Updated News From Kaup
ಪಡುಬಿದ್ರಿ : ಕೊರೊನಾ ತಡೆಗೆ ಉಚಿತ ಲಸಿಕೆ ನೀಡುವ ಕಾರ್ಯಕ್ರಮ
Posted On: 02-04-2021 03:49PM
ಕಾಪು : ಪ್ರಾಥಮಿಕ ಆರೋಗ್ಯ ಕೇಂದ್ರ ಪಡುಬಿದ್ರಿ, ಗ್ರಾಮ ಪಂಚಾಯತ್ ಪಡುಬಿದ್ರಿ, ನವಶಕ್ತಿ ಮಹಿಳಾ ಮಂಡಳಿ ಮತ್ತು ಭಜನಾ ಮಂಡಳಿ ಪಡುಬಿದ್ರಿ, ನವಶಕ್ತಿ ವಿಮೆನ್ಸ್ ವೆಲ್ಫೇರ್ ಸೊಸೈಟಿ (ರಿ.) ಪಡುಬಿದ್ರಿ ಸಂಯುಕ್ತ ಆಶ್ರಯದಲ್ಲಿ 45 ವರ್ಷ ಮೇಲ್ಪಟ್ಟ ನಾಗರಿಕರಿಗೆ ಏಪ್ರಿಲ್ 5, ಸೋಮವಾರ ಪಡುಬಿದ್ರಿ ಗಣಪತಿ ಪ್ರೌಢಶಾಲೆಯಲ್ಲಿ 9.30 ರಿಂದ ಮಧ್ಯಾಹ್ನ 1ರವರೆಗೆ ಕೊರೊನಾ ತಡೆಗೆ ಲಸಿಕೆಯೇ ಶ್ರೀರಕ್ಷೆ ಅಭಿಯಾನದನ್ವಯ ಉಚಿತ ಲಸಿಕೆ ನೀಡುವ ಕಾರ್ಯಕ್ರಮ ಜರಗಲಿದೆ.
ಕಾಪು : ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಏಪ್ರಿಲ್ 4 ರಂದು ಬಲೆ ತುಲು ಲಿಪಿ ಕಲ್ಪುಗ ಶಿಬಿರ
Posted On: 02-04-2021 03:28PM
ಕಾಪು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಜೈ ತುಳುನಾಡ್ (ರಿ.), ಜೇಸಿಐ ಕಾಪು, ಯುವವಾಹಿನಿ (ರಿ.) ಕಾಪು ಘಟಕ, ನಮ್ಮ ಕಾಪು ನ್ಯೂಸ್ ಸಂಯುಕ್ತ ಆಶ್ರಯದಲ್ಲಿ ಉಚಿತವಾಗಿ ಬಲೆ ತುಲು ಲಿಪಿ ಕಲ್ಪುಗ ಶಿಬಿರವು ಏಪ್ರಿಲ್ 4, ಆದಿತ್ಯವಾರ ಬೆಳಿಗ್ಗೆ 10 ಗಂಟೆಗೆ ಕಾಪು ಸಿ.ಎ ಬ್ಯಾಂಕ್ ಕನ್ನಡ ಭಾಸ್ಕರ ಸೌಧ ಸಭಾಂಗಣದಲ್ಲಿ ಉದ್ಘಾಟನೆಗೊಳ್ಳಲಿದೆ.
ಕಾರ್ಕಳ ರಾಜ್ಯ ಹೆದ್ದಾರಿಯಲ್ಲಿ ಟೋಲ್ ಗೇಟ್ ನಿರ್ಮಾಣ ಮಾಡಲು ವಾಹನಗಳ ಗುಪ್ತ ಸರ್ವೆ : ಸಾರ್ವಜನಿಕರಿಂದ ಆಕ್ರೋಶ
Posted On: 02-04-2021 12:43PM
ಕಾಪು : ಪಡುಬಿದ್ರಿ ಸಮೀಪದ ಕಾರ್ಕಳ ರಾಜ್ಯ ಹೆದ್ದಾರಿಯ ಕಂಚಿನಡ್ಕ ಸಮೀಪ ಟೋಲ್ ಗೇಟ್ ನಿರ್ಮಾಣ ಮಾಡಲು ವಾಹನಗಳ ಸರ್ವೆ ಮಾಡುತ್ತಿದ್ದ ತಂಡವೊಂದನ್ನು ಸಾರ್ವಜನಿಕರು ತಡೆದ ಘಟನೆ ನಡೆದಿದೆ.
ಪ್ರತಿವರ್ಷವೂ ಕೋಮು ಸೌಹಾರ್ದತೆಗೆ ಸಾಕ್ಷಿಯಾಗುತ್ತಿರುವ ಉದ್ಯಾವರ ಸಂಪಿಗೆ ನಗರದ ಉರೂಸ್ ಮುಬಾರಕ್
Posted On: 02-04-2021 12:23PM
ಕಾಪು : ಸರ್ವ ಧರ್ಮ ಭಾವೈಕ್ಯತೆಗೆ ಸಾಕ್ಷಿಯಾದ ಇತಿಹಾಸ ಪ್ರಸಿದ್ಧ ಸೂಫಿ ಶಹೀದ್ ಹಝ್ರತ್ ಫಖ್ರು ಶಹೀದ್ ವಲೀಯುಲ್ಲಾಹೀ ದರ್ಗಾ ಶರೀಫ್ ಉದ್ಯಾವರ ಸಂಪಿಗೆ ನಗರದ ಉರೂಸ್ ಮುಬಾರಕ್ ಏಪ್ರಿಲ್ 3 ಮತ್ತು 4 ರಂದು ಡಾ| ಖಾಝಿ ರಫಿಲ್ ಸಾಹೇಬ್ ಹಾಗೂ ಮುಕ್ತರ್ ಅಹಮ್ಮದ್ ಸಾಹೇಬ್, ಅಧ್ಯಕ್ಷರು ದರ್ಗಾ ಕಮಿಟಿ, ಸಂಪಿಗೆ ನಗರ ಉದ್ಯಾವರ ಇವರ ನೇತೃತ್ವದಲ್ಲಿ ನಡೆಯಲಿದೆ.
ಖಾಸಗಿ ಬಸ್ಸಿನಲ್ಲಿ ಅನ್ಯಕೋಮಿನ ಜೋಡಿ ಪತ್ತೆ ಪೋಲಿಸರಿಗೆ ಒಪ್ಪಿಸಿದ ಬಜರಂಗದಳ ಕಾರ್ಯಕರ್ತರು
Posted On: 02-04-2021 11:13AM
ಖಾಸಗಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಅನ್ಯಕೋಮಿನ ಯುವಕ ಯುವತಿಯನ್ನು ಸುರತ್ಕಲ್ ಬಳಿ ಬಜರಂಗದಳದ ಕಾರ್ಯಕರ್ತರು ಪೋಲಿಸರಿಗೆ ಒಪ್ಪಿಸಿದ ಘಟನೆ ನಿನ್ನೆ ನಡೆದಿದೆ.
ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಭಕ್ತಾದಿಗಳಿಗೆ ನಿತ್ಯ - ನಿರಂತರವಾಗಿ ಶಿಲಾಸೇವೆ ನೀಡಲು ಅವಕಾಶ
Posted On: 01-04-2021 03:34PM
ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿಯ ಉಪ ಸಮಿತಿಯಾದ ಆರ್ಥಿಕ ಸಮಿತಿಯಲ್ಲಿ 9 ತಂಡಗಳಿದ್ದು ಒಂಬತ್ತು ತಂಡಗಳಲ್ಲಿ ಒಂದಾದ ಶೈಲಪುತ್ರಿ ತಂಡವು ಇಂದಿನಿಂದ ಒಂದು ವಾರದವರೆಗೆ ಕಾರ್ಯಚರಿಸಲಿದ್ದು ಶಿಲಾಸೇವಾ ಕೌಂಟರ್ ಗೆ ಇಂದು ಅಧಿಕೃತವಾಗಿ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರು ಮತ್ತು ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿ ಶ್ರೀ ರಮೇಶ್ ಹೆಗ್ಡೆ ಕಲ್ಯಾ ಹಾಗೂ ಶೈಲಪುತ್ರಿ ತಂಡದ ಮುಖ್ಯ ಸಂಚಾಲಕರಾದ ಶ್ರೀ ವಿದ್ಯಾಧರ ಪುರಾಣಿಕ್ ಉಪಸ್ಥಿತರಿದ್ದರು.
ಕೊನೆಗೂ ಮಣಿದ ಟೋಲ್ ಅಧಿಕಾರಿಗಳು, ಹೆಜಮಾಡಿ ಗ್ರಾಮ ಪಂಚಾಯತಿಯ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ
Posted On: 31-03-2021 05:52PM
ಹೆಜಮಾಡಿ ಗ್ರಾಪಂ ಸದಸ್ಯರಿಂದ ಟೋಲ್ ವಿನಾಯತಿಗೆ ಆಗ್ರಹಿಸಿ ಪರ್ಯಾಯ ರಸ್ತೆ ನಿರ್ಮಾಣ, ಮಾತಿನ ಚಕಮಕಿ ನಡೆಯಿತು. ಹೆಜಮಾಡಿ ಗ್ರಾಮದ ಸ್ಥಳೀಯರಿಗೆ ಟೋಲ್ನಿಂದ ವಿನಾಯಿತಿ ನೀಡದ ಕಾರಣ ಹೆಜಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಾಣೇಶ್ ಹೆಜಮಾಡಿ ಸಹಿತ ಎಲ್ಲಾ ಸದಸ್ಯರು ಜೊತೆಗೂಡಿ ಟೋಲ್ ಬಳಿ ಪ್ರತ್ಯೇಕ ರಸ್ತೆ ನಿರ್ಮಿಸಿ ವಾಹನವನ್ನು ಕಳುಹಿಸಿದ ಘಟನೆ ಮಂಗಳವಾರ ಬೆಳಿಗ್ಗೆ ಘಟಿಸಿದೆ.
ಬಿರುವೆರ್ ಬ್ರದಸ್೯ ಹೆಜಮಾಡಿ ತಂಡದ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಹೆಜಮಾಡಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಆಯ್ಕೆಯಾದ ಎಲ್ಲಾ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ
Posted On: 29-03-2021 05:39PM
ಅಧಿಕಾರ ವಿಕೇಂದ್ರೀಕರಣದ ಮೂಲಕ ಸಾಮಾನ್ಯ ಜನರಿಗೂ ಜನಸೇವೆಯ ಭಾಗ್ಯ ನೀಡಿದೆ ಗ್ರಾಮಪಂಚಾಯತ್. ಆಯ್ಕೆಯಾದ ಸದಸ್ಯರು ತಮ್ಮ ಕಾರ್ಯ ವ್ಯಾಪ್ತಿಗೆ ಅನುಸಾರವಾಗಿ ಕರ್ತವ್ಯ ನಿರ್ವಹಿಸಬೇಕಾಗಿದೆ. ಆ ಮೂಲಕ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಹಿಂದೂ ಧಾರ್ಮಿಕ ಧರ್ಮದಾಯ ದತ್ತಿ ಇಲಾಖೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಹೆಜಮಾಡಿ ಬಿಲ್ಲವ ಸಂಘದ ವಠಾರದಲ್ಲಿ ಜರಗಿದ ಬಿರುವೆರ್ ಬ್ರದಸ್೯ ಹೆಜಮಾಡಿ ತಂಡದ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಹೆಜಮಾಡಿ ಗ್ರಾಮ ಪಂಚಾಯತ್ ನ ಚುನಾವಣೆಯಲ್ಲಿ ಆಯ್ಕೆಯಾದ ಎಲ್ಲಾ ಸದಸ್ಯರಿಗೆ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಶುಭಕೋರಿ ಮಾತನಾಡಿದರು.
ಮಲ್ಲಾರು : ಕೋಟೆ ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದಲ್ಲಿ ಕಾಲಾವಧಿಯ ರಾಶಿ ಮಾರಿಪೂಜೆ ಹಾಗೂ ನೂತನ ಮೂಡುಗೋಪುರ ಸಮರ್ಪಣೆ
Posted On: 29-03-2021 04:48PM
ಕಾಪು : ಮಲ್ಲಾರು ರಾಣ್ಯಕೇರಿಯ ಕೋಟೆ ಶ್ರೀ ಹಳೇ ಮಾರಿಯಮ್ಮ ದೇವಸ್ಥಾನದಲ್ಲಿ ಕಾಲಾವಧಿಯ ರಾಶಿ ಮಾರಿಪೂಜೆ ಹಾಗೂ ನೂತನ ಮೂಡುಗೋಪುರ ಸಮರ್ಪಣೆಯು ಮಾಚ್೯ 30 ರಿಂದ 31 ರವರೆಗೆ ನಡೆಯಲಿದೆ.
ಮಣಿಪುರ : ರಸ್ತೆಯ ಇಕ್ಕೆಲದಲ್ಲಿ ರಾಶಿ ಕಸ ಗಮನಿಸದ ಪಂಚಾಯತ್, ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆಯ ಎಚ್ಚರಿಕೆ
Posted On: 29-03-2021 03:29PM
ಕಾಪು : ಮಣಿಪುರ ರೈಲ್ವೆ ಬ್ರಿಡ್ಜ್ ಬಳಿಯ ರಸ್ತೆಯ ಇಕ್ಕೆಳಗಳಲ್ಲಿ ರಾಶಿ ರಾಶಿ ಕಸದ ತಂದು ಸುರಿಯುತ್ತಿದ್ದಾರೆ. ಪಂಚಾಯಿತಿಯಿಂದ ಯಾವುದೇ ವಾಹನಗಳು ಕಸ ವಿಲೇವಾರಿಗೆ ಬರುತ್ತಿಲ್ಲ. ಇದನ್ನು ಹೀಗೆಯೇ ಬಿಟ್ಟರೆ ಮುಂದೆ ತೊಂದರೆಯಾಗುವುದು ಖಂಡಿತ.
