Updated News From Kaup
ಕರಾವಳಿ ಜನರ ಹೆಮ್ಮೆಯ ಕರ್ನಾಟಕ ಬ್ಯಾಂಕ್ ಗೆ ದಾಖಲೆಯ 483 ಕೋಟಿ ರೂ. ಲಾಭ
Posted On: 27 May 2021, 09:01 PM
ಮಂಗಳೂರು : ಕೊರೊನ ಸಮಯ ಆರ್ಥಿಕ ಹಿಂಜರಿತದ ನಡುವೆ ಕರಾವಳಿಯ ಬ್ಯಾಂಕಾದ ಕರ್ನಾಟಕ ಬ್ಯಾಂಕ್ ದಾಖಲೆಯ 483 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿದೆ. ಕರ್ನಾಟಕ ಬ್ಯಾಂಕ್ ಕಳೆದ ಸಾಲಿನಲ್ಲಿ 431.78 ಕೋಟಿ ನಿವ್ವಳ ಲಾಭ ಗಳಿಸಿತ್ತು. ಪ್ರಸಕ್ತ ವರ್ಷ 11.76 ಬೆಳವಣಿಗೆ ಸಾಧಿಸಿದೆ. ಆ ಮೂಲಕ ಅಗ್ರಗಣ್ಯ ಬ್ಯಾಂಕ್ ಗಳಲ್ಲಿ ತನ್ನ ಛಾಪು ಮೂಡಿಸಿದೆ. ಬ್ಯಾಂಕಿನ MD ಮಹಾಬಲೇಶ್ವರ ಎಮ್.ಎಸ್ ರವರು ಮಾತನಾಡಿ ಬ್ಯಾಂಕ್ ನ ಉದ್ಯೋಗಿಗಳು ಕೋವಿಡ್ ಕಾರಣದಿಂದ ಮೃತ ಪಟ್ಟರೆ ಅವರ ಕುಟುಂಬದವರಿಗೆ 20 ಲಕ್ಷ ಹಾಗೂ ಅವರ ಕುಟುಂಬದ ಅರ್ಹ ಅಭ್ಯರ್ಥಿಗಳಿಗೆ ಅನುಕಂಪದ ನೆಲೆಯಲ್ಲಿ ಕರ್ಣಾಟಕ ಬ್ಯಾಂಕ್ ನಲ್ಲಿ ಉದ್ಯೋಗ ಅವಕಾಶ ಮಾಡಿಕೊಡಲಾಗುತ್ತದೆ ಎಂದರು.
ಕರ್ನಾಟಕ ರಾಜ್ಯ ಮುದ್ರಣಕಾರರ ಸಂಘದ ಆನ್ಲೈನ್ ಸಭೆ : ಸರಕಾರದ ಸವಲತ್ತುಗಳನ್ನು ಪಡೆಯಲು ಪ್ರಯತ್ನ
Posted On: 26 May 2021, 07:12 PM
ಉಡುಪಿ : ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳ ಮುದ್ರಣಕಾರರ ಸಂಘದ ಆನ್ಲೈನ್ ಸಭೆಯು ಜರಗಿತು. ಈ ಸಭೆಯಲ್ಲಿ ಸಿ. ಆರ್. ಜನಾರ್ಧನ್ರವರು ಮಾತನಾಡಿ ಈ ಸಭೆಗಳನ್ನು ತಿಂಗಳು ತಿಂಗಳು ಮಾಡಬೇಕು ಬರುವ ಎಲ್ಲಾ ಖರ್ಚುಗಳನ್ನು ನಮ್ಮ ರಾಜ್ಯ ಸಂಘಟನೆಯು ಭರಿಸಲಿದೆ ಮತ್ತು ಎಂ.ಎಸ್.ಎಮ್ ಇ.ಯ ಮಾಲಿಕರಿಗೆ ಕೋವಿಡ್-19ನಿಂದ ತುಂಬಾ ಸಂಕಷ್ಟ ಎದುರಾಗಿದೆ. ಕರ್ನಾಟಕದಲ್ಲಿ ಸುಮಾರು 15000ಕ್ಕೂ ಮಿಕ್ಕಿ ಪ್ರಿಂಟಿಂಗ್ ಪ್ರೆಸ್ಗಳಿವೆ ಭಾರತದಲ್ಲಿ ಸುಮಾರು 230000 ದವರೆಗೆ ಸಣ್ಣ, ಅತಿ ಸಣ್ಣ, ಮಧ್ಯಮ ವರ್ಗದ ಮುದ್ರಣಾಲಯಗಳಿವೆ. ಸುಮಾರು 2000 ಕೋಟಿಯಷ್ಟು ನಷ್ಟ ಆಗಿರುತ್ತದೆ. ಸರಕಾರ ನಮ್ಮ ಕೈ ಹಿಡಿಯದಿದ್ದರೆ ನಮಗೆ ಉಳಿಗಾಲವಿಲ್ಲ ಎಂಬ ಮಾತನ್ನು ಆಡಿದರು ಮತ್ತು ಎಲ್ಲಾ ಮುದ್ರಕ ಬಾಂಧವರು ಹೆದರುವ ಅಗತ್ಯವಿಲ್ಲ ನಾವೆಲ್ಲ ಒಟ್ಟಾಗಿ ಸರಕಾರದಿಂದ ಸಿಗುವ ಸವಲತ್ತುಗಳ ಬಗ್ಗೆ ಹೆಚ್ಚಿನ ಪ್ರಯತ್ನವನ್ನು ಮಾಡಬಹುದು ಎಂಬ ಮಾತನ್ನು ಹೇಳಿದರು. ಅಶೋಕ್ ಕುಮಾರ್ರವರು ಮಾತನಾಡಿ ಎಲ್ಲಾ ಜಿಲ್ಲೆಗಳು ನಮ್ಮ ಮಾತೃ ಸಂಘದಲ್ಲಿ ನೋಂದಾವಣೆಯನ್ನು