Updated News From Kaup

ಇನ್ನ ಬಂಟರ ಸಂಘದ ಅಧ್ಯಕ್ಷರಾಗಿ ಇನ್ನ ಗುತ್ತು ಪ್ರದೀಪ್ ಶೆಟ್ಟಿ ಆಯ್ಕೆ

Posted On: 10-01-2021 08:29PM

ಇನ್ನ ಬಂಟರ ಸಂಘದ ‌ಪದಾಧಿಕಾರಿಗಳ‌ ಆಯ್ಕೆ ಕಾರ್ಯಕ್ರಮವು ಕಾಚೂರು ಪರಾಡಿಯ ಸಭಾಂಗಣದಲ್ಲಿ ಬಂಟ ಸಮಾಜದ ಉಪಸ್ಥಿತಿಯಲ್ಲಿ ನಡೆಯಿತು.

ಈ ಸಂದರ್ಭ ಇನ್ನ ಗುತ್ತು ಪ್ರದೀಪ್ ಶೆಟ್ಟಿಯವರನ್ನು‌ ಸರ್ವಾನುಮತದಿಂದ ಅಧ್ಯಕ್ಷರನ್ನಾಗಿ ಆಯ್ಕೆಮಾಡಲಾಯಿತು.

ಜಯಂಟ್ಸ್ ಗ್ರೂಪ್ : ಸಾಧಕರಿಗೆ ಅಭಿನಂದನೆ ಹಾಗೂ ಮಹಾಸಭೆ

Posted On: 10-01-2021 05:48PM

ಬ್ರಹ್ಮಾವರ: ಜಗತ್ತಿನಲ್ಲಿ ಶಾಶ್ವತವಾಗಿ ಉಳಿಯುವ ವಸ್ತು ನಾವು ಮಾಡುವ ಉತ್ತಮ ಸೇವೆ ಮಾತ್ರ. ಆದರೆ ನಾವೆಲ್ಲರೂ ಹಣ ಅಧಿಕಾರದ ದಾಸರಾಗಲು ಹೋಗುತ್ತಿರುವುದು ತಪ್ಪು ಎಂದು ಎಸ್.ಎಂ.ಎಸ್ ಕೆತಡ್ರಲ್ ವಿಗಾರ್ ಜನರಲ್ ಫಾ|| ಎಂ.ಸಿ ಮಥಾಯಿ ಹೇಳಿದರು.

ಅವರು ಬ್ರಹ್ಮಾವರ ಜಯಂಟ್ಸ್ ಗ್ರೂಪ್ ಇದರ ವತಿಯಿಂದ ನಡೆದ ಸಾಧಕರಿಗೆ ಅಭಿನಂದನೆ ಹಾಗೂ ಮಹಾಸಭೆ ಕಾಯ೯ಕ್ರಮದಲ್ಲಿ ಮಾತನಾಡಿದರು. ಜಗತ್ತಿನ ಶ್ರೇಷ್ಠ ಸಂಪತ್ತು ಅದು ಮಾನವ ಸಂಪತ್ತು ಇದನ್ನು ಅರಿತು ಗಳಿಸಿದರಲ್ಲಿ ಸ್ವಲ್ಪ ಅಂಶ ಸಮಾಜಕ್ಕೆ ಅಪ೯ಣಿಯಾಗಲಿ ಎಂದರು. ಜಯಂಟ್ಸ್ ಉಡುಪಿ ಯೂನಿಟ್ ಡೈರೆಕ್ಟರ್ ದೇವದಾಸ್ ಕಾಮತ್ ಯುವಕರನ್ನು ಸಂಸ್ಥೆಗೆ ಸೇರಿಸುವ ಮೂಲಕ ಮತ್ತಷ್ಟು ಉತ್ತಮ ಕಾಯ೯ ಮುಂದುವರೆಯಲಿ ಎಂದರು.

