾಡ ದೈವಾರಾಧಕರ ಸಹಕಾರಿ ಒಕ್ಕೂಟ
Posted On: 16 Jul 2020, 12:17 PM
ತುಲುನಾಡ ದೈವಾರದೆಕೆರ್ನ ಸಹಕಾರಿ ಒಕ್ಕೂಟ ಉಡುಪಿ ಜಿಲ್ಲೆ ಸಾದು ಪಾಣಾರ ಇವರಿಗೆ ಧನಸಹಾಯ ವಿತರಣೆ. ಗಾಳಿ-ಮಳೆಗೆ ಮನೆಯ ಅಂಚು ಹಾಗೂ ಸಿಮೆಂಟಿನ ತಗಡು ಶೀಟ್ ಹಾರಿಹೋಗಿದ್ದು . ಮನೆಗೆ ಸಂಪೂರ್ಣವಾಗಿ ಹಾನಿಯಾಗಿದೆ ... ಇವರ ಸಮಸ್ಯೆಯನ್ನು ಮನಗೊಂಡು. ತುಲುನಾಡ ದೈವಾರದೆಕೆರ್ನ ಸಹಕಾರಿ ಒಕ್ಕೂಟ ಉಡುಪಿ ಜಿಲ್ಲೆ ಇವರ ವತಿಯಿಂದ ಸಾಧು ಪಾನಾರ್ ಮಂಚಿ ಇವರಿಗೆ ಧನಸಹಾಯ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ರಾಘವ ಸೇರಿಗಾರ್, ಪ್ರಧಾನ ಕಾರ್ಯದರ್ಶಿಯಾದ ವಿನೋದ್ ಶೆಟ್ಟಿ, ಕೋಶಧಿಕಾರಿ ಶ್ರೀಧರ್ ಪೂಜಾರಿ ಬೈಕಾಡಿ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.
ದೈವ ಚಾಕಿರಿಯವರಿಗೆ ಸರ್ಕಾರದಿಂದ ಯಾವುದೇ ಸ್ಪಂದನೆ ಸಿಗುತ್ತಿಲ್ಲ - ವಿನೋದ್ ಶೆಟ್ಟಿ
Posted On: 14 Jul 2020, 09:05 PM
ಕರಾವಳಿಯಲ್ಲಿ ಪ್ರಪಂಚದ ಎಲ್ಲೆಡೆ ವ್ಯಾಪಿಸಿರುವ ಮಹಾ ಕೋರನದಿಂದ ಹೊಟ್ಟೆಪಾಡಿಗೆ ಪೆಟ್ಟು ಬಿದ್ದ ದೈವ ಚಾಕ್ರಿ ವರ್ಗದವರಿಗೆ. ದೈವ ಚಾಕ್ರಿ ಪಂಗಡದವರಿಗೆ ಸರ್ಕಾರದಿಂದ ಯಾವುದೇ ಸ್ಪಂದನೆ ಇಲ್ಲ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಜಿಲ್ಲಾಧಿಕಾರಿ ಅವರಿಂದ ಯಾವುದೇ ಮನವಿಗೆ ಸ್ಪಂದನೆ ಇಲ್ಲ ಶಾಸಕರು, ಸಂಸದರು, ಉಸ್ತುವಾರಿ ಸಚಿವರು, ಮಂತ್ರಿಗಳಿಂದ ಯಾವುದೇ ಸ್ಪಂದನೆ ಹಾಗೂ ಸಹಕಾರ ಇಲ್ಲ. ಪರಶುರಾಮ ಸೃಷ್ಟಿಯ ತುಳುನಾಡಿನಲ್ಲಿ ಧರ್ಮ ಅದರ್ಮ ಮಾರ್ಗದಲ್ಲಿ ನಡೆಯುತ್ತಿರುವಾಗ ಧರ್ಮರಕ್ಷಣೆಗೆ ಬೇಕಾಗಿ ಮಿಗಿ ಲೋಕದಲ್ಲಿ ಈಶ್ವರ ದೇವರ ಅನುಗ್ರಹದಲ್ಲಿ ಅನ್ಯಾಯವನ್ನು ನಿರ್ಮೂಲನೆ ಮಾಡಲು ಧರ್ಮರಕ್ಷಣೆಗೆ ಬೇಕಾಗಿ ಸಾವಿರಾರು ದೈವ-ದೇವರು ನೆಲೆಯಾದ ಪುಣ್ಯಭೂಮಿ ನಮ್ಮ ತುಳುವ ನಾಡು. ಜನವರಿಯಿಂದ ಮೇ ತಿಂಗಳ ಕೊನೆಯ ತನಕ ದೈವಾರಾಧನೆ ಕ್ಷೇತ್ರದಲ್ಲಿ ಊರಿನ ಪ್ರಮುಖ ದೇವಸ್ಥಾನ ದೈವಸ್ಥಾನಗಳಲ್ಲಿ ಗರಡಿಗಳಲ್ಲಿ ಹಾಗೂ ಊರಿನ ಮನೆತನದಲ್ಲಿ ದೈವಗಳಿಗೆ ಹರಕೆ ವಾರ್ಷಿಕ ನೇಮೋತ್ಸವ, ತಂಬಿಲ ಸೇವೆ, ಮಾರಿಪೂಜೆ, ದರ್ಶನ ಸೇವೆ, ಹಾಗೂ ಇತರ ಹಲವಾರು ಸೇವೆಗಳು ನಡೆಯುವ ಸಂದರ್ಭ, ಈ ವರ್ಷ ವಿಶ್ವದೆಲ್ಲೆಡೆ ಹಬ್ಬಿರುವ ಕೋರನ ಎಂಬ ರೋಗದಿಂದ ಸರ್ಕಾರದ ಆದೇಶ ಮೇರೆಗೆ ಎಲ್ಲಾ ಸೇವೆಗಳು ಸ್ಥಗಿತಗೊಂಡಿದೆ.. ಇದರಿಂದ ದೈವ ಚಾಕ್ರಿ ವರ್ಗದವರು ತಮ್ಮ ಜೀವನ ನಡೆಸಲು ತುಂಬಾ ಕಷ್ಟ ಪಡುತ್ತಿದ್ದಾರೆ ದೈವ ಆರಾಧನೆ ಕ್ಷೇತ್ರ ಅವರ ಮೂಲ ಕುಲ ಕಸುಬಾಗಿರುತ್ತದೆ. ಉಡುಪಿ ಹಾಗೂ ದಕ್ಷಿಣ ಕನ್ನಡದಲ್ಲಿ ಸುಮಾರು 30 ಸಾವಿರ ಮಂದಿ ದೈವ ಚಾಕ್ರಿ ವರ್ಗದವರು ಇದ್ದಾರೆ. ಈ ಕ್ಷೇತ್ರದಲ್ಲಿ ಸುಮಾರು 20ಕ್ಕೂ ಹೆಚ್ಚು ಪಂಗಡಗಳಿವೆ. ಎರಡು ತಿಂಗಳ ಹಿಂದೆ ಉಡುಪಿ ಜಿಲ್ಲಾಧಿಕಾರಿಗಳಿಗೆ, ಉಸ್ತುವಾರಿ ಸಚಿವರಿಗೆ, ಹಾಗೂ ಮಾನ್ಯ ಸಂಸದರಿಗೆ ಅವರು ಸಿಗದ ಕಾರಣ ಅವರ ಕಚೇರಿಯ ಸಹಾಯಕರಿಗೆ ಒಕ್ಕೂಟದ ಪರವಾಗಿ ಮನವಿ ಸಲ್ಲಿಸಿರುತ್ತೇವೇ. ಆದರೆ ನಮ್ಮ ಸಮಸ್ಯೆಗೆ ಯಾವುದೇ ಪ್ರತಿಕ್ರಿಯೆ ಹಾಗೂ ಸ್ಪಂದನೆ ಸಿಕ್ಕಿರುವುದಿಲ್ಲ. ನಂತರ ತುಳುನಾಡ್ ದೈವರಾಧಕರ ಸಹಕಾರಿ ಒಕ್ಕೂಟದ ಸುಮಾರು 120 ಮಂದಿ ಸದಸ್ಯರು ಒಟ್ಟಾಗಿ ನಮಗೆ ಸಿಗಬೇಕಾದ ಪರಿಹಾರ ಹಾಗೂ ತಕ್ಕಮಟ್ಟಿಗೆ 150 ಜನರ ಒಳಗೆ ದೈವಸ್ಥಾನಗಳ ನಡೆಯುವ ನೇಮೋತ್ಸವ, ಮಾರಿಪೂಜೆ ದರ್ಶನ, ಸೇವೆಗಳಿಗೆ ಅನುಮತಿ ನೀಡಬೇಕಾಗಿ ಮನವಿ ಅಲ್ಲಿ ಕೇಳಿರುತ್ತೇವೆ. ಅನುಮತಿ ಕೊಟ್ಟರೆ ತಕ್ಕಮಟ್ಟಿಗೆ ದೈವ ಚಾಕ್ರಿ ವರ್ಗದವರು ಅದರಲ್ಲಿ ಬರುವ ಸಂಭಾವನೆಯಿಂದ ಜೀವನ ನಡೆಸಬಹುದು ಎಂಬ ಚಿಂತನೆಯಿಂದ ನಾವು ಮಾನ್ಯ ಜಿಲ್ಲಾಧಿಕಾರಿ ಹಾಗೂ ಉಡುಪಿ ಶಾಸಕರಿಗೆ ನಮ್ಮ ಒಕ್ಕೂಟದ ಪರವಾಗಿ ಮನವಿ ಕೊಟ್ಟಿರುತ್ತೇವೆ. ಸುಮಾರು 25 ದಿನದಿಂದ ಸರ್ಕಾರದ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಆಗಲಿ ರಾಜಕಾರಣಿಗಳಿಂದ ಇದರ ಬಗ್ಗೆ ಭರವಸೆ ಬಂದಿರುವುದಿಲ್ಲ. ಮುಂದಿನ ದಿನಗಳಲ್ಲಿ ದಯಮಾಡಿ ನಮ್ಮ ಸಮಸ್ಯೆಗೆ ಸ್ಪಂದಿಸಬೇಕಾಗಿ. ತುಳುನಾಡಿನ ಸಮಸ್ತ ದೈವ ಚಾಕ್ರಿ ವರ್ಗದವರು ತುಳುನಾಡು ದೈವಾರಾಧಕರ ಸಹಕಾರಿ ಒಕ್ಕೂಟ ಉಡುಪಿ ಜಿಲ್ಲಾ ಹಾಗೂ ಎಲ್ಲಾ ಘಟಕದ ಪರವಾಗಿ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಸರ್ವ ಸದಸ್ಯರ ಪರವಾಗಿ ಮನವಿ ಮಾಡಿಕೊಳ್ಳುತ್ತಿದ್ದೇವೆ. ವಿನೋದ್ ಶೆಟ್ಟಿ ಪ್ರಧಾನ ಕಾರ್ಯದರ್ಶಿ
ಉಡುಪಿ ಜಿಲ್ಲಾ ರಂಗಮಂಟಪದ ಮೈದಾನ ಸರಿಯಾಗಿ ನಿರ್ವಹಣೆಯಾಗುತ್ತಿಲ್ಲ
Posted On: 14 Jul 2020, 07:45 AM
ಉಡುಪಿ ಬೀಡಿನಗುಡ್ಡೆ ಜಿಲ್ಲಾ ರಂಗ ಮಂದಿರ ರ ಆವರಣ ಗೋಡೆ ಕುಸಿದು 3 ತಿಂಗಳಾದರೂ ಇನ್ನೂ ದುರಸ್ತಿಯಾಗದ ಕಾರಣ ರಂಗಮಂದಿರ ಆವರಣದಲ್ಲಿ ಕುಡುಕರು, ಅಲೆಮಾರಿಗಳು ತನ್ನ ಆಶ್ರಯತಾಣವಾಗಿ ಮಾಡಿರುತ್ತಾರೆ.ಮೈದಾನದಲ್ಲಿ ಅಲ್ಲಲ್ಲಿ ಬಿದ್ದಿರುವ ಮಧ್ಯದ ಬಾಟಲಿಗಳು ಇದನ್ನು ಪುಷ್ಠಿಕರೀಸಿವೆ. ರಂಗ ಮಂದಿರದ ಎದುರಿನ ಅವರಣ ಗೋಡೆ ಅಲ್ಲದೆ ರಂಗ ಮಂಟಪದ ಎಡ ಭಾಗದ ಅವರಣ ಗೋಡೆ ಸಂಪೂಣ೯ ಕುಸಿದಿದೆ. ಇದರಿಂದ ಕುಡುಕರಿಗೆ ಒಳಗೆ ತೆರಳಲು ಸುಲಭ ಸಾಧ್ಯವಾಗಿದೆ.ರಂಗ ಮಂಟಪದಲ್ಲಿರುವ ಕೊಠಡಿಯ ಎದುರು ನೈಮ೯ಲ್ಯ ದೂರದ ಮಾತಾಗಿದೆ. ಸಕಾ೯ರ ಲಕ್ಷಾಂತರ ರೂಪಾಯಿ ವ್ಯಯಿಸಿ ನಿಮಾ೯ಣಗೊಂಡ ಈ ಜಿಲ್ಲಾ ಮೈದಾನ ರಂಗ ಮಂಟಪದಲ್ಲಿ ಸಕಾ೯ರ ದ ಅಧಿಕೃತ ಕಾಯ೯ಕ್ರಮಗಳು ಹಾಗೂ ಸಾವ೯ಜನಿಕ ಸಭೆ ಸಮಾರಂಭ ನಡೆಯುತ್ತಿದ್ದವು.ಇದೀಗ ಕರೋನಾ ಹಾವಳಿಯಿಂದ ಯಾವುದೇ ಕಾಯ೯ಕ್ರಮ ನಡೆಯದೇ 4 - 5 ತಿಂಗಳುಗಳು ಕಳೆದಿವೆ. ಈ ಆವರಣಗೋಡೆ ಮರು ನಿಮಾ೯ಣ ಮಾಡಬೇಕು ಅದೇ ರೀತಿ ಇದರ ನಿವ೯ಹಣೆಯನ್ನು ಸರಿಯಾಗಿ ನಿವ೯ಹಿಸಲು ವ್ಯವಸ್ಥೆಯನ್ನು ಸಂಬಂಧಪಟ್ಟ ಅಧಿಕಾರಿಗಳು ಮಾಡಬೇಕು ಎಂದು ನಾಗರೀಕರ ಪರವಾಗಿ ವಿನಂತಿ. ರಾಘವೇಂದ್ರ ಪ್ರಭು, ಕವಾ೯ಲು ಯುವ ಲೇಖಕ
