Updated News From Kaup
ಕಾಪು : ಅಗಲಿದ ಜಯಕರ ಸುವರ್ಣರಿಗೆ ನುಡಿ ನಮನ

Posted On: 07-08-2024 05:49PM
ಕಾಪು : ಉಡುಪಿ ಜಿಲ್ಲಾ ಕಾರ್ಯ ಸಂಘದ ಮಾಜಿ ಅಧ್ಯಕ್ಷ ಜಯಕರ ಸುವರ್ಣ ಅವರಿಗೆ ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಬುಧವಾರ ನುಡಿ ನಮನವನ್ನು ಸಂಘದ ಕಛೇರಿಯಲ್ಲಿ ಸಲ್ಲಿಸಲಾಯಿತು.
ಸಂಘದ ಅಧ್ಯಕ್ಷ ಹರೀಶ್ ಹೆಜ್ಮಾಡಿ, ಮಾಜಿ ಅಧ್ಯಕ್ಷ ರಾಕೇಶ್ ಕುಂಜೂರು, ಜಿಲ್ಲಾ ಸಮಿತಿಯ ಉಪಾಧ್ಯಕ್ಷ ಬಾಲಕೃಷ್ಣ ಪೂಜಾರಿ ನುಡಿ ನಮನ ಸಲ್ಲಿಸಿದರು.
ಸಂಘದ ಕೋಶಾಧಿಕಾರಿ ಹೇಮನಾಥ ಪಡುಬಿದ್ರಿ, ಜಿಲ್ಲಾ ಸಮಿತಿಯ ವಿಜಯ ಉಚ್ಚಿಲ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ದ.ಕ, ಉಡುಪಿ ಜಿಲ್ಲೆ : ಕಾಪು ವಲಯದ 33ನೇ ವಾರ್ಷಿಕ ಸಭೆ

Posted On: 05-08-2024 07:38PM
ಕಾಪು : ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಸಂಘಟನೆ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ (ರಿ.) ದಕ್ಷಿಣ ಕನ್ನಡ - ಉಡುಪಿ ಜಿಲ್ಲೆ ಕಾಪು ವಲಯದ 33ನೇ ವಾರ್ಷಿಕ ಸಭೆ ಉಚ್ಚಿಲ ಮಹಾಲಕ್ಷ್ಮಿ ಸಭಾಭವನದಲ್ಲಿ ನಡೆಯಿತು.
ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯ ಜಿಲ್ಲಾಧ್ಯಕ್ಷ ಪದ್ಮಪ್ರಸಾದ್ ಜೈನ್ ಸಭೆಯನ್ನು ಉದ್ಘಾಟಿಸಿದರು.
ಕಾಪು ವಲಯದ ಅಧ್ಯಕ್ಷ ಸಚಿನ್ ಉಚ್ಚಿಲ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಎಸ್.ಕೆ.ಪಿ.ಎ ದಕ್ಷಿಣ ಕನ್ನಡ -ಉಡುಪಿ ಜಿಲ್ಲೆ ಉಪಾಧ್ಯಕ್ಷ ರಮೇಶ್ ಕಲಾಶ್ರೀ, ಎಸ್.ಕೆ.ಪಿ.ಎ ಸಂಘಟನಾ ಕಾರ್ಯದರ್ಶಿ ಕೃಷ್ಣರಾವ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ ಬಂಟ್ವಾಳ, ಎಸ್.ಕೆ.ಪಿ.ಎ. ವಿವಿಧೋದ್ದೇಶ ಸಹಕಾರಿ ಸಂಘ ನಿ. ನಿರ್ದೇಶಕ ರವಿಕುಮಾರ್ ಕಟಪಾಡಿ, ಎಸ್.ಕೆ.ಪಿ.ಎ.