ಮಾಡಿಕೊಳ್ಳಬೇಕು. ನೋಂದಾವಣೆಗೆ ತಗಲುವ ವೆಚ್ಚ ರೂ.3000 ವನ್ನು ನಮ್ಮ ಮಾತೃ ಸಂಘವೇ ಭರಿಸಲಿದೆ ಎಂಬ ಮಾತನ್ನು ಹೇಳಿದರು. ಈಗಾಗಲೇ ಹಾರೋಹಳ್ಳಿಯಲ್ಲಿ ಪ್ರಿಂಟೆಕ್ ಪಾರ್ಕ್ ಪ್ರಾರಂಭಗೊಂಡಿದ್ದು ಅದರ ಪ್ರಯೋಜನವನ್ನು ಎಲ್ಲಾ ಜಿಲ್ಲೆಗಳ ಸದಸ್ಯರುಗಳು ಪಡೆಯಬೇಕಾಗಿ ಮಾಹಿತಿಯನ್ನು ನೀಡಿದರು. 3 ತಿಂಗಳಿಗೊಮ್ಮೆ ಬೇರೆ ಬೇರೆ ಜಿಲ್ಲೆಗಳಲ್ಲಿ ಸಭೆಯನ್ನು ನಡೆಸುವರೇ ಆ ಸಭೆಯ ಎಲ್ಲಾ ಖರ್ಚನ್ನು ಕರ್ನಾಟಕ ರಾಜ್ಯ ಮುದ್ರಕರ ಸಂಘ ಭರಿಸಲಿದೆ ಹಾಗೂ ಎಲ್ಲಾ ನಮ್ಮ ವೃತ್ತಿ ಬಾಂಧವರಿಗೆ ನಾವು ಸರಕಾರದಿಂದ ಸಿಗುವ ಸವಲತ್ತುಗಳ ಬಗ್ಗೆ ಹೆಚ್ಚಿನ ಪ್ರಯತ್ನವನ್ನು ಮಾಡುತ್ತೇವೆ ಎಂಬ ಭರವಸೆಯನ್ನು ನೀಡಿದರು. ಹೆಚ್ಚಿನ ಜಿಲ್ಲೆಯ ಅಧ್ಯಕ್ಷರು, ಸದಸ್ಯರುಗಳು ತಮ್ಮ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಜಿ.ಎಸ್.ಟಿ.ಯನ್ನು ಕಟ್ಟುತ್ತಿದ್ದು ನಮಗೆ ಸರಕಾರದಿಂದ ಏನಾದರು ಅನುದಾನ ಸಿಗುವಲ್ಲಿ ಪ್ರಯತ್ನ ಮಾಡಬೇಕು. ಈಗಾಗಲೇ ಹೆಚ್ಚಿನ ಪ್ರಿಂಟಿಂಗ್ ಪ್ರೆಸ್ಗಳು ಸಾಪ್ಟ್ವೇರ್ ಲೈಸನ್ಸ್ ಅನ್ನು ಪಡೆದಿದ್ದು ಕೆಲವು ವಿಸಿಟಿಂಗ್ ಕಾರ್ಡ್ ಪ್ರಿಂಟರ್ಸ್ ನಮಗೆ ಬಹಳ ತೊಂದರೆಯಾಗುತ್ತಿದೆ ಎಂಬ ಮಾತನ್ನು ಹೇಳಿದರು. ಅದೇ ರೀತಿ ಕರ್ನಾಟಕ ರಾಜ್ಯ ಮುದ್ರಣ ಸಂಘವು ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಸಹಕಾರವನ್ನು ನೀಡಬೇಕು ಎಂಬ ಮಾತುಗಳು ಬಂತು. ಅದೇ ರೀತಿ ಎಲ್ಲಾ ಜಿಲ್ಲೆಗಳಲ್ಲಿಯೂ ಕೂಡಾ ನಮಗೆ ಬಂದ ಸಂಕಷ್ಟಗಳ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸುವ ಬಗ್ಗೆ ನಿರ್ಧಾರವನ್ನು ಕೈಗೊಳ್ಳಲಾಯಿತು. ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಸಿ. ಆರ್. ಜನಾರ್ಧನ್ (ಮಾಜಿ ಅಧ್ಯಕ್ಷರು, ಆಲ್ ಇಂಡಿಯ ಮಾಸ್ಟರ್ ಪ್ರಿಂಟರ್ಸ್ ಫೆಡರೇಶನ್ ನವದೆಹಲಿ ಮತ್ತು ಕರ್ನಾಟಕ ಸ್ಟೇಟ್ ಪ್ರಿಂಟರ್ಸ್ ಅಸೋಶಿಯೇಶನ್, ಬೆಂಗಳೂರು) ಮತ್ತು ಅಶೋಕ್ ಕುಮಾರ್ (ಅಧ್ಯಕ್ಷರು, ಕರ್ನಾಟಕ ಸ್ಟೇಟ್ ಪ್ರಿಂಟರ್ಸ್ ಅಸೋಶಿಯೇಶನ್, ಬೆಂಗಳೂರು) ಉಪಸ್ಥಿತರಿದ್ದರು. ಕು| ಅಕ್ಷರ ಶೆಟ್ಟಿ ಉಡುಪಿ ಇವರ ಪ್ರಾರ್ಥನೆಯೊಂದಿಗೆ ಸಭೆಯು ಪ್ರಾರಂಭವಾಯಿತು. ಸ್ವಾಗತವನ್ನು ಎಂ. ಮಹೇಶ್ ಕುಮಾರು (ಉಡುಪಿ ಜಿಲ್ಲಾ ಮುದ್ರಣಾಲ್ಹಯಗಳ ಮಾಲಕರ ಸಂಘ, ಉಡುಪಿ) ನೆರವೇರಿಸಿದರು. ಸುಮಾರು 