Updated News From Kaup

ಪುತ್ತಿಗೆ ಮೂಲ ಮಠದ ಸ್ವರ್ಣ ನದಿ ತೀರದಲ್ಲಿ ಸ್ವಣಾ೯ರತಿ

Posted On: 03-01-2021 02:28PM

ಸ್ವಣಾ೯ರಾಧನಾ ವತಿಯಿಂದ ಪುತ್ತಿಗೆ ಮೂಲ ಮಠದ ಸ್ವಣ೯ ನದಿಯ ತೀರದಲ್ಲಿ ಸ್ವಣಾ೯ರತಿ ಕಾಯ೯ಕ್ರಮ ಜ.1 ರಂದು ಶುಕ್ರವಾರ ನಡೆಯಿತು.

ಪುತ್ತಿಗೆ ಮಠದ ಕಿರಿಯ ಯತಿ ಶ್ರೀ ಸುಶ್ರೀoದ್ರ ತೀಥ೯ ಶ್ರೀಪಾದರು ಅನುಗ್ರಹ ಸಂದೇಶ ನೀಡಿ, ಗಿಡಗಳನ್ನು ನೆಟ್ಟರೆ ಸಾಲದು ಅದನ್ನು ಉಳಿಸಿ ಬೆಳೆಸಬೇಕು. ನದಿ ತೀರಗಳಲ್ಲಿ ತ್ಯಾಜ್ಯಗಳನ್ನು ಹಾಕುದನ್ನು ನಿಲ್ಲಿಸಿದಾಗ ಮಾತ್ರ ನದಿಗಳು ಪರಿಶುದ್ಧವಾಗಿ ಹರಿಯಲು ಸಾಧ್ಯ.ಈ ನಿಟ್ಟಿನಲ್ಲಿ ಪರಿಸರ ಮತ್ತು ನದಿಗಳನ್ನು ಉಳಿಸುವ ಸಂಕಲ್ಪ ಮಾಡಬೇಕೆಂದರು.

ಕಾಪು ಶಾಸಕ ಲಾಲಾಜಿ ಮೆಂಡನ್ ಶುಭ ಹಾರೈಸಿದರು.ಈ ಸಂದಭ೯ದಲ್ಲಿ ಸ್ವರಣಾರಾಧನಾ ಅಭಿಯಾನದ ಪ್ರಾಯೋಜಕರಾದ ಡಾ. ನಾರಾಯಣ ಶೆಣೈ, ಸ್ವರ್ಣಾರತಿಯ ಆಯೋಜಕರಾದ, ಪ್ರಭಾಕರ ಭಟ್, ರಾಘವೇಂದ್ರ ಪ್ರಭು,ಕವಾ೯ಲು ,ಪರ್ಕಳ ಶ್ರೀ ದುರ್ಗಾ ಸಂಕೀರ್ತನ ಭಜನಾ ಮಂಡಳಿಯ ಕೆ ಚಂದ್ರಶೇಖರ ಪ್ರಭು ,ಗಣೇಶ ಪೈ, ಕಾಪು ಭಾಜಪಾ ಮಹಿಳಾ ಮೊರ್ಚಾದ ನೀತಾ ಪ್ರಭು, ಮಾಜಿ ನಗರಸಭಾ ಸದಸ್ಯ ಶ್ಯಾಮಪ್ರಸಾದ ಕುಡ್ವ, ಪರ್ಯಾವರಣ ಗತಿವಿಧಿಯ ಉಡುಪಿ ನಗರ ಕಾರ್ಯವಾಹ ಗಣೇಶ್ ಶೆಣೈ ಬೈಲೂರು, ವೀಣಾ ಶ್ರೀ ಪುತ್ತಿಗೆ ವಿದ್ಯಾಪೀಠದ ಮೆನೆಜರ್ ಹರಿಪ್ರಸಾದ ಆಚಾರ್ಯ , ರೇಡಿಯೋತಜ್ಙ ಶಾಮ್ ಭಟ್ , ಅಶ್ವಿನ್ ಮಣಿಪಾಲ, ಗಿರೀಶ್ ಮುಂತಾದವರಿದ್ದರು.ವಿದುಷಿ ಪಾವನಾ ಆಚಾರ್, ಮೃದಂಗ ವಿದ್ವಾನ್ ಬಾಲಚಂದ್ರ ಆಚಾರ್ ರವರಿಂದ ನದಿ ತೀರದಲ್ಲಿ ವೀಣಾ ವಾದನ ಕಾಯ೯ಕ್ರಮ ನಡೆಯಿತು.

ಕೋಟಿಚೆನ್ನಯರ ಜೀವನಗಾಥೆಯ ಪ್ರಬಂಧ ಸ್ಪರ್ಧೆ

Posted On: 03-01-2021 02:22PM

ಶ್ರೀ ಬ್ರಹ್ಮಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರ (ರಿ.) ಬೈದಶ್ರೀ ಆದಿಉಡುಪಿ, ಉಡುಪಿ ಸಂಸ್ಥೆಯಿಂದ 10 ವರ್ಷ ಮೇಲ್ಪಟ್ಟು 20 ವರ್ಷದೊಳಗಿನ ವಿದ್ಯಾರ್ಥಿಗಳಿಗಾಗಿ ಕೋಟಿಚೆನ್ನಯರ ಜೀವನಗಾಥೆಯ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಿರುತ್ತಾರೆ.

ಸ್ವಂತ ರಚನೆಯಾಗಿ, A4 ಸೈಜಿನ 6 ಪುಟಕ್ಕೆ ಮೀರದ ಕೈಬರಹ ಅಥವಾ ಟೈಪ್ ಮಾಡಿದ ಪ್ರಬಂಧವನ್ನು ಇಮೇಲ್ ಅಥವಾ ಸಂಸ್ಥೆಯ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಬಹುದು. ಪ್ರಬಂಧ ಕಳುಹಿಸಲು ಜನವರಿ 15 ಕೊನೆಯ ದಿನವಾಗಿದೆ.

ಪ್ರಥಮ ಬಹುಮಾನ ₹ 3000 ಜೊತೆಗೆ ಗ್ರಂಥ ಪುಸ್ತಕ, ದ್ವಿತೀಯ ಬಹುಮಾನ ₹ 2000, ಗ್ರಂಥ ಪುಸ್ತಕ, ತೃತೀಯ ಬಹುಮಾನ ₹ 1000, ಗ್ರಂಥ ಪುಸ್ತಕ ಮತ್ತು ಭಾಗವಹಿಸಿದ ಎಲ್ಲರಿಗೂ ಗೌರವ ಸ್ಮರಣಿಕೆ ಯಾಗಿ ಗ್ರಂಥ ಪುಸ್ತಕ ನೀಡಲಾಗುವುದು.

ಬೈದಶ್ರೀ ಆದಿ ಉಡುಪಿಯಲ್ಲಿ ಜನವರಿ 26 ರಂದು ಮಧ್ಯಾಹ್ನ 3 ಗಂಟೆಗೆ ನಡೆಯುವ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುವುದು ಎಂದು ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.

ಇನ್ನಂಜೆ ಅಕ್ಕಿ ಪೂಜಾರ್ತಿ ನಿಧನ

Posted On: 01-01-2021 11:12PM

ಇನ್ನಂಜೆ ಉಂಡಾರು ಮೈರಕಟ್ಟ ನಿವಾಸಿಯಾಗಿರುವ, ಮುಂಬೈ ಸಂಜೀವ ಪೂಜಾರಿ ಯವರ ಮಾತೃಶ್ರೀಯವರಾದ ಶ್ರೀಮತಿ ಅಕ್ಕಿ ಪೂಜಾರ್ತಿ ಇವರು ನಿನ್ನೆ ಮಧ್ಯಾಹ್ನದ ವೇಳೆಗೆ ನಿಧನರಾದರು.

2020 ಪರೀಕ್ಷೆಯ ವಷ೯ದಲ್ಲಿ ಕಲಿತ ಪಾಠವನ್ನು 2021ಕ್ಕೆ ಮರೆಯದಿರೋಣ

Posted On: 01-01-2021 10:29AM

ಹೊಸ ವರುಷ, ಪ್ರತಿ ನಿಮಿಷ, ತರಲಿ ಹರುಷ, ಇರಲಿ ಸರಸ, ಬೇಡ ವಿರಸ ಎಂಬ ಶುಭಕಾಮನೆಯೊಂದಿಗೆ ಹೊಸ ವರ್ಷ 2021 ಕ್ಕೆ ಕಾಲಿಡೋಣ. ಈಗ ಕಾಡುವ ಒಂದು ಪ್ರಶ್ನೆಯೇನೆಂದರೆ ನಮ್ಮ ಕೈಗೂಡದ ಆಸೆಗಳ ಪೂರೈಕೆಗೆ ಹೊಸ ವರ್ಷಕ್ಕೆ ಕಾಯಬೇಕೇ? ಈ ಕಾಯ೯ವನ್ನು ಇಂದೇ ಪ್ರಾರಂಭಿಸೋಣ ಇನ್ನು ನಾವು ಹೊಸ ವರ್ಷವನ್ನು ಅಷ್ಟೊಂದು ಸಂಭ್ರಮದಿಂದ, ಸಡಗರದಿಂದ ಆಚರಿಸಲು ಕಾರಣವಾದರೂ ಏನು?

ಏಕೆಂದರೆ ಈ ಹೊಸ ವರ್ಷದ ಆಚರಣೆ ಸಂಪ್ರದಾಯವು ನಮ್ಮ ಪೂರ್ವಿಕರಿಂದ ಬಳುವಳಿಯಾಗಿ ಬಂದಿದೆ. ವಿವಿಧ ಪಂಗಡದ ಜನರ ಸಂಪ್ರದಾಯಗಳು ಮತ್ತು ಸಂಸ್ಕೃತಿ ಅದಾಗಿದೆ. ವಿವಿಧ ಜನರ ಶೈಲಿ ಮತ್ತು ಪದ್ಧತಿಗಳಲ್ಲಿ ಸ್ವಲ್ಪ ಭಿನ್ನತೆಯಿದ್ದರೂ, ಹೊಸ ವರ್ಷದ ಆಚರಣೆ ಬಂತೆಂದರೆ ಸಾಕು ಎಲ್ಲರದ್ದೂ ಒಂದೇ ರೂಪ, ಒಂದೇ ಗುರಿ. ಪ್ರತಿ ವರ್ಷದ ಜನವರಿ ಒಂದರಂದು ಹೊಸ ವರ್ಷದ ಆಚರಣೆ ಶುರುವಾಗುತ್ತದೆ. ಹೊಸ ವರ್ಷವನ್ನು ಹೊಸ ಜೀವನದೊಂದಿಗೆ ಆರಂಭಿಸಲು ಜನತೆ ಬಯಸುತ್ತದೆ. ಅದು ಮಾನವನ ಸಹಜ ಸ್ವಭಾವ. ಜನರು ಹೊಸತಿನ ಬಗ್ಗೆ ಹೊಸ ವಿಷಯಗಳನ್ನು ನಿರೀಕ್ಷಿಸುತ್ತಾರೆ. ಈ ಪರಿಕಲ್ಪನೆಯು ನ್ಯೂ ಇಯರ್‌ಗೆ ಅನ್ವಯವಾಗುತ್ತದೆ. ಹಳೆಯ ವರ್ಷದಲ್ಲಿ ಮಾಡಲಾಗದ್ದನ್ನು ಈ ವರ್ಷ ಮಾಡಿ ತೋರಿಸುವುದಾಗಿ ಕೆಲವರು ಹೊಸ ವರ್ಷಕ್ಕೆ ಪ್ರತಿಜ್ಞೆ ಮಾಡುತ್ತಾರೆ. ಆದರೆ ಬರೀ ಪ್ರತಿಜ್ಞೆಯಲ್ಲೇ ಕಾಲಕಳೆದು ಅದು ಹೊಸ ವರ್ಷಕ್ಕೆ ನೆರವೇರದಿದ್ದಾಗ ಛೇ, ಈ ವರ್ಷ ಅದೃಷ್ಟ ಸರಿಯಿಲ್ಲ. ಬರುವ ವರ್ಷ ನಮ್ಮ ಅದೃಷ್ಟ ಪರೀಕ್ಷೆ ಮಾಡೋಣ ಎಂದು ಬರುವ ವರ್ಷಕ್ಕೆ ಮುಂದೂಡುತ್ತೇವೆ. ಆದರೆ ಯಾವುದೇ ಕೆಲಸಕ್ಕೆ ಬೇಕಾದ ಅರ್ಹತೆ, ಕೌಶಲ್ಯ ಪಡೆಯದೆ ವರ್ಷ, ವರ್ಷವೂ ಮುಂದೂಡುತ್ತಾ ಹೋಗುವಷ್ಟರಲ್ಲಿ ವೃದ್ಧಾಪ್ಯಕ್ಕೆ ಕಾಲಿರಿಸಿರುತ್ತೇವೆ. ಹಿಂದಿನ ವರ್ಷವು ಅಷ್ಟೇನೂ ಭರವಸೆದಾಯಕವಾಗಿಲ್ಲದಿದ್ದರೆ ನೀವು ಹೊಸ ಜೀವನಕ್ಕೆ ಕಾಲಿರಿಸಲು ಹೊಸ ವರ್ಷವು ಒಂದು ಎಕ್ಸ್‌ಕ್ಯೂಸ್ ಎನ್ನಬಹುದು. ನಿಮ್ಮ ಹಿಂದಿನ ವರ್ಷವು ಚೆನ್ನಾಗಿದ್ದರೆ, ಈ ವರ್ಷವು ಇನ್ನೂ ಹೆಚ್ಚು ಸಮೃದ್ಧಿ ಮತ್ತು ಅದೃಷ್ಟಕ್ಕಾಗಿ ಆಶಿಸುತ್ತೀರಿ.