ತುಲುನಾಡ ದೈವಾರದೆಕೆರ್ನ ಸಹಕಾರಿ ಒಕ್ಕೂಟದಿಂದ ಬೆಳಪು ರಾಜು ಪೂಜಾರಿಗೆ ನೆರವು
Posted On: 13 Jul 2020, 10:49 PM
ತುಲುನಾಡ ದೈವಾರದೆಕೆರ್ನ ಸಹಕಾರಿ ಒಕ್ಕೂಟ ಒಡಿಪು ಜಿಲ್ಲೆ ಕಾಪು ಪಡುಬಿದ್ರಿ ಘಟಕದ ವತಿಯಿಂದ.. ರಾಜು ಪೂಜಾರಿ ಅವರನ್ನು ಎಲ್ಲಾ ಸದಸ್ಯರು ಉಪಸ್ಥಿತಿಯಲ್ಲಿ ಧನಸಹಾಯದೊಂದಿಗೆ ಶಾಲು, ಹಣ್ಣು , ಹಂಪಲು ಕೊಟ್ಟು ಗೌರವಿಸಲಾಯಿತು. ರಾಜು ಪೂಜಾರಿಯವರು ಬೆಳಪು ಗ್ರಾಮದ ದಿವಂಗತ ಚಂದು ಪೂಜಾರಿ ಮತ್ತು ಅಕ್ಕು ಪೂಜಾರ್ತಿ ದಂಪತಿಯ ಪುತ್ರ, ರಾಜು ಪೂಜಾರಿ ಯವರು ಸಾಂಪ್ರದಾಯಿಕ ಶಿಕ್ಷಣ ಪಡೆಯದಿದ್ದರೂ 25 ವರ್ಷ ಮುಂಬೈಯಲ್ಲಿ ದುಡಿದು ಆ ಬಳಿಕ ದೈವದ ಆಕರ್ಷಣೆಗೆ ಒಳಗಾಗಿ ಊರಲ್ಲಿ ನೆಲೆನಿಂತರು. ಬೆಳಪು ಜಾರಂದಾಯ ದೈವಸ್ಥಾನದಲ್ಲಿ ದೈವದ ಅನುಗ್ರಹ ಎಣ್ಣೆ ಪಡೆದು ದೈವಾರಾಧನೆ ಕ್ಷೇತ್ರದಲ್ಲಿ ಸುಮಾರು 40 ವರ್ಷಕ್ಕಿಂತಲೂ ಹೆಚ್ಚು ಸೇವೆ ಸಲ್ಲಿಸಿದ್ದಾರೆ. ಜಾರಂದಾಯ ಬಂಟ ಪಾತ್ರಿಯಾಗಿ ಎಣ್ಣೆ ಪಡೆದು ಉಡುಪಿ ಜಿಲ್ಲೆಯ ಹತ್ತು ಹಲವಾರು ಪ್ರಸಿದ್ಧ ಕ್ಷೇತ್ರ, ದೈವಸ್ಥಾನಗಳಲ್ಲಿ ಬಂಟ ಪಾತ್ರಿಯಾಗಿ ದರ್ಶನ ಸೇವೆಯನ್ನು ನೀಡಿದ್ದಾರೆ ಐದು ವರ್ಷಗಳ ಹಿಂದೆ ದೈವಾರಾಧನೆ ಕ್ಷೇತ್ರದಲ್ಲಿ ನಿವೃತ್ತಿ ಹೊಂದಿದ್ದಾರೆ. ಇದೀಗ 90ರ ಇಳಿವಯಸ್ಸಿನಲ್ಲಿ ಪತ್ನಿ ಗಿರಿಜಾ ಪೂಜಾರ್ತಿ ಮಕ್ಕಳಾದ ವೆಂಕಟೇಶ್ ಚಂದ್ರಾವತಿ ಗಂಗಾಧರ ರಮೇಶ್ ಬಾಲಕೃಷ್ಣ ಅವರೊಂದಿಗೆ ಸಂತೃಪ್ತ ಜೀವನ ಸಾಗಿಸುತ್ತಿದ್ದಾರೆ.. ಕೋರೋನ ಎಂಬ ಮಹಾರೋಗದ ತುರ್ತು ಸಂದರ್ಭದಲ್ಲಿ ಯಾವುದೇ ಸರ್ಕಾರವು ದೈವ ಚಾಕ್ರಿ ವರ್ಗದವರಿಗೆ ಸಹಾಯಧನ ಇತರ ಯಾವುದೇ ಯೋಜನೆಗಳು ನೆರವಿಗೆ ಬಂದಿರುವುದಿಲ್ಲ ಈ ತುರ್ತು ಸಂದರ್ಭದಲ್ಲಿ ತುಲುನಾಡ ದೈವಾರದೆಕೆರ್ನ ಸಹಕಾರಿ ಒಕ್ಕೂಟ ಒಡಿಪು ಜಿಲ್ಲೆ ಹಾಗೂ ಕಾಪು ಪಡುಬಿದ್ರಿ ಘಟಕದ ಸದಸ್ಯರ ಧನಸಹಾಯ, ನೆರವಿನೊಂದಿಗೆ ಗೌರವಿಸಲಾಯಿತು ರಾಜು ಪೂಜಾರಿಯವರಿಗೆ ತುಳು ನಾಡಿನ ಸಮಸ್ತ ದೈವ-ದೇವರು ಅವರಿಗೆ ಆರೋಗ್ಯ ಆಯುಷ್ಯ ಭಾಗ್ಯ ಕೊಟ್ಟು ಕರುಣಿಸಲಿ ಎಂದು ಸರ್ವ ಸದಸ್ಯರು ಪ್ರಾರ್ಥಿಸುತ್ತೇವೆ.. ಈ ಒಂದು ಸಂದರ್ಭದಲ್ಲಿ ಉಡುಪಿ ಜಿಲ್ಲಾ ಅಧ್ಯಕ್ಷರಾದ ರಾಘವ ಸೇರಿಗಾರ್ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನೋದ್ ಶೆಟ್ಟಿ ಹಾಗೂ ಕಾಪು ಪಡುಬಿದ್ರಿ ಘಟಕದ ಅಧ್ಯಕ್ಷರಾದ ಯಶೋಧರ್ ಶೆಟ್ಟಿ ಉಪಾಧ್ಯಕ್ಷರಾದ ಮಾಧವ ಪಂಬದ ಹಾಗೂ ಸತೀಶ್ ಪೂಜಾರಿ ಶಮ್ಮಿ ಕಪೂರ್ ಕಾರ್ಯಕಾರಿ ಸಮಿತಿ ಸದಸ್ಯರಾದ ಅಶೋಕ್ ಪೂಜಾರಿ ಕಟಪಾಡಿ ಗೌರವಾಧ್ಯಕ್ಷರಾದ ಸುಧಾಕರ್ ಆಚಾರ್ಯ ಹಾಗೂ ಸರ್ವ ಸದಸ್ಯರು ಉಪಸ್ಥಿತಿಯಲ್ಲಿ ಇದ್ದರು. ವರದಿ : ವಿನೋದ್ ಶೆಟ್ಟಿ ಪ್ರಧಾನ ಕಾರ್ಯದರ್ಶಿ ತುಲುನಾಡ ದೈವಾರದೆಕೆರ್ನ ಸಹಕಾರಿ ಒಕ್ಕೂಟ ಒಡಿಪು ಜಿಲ್ಲೆ
ಯುವಸಮುದಾಯ ರೋಟರಿಯೊಂದಿಗೆ ಕೈಜೋಡಿಸಬೇಕು-ಪಡುಬಿದ್ರಿ ರೋಟರಿ