ಕಾಪು ವಲಯ ಗೌರವಾಧ್ಯಕ್ಷ ಕರುಣಾಕರ ನಾಯಕ್, ಜಿಲ್ಲಾ ಕಟ್ಟಡ ಸಮಿತಿ ವಲಯ ಪ್ರತಿನಿಧಿ ವಿನೋದ್ ಕಾಂಚನ್, ವಲಯದ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಭಟ್, ವಲಯದ ಉಪಾಧ್ಯಕ್ಷರುಗಳಾದ ಸಂತೋಷ್ ಕಾಪು ಮತ್ತು ಸತೀಶ್ ಎರ್ಮಾಳು, ವಲಯದ ಕೋಶಾಧಿಕಾರಿ ಕಿರಣ್ ಕಾಪು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪಡುಬಿದ್ರಿ ರೋಟರಿ ಕ್ಲಬ್ ಮತ್ತು ಇನ್ನರ್ ವೀಲ್ ಕ್ಲಬ್ ವತಿಯಿಂದ ಆಟಿದ ಗಮ್ಮತ್ತ್

Posted On: 04-08-2024 05:29PM
ಪಡುಬಿದ್ರಿ : ಜಾನಪದ ಶೃೆಲಿಯ ಬದುಕು, ಆಹಾರ ಪದ್ದತಿಗಳು ಇಂದಿಗೂ ರೋಗ ಮುಕ್ತ ಜೀವನಕ್ಕೆ ಶಕ್ತಿಯಾಗಿದೆ. ಇಂದಿನ ಅಧುನಿಕ ಆಹಾರ ಪದ್ದತಿಗಳು ಮನುಷ್ಯನ ಆಯುಷ್ಯವನ್ನು ನುಂಗಿ ಬಿಡುತ್ತಿದೆ. ಹಿಂದಿನ ಹಿರಿಯರ ಜೀವನ ನಮ್ಮಗೆಲ್ಲ ಮಾದರಿಯಾಗಿದೆ. ಸೂರ್ಯನ ಬೆಳಕು ಕಡೆಮೆಯಾದಂತೆ ಅಟಿ ತಿಂಗಳಲ್ಲಿ ರೋಗರೋಜಿನ ಗಳು ಹೆಚ್ಚಾಗುತ್ತಿದ್ದವು. ಇದಕ್ಕಾಗಿ ವಿವಿಧ ಗಿಡ ಮೂಲಿಕೆಗಳ ಕಷಾಯ, ಆಹಾರ ಪದಾರ್ಥಗಳನ್ನು ಸೇವಿಸುತ್ತಿದ್ದರು ಎಂದು ಸುರತ್ಕಲ್ ರಿದಮ್ ಫೌಂಡೇಶನ್ ನಿರ್ದೇಶಕ ಸುಧಾಕರ್ ಸಾಲ್ಯಾನ್ ಹೇಳಿದರು. ಅವರು ಪಡುಬಿದ್ರಿ ರೋಟರಿ ಕ್ಲಬ್ ಮತ್ತು ಇನ್ನರ್ ವೀಲ್ ಕ್ಲಬ್ ವತಿಯಿಂದ ಪಡುಬಿದ್ರಿ ಸಹಕಾರ ಸಂಗಮದಲ್ಲಿ ನಡೆದ ಆಟಿದ ಗಮ್ಮತ್ತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಈ ಸಂದರ್ಭ ತುಳು ಸಾಹಿತಿ, ಜಾನಪದ ವಿದ್ವಾಂಸ ಸುಧಾಕರ್ ಸಾಲ್ಯಾನ್ ರವರನ್ನು ಸನ್ಮಾನಿಸಲಾಯಿತು.

ರೋಟರಿ ಅಧ್ಯಕ್ಷೆ ತಸ್ನೀನ್ ಅರಾ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ರೋಟರಿ ಪೂರ್ವಾಧ್ಯಕ್ಷ ಪಿ.ಕೃಷ್ಣ ಬಂಗೇರ, ಇನ್ನರ್ ವೀಲ್ ಅಧ್ಯಕ್ಷೆ ರಾಜೇಶ್ವರಿ ಅವಿನಾಶ್, ರೋಟರಿ ಕಾರ್ಯದರ್ಶಿ ಹೇಮಲತಾ ಸುವರ್ಣ, ಕಾರ್ಯಕ್ರಮ ನಿರ್ದೇಶಕರಾದ ಪುಷ್ಪಲತಾ ಗಂಗಾಧರ್, ಸುನೀತಾ ಭಕ್ತವತ್ಸಲ ಉಪಸ್ಥಿತರಿದ್ದರು.