ಇನ್ನು ಕೆಲವರಿಗೆ ಇಡೀ ವರ್ಷದ ಶ್ರಮದಾಯಕ ದುಡಿಮೆ ಬಳಿಕ ಮನಸ್ಸು ಸ್ವಲ್ಪ ವಿಶ್ರಾಂತಿಯನ್ನು, ಮನೋರಂಜನೆಯನ್ನು ಬಯಸುತ್ತದೆ. ಕುಟುಂಬದ ಬಂಧವನ್ನು ಗಟ್ಟಿಗೊಳಿಸಲು ಮತ್ತು ಪ್ರೀತಿ,ಅನುಬಂಧವನ್ನು ಬಿತ್ತಲು ಸ್ನೇಹಿತರಿಗೆ ಮತ್ತು ಕುಟುಂಬಗಳಿಗೆ ಹೊಸವರ್ಷವೊಂದು ಸುವರ್ಣಾವಕಾಶ. ನಮ್ಮ ಎಲ್ಲ ಕೆಲಸಕ್ಕೆ ಸ್ವಲ್ಪ ಸಮಯ ವಿಶ್ರಾಂತಿ ಕೊಟ್ಟು ರಿಲಾಕ್ಸ್ ಮಾಡುವ ಮೂಲಕ ಸಂಭ್ರಮ, ಸಡಗರಕ್ಕೆ ಇದೊಂದು ಶುಭಗಳಿಗೆ. ಎಂದು ಹೇಳಬಹುದಾಗಿದೆ. ಹಳೆ ವಷ೯ದಿಂದ ಪಾಠ ಕಲಿಯಬೇಕಾಗಿದೆ :- 2020 ರ ಇಸವಿ ಪರೀಕ್ಷೆಯ ಕಾಲವಾಗಿತ್ತು ಒಂದೆಡೆ ಕರೋನಾ ಕಾಟದಿಂದ ಎಲ್ಲರೂ ತೊಂದರೆ ಅನುಭವಿಸಿದರೆ, ಮತ್ತೊoದೆಡೆ ಪ್ರವಾಹ ಪ್ರಾಕೃತಿಕ ವಿಕೋಪದ ರುದ್ರ ನತ೯ನ ಎಲ್ಲರನ್ನು ಹೈರಾಣಾಗಿಸಿದೆ. ಒಡವ ಶ್ರೀಮಂತ ಒಂದೇ ಎಂಬ oತಾಗಿದ್ದಾರೆ.ಪ್ರಕೃತಿಯಿಂದ ನಾವೆಲ್ಲರೂ ಪಾಠ ಕಲಿತು 2021ಕ್ಕೆ ಅದನ್ನು ಅನುಷ್ಟಾನಗೊಳಿಸೋಣ.

