Updated News From Kaup
ಮುಲ್ಕಿ : ಧಮ್ಮ ದೀಪ ಕಾರ್ಯಕ್ರಮ
Posted On: 28 Jan 2024, 06:07 PM
ಮುಲ್ಕಿ : ಭಾಸ್ಕರ್ ಕವತ್ತಾರು ಧಮ್ಮ ದೀಪ ಗೌತಮ ಬುದ್ಧ ನಗರ ಕವತ್ತಾರು ಮುಲ್ಕಿ ಇಲ್ಲಿ ದ.ಕ ಜಿಲ್ಲೆ ಭೌದ್ಧ ಮಹಾಸಭಾ ಧಮ್ಮಚಾರಿ ಎಸ್ ಆರ್ ಲಕ್ಷ್ಮಣ್ ಇವರ ಉಪಸ್ಥಿತಿಯಲ್ಲಿ ಧಮ್ಮ ದೀಪ ಕಾರ್ಯಕ್ರಮ ಜರುಗಿತು. ಭಾರತೀಯ ಭೌದ್ಧ ಮಹಾಸಭಾ ಉಡುಪಿಯ ಪುಷ್ಟಕರ್ ಮುರಳೀಧರ್ ಎಂ, ಆನಂದ್ ಬಿ, ಶಂಕರ್, ರವೀಂದ್ರ, ಕುಶಲ, ಸುರೇಶ್, ಸಂತೋಷ್ ಎರ್ಮಾಳು, ಸುಧಾಕರ್ ಕೆ ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮೂರು ನವದಂಪತಿಗಳಿಗೆ ಶುಭ ಹಾರೈಸಿ ಧಮ್ಮ ದೀಪ ಕುಟುಂಬಸ್ಥರಿಂದ ಭೋಜನ ವ್ಯವಸ್ಥೆ ಮಾಡಲಾಯಿತು.
ನಂದಿಕೂರು : ರಾಲ್ಫಿ ಡಿʼಕೋಸ್ತರವರ ಆಪ್ತ ಬಳಗದ ಜೀವರಕ್ಷಕ ನೂತನ ಆ್ಯಂಬುಲೆನ್ಸ್ ಲೋಕಾರ್ಪಣೆ
Posted On: 28 Jan 2024, 06:01 PM
ನಂದಿಕೂರು : ಉದ್ಯಮಿ ರಾಲ್ಫಿ ಡಿʼಕೋಸ್ತರವರ ಆಪ್ತ ಬಳಗದ ಹೆಜಮಾಡಿ, ನಡ್ಸಾಲು ಗ್ರಾಮ ಕೇಂದ್ರಿತವಾಗಿ ಕಾರ್ಯ ನಿರ್ವಹಿಸಲಿರುವ ಜೀವರಕ್ಷಕ ನೂತನ ಆ್ಯಂಬುಲೆನ್ಸ್ ಲೋಕಾರ್ಪಣೆ ಹಾಗೂ ಕೀ ಹಸ್ತಾಂತರದ ಕಾರ್ಯಕ್ರಮ ನಂದಿಕೂರಿನ ಕೈಗಾರಿಕಾ ವಲಯದಲ್ಲಿ ಭಾನುವಾರ ಜರಗಿತು. ಮೂಲ್ಕಿ ಚರ್ಚ್ ನ ಧರ್ಮಗುರುಗಳಾದ ರೆ| ಫಾ| ಸಿಲ್ವೆಸ್ಟರ್ ಡಿ`ಕೋಸ್ತ ಪ್ರಾರ್ಥನೆ ಸಲ್ಲಿಸಿ ಶುಭಾಶೀರ್ವಾದದ ನುಡಿಗಳನ್ನಿತ್ತರು. ಮಂಗಳೂರು ಕೆನರಾ ಬ್ಯಾಂಕಿನ ವಲಯ ಎಜಿಎಂ ಆ್ಯಂಟೊನಿ ಅವರು ಆ್ಯಂಬುಲೆನ್ಸ್ ಸೇವೆಯನ್ನು ಉದ್ಘಾಟಿಸಿದರು. ಪಡುಬಿದ್ರಿಯ ಅಪರಾದ ವಿಭಾಗದ ಎಸ್ಐ ಸುದರ್ಶನ್ ದೊಡ್ಡಮನಿ ಅವರು ವಾಹನಕ್ಕೆ ಚಾಲನೆ ನೀಡಿ, ರಾಲ್ಫಿ ಡಿʼಕೋಸ್ತರವರ ಆಪ್ತರ ಬಳಗಕ್ಕೆ ವಾಹನದ ಕೀಲಿಗೈ ಹಸ್ತಾಂತರಿಸಿದರು. ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅನುಂಶಿಕ ಅರ್ಚಕರಾದ ವೇ| ಮೂ| ಅನಂತಪದ್ಮನಾಭ ಅಸ್ರಣ್ಣ, ವೇ| ಮೂ| ಹರಿನಾರಾಯಣದಾಸ ಆಸ್ರಣ್ಣ, ಹೆಜಮಾಡಿಯ ಜುಮ್ಮಾ ಮಸೀದಿಯ ಧರ್ಮಗುರುಗಳಾದ ಹಾಜಿ ಅಶ್ರಫ್ ಸಖಾಫಿ, ಸೈಂಟ್ ಫಿಲೊಮಿನಾ ಕಾಲೇಜು ಪುತ್ತೂರಿನ ನಿವೃತ್ತ ಪ್ರಾಂಶುಪಾಲ ರೆ| ಫಾ| ಫ್ರಾನ್ಸಿಸ್ ಝ್ಸೇವಿಯರ್ ಗೋಮ್ಸ್, ಕಳವಾರು ಚರ್ಚ್ ಧರ್ಮಗುರುಗಳಾದ ರೆ| ಫಾ| ಮಾರ್ಸೆಲ್ ಸಲ್ದಾನ, ವಾಲ್ಟರ್ ಡಿ`ಸೋಜ, ಕೆನರಾ ಬ್ಯಾಂಕ್ ಮೂಲ್ಕಿಯ ವ್ಯವಸ್ಥಾಪಕ ಅತುಲ್, ಹಾಜಿ ಶೇಖಬ್ಬ ಕೋಟೆ, ನಾರಾಯಣ ಮೆಂಡನ್, ಪಡುಬಿದ್ರಿ ಗ್ರಾ ಪಂ. ಅಧ್ಯಕ್ಷೆ ಶಶಿಕಲಾ, ಹೆಜಮಾಡಿ ಗ್ರಾ ಪಂ. ಅಧ್ಯಕ್ಷೆ ರೇಶ್ಮಾ ಮೆಂಡನ್, ಸದಾಶಿವ ಕೋಟ್ಯಾನ್ ಮತ್ತು ಹೆಜಮಾಡಿಯ ರಾಲ್ಫಿ ಡಿʼಕೋಸ್ತ ದಂಪತಿ ಮತ್ತು ಆಪ್ತರ ಬಳಗದ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ದಿವಾಕರ್ ಹೆಜ್ಮಾಡಿ, ನಿತಿನ್ ಕಾರ್ಯಕ್ರಮ ನಿರೂಪಿಸಿದರು.
ಪಲಿಮಾರು : ಹೊೖಗೆ ಫ್ರೆಂಡ್ಸ್ - 11ನೇ ವಾರ್ಷಿಕೋತ್ಸವ ಸಂಪನ್ನ
Posted On: 28 Jan 2024, 07:06 AM
ಪಲಿಮಾರು : ಹೊೖಗೆ ಫ್ರೆಂಡ್ಸ್ ಹೊೖಗೆ (ರಿ) ಪಲಿಮಾರು ಸಂಸ್ಥೆಯ 11ನೇ ವಾರ್ಷಿಕೋತ್ಸವವು ಶುಕ್ರವಾರದಂದು ಪಲಿಮಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಜರಗಿತು. ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀನಿವಾಸ ಉಡುಪರು ದೀಪ ಪ್ರಜ್ವಲಿಸಿ ಆಶೀರ್ವಚನ ನೀಡಿದರು. ಗುರುಪುರ ವಜ್ರದೇಹಿ ಮಠದ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ ಸರ್ವ ಜನ ಸುಖಿನೋ ಭವತು ಎಂಬ ತತ್ವದಲ್ಲಿ ಕಾರ್ಯ ನಿರ್ವಹಿಸುವ ಈ ಸಂಸ್ಥೆಯ ಕಾರ್ಯವೈಖರಿ ಆದರ್ಶ ಸಮಾಜ ನಿರ್ಮಾಣ ಮಾಡುವಂತ ಒಂದು ಮಾದರಿ ಸಂಸ್ಥೆ ಎಂದರು. ಸನ್ಮಾನ : ರಾಜ್ಯೋತ್ಸವ ಪ್ರಶಸ್ತಿ ಪುರಸ್ಕತರಾದ ಈಶ್ವರ್ ಮಲ್ಪೆ, ನಿವೃತ್ತ ಶಿಕ್ಷಕರಾದ ಜೋನ್ ವಿ ಡಿಸೋಜ, ಶ್ರೇಷ್ಠ ಕೃಷಿಕ ಪ್ರಶಸ್ತಿ ಪುರಸ್ಕೃತ ರಾದ ಮ್ಯಾಕ್ಸಿಂ ಡಿಸೋಜಾರವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಸಮಾಜ ಸೇವಕರಾದ ದಿನೇಶ್ ಗುಜರನ್, ಬಿಲ್ಲವರ ಅಸೋಸಿಯೇಷನ್ ನ ಜೊತೆ ಕಾರ್ಯದರ್ಶಿ ರವಿ ಎಸ್ ಸನಿಲ್, ವಿಶ್ವನಾಥ ಶೆಟ್ಟಿ ಕರ್ನಿರೆ, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ದಿನೇಶ್ ಕೋಟ್ಯಾನ್, ಸಂಸ್ಥೆಯ ಗೌರವಾಧ್ಯಕ್ಷರಾದ ಗೋಕುಲ್ ಪಲಿಮಾರು, ಅಧ್ಯಕ್ಷರಾದ ರಿತೇಶ್ ದೇವಾಡಿಗ, ಪಲಿಮಾರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಗಾಯತ್ರಿ ಡಿ ಪ್ರಭು ಉಪಸ್ಥಿತರಿದ್ದರು. ಸಚಿನ್ ಪೂಜಾರಿ ಸ್ವಾಗತಿಸಿದರು. ರಾಘವೇಂದ್ರ ಜೆ ಸುವರ್ಣ ವರದಿ ವಾಚಿಸಿದರು. ಸಂತೋಷ್ ದೇವಾಡಿಗ , ಸಂಪತ್ ಕುಮಾರ್ ಸನ್ಮಾನ ಪತ್ರ ವಾಚಿಸಿದರು. ದೇವಿಪ್ರಸಾದ್ ಬೆಳ್ಳಿಬೆಟ್ಟು ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಸತೀಶ್ ಕುಮಾರ್ ವಂದಿಸಿದರು.
ಪಲಿಮಾರು : ಸುವರ್ಣ ಪ್ರತಿಷ್ಠಾನ ಕರ್ನಿರೆ - ಶೈಕ್ಷಣಿಕ ನೆರವು ; ಯಕ್ಷ ಕಲಾರಾಧನೆ ; ಸನ್ಮಾನ
Posted On: 27 Jan 2024, 06:53 AM
ಪಲಿಮಾರು : ಸುವರ್ಣ ಪ್ರತಿಷ್ಠಾನ ಕರ್ನಿರೆ ಇವರಿಂದ 11ನೇ ವಾರ್ಷಿಕೋತ್ಸವದ ಅಂಗವಾಗಿ ಶೈಕ್ಷಣಿಕ ನೆರವು, ಯಕ್ಷ ಕಲಾರಾಧನೆ ಮತ್ತು ಹಿರಿಯ ಕಲಾವಿದರ ಸನ್ಮಾನ ಕಾರ್ಯಕ್ರಮ ಜರಗಿತು. ಕರ್ನಿರೆ ಜಾರಂದಾಯ ದೈವದ ಗಡುವಾಡು ಬಳಿ ಕೊಪ್ಪಳ ತೋಟದಲ್ಲಿ ದುಬೈ ನಿವಾಸಿ- ಹವ್ಯಾಸಿ ಯಕ್ಷಗಾನ ವೇಷಧಾರಿ ಪ್ರಭಾಕರ ಡಿ. ಸುವರ್ಣ ಮತ್ತು ಕುಟುಂಬಿಕರು ಈ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಸನ್ಮಾನ/ಶೈಕ್ಷಣಿಕ ನೆರವು : ಯಕ್ಷಗಾನ ವಿದ್ವಾಂಸರಾದ ಡಾ.ಎಂ. ಪ್ರಭಾಕರ ಜೋಶಿ, ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ, ಅರ್ಥಧಾರಿ, ಸಂಘಟಕರಾದ ಅಶೋಕ ಭಟ್, ಜಬ್ಬಾರ್ ಸಮೋ ಸಂಪಾಜೆ, ವೇಷಧಾರಿಗಳಾದ ಸರಪಾಡಿ ಅಶೋಕ ಶೆಟ್ಟಿ, ಡಿ.ಮನೋಹರ ಕುಮಾರ್, ಶಶಿಕಾಂತ ಶೆಟ್ಟಿ ಕಾರ್ಕಳ ಹಾಗೂ ಯಕ್ಷಗಾನ, ನೃತ್ಯ ಕಲಾವಿದೆ ಸುಮಂಗಲಾ ರತ್ನಾಕರ್ ರನ್ನು ಸನ್ಮಾನಿಸಲಾಯಿತು. ಪ್ರತಿಷ್ಠಾನದ ವತಿಯಿಂದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಕ್ಷಣ ಸಹಾಯ ನಿಧಿಯನ್ನು ವಿತರಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ತೆಂಕುತಿಟ್ಟಿನ ವಿವಿಧ ಮೇಳಗಳ ಹೆಸರಾಂತ ಕಲಾವಿದರಿಂದ 'ಶ್ರೀಮತಿ ಪರಿಣಯ - ಸಮಗ್ರ ಭೀಷ್ಮ' ಯಕ್ಷಗಾನ ಬಯಲಾಟ ನಡೆಯಿತು. ಈ ಸಂದರ್ಭ ಸುವರ್ಣ ಪ್ರತಿಷ್ಠಾನ ಕರ್ನಿರೆ ಅಧ್ಯಕ್ಷ ಪ್ರಭಾಕರ ಡಿ.ಸುವರ್ಣ ಮತ್ತು ಕುಟುಂಬ ವರ್ಗ, ಸಂಯೋಜಕರಾದ ಬಿ. ಜನಾರ್ದನ ಅಮ್ಮುಂಜೆ ಮತ್ತಿತರರು ಉಪಸ್ಥಿತರಿದ್ದರು.
ಬಂಟಕಲ್ಲು : ಸನ್ ಶೈನ್ ಸೀನಿಯರ್ ಚೇಂಬರ್ ಉದ್ಘಾಟನೆ
Posted On: 26 Jan 2024, 10:30 PM
ಬಂಟಕಲ್ಲು : ಸೀನಿಯರ್ ಚೇಂಬರ್ ಉಡುಪಿ ಟೆಂಪಲ್ ಸಿಟಿ ಲೀಜನ್ ನಿಂದ ಪ್ರವರ್ತಿಸಲ್ಪಟ್ಟ ಬಂಟಕಲ್ ಸನ್ ಶೈನ್ ಸೀನಿಯರ್ ಚೇಂಬರ್ ನ್ನು ಸೀನಿಯರ್ ಚೇಂಬರ್ ನ ರಾಷ್ಟ್ರೀಯ ಅಧ್ಯಕ್ಷರಾದ ಸೀನಿಯರ್ ವರ್ಗಿಸ್ ವೈದನ್ ರವರು ಉದ್ಘಾಟಿಸಿದರು. ಸ್ಥಾಪಕ ಅಧ್ಯಕ್ಷರಾಗಿ ಸಂದೀಪ್ ಬಂಗೇರ, ಸ್ಥಾಪಕ ಕಾರ್ಯದರ್ಶಿಯಾಗಿ ರಮೇಶ್ ಬಂಟಕಲ್, ಸ್ಥಾಪಕ ಕೋಶಾಧಿಕಾರಿಯಾಗಿ ವಿಗ್ನೇಶ್ ಶೆಟ್ಟಿ ಮತ್ತು 20 ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು. ಉಡುಪಿ ಟೆಂಪಲ್ ಸಿಟಿಯ ಅಧ್ಯಕ್ಷರಾದ ಸೀನಿಯರ್ ಆಲ್ವಿನ್ ಮೆನೆಜಸ್, ರಾಷ್ಟ್ರೀಯ ಉಪಾಧ್ಯಕ್ಷರಾದ ಸೀನಿಯರ್ ನವೀನ್ ಅಮೀನ್, ಬೆಳವಣಿಗೆ ಮತ್ತು ಅಭಿವೃದ್ಧಿ ವಿಭಾಗದ ನಿರ್ದೇಶಕರಾದ ಸೀನಿಯರ್ ಚಿತ್ರಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಎರ್ಮಾಳು ಬಡಾ ಓಂ ಸಾಯಿ ಫ್ರೆಂಡ್ಸ್ : ಭಜನೆ, ಕರ ಸೇವಕರಿಗೆ ಸನ್ಮಾನ, ಅನ್ನಸಂತರ್ಪಣೆ
Posted On: 23 Jan 2024, 06:40 PM
ಎರ್ಮಾಳು : ಓಂ ಸಾಯಿ ಫ್ರೆಂಡ್ಸ್ ಎರ್ಮಾಳು ಬಡಾ ವತಿಯಿಂದ ಅಯೋಧ್ಯೆ ಶ್ರೀ ರಾಮ ಪ್ರತಿಷ್ಟಾ ಕಾಯ೯ದ ನಿಮಿತ್ತ ಭಜನೆ, ಕರ ಸೇವಕರಿಗೆ ಸನ್ಮಾನ, ಅನ್ನಸಂತರ್ಪಣೆ ಜರಗಿತು. ಎರ್ಮಾಳು ಗರೋಡಿ ಅರ್ಚಕರಾದ ಸದಾನಂದ ನಾಯ್ಗರು ಪೂಜಾ ಕೈಂಕರ್ಯ ನೆರವೇರಿಸಿದರು. ಸನ್ಮಾನ : ಕರ ಸೇವಕರಾದ ವಸಂತ್ ದೇವಾಡಿಗ, ಸದಾನಂದ ಶ್ರೀಗಾರ್, ದಿವಂಗತ ಸುರೇಶ್ ಪರವಾಗಿ ಅವರ ತಾಯಿ ಪುಟ್ಟಮ್ಮರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಓಂ ಸಾಯಿ ಫ್ರೆಂಡ್ಸ್ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.
ಉಡುಪಿ : ಸುಂದರ್ ಪೂಜಾರಿ ಮೂಡುಕುಕ್ಕುಡೆಯವರಿಗೆ ವಲ್ಡ್೯ ಪ್ರೆಸಿಡೆಂಟ್ ಎಪ್ರಿಸಿಯೇಶನ್ ಪ್ರಶಸ್ತಿ
Posted On: 23 Jan 2024, 06:35 PM
ಉಡುಪಿ : ತಿರುವನಂತಪುರದ ಅಲ್ಸಾಜ್ ಕನ್ವೆನ್ಷನ್ ಹಾಲ್ ನಲ್ಲಿ ನಡೆದ 3 ದಿನದ ಅಂತರಾಷ್ಟ್ರೀಯ ಜಯಂಟ್ಸ್ ಸಮ್ಮೇಳನದಲ್ಲಿ ಕಳೆದ 2023ರ ಸಾಲಿನಲ್ಲಿ ನಡೆಸಿದ ಸಮಾಜಮುಖಿ ಕಾರ್ಯಕ್ರಮಗಳಿಗಾಗಿ ಬ್ರಹ್ಮಾವರ ಜಯಂಟ್ಸ್ ನ ಮಾಜಿ ಅಧ್ಯಕ್ಷರಾದ ಸುಂದರ್ ಪೂಜಾರಿ ಮೂಡುಕುಕ್ಕುಡೆ ಯವರಿಗೆ ರಾಷ್ಟ್ರಮತ್ತು ರಾಜ್ಯ ಮಟ್ಟದ ವಲ್ಡ್೯ ಪ್ರೆಸಿಡೆoಟ್ ಎಪ್ರಿಸಿಯೇಶನ್ ಪ್ರಶಸ್ತಿಯನ್ನು ನೀಡಲಾಯಿತು. ಈ ಕಾಯ೯ಕ್ರಮದಲ್ಲಿ ಜಯಂಟ್ಸ್ ಅಂತರಾಷ್ಟ್ರೀಯ ಅಧ್ಯಕ್ಷೆ ಶೈನಾ, ಉಪಾಧ್ಯಕ್ಷ ನೂರುದ್ದೀನ್, ಕೇಂದ್ರ ಸಮಿತಿ ಸದಸ್ಯ ದಿನಕರ್ ಅಮೀನ್ ಮುಂತಾದವರಿದ್ದರು.
ಜ.24-25: ಸಾಸ್ತಾನ ಶ್ರೀ ನಾಲ್ಕು ಪಾದ ಹ್ಯಾಗೂಳಿ, ಕೋಳೆರಾಯ, ಪರಿವಾರ ದೈವಗಳ ದೈವಸ್ಥಾನದ ವಾರ್ಷಿಕ ಗೆಂಡೆ ಸೇವೆ, ಕೋಲಸೇವೆ
Posted On: 23 Jan 2024, 06:24 PM
ಸಾಸ್ತಾನ : ಉಡುಪಿ ಜಿಲ್ಲೆಯ ಸಾಸ್ತಾನ ಕೋಡಿತಲೆಯ ಶ್ರೀ ನಾಲ್ಕುಪಾದ ಹ್ಯಾಗೂಳಿ ಹಾಗೂ ಕೋಳೆರಾಯ ಮತ್ತು ಪರಿವಾರ ದೈವಗಳ ದೈವಸ್ಥಾನದ ವಾರ್ಷಿಕ ಜಾತ್ರೆಯ ಗೆಂಡ ಸೇವೆ ಹಾಗೂ ಕೋಲವು ಜ. 24 ಮತ್ತು ಜ. 25 ರಂದು ನಡೆಯಲಿದೆ. ಜ.23 ರಿಂದ ಪಂಚ ವಿಂಶತಿ ಕಲಶ ಸ್ಥಾಪನೆ, ಅಧಿವಾಸ ಹೋಮ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಪ್ರಾರಂಭಗೊಂಡು ಜ.24 ರಂದು ರಾತ್ರಿ 8 ಗಂಟೆಗೆ ‘ಗೆಂಡಸೇವೆ’ ಮತ್ತು ಸೇವಾ ಕರ್ತರಿಂದ ರಾತ್ರಿ ಸಾರ್ವಜನಿಕ ಅನ್ನ ಸಂತರ್ಪಣೆ ಕಾರ್ಯಕ್ರಮ ಮತ್ತು ಕೋಲ ಸೇವೆ ನಡೆಯಲಿದೆ. ಜ.25 ರಂದು ಮಧ್ಯಾಹ್ನ ಹರಕೆಯ ರೂಪದಲ್ಲಿ ‘ತುಲಾಭಾರ ಸೇವೆ’ ಹಾಗೂ ದೇವಸ್ಥಾನದ ವತಿಯಿಂದ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದು ದೈವಸ್ಥಾನದ ಆಡಳಿತ ಮಂಡಳಿಯ ಪ್ರಕಟಣೆಯಲ್ಲಿ ತಿಳಿಸಿದೆ. ಜ.21ರಂದು ಹ್ಯಾಗೂಳಿ, ಪಂಜುರ್ಲಿ ದೈವಗಳಿಗೆ ಸಮರ್ಪಣೆ ಮಾಡಲಿರುವ ಚಿನ್ನದ ಮುಖವಾಡದ ಮೆರವಣಿಗೆ ಜರಗಿತ್ತು.
ಕುತ್ಯಾರು : ಶ್ರೀ ರಾಮಾಯಣ ಕಥಾ ಮಾಲಿಕೆ ಸಮಾರೋಪ
Posted On: 23 Jan 2024, 06:12 PM
ಕುತ್ಯಾರು : ಆನೆಗೊಂದಿ ಶ್ರೀ ಸರಸ್ವತಿ ಪೀಠ ಸೂರ್ಯ ಚೈತನ್ಯ ಹೈಸ್ಕೂಲ್ ಕುತ್ಯಾರು ಇಲ್ಲಿ ಜನವರಿ 10 ರಿಂದ 23ರವರೆಗೆ ರಾಮಾಯಣದ ಏಳು ಕಾಂಡಗಳ ಕಥೆಯನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಶ್ರೀ ರಾಮಾಯಣ ಕಥಾ ಮಾಲಿಕೆಯನ್ನು ನಡೆಸಲಾಯಿತು. ಸಮಾರೋಪ ಸಮಾರಂಭದಲ್ಲಿ ಕಥಾ ನಿರೂಪಣೆ ಮಾಡಿದ ಪಾಂಡುರಂಗ ಶಾನುಬಾಗ್ ಇವರನ್ನು ಆಡಳಿತ ಮಂಡಳಿ ಉಪಾಧ್ಯಕ್ಷ ವಿವೇಕ ಆಚಾರ್ಯ ಮಂಚಕಲ್ ಮತ್ತು ಶಾಲಾ ಶೈಕ್ಷಣಿಕ ಸಲಹೆಗಾರ ದಿವಾಕರ ಆಚಾರ್ಯ ಗೇರುಕಟ್ಟೆ ಗೌರವಿಸಿದರು. ಶಿಕ್ಷಕ ವೃಂದದವರು ಮತ್ತು ಆಡಳಿತ ಮಂಡಳಿಯ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸತೀಶ್ ಕುತ್ಯಾರು ಸ್ವಾಗತಿಸಿ ಸಂಸ್ಥೆಯ ಪ್ರಾಂಶುಪಾಲರಾದ ಸಂಗೀತ ರಾವ್ ವಂದಿಸಿದರು.
ಅಯೋದ್ಯೆ ರಾಮ ಮಂದಿರದಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠೆ : ಕಾಪು ಮಾರಿಯಮ್ಮ ಸನ್ನಿದಾನದಲ್ಲಿ ವಿಶೇಷ ಪೂಜೆ
Posted On: 23 Jan 2024, 05:36 PM
ಕಾಪು : ಪ್ರಭು ಶ್ರೀ ರಾಮಚಂದ್ರನ ಪ್ರಾಣಪ್ರತಿಷ್ಠೆ ಸಂದರ್ಭ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಕಾಪು ಶ್ರೀ ಮಾರಿಯಮ್ಮ ದೇವಸ್ಥಾನ (ಶ್ರೀ ಹೊಸ ಮಾರಿಗುಡಿ ದೇವಸ್ಥಾನ) ಇಲ್ಲಿ ಕ್ಷೇತ್ರದ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯಾ ಇವರು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಮತ್ತು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಮೇಶ್ ಹೆಗ್ಡೆ ಕಲ್ಯಾ ಉಪಸ್ಥಿತಿಯಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿದರು. ಬೈದಶ್ರೀ ಭಜನಾ ತಂಡ ಬಡಾ ಎರ್ಮಾಳು ಇವರಿಂದ ಭಜನಾ ಸಂಕೀರ್ತನೆ ನಡೆಯಿತು. ವ್ಯವಸ್ಥಾಪನಾ ಸಮಿತಿಯ ಸದಸ್ಯರುಗಳಾದ ರವೀಂದ್ರ ಎಮ್, ಬಾಬು ಮಲ್ಲಾರ್, ಶೈಲಜಾ ಪುರುಷೋತ್ತಮ್, ಪ್ರಬಂಧಕರಾದ ಗೋವರ್ಧನ್ ಸೇರಿಗಾರ್, ಸಿಬ್ಬಂದಿ ಲಕ್ಷ್ಮಣ್ ಶೆಟ್ಟಿ ಮಂಡೇಡಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