ತಸ್ನೀನ್ ಅರಾ ಸ್ವಾಗತಿಸಿದರು. ಸಂತೋಷ್ ಪಡುಬಿದ್ರಿ ಪ್ರಸ್ತಾವನೆಗೃೆದರು. ಬಿ.ಎಸ್ ಆಚಾರ್ಯ ನಿರೂಪಿಸಿದರು. ಸ್ನೇಹಾ ಪ್ರವೀಣ್ ವಂದಿಸಿದರು. ಆಟಿ ತಿಂಗಳ ವಿಶೇಷ ಆಹಾರ ಪದಾರ್ಥಗಳನ್ನು ಉಣ ಬಡಿಸಲಾಯಿತು.
ಪಲಿಮಾರು : ಹೊೖಗೆ ಫ್ರೆಂಡ್ಸ್ ವತಿಯಿಂದ ಆಟಿ ಅಮಾವಾಸ್ಯೆಯ ಔಷಧೀಯ ಕಷಾಯ ವಿತರಣೆ

Posted On: 04-08-2024 05:15PM
ಪಲಿಮಾರು : ಹೊೖಗೆ ಫ್ರೆಂಡ್ಸ್ ಹೊೖಗೆ (ರಿ.) ಪಲಿಮಾರು ಸಂಸ್ಥೆಯ ವತಿಯಿಂದ ಸತತ ಐದನೇ ವರುಷದ ಆಟಿ ಅಮಾವಾಸ್ಯೆಯ ಔಷಧೀಯ ಕಷಾಯ ವಿತರಿಸಲಾಯಿತು.
ಪಲಿಮಾರು ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನ ಅರ್ಚಕರಾದ ಶ್ರೀನಿವಾಸ ಉಡುಪ, ಶರತ್ ಉಡುಪ, ಹೊೖಗೆ ಫ್ರೆಂಡ್ಸ್ ಸಂಸ್ಥೆಯ ಅಧ್ಯಕ್ಷರಾದ ರಿತೇಶ್ ದೇವಾಡಿಗ, ಉಪಾಧ್ಯಕ್ಷ ಸಂತೋಷ್ ದೇವಾಡಿಗ, ಕಾರ್ಯದರ್ಶಿ ಸತೀಶ ಕುಮಾರ್, ರಾಘವೇಂದ್ರ ಸುವರ್ಣ, ಜ್ಞಾನೇಶ್ , ಲಕ್ಷ್ಮಣ್ ಕೋಟ್ಯಾನ್, ಅರುಣ್ ಪೂಜಾರಿ, ರೋಷನ್, ಶ್ರೀನಿತ್, ಶ್ರೀಜಿತ್, ಅಂಕಿತ್, ಸಂಪತ್ ಉಪಸ್ಥಿತರಿದ್ದರು.
ತೆಂಕ ಎರ್ಮಾಳು ಅಟೋ ರಿಕ್ಷಾ ನಿಲ್ದಾಣಕ್ಕೆ ಸಿಮೆಂಟ್ ಬೆಂಚ್ಗಳ ಕೊಡುಗೆ

Posted On: 04-08-2024 04:57PM
ಎರ್ಮಾಳು : ತೆಂಕ ಎರ್ಮಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಅಟೋ ರಿಕ್ಷಾ ನಿಲ್ದಾಣಕ್ಕೆ ಬಹುದಿನಗಳ ಬೇಡಿಯ ಸಿಮೆಂಟ್ ಬೆಂಚ್ಗಳನ್ನು ದಾನಿಯೋರ್ವರು ನೀಡಿದ್ದು, ಈ ಸಂದರ್ಭ ಅವರನ್ನು ಎರ್ಮಾಳು ಅಟೋ ಯೂನಿಯನ್ ವತಿಯಿಂದ ಗೌರವಿಸಲಾಯಿತು.

