Updated News From Kaup
ಕಾಪು : ಕಿಶೋರ ಯಕ್ಷಗಾನ - 2023 ಸಮಾರೋಪ
Posted On: 24-12-2023 07:39PM
ಕಾಪು : ಯಕ್ಷ ಶಿಕ್ಷಣ ಟ್ರಸ್ಟ್ (ರಿ.) ಉಡುಪಿ ಇವರು ತರಬೇತಿ ನೀಡಿದ ಕಾಪು ಭಾಗದ ಪ್ರೌಢಶಾಲೆಗಳ ವಿದ್ಯಾರ್ಥಿಗಳ ಯಕ್ಷಗಾನ ಪ್ರದರ್ಶನ "ಕಿಶೋರ ಯಕ್ಷಗಾನ 2023" ಇದರ ಸಮಾರೋಪ ಸಮಾರಂಭ ಕಾಪು ಲಕ್ಷ್ಮೀಜನಾರ್ಧನ ದೇವಸ್ಥಾನ ಮುಂಭಾಗದಲ್ಲಿ ನಡೆಯಿತು.
ಪಲಿಮಾರು : ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ರಕ್ತದಾನ ಶಿಬಿರ
Posted On: 24-12-2023 06:47PM
ಪಲಿಮಾರು : ಹೊಯಿಗೆ ಫ್ರೆಂಡ್ಸ್ (ರಿ.) ಹೊಯಿಗೆ ಪಲಿಮಾರು, ಶ್ರೀ ದೇವಿ ಫ್ರೆಂಡ್ಸ್ ಕ್ಲಬ್ ಅವರಾಲು ಮಟ್ಟು, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ (ರಿ.) ಉಡುಪಿ, ರಕ್ತನಿಧಿ ವಿಭಾಗ ಕೆಎಂಸಿ ಮಣಿಪಾಲ ಇವರ ಸಂಯುಕ್ತ ಆಶ್ರಯದಲ್ಲಿ ಆದಿತ್ಯವಾರ ಸರಕಾರಿ ಪದವಿ ಪೂರ್ವ ಕಾಲೇಜು ಪಲಿಮಾರು ಇಲ್ಲಿ ನಡೆದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಶ್ರೀ ಮಹಾಲಿಂಗೇಶ್ವರ ಪಲಿಮಾರು ಮಹಾಗಣಪತಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀನಿವಾಸ ಉಡುಪ ಉದ್ಘಾಟಿಸಿದರು.
ಉಡುಪಿ : ನಾಯಕತ್ವ ಎಂಬುದು ಒಂದು ಅವಕಾಶ - ಡಾ| ಗೀತಾಮಯ್ಯ
Posted On: 24-12-2023 06:27PM
ಉಡುಪಿ : ನಾಯಕತ್ವ ಎಂಬುದು ಒಂದು ಅವಕಾಶ ಅದನ್ನು ಬಳಸಿಕೊಂಡು ಸಮಾಜದ ವಿವಿಧ ಸ್ಥರದಲ್ಲಿರುವ ಜನರ ಸೇವೆ ಮಾಡುವ ಮೂಲಕ ನಮ್ಮ ಜೀವನವನ್ನು ಸಾರ್ಥಕಗೊಳಿಸಬಹುದು ಎಂದು ಮಾಹೆ ಮಣಿಪಾಲ ವಿ.ವಿಯ ವಿದ್ಯಾರ್ಥಿ ಕ್ಷೇಮಪಾನಾಧಿಕಾರಿ ಡಾ| ಗೀತಾಮಯ್ಯ ಹೇಳಿದರು. ಅವರು ಡಿಸೆಂಬರ್ 23 ರಂದು ಬಡಗು ಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಇದರ ಜಗನ್ನಾಥ ಸಭಾಭವನದಲ್ಲಿ ನಡೆದ ಜೆಸಿಐ ಉಡುಪಿ ಸಿಟಿ ಇದರ 2024 ನೇ ಸಾಲಿನ ಪದ ಪ್ರಧಾನ ಸಮಾರಂಭದಲ್ಲಿ ಮಾತನಾಡಿದರು.
ಕಾಪು : ಮಹಾರಾಷ್ಟ್ರ ಸ್ವಿಮ್ಮಿಂಗ್ ಅಸೋಸಿಯೇಷನ್ 13 ನೇ ರಾಜ್ಯ ಮಟ್ಟದ ಓಪನ್ ಸೀ ಈಜು ಸ್ಪರ್ಧೆ - ದಿಶಿತಾ ಚಂದ್ರಶೇಖರ್ ಪೂಜಾರಿಗೆ ಫಿನಿಶರ್ ಪದಕ
Posted On: 24-12-2023 10:09AM
ಕಾಪು : ಸಿಂಧುದುರ್ಗ ಜಿಲ್ಲಾ ಈಜು ಸಂಘ ಮತ್ತು ಮಾಲ್ವನ್ ನಗರ ಪರಿಷತ್, ಮಹಾರಾಷ್ಟ್ರ ಸ್ವಿಮ್ಮಿಂಗ್ ಅಸೋಸಿಯೇಷನ್ 13 ನೇ ರಾಜ್ಯ ಮಟ್ಟದ ಓಪನ್ ಸೀ ಈಜು ಸ್ಪರ್ಧೆಯು ಡಿಸೆಂಬರ್ 16 ಮತ್ತು 17 ರಂದು ಚಿವ್ಲೆ ಸಮುದ್ರದಲ್ಲಿ ಜರಗಿದ್ದು ಈ ಸ್ಪರ್ಧೆಯಲ್ಲಿ ಕಾಪು ತಾಲೂಕಿನ ಇನ್ನಂಜೆ ಮೂಲದ ದಿಶಿತಾ ಚಂದ್ರಶೇಖರ್ ಪೂಜಾರಿ 2 ಕಿ.ಮೀ ಈಜನ್ನು ಯಶಸ್ವಿಯಾಗಿ ಮುಗಿಸಿ ಫಿನಿಶರ್ ಪದಕ ಪಡೆದಿರುತ್ತಾರೆ.
ಬಂಟಕಲ್ಲು ಇಂಜಿನಿಯರಿಂಗ್ ಕಾಲೇಜಿನಲ್ಲಿ ರಾಷ್ಟ್ರೀಯ ಗಣಿತ ದಿನಾಚರಣೆ
Posted On: 22-12-2023 05:41PM
ಬಂಟಕಲ್ಲು : ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಗಣಿತ ಶಾಸ್ತ್ರ ವಿಭಾಗವು ಐಎಸ್ಟಿಇ ಘಟಕ ಸಹಯೋಗದೊಂದಿಗೆ ಡಿಸೆಂಬರ್ 20 ರಂದು ಭಾರತೀಯ ಗಣಿತಶಾಸ್ತ್ರಜ್ಞ ಶ್ರೀನಿವಾಸ ರಾಮಾನುಜನ್ ಅವರ 136 ನೇ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಗಣಿತ ದಿನಾಚರಣೆಯನ್ನು ಆಚರಿಸಲಾಯಿತು.
ಉಡುಪಿ : ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ - ಮಹಿಳಾ ಘಟಕದ ಸಂಚಾಲಕಿಯಾಗಿ ತಾರಾ ಉಮೇಶ್ ಆಚಾರ್ಯ ಆಯ್ಕೆ
Posted On: 22-12-2023 04:55PM
ಉಡುಪಿ : ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ (ಎಸ್ಎಎಸ್ಎಸ್) ಇದರ ರಾಷ್ಟ್ರೀಯ ಅಧ್ಯಕ್ಷ ಟಿ.ಬಿ.ಶೇಖರ್ ಹಾಗೂ ರಾಜ್ಯಾಧ್ಯಕ್ಷ ಡಾ.ಜಯರಾಂ ಅವರ ನಿರ್ದೇಶನದ ಮೇರೆಗೆ, ಉಡುಪಿ ಜಿಲ್ಲಾ ಎಸ್ಎಎಸ್ಎಸ್ ಮಹಿಳಾ ಘಟಕವನ್ನು ರಚಿಸಲಾಗಿದ್ದು, ಇದರ ಜಿಲ್ಲಾ ಸಂಚಾಲಕಿಯಾಗಿ ತಾರಾ ಉಮೇಶ್ ಆಚಾರ್ಯ ಇವರನ್ನು ನಿಯೋಜಿಸಲಾಗಿದೆ.
ಪಡು ಕುತ್ಯಾರು : ಆನೆಗುಂದಿ ಮಠ - ಡಿಸೆಂಬರ್ 25ರಿಂದ ಯಕ್ಷಗಾನ ತಾಳಮದ್ದಲೆ ಸಪ್ತಾಹ 2023
Posted On: 21-12-2023 05:31PM
ಪಡುಕುತ್ಯಾರು : ಕಟಪಾಡಿ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದಲ್ಲಿ 2023 ದಶಂಬರ 25ರಿಂದ ದಶಂಬರ 31ರವರೆಗೆ ತೃತೀಯ ವರ್ಷದ ಯಕ್ಷಗಾನ ತಾಳಮದ್ದಲೆ ಸಪ್ತಾಹ 2023 ನಡೆಯಲಿದೆ.
ಕಾಪು : ಅಭಿನಂದನ ಸಮಿತಿಯಿಂದ ಚಂದ್ರನಗರದಲ್ಲಿ ಸಮಾಜ ಸೇವೆಯ ಸಾಧಕತ್ರಯರಿಗೆ ಸನ್ಮಾನ
Posted On: 21-12-2023 05:10PM
ಕಾಪು : ಔದ್ಯೋಗಿಕ ನೆಲೆಯಲ್ಲಿ ಕ್ರಿಯಾಶೀಲತೆಯನ್ನು ಹೊಂದಿ ಅದರಿಂದ ಬಂದ ಒಂದಷ್ಟು ಅಂಶವನ್ನು ಸಮಾಜ ಸೇವೆಗೆ ಬಳಸುವ ಮನಸ್ಸು ಎಲ್ಲರಿಗೂ ಬರುವುದಿಲ್ಲ ಅಂತಹ ನಿಸ್ವಾರ್ಥ ಉದ್ದೇಶದ ಸಾಧಕರನ್ನು ಗುರುತಿಸುವುದು ಸಂತಸ ತಂದಿದೆ ಎಂದು ಮಜೂರು ಮಲ್ಲಾರು ಬದ್ರಿಯಾ ಜುಮ್ಮಾ ಮಸೀದಿಯ ಧರ್ಮಗುರುಗಳಾದ ಅಬ್ದುಲ್ ರಶೀದ್ ಸಖಾಫಿ ಹೇಳಿದರು. ಅವರು ಗುರುವಾರ ಕಾಪು ಚಂದ್ರನಗರ ಬಟರ್ ಫ್ಲೈ ಅತಿಥಿ ಗೃಹದ ಸಭಾಂಗಣದಲ್ಲಿ ಕಾಪು ಅಭಿನಂದನ ಸಮಿತಿಯಿಂದ ನಡೆದ ಸಾಧಕರ ಸಮ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಡಿಸೆಂಬರ್ 23 : ಶ್ರೀ ಧೂಮಾವತಿ ದೈವಸ್ಥಾನ ಎರ್ಮಾಳು ಬಡಾ - ನೇಮೋತ್ಸವ
Posted On: 21-12-2023 08:25AM
ಎರ್ಮಾಳು : ಬಡಾ ಶ್ರೀ ಧೂಮಾವತಿ ದೈವಸ್ಥಾನದಲ್ಲಿ ಡಿಸೆಂಬರ್ 23 ರಂದು ವಾರ್ಷಿಕ ನೇಮೋತ್ಸವ ಜರಗಲಿದೆ.
ವಿವಿಧ ಬೇಡಿಕೆ ಈಡೇರಿಕೆಗಾಗಿ ವೈದ್ಯಕೀಯ ಪ್ರತಿನಿಧಿಗಳ ಮುಷ್ಕರ : ಕೇಂದ್ರ ಸಕಾ೯ರಕ್ಕೆ ಮನವಿ ಸಲ್ಲಿಕೆ
Posted On: 21-12-2023 08:12AM
ಉಡುಪಿ : ಕರ್ನಾಟಕ ರಾಜ್ಯ ವೈದ್ಯಕೀಯ ಮತ್ತು ಮಾರಾಟ ಪ್ರತಿನಿಧಿಗಳ ಸಂಘ (KSM&SRA), ಫೆಡರೇಶನ್ ಆಫ್ ಮೆಡಿಕಲ್ ಮತ್ತು ಸೇಲ್ಸ್ ರೆಪ್ರೆಸೆಂಟೇಟಿವ್ಸ್ ಅಸೋಸಿಯೇಷನ್ಸ್ ಆಫ್ ಇಂಡಿಯಾ (FMRAI) ಯ ಅಂಗಸಂಸ್ಥೆ ಉಡುಪಿ ಜಿಲ್ಲಾ ಘಟಕದ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪ್ರಧಾನ ಮಂತ್ರಿಯವರಿಗೆ ಅಪರ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಲಾಯಿತು.