ವೇದಿಕೆಯಲ್ಲಿ ಮಾಜಿ ಫೆಡರೇಶನ್ ಅಧ್ಯಕ್ಷ ಮಧುಸೂಧನ್ ಹೇರೂರು, ಮಾಜಿ ಅಧ್ಯಕ್ಷ ಮಂಜುನಾಥ್ ಶೆಟ್ಟಿಗಾರ್, ಕಾಯ೯ದಶಿ೯ ಶ್ರೀನಾಥ್ ಕೋಟ ಮುಂತಾದವರಿದ್ದರು.ಅಧ್ಯಕ್ಷತೆಯನ್ನು ಜಯಂಟ್ಸ್ ಅಧ್ಯಕ್ಷ ಸುಂದರ ಪೂಜಾರಿ ಮೂಡುಕುಕುಡೆ ವಹಿಸಿದ್ದರು.ಕಾಯ೯ಕ್ರಮದಲ್ಲಿ ರೆಡ್ ಕ್ರಾಸ್ ನಲ್ಲಿ ಉತ್ತಮ ಸಾಧನೆ ಮಾಡಿದ ಕುಂದಾಪುರ ರೆಡ್ ಕ್ರಾಸ್ ಸಭಾಪತಿ ಜಯಕರ ಶೆಟ್ಟಿ, ಮುಖ್ಯಮಂತ್ರಿ ಪದಕ ಪುರಸ್ಕೃತ ಸಕ೯ಲ್ ಇನ್ಸ್ಪೆಕ್ಟರ್ ಅನಂತ ಪದ್ಭನಾಭ , ಖ್ಯಾತ ಸಾಹಿತಿ ಡಾII ಕಾತ್ಯಾಯನಿ ಕುಂಜಿಬೆಟ್ಟು, ರೂಬಿಕ್ ಕ್ಯೂಬ್ ಸಾಧಕ ಮಹೇಶ್ ಮಲ್ಪೆರವರನ್ನು ಗೌರವಿಸಲಾಯಿತು.ಈ ಸಂದಭ೯ದಲ್ಲಿ ನೂತನ ಸದಸ್ಯರಾದ ಉಮೇಶ್ ಬಿತಿ೯, ರೊನಾಲ್ಡ್, ಅನಿಲ್ ಶೆಟ್ಟಿ, ನಂದಿನಿರವರನ್ನು ಬರಮಾಡಿಕೊಳ್ಳಲಾಯಿತು.

ವಿವೇಕ್ ಕಾಮತ್, ಮಿಲ್ಟನ್ ಒಲಿವರ್ ಪರಿಚಯಿಸಿದರು.ಸುಂದರ ಪೂಜಾರಿ ಸ್ವಾಗತಿಸಿ ವರದಿ ವಾಚಿಸಿದರು.ಮಧುಸೂಧನ್ ಹೇರೂರು ವಂದಿಸಿದರು.ರಾಘವೇಂದ್ರ ಪ್ರಭು,ಕವಾ೯ಲು ನಿರೂಪಿಸಿದರು.

ರಾಜ್ಯ ಮತ್ತು ಕೇಂದ್ರ ಸರಕಾರದ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿಗಾಗಿ ಇದೀಗ ಕಾಪುವಿನಲ್ಲಿ ಕೋಸ್ಟಲ್ ವಿಂಗ್ಸ್ ಅಕಾಡೆಮಿ ಸಂಸ್ಥೆ

Posted On: 10-01-2021 05:36PM

ಕೇಂದ್ರ ಮತ್ತು ರಾಜ್ಯ ಸರಕಾರಗಳು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಬಯಸುವ ಅಭ್ಯರ್ಥಿಗಳಿಗೆ ಕಾಪುವಿನ ಕೋಸ್ಟಲ್ ವಿಂಗ್ಸ್ ಅಕಾಡೆಮಿಯಲ್ಲಿ ಪರಿಣಿತ ತರಬೇತುದಾರರಿಂದ ಪರೀಕ್ಷಾ ಪೂರ್ವ ತರಬೇತಿ ಸಿಗಲಿದೆ.

ಪೊಲೀಸ್ ಕಾನ್ಸ್ಟೇಬಲ್, ಪೊಲೀಸ್ ಸಬ್ ಇನ್ಸ್ಪೆಕ್ಟರ್, ಪಿಡಿಒ, ಎಫ್ ಡಿ ಎ/ ಎಸ್ ಡಿ ಎ, ಕೆಎಎಸ್, ರೈಲ್ವೆ, ಪೋಸ್ಟಲ್, ಶಿಕ್ಷಕರ ಅರ್ಹತಾ ಪರೀಕ್ಷೆ, ಗ್ರೂಪ್ ಸಿ ಇತ್ಯಾದಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಸಿಗಲಿದೆ. ಕಾಪು ಹೊಸ ಮಾರಿಗುಡಿ ಸಮೀಪದ ಹೀರ ಕಾಂಪ್ಲೆಕ್ಸಿನ ಎರಡನೆಯ ಮಹಡಿಯಲ್ಲಿ ಕೋಸ್ಟಲ್ ವಿಂಗ್ಸ್ ಅಕಾಡೆಮಿ ಪ್ರಾರಂಭವಾಗಿದೆ.