ಹೊಸ ವರುಷವದೇನೋ ಸಂಭ್ರಮ, ಅದೇನೋ ಸಡಗರ, ಹಳೆಯ ನೆನಪಿನ ಬುತ್ತಿಯನ್ನು ಮುಚ್ಚಿ, ಹೊಸ ಜೀವನದ ಪಯಣಕ್ಕೆ ಅದೇನೋ ಕಾತುರ, ಅದೇನೋ ಆತುರ, ಹಾದಿಯಲ್ಲಿ ಮುಳ್ಳುಕಲ್ಲುಗಳಿರಬಹುದು, ಎಚ್ಚರ, ಎದುರಿಸಿ ಮುನ್ನಡೆದಾಗಲೇ ಸುಖಸಾಗರ. ಕ್ಯಾಲೆಂಡರ್ ಬದಲಾದಾಗ ನಮ್ಮ ಜೀವನ ಕ್ರಮ ವಿಚಾರ ವೈವಿದ್ಯತೆ ಕೂಡ ಬದಲಾಗಲಿ' ಬದಲಾವಣೆ ನಮ್ಮದಾಗಲಿ' ರಾಘವೇಂದ್ರ ಪ್ರಭು, ಕವಾ೯ಲು ಯುವ ಲೇಖಕ

ಪಂಚಾಯತ್ ಚುನಾವಣೆ ಪಕ್ಷರಹಿತ : ಚುನಾವಣಾ ಆಯೋಗ

Posted On: 30-12-2020 11:14PM

ಗ್ರಾಮ ಪಂಚಾಯತ್ ಚುನಾವಣೆಯು ಪಕ್ಷರಹಿತ ಚುನಾವಣೆಯಾಗಿದ್ದು ಟಿ.ವಿ ವಾಹಿಗಳಲ್ಲಿ ಪಕ್ಷಬಿಂಬಿತವಾಗುತ್ತಿದ್ದು ಇದು ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡುತ್ತಿರುವ ಬಗ್ಗೆ ರಾಜ್ಯ ಚುನಾವಣಾ ಆಯೋಗ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಕಾಪು : ಕೋವಿಡ್ ನಿಯಮ ಉಲ್ಲಂಘನೆ, ಅಧಿಕಾರಿಗಳ ಮೌನ

Posted On: 30-12-2020 09:45PM

ಕಾಪು : ಕಾಪು ತಾಲೂಕಿನ ಗ್ರಾಮ ಪಂಚಾಯತ್ ಗಳ ಮತ ಎಣಿಕೆ ಇಂದು ಮುಂಜಾನೆಯಿಂದ ಆರಂಭಗೊಂಡಿದ್ದು, ಅನೇಕ ಗ್ರಾಮ ಪಂಚಾಯತ್ ಗಳ ಮತ ಎಣಿಕೆ ಮತ್ತು ವಿಜೇತರ ಘೋಷಣೆಯಾಗಿದೆ. ಇನ್ನು ಕೆಲವೇ ಕೆಲವು ಗ್ರಾ. ಪ ಗಳ ಮತ ಎಣಿಕೆ ಮತ್ತು ವಿಜೇತರ ಘೋಷಣೆ ಬಾಕಿ ಇದೆ.