Posted On: 13 Jul 2020, 09:26 PM
ಪಡುಬಿದ್ರಿ: ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕವಾಗಿ ರೋಟರಿ ಸಂಸ್ಥೆಯು ಸೇವೆ ನೀಡುತಿದ್ದು, ಯುವ ಸಮುದಾಯ ರೋಟರಿ ಸಂಸ್ಥೆಯೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಕೈಜೋಡಿಸಬೇಕು ಎಂದು ರೋಟರಿ ಜಿಲ್ಲಾ ಮಾಜಿ ವೈಸ್ಚಯರ್ಮೆನ್ ಇಬ್ರಾಹಿಂ ಸಾಹೇಬ್ ಕರೆ ನೀಡಿದ್ದಾರೆ. ಅವರು ಶನಿವಾರ ಪಡುಬಿದ್ರಿ ಸಾಯಿ ಆರ್ಕೇಡ್ ಸಭಾಭವನದಲ್ಲಿ ಪಡುಬಿದ್ರಿ ರೋಟರಿ ಸಂಸ್ಥೆಯ ೨೦೨೦- ೨೧ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು. ರೋಟರಿಯ ಗೃಹಪತ್ರಿಕೆ ಸ್ಪಂಧನ ಬಿಡುಗಡೆಗೊಳಿಸಿದ ರೋಟರಿ ವಲಯ ಸಹಾಯಕ ಗವರ್ನರ್ ನವೀನ್ ಅಮೀನ್ ಶಂಕರ್ಪು, ಮಾತನಾಡಿ, ಸಮಯವನ್ನು ನಾವು ಕೈಯಲ್ಲಿ ಹಿಡಿದು ಕೊಂಡು, ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಬೇಕು. ಆಗ ಸಮಾಜ ಸುಧಾರಣೆ ಸಾಧ್ಯ ಎಂದರು. ೨೦೨೦-೨೧ನೇ ಸಾಲಿನ ಅಧ್ಯಕ್ಷ ಕೇಶವ ಸಿ. ಸಾಲ್ಯಾನ್, ಕಾರ್ಯದರ್ಶಿ ನಿಯಾಝ್ ತಂಡದ ಪದಗ್ರಹಣವನ್ನು ಅಮೀನ್ ಮತ್ತು ಅವರ ತಂಡದ ಪದಪ್ರಧಾನ ನಡೆಯಿತು. ಪಡುಬಿದ್ರಿ ಗ್ರಾಮ ಪಂಚಾಯತಿಯ ಸ್ವಚ್ಛತಾ ಕರ್ಮಚಾರಿಗಳಾದ ಶಶಿ ಹಾಗೂ ಸುಶಾಂತ್, ರೋಟರಿ ವಲಯ ಮಾಜಿ ಸಹಾಯಕ ಗವರ್ನರ್ ಗಣೇಶ್ ಆಚಾರ್ಯ, ವಲಯ ಮಾಜಿ ಸೇನಾನಿ ರಮೀಝ್ ಹುಸೈನ್, ನಿಕಟಪೂರ್ವ ಅಧ್ಯಕ್ಷ ರಿಯಾಝ್ ಮುದರಂಗಡಿ, ಕಾರ್ಯದರ್ಶಿ ಸಂತೋಷ್, ಕೃಷ್ಣ ಬಂಗೇರ ಮುಂತಾದವರನ್ನು ಸನ್ಮಾನಿಸಲಾಯಿತು. ವಲಯ ಸೇನಾನಿ ಹರೀಶ್ ಶೆಟ್ಟಿ ಪೊಲ್ಯ ಉಪಸ್ಥಿತರಿದ್ದರು. ರಿಯಾಝ್ ಮುದರಂಗಡಿ ಸ್ವಾಗತಿಸಿದರು. ಸಂತೋಷ್ ಪಡುಬಿದ್ರಿ ವರದಿ ವಾಚಿಸಿದರು. ಬಿ.ಎಸ್. ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.
ರೋಟರಿ ಕ್ಲಬ್ ಪಡುಬಿದ್ರಿ 2020-21 ಸಾಲಿನ ಪದಗ್ರಹಣ ಕಾರ್ಯಕ್ರಮ
Posted On: 13 Jul 2020, 09:12 PM
ರೋಟರಿ ಕ್ಲಬ್ ಪಡುಬಿದ್ರಿ ಇದರ 2020- 21 ನೇ ಸಾಲಿನ ಪದಗ್ರಹಣ ಕಾರ್ಯಕ್ರಮ 11/7/20 ಶನಿವಾರದಂದು ನಡೆಯಿತು. ಅಧ್ಯಕ್ಷರಾಗಿ ಕೇಶವ ಸಿ ಸಾಲ್ಯಾನ್ ಮತ್ತು ಕಾರ್ಯದರ್ಶಿಯಾಗಿ ಮುಹಮ್ಮದ್ ನಿಯಾಜ್ ಅಧಿಕಾರವನ್ನು ಸ್ವೀಕರಿಸಿದರು. ಆ ಕಾರ್ಯಕ್ರಮದಲ್ಲಿ ಪದಗ್ರಹಣ ಅಧಿಕಾರಿಯಾಗಿ ಇಬ್ರಾಹಿಂ ಸಾಬ್ ಮುಖ್ಯ ಅತಿಥಿಗಳಾಗಿ ಅಸಿಸ್ಟೆಂಟ್ ಗವರ್ನರ್ ನವೀನ್ ಅಮೀನ್, ವಲಯ ಸೇನಾನಿ ಹರೀಶ್ ಶೆಟ್ಟಿ ಪೊಲ್ಯ , ಜಿಲ್ಲಾ ಪಂಚಾಯತ್ ಸದಸ್ಯರಾದ ಶಶಿಕಾಂತ್ ಪಡುಬಿದ್ರಿ ವೇದಿಕೆಯಲ್ಲಿ ರಿಯಾಜ್ ಮುದರಂಗಡಿ ಹಾಗೂ ಸಂತೋಷ್ ಪಡುಬಿದ್ರಿ ಉಪಸ್ಥಿತರಿದ್ದರು ಇದೇ ಸಂದರ್ಭದಲ್ಲಿ ಪಡುಬಿದ್ರಿ ಪಂಚಾಯತ್ ನಲ್ಲಿ 20 ವರ್ಷ ದಿಂದ ಸೇವೆಸಲ್ಲಿಸುತ್ತಿರುವ ಪೌರಕಾರ್ಮಿಕರಿಗೆ ಸನ್ಮಾನಿಸಿದರು. ಕಾರ್ಯಕ್ರಮವನ್ನು ಬಿಎಸ್ ಆಚಾರ್ಯರು ನಿರ್ವಹಿಸಿದರು.