ಪೂಂದಾಡು ಕುಟ್ಟಿ ಪೂಜಾರಿಯವರ ಪುತ್ರ ದಿನೇಶ್ ಪೂಜಾರಿಯವರು ಸುಮಾರು ಇಪ್ಪತ್ತು ಸಾವಿರ ರೂಪಾಯಿ ಮೌಲ್ಯದ ನಾಲ್ಕು ಸಿಮೆಂಟ್ ಬೆಂಚ್ಗಳನ್ನು ಕೊಡುಗೆಯಾಗಿ ನೀಡಿದ್ದಾರೆ.
ಈ ಸಂದರ್ಭ ಎರ್ಮಾಳು ಅಟೋ ಚಾಲಕ ಮಾಲಕ ಸಂಘದ ಅಧ್ಯಕ್ಷ ಸುರೇಶ್ ಎರ್ಮಾಳ್, ಉಪಾಧ್ಯಕ್ಷ ರಾಜು ಪೂಜಾರಿ, ಕಾರ್ಯದರ್ಶಿ ಭರತ್ ಶೆಟ್ಟಿಗಾರ್, ಕೋಶಾಧಿಕಾರಿ ನದೀಮ್, ತೆಂಕ ಗ್ರಾ.ಪಂ. ಸದಸ್ಯರಾದ ಸಂತೋಷ್, ಮನೋಜ್ ಹಾಗೂ ಅಟೋ ಯೂನಿಯನ್ ಸದಸ್ಯರು ಉಪಸ್ಥಿತರಿದ್ದರು.
ಪಡುಬಿದ್ರಿ : ರಸ್ತೆ ದುರಸ್ತಿ ಕಾರ್ಯ ಪೂರ್ಣ ; ಸೋಮವಾರದಿಂದ ಬ್ಲೂ ಫ್ಲಾಗ್ ಬೀಚ್ ವೀಕ್ಷಣೆಗೆ ಅವಕಾಶ

Posted On: 04-08-2024 04:54PM
ಪಡುಬಿದ್ರಿ : ಕಡಲ ಕೊರೆತದಿಂದಾಗಿ ರಸ್ತೆಯ ಸಂಪರ್ಕವನ್ನು ಕಳೆದುಕೊಂಡಿದ್ದ ಬ್ಲೂ ಫ್ಲಾಗ್ ಬೀಚ್ ಗೆ ಹೋಗುವ ಮಾರ್ಗದ ದುರಸ್ತಿ ಕಾರ್ಯ ಪೂರ್ಣಗೊಂಡಿದ್ದು ಆಗಸ್ಟ್ 5, ಸೋಮವಾರದಿಂದ ಪ್ರವಾಸಿಗರ ವೀಕ್ಷಣೆಗೆ ಅವಕಾಶ ಮಾಡಲಾಗಿದೆ.
ಕಾಪು ಕ್ಷೇತ್ರದ ಶಾಸಕರು ಹಾಗೂ ಬಂದರು, ಮೀನುಗಾರಿಕಾ ಸಚಿವರ ಆದೇಶದಂತೆ ಕೇವಲ ಐದು ದಿನದ ಅವಧಿಯಲ್ಲಿ ರಸ್ತೆ ದುರಸ್ತಿ ಕಾರ್ಯವು ಪೂರ್ಣಗೊಂಡಿದೆ ಎಂದು ಬ್ಲೂ ಫ್ಲಾಗ್ ಬೀಚ್ ಮ್ಯಾನೇಜರ್ ವಿಜಯ ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕಾಪು : ಬಿರುವೆರ್ ಕಾಪು ಸೇವಾ ಸಮಿತಿ ವತಿಯಿಂದ ಆಟಿ ಕಷಾಯ ವಿತರಣೆ

Posted On: 04-08-2024 04:33PM
ಕಾಪು : ಆಟಿ ಅಮಾವಾಸ್ಯೆಯ ಪ್ರಯುಕ್ತ ಬಿರುವೆರ್ ಕಾಪು ಸೇವಾ ಸಮಿತಿ ವತಿಯಿಂದ ರವಿವಾರ ಕಾಪು ಪೇಟೆಯಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಹಾಲೆ ಮರದ ತೊಗಟೆಯ ಕಷಾಯವನ್ನು ವಿತರಿಸಲಾಯಿತು.

