Updated News From Kaup
ಸುಗ್ಗಿ ಮಾರಿಪೂಜೆಯಂದು ನಡೆಯಲಿರುವ ಶಿಲಾ ಪುಷ್ಪ ಸಮರ್ಪಣೆಯ ಪೂರ್ವಭಾವಿ ಸಮಾಲೋಚನಾ ಸಭೆ
Posted On: 23-02-2021 10:15PM
ಕಾಪು : ಮಾರ್ಚ್ 23/24 ರಂದು ನಡೆಯುವ ಸುಗ್ಗಿ ಮಾರಿಪೂಜೆಯಂದು ಜರಗಲಿರುವ ಶಿಲಾ ಪುಷ್ಪ ಸಮರ್ಪಣಾ ಬಗ್ಗೆ ಪೂರ್ವಭಾವಿ ಸಮಾಲೋಚನಾ ಸಭೆ ನಡೆಯಿತು.
ಎಲ್ಲೂರುದ ಉಲ್ಲಾಯೆ ತುಳು ಭಕ್ತಿಗೀತೆಯ ಸಿಡಿ ಬಿಡುಗಡೆ
Posted On: 23-02-2021 08:24PM
ಕಾಪು : ಕುಂಜೂರಿನ ಮೋಕೆದ ಕಲಾವಿದರು ಸಿದ್ಧಗೊಳಿಸಿದ ಎಲ್ಲೂರುದ ಉಲ್ಲಾಯೆ ತುಳು ಭಕ್ತಿಗೀತೆಯ ಸಿಡಿಯನ್ನು ಎಲ್ಲೂರು ಮಹತೋಭಾರ ದೇವರ ಸನ್ನಿಧಿಯಲ್ಲಿ ನೆರವೇರುತ್ತಿರುವ ಸೀಮೆಯ ರಾಶಿಪೂಜೆಯ ಸಂದರ್ಭ ಸೀಮೆಯ ತಂತ್ರಿಗಳಾದ ವೇ.ಮೂ . ಲಕ್ಷ್ಮೀನಾರಾಯಣ ತಂತ್ರಿಯವರು ಹಾಗೂ ಶ್ರೀ ಕೆ.ಎಲ್. ಕುಂಡತಾಯರವರು ಬಿಡುಗಡೆಗೊಳಿಸಿ ಹರಸಿದರು.
ಎಲ್ಲೂರು ಸೀಮೆಯ ವಾದ್ಯವಾದಕ ಶ್ರೀ ಲಕ್ಷ್ಮಣ ಸೇರಿಗಾರಗೆ ಸಮ್ಮಾನ
Posted On: 21-02-2021 09:00PM
ಕಾಪು : ಎಲ್ಲೂರು ಸೀಮೆಯ ಶ್ರೀ ವಿಶ್ವೇಶ್ವರ ದೇವಳದ ಪವಿತ್ರಪಾಣಿ ಮನೆತನದ ಶುಭ ಸಮಾರಂಭದಲ್ಲಿ ಎಲ್ಲೂರು ಸೀಮೆಯ ವಾದ್ಯವಾದಕ ಶ್ರೀ ಲಕ್ಷ್ಮಣ ಸೇರಿಗಾರ ಅವರನ್ನು ಕಟೀಲಿನ ಆನುವಂಶಿಕ ಅರ್ಚಕ ವೇ.ಮೂ. ಅನಂತ ಪದ್ಮನಾಭ ಆಸ್ರಣ್ಣ ಅವರು ಸಮ್ಮಾನಿಸಿದರು.