ನೀಲಾವರ ಗೋಶಾಲೆಗೆ ಒಂದು ಗೋವು ಮತ್ತು ಹಸಿರು ಆಹಾರವನ್ನು ನೀಡಿದ ಪಡುಬಿದ್ರಿಯ ಭಗವತಿ ತಂಡ
Posted On: 12 Jul 2020, 04:53 PM
ಪಡುಬಿದ್ರಿ.12ಜುಲೈ :- ಸಮಾಜ ಸೇವೆಯನ್ನು ಮೂಲದ್ಯೇಯವೆಂದು ಮೈಗೂಡಿಸಿಕೊಂಡಿರುವ ಪಡುಬಿದ್ರಿಯ ಭಗವತಿ ತಂಡ ಕಳೆದ ಎರಡು ದಿನಗಳ ಹಿಂದೆ ಉಡುಪಿಯ ನೀಲಾವರ "ಕಾಮದೇನು" ಗೋಶಾಲೆಗೆ ಒಂದು ಗೋವು ಮತ್ತು ದನದ ಹಸಿರು ಆಹಾರವನ್ನು ಸಮರ್ಪಿಸಲಾಯಿತು.ಈ ಸಂದರ್ಭದಲ್ಲಿ ಪೇಜಾವರ ಮಠದ ಶ್ರೀಗಳಾದ ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀ ಪಾದರು ಮತ್ತು ಭಗವತಿ ತಂಡದ ಸದಸ್ಯರು ಉಪಸ್ಥಿತರಿದ್ದರು ಈವರೆಗೆ 57 ಗೋವನ್ನು ರಕ್ಷಿಸಿ, ನೀಲಾವರ ಗೋಶಾಲೆಗೆ ನೀಡಿರುವುದರಿಂದ, ಗೋಶಾಲೆಯ ಪ್ರಮಾಣಿಕ ಕೈಂಕಾರ್ಯ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ. ಇಂತಹ ಸೇವೆಯನ್ನು ಮಾಡಿರುವ ಭಗವತಿ ತಂಡ ಇನ್ನಷ್ಟು ಒಳ್ಳೆಯ ಕೆಲಸಗಳನ್ನು ಮಾಡಿ.. ಉತ್ತಮ ತಂಡವೆನಿಸಲಿ
ಸರಿಸುಮಾರು 400 ವರ್ಷ ಇತಿಹಾಸವಿರುವ ಉಡುಪಿಯ ಅಬ್ಬರದ ಬೊಬ್ಬರ್ಯ
Posted On: 11 Jul 2020, 08:57 AM
ಉಡುಪಿಯ ಕಾರಣಿಕದ ಕ್ಷೇತ್ರ 400 ವರ್ಷಗಳ ಇತಿಹಾಸವಿರುವ ದೈವಸ್ಥಾನ ಬೊಬ್ಬರ್ಯ ಕಾಂತೇರಿ ಜುಮಾದಿ ಕಲ್ಕುಡ ಕೊರಗಜ್ಜ ಪರಿವಾರ ದೈವಗಳ ದೈವಸ್ಥಾನ ವುಡ್ ಲ್ಯಾಂಡ್ಸ್ ಹೋಟೆಲ್ ಹತ್ತಿರ ಉಡುಪಿಯ ನಗರದ ಹೃದಯ ಭಾಗದಲ್ಲಿದೆ. ಬೊಬ್ಬರ್ಯನ ಉಡುಪಿಗೆ ಆಗಮನದ ವಿಷಯ ತತ್ರ ಯುಗದಲ್ಲಿ ಚಂದ್ರನಿಗೆ ರಾಹು ವಿನಿಂದ ಶಾಪ ವಿಮೋಚನೆ ಗೊಳಿಸಲು ಉಡುಪಿಗೆ ಬಂದಿದ್ದು. ಕಲಿಯುಗದಲ್ಲಿ ಉಡುಪಿಗೆ ಬೊಬ್ಬರ್ಯನ ಆಗಮನ. ಬೊಬ್ಬರ್ಯನು ಇಂದ್ರಾಳಿಗೆ ಬಂದು ಪಂಚ ದುರ್ಗಿ ದೇವಿ ಜೊತೆ ನಿನ್ನ ಸನ್ನಿಧಾನದಲ್ಲಿ ನನಗೆ ನೆಲೆ ನಿಲ್ಲಲು ಜಾಗ ಕೊಡಬೇಕು ಎಂದು ಕೇಳಲು, ದೇವಿಯು ಇಲ್ಲಿ ಬೇಡ ಉಡುಪಿಯಲ್ಲಿ ಅನಂತೇಶ್ವರ ದೇವರ ರಥೋತ್ಸವ ನಡೆಯುತ್ತಿದೆ ಅಲ್ಲಿಗೆ ಹೋದರೆ ನಿನಗೆ ನಿಲ್ಲಲು ಜಾಗ ಸಿಗುವುದು ಎಂದು ದೇವಿಯ ವಾಣಿಯನ್ನು ತಿಳಿದು ಉಡುಪಿ ಅನಂತೇಶ್ವರ ದೇವರ ರಥ ಎಳೆಯುವಾಗ ರಥಕ್ಕೆ ಎದೆಕೊಟ್ಟು ನಿಲ್ಲಿಸಿದನು. ಜನರು ಎಷ್ಟೇ ಪ್ರಯತ್ನ ಪಟ್ಟು ರಥವನ್ನು ಎಳೆದರು ರಥ ಸ್ವಲ್ಪವೂ ಮುಂದೆ ಕದಲುವುದಿಲ್ಲ. ಆ ಸಮಯದಲ್ಲಿ ದೇವಸ್ಥಾನ ಮುಖ್ಯಸ್ಥರು ಚರ ಮಾಡಿ ಜ್ಯೋತಿಷ್ಯ ಪ್ರಶ್ನೆ ರೂಪದಲಿ ನೋಡಲು ಬೊಬ್ಬರ್ಯನ ನೆಂಬ ವಿರಾಟ ರೂಪದ ದೈವವು ರಥವನ್ನು ತಡೆ ಹಿಡಿದಿದೆ ಎಂದು ತಿಳಿಯಿತು ಮತ್ತು ದೈವಕ್ಕೆ ಅನಂತೇಶ್ವರ ದೇವರ ಸನ್ನಿಧಿಯಲ್ಲಿ ನೆಲೆನಿಲ್ಲಲು ಜಾಗವನ್ನು ಒದಗಿಸಿಕೊಡಬೇಕು ಎಂದು ತಿಳಿಯಿತು