Updated News From Kaup
ಶ್ರೀ ಚೌಡೇಶ್ವರಿ ದೇವಿ ದೇವಸ್ಥಾನ ಕಟಪಾಡಿ ನವರಾತ್ರಿ ಪೂಜಾ ಕಾರ್ಯಕ್ರಮ

Posted On: 21-10-2020 03:58PM
ಕಟಪಾಡಿಯ ಏಣಗುಡ್ಡೆಯ ದುರ್ಗಾನಗರ ಶ್ರೀ ಚೌಡೇಶ್ವರಿ ದೇವಿಯ ಸನ್ನಿಧಾನದಲ್ಲಿ ನವರಾತ್ರಿ ಪ್ರಯುಕ್ತ 17-10-2020ರಿಂದ 25-10-2020ರವರೆಗೆ ಪ್ರತಿದಿನ ಸಂಜೆ 6ರಿಂದ ಭಜನಾ ಕಾರ್ಯಕ್ರಮ ಮತ್ತು 7: 30ಕ್ಕೆ ಮಹಾಪೂಜೆ ನಡೆಯಲಿದೆ.
17 ರಂದು ಬೆಳಗ್ಗೆ ದೇವತಾ ಪ್ರಾರ್ಥನೆ, ಪುಣ್ಯಾಹ, ಪಂಚಗವ್ಯ