ಬಿರುವೆರ್ ಕಾಪು ಸೇವಾ ಟ್ರಸ್ಟ್ : ಜ್ಞಾನದೀವಿಗೆ ವಿದ್ಯಾರ್ಥಿವೇತನ ವಿತರಣೆ
Posted On: 21-02-2021 08:14PM
ಕಾಪು : ಸಮಾಜದಲ್ಲಿ ಜ್ಞಾನ ಸಂಪತ್ತನ್ನು ಹೊಂದಿರುವ ಪ್ರತಿಭೆಗಳಿಗೆ ಕೊರತೆಯಿಲ್ಲ. ಅವರ ಗುರುತಿಸುವಿಕೆ ಹಾಗೂ ಅವರಿಗೆ ಸರಿಯಾದ ಮಾರ್ಗದರ್ಶನವನ್ನು ಹೆತ್ತವರು,ಗುರುಗಳು ಮತ್ತು ಸಂಘ-ಸಂಸ್ಥೆಗಳು ಮಾಡಬೇಕಾಗಿದೆ. ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ, ಆಶಕ್ತರ ಪಾಲಿನ ಸೇವಾ ಸಂಸ್ಥೆಯಾಗಿ ದುಡಿಯುತ್ತಿರುವ ಬಿರುವೆರ್ ಕಾಪು ಸೇವಾ ಟ್ರಸ್ಟ್ ನ ಕಾರ್ಯ ಶ್ಲಾಘನೀಯ ಎಂದು ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ ಹೇಳಿದರು. ಅವರು ಬಿರುವೆರ್ ಕಾಪು ಸೇವಾ ಟ್ರಸ್ಟ್ ಆಶ್ರಯದಲ್ಲಿ ಕಾಪು ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ಜರಗಿದ ಕಾಪು ತಾಲೂಕಿನ ಪ್ರತಿಭಾವಂತ ಬಿಲ್ಲವ ಹಾಗೂ ಇತರ ಸಮಾಜದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ 2020-21ನೇ ಸಾಲಿನ ಜ್ಞಾನದೀವಿಗೆ ವಿದ್ಯಾರ್ಥಿವೇತನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಮುಂಡ್ಕೂರಿನ ವಿದ್ಯಾವರ್ಧಕ ವಿದ್ಯಾಸಂಸ್ಥೆಯಲ್ಲಿ ಉಪನ್ಯಾಸಕ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ ಸುದರ್ಶನ ವೈ.ಎಸ್ ರವರಿಗೆ ಬೀಳ್ಕೊಡುಗೆ
Posted On: 21-02-2021 08:04PM
ಕಾರ್ಕಳ ತಾಲೂಕು ಮುಂಡ್ಕೂರಿನ ವಿದ್ಯಾವರ್ಧಕ ಪದವಿಪೂರ್ವ ಕಾಲೇಜಿನಲ್ಲಿ ಮೂವತ್ತು ವರ್ಷ ಉಪನ್ಯಾಸಕರಾಗಿ,ಆರು ವರ್ಷ ಪ್ರಾಂಶುಪಾಲರಾಗಿ ಸೇವೆಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ ಸುದರ್ಶನ ವೈ.ಎಸ್.ಅವರನ್ನು ವಿದ್ಯಾವರ್ಧಕ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ , ವಿದ್ಯಾಸಂಸ್ಥೆಯ ಶಿಕ್ಷಕರು, ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿ ಸಂಘ ಸಂಯೋಜಿಸಿರುವ ಸಮಾರಂಭದಲ್ಲಿ ಸಮ್ಮಾನಿಸಿ ಬೀಳ್ಕೊಡಲಾಯಿತು .
ಸೀತಾ ನದಿಗೆ ವಿಷವಿಕ್ಕುವ ಸ್ಥಿತಿಗೆ ಅಂತ್ಯ ಯಾವಾಗ ...?
Posted On: 19-02-2021 10:23PM
ಬ್ರಹ್ಮಾವರ ಮಾಬುಕಳ ಸೀತಾನದಿ ಸೇತುವೆಯ ಎರಡೂ ಬದಿಯಲ್ಲಿ ಕಸದ ರಾಶಿಯೇ ನಿಮಾ೯ಣವಾಗಿದೆ. ಈ ಕಸವು ಸಾವಿರಾರು ಜನರಿಗೆ ನೀರು ಒದಗಿಸುವ ಸೀತಾ ನದಿಗೆ ಸೇರುತ್ತಿರುವುದು ಅತ್ಯಂತ ದುಃಖದ ವಿಚಾರ.ಸಾವ೯ಜಿಕರು ಎಲ್ಲೆoದಲ್ಲಿ ಪ್ಯಾಸ್ಟಿಕ್ ಸಹಿತ ಕಸಬಿಸಾಡುವ ಸ್ಥಿತಿಯಿಂದ ಜಲಚರಗಳು ಸೇರಿದಂತೆ ಸಾವಿರಾರು ಜನರಿಗೆ ವಿಷ ಸೇರುತ್ತಿದೆ.
ಉಡುಪಿ : ದೊಡ್ಡಣ್ಣಗುಡ್ಡೆ ಅಪೂರ್ವ ಕಾಂಪ್ಲೆಕ್ಸ್ ಎದುರುಗಡೆ ರಾಯಲ್ ಫಿಶ್ ಸೆಂಟರ್ ಶುಭಾರಂಭ
Posted On: 19-02-2021 03:06PM
ಉಡುಪಿ : ದೊಡ್ಡಣ್ಣಗುಡ್ಡೆ ಅಪೂರ್ವ ಕಾಂಪ್ಲೆಕ್ಸ್ ಎದುರುಗಡೆ ರಾಯಲ್ ಫಿಶ್ ಸೆಂಟರ್ ಶುಭಾರಂಭಗೊಂಡಿತು.