ಆ ಸಮಯದಲ್ಲಿ ದೇವಸ್ಥಾನ ಮುಖ್ಯಸ್ಥರು ಬೊಬ್ಬರ್ಯನನು ತಂಕು ಪೇಟೆಯಲ್ಲಿದ್ದ. ಜುಮಾದಿ ಮತ್ತು ಕಲ್ಕುಡ ದೈವದೊಂದಿಗೆ ಪ್ರತಿಷ್ಠೆ ಮಾಡಿ ನಂಬುದಾಗಿ ತೀರ್ಮಾನಿಸಿದರು, ನಂತರ ರಥವು ಕದಲಿತು. ಅನಂತರ ತೆಂಕು ಪೇಟೆಯಲ್ಲಿ ಜುಮಾದಿ ಮತ್ತು ಕಲ್ಕುದ ದೈವದ ಒಟ್ಟಿಗೆ ಸ್ಥಾನವನ್ನು ನಿರ್ಮಿಸಿ ಬೊಬ್ಬರ್ಯನನು ನೆಲೆಗೊಳಿಸಿದರು. ಈಗಲೂ ಅನಂತೇಶ್ವರ ದೇವಸ್ಥಾನದ ವತಿಯಿಂದ ಕೋಲಾ ಹೂವಿನ ಪೂಜೆ ವಿಶೇಷ ಪೂಜೆ ಮಾರಿಪೂಜೆ ಪೂಜಾದಿಗಳು ನಡೆಯುತ್ತಿದೆ. ಉಡುಪಿ ನಗರದ ಅಬ್ಬರದ ದೈವವಾಗಿ ಕಾರ್ಣಿಕ ವನ್ನು ಮೆರೆಯುತ್ತಿದೆ. ಈ ಪುಣ್ಯ ಕ್ಷೇತ್ರದ ದೈವಸ್ಥಾನದಲ್ಲಿ ಮೂರು ದಿವಸ ಹೊಸ ನೇಮೋತ್ಸವ ನಡೆಯುತ್ತದೆ. ಮೊದಲ ದಿವಸ ಬೊಬ್ಬರ್ಯನ ನೇಮೋತ್ಸವ ಹಾಗೂ ಸವಾರಿ ಎರಡನೇ ದಿವಸ ಕಾಂತೇರಿ ಜುಮಾದಿ ಹಾಗೂ ಬಂಟ ಪಿಲಿಚಂಡಿ ಹಾಗೂ ಬಂಟ ಆಗು ಪಂಜುರ್ಲಿ ದೈವದ ನೇಮ ನಡೆಯುತ್ತದೆ ಮೂರನೇ ದಿವಸ ಕಲ್ಕುಡ ಬೈಕಡ್ತಿ ಕೊರಗಜ್ಜ ದೈವದ ನೇಮೋತ್ಸವ ನಡೆಯುತ್ತದೆ. ಪ್ರತಿ ತಿಂಗಳು ಸಂಕ್ರಮಣ ಪೂಜೆ ನಡೆಯುತ್ತದೆ. ಸಾವಿರಾರು ಭಕ್ತಾದಿಗಳು ಗಂಧಪ್ರಸಾದ ಹಣ್ಣುಕಾಯಿ ಕಾಯಿ ಮಾಡಿ ಸನ್ನಿಧಾನಕ್ಕೆ ಭೇಟಿಕೊಡುತ್ತಾರೆ ತಮ್ಮ ಕಷ್ಟ ಸಮಸ್ಯೆಗಳನ್ನು ಹೇಳಿಕೊಂಡು ದೈವಕ್ಕೆ ಹರಕೆ ಹೇಳುತ್ತಾರೆ. ದೈವದ ಹೆಸರು ಅಬ್ಬರದ ಬಬ್ಬರ್ಯ ಎಂದೆ ಹೆಸರುವಾಸಿಯಾಗಿದೆ. ಬರಹ :ವಿನೋದ್ ಶೆಟ್ಟಿ ಶೆಟ್ಟಿ ಬೊಬ್ಬರ್ಯ ದೈವಸ್ಥಾನ ಉಡುಪಿ
"ಆನ್ ಲೈನ್ ಆಫ್ ಲೈನ್ ಮಧ್ಯೆ ಮಕ್ಕಳು ಲೈನ್ ತಪ್ಪದಿರಲಿ"
Posted On: 10 Jul 2020, 10:17 PM
ಇತ್ತೀಚೆಗೆ ನಮ್ಮೆಲ್ಲರನ್ನು ಕಾಡುತ್ತಿರುವ ಆತಂಕ ಈ ಕರೋನಾ ವೈರಸ್ ನದ್ದು. ಈ ಮಾರಕ ವ್ಯಾಧಿಯ ಭೀತಿ ಜನಜೀವನದ ಶೈಲಿಯನ್ನು ಬದಲಾಯಿಸಿದೆ ಎಲ್ಲರನ್ನು ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗಿಸಿದೆ. ಇದರ ಮಧ್ಯೆ ದೊಡ್ಡ ಸವಾಲು ಇದ್ದದ್ದು ಶಿಕ್ಷಣ ಕ್ಷೇತ್ರಕ್ಕೆ ಶಾಲಾ ಕಾಲೇಜುಗಳ ಪರೀಕ್ಷೆಗಳಾಗಿಲ್ಲ ಎನ್ನುವ ಚಿಂತೆ ಪಾಲಕ, ಶಿಕ್ಷಕರನ್ನು ಕಾಡುತ್ತಿದೆ.ಶಿಕ್ಷಣವನ್ನು ಅತ್ಯಂತ ಸ್ಪಧಾ೯ತ್ಮಕವಾಗಿ ಸ್ವೀಕರಿಸಿದ ಮಕ್ಕಳು ಆತಂಕಕ್ಕೆ ಒಳಗಾದಾಗ ಈ ಕ್ಷೇತ್ರಕ್ಕೆ ತಂತ್ರಜ್ಞಾನದ ನೆರಳು ಬಿದ್ದಿದೆ.