ಇಂದು ಬೆಳಿಗ್ಗಿನಿಂದ ಮತ ಎಣಿಕೆಯ ಕೇಂದ್ರದ ವಠಾರದಲ್ಲಿ ಜನರು ಗುಂಪು ಗುಂಪಾಗಿ ಸೇರುತ್ತಿದ್ದು. ಸರಕಾರ ಕೋವಿಡ್ ಗಾಗಿ ಉಲ್ಲೆಖಿಸಿರುವ ಯಾವುದೇ ನಿಯಮಗಳನ್ನು ಜನರು ಪಾಲಿಸುತ್ತಿಲ್ಲ ಮತ್ತು ಯಾರು ಕೂಡಾ ಈ ಬಗ್ಗೆ ಕ್ರಮ ಕೈಗೊಂಡಿಲ್ಲ..

ಸರಕಾರದ ಸೂಚನೆಯನ್ನು ನಿರ್ಲಕ್ಷಿಸುವುದು ಕಾನೂನರ್ಹ ಅಪರಾಧವಾಗಿದೆ.. ಇಂತಹ ಸಮಯದಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿದಿಗಳು ಮೌನವಾಗಿರುವುದು ಬೇಜವಾಬ್ದಾರಿಯನ್ನು ತೋರಿದಂತಿದೆ..

ಅದಾನಿ ಫೌಂಡೇಶನ್ ಉಡುಪಿ ಪವರ್ ಕಾರ್ಪೋರೇಶನ್ ಲಿಮಿಟೆಡ್ ಇದರ ವಿದ್ಯಾರ್ಥಿವೇತನ ದ 2020-21 ನೇ ಸಾಲಿನ ಅರ್ಜಿ ಆಹ್ವಾನ

Posted On: 29-12-2020 08:48PM

ಅದಾನಿ ಫೌಂಡೇಶನ್ ಉಡುಪಿ ಪವರ್ ಕಾರ್ಪೋರೇಶನ್ ಲಿಮಿಟೆಡ್ ಇದರ ವಿದ್ಯಾರ್ಥಿವೇತನ ದ 2020-21 ನೇ ಸಾಲಿನ ಅರ್ಜಿ ಆಹ್ವಾನ

ಅದಾನಿ ಫೌಂಡೇಶನ್ ಉಡುಪಿ ಪವರ್ ಕಾರ್ಪೋರೇಶನ್ ಲಿಮಿಟೆಡ್ ಇದರ ವಿದ್ಯಾರ್ಥಿವೇತನ ದ 2020-21 ನೇ ಸಾಲಿನ ಅರ್ಜಿ ಆಹ್ವಾನ

Posted On: 29-12-2020 08:48PM

< controls src="https://nammakaup.in/application/upload/1641" alt="" --->

< controls src="https://nammakaup.in/application/upload/1641" alt="" --->

< controls src="https://nammakaup.in/application/upload/1641" alt="" --->

ಅದಾನಿ ಫೌಂಡೇಶನ್ ಉಡುಪಿ ಪವರ್ ಕಾರ್ಪೋರೇಶನ್ ಲಿಮಿಟೆಡ್ ಇದರ ವಿದ್ಯಾರ್ಥಿವೇತನ ದ 2020-21 ನೇ ಸಾಲಿನ ಅರ್ಜಿ ಆಹ್ವಾನ

Posted On: 29-12-2020 08:47PM

< controls src="https://nammakaup.in/application/upload/603" alt="" --->

< controls src="https://nammakaup.in/application/upload/603" alt="" --->

< controls src="https://nammakaup.in/application/upload/603" alt="" --->

ಅದಾನಿ ಫೌಂಡೇಶನ್ ಉಡುಪಿ ಪವರ್ ಕಾರ್ಪೋರೇಶನ್ ಲಿಮಿಟೆಡ್ ಇದರ ವಿದ್ಯಾರ್ಥಿವೇತನ ದ 2020-21 ನೇ ಸಾಲಿನ ಅರ್ಜಿ ಆಹ್ವಾನ

Posted On: 29-12-2020 08:47PM

< controls src="https://nammakaup.in/application/upload/6660" alt="" --->

< controls src="https://nammakaup.in/application/upload/6660" alt="" --->

< controls src="https://nammakaup.in/application/upload/6660" alt="" --->