ಆಸಕ್ತ ಅಭ್ಯರ್ಥಿಗಳು ಸಂಪರ್ಕಿಸಿ : + 91 8073679442 +91 8296589648

ಮಡುಂಬು‌ : ಯುವಸೇನೆ ಮಡುಂಬು ತಂಡದಿಂದ ಕರಸೇವೆ

Posted On: 10-01-2021 05:33PM

ಕಾಪು ತಾಲೂಕಿನ ಮಡುಂಬು ಶ್ರೀ ಮಹಾ ಗಣಪತಿ ದೇವಸ್ಥಾನದಲ್ಲಿ ಇಂದು ಯುವಸೇನೆ ಮಡುಂಬು ಯುವಕರ ತಂಡದಿಂದ ದೇವಸ್ಥಾನದ ‌ಉತ್ಸವದ ಪೂರ್ವ ತಯಾರಿಯಾಗಿ ಕರಸೇವೆ ಮಾಡಿದರು.

ಉಳಿಯಾರಗೋಳಿ : ಬಬ್ಬು ಸ್ವಾಮಿ ದೈವಸ್ಥಾನದಲ್ಲಿ ಸಿರಿ ಸಿಂಗಾರದ ನೇಮೋತ್ಸವ ಸಂಪನ್ನ

Posted On: 10-01-2021 05:30PM

ಕಾಪು ಉಳಿಯಾರಗೋಳಿ ಪೂವಣಿ ಬೆಟ್ಟು ಬಬ್ಬು ಸ್ವಾಮಿ ದೈವಸ್ಥಾನದಲ್ಲಿ ಬಬ್ಬುಸ್ವಾಮಿ, ಧೂಮಾವತಿ ಮತ್ತು ಪರಿವಾರ ದೈವಗಳ ಸಿರಿ ಸಿಂಗಾರದ ನೇಮೋತ್ಸವವು ಶನಿವಾರದಿಂದ ಪ್ರಾರಂಭಗೊಂಡು ಆದಿತ್ಯವಾರದವರೆಗೆ ಭಕ್ತಾಭಿಮಾನಿಗಳ ಸೇರುವಿಕೆಯಲ್ಲಿ ಸಂಪನ್ನಗೊಂಡಿತು.

ಶಂಕರಪುರ ಸೈಂಟ್ ಜೋನ್ಸ್ ಶಾಲೆಗಳ ಹಳೆ ವಿದ್ಯಾರ್ಥಿ ಸಂಘದ ಪದಗ್ರಹಣ : ಅಧ್ಯಕ್ಷರಾಗಿ ರಾಯನ್ ಫೆರ್ನಾಂಡಿಸ್

Posted On: 09-01-2021 11:36PM

ಕಾಪು : ಶಂಕರಪುರದ ಸೈಂಟ್‌ ಜೋನ್ಸ್ ಶಾಲೆಗಳ ಹಳೆ ವಿದ್ಯಾರ್ಥಿ ಸಂಘದ 2021 - 22ನೇ ಸಾಲಿನ ಪದಗ್ರಹಣವು ಶಂಕರಪುರದ ಸೈಂಟ್ ಜೋನ್ಸ್ ಅಕಾಡೆಮಿ ಹಾಲ್ ನಲ್ಲಿ ಜರಗಿತು.

ಸಮಾರಂಭವನ್ನು ಶಂಕರಪುರ ಸೈಂಟ್ ಜೋನ್ಸ್ ವಿದ್ಯಾ ಸಂಸ್ಥೆಗಳ ಸಂಚಾಲಕರಾದ ವಂದನೀಯ ಗುರು ‌ಫರ್ಡಿನಾಂಡ್ ಗೊನ್ಸಾಲ್ವಿಸ್ ಉದ್ಘಾಟಿಸಿದರು.

ಮುಖ್ಯ ಅತಿಥಿಯಾಗಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇಲ್ಲಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ವಿಶಾಕ್ ಜಿ. ಶೆಟ್ಟಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಂಸ್ಥೆಯ ಹಳೆ ವಿದ್ಯಾರ್ಥಿಗಳನ್ನು ಹಾಗೂ ಎಲ್ಲಾ ಪೂರ್ವಧ್ಯಕ್ಷರನ್ನು ಗೌರವಿಸಲಾಯಿತು ಈ ಸಂದರ್ಭದಲ್ಲಿ ನವೀನ್ ಅಮೀನ್ ಶಂಕರಪುರ ಹಳೆ ವಿದ್ಯಾರ್ಥಿ ಸಂಘದ ಪ್ರಾಮುಖ್ಯತೆಯನ್ನು ತಿಳಿಸಿದರು.