ಬಿರುವೆರ್ ಕಾಪು ಸೇವಾ ಸಮಿತಿಯ ಸದಸ್ಯ ಮತ್ತು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಕೊಂಬಗುಡ್ಡೆ ಅವರ ನೇತೃತ್ವದಲ್ಲಿ ಮುಂಜಾನೆ ಬೆಳಪುವಿನಿಂದ ಸಂಗ್ರಹಿಸಿ ತಂದ ಹಾಲೆ ಮರದ ತೊಗಟೆಯಲ್ಲಿ ಸುಮಾರು 100 ಲೀಟರ್ ಕಷಾಯವನ್ನು ಸಿದ್ಧಪಡಿಸಲಾಗಿದ್ದು, ಅದರ ಜತೆಗೆ ಮೆಂತೆ ಪಾಯಸವನ್ನೂ ಸರ್ವಧರ್ಮೀಯರಿಗೆ ವಿತರಿಸಲಾಯಿತು.
ಬಿರುವೆರ್ ಕಾಪು ಸೇವಾ ಸಮಿತಿ ಗೌರವಾಧ್ಯಕ್ಷ ಭಾಸ್ಕರ್ ಅಂಚನ್, ಅಧ್ಯಕ್ಷ ಬಾಲಕೃಷ್ಣ ಕೋಟ್ಯಾನ್, ಉಪಾಧ್ಯಕ್ಷ ಸುಧಾಕರ್ ಸಾಲ್ಯಾನ್, ಪದಾಧಿಕಾರಿಗಳಾದ ವಿಕ್ಕಿ ಪೂಜಾರಿ ಮಡುಂಬು, ಅತಿಥ್ ಸುವರ್ಣ ಪಾಲಮೆ, ದೀಪಕ್ ಕುಮಾರ್ ಎರ್ಮಾಳು, ಸದಸ್ಯರಾದ ಪ್ರಶಾಂತ್ ಪೂಜಾರಿ, ಸುಜನ್ ಎಲ್. ಸುವರ್ಣ, ಅನಿಲ್ ಅಮೀನ್ ಕಾಪು, ಅಶ್ವಿನಿ ನವೀನ್, ಸಂಧ್ಯಾ ಬಿ. ಕೋಟ್ಯಾನ್, ಇನ್ನಂಜೆ ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ಸದಾಶಿವ ಪೂಜಾರಿ, ಸ್ಥಳೀಯರಾದ ಶಿವಾನಂದ ಪೂಜಾರಿ ಮುನ್ನ, ರಮೇಶ್ ಪೂಜಾರಿ ಮಲ್ಲಾರು, ಅಶ್ವಿನಿ ಜಿ. ಕೋಟ್ಯಾನ್, ಸಂದೇಶ್ ಪೂಜಾರಿ, ರವಿ ಪೂಜಾರಿ ಮೊದಲಾದವರು ಸಹಕರಿಸಿದರು.
ಕಾಪು : ತಹಶಿಲ್ದಾರ್ ಕಚೇರಿಯ ಆವರಣದಲ್ಲಿದ್ದ ಅಪಾಯಕಾರಿ ಮರ ತೆರವು

Posted On: 04-08-2024 04:27PM
ಕಾಪು : ತಾಲ್ಲೂಕು ಆಡಳಿತ ಸೌಧದ ಆವರಣದಲ್ಲಿ ಅಪಾಯಕಾರಿ ಸ್ಥಿತಿಯಲ್ಲಿದ್ದು ಯಾವುದೇ ಕ್ಷಣದಲ್ಲಿ ಬೀಳಬಹುದಾಗಿದ್ದ ಬೃಹದಾಕಾರದ ಹೆಬ್ಬಲಸಿನ ಮರವೊಂದನ್ನು ಭಾನುವಾರ ತೆರವುಗೊಳಿಸಲಾಯಿತು.