ಇದರ ಸಾಧಕ ಬಾಧಕದ ಬಗ್ಗೆ ಯೋಚನೆ ಮಾಡುದಾದರೆ, ಪಾಲಕರು ಮಕ್ಕಳ ಕೈಗೆ ಮೊಬೈಲ್ ನೀಡಿದರೆ ದಾರಿ ತಪ್ಪುವ ಭಯದಿಂದ ಮೊಬೈಲ್ ನೀಡಲು ಹಿಂದೆ ಮುಂದೆ ನೋಡುತ್ತಿದ್ದವರು ಇಂದು ಅವರೇ ಸ್ವತಃ ಮಕ್ಕಳ ಕೈಗೆ ಮೊಬೈಲ್ ನೀಡಿ ಸಣ್ಣ ಸ್ಕ್ರೀನ್ ಒಳಗೆ ತರಗತಿ ಪ್ರಾರಂಭವಾಗಿದೆ. ಈಗ ಪಾಲಕರ ಸಮಸ್ಯೆ ಎನೆಂದರೆ ಮಗುವಿನ ಕೈಗೆ ಮೊಬೈಲ್ ನೀಡಿ ಎದ್ದು ಹೋಗುವ ಹಾಗಿಲ್ಲ ಅವರ ಹತ್ತಿರ ಮೂರು ನಾಲ್ಕು ಗಂಟೆ ಕುಳಿತಿರಬೇಕಾದ ಅನಿವಾಯ೯ತೆ ಸೃಷ್ಟಿಯಾಗಿದೆ. ಇದರಿಂದ ಸಮಯಕ್ಕೆ ಸರಿಯಾಗಿ ಊಟ ತಿಂಡಿ ತಯಾರು ಮಾಡುವ ಸಾಧ್ಯತೆ ಕಡಿಮೆಯಾಗಿದೆ. ಶಾಲೆಯಲ್ಲಿ ಶಿಕ್ಷಕರು ಕರಿಹಲಗೆಯ ಮೇಲೆ ಬರೆದು ಮಗುವಿಗೆ ಶಿಕ್ಷಣ ನೀಡುವ ರೀತಿ ಶಿಕ್ಷಕರ ಮಾತೃ ವಾತ್ಸಲ್ಯದ ಪ್ರೀತಿ ತೋರುವ ಶಿಕ್ಷಣ ನಾವು ಆನ್ ಲೈನ್ ಶಿಕ್ಷಣದಲ್ಲಿ ಖಂಡಿತ ಕಾಣಲು ಸಾಧ್ಯವಿಲ್ಲ .ಈ ಯಾಂತ್ರಿಕ ಶಿಕ್ಷಣದಿಂದ ಗುರು ಶಿಷ್ಯರ ಸಂಬಂಧ ದೂರವಾಗುವ ಸಂಭವ ಹೆಚ್ಚಾಗುತ್ತಿದೆ.ಪಾಲಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸುವ ಉದ್ದೇಶ ತನ್ನಮಗುವಿನ ಭವಿಷ್ಯ ಉತ್ತಮವಾಗಲಿ ತಾನು ಪಟ್ಟ ಕಷ್ಟದ ಶಿಕ್ಷಣ, ಜೀವನ ತನ್ನ ಮಗ/ಮಗಳಿಗೆ ಸಿಗಬಾರದು ಎಂಬ ಉದ್ದೇಶವಾಗಿದೆ.ಖಾಸಗಿ ಶಾಲೆಗೆ ನೀಡುವ ಶುಲ್ಕ ಹೊಂದಾಣಿಕೆಗೆ ಪಾಲಕರು ಪಡುತ್ತಿರುವ ಕಷ್ಟ ದೇವರಿಗೆ ಪ್ರೀತಿ. ಇದೀಗ ಆನ್ ಲೈನ್ ಶಿಕ್ಷಣದಿಂದ ತನ್ನ ಮಕ್ಕಳಿಗೆ ಎಂಡ್ರಾಯಿಡ್ ಫೋನ್ ಅದೇ ರೀತಿ ಇಂಟರ್ ನೆಟ್ ಪ್ಯಾಕ್ ಹಾಕಬೇಕಾದ ಅನಿವಾಯ೯ತೆ ಯಿದೆ.ಶುಲ್ಕ ಕಟ್ಟಲು ಕಷ್ಟಪಡುವ ತಂದೆ ತಾಯಂದಿರಗೆ ಇದು ಬಿಸಿ ತುಪ್ಪವಾಗಿ ಪರಿಣಮಿಸಿದೆ. ಹೀಗಾಗಿ ಈ ಆನ್ ಲೈನ್ ವ್ಯವಸ್ಥೆಗೆ ಮತ್ತಷ್ಟು ಸಾಲ ಮಾಡುವ ಅನಿವಾಯ೯ತೆಯಿದೆ. ಮೊದಲೇ ಈ ಕರೋನಾ ಪರಿಣಾಮದಿಂದ ಜೀವನ ನಡೆಸುದೇ ಕಷ್ಟವಾಗಿರುವ ಪೋಷಕರು ವ್ಯಥೆ ಪಡಬೇಕಾಗಿದೆ. ನಮ್ಮ ಮನೆಯ ಹತ್ತಿರದ ಪಾಲಕರು ಹೇಳಿದ ಮಾತು ನೆನಪಿಗೆ ಬರುತ್ತದೆ ಮೊದಲೇ ಜೀವನ ನಡೆಸಲು ಸಾಲ ಮಾಡಬೇಕಾದ ಅನಿವಾಯ೯ತೆ ಇರುವ ನಾವು ಈ ಆನ್ ಲೈನ್ ನಿಂದ ದಿಕ್ಕೆ ತೋರದಿರುವ ದೋಣಿಯಾಗಿದ್ದೆವೆ" ಅವರ ಮಾತು ಎಷ್ಟೋ ಮಂದಿ ಪಾಲಕರಿಗೆ ಅನ್ವಯವಾಗುತ್ತದೆ.ಕೆಲವು ಖಾಸಗಿ ಶಾಲೆಗಳು ಇದನ್ನು ಹಗಲು ದರೋಡೆಯಾಗಿ ಮಾಡಿರುವುದು ಒಪ್ಪತಕ್ಕ ವಿಷಯವಲ್ಲ.ಸಕಾ೯ರಕ್ಕೆ ಈ ಬಗ್ಗೆ ಇರುವ ಗೊಂದಲ ಇನ್ನು ಸರಿಯಾಗಿಲ್ಲ. ಕಾಲೇಜಿಗೆ ಹೋಗುವ ಮಕ್ಕಳದ್ದು ಇನ್ನೊಂದು ಕಥೆ .ಅಪ್ಪ ಅಮ್ಮನ ಒತ್ತಾಯಕ್ಕೆ ಮಣಿದು ಕಂಪ್ಯೂಟರ್, ಲ್ಯಾಪ್ ಟಾಪ್ ತೆರೆದು ಆನ್ ಲೈನ್ ತರಗತಿಗೆ ಲಾಗಿನ್ ಮಾಡಿ ಕೂತರೂ ಪಾಠದಲ್ಲಿ ಏಕಾಗ್ರತೆಯಿಲ್ಲ ಮನ ಬಂದಂತೆ ಸಾಮಾಜಿಕ ಜಾಲ ತಾಣದ ಆನ್ವೇಷಣೆ ಯಲ್ಲಿ ಮಗ್ನರಾಗಿರುತ್ತಾರೆ ಎಂಬುದು ಬಹಳಷ್ಟು ಪಾಲಕರ ದೂರು.