Updated News From Kaup
ಕುತ್ಯಾರು : ಎಸ್. ಟಿ ಕಾಲೋನಿಯಲ್ಲಿ ಸಂವಿಧಾನ ಶಿಲ್ಪಿ ಡಾ. ಭೀಮ ರಾವ್ ಅಂಬೇಡ್ಕರ್ ಜಯಂತಿ ಆಚರಣೆ
Posted On: 14-04-2021 10:32PM
ಕಾಪು: ಕುತ್ಯಾರು ಗ್ರಾಮ ವ್ಯಾಪ್ತಿ ಯ ಎಸ್. ಟಿ ಕಾಲೋನಿಯಲ್ಲಿ ಸಂವಿಧಾನ ಶಿಲ್ಪಿ ಡಾ.ಭೀಮ ರಾವ್ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.
ಹೆಜಮಾಡಿ ಗ್ರಾಮಪಂಚಾಯತಿಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ
Posted On: 14-04-2021 08:58PM
ಕಾಪು : ನಾವೆಲ್ಲ ಇಂದು ರಾಜಕೀಯದ ಜ್ಞಾನವನ್ನು ಪಡೆಯಲು, ನಮ್ಮ ಹಕ್ಕು ಗಳ ಬಗ್ಗೆ ಕೂಲಂಕುಷವಾಗಿ ತಿಳಿಯಲು ಸಂವಿಧಾನ ಅತಿ ಮುಖ್ಯವಾಗಿದೆ .ಇದರ ನಿರ್ಮಾತೃ ಅಂಬೇಡ್ಕರ್. ಹೆಜ್ಜೆ ಹೆಜ್ಜೆಗೂ ಸವಾಲು, ಅವಮಾನಗಳನ್ನು ಮೆಟ್ಟಿನಿಂತ ಮಹಾನೀಯ. ಸಂವಿಧಾನವನ್ನು ತಿಳಿಯುವ ಮೊದಲು ಅಂಬೇಡ್ಕರರ ಜೀವನ ಚರಿತ್ರೆಯನ್ನು ತಿಳಿಯಬೇಕಾಗಿದೆ. ಆಗ ಮಾತ್ರ ಸಂವಿಧಾನದ ಮೂಲ ಆಶಯವನ್ನು ತಿಳಿಯಬಹುದು ಎಂದು ಮಂಗಳೂರಿನ ಬೆಸೆಂಟ್ ಎಂಬಿಎ ಕಾಲೇಜಿನ ಪ್ರಾಧ್ಯಾಪಕ ಸುರೇಶ್ ಹೆಜಮಾಡಿ ತಿಳಿಸಿದರು. ಹೆಜಮಾಡಿ ಗ್ರಾಮಪಂಚಾಯತ್ ನಲ್ಲಿ ಅಂಬೇಡ್ಕರ್ ಜಯಂತಿ ಆಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಎಕ್ಸ್ ಕ್ಲ್ಯೂಸಿವ್ ವಲ್ಡ್ ರೆಕಾರ್ಡ್ ಪುಟ ಸೇರಿದ ಮಹೇಶ್ ಮರ್ಣೆ
Posted On: 13-04-2021 06:40AM
2015ರಲ್ಲಿ 3500 ಐಸ್ ಕ್ರೀಮ್ ಕಡ್ಡಿ ಮತ್ತು 750 ಬೆಂಕಿಕಡ್ಡಿ ಯಿಂದ ರಚಿಸಿದ ಗಣಪತಿಯ ಕಲಾಕೃತಿ ಯ ಮೂಲಕ 'ಇಂಡಿಯಾ ಬುಕ್ ಆಫ್ ರೆಕಾರ್ಡ್ 'ಗೆ ಸೇರ್ಪಡೆ ಯಾಗಿ ಸುದ್ದಿಯಾಗಿದ್ದ ಉಡುಪಿ ಯ ಮರ್ಣೆ ಗ್ರಾಮದ ಯುವ ಕಲಾವಿದ ಮಹೇಶ್ ಮರ್ಣೆಯವರು ಇದೀಗ ದೇವಾಲಯಗಳ ಮುಂದೆ ಪೂಜನೀಯವಾಗಿ ಗುರುತಿಸಲ್ಪಡುವ ಅಶ್ವಥ ಎಲೆಯಲ್ಲಿ ಅತ್ಯಂತ ಸೂಕ್ಷ್ಮ ವಾಗಿ ಬ್ಲೇಡ್ ಸಹಾಯದಿಂದ ಕ್ರಿಕೆಟ್ ನ ದಂತಕತೆ ಕತೆ ಎಂದೇ ಖ್ಯಾತಿ ಪಡೆದ ಸಚಿನ್ ತೆಂಡುಲ್ಕರ್ ರವರ ಭಾವ ಚಿತ್ರವನ್ನು ಕೇವಲ 7ನಿಮಿಷದಲ್ಲಿ ರಚಿಸಿ ಉತ್ತರ ಪ್ರದೇಶದ ಬರೇಲಿಯ ಲಾಟಾ ಪ್ರತಿಷ್ಠಾನಕ್ಕೆ ಈ ತಿಂಗಳ 24 ರಂದು ವೀಡಿಯೋ ಚಿತ್ರೀಕರಿಸಿ ಪಟ್ಲ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಕಾಂತ್ ಪ್ರಭು ,ವಕೀಲರು ಗಳಾದ ಸಂತೋಷ್ ಕುಮಾರ್ ಮೂಡುಬೆಳ್ಳೆ ,ಅರೂರು ಸುಕೇಶ್ ಶೆಟ್ಟಿ ಇವರ ಸಾಕ್ಷಿಗಳೊಂದಿಗೆ ಕಳುಹಿಸಿದ್ದರು .ಅದನ್ನು ವೀಕ್ಷಿಸಿ ಸೂಕ್ಷ್ಮ ಕಲಾಕೃತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಎಕ್ಸ್ ಕ್ಲ್ಯೂಸಿವ್ ವಲ್ಡ್ ರೆಕಾರ್ಡ್ ಗೆ ಮಹೇಶ್ ರವರ ಹೆಸರನ್ನು ಸೇರ್ಪಡೆಗೊಳಿಸಿದ್ದಾರೆ.
ಕಟಪಾಡಿ : ನಾಪತ್ತೆಯಾದ ಯುವಕನ ಶವ ನೇಣು ಹಾಕಿದ ಸ್ಥಿತಿಯಲ್ಲಿ ಪತ್ತೆ
Posted On: 12-04-2021 07:47PM
ಕಾಪು : ಕಟಪಾಡಿ ಸರ್ವಿಸ್ ರಸ್ತೆಯ ನಾಗಬನದ ಹತ್ತಿರ ಮರಕ್ಕೆ ಬೆಲ್ಟಿನಿಂದ ನೇಣು ಹಾಕಿದ ಸ್ಥಿತಿಯಲ್ಲಿ ಯುವಕನೋರ್ವನ ಶವ ಪತ್ತೆಯಾಗಿದೆ. ಮೃತ ದೇಹವು ಕೊಳೆತ ಸ್ಥಿತಿಯಲ್ಲಿದ್ದು ವಾಸನೆ ಬರುತ್ತಿದ್ದುದನ್ನು ಗಮನಿಸಿದ ಸ್ಥಳೀಯರು ಕಾಪು ಪೋಲೀಸರಿಗೆ ಮಾಹಿತಿ ನೀಡಿದ್ದಾರೆ.
ಕಟಪಾಡಿ : ನಾಪತ್ತೆಯಾದ ಯುವಕನ ಶವ ನೇಣು ಹಾಕಿದ ಸ್ಥಿತಿಯಲ್ಲಿ ಪತ್ತೆ
Posted On: 12-04-2021 07:44PM
ಕಾಪು : ಕಟಪಾಡಿ ಸರ್ವಿಸ್ ರಸ್ತೆಯ ನಾಗಬನದ ಹತ್ತಿರ ಮರಕ್ಕೆ ಬೆಲ್ಟಿನಿಂದ ನೇಣು ಹಾಕಿದ ಸ್ಥಿತಿಯಲ್ಲಿ ಯುವಕನೋರ್ವನ ಶವ ಪತ್ತೆಯಾಗಿದೆ. ಮೃತ ದೇಹವು ಕೊಳೆತ ಸ್ಥಿತಿಯಲ್ಲಿದ್ದು ವಾಸನೆ ಬರುತ್ತಿದ್ದುದನ್ನು ಗಮನಿಸಿದ ಸ್ಥಳೀಯರು ಕಾಪು ಪೋಲೀಸರಿಗೆ ಮಾಹಿತಿ ನೀಡಿದ್ದಾರೆ.