ಈ ಹಿಂದೆಯೇ ಸಿಡಿಲು ಬಡಿದು, ಒಣಗಿ ಹೋಗಿ ಬೀಳುವ ಸ್ಥಿತಿಯಲ್ಲಿ ಇತ್ತು. ಈ ಆವರಣದಲ್ಲಿ ತಹಶಿಲ್ದಾರ್ ಕಚೇರಿ, ಪುರಸಭೆ, ತಾಲ್ಲೂಕು ಪಂಚಾಯತ್, ಸರ್ವೆ ಇಲಾಖೆ ಹೀಗೆ ಹಲವು ಕಚೇರಿಗಳ ಸಮುಚ್ಚಯವಾಗಿರುವ ಆಡಳಿತ ಸೌಧದಲ್ಲಿ ಹಲವು ಕಾರ್ಯಗಳಿಗೆ ಬರುವ ಸಾರ್ವಜನಿಕರ ಸಂಖ್ಯೆ ಹೆಚ್ಚು ಇದೆ. ತಾಲ್ಲೂಕು ಆಡಳಿತ ಸೌಧಕ್ಕೆ ಬರುವ ಸಾರ್ವಜನಿಕರ ವಾಹನಗಳು ಇಲ್ಲಿ ನಿಲ್ಲುತ್ತಿದ್ದವು. ಹಲವು ವರ್ಷಗಳಿಂದ ಇದನ್ನು ತೆರವು ಮಾಡಬೇಕೆಂಬ ಕೂಗು ಕೇಳಿ ಬಂದಿತ್ತು. ಎಷ್ಟೋ ಅಧಿಕಾರಿಗಳು ಆಗಿ ಹೋದರೂ ಫಲ ಸಿಕ್ಕಿರಲಿಲ್ಲ. ಈಗ ತಹಶಿಲ್ದಾರ್ ಡಾ. ಪ್ರತಿಭಾ ಆರ್., ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಜೇಮ್ಸ್ ಡಿಸಿಲ್ವ ಹಾಗೂ ಪುರಸಭಾ ಚೀಫ್ ಆಫೀಸರ್ ನಾಗರಾಜ್ ರವರ ಪ್ರಯತ್ನದಿಂದಾಗಿ ಇಂದು ಅಪಾಯಕಾರಿ ಮರ ತೆರವಾಗಿದೆ.
ಅರಣ್ಯ ಇಲಾಖೆಯ ಅಧಿಕಾರಿಗಳಾದ ಜೀವನ್ ಶೆಟ್ಟಿ, ಮಂಜುನಾಥ್ ರವರ ಸಹಕಾರದಿಂದ ಗೌರವ್, ಜಯ, ಭರತ್, ಪ್ರಜಾನ್ ರವರ ತಂಡ ಈ ದಿನ ಅಪಾಯಕಾರಿ ಮರವನ್ನು ತೆರವು ಮಾಡಿದ್ದಾರೆ. ಭಾನುವಾರವನ್ನೂ ಲೆಕ್ಕಿಸದೆ ಸದಾ ಸಾರ್ವಜನಿಕರ ಸುರಕ್ಷತೆಗೆ ಕರ್ತವ್ಯ ನಿರ್ವಹಿಸುವ ತಹಶಿಲ್ದಾರ್ ಪ್ರತಿಭಾ ರವರ ಬಗ್ಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಸಾರ್ವಜನಿಕರ ಸುರಕ್ಷತೆ ಮುಖ್ಯ. ಹಾಗಾಗಿ ಈ ಮರವನ್ನು ಅರಣ್ಯ ಇಲಾಖೆಯ ಅನುಮತಿ ಮತ್ತು ಸಹಕಾರದಿಂದ ತೆರವು ಮಾಡಿದ್ದೇವೆ. ಈ ರೀತಿ ಬೇರೆಡೆಯಲ್ಲಿ ಎಲ್ಲಿಯಾದರೂ ಅಪಾಯಕಾರಿ ಮರಗಳಿದ್ದರೆ ತಾಲ್ಲೂಕು ಆಡಳಿತದ ಗಮನಕ್ಕೆ ತಂದರೆ ತೆರವುಗೊಳಿಸಲು ಕ್ರಮವಹಿಸಲಾಗುವುದು - ತಹಶಿಲ್ದಾರ್ ಡಾ. ಪ್ರತಿಭಾ ಆರ್.