ತರಗತಿಯಲ್ಲಿಯೇ ಈ ಮನೋಭಾವದ ವಿದ್ಯಾಥಿ೯ ಯ ಕಡೆಗೆ ಗಮನ ಹರಿಸುದೇ ಕಷ್ಟವಾಗಿರುವಾಗ ಈ ಆನ್ ಲೈನ್ ನಲ್ಲಿ ಕೇವಲ ಕಾಟಚಾರಕ್ಕಾಗಿ ತರಗತಿ ಯಾಗುತ್ತಿದೆ ಎಂಬುವುದು ಉಪನ್ಯಾಸಕರ ವಾದ. ಈ ವಾದ ವಿವಾದದ ಮಧ್ಯೆ ಮಕ್ಕಳ ಮೇಲೆ ಈ ರೀತಿಯ ಶಿಕ್ಷಣ ಯಾವ ರೀತಿ ಪರಿಣಾಮ ಬೀಳುತ್ತದೆ ಎನ್ನುವುದು ಮುಖ್ಯವಾಗಿದೆ. ಶಾಲಾ ತರಗತಿಯೊಳಗೆ ಮೌನವಿರುತ್ತದೆ ಶಿಕ್ಷಕರು ಪಾಠ ಮಾಡುವ ಸಂದಭ೯ ವಿದ್ಯಾಥಿ೯ಗಳು ನೋಟ್ಸ್ ಮಾಡುವುದು ಮುಖ್ಯಾಂಶಗಳು ಗುರುತು ಹಾಕುವ ಸಂದಭ೯ ಅವರಿಗೆ ಮನನವಾಗುತ್ತದೆ. ಶಿಕ್ಷಕರ ಮೇಲಿನ ಗೌರವ, ಭಯದಿಂದ ಪಾಠವನ್ನು ಓದುತ್ತಾರೆ ಇದರಿಂದ ವಿದ್ಯಾಥಿ೯ಗಳಿಗೆ ಪರೀಕ್ಷಾ ದೃಷ್ಟಿಯಿಂದ ಅಲ್ಲದೆ ಸಾಂಪ್ರದಾಯಿಕ ಶಿಕ್ಷಣದ ದೃಷ್ಠಿಯಿಂದ ಒಳ್ಳೆಯದು. ಆದರೆ ಆನ್ ಲೈನ್ ನಲ್ಲಿ ಯಾವುದೇ ಸಂವಾದ ಚಚೆ೯ಯಿಲ್ಲದ ಏಕಮುಖ ಸಂವಹನವಾಗಿದೆ. ಕೇವಲ ಖಾಸಗಿ ಶಾಲೆಗಳಿಗೆ ಮಾತ್ರ ಈ ಅನ್ ಲೈನ್ ವ್ಯವಸ್ಥೆ ಯಾಕೆ ಸಕಾ೯ರಿ ಶಾಲೆಯ ವಿದ್ಯಾಥಿ೯ಗಳ ಬಗ್ಗೆ ಯಾಕೆ ಚಿಂತನೆಯಿಲ್ಲ ಎಂಬ ವಾದವೂ ಇದೆ. ಮಕ್ಕಳ ಹಕ್ಕುಗಳ ಆಂದೋಲನದ ಒತ್ತಾಯದ ಪ್ರಕಾರ: ಮಕ್ಕಳಿಗೆ ಉಚಿತ ಇಂಟರ್ ನೆಟ್ ನೀಡಬೇಕು. ಆರ್.ಟಿ.ಇ ವಿದ್ಯಾಥಿ೯ಗಳಿಗೆ ಉಚಿತ ಕಂಪ್ಯೂಟರ್ ವ್ಯವಸ್ಥೆ ನೀಡಬೇಕು. ಮಕ್ಕಳ ರಕ್ಷಣಾ ನಿಯಮಗಳನ್ನು ಜಾರಿಗೆ ತರಬೇಕು. ಶಿಕ್ಷಕರಿಗೆ ತರಬೇತಿಯ ವ್ಯವಸ್ಥೆಯಾಗಬೇಕು. ಮಕ್ಕಳ ಸ್ವಾತಂತ್ರಕ್ಕೆ ಧಕ್ಕೆಯಾಗಬಾರದು ಎಂಬ ಅಂಶಗಳನ್ನು ಸಕಾ೯ರಕ್ಕೆ ಸಲ್ಲಿಸಿದೆ. ಮತ್ತೊoದು ವಾದ ಪ್ರಕಾರ ಈಗೀರುವ ಪರಿಸ್ಥಿತಿಯಲ್ಲಿ ಶಾಲೆ ಕಾಲೇಜುಗಳನ್ನು ತೆರೆಯುವುದು ಸರಿಯಲ್ಲ. ಮಕ್ಕಳು ಸಮಾಜದ ಆಸ್ತಿ ಈ ಅಸ್ತಿಗೆ ಶಕ್ತಿ ತುಂಬಿಸುವ ಕಾಯ೯ ಶಿಕ್ಷಕರಿಂದ ನಡೆಯುತ್ತಿದೆ. ಎಲ್ಲರ ಹಿತದೃಷ್ಠಿಯಿಂದ ಈಗಿರುವ ಈ ಪರಿಸ್ಥಿತಿಯಲ್ಲಿ ಆನ್ ಲೈನ್ ಶಿಕ್ಷಣ ಒಳ್ಳೆಯದು ಆದರೆ ಈ ಬಗ್ಗೆ ಪೋಷಕರಿಗೆ ತಿಳಿ ಹೇಳುವುದು ಅಗತ್ಯವಿದೆ.ಹೊಸ ತನಕ್ಕೆ ಬದಲಾವಣೆ ಸಂದಭ೯ ಹಲವಾರು ತೊಂದರೆಯಿರುತ್ತದೆ ಆದರೆ ಅದೆಲ್ಲವನ್ನು ನಿವಾರಿಸಿ ಮುಂದೆ ಸಾಗಬೇಕು. ಮಕ್ಕಳ ಭವಿಷ್ಯದ ದೃಷ್ಠಿ ಯಿoದ ಇದು ಅಗತ್ಯವಿದೆ. ನಿರಾಸೆ ಬೇಡ ಆಶಾವಾದಿಯಾಗಿರೋಣ.ಶಾಲೆ ಕಾಲೇಜುಗಳು ವ್ಯಾಪಾರಿ ಮನೋಭಾವನೆ ಕಡಿಮೆ ಮಾಡಲಿ ಸಕಾ೯ರ ಈ ಬಗ್ಗೆ ಸ್ಪಷ್ಟ ನಿಧಾ೯ರ ತಿಳಿಸಲಿ .ಈ ಕರೋನಾದೊಂದಿಗೆ ಬದುಕುವ ಸಂದಭ೯ ಆಗುವ ತೊಂದರೆಗಳನ್ನು ಸಮಥ೯ವಾಗಿ ಎದುರಿಸೋಣ.ಮಕ್ಕಳ ಭವಿಷ್ಯ ಅದೇ ರೀತಿ ನಮ್ಮ ಭವಿಷ್ಯದ ಹಿತ ದೃಷ್ಠಿಯಿಂದ ಜಾಗ್ರತೆಯಾಗಿರೋಣ. ಅದಷ್ಟು ಬೇಗ ಈ ವ್ಯಾಧಿ ದೂರವಾಗಿ ಶಾಲೆ ಕಾಲೇಜುಗಳಲ್ಲಿ ಮಕ್ಕಳ್ಳ ಕಲರವ ಮತ್ತೊಂಮ್ಮೆ ಮೊಳಗಲಿ' ಭರವಸೆಯ ಹೊಸ ಬೆಳಕು ಮೂಡಲಿ.ಕಟ್ಟುವೆವು ನಾವು ಹೊಸ ನಾಡನ್ನು ಕಲೆಯ ಬೀಡನ್ನು ಎಂಬಂತೆ ಜೊತೆಯಾಗಿ ಬೆಳೆಯೋಣ. ರಾಘವೇಂದ್ರ ಪ್ರಭು, ಕವಾ೯ಲು ಉಡುಪಿ ಯುವ ಲೇಖಕರು, ಶಿಕ್ಷಣ ಪ್ರೀಯರು