ಶಂಕರಪುರದ ಸೈಂಟ್ ಜೋನ್ಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಪ್ರಿಯಾ ಡೆಸಾ, ಶಂಕರಪುರ ಸೈಂಟ್ ಜೋನ್ಸ್ ಪ್ರೌಢಶಾಲೆಯ ‌ಮುಖ್ಯ ಶಿಕ್ಷಕರಾದ ಅಶ್ವಿನ್ ರೋಡ್ರಿಗಸ್, ಶಂಕರಪುರ ಸೈಂಟ್ ಜೋನ್ಸ್ ಅಕಾಡೆಮಿಯ ಮುಖ್ಯ ಶಿಕ್ಷಕಿಯಾದ ಸಿ. ಜುಲಿಯಾನ ಲಸ್ರಾದೊ, ಶಂಕರಪುರ ಸೈಂಟ್ ಜೋನ್ಸ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ‌ ಶ್ರೀಮತಿ ಐರಿನ್ ಡಿಸೋಜಾ, 2020-21 ನೇ ಸಾಲಿನ ರಾಯನ್ ಫೆರ್ನಾಂಡಿಸ್, ಕಾರ್ಯದರ್ಶಿ ವೀಣಾ ಡಿಸೋಜಾ, 2021-22ನೇ ಸಾಲಿನ ನೂತನ ಅಧ್ಯಕ್ಷರಾದ ರಾಯನ್ ಫೆರ್ನಾಂಡಿಸ್ ,ಕಾರ್ಯದರ್ಶಿ ಪ್ರಥಮ್ ಡಿಸೋಜಾ, ಖಜಾಂಚಿ ಶ್ರೀಮತಿ ಸುನೀತ ಲೀನಾ ಡಿಸೋಜಾ ಮತ್ತು ಹಳೆ ವಿದ್ಯಾರ್ಥಿ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.

ಕುಂದಾಪುರ ಮೂಲದ ವಕ್ವಾಡಿ ಪ್ರವೀಣ್ ಶೆಟ್ಟಿಗೆ ಯುಎಇ ಗೋಲ್ಡನ್ ವೀಸಾ

Posted On: 09-01-2021 11:02PM

ದುಬೈ: ದುಬೈನ ಪ್ರತಿಷ್ಠಿತ ಹೋಟೆಲ್ ಗಳಲ್ಲಿ ಒಂದಾದ ಫಾರ್ಚುನ್ ಗ್ರೂಪ್ ಆಫ್ ಹೋಟೆಲ್ಸ್ ಮಾಲಿಕ ಕುಂದಾಪುರ ಮೂಲದ ವಕ್ವಾಡಿ ಪ್ರವೀಣ್ ಶೆಟ್ಟಿ ಅವರಿಗೆ ಯುಎಇ ಸರ್ಕಾರ ಹತ್ತು ವರ್ಷದ ಗೋಲ್ಡನ್ ವೀಸಾ ನೀಡಿ ಗೌರವಿಸಿದೆ.

ದುಬೈನಲ್ಲಿ ಕಳೆದ ನಾಲ್ಕೈದು ದಶಕಗಳಿಂದ ಫಾರ್ಚುನ್ ಗ್ರೂಪ್ ಆಫ್ ಹೋಟೆಲ್ಸ್ ಎಂಬ ಹೆಸರಿನಲ್ಲಿ ಉದ್ಯಮ ಆರಂಭಿಸಿ ಬಹುದೊಡ್ಡ ಯಶಸ್ಸು ಕಂಡು ಯುಎಇ ಪ್ರವಾಸೋದ್ಯಮದಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತಿರುವ ಇವರನ್ನು ಗುರುತಿಸಿ ದುಬಾಯಿ ಸರ್ಕಾರ ಈ ಗೌರವ ಪುರಸ್ಕಾರ ನೀಡಿದೆ.

ಫಾರ್ಚುನ್ ಗ್ರೂಪ್ ಆಫ್ ಹೋಟೆಲ್ಸ್ ಈಗಾಗಲೇ ದುಬೈನಾದ್ಯಂತ ಸುಮಾರು ಏಳು ಹೋಟೆಲ್ಗಳನ್ನು ಹೊಂದಿದ್ದು, ಇದೀಗ ಹೊಸದಾಗಿ ಆರಂಭವಾದ ಫಾರ್ಚುನ್ ಅಟ್ಟಿಯಮ್ ಹೋಟೆಲ್ಗೆ ನಿನ್ನೆ ಆಗಮಿಸಿದ ದುಬೈ ಟೂರಿಸಂ ನ ಜನರಲ್ ಡೈರೆಕ್ಟರ್, ದುಬೈ ಪ್ರವಾಸೋದ್ಯಮಕ್ಕೆ ಮುಖ್ಯ ಕೊಡುಗೆ ನೀಡುತ್ತಿರುವ ಪ್ರವೀಣ್ ಶೆಟ್ಟಿ ವಕ್ವಾಡಿ ಅವರನ್ನು ಗೌರವಿಸಿ ಅಭಿನಂದಿಸಿದರು.