18 ಜಿಲ್ಲೆಗಳ ಅಧ್ಯಕ್ಷರು ಹಾಗೂ ಸದಸ್ಯರು ಭಾಗವಹಿಸಿದ್ದರು. ಕು| ಅಕ್ಷರ ಶೆಟ್ಟಿ ಉಡುಪಿ ಇವರ ಪ್ರಾರ್ಥನೆಯೊಂದಿಗೆ, ಉಡುಪಿ ಜಿಲ್ಲಾ ಮುದ್ರಣಾಲ್ಹಯಗಳ ಮಾಲಕರ ಸಂಘ, ಉಡುಪಿಯ ಎಂ. ಮಹೇಶ್ ಕುಮಾರ್ ಸ್ವಾಗತಿಸಿದರು. ಗೌರವ ಸಲಹೆಗಾರರು, ಉಡುಪಿ ಜಿಲ್ಲಾ ಮುದ್ರಣಾಲಯಗಳ ಮಾಲಕರ ಸಂಘ ಉಡುಪಿಯ ಅಶೋಕ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ದಾವಣಗೆರೆ ಜಿಲ್ಲಾ ಮುದ್ರಣಕಾರರ ಸಂಘದ ಕಾರ್ಯದರ್ಶಿ ರುದ್ರೇಶ್ ಎಸ್.ವಂದಿಸಿದರು.
ಕಟಪಾಡಿ : ಯುವಕರು ಜತೆಗೂಡಿ ಮಾಡಿದ ಕಿರುಚಿತ್ರ ಲಂಡನ್ ನ ಫಿಲ್ಮ್ ಫೆಸ್ಟಿವಲ್ ಗೆ ಆಯ್ಕೆ
Posted On: 25 May 2021, 04:32 PM
ಕಾಪು : ಯುವ ಪ್ರತಿಭೆ ವಿಜಿತ್ ಅಂಚನ್ ನಿರ್ದೇಶನ ದ MGM GROUND ಎಂಬ ತುಳು ಕಿರುಚಿತ್ರ ಲಿಫ್ಟ್ ಆಫ್ ಗ್ಲೋಬಲ್ ನೆಟ್ವರ್ಕ್ ಸೆಷನ್ಸ್ 2021 ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲು ಆಯ್ಕೆಯಾಗಿದೆ. ಈ ಕಿರುಚಿತ್ರಕ್ಕೆ ಭರತ್ ಪೂಜಾರಿ ಅವರ ಕಥೆ ಹಾಗೂ ದೀಪಕ್ ಕೋಟ್ಯಾನ್ ರವರ ಕ್ಯಾಮರಾ ವರ್ಕ್ , ಸಂಕಲನ ರೋಹಿತ್ ಆಚಾರ್ಯ , ಎಸ್,ಫ್,ಎಕ್ಸ್ ವರ್ಕ್ ಅಭಿಷೇಕ್ ಆಚಾರ್ಯ ನಿರ್ವಹಿಸಿದ್ದಾರೆ. ಪ್ರಮುಖ ತಾರಾಗಣದಲ್ಲಿ ವಿಜಿತ್ ಅಂಚನ್ , ಸಚಿನ್ ಆಚಾರ್ಯ , ಸುಷ್ಮಿತಾ ಕೋಟ್ಯಾನ್, ರಕ್ಷಿತ್, ರೋಹಿತ್ ಹಾಗೂ ಗೌತಮ್ , ಶರತ್, ಸುಶಾನ್, ರಂಜಿತ್ , ರಕ್ಷಿತ್ ದೇವಾಡಿಗ, ಸಂದೇಶ್ , ಅನುಷಾ ಮುಂತಾದ ಯುವ ಪ್ರತಿಭೆಗಳು ನಟಿಸಿದ್ದಾರೆ.
ಸಾಮಾಜಿಕ ಕಾರ್ಯಕರ್ತೆ ನೀತಾ ಪ್ರಭುರವರ ಜನ್ಮ ದಿನಾಚರಣೆಯ ಪ್ರಯುಕ್ತ ದಿನಸಿ ಸಾಮಾಗ್ರಿ ವಿತರಣೆ
Posted On: 25 May 2021, 03:55 PM
ಕಾಪು : ಸಾಮಾಜಿಕ ಕಾರ್ಯಕರ್ತೆ ಕಾಪುವಿನ ನೀತಾ ಪ್ರಭುರವರ ಜನ್ಮ ದಿನಾಚರಣೆಯ ಪ್ರಯುಕ್ತ ಆಶಾ ಕಾರ್ಯಕರ್ತೆಯರಿಗೆ 10 ಕೆ.ಜಿ ಅಕ್ಕಿ ಸೇರಿದಂತೆ ದಿನಸಿ ಸಾಮಾಗ್ರಿಗಳನ್ನು ನೀಡಲಾಯಿತು. ಸುಮಾರು 25 ಸಾವಿರ ಮೌಲ್ಯದ 30 ಕಿಟ್ ಗಳನ್ನು ವಿತರಿಸಲಾಯಿತು. ಈ ಸಂದರ್ಭ ಜೀವನ್ ಶೆಟ್ಟಿ ಮಲ್ಲಾರ್, ಪ್ರಜ್ವಲ್ ಶೆಟ್ಟಿ ಮಲ್ಲಾರ್, ಪ್ರಶಾಂತ್ ಪೂಜಾರಿ, ಯಾದವ ಪೂಜಾರಿ, ಶ್ರೀಕಾಂತ್ ನಾಯಕ್, ಮಧುಕರ್ ಪೂಜಾರಿ, ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸುಬ್ರಾಯ ಕಾಮತ್ ಮೊದಲಾದವರು ಉಪಸ್ಥಿತರಿದ್ದರು.