ಕುಲಶೇಖರ : ಶ್ರೀ ವೀರನಾರಾಯಣ ದೇವಸ್ಥಾನದ ಜೀರ್ಣೋದ್ಧಾರದ, ಬಾಲಾಲಯ ನಿರ್ಮಾಣದ ಭೂಮಿ ಪೂಜೆ
Posted On: 17-02-2021 07:10PM
ಮಂಗಳೂರು : ದ. ಕ. ಜಿಲ್ಲಾ ಮೂಲ್ಯರ ಯಾನೇ ಕುಲಾಲರ ಮಾತೃ ಸಂಘದ ಆಡಳಿತಕೊಳಪಟ್ಟ ಕುಲಶೇಖರ ಶ್ರೀವೀರನಾರಾಯಣ ದೇವಸ್ಥಾನ ಇದರ ಜೀರ್ಣೋದ್ದಾರ ಕೆಲಸ ಕಾರ್ಯಗಳು ಅತ್ಯಂತ ಸುಲಲಿತವಾಗಿ ನಡೆಯುತ್ತಿದ್ದು, ಫೆಬ್ರವರಿ 17, ಬುಧವಾರ ಬೆಳಗ್ಗೆ ಬಾಲಾಲಯ ನಿರ್ಮಾಣದ ಸಲುವಾಗಿ ಭೂಮಿ ಪೂಜೆ ನಡೆಯಿತು.
ಶಿರ್ವ : ಯೋಗಶಕ್ತ ರೋಗ ಮುಕ್ತ ಜೀವನ ಅಗತ್ಯ
Posted On: 16-02-2021 02:13PM
ಶಿರ್ವ:ಮಾನವ ಶರೀರವೇ ನಿಜವಾದ ಯೋಗ.ಅದನ್ನು ಸಮರ್ಪಕವಾದ ರೀತಿಯಲ್ಲಿ ಕಾಪಾಡಿಕೊಳ್ಳಬೇಕಾದುದು ಅತೀ ಅಗತ್ಯ.ತನ್ನ ಜೀವನ ಶೈಲಿಯಲ್ಲಿ ಉತ್ತಮ ಆಹಾರದೊಂದಿಗೆ ವ್ಯಾಯಾಮವನ್ನು ದಿನ ನಿತ್ಯ ರೂಢಿಸಿಕೊಂಡರೆ ದೇಹ ಸ್ವಸ್ಥವಾಗಿ ರೋಗದಿಂದ ಮುಕ್ತವಾಗಲು ಸಾಧ್ಯವೆಂದು ಸಂಪನ್ಮೂಲ ವ್ಯಕ್ತಿಯಾಗಿ ಬಂದ ಶ್ರೀರಂಜಿತ್ ಪುನರೂರು ಸಂತಮೇರಿ ಕಾಲೇಜಿನಲ್ಲಿ ಏರ್ಪಡಿಸಿದ ಮೂರು ದಿನದ ಯೋಗ ತರಬೇತಿ ಕಾರ್ಯಕ್ರಮದಲ್ಲಿ ನುಡಿದರು. ಶಿರ್ವ ಸಂತ ಮೇರಿ ಕಾಲೇಜಿನಲ್ಲಿ ದೈಹಿಕ ಸಾಮಥ್ರ್ಯ ಮತ್ತು ಯೋಗ ಕೋಶ-ಎನ್.ಸಿ.ಸಿ.ಯ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಯೋಗ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಉತ್ತಮ ಸಮಾಜ ಸೇವಕ ರಾಜ್ಯ ಪ್ರಶಸ್ತಿ ಪಡೇದ ಶ್ರೀ ಪತಂಜಲಿ ಯೋಗ ಗುರುಗಳಾದ ಅನಂತರಾಯ್ ಶೆಣೈರವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು.
ಉಡುಪಿ: ಪುಲ್ವಾಮ ಹುತಾತ್ಮರ ಸ್ಮರಣಾರ್ಥ ಯೋಧ ನಮನ
Posted On: 14-02-2021 09:43PM
ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ವೀರ ಸೈನಿಕರು ರಾಷ್ಟ್ರಕ್ಕಾಗಿ ಮಾಡಿದ ತ್ಯಾಗ ಬಲಿದಾನವನ್ನು ಸ್ಮರಿಸುವ ನಿಟ್ಟಿನಲ್ಲಿ ಸ್ವಚ್ಛ ಭಾರತ್ ಫ್ರೆಂಡ್ಸ್, ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಉಡುಪಿ, ಉಡುಪ ರತ್ನ ಪ್ರತಿಷ್ಠಾನ ಸಂಯುಕ್ತ ಆಶ್ರಯದಲ್ಲಿ ಅಜ್ಜರಕಾಡಿನ ಹುತಾತ್ಮ ಸೈನಿಕ ಯುದ್ಧ ಸ್ಮಾರಕದಲ್ಲಿ ಭಾನುವಾರ ಸಂಜೆ ಯೋಧ ನಮನ ಕಾರ್ಯಕ್ರಮ ನಡೆಯಿತು.