ಇನ್ನಂಜೆ : ದೇವಿ ಮಹಾತ್ಮೆ ಯಕ್ಷಗಾನ , ವಿಶೇಷ ಅತಿಥಿ ಪಾತ್ರದಲ್ಲಿ ಭೋಜರಾಜ್ ವಾಮಂಜೂರು

Posted On: 09-01-2021 09:11PM

ಕಾಪು ತಾಲೂಕಿನ ಇನ್ನಂಜೆ‌ ಗ್ರಾಮದ ಮಡುಂಬುವಿನ ಶ್ರೀನಿವಾಸ ತಂತ್ರಿಯವರ ಮನೆ ವಠಾರದಲ್ಲಿ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಇವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನವು ಇದೇ ಬರುವ ಸೋಮವಾರ ಸಂಜೆ 7ರಿಂದ ನಡೆಯಲಿದೆ.

ವಿಶೇಷ ಅತಿಥಿ ಪಾತ್ರದಲ್ಲಿ ಚಲನಚಿತ್ರ ಕಲಾವಿದ, ಹಾಸ್ಯ ನಟ ಭೋಜರಾಜ್ ವಾಮಂಜೂರು ಅಭಿನಯಿಸಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಎಂ. ಬಿ. ಕುಕ್ಯಾನ್ ನಿಧನ

Posted On: 09-01-2021 08:57PM

ಸಾಹಿತಿ, ಅಕ್ಷಯ ಪತ್ರಿಕೆಯ ಸಂಪಾದಕರು, ಭಾರತ್ ಬ್ಯಾಂಕ್ ನ ಮಾಜಿ ಕಾರ್ಯಧ್ಯಕ್ಷರು ಆದ ಎಂ. ಬಿ. ಕುಕ್ಯಾನ್ ರವರು ಇಂದು ಮುಂಜಾನೆ 4-30 ಕ್ಕೆ ನಿಧನರಾಗಿದ್ದಾರೆ.

ಪಡುಬಿದ್ರಿ : ಕಲ್ಲಟ್ಟೆ ಶ್ರೀ ಜಾರಂದಾಯ ಬಂಟ ದೈವದ ವಾರ್ಷಿಕ ನೇಮೋತ್ಸವ

Posted On: 07-01-2021 03:44PM

ಕಲ್ಲಟ್ಟೆ ಶ್ರೀ ಜಾರಂದಾಯ ಬಂಟ ದೈವದ ನೇಮೋತ್ಸವವು ಇದೇ ಬರುವ ಶನಿವಾರ 16ರಂದು ನಡೆಯಲಿದೆ.

ಬೆಳಿಗ್ಗೆ 9ಕ್ಕೆ ಕಲ್ಲಟ್ಟೆ ಗುತ್ತು ಮೂಲ ಕುಟುಂಬಸ್ಥರಿಂದ ಕಲ್ಲಟ್ಟೆಗುತ್ತು ನಾಗಬನದಲ್ಲಿ ಆಶ್ಲೇಷಾ ಬಲಿ ಸೇವೆ,10:30 ಕ್ಕೆ ಚಪ್ಪರ ಮುಹೂರ್ತ, ಮಧ್ಯಾಹ್ನ 12 ಗಂಟೆಗೆ ಕಲ್ಲಟ್ಟೆ ಶ್ರೀ ಜಾರಂದಾಯ ಮಹಿಳಾ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ, ಸಂಜೆ 6ಕ್ಕೆ ಭಂಡಾರ ಇಳಿಯುವುದು, 10 ರಿಂದ ನೇಮೋತ್ಸವ, ರಾತ್ರಿ ಗಂಟೆ 2ರಿಂದ ಶ್ರೀ ಜಾರಂದಾಯ ಬಂಟ ದೈವ ಮತ್ತು ಸಂತೆಕಟ್ಟೆ ಶ್ರೀ ಕೋರ್ದಬ್ಬು ದೈವಗಳ ಭೇಟಿ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.