ವಿಶ್ವ ಹಿಂದು ಪರಿಷತ್ ಕಾಪು ವತಿಯಿಂದ ಕಾಪು ಭಾಗದ ಆಶಾ ಕಾರ್ಯಕರ್ತರಿಗೆ ಮಾಸ್ಕ್, ಸ್ಯಾನಿಟೈಸರ್ ವಿತರಣೆ
Posted On: 25 May 2021, 03:36 PM
ಕಾಪು : ವಿಶ್ವ ಹಿಂದು ಪರಿಷತ್ ಕಾಪು ಇದರ ವತಿಯಿಂದ ಇಂದು ಕಾಪು ಭಾಗದ ಎಲ್ಲ ಆಶಾ ಕಾರ್ಯಕರ್ತರಿಗೆ N 95 ಮಾಸ್ಕ್, ಕೈ ಗವಚ ಮತ್ತು ಸ್ಯಾನಿಟೈಸರ್ ನ್ನು ಕಾಪು ಪುರಸಭಾ ಅಧ್ಯಕ್ಷ ಅನಿಲ್ ಕುಮಾರ್ ರವರ ನೇತೃತ್ವದಲ್ಲಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಡಾ. ಸುಬ್ರಾಯ ಕಾಮತ್, ಆರ್ ಎಸ್ ಎಸ್ ಮುಖಂಡ ಅಭಿಲಾಷ್ ರಾವ್, ಡಾ. ಚಂದ್ರಕಲಾ, ಸಂದೀಪ್ ಶೆಟ್ಟಿ, ರತ್ನಾಕರ ಶೆಟ್ಟಿ, ಪ್ರವೀಣ್ ಪೂಜಾರಿ, ನಾಗರಾಜ್, ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು.
ಸ್ವಚ್ಛ ಭಾರತ್ ಫ್ರೆಂಡ್ಸ್ ವತಿಯಿಂದ ಆಹಾರ ಪ್ಯಾಕೆಟ್ ವಿತರಣೆ
Posted On: 24 May 2021, 09:53 PM
ಉಡುಪಿ : ಸ್ವಚ್ಛ ಭಾರತ್ ಫ್ರೆಂಡ್ಸ್ ವತಿಯಿಂದ ಸಣ್ಣ ಕ್ಯಾಂಟೀನ್ ನಡೆಸುತ್ತಿರುವ ಓರ್ವ ವ್ಯಕ್ತಿಗೆ ಏನಾದರೂ ವ್ಯಾಪಾರ ಆಗಲಿ ಅದೇ ರೀತಿ ಅಗತ್ಯ ವಸ್ತುಗಳನ್ನು ಸಾಗಾಟ ಮಾಡುವ ಟ್ರಕ್, ಲಾರಿ ಇತರೆ ವಾಹನಗಳ ಚಾಲಕರಿಗೆ ಸುಲಭವಾಗಿ ಉಚಿತವಾಗಿ ಆಹಾರ ಸಿಗಲಿ ಎಂಬ ಉದ್ದೇಶದಿಂದ ಆರಂಭಿಸಿರುವ ಅಗತ್ಯ ವಸ್ತುಗಳ ಸಾಗಾಟ ಮಾಡುವ ಲಾರಿ ಚಾಲಕರಿಗೆ ಆಹಾರ ಪ್ಯಾಕೆಟ್ ನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಗಣೇಶ್ ಪ್ರಸಾದ್, ರಾಘವೇಂದ್ರ ಪ್ರಭು ಕರ್ವಾಲು, ಸತೀಶ್ ಸುವರ್ಣ ಆದಿಉಡುಪಿ, ಸಂತೋಷ್ ನಾಯ್ಕ್, ಉದಯ ನಾಯ್ಕ್ ಉಪಸ್ಥಿತರಿದ್ದರು.
ಕಾಲೇಜಿನಲ್ಲಿ ಎನ್ಸಿಸಿಯನ್ನು ಚುನಾಯಿತ ವಿಷಯವಾಗಿ ತೆಗೆದುಕೊಳ್ಳಲು ಯುಜಿಸಿಯಿಂದ ವಿದ್ಯಾರ್ಥಿಗಳಿಗೆ ಅವಕಾಶ
Posted On: 24 May 2021, 09:46 PM
ಉಡುಪಿ: ಎನ್ಸಿಸಿಯನ್ನು ಆಕರ್ಷಕವಾಗಿಸಲು ಮತ್ತು ಉತ್ತಮ ಪ್ರತಿಭೆಗಳನ್ನು ಹೀರಿಕೊಳ್ಳುವಲ್ಲಿ ತ್ವರಿತಗತಿಯಲ್ಲಿ ಸಾಗುತ್ತಿರುವ ಎನ್ಸಿಸಿ (ನ್ಯಾಷನಲ್ ಕ್ಯಾಡೆಟ್ ಕಾರ್ಪ್ಸ್) ಈಗ ತನ್ನ ಕೆಡೆಟ್ಗಳಿಗೆ ಎನ್ಸಿಸಿಯನ್ನು ಚುನಾಯಿತ ವಿಷಯವಾಗಿ ಆಯ್ಕೆ ಮಾಡಲು ದಾರಿಗಳನ್ನು ತೆರೆಯಿತು. ಭವಿಷ್ಯದ ಗಡಿ ಪ್ರದೇಶಗಳ ವಿಸ್ತರಣಾ ಯೋಜನೆಯ ಭಾಗವಾಗಿ ಹೆಚ್ಚುವರಿ ಕೆಡೆಟ್ ಬಲವನ್ನು ಅಧಿಕೃತಗೊಳಿಸಿರುವ ಕರಾವಳಿ ಪ್ರದೇಶಗಳೂ ಸೇರಿದಂತೆ ಕೆಡೆಟ್ಗಳಿಗೆ ಫ್ಯೂಚರಿಸ್ಟಿಕ್ ಎಂದು ಸರ್ವಾನುಮತದಿಂದ ಪ್ರಶಂಸಿಸಲಾಗಿದೆ. ನವದೆಹಲಿಯ ಡೈರೆಕ್ಟರೇಟ್ ಜನರಲ್ ನ್ಯಾಷನಲ್ ಕೆಡೆಟ್ ಕಾರ್ಪ್ಸ್ ಮಂಡಿಸಿದ ಪ್ರಸ್ತಾವನೆಗೆ ಪ್ರತಿಕ್ರಿಯೆಯಾಗಿ ಎನ್ಸಿಸಿಯನ್ನು ಜನರಲ್ ಎಲೆಕ್ಟಿವ್ ಕ್ರೆಡಿಟ್ ಕೋರ್ಸ್ (ಜಿಇಸಿಸಿ) ಎಂದು ಪರಿಚಯಿಸಲು ಯುಜಿಸಿ ಎಲ್ಲಾ ವಿಶ್ವವಿದ್ಯಾಲಯಗಳ ಉಪಕುಲಪತಿಗಳಿಗೆ 20 ಏಪ್ರಿಲ್ 2021 ರಂದು ಹೊರಡಿಸಿದ ಮಾರ್ಗಸೂಚಿಗಳನ್ನು ಆಧರಿಸಿದೆ. ವಿಷಯದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಎನ್ಸಿಸಿ ನಿರ್ದೇಶನಾಲಯಗಳ ರಾಜ್ಯ ಅಧಿಕಾರಿಗಳನ್ನು ಸಂಪರ್ಕಿಸಲು ಉಪಕುಲಪತಿಗಳನ್ನು ಯುಜಿಸಿ ಕೇಳಿದೆ. ಇದು ಕೆಡೆಟ್ಗಳಿಗೆ ವಿಶೇಷವಾಗಿ ಬಿ ಮತ್ತು ಸಿ ಪ್ರಮಾಣಪತ್ರ ಪರೀಕ್ಷೆಗಳಲ್ಲಿ ಹಾಜರಾಗುವವರಿಗೆ ಒಂದು ಪ್ರಮುಖ ಪ್ರಯೋಜನವನ್ನು ನೀಡುತ್ತದೆ, ಇದನ್ನು ಎರಡು ರಿಂದ ಐದು ವರ್ಷಗಳ ನಿಗದಿತ ತರಬೇತಿ ಅವಧಿಯ ನಂತರ ನೀಡಲಾಗುತ್ತದೆ. ಈ ಪ್ರಮಾಣಪತ್ರಗಳು ಪ್ರವೇಶದಲ್ಲಿ ಮೀಸಲಾತಿಯಿಂದ ಉನ್ನತ ಶಿಕ್ಷಣದ ಸಂಸ್ಥೆಗಳಿಗೆ ಮತ್ತು ಸರ್ಕಾರಿ ಸಂಸ್ಥೆಗಳಲ್ಲಿ ಮತ್ತು ಖಾಸಗಿ ವಲಯದಲ್ಲಿ ಉದ್ಯೋಗ ಪಡೆಯುವವರೆಗೆ ಹಲವಾರು ಸವಲತ್ತುಗಳನ್ನು ನೀಡುತ್ತವೆ. ಈ ಕ್ರಮವು ಬಹುಮಟ್ಟಿಗೆ ತಲುಪಿದೆ ಮತ್ತು ಎನ್ಇಪಿ 2020 ರೊಂದಿಗೆ ವ್ಯಂಜನದಲ್ಲಿದೆ, ಇದರಲ್ಲಿ ವಿದ್ಯಾರ್ಥಿಗಳು ತಮ್ಮ ವಿಷಯಗಳ ಆಯ್ಕೆಗಳನ್ನು ಸಂಸ್ಥೆಗಳಿಂದ ಮಾತ್ರ ಸೀಮಿತವಾಗುವುದಕ್ಕಿಂತ ಹೆಚ್ಚಾಗಿ ಆಯ್ಕೆ ಮಾಡಬಹುದು. ಕಲಿಕೆಯನ್ನು ಹೆಚ್ಚು ಸಮಗ್ರ ಮತ್ತು ಕೌಶಲ್ಯ ಆಧಾರಿತವಾಗಿಸಲು ಇದು ಅಂತಿಮವಾಗಿ ವೃತ್ತಿಜೀವನದ ಭವಿಷ್ಯವನ್ನು ಸುಗಮಗೊಳಿಸುತ್ತದೆ. ನಿರಂತರವಾಗಿ, ಕೋರ್ಸ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, ವಿದ್ಯಾರ್ಥಿಗಳಿಗೆ ಕ್ರೆಡಿಟ್ ಪಾಯಿಂಟ್ಗಳನ್ನು ನೀಡಲಾಗುತ್ತದೆ, ಅದು ಆಯಾ ಪದವಿಗಳಿಗೆ ಅರ್ಹತೆ ಪಡೆಯಲು ಸಾಧ್ಯವಾಗುತ್ತದೆ. ಬಿ ಮತ್ತು ಸಿ ಪ್ರಮಾಣಪತ್ರಗಳಿಗಾಗಿ ಎನ್ಸಿಸಿ ಪಠ್ಯಕ್ರಮವನ್ನು ಎನ್ಇಪಿ 2020 ರ ಚಾಯ್ಸ್ ಬೇಸ್ಡ್ ಕ್ರೆಡಿಟ್ ಸಿಸ್ಟಮ್ (ಸಿಬಿಸಿಎಸ್) ಪ್ರಕಾರ ವಿನ್ಯಾಸಗೊಳಿಸಲಾಗಿದೆ, ಇದು ಆರು ಸೆಮಿಸ್ಟರ್ಗಳನ್ನು ಒಳಗೊಂಡ ಇಪ್ಪತ್ನಾಲ್ಕು ಕ್ರೆಡಿಟ್ ಪಾಯಿಂಟ್ಗಳನ್ನು ನೀಡುತ್ತದೆ, ಅದರಲ್ಲಿ ಒಬ್ಬ ವಿದ್ಯಾರ್ಥಿಯು ಮೊದಲ ಎರಡು ಸೆಮಿಸ್ಟರ್ಗಳಲ್ಲಿ ನಾಲ್ಕು ಕ್ರೆಡಿಟ್ಗಳನ್ನು ಮತ್ತು ಹತ್ತು ಕ್ರೆಡಿಟ್ಗಳನ್ನು ಪಡೆಯಬಹುದು. ಐದನೇ ಮತ್ತು ಆರನೇ ಸೆಮಿಸ್ಟರ್ನಲ್ಲಿ ಮೂರನೇ ಮತ್ತು ನಾಲ್ಕನೇ ಸೆಮಿಸ್ಟರ್ ಮತ್ತು ಅದೇ ರೀತಿ ಹತ್ತು ಕ್ರೆಡಿಟ್ಗಳು. ಮುಂಬರುವ ಶೈಕ್ಷಣಿಕ ಅಧಿವೇಶನದಿಂದ ಯೋಜಿಸಲಾಗುತ್ತಿರುವ ಉದ್ದೇಶಿತ ಅನುಷ್ಠಾನವು ರಾಜ್ಯ ಸರ್ಕಾರಗಳಿಂದ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಹುಟ್ಟುಹಾಕಿದೆ ಮತ್ತು ಸರಿಯಾದ ದಿಕ್ಕಿನಲ್ಲಿ ದೂರದೃಷ್ಟಿಯ ಹೆಜ್ಜೆಯಾಗಿ ನೋಡಲಾಗುತ್ತಿದೆ. ಇದು ನಿಸ್ಸಂದೇಹವಾಗಿ 1948 ರಿಂದ ರಾಷ್ಟ್ರ ನಿರ್ಮಾಣಕ್ಕೆ ಅಪಾರ ಕೊಡುಗೆ ನೀಡಿದ ಸಮವಸ್ತ್ರ ಪಡೆಗಳ ಮನವಿಯನ್ನು ಹೆಚ್ಚಿಸುತ್ತದೆ. 21 ಕರ್ನಾಟಕ ಬೆಟಾಲಿಯನ್ ಎನ್ಸಿಸಿ, ಉಡುಪಿ ಕಮಾಂಡಿಂಗ್ ಆಫೀಸರ್ ಕರ್ನಲ್ ಬದ್ರಿ ಪ್ರಸಾದ್ ಮತ್ತು ಆಡಳಿತಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ಪರಮಿಂದರ್ ಸಿಂಗ್ ಅವರು ಎನ್ಸಿಸಿಯಲ್ಲಿ ಭಾಗವಹಿಸಲು ಮತ್ತು ಲಾಭ ಪಡೆಯಲು ಯುವಕರ ಬಗ್ಗೆ ಹೆಚ್ಚಿನ ಗಮನ ಹರಿಸಲು ತೀವ್ರ ಆಸಕ್ತಿ ವಹಿಸಿದರು. ಎಲ್ಲಾ ಅಸೋಸಿಯೇಟ್ ಎನ್ಸಿಸಿ ಅಧಿಕಾರಿಗಳು, ಪಿಐ ಸಿಬ್ಬಂದಿ ಮತ್ತು ಆಡಳಿತ ಸಿಬ್ಬಂದಿಗಳು ಉತ್ತಮ ಯುವಕರನ್ನು ಪಡೆಯಲು ಎನ್ಸಿಸಿಯಲ್ಲಿ ಪಾಲ್ಗೊಳ್ಳಲು ಮತ್ತು ರಾಷ್ಟ್ರಕ್ಕೆ ತಮ್ಮ ಅತ್ಯುತ್ತಮ ಸೇವೆ ಸಲ್ಲಿಸಲು ಭಾರತದ ಯುವಜನರು ಶುಭ ಹಾರೈಸುತ್ತಾರೆ.
ಪರೀಕ್ಷೆ ನಡೆಸುವ ದಿಟ್ಟ ನಿರ್ಧಾರ ಅಭಿನಂದನೀಯ : ಶಿವಣ್ಣ ಬಾಯರ್
Posted On: 23 May 2021, 10:23 PM
ಇಂದು ಕೇಂದ್ರ ಸಚಿವರ ನೇತೃತ್ವದಲ್ಲಿ ವಿವಿಧ ರಾಜ್ಯಗಳ ಶಿಕ್ಷಣ ಸಚಿವರೊಂದಿಗೆ ಮಕ್ಕಳಿಗೆ ಪರೀಕ್ಷೆ ನಡೆಸುವ ಕುರಿತು ನಡೆದ ಸಂವಾದದಲ್ಲಿ ದ್ವಿತೀಯ ಪಿಯುಸಿಗೆ ಪರೀಕ್ಷೆ ಅನಿವಾರ್ಯ ಎಂಬ ಅಂಶವು ವ್ಯಕ್ತವಾಗಿರುವುದು ಪ್ರಶಂಸಾರ್ಹ. ನಮ್ಮ ರಾಜ್ಯದ ಮಾನ್ಯ ಸಚಿವರು ಪಬ್ಲಿಕ್ ಪರೀಕ್ಷೆ ನಡೆಸುವ ಬಗ್ಗೆ ದಿಟ್ಟ ನಿರ್ಧಾರ ಕೈಗೊಂಡಿರುವುದು ಅಭಿನಂದನೀಯ. ಪರೀಕ್ಷೆ ಎನ್ನುವುದು ವಿದ್ಯಾರ್ಥಿಯ ಜೀವನದಲ್ಲಿ ಅತೀ ಪ್ರಾಧಾನ್ಯ. ನಿರ್ದಿಷ್ಟ ಹಂತದ ಪರೀಕ್ಷೆಗಳು ಅನಿವಾರ್ಯವೂ ಹೌದು. ಎಸ್ಸೆಸೆಲ್ಸಿ ಪರೀಕ್ಷೆ ಎನ್ನುವುದು ಮೊದಲ ಹಂತವಾದರೆ, ದ್ವಿತೀಯ ಪಿಯುಸಿ ಪರೀಕ್ಷೆಯು ವಿದ್ಯಾರ್ಥಿಗಳ ವೃತ್ತಿ ಜೀವನದಲ್ಲಿ ಬಹು ಮುಖ್ಯವೆನಿಸಿದೆ. ಹಾಗಾಗಿ ಪರೀಕ್ಷೆಯ ರದ್ದತಿಗಿಂತ ಸಿದ್ಧತೆ ನಡೆಸುವುದು ಅತೀ ಸೂಕ್ತ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಏರಿಳಿತ ಕಾಣುತ್ತಿರುವ ಈ ಸಂದರ್ಭದಲ್ಲಿ ಮಕ್ಕಳ ಹಿತದೃಷ್ಟಿಯಿಂದ ಪರೀಕ್ಷೆ ನಡೆಸುವುದು ಹೇಗೆ ಎನ್ನುವ ಪ್ರಶ್ನೆ ಸಚಿವರು, ಇಲಾಖೆ, ಶಿಕ್ಷಕರು, ಹೆತ್ತವರು ಹಾಗೂ ವಿದ್ಯಾರ್ಥಿಗಳಲ್ಲಿ ಉಂಟಾಗಿದೆ. ಆದರೆ ಕಳೆದ ಸಾಲಿನಲ್ಲಿ ನಡೆದ ಪಬ್ಲಿಕ್ ಪರೀಕ್ಷೆ ಎಲ್ಲಾ ವರ್ಗಗಳಲ್ಲಿ ಆತ್ಮ ವಿಶ್ವಾಸವನ್ನು ತುಂಬಿಸಿದೆ. ಆದರೆ ಕಳೆದ ವರ್ಷಕ್ಕಿಂತ ಈ ವರ್ಷ ತೀರಾ ಭಿನ್ನವಾಗಿದ್ದು, ವಿದ್ಯಾರ್ಥಿಗಳನ್ನೇ ವೈರಸ್ ಹೆಚ್ಚಾಗಿ ಆಕ್ರಮಿಸಿಕೊಂಡಿದೆ. ಇದರ ಹೊರತಾಗಿಯೂ ವ್ಯಾಕ್ಸಿನ್ ಪೂರೈಕೆಯಾಗಿರುವುದರಿಂದ ಸಂಭಾವ್ಯ ತೊಂದರೆಯನ್ನು ತಪ್ಪಿಸಬಹುದಾಗಿದೆ. ಹಾಗಾಗಿ ಸಚಿವರು ಹಾಗೂ ಶಿಕ್ಷಣ ಇಲಾಖೆಯು ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ, ಶಿಕ್ಷಕ-ಶಿಕ್ಷಕೇತರ ವೃಂದಕ್ಕೆ ಮುಂಚಿತವಾಗಿ ಮೊದಲ ಹಂತದ ವ್ಯಾಕ್ಸಿನ್ ನೀಡಿ ಪರೀಕ್ಷೆ ನಡೆಸುವಂತಾದರೆ ಎಲ್ಲಾ ರೀತಿಯಿಂದಲೂ ಒಳಿತು. ಈ ಬಗ್ಗೆ ಸಂಬಂಧ ಪಟ್ಟವರು ಗಮನ ಹರಿಸುವರೇ ? ಎಂದು ದಂಡತೀರ್ಥ ಪ. ಪೂ. ಕಾಲೇಜು, ಕಾಪು ಇಲ್ಲಿಯ ಉಪನ್ಯಾಸಕರಾದ ಶಿವಣ್ಣ ಬಾಯರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪಾದೆಬೆಟ್ಟು : ಕೊರೋನ ಜಾಗೃತಿ ಸಂದೇಶದೊಂದಿಗೆ 500 ಜನರಿಗೆ ತಲಾ 1ಕೆ.ಜಿಯಂತೆ ಬಾಳೆಹಣ್ಣು ವಿತರಣೆ
Posted On: 23 May 2021, 10:18 PM
ಪಡುಬಿದ್ರಿ : ಕೊರೊನಾ ಸಂದಿಗ್ಧ ಕಾಲದಲ್ಲಿ ಜಾಗೃತಿ ಮೂಡಿಸುವುದರೊಂದಿಗೆ ವಿಶ್ವ ಹಿಂದೂ ಪರಿಷತ್ ಹಾಗು ಸೇವಾ ಭಾರತಿ ಮತ್ತು ಪಾದೆಬೆಟ್ಟು ಯುವಕರಿಂದ ಪಡುಬಿದ್ರಿ-ಪಾದೆಬೆಟ್ಟು ವಲಯದಲ್ಲಿ ಸುಮಾರು 500 ಜನರಿಗೆ ತಲಾ 1ಕೆ.ಜಿ ಬಾಳೆಹಣ್ಣು ವಿತರಿಸಲಾಯಿತು. ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ವಿಶ್ವ ಹಿಂದೂ ಪರಿಷತ್ ನ ಅಧ್ಯಕ್ಷರಾದ ವಿಷ್ಣುಮೂರ್ತಿ ಆಚಾರ್ಯ ಪಾದೆಬೆಟ್ಟು, ಪ್ರಶಾಂತ್ ಶೆಟ್ಟಿ ಪಾದೆಬೆಟ್ಟು, ಸುರೇಶ್ ಶೆಟ್ಟಿ ಉಳ್ಳೂರು, ಯೋಗೀಶ್ ಆಚಾರ್ಯ ಪಾದೆಬೆಟ್ಟು, ಗುರುಪ್ರಸಾದ್ ಭಟ್ ಪಾದೆಬೆಟ್ಟು ಹರೀಶ್ ಶೆಟ್ಟಿ ಪಾದೆಬೆಟ್ಟು, ಸುಕೇಶ್ ರಾವ್ ಪಾದೆಬೆಟ್ಟು, ಸುರೇಶ್ ಪೂಜಾರಿ ಪಾದೆಬೆಟ್ಟು, ಭಾಸ್ಕರ್ ಅಂಚನ್ ಪಾದೆಬೆಟ್ಟು, ಸುದರ್ಶನ್ ಶೆಟ್ಟಿ ಪಾದೆಬೆಟ್ಟು, ಸೂರಜ್ ದೇವಾಡಿಗ ಪಾದೆಬೆಟ್ಟು ಉಪಸ್ಥಿತರಿದ್ದರು.
ಪಾಂಗಾಳ : ಸರಿಯಾದ ಸೂರು, ವಿದ್ಯುತ್ ಸಂಪರ್ಕವಿಲ್ಲದೆ ದಿನ ಕಳೆಯುವ ಹಿರಿ ಜೀವಗಳಿಗೆ ನೆರವಾಗಿ
Posted On: 23 May 2021, 04:19 PM
ಕಾಪು : ಪಾಂಗಾಳ ಆರ್ಯಾಡಿ ನಿವಾಸಿಗಳಾದ ಗಂಗೆ ಪೂಜಾರ್ತಿ ಮತ್ತು ಗಿರಿಜಾ ಪೂಜಾರ್ತಿ ಮನೆ ತೀವ್ರ ದುಸ್ಥಿತಿಯಲ್ಲಿದೆ. ಕಳೆದ ಸೆಪ್ಟೆಂಬರ್ ನಲ್ಲಿ ಮಳೆಗೆ ಬಿದ್ದ ಈ ಮನೆಗೆ ಯಾವುದೇ ರೀತಿಯ ಸೌಲಭ್ಯ ದೊರಕಲಿಲ್ಲ. ಸರಕಾರದ ಸೌಲಭ್ಯ ಇವರಿಗೆ ಸಿಗುವುದು ಕೇವಲ ಕನಸಾಗಿಯೇ ಉಳಿಯಿತು. ಗಂಡು ದಿಕ್ಕಿಲ್ಲ ಈ ಮನೆಗೆ ಪ್ರಾಯ ಆದ ತಾಯಿ ಜೊತೆ ದಿನ ದೂಡುವುದೇ ಕಷ್ಟವಾಗಿದೆ. ಅಷ್ಟು ಮಾತ್ರವಲ್ಲದೆ ಕಳೆದ 30 ವರ್ಷದಿಂದ ವಿದ್ಯುತ್ ಇಲ್ಲದೆ ಜೀವನ ನಡೆಸುವ ಇವರಿಗೆ ನಡೆಯಲು ದಾರಿ, ಕುಡಿಯಲು ನೀರು ಎಲ್ಲದಕ್ಕೂ ಕಷ್ಟ ಪಡಬೇಕಾಗಿದೆ. ಈ ಮಹಿಳೆಯರ ಬದುಕು ಬೆಳಕಾಗಲು ಅಧಿಕಾರಿಗಳು, ಜನಪ್ರತಿನಿಧಿಗಳು, ಸಹೃದಯಿಗಳು ಈ ಬಡ ಕುಟುಂಬಕ್ಕೆ ಸೂರು ನಿರ್ಮಿಸಲು ಸಹಕರಿಸಿ, ಮಾನವೀಯತೆ ದೃಷ್ಟಿಯಿಂದ ಸಾಧ್ಯವಾದಷ್ಟು ಸಹಾಯವನ್ನು ಮಾಡಿ ತಾಯಿ ಮಗಳಿಗೆ ಸೂರು ಕಲ್ಪಿಸುವ ಕಾರ್ಯಕ್ಕೆ ಕೈ ಜೋಡಿಸಿ. ಹೆಸರು : ಗಿರಿಜಾ ಪೂಜಾರ್ತಿ ಬ್ಯಾಂಕ್ : (ವಿಜಯ ಬ್ಯಾಂಕ್) ಬ್ಯಾಂಕ್ ಆಫ್ ಬರೋಡ ಬ್ರಾಂಚ್ : ಪಾಂಗಾಳ ಅಕೌಂಟ್ ನಂಬರ್ : 84350100001837 IFSC code :BARB0VJPANG