ಉಚ್ಚಿಲ : ಹಿಂದೂ ರಕ್ಷಾ ವೆಲ್ಫೇರ್ ಟ್ರಸ್ಟ್ ಮೂಳೂರು - ಆಟಿ ಕಷಾಯ ವಿತರಣೆ

Posted On: 04-08-2024 09:29AM
ಉಚ್ಚಿಲ : ಹಿಂದೂ ರಕ್ಷಾ ವೆಲ್ಫೇರ್ ಟ್ರಸ್ಟ್ ಮೂಳೂರು, ಟ್ರಸ್ಟ್ ಸದಸ್ಯರು ಹಾಗೂ ಸಂಜೀವ ಪೂಜಾರಿ ಕಟಪಾಡಿ ಸಹಕಾರದೊಂದಿಗೆ ಆಟಿ ಅಮಾವಾಸ್ಯೆಯ ಪ್ರಯುಕ್ತ ಸತತ 9ನೇ ವರ್ಷ ಹಾಳೆ ಮರದ ತೊಗಟೆಯಿಂದ ಮಾಡಿದ ಕಷಾಯವನ್ನು ಸರಕಾರಿ ಸಂಯುಕ್ತ ಶಾಲೆ ಮೂಳೂರಿನಲ್ಲಿ ಉಚಿತವಾಗಿ ವಿತರಿಸಿದರು.
ಸುಮಾರು 12೦೦ ಜನರು ಕಷಾಯ ಸೇವಿಸಲು ಅನುಕೂಲ ಮಾಡಿಕೊಡಲಾಯಿತು.
ಟ್ರಸ್ಟಿ ಪ್ರತೀಕ್ ಸುವರ್ಣ, ಪ್ರಧಾನ ಕಾರ್ಯದರ್ಶಿ ಧೀರೇಶ್ ಡಿ ಪಿ, ಸದಸ್ಯರಾದ ದಿನೇಶ್ ಪಾಣರ, ಸುನೀಲ್ ಕರ್ಕೇರ, ಅರುಣ್ ಕುಲಾಲ್,ಕಾರ್ತಿಕ್ ಸುವರ್ಣ, ಗಗನ್ ಮೆಂಡನ್, ಆಕಾಶ್, ಅವೀಶ್, ವಿಕಾಸ್, ಶಲಿನ್, ತನೀಶ್, ಪ್ರಜೇಶ್, ಗುರುರಾಜ್ ಪೂಜಾರಿ, ಮನ್ವಿತ್ ಕರ್ಕೇರ, ಜಯೇಶ್ ಸಾಲ್ಯಾನ್ ಉಪಸ್ಥಿತರಿದ್ದರು.
ಪಡುಬಿದ್ರಿ : ಬಾಲಪ್ಪ ಗುರಿಕಾರ ನಟರಾಜ್ ಪಿ ಎಸ್ ನೇತೃತ್ವದಲ್ಲಿ ಕೌಡೂರು ಹೊಸ ಬೆಳಕು ಅನಾಥ ಆಶ್ರಮ ಭೇಟಿ

Posted On: 04-08-2024 09:20AM
ಪಡುಬಿದ್ರಿ : ಪ್ರೀತಿ , ವಾತ್ಸಲ್ಯದ ಬದುಕು ಕಟ್ಟಿ ಕೊಟ್ಟ ತಂದೆ ತಾಯಿಯನ್ನು ಅನಾಥ ಅಶ್ರಮಕ್ಕೆ ದೂಡುವ ಇಂದಿನ ಜನತೆಯ ಮನಸ್ಥಿತಿ ಖೇದಕರವಾಗಿದೆ. ಜೀವನದ ಪಾಠವನ್ನು ಕಲಿಸಿದ ಹಿರಿಯರು ತನ್ನ ಬದುಕಿನ ಕೊನೆ ಕಾಲದಲ್ಲಿ ಅನಾಥ ಅಶ್ರಮದಲ್ಲಿ ಬದುಕುವಂತಾದುದು ತುಂಬಾ ಬೇಸರದ ಸಂಗತಿ. ಬಾಲ್ಯದಲ್ಲಿಯೇ ಮಾನವೀಯತೆ ಮತ್ತು ಮನುಷ್ಯತ್ವ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜೀವನ ಸಾರ್ಥಕತೆಯ ಬದುಕನ್ನು ಕಾಣುತ್ತದೆ ಎಂದು ಪಡುಬಿದ್ರಿಯ ಬಾಲಪ್ಪ ಗುರಿಕಾರ ನಟರಾಜ್ ಪಿ.ಎಸ್ ಹೇಳಿದರು. ಅವರು ಕಾರ್ಕಳ ತಾಲೂಕಿನ ಕೌಡೂರು ಗ್ರಾಮದ ಹೊಸ ಬೆಳಕು ಸೇವಾ ಟ್ರಸ್ಟ್ ವತಿಯಿಂದ ನಡೆಸುವಂತಹ 187 ಜನ ಅನಾಥ ಹಿರಿಯರಿರುವ ಹೊಸ ಬೆಳಕು ಆಶ್ರಮಕ್ಕೆ ಭೇಟಿ ನೀಡಿ ಸುಮಾರು 30 ಸಾವಿರ ರೂಪಾಯಿ ಮೌಲ್ಯದ ದಿನಸಿ ಸಾಮಗ್ರಿ, ಬೆಡ್ ಶಿಟ್ , ದಿಂಬು ಹಾಗು ವೀಲ್ ಚಯರ್ ಗಳನ್ನು ಕೊಡುಗೆಯಾಗಿ ನೀಡಿ ಮಾತನಾಡಿದರು.
ಈ ಸಂದರ್ಭದಲ್ಲಿ ಪಡುಬಿದ್ರಿ ಮುರುಡಿ ಗುರಿಕಾರ ಜಗದೀಶ್ ರಾವ್, ನಾರಾಯಣ್ ರಾವ್ ಮುದರಂಗಡಿ, ಮಲ್ಪೆ ಶಿಫ್ ಯಾರ್ಡ ಇಂಜಿನಿಯರ್ ಶಶಿಕಾಂತ್ ಕೋಟ್ಯಾನ್, ಓಂಕಾರ್ ಕಾಸ್ಟೂಮ್ ಪಾಲುದಾರ ಅರುಣ್ ಕುಮಾರ್, ಪಡುಬಿದ್ರಿ ರೋಟರಿ ನಿಯೋಜಿತ ಅಧ್ಯಕ್ಷ ಸುನಿಲ್ ಕುಮಾರ್, ಪೂರ್ವಾಧ್ಯಕ್ಷರಾದ ಗೀತಾ ಅರುಣ್, ಸಂತೋಷ್ ಪಡುಬಿದ್ರಿ, ನಿಕಟ ಪೂರ್ವ ಕಾರ್ಯದರ್ಶಿ ಪವನ್ ಸಾಲ್ಯಾನ್ , ದೀಕ್ಷಿತ್ ಅಮೀನ್, ಜಯ ಕುಂದರ್, ನಾಗಮ್ಮ ಹಿರಿಯಡ್ಕ, ಹೊಸ ಬೆಳಕು ಸಂಸ್ಥೆಯ ಮೇಲ್ವಿಚಾರಕಿ ತನುಲಾ ಉಪಸ್ಥಿತರಿದ್ದರು.