Updated News From Kaup

ಪಡುಬಿದ್ರಿ : ಶ್ರೀ ವೆಂಕಟರಮಣ ದೇವಳ - ವಿವಿಧ ಧಾರ್ಮಿಕ ಕಾರ್ಯ ; ನಗರ ಸಂಕೀರ್ತನೆ

Thumbnail
Posted On: 22 Jan 2024, 10:25 PM

ಪಡುಬಿದ್ರಿ : ಇಲ್ಲಿನ ಶ್ರೀ ವೆಂಕಟರಮಣ ದೇವಳದಲ್ಲಿ ಅಯೋಧ್ಯಾ ಮಂದಿರ ಉದ್ಘಾಟನಾ ಉತ್ಸವ ಪ್ರಯುಕ್ತ ಜರಗಿದ ಶ್ರೀ ರಾಮೋತ್ಸವ - ರಾಮನಾಮ ತಾರಕ ಹವನ, ಉತ್ಸವ ಭಜನೆ ಪ್ರಾಥ:ಕಾಲದಿಂದಲೇ ಪ್ರಾರಂಭವಾಗಿ ಸಂಪನ್ನಗೊಂಡಿತು. ಸಾಯಂಕಾಲ ದೇವಳದಿಂದ ರಾಮನ ಪಲ್ಲಕ್ಕಿಯೊಂದಿಗೆ ನಗರ ಸಂಕೀರ್ತನೆ ಜರಗಿತು. ಈ‌ ಕಾರ್ಯದಲ್ಲಿ ನೂರಾರು ಭಜಕರು, ದೇವಳದ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

ಉಡುಪಿ : ಅಯೋಧ್ಯೆ ಶ್ರೀ ರಾಮ ಪ್ರತಿಷ್ಟಾ ಕಾಯ೯ - ಉಚಿತ ವೈದ್ಯಕೀಯ ಶಿಬಿರ

Thumbnail
Posted On: 22 Jan 2024, 10:09 PM

ಉಡುಪಿ : ಅಯೋಧ್ಯೆ ಶ್ರೀ ರಾಮ ಪ್ರತಿಷ್ಟಾ ಕಾಯ೯ದ ನಿಮಿತ್ತ ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ ಮತ್ತು ಭಾರತೀಯ ಜನ್ ಔಷಧಿ ಕೇಂದ್ರದ ವತಿಯಿಂದ ಸೋಮವಾರ ಉಚಿತ ವೈದ್ಯಕೀಯ ಶಿಬಿರ ಜನ ಔಷಧಿ ಕೇಂದ್ರದ ವಠಾರದಲ್ಲಿ ನಡೆಯಿತು. ಕಾಯ೯ಕ್ರಮದಲ್ಲಿ ಲೋoಬಾಡ್೯ ಮೆಮೋರಿಯಲ್ ಆಸ್ಪತ್ರೆ (ಮಿಷನ್) ಇದರ ವೈದ್ಯಾಧಿಕಾರಿ ಡಾ| ಗಣೇಶ್ ಕಾಮತ್, ಮತ್ತು ಇತರ ವೈದ್ಯರು ಭಾಗವಹಿಸಿದ್ದರು. ಮಾಹೆ ಮಣಿಪಾಲದ ಡಾI ಸವಿತಾ ಬಾಸ್ರಿ, ಡಾI ಆದಿತ್ಯ ಶೆಟ್ವಿ, ಡಾ| ಶ್ರೀಧರ ಡಿ, ಡಾ| ಅಂಕಿತಾ ಶೆಟ್ಟಿ ಮಾಹಿತಿ ನೀಡಿದರು. ಜಯಂಟ್ಸ್ ಪದಾಧಿಕಾರಿಗಳಾದ ಸುಂದರ ಪೂಜಾರಿ, ವಿವೇಕಾನಂದ ಕಾಮತ್, ಶ್ರೀನಾಥ್, ವೈದ್ಯಕೀಯ ಪ್ರತಿನಿಧಿ ಸಂಘದ ಕಾಯ೯ದಶಿ೯ ಪ್ರಸನ್ನ ಕಾರಂತ, ಮಿಲ್ಟನ್, ಅಣ್ಣಯ್ಯದಾಸ್, ರೋಹಿ ರತ್ನಾಕರ ಉಪಸ್ಥಿತರಿದ್ದರು.

ಪಡುಬಿದ್ರಿ : ಕರಾವಳಿ ಸ್ಟಾರ್ಸ್ ನಡಿಪಟ್ನ - ವಿಶೇಷ ಪೂಜಾ ಕಾರ್ಯಕ್ರಮ

Thumbnail
Posted On: 22 Jan 2024, 10:04 PM

ಪಡುಬಿದ್ರಿ : ಕರಾವಳಿ ಸ್ಟಾರ್ಸ್ ನಡಿಪಟ್ನ ಪಡುಬಿದ್ರಿ ಇವರಿಂದ ಶ್ರೀ ರಾಮ ದೇವರ ಪ್ರಾಣ ಪ್ರತಿಷ್ಟಾಪನೆ ಕಾರ್ಯಕ್ರಮದ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮ ಜರಗಿತು. ಈ ಸಂದರ್ಭ ‌ಸಂಸ್ಥೆಯ ಪ್ರಮುಖರಾದ ಕಿರಣ್ ರಾಜ್ ಕರ್ಕೇರ, ಸಂತೋಷ್ ಮತ್ತಿತರರು ಉಪಸ್ಥಿತರಿದ್ದರು.

ಕಾಪು : ಟೀಮ್ ಮಾರುತಿ ಮೂಳೂರು - ಆಯ್ದ ಕುಟುಂಬಗಳಿಗೆ ನಿತ್ಯೋಪಯೋಗಿ ವಸ್ತುಗಳ ವಿತರಣೆ ; ದೀಪ‌ ಸಂಭ್ರಮ

Thumbnail
Posted On: 22 Jan 2024, 10:00 PM

ಕಾಪು : ಅಯೋಧ್ಯೆ ಶ್ರೀ ರಾಮನ ಪ್ರಾಣ ಪ್ರತಿಷ್ಠೆಯ ಪುಣ್ಯ ದಿನದಂದು ಟೀಮ್ ಮಾರುತಿ ಮೂಳೂರು ವತಿಯಿಂದ ಮೂಳೂರಿನ ಆಯ್ದ ಕುಟುಂಬಗಳಿಗೆ ನಿತ್ಯೋಪಯೋಗಿ ವಸ್ತುಗಳ ಜೊತೆಗೆ ಸಂಜೆ ದೀಪ ಬೆಳಗಿಸಿ ಸಂಭ್ರಮಿಸುವ ಸಲುವಾಗಿ ದೀಪದ ಎಣ್ಣೆ, ಹಣತೆ ವಿತರಿಸಿ, ದೀಪ ಬೆಳಗಿಸಿ ಸಂಭ್ರಮಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಪ್ರಹಾರ್, ಉಪಾಧ್ಯಕ್ಷರಾದ ಜಯೇಶ್ ಸಾಲ್ಯಾನ್, ಪ್ರಧಾನ ಕಾರ್ಯದರ್ಶಿ ಗಗನ್ ಮೆಂಡನ್, ಗೌರವ ಸಲಹೆಗಾರರು ಧೀರೇಶ್ ಡಿ ಪಿ, ಕೋಶಾಧಿಕಾರಿ ಹವ್ಯಾಸ್ ಪೂಜಾರಿ, ಸಂಘಟನಾ ಕಾರ್ಯದರ್ಶಿ ಆಕಾಶ್ ಪೂಜಾರಿ, ಸದಸ್ಯರದ ಪವನ್, ಆವೀಶ್ , ಸುಮನ್ ಶೆಟ್ಟಿ, ವರುಣ್ ಕುಲಾಲ್ ಮತ್ತಿತರರು ಮತ್ತಿತರರು ಉಪಸ್ಥಿತರಿದ್ದರು.

ಶಿವಾಯ ಫೌಂಡೇಶನ್ ಮುಂಬಯಿ : ಸ್ಪಂದನ ಬೌದ್ಧಿಕ ದಿವ್ಯಾಂಗರ ವಸತಿ ಕೇಂದ್ರ ಭೇಟಿ

Thumbnail
Posted On: 22 Jan 2024, 09:51 PM

ಉಡುಪಿ : ಶಿವಾಯ ಫೌಂಡೇಶನ್ (ರಿ.) ಮುಂಬಯಿ ವತಿಯಿಂದ ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಭಗವಾನ್ ಶ್ರೀ ರಾಮನ ಪ್ರತಿಷ್ಠಾಪನೆ ಅಂಗವಾಗಿ ಉಪ್ಪೂರಿನ ಸ್ಪಂದನ ಬೌದ್ಧಿಕ ದಿವ್ಯಾಂಗರ ವಸತಿ ಕೇಂದ್ರದ ವಿದ್ಯಾರ್ಥಿಗಳಿಗೆ ಅನ್ನದಾನ ದ ಸೇವೆಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಪಡುಬಿದ್ರಿ ರೋಟರಿ ಅಧ್ಯಕ್ಷರಾದ ‌ಸಂತೋಷ್ ಪಡುಬಿದ್ರಿ, ಪೂರ್ವ ಸಹಾಯಕ ಗರ್ವನರ್ ಗಣೇಶ್ ‌ಅಚಾರ್ಯ ಉಚ್ಚಿಲ, ಶಿವಾನಿ ಫೌಂಡೇಶನ್ ಸಂಸ್ಥೆ ಸದಸ್ಯರಾದ ರವಿ ಶೆಟ್ಟಿ ಶಾರದೆ, ಜಗನ್ನಾಥ ಶೆಟ್ಟಿ ಪಾದೆಬೆಟ್ಟು, ಪ್ರಜ್ವಲ್ ಶೆಟ್ಟಿ, ಸಂಸ್ಥೆಯ ಹಿತೈಷಿಗಳಾದ ಸುಧಾಕರ್ ಕೆ., ಸಂತೋಷ್ ನಂಬಿಯಾರ್, ನವೀನ್ ಪೂಜಾರಿ, ಸ್ಪಂದನ ಸಂಸ್ಥೆ ಸಂಚಾಲಕ ಜರ್ನಾಧನ್ ಎನ್. ಉಪಸ್ಥಿತರಿದ್ದರು.

ಕಟಪಾಡಿ : ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಮಹಿಳಾ ಘಟಕದ ಸಭೆ  

Thumbnail
Posted On: 21 Jan 2024, 06:31 PM

ಕಟಪಾಡಿ : ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಉಡುಪಿ ಜಿಲ್ಲೆ ಇದರ ಮಹಿಳಾ ಘಟಕದ ಸಭೆಯು ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದಲ್ಲಿ ಜರಗಿತು.  ಇದೇ ಸಂದರ್ಭ ಮಾರ್ಚ್ 10ರಂದು ನಡೆಯಲಿರುವ ಬೆಳ್ಳಿ ಹಬ್ಬ ಸಂಭ್ರಮ ಸಮಾವೇಶದ ಆಮಂತ್ರಣ ಪತ್ರಿಕೆಯನ್ನು ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷರಾದ ರಾಜಶೇಖರ ಕೋಟ್ಯಾನ್  ಬಿಡುಗಡೆಗೊಳಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಬಿಲ್ಲವರ  ಮಹಾಮಂಡಲದ ಉಡುಪಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಗೀತಾಂಜಲಿ ಸುವರ್ಣ ವಹಿಸಿದ್ದರು. ಈ ಸಂದರ್ಭ ಬಿಲ್ಲವ ಮುಖಂಡರಾದ ಸತ್ಯಜಿತ್ ಸುರತ್ಕಲ್, ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ಗಂಗಾಧರ ಪೂಜಾರಿ, ಸದಸ್ಯ ಗಣೇಶ್ ಮೂಡುಪೆರಾರೆ, ಜಿಲ್ಲಾ ಮಹಿಳಾ ಒಕ್ಕೂಟದ ಅಧ್ಯಕ್ಷೆ ಪದ್ಮ ರತ್ನಾಕರ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಜ್‌ಕುಮಾರ್ ಬಹರೈನ್, ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರಾಡಳಿತ ಮಂಡಳಿಯ ಉಪಾಧ್ಯಕ್ಷ ಆನಂದ ಮಾಬಿಯಾನ್, ಶ್ರೀ ನಾರಾಯಣಗುರು ಕೋಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಹರಿಶ್ಚಂದ್ರ ಅಮೀನ್, ಬಿಲ್ಲವ ಪರಿಷತ್ ಮಾಜಿ ಅಧ್ಯಕ್ಷ ನವೀನ್ ಅಮೀನ್ ಶಂಕರಪುರ, ಸಮಾಜದ ಇತರ ಗಣ್ಯರು ಉಪಸ್ಥಿತರಿದ್ದರು.

ಕಾಪು : ಇನ್ನಂಜೆಯಲ್ಲಿ ಪಿ.ಎಂ. ವಿಶ್ವಕರ್ಮ ಯೋಜನೆಯ ನೋಂದಣಿ ಅಭಿಯಾನಕ್ಕೆ ಚಾಲನೆ

Thumbnail
Posted On: 21 Jan 2024, 06:16 PM

ಕಾಪು : ಪಿ.ಎಂ. ವಿಶ್ವಕರ್ಮ ಯೋಜನೆಯ ನೋಂದಣಿ ಅಭಿಯಾನವು ಇನ್ನಂಜೆ ಗ್ರಾ. ಪಂ. ಸಭಾಭವನದಲ್ಲಿ ಜರಗಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಅಭಿಯಾನ ಉದ್ಘಾಟಿಸಿದ ಇನ್ನಂಜೆ ಗ್ರಾ. ಪಂ. ಅಧ್ಯಕ್ಷೆ ಮಾಲಿನಿ ಶೆಟ್ಟಿ ಮಾತನಾಡಿ, ಪಿ. ಎಂ. ವಿಶ್ವಕರ್ಮ ಯೋಜನೆಯಡಿ ಸಾಂಪ್ರದಾಯಿಕ ಕೆಲಸ ಮಾಡುವ ಅರ್ಹರೆಲ್ಲರೂ ನೋಂದಾವಣೆ ಮಾಡಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬಹುದು. ತಾವು ಮಾಡುವ ಉದ್ಯಮ ಅಭಿವೃದ್ಧಿ ಪಡಿಸಲು ಬ್ಯಾಂಕಿನಲ್ಲಿಶೇ. 5 ಬಡ್ಡಿದರದಲ್ಲಿ ಸಾಲ ಸೌಲಭ್ಯ, ತಮ್ಮ ವೃತ್ತಿಯ ಉಪಕರಣ ಖರೀದಿಸಲು ಸಹಾಯಧನ, 5 ದಿನಗಳ ತರಬೇತಿಗೆ 500ರೂ. ಸಹಾಯಧನ ಸಿಗುತ್ತಿದ್ದು ಗ್ರಾಮಸ್ಥರು ಯೋಜನೆಯ ಉಪಯೋಗ ಪಡೆದು ಆರ್ಥಿಕ ಸಬಲೀಕರಣ ಯೋಜನೆಯ ಮೂಲ ಉದ್ದೇಶವಾಗಿದೆ ಎಂದರು. ಇನ್ನಂಜೆ ಗ್ರಾ.ಪಂ. ಉಪಾಧ್ಯಕ್ಷೆ ಸುರೇಖ ಶೆಟ್ಟಿ, ಮಾಧ್ಯಮ ವರದಿಗಾರ ವಿಕ್ಕಿ ಪೂಜಾರಿ, ಬ್ಯಾಂಕ್ ಆಫ್ ಬರೋಡ ಇನ್ನಂಜೆ ಶಾಖೆಯ ಮೆನೇಜರ್ ನೇಹಾ ಮೆಂಡೋನ್ಸ, ರಾಜೇಶ್ವರಿ ಸ್ವಸಹಾಯ ಒಕ್ಕೂಟದ ಅಧ್ಯಕ್ಷೆ ಸುಗುಣ, ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆಯ ಸಿಬ್ಬಂದಿ ಅಶ್ಮಿತಾ, ಪಂಚಾಯತ್ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತೆಯರು, ಪಂಚಾಯತ್ ಸಿಬಂದಿ, ಗ್ರಾಮಸ್ಥರು ಉಪಸ್ಥಿತರಿದ್ದರು. ಇನ್ನಂಜೆ ಗ್ರಾಮ ಪಂಚಾಯತ್ ಕಾರ್ಯದರ್ಶಿ ಚಂದ್ರಶೇಖರ ಸಾಲಿಯಾನ್ ಸ್ವಾಗತಿಸಿ, ನಿರೂಪಿಸಿದರು. ಪಂಚಾಯತ್ ಬಿಲ್ ಕಲೆಕ್ಟರ್ ಹರೀಶ್ ವಂದಿಸಿದರು.

ಕರ್ನಾಟಕದಲ್ಲಿ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಬೇಡ : ಶ್ರೀ ಸಾಯಿ ಈಶ್ವರ್ ಗುರೂಜಿ ಕರೆ

Thumbnail
Posted On: 21 Jan 2024, 03:45 PM

ಶ್ರೀರಾಮ ಲಲ್ಲಾನ ಪ್ರಾಣ ಪ್ರತಿಷ್ಠೆ ಮಾತ್ರ ಅಲ್ಲ. ಇದು ಭಾರತ ದೇಶದ ಪ್ರಾಣ ಪ್ರತಿಷ್ಠೆ. ಈ ದಿನವನ್ನು ಭಾರತದ ಪ್ರತಿಯೊಬ್ಬ ಪ್ರಜೆಯು ಗೌರವಿಸಬೇಕಾದ ದಿನ ಈಗಾಗಲೇ ಕರ್ನಾಟಕದ ರಾಜ್ಯ ಸರಕಾರಕ್ಕೆಜನವರಿ 22ರಂದು ಸಾರ್ವತ್ರಿಕ ರಜೆಯನ್ನು ನೀಡಬೇಕಾಗಿ ವಿನಂತಿ ಮಾಡಿದರೂ, ದ್ವೇಷದ ರಾಜಕಾರಣ ಮಾಡುತ್ತಿದ್ದು ರಾಮನ ಶಕ್ತಿ, ಭಕ್ತಿಯ ಬಗ್ಗೆ ತಿಳಿದಿದ್ದರೂ ಹಿಂದುಗಳ ಭಾವನೆಗೆ ಬೆಲೆ ನೀಡದಿರುವುದು ವಿಪರ್ಯಾಸ. ಒಂದು ದಿನ ಶಾಲೆಗೆ ಹೋಗದಿದ್ದರೆ ಏನು ಆಗುವುದಿಲ್ಲ. ಮಕ್ಕಳನ್ನು ನಿಮ್ಮ ಆಸು ಪಾಸಿನಲ್ಲಿರುವ ದೇವಸ್ಥಾನ ಹಾಗೂ ಸಂಘ-ಸಂಸ್ಥೆಗಳಲ್ಲಿ ನಡೆಯುವ ರಾಮೋತ್ಸವಕ್ಕೆ ಕಳುಹಿಸಿ ಎಂದು ಮನವಿ ಮಾಡಿದ್ದಾರೆ.

ಕಾಪು : ಅಕ್ಷರ ಫ್ಲೆಕ್ಸ್ ಪ್ರಿಂಟಿಂಗ್ ಶುಭಾರಂಭ

Thumbnail
Posted On: 21 Jan 2024, 11:57 AM

ಕಾಪು : ತೆಂಕಪೇಟೆ ಕೀರ್ತಿ ಇನ್ ಕ್ಲೈವ್‌ನಲ್ಲಿ ಪ್ರಜ್ವಲ್ ದೇವಿ ಪ್ರಸಾದ್ ಶೆಟ್ಟಿ ಹಾಗೂ ಅಖಿಲ್ ಪೂಜಾರಿ ಇವರ ಮಾಲಕತ್ವದ ಅಕ್ಷರ ಫ್ಲೆಕ್ಸ್ ಪ್ರಿಂಟಿಂಗ್ ನ ಸಂಸ್ಥೆಯನ್ನು ವೈಟ್ ಲೋಟಸ್ ಹಾಗೂ ಉಜ್ವಲ್ ಡೆವಲಪರ್ಸ್ ನ ಅಜಯ್ ಪಿ ಶೆಟ್ಟಿ, ದೇವಿ ಪ್ರಸಾದ್ ಶೆಟ್ಟಿ ಬೆಳಪುರವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಈ ಸಂಸ್ಥೆ ಮುಂದಿನ ದಿನಗಳಲ್ಲಿ ಇನ್ನೂ ಎತ್ತರವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಹೊಸ ಮಾರಿಗುಡಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ವಾಸುದೇವ ಶೆಟ್ಟಿ, ಗೀತಾಂಜಲಿ ಸುವರ್ಣ, ಹಿರಾ ದೇವಿಪ್ರಸಾದ್ ಶೆಟ್ಟಿ, ದೀಕ್ಷಾ ಶೆಟ್ಟಿ, ಹರೀಶ್ ನಾಯಕ್ ಕಾಪು, ಯೋಗೇಶ್ ಶೆಟ್ಟಿ ಬಾಲಾಜಿ, ಚಂದ್ರಶೇಖರ ಪೂಜಾರಿ, ಧೀರಜ್ ಸುವರ್ಣ, ರಾಮ್ ಪ್ರಕಾಶ್ ಶೆಟ್ಟಿ, ಆದೇಶ ಶೆಟ್ಟಿ, ವರುಣ್ ಚೌಟ ಮತ್ತಿತರರು ಉಪಸ್ಥಿತರಿದ್ದರು.

ಉಡುಪಿ : ಅಖಿಲಕರ್ನಾಟಕ ಬ್ರಾಹ್ಮಣ ಅರ್ಚಕ, ಪುರೋಹಿತರು ಉಡುಪಿ ಘಟಕದಿಂದ ಶ್ರೀರಾಮತಾರಕ ಮಹಾಯಾಗ

Thumbnail
Posted On: 20 Jan 2024, 05:53 PM

ಉಡುಪಿ : ಅಯೋಧ್ಯೆ ಶ್ರೀರಾಮದೇವರ ಪ್ರತಿಷ್ಠಾಪನಾ ಅಂಗವಾಗಿ ಹಾಗೂ ನರೇಂದ್ರಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ಲೋಕಕಲ್ಯಾಣಕ್ಕಾಗಿ ಅಖಿಲಕರ್ನಾಟಕ ಬ್ರಾಹ್ಮಣ ಅರ್ಚಕ ಮತ್ತು ಪುರೋಹಿತರು ಉಡುಪಿ ಘಟಕ ಇವರ ನೇತೃತ್ವದಲ್ಲಿ ಉಡುಪಿ ಚಂದ್ರಮೌಳೀಶ್ವರ ದೇವಸ್ಥಾನದಲ್ಲಿ 13 ಕುಂಡಗಳಲ್ಲಿ ಲಕ್ಷ ಸಂಖ್ಯೆಯಲ್ಲಿ ಶ್ರೀರಾಮತಾರಕ ಮಹಾಯಾಗವು ಸಂಪನ್ನಗೊಂಡಿತು. ನಂತರ ರಥಬೀದಿಯಲ್ಲಿ ಶ್ರೀರಾಮನ ಮೆರವಣಿಗೆ ನಡೆಯಿತು. ಶ್ರೀರಾಮದೇವರ ಪ್ರಸಾದವನ್ನು ಭಕ್ತರಿಗೆ ವಿತರಿಸಲಾಯಿತು. ಈ ಸಂದರ್ಭದಲ್ಲಿ ಅಖಿಲಕರ್ನಾಟಕ ಬ್ರಾಹ್ಮಣ ಅರ್ಚಕ ಮತ್ತು ಪುರೋಹಿತರು ಸಂಘಟನೆಯ ಉಡುಪಿ ಜಿಲ್ಲಾಧ್ಯಕ್ಷರಾದ ಚೆನ್ನಕೇಶವಗಾಯತ್ರಿಭಟ್, ಉಪಾಧ್ಯಕ್ಷರಾದ ಮನೋಹರತಂತ್ರಿಗಳು, ಉಡುಪಿ ತಾಲೂಕು ಅಧ್ಯಕ್ಷರಾದ ವಿಖ್ಯಾತ ಭಟ್, ಪದಾಧಿಕಾರಿಗಳಾದ ಸುದರ್ಶನ ಕಡಂಬಳಿತ್ತಾಯ, ಭಾನುಚಂದ್ರ ಐತಾಳ್, ರಾಘವೇಂದ್ರ ಭಟ್ ಗುಡ್ಡೆಯಂಗಡಿ, ದೇವಸ್ಥಾನದ ತಂತ್ರಿಗಳಾದ ಸುಬ್ರಹ್ಮಣ್ಯ ತಂತ್ರಿ ಇನ್ನಾ, ಬ್ರಾಹ್ಮಣ ಸಂಘಟನೆಯವರು, ಆಡಳಿತ ಮಂಡಳಿಯವರು ಉಪಸ್ಥಿತರಿದ್ದರು.