ಉಡುಪಿ ಜಿಲ್ಲೆಯನ್ನು ಕುರುಡು ಮುಕ್ತ ಜಿಲ್ಲೆಯನ್ನಾಗಿಸಲು ಪ್ರಯತ್ನ : ಡಾ. ಕೃಷ್ಣಪ್ರಸಾದ್
Posted On: 12-04-2021 11:55AM
ಉಡುಪಿ : ಉಚಿತ ನೇತ್ರ ತಷಾಸಣಾ ಶಿಬಿರಗಳ ಮೂಲಕ ಉಡುಪಿ ಜೆಲ್ಲೆಯನ್ನು ಕುರುಡುಮುಕ್ತ ಜೆಲ್ಲೆಯನ್ನಾಗಿಸಲು ಪ್ರಯತ್ನಿಸುತ್ತಿರುವುದಾಗಿ ಉಡುಪಿ ಪ್ರಸಾದ್ ನೇತ್ರಾಲಯದ ನೇತ್ರ ತಜ್ಞ ನಾಡೋಜ ಗೌರವ ಪಡೆದ ಡಾ ಕೃಷ್ಣ ಪ್ರಸಾದ್ ತಿಳಿಸಿದರು. ಅವರು ಬಂಟಕಲ್ಲು ಜಿಝೊ ಎಜುಕೇಶನ್ ಸಭಾಂಗಣದಲ್ಲಿ ನಾಗರಿಕ ಸೇವಾ ಸಮಿತಿ (ರಿ.) ಬಂಟಕಲ್ಲು ಇವರ ಆಶ್ರಯದಲ್ಲಿ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ, ಸಮುದಾಯ ಆರೋಗ್ಯ ಕೇಂದ್ರ ಶಿರ್ವ, ಲಯನ್ಸ್ ಕ್ಲಬ್ ಬಂಟಕಲ್ಲು - ಬಿ.ಸಿ ರೋಡು, ರಾಜಾಪುರ ಸಾರಸ್ವತ ಯುವ ವೃಂದ ಬಂಟಕಲ್ಲು , ಶ್ರೀ ಗುರುರಾಘವೇಂದ್ರ ಸಮಾಜಸೇವಾ ಮಂಡಳಿ (ರಿ.) ಹೇರೂರು, ಕಥೋಲಿಕ್ ಸ್ತ್ರೀ ಸಂಘಟನೆ ಪಾಂಬೂರು ಘಟಕ, ಉಡುಪಿ ಜಿಲ್ಲಾ ಟ್ಯಾಕ್ಸಿ ಹಾಗೂ ಮ್ಯಾಕ್ಸಿಕ್ಯಾಬ್ ಅಸೋಸಿಯೇಷನ್ ಬಂಟಕಲ್ಲು ಘಟಕ, ಸ್ವಾಸ್ಥ್ಯ ಆಯೋಗ ಪಾಂಬೂರು ಚರ್ಚ್ ಇವರ ಸಹಯೋಗದೊಂದಿಗೆ ನಡೆದ ಉಚಿತ ನೇತ್ರ ತಪಾಸಣೆ ಶಿಬಿರ, ರಕ್ತದೊತ್ತಡ, ಮಧುಮೇಹ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಸರಕಾರದ ಆಯುಷ್ಮಾನ್ ಯೋಜನೆಯಲ್ಲಿ ಕಣ್ಣಿನ ಶಸ್ತ್ರಚಿಕಿತ್ಸೆಗೆ ಅವಕಾಶ ಮಾಡಿಕೊಡುವಂತೆ ಆರೋಗ್ಯ ಸಚಿವರಲ್ಲಿ ಮನವಿ ಮಾಡಿರುವುದಾಗಿ ತಿಳಿಸಿ, ಎಲ್ಲರೂ ಕರೋನಾ ಲಸಿಕೆಯನ್ನು ಪಡೆಯುವಂತೆ ತಿಳಿಸಿದರು.
ಅಂದು ಕೊರೊನ ಲಾಕ್ಡೌನ್ ಸಮಯ ಇಂದು ತಾರಸಿ ತುಂಬಾ ತರಕಾರಿಮಯ...
Posted On: 12-04-2021 10:58AM
ಕಾಪು : ಕೊರೊನ ಸಮಯ ಕಷ್ಟಮಯವಾಗಿದ್ದಂತು ನಿಜ. ಆದರೆ ಆ ಸಮಯವನ್ನು ಒಂದಷ್ಟು ಉಪಯುಕ್ತವಾಗಿಸಿಕೊಂಡು ಇಷ್ಟಮಯವಾಗಿಸಿ ತರಕಾರಿಗಳನ್ನು ಬೆಳೆಸಿದ ಕಟಪಾಡಿಯ ನಾಟಕ ಕಲಾವಿದ ನಾಗೇಶ್ ಕಾಮತ್ ಮತ್ತು ಅವರ ಮಗ ಬಾಲ ಜಾದುಗಾರ ಪ್ರಥಮ್ ಕಾಮತ್. ಬಹಳಷ್ಟು ಮಂದಿಗೆ ತರಕಾರಿ ಬೆಳೆಯಲು ಜಾಗದ ಸಮಸ್ಯೆ ಎದುರಾಗಬಹುದು ಆದರೆ ಇವರು ಆಯ್ದುಕೊಂಡದ್ದು ಮನೆಯ ತಾರಸಿ ಹಾಗೂ ಅಂಗಳ.
ಶಿರ್ವ : ಉಚಿತ ಕೊರೊನಾ ಲಸಿಕಾ ಕಾರ್ಯಕ್ರಮ
Posted On: 12-04-2021 09:47AM
ಕಾಪು : ಸಮುದಾಯ ಆರೋಗ್ಯ ಕೇಂದ್ರ ಶಿರ್ವ ಇವರ ಆಶ್ರಯದಲ್ಲಿ ವಿಶ್ವ ಹಿಂದೂ ಪರಿಷದ್ ಬಜರಂಗದಳ ಮಾತೃಶಕ್ತಿ ಮಟ್ಟಾರು ಸಹಯೋಗದಲ್ಲಿ ಉಚಿತ ಕೊರೊನಾ ಲಸಿಕಾ ಕಾರ್ಯಕ್ರಮವು ಮಟ್ಟಾರು ಉಪ ಆರೋಗ್ಯ ಕೇಂದ್ರದಲ್ಲಿ ಜರಗಿತು. ಕರಾವಳಿ ಅಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆಯವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾಪು : ಉಂಡಾರು ಶ್ರೀವಿಷ್ಣುಮೂರ್ತಿ ದೇವರ ವಾರ್ಷಿಕ ಶ್ರೀಮನ್ಮಹಾರಥೋತ್ಸವ, ಶ್ರೀಮದ್ಭಾಗವತ ಸಪ್ತಾಹ
Posted On: 11-04-2021 04:01PM
ಕಾಪು : ಏಪ್ರಿಲ್ 12, ಸೋಮವಾರ ಮೊದಲ್ಗೊಂಡು ಏಪ್ರಿಲ್ 18, ಭಾನುವಾರ ಪರ್ಯಂತ ಶ್ರೀ ಕ್ಷೇತ್ರ ಉಂಡಾರು ಶ್ರೀವಿಷ್ಣುಮೂರ್ತಿ ದೇವರ ವಾರ್ಷಿಕ ಶ್ರೀಮನ್ಮಹಾರಥೋತ್ಸವವು ಪರಮಪೂಜ್ಯ ಶ್ರೀಶ್ರೀಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದಂಗಳವರ ದಿವ್ಯ ಉಪಸ್ಥಿತಿಯಲ್ಲಿ ವೇದಮೂರ್ತಿ ಪುತ್ತೂರು ಮಧುಸೂದನ ತಂತ್ರಿಯವರ ನೇತೃತ್ವದಲ್ಲಿ ಅಗಮೋಕ್ತ ವಿಧಿ-ವಿಧಾನಗಳೊಂದಿಗೆ ಜರಗಲಿರುವುದು. ಏಪ್ರಿಲ್ 09 ರಿಂದ ಏಪ್ರಿಲ್ 15 ರ ವರೆಗೆ ಶ್ರೀಮದ್ಭಾಗವತ ಸಪ್ತಾಹ ನಡೆಯಲಿದೆ. ಏಪ್ರಿಲ್ 09 ರಿಂದ ಏಪ್ರಿಲ್ 15 ರ ವರೆಗೆ ಪ್ರತಿದಿನ ಸಾಯಂಕಾಲ 4.30 ರಿಂದ 6.30ರ ವರೆಗೆ ವಿದ್ವಾನ್ ಡಾ.ಉದಯಕುಮಾರ್ ಸರಳತ್ತಾಯ ರಿಂದ ಶ್ರೀಮದ್ಭಾಗವತ ಕಥಾ ಪ್ರವಚನ ನಡೆಯಲಿರುವುದು.
ಏಪ್ರಿಲ್ 10, ಶನಿವಾರ : ಶ್ರೀ ಗುರು ನಾಸಿಕ್ ಗ್ರೂಪ್ ಶಿರ್ವ ಇದರ 13ನೇ ವರ್ಷದ ವಾರ್ಷಿಕೋತ್ಸವ
Posted On: 07-04-2021 03:14AM
ಕಾಪು : ಶ್ರೀ ಗುರು ನಾಸಿಕ್ ಗ್ರೂಪ್ ಶಿರ್ವ ಇದರ 13ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಏಪ್ರಿಲ್ 10, ಶನಿವಾರ ಬ್ರಹ್ಮಶ್ರೀ ನಾರಾಯಣ ಗುರುಮಂದಿರ ಚೆಕ್ ಪಾದೆ, ಶಿರ್ವ ಇಲ್ಲಿ ನಡೆಯಲಿದೆ.
