Updated News From Kaup

ಉಚ್ಚಿಲ : ದಸರಾ ನಿರ್ವಿಘ್ನವಾಗಿ ನೆರವೇರಲು ಸಮುದ್ರ ರಾಜನಿಗೆ ವಿಶೇಷ ಪೂಜೆ

Posted On: 24-10-2023 12:59PM

ಉಚ್ಚಿಲ : ಶ್ರೀ ಕ್ಷೇತ್ರ ಉಚ್ಚಿಲದ ಆಶ್ರಯದಲ್ಲಿ ನಡೆಯುತ್ತಿರುವ ಉಚ್ಚಿಲ ದಸರಾ 2023ರ ನವದುರ್ಗೆಯರ ಶೋಭಾಯಾತ್ರೆ ಹಾಗೂ ಜಲಸ್ತಂಭನದ ಪೂರ್ವಭಾವಿಯಾಗಿ ಇಂದು ಕಾರ್ಯಕ್ರಮವು ನಿರ್ವಿಘ್ನವಾಗಿ ನೇರವೇರುವಂತೆ ಪ್ರಾರ್ಥಿಸಿ ಸಮುದ್ರ ರಾಜನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಈ ಸಂದರ್ಭ ದೇವಳದ ಪ್ರಮುಖರು ಉಪಸ್ಥಿತರಿದ್ದರು.

ಶಿರ್ವ : ಚಂದ್ರನಗರದಲ್ಲಿ ಆರೋಗ್ಯ ಮಾಹಿತಿ ಶಿಬಿರ

Posted On: 23-10-2023 01:04PM

ಶಿರ್ವ : ರೋಟರಿ ಕ್ಲಬ್ ಶಿರ್ವ ಆಶ್ರಯದಲ್ಲಿ ಚಂದ್ರನಗರದ ಬಟರ್ ಫ್ಲೈ ಗೆಸ್ಟ್ ಹೌಸ್ ಮತ್ತು ಪಾರ್ಟಿ ಹಾಲ್ ಸಭಾಂಗಣದಲ್ಲಿ ಆರೋಗ್ಯ ಮಾಹಿತಿ ಶಿಬಿರವನ್ನು ಶಿರ್ವ ರೋಟರಿ ಕ್ಲಬ್ ಅಧ್ಯಕ್ಷರಾದ ಫಾರೂಕ್ ಚಂದ್ರನಗರ ಉದ್ಘಾಟಿಸಿದರು.

ಸನ್ಮಾನ : ಪ್ರೊಫೆಸರ್ ಹಾಗೂ ವೈದ್ಯಾಧಿಕಾರಿ ವಿ.ಪಿ.ಎ.ಎಂ.ಸಿ ವಡ್ನಗರ್ ಅಹಮದಬಾದ್, ಡಾ. ಶಿಬ್ಗತ್ಉಲ್ಲಾ ಶರೀಫ್ ಆರ್ ರವರನ್ನು ಸನ್ಮಾನಿಸಲಾಯಿತು.

ತದ ನಂತರ ಆರೋಗ್ಯದ ಬಗ್ಗೆ ಮಾಹಿತಿ ನೀಡಲಾಯಿತು.

ಈ ಸಂದರ್ಭದಲ್ಲಿವಿಲಿಯಮ್ ಮಚದೊ, ರಘುಪತಿ ಐತಾಳ್, ಫಿಲಿಫ್ ಕೇಸ್ತಾಲಿನೋ, ದಿವಾಕರ ಡಿ ಶೆಟ್ಟಿ, ಮೇಲ್ವಿನ್ ಡಿಸೋಜ, ಮೈಕಲ್ ಮತಾಯಸ್, ದಿವಾಕರ ಬಿ ಶೆಟ್ಟಿ ಕಳತ್ತೂರು ಮತ್ತಿತರರು ಉಪಸ್ಥಿತರಿದ್ದರು.

ಕಾಪು : ಮಟ್ಟಾರುವಿನಲ್ಲಿ ದುರ್ಗಾಷ್ಟಮಿ ಉತ್ಸವ ಕಾರ್ಯಕ್ರಮ

Posted On: 23-10-2023 11:25AM

ಕಾಪು‌‌ : ವಿಶ್ವ ಹಿಂದೂ ಪರಿಷದ್ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ಮಟ್ಟಾರು ನೇತೃತ್ವದಲ್ಲಿ ದುರ್ಗಾಷ್ಟಮಿ ಉತ್ಸವ ಕಾರ್ಯಕ್ರಮ ಮಟ್ಟಾರು ಬಯಲು ರಂಗಮಂದಿರದಲ್ಲಿ ಜರಗಿತು.

ಮಾತೃಶಕ್ತಿ ಉಡುಪಿ ಜಿಲ್ಲಾ ಪ್ರಮುಖ್ ಪೂರ್ಣಿಮಾ ಸುರೇಶ್ ದುರ್ಗಾಷ್ಟಮಿ ಉತ್ಸವದ ಸಂದೇಶ ನೀಡಿದರು.

ಮಟ್ಟಾರು ಘಟಕ ಮಾತೃಶಕ್ತಿ ಪ್ರಮುಖ್ ಸುಮತಿ ಸಾಲ್ಯಾನ್ ಸಭಾಧ್ಯಕ್ಷತೆ ವಹಿಸಿದ್ದರು. ಶಿರ್ವ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ವಾರಿಜಾ ಪೂಜಾರಿ, ಹಿಂದೂ ಜೂನಿಯರ್ ಕಾಲೇಜು ಉಪನ್ಯಾಸಕಿ ಸುಪ್ರೀತಾ ಶೆಟ್ಟಿ, ಉಪ ಆರೋಗ್ಯ ಕೇಂದ್ರದ ಪ್ರಾಥಮಿಕ ಸುರಕ್ಷಾಧಿಕಾರಿ ಗೀತಾ, ಮಾತೃಶಕ್ತಿ ಕಾಪು ಪ್ರಖಂಡ ಸಹಪ್ರಮುಖ್ ಉಷಾ ಪಾಟ್ಕರ್, ದುರ್ಗಾವಾಹಿನಿ ಮಟ್ಟಾರು ಸಂಚಾಲಕಿ ಕುಮಾರಿ ಶ್ವೇತಾ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕು.ಶ್ವೇತಾ ರಾವ್ ಸ್ವಾಗತಿಸಿದರು. ಕು.ಶ್ರೀರಕ್ಷಾ ಆಚಾರ್ಯ ವಂದಿಸಿದರು. ಭಜನೆ, ದುರ್ಗಾಪೂಜೆ ಮತ್ತು ಪ್ರಸಾದ ವಿತರಣೆ ಜರಗಿತು.

ಕಾಪು : ದೇವಾಡಿಗರ ಸಂಘದ ನೂತನ ಕಟ್ಟಡಕ್ಕೆ ಗುದ್ದಲಿ ಪೂಜೆ

Posted On: 22-10-2023 01:14PM

ಕಾಪು : ದೇವಾಡಿಗರ ಸೇವಾ ಸಂಘ (ರಿ.) ಕಾಪು ಇದರ ನೂತನ ಕಟ್ಟಡದ ಗುದ್ದಲಿ ಪೂಜೆಯು ಭಾನುವಾರ ಜರಗಿತು.

ಕಾಪು ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ವಾಸುದೇವ ಶೆಟ್ಟಿ ದೇವಾಡಿಗರ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಶುಭ ಹಾರೈಸಿ ರೂ.99,999 ನ್ನು ತನ್ನ ವೈಯುಕ್ತಿಕ ನೆಲೆಯಲ್ಲಿ ದೇಣಿಗೆ ನೀಡಿದರು. ಕಾಪು ದೇವಾಡಿಗರ ಸೇವಾ ಸಂಘದ ಅಧ್ಯಕ್ಷರಾದ ಗೋವರ್ಧನ್ ಸೇರಿಗಾರ್ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ‌ ಸಂದರ್ಭ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಶಾಸಕರಾದ ಲಾಲಾಜಿ ಆರ್ ಮೆಂಡನ್, ಕಾಪು ಹೊಸ ಮಾರಿಗುಡಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ರಮೇಶ್ ಹೆಗ್ಡೆ ಕಲ್ಯ, ಕಾಪು ದೇವಾಡಿಗರ ಸೇವಾ ಸಂಘದ ಮಹಿಳಾ ಘಟಕದ ಅಧ್ಯಕ್ಷರಾದ ಸಾವಿತ್ರಿ ಸುಧಾಕರ, ಪುರಸಭಾ ಸದಸ್ಯರಾದ ಹರಿಣಾಕ್ಷಿ, ಅರುಣ್ ಶೆಟ್ಟಿ, ವಿದ್ಯಾಲತಾ, ಲಕ್ಷ್ಮಿ ಜನಾರ್ದನ ದೇವಸ್ಥಾನ ಆಡಳಿತಾಧಿಕಾರಿಗಳಾದ ಅರುಣ್, ಕಾಪು ದೇವಾಡಿಗರ ಸೇವಾ ಸಂಘದ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.

ಕಾಪು : ಸವೋಚ್ಚ ನ್ಯಾಯಾಲಯದ ವಿಶ್ರಾಂತ ಮುಖ್ಯ ನ್ಯಾಯಮೂರ್ತಿ, ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಭೇಟಿ

Posted On: 21-10-2023 07:46PM

ಕಾಪು : ಸವೋಚ್ಚ ನ್ಯಾಯಾಲಯದ ವಿಶ್ರಾಂತ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಮತ್ತು ಶಿವಮಾಲಾ ದಂಪತಿ ಹಾಗೂ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಲಲಿತಾ ಕನ್ನೆಗಂಟಿ ಅವರು ಶನಿವಾರ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀದೇವಿಯ ದರುಶನಗೈದು ಜೀರ್ಣೋದ್ಧಾರ ಕಾರ್ಯಗಳನ್ನು ವೀಕ್ಷಿಸಿದರು.

ಅವರನ್ನು ಹುಲಿಕುಣಿತ ಮತ್ತು ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು.

ದೇವಳದ ಪ್ರಧಾನ ತಂತ್ರಿಗಳಾದ ವಿದ್ವಾನ್ ಕುಮಾರಗುರು ತಂತ್ರಿ, ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯಾ ಇವರು ಪ್ರಾರ್ಥಿಸಿ ಮಾರಿಯಮ್ಮನ ಅನುಗ್ರಹ ಪ್ರಸಾದವನ್ನು ನೀಡಿದರು.

ಕಾಪು ಶಾಸಕರು ಮತ್ತು ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷರಾದ ಗುರ್ಮೆ ಸುರೇಶ್ ಶೆಟ್ಟಿ, ಅಧ್ಯಕ್ಷರಾದ ಕೆ. ವಾಸುದೇವ ಶೆಟ್ಟಿ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ರಮೇಶ್ ಹೆಗ್ಡೆ ಕಲ್ಯಾ, ಕಾರ್ಯನಿರ್ವಹಣಾಧಿಕಾರಿ ರವಿಕಿರಣ್, ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾದ ಅನಿಲ್ ಬಲ್ಲಾಳ್ ಕಾಪು ಬೀಡು, ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷರು ಮತ್ತು ಜೀರ್ಣೋದ್ಧಾರ ಸಮಿತಿಯ ಗೌರವ ಸಲಹೆಗಾರರಾದ ರತ್ನಾಕರ ಶೆಟ್ಟಿ ನಡಿಕೆರೆ, ನಿರ್ಮಲ್ ಕುಮಾರ್ ಹೆಗ್ಡೆ, ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷರುಗಳಾದ ಕಾಪು ದಿವಾಕರ ಶೆಟ್ಟಿ, ಮಾಧವ ಆರ್ ಪಾಲನ್, ಮನೋಹರ್ ಎಸ್ ಶೆಟ್ಟಿ, ಆರ್ಥಿಕ ಸಮಿತಿಯ ಪ್ರಧಾನ ಸಂಚಾಲಕರಾದ ಉದಯ ಸುಂದರ್ ಶೆಟ್ಟಿ, ಪ್ರಚಾರ ಸಮಿತಿಯ ಪ್ರಧಾನ ಸಂಚಾಲಕರಾದ ಯೋಗೀಶ್ ವಿ. ಶೆಟ್ಟಿ ಬಾಲಾಜಿ, ಆರ್ಥಿಕ ಸಮಿತಿಯ ಮುಖ್ಯ ಸಂಚಾಲಕರಾದ ರತ್ನಾಕರ ಹೆಗ್ಡೆ ಕಲ್ಯಾ ಬೀಡು, ರಮೇಶ್ ಶೆಟ್ಟಿ ಕಾಪು ಕೊಲ್ಯ, ಮೋಹನ್ ವಿ. ಶೆಟ್ಟಿ ಮುಂಬೈ, ಸಂದೀಪ್ ಶೆಟ್ಟಿ ಶಿರ್ವ, ಮುಂಬೈ, ಸಿ.ಎ ರವಿರಾಜ್ ಶೆಟ್ಟಿ, ಜಗದೀಶ್ ಶೆಟ್ಟಿ ನಂದಳಿಕೆ, ಮುಂಬೈ, ವ್ಯವಸ್ಥಾಪನಾ ಸಮಿತಿಯ ಸದಸ್ಯರುಗಳಾದ ಜಗದೀಶ್ ಬಂಗೇರ, ಬಾಬು ಮಲ್ಲಾರ್, ಗ್ರಾಮ ಸಮಿತಿಯ ಪ್ರಧಾನ ಸಂಚಾಲಕರಾದ ಜಿ. ಲೀಲಾಧರ ಶೆಟ್ಟಿ, ಅರುಣ್ ಶೆಟ್ಟಿ ಪಾದೂರು, ಕಚೇರಿ ನಿರ್ವಹಣಾ ಸಮಿತಿಯ ಪ್ರಧಾನ ಸಂಚಾಲಕರಾದ ಮಧುಕರ್ ಎಸ್, ಗೀತಾಂಜಲಿ ಎಮ್ ಸುವರ್ಣ, ವೀಣಾ ಶೆಟ್ಟಿ, ಪ್ರಚಾರ ಸಮಿತಿಯ ಸಂಚಾಲಕರಾದ ಜಯರಾಮ ಆಚಾರ್ಯ, ರಘುರಾಮ್ ಶೆಟ್ಟಿ ಕೊಪ್ಪಲಂಗಡಿ ಆರ್ಥಿಕ ಸಮಿತಿಯ 9 ತಂಡಗಳ ಮುಖ್ಯ ಸಂಚಾಲಕರು, ಸಂಚಾಲಕರುಗಳು, ವಿವಿಧ ಸಮಿತಿಯ ಸಂಚಾಲಕರುಗಳು, ದೇವಳದ ಸಿಬ್ಬಂದಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಉಡುಪಿ ‌: ಪ್ಲಾಸ್ಟಿಕ್ ತ್ಯಾಜ್ಯ ಕಡಿಮೆ ಮಾಡುವುದು, ಮರುಬಳಕೆ, ಮರು ಉತ್ಪಾದನೆ ಬಗ್ಗೆ ಜಾಗೃತಿ ಅಭಿಯಾನ

Posted On: 20-10-2023 02:38PM

ಉಡುಪಿ : ಆಕಾಶ್ ಬೈಜೂಸ್ ನ ಜಂಕ್ ದಿ ಪ್ಲಾಸ್ಟಿಕ್ ಅಭಿಯಾನ ಪ್ಲಾಸ್ಟಿಕ್ ತ್ಯಾಜ್ಯ ಕಡಿಮೆ ಮಾಡುವುದು, ಮರುಬಳಕೆ ಮತ್ತು ಮರು ಉತ್ಪಾದನೆ ಮಾಡುವ ಬಗ್ಗೆ ಜಾಗೃತಿ ಮೂಡಿಸುವ ಅಭಿಯಾನ ಉಡುಪಿಯಲ್ಲಿ ‌ಜರಗಿತು.

ವಿದ್ಯಾರ್ಥಿಗಳಿಗೆ ಪ್ರಕೃತಿಯ ಬಗ್ಗೆ ಪ್ರೀತಿಯನ್ನು ಬೆಳೆಸಲು ನೆರವಾಗುವ ವಿಚಾರದಲ್ಲಿ ಉಡುಪಿಯನ್ನು ಸ್ವಚ್ಛಗೊಳಿಸಲು ಹಾಗೂ ನಮ್ಮ ಅದ್ಭುತ ನಗರ ನಿರ್ವಹಣೆಗೆ ಕೊಡುಗೆಯನ್ನು ನೀಡುವ ಭಾಗವಾಗಿರಲು ನಾವು ಸಂತೋಷ ಪಡುತ್ತೇವೆ ಎಂದು ಸಂಸ್ಥೆಯ ಮುಖ್ಯಸ್ಥರು‌‌‌ ಹೇಳಿದರು.

ಮುಂಬರುವ ದಿನಗಳಲ್ಲಿ ದೇಶದ ಇತರ ಕರಾವಳಿ ನಗರಗಳಿಗೂ ಈ ಅಭಿಯಾನವನ್ನು ವಿಸ್ತರಣೆ ಮಾಡಲು ಆಕಾಶ್ ಬೈಜೂಸ್ ಉದ್ದೇಶಿಸಿದೆ. ಈ ನಿಟ್ಟಿನಲ್ಲಿ ಈಗಾಗಲೇ ಕಣ್ಣೂರು, ಕೋಝಿಕೋಡ್, ಚೆನ್ನೈ, ವಿಶಾಖಪಟ್ಟಣ, ಮುಂಬೈ, ಮತ್ತು ಪಣಜಿಯ ಕಡಲ ಕಿನಾರೆಗಳಲ್ಲಿ ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದರು.

ಈ ಸಂದರ್ಭದಲ್ಲಿ ಉಡುಪಿ ಮುನ್ಸಿಪಾಲ್ ಕಮಿಷನರ್ ರಾಯಪ್ಪ, ಆಕಾಶ್ ಬೈಜೂಸ್ ಸಂಸ್ಥೆಯ ಅನಿಲ್ ಕುಮಾರ, ಶ್ಯಾಮ್ ಪ್ರಸಾದ್, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಅಕ್ಟೊಬರ್ 21 : ಉಡುಪಿಯ ಬೊಬ್ಬರ್ಯಕಟ್ಟೆಯಲ್ಲಿ ಹೂವಿನ ಪೂಜೆ, ಕಲ್ಕುಡ ದೈವದ ದರ್ಶನ ಸೇವೆ

Posted On: 20-10-2023 02:09PM

ಉಡುಪಿ : ವುಡ್ ಲ್ಯಾಂಡ್ಸ್ ಹೋಟೆಲ್ ಹತ್ತಿರದ ಬೊಬ್ಬರ್ಯ ಕಾಂತೇರಿ ಜುಮಾದಿ ಕಲ್ಕುಡ್ಡ ಕೊರಗಜ್ಜ ಪರಿವಾರ ದೈವಗಳ ದೈವಸ್ಥಾನ ಬೊಬ್ಬರ್ಯಕಟ್ಟೆಯಲ್ಲಿ ಅಕ್ಟೋಬರ್ 21, ಶನಿವಾರ ಹೂವಿನ ಪೂಜೆ, ಕಲ್ಕುಡ ದರ್ಶನ ಸೇವೆ ನಡೆಯಲಿದೆ.

ಶನಿವಾರದಂದು ಸಂಜೆ 5:30ಕ್ಕೆ ಸೇವಾಕರ್ತರಾದ ಸುಧಾಕರ್ ಶೆಟ್ಟಿ ಬನ್ನಂಜೆ ವತಿಯಿಂದ ಹೂವಿನ ಪೂಜೆ ಹಾಗೂ ಕಲ್ಕುಡ ದೈವದ ದರ್ಶನ ಸೇವೆ ಜರಗಲಿರುವುದು.

ಈ ಪುಣ್ಯದ ಕಾರ್ಯದಲ್ಲಿ ದೈವದ ಗಂಧ ಪ್ರಸಾದ ಪಡೆದು ದೈವದ ಕೃಪೆಗೆ ಪಾತ್ರರಾಗಬೇಕೆಂದು ಅನಂತೇಶ್ವರ ದೇವಸ್ಥಾನ ಆಡಳಿತ ಮಂಡಳಿ ಉಡುಪಿ ಹಾಗೂ ಬಬ್ಬರ್ಯ ಸೇವಾ ಸಮಿತಿಯವರು ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.

ವಿಶ್ವಕರ್ಮ ಯುವ ಮಿಲನ್ ಸಂಘದ ಘಟಕಗಳ ಉದ್ಘಾಟನೆ

Posted On: 20-10-2023 01:52PM

ಉಡುಪಿ : ವಿಶ್ವಕರ್ಮ ಯುವ ಮಿಲನ್(ರಿ.)ಕರ್ನಾಟಕ ರಾಜ್ಯ, ಕೇಂದ್ರ ಕಚೇರಿ ಮಂಗಳೂರು, ಇದರ ರಾಜ್ಯಾಧ್ಯಕ್ಷರಾದ ವಿಕ್ರಮ್ ಐ. ಆಚಾರ್ಯರು ಸಂಘದ ವಿವಿಧ ಘಟಕಗಳನ್ನು ಉದ್ಘಾಟಿಸಿದರು.

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿ ಹೋಬಳಿ, ಶೀಲನೆರೆ ಹೋಬಳಿ, ಬುಕನಕೆರೆ ಹೋಬಳಿ, ಅಕ್ಕಿ ಹೆಬ್ಬಾಳು ಮತ್ತು ಕಸಬಾ ಹೊಬ್ಬಳ್ಳಿಯಲ್ಲಿ ಮಂಡ್ಯ ವಿಶ್ವಕರ್ಮ ಯುವ ಮಿಲನ್ ಸಂಘದ ಘಟಕಗಳ ಉದ್ಘಾಟನೆ ಮಾಡಲಾಯಿತು.

ಯುವ ಸಂಘಟನೆಯು ಬೆಂಕಿಯಂತೆ ಇರಬೇಕು, ಸಮಾಜದ ರಕ್ಷಣೆ ಹಾಗೂ ಸಮಾಜದ ಒಗ್ಗಟ್ಟಿಗೆ ಯುವ ಶಕ್ತಿ ಮುಖ್ಯ ಎಂಬುದಾಗಿ ರಾಜ್ಯಾಧ್ಯಕ್ಷರು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಮೋಹನ್ ಆಚಾರ್ಯ, ಕೆ.ಆರ್.ಪೇಟೆ ತಾಲೂಕು ಅಧ್ಯಕ್ಷರಾದ ವಿಜಯ್ ಕುಮಾರ್, ಪುರ ಗ್ರಾಮ ಘಟಕ ಅಧ್ಯಕ್ಷ ವಿಜಯ್ ಕುಮಾರ್, ಆಕಾಶ್ ಆಚಾರ್ಯ ಪಾಂಡೇಶ್ವರ ಹಾಗೂ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಕಾಪು‌ : ಗಾಲಿ ಕುರ್ಚಿಯ ಮೂಲಕ ಕೇರಳ - ಕೊಲ್ಲೂರು ದೇವಳ ಭೇಟಿ

Posted On: 20-10-2023 01:44PM

ಕಾಪು : ಜೀವನದಲ್ಲಿ ಭಯ,ಭಕ್ತಿ, ನಂಬಿಕೆಗಳು ಮನುಷ್ಯನನ್ನು ರೂಪಿಸಲು ಇರುವ ಮಾರ್ಗಗಳು. ನ್ಯೂನತೆಗಳಿದ್ದರೂ ದೇವರ ಮೇಲಿನ ಭಕ್ತಿ ವ್ಯಕ್ತಿಗೆ ಶಕ್ತಿ ನೀಡುವುದರಲ್ಲಿ ಎರಡು ಮಾತಿಲ್ಲ. ಅಂತೆಯೇ ಇಲ್ಲೋರ್ವ ಅಂಗವಿಕಲತೆ ಇದ್ದರೂ ದೇವರ ಮೇಲಿನ ಭಕ್ತಿಯಿಂದ ಗಾಲಿ ಕುರ್ಚಿಯ ಮೂಲಕ ದೇವಾಲಯ ಭೇಟಿ ನೀಡುತ್ತಿದ್ದಾರೆ.

ಕೇರಳದ ಕಣ್ಣನ್ ಅಯ್ಯಪ್ಪ ಮಾಲಾಧಾರಿಯಾಗಿ ಕೇರಳದ ಶಬರಿಮಲೆಯಿಂದ ಕೊಲ್ಲೂರು ಮೂಕಾಂಬಿಕೆಯ ಸನ್ನಿಧಾನಕ್ಕೆ ತೆರಳಲಿದ್ದಾರೆ.

ಕಾಪುವಿಗೆ ಆಗಮಿಸಿದ್ದ ಸಂದರ್ಭ ನಮ್ಮ ಕಾಪು ನ್ಯೂಸ್ ವೆಬ್ ಪೋರ್ಟಲ್ ನೊಂದಿಗೆ ಮಾತನಾಡಿದ ಅವರು ಈಗಾಗಲೇ 15 ದಿನಗಳನ್ನು ಗಾಲಿ ಕುರ್ಚಿಯ ಮೂಲಕ ಕ್ರಯಿಸಿದ್ದೇನೆ. 21 ದಿನದ ಒಳಗೆ ಯಾತ್ರೆ ಸಂಪೂರ್ಣಗೊಳಿಸಬೇಕೆಂದಿದ್ದೇನೆ. ಸಾರ್ವಜನಿಕರ ಸಹಕಾರ ಅಗತ್ಯ. ಯಾರಾದರೂ ದಾನಿಗಳು ಕಾಣಿಕೆ ನೀಡುವುದಿದ್ದರೆ ಅದನ್ನು ಸ್ವೀಕರಿಸಲು ಸಿದ್ಧನಿದ್ದೇನೆ ಎಂದರು.

ಒಟ್ಟಿನಲ್ಲಿ ದೇವರ ಮೇಲೆ ಭಕ್ತಿ ಇದ್ದಲ್ಲಿ ದೈಹಿಕ ನ್ಯೂನತೆಗಳು ನಗಣ್ಯ.

ಉಚ್ಚಿಲ : ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಸಾರ್ವಜನಿಕರ ಮನಸೂರೆಗೊಂಡ ವೀಣಾವಾದನ

Posted On: 20-10-2023 01:33PM

ಉಚ್ಚಿಲ : ಶ್ರೀ ಮಹಾಲಕ್ಷ್ಮಿ ದೇವಸ್ಥಾನ ಉಚ್ಚಿಲದಲ್ಲಿ ಗುರುವಾರ ಸಂಜೆ ನವದುರ್ಗೆಯರ ಸಮ್ಮುಖದಲ್ಲಿ ವೀಣಾವಾದನ ಜರಗಿತು. 9 ಜನ ಪಕ್ಕ ವಾದ್ಯ ಸಹಿತ ಕಿರಿಯರಿಂದ ಹಿರಿಯರಾದಿಯಾಗಿ 151 ವೀಣಾವಾದಕರು ವೀಣಾವಾದನ ನಡೆಸಿಕೊಟ್ಟರು. ಸುಮಾರು ಒಂದು ಗಂಟೆಗಳ ಕಾಲ ನಡೆದ ವೀಣಾವಾದನ ಸಾರ್ವಜನಿಕರ ಮನಸೂರೆಗೊಂಡಿತು.

ಸನ್ಮಾನ/ಬಿರುದು : ಶತವೀಣಾ ವಾದನದ ನೇತೃತ್ವ ವಹಿಸಿದ್ದ ವಿದುಷಿ ಪವನ ಬಿ. ಆಚಾರ್ ರನ್ನು ಶ್ರೀ ಕ್ಷೇತ್ರದ ವತಿಯಿಂದ ಸನ್ಮಾನಿಸಿ ವೀಣಾ ವಿಭೂಷಣೆ ಬಿರುದು ನೀಡಿ‌ ಗೌರವಿಸಲಾಯಿತು.

ಈ ಸಂದರ್ಭ ಕ್ಷೇತ್ರದ ಸಲಹೆಗಾರ ನಾಡೋಜ ಜಿ‌. ಶಂಕರ್ ಮಾತನಾಡಿ‌ ಕಳೆದ ಬಾರಿ 121 ವೀಣಾವಾದನವಿತ್ತು. ಈ ಬಾರಿ 151 ವೀಣಾ ಮಂದಿ‌ಯ ವೀಣಾವಾದನವಿದ್ದು, ಮುಂದಿನ ದಸರಾದ ಸಂದರ್ಭ 201 ವೀಣಾವಾದನವನ್ನು ಆಯೋಜಿಸಲಾಗುವುದು ಎಂದರು.

ಈ ಸಂದರ್ಭ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್, ದೇವಳದ ಅರ್ಚಕ ರಾಘವೇಂದ್ರ ಉಪಾಧ್ಯಾಯ, ವ್ಯವಸ್ಥಾಪಕ ಸತೀಶ್ ಅಮೀನ್ ಮತ್ತಿತರರು ಉಪಸ್ಥಿತರಿದ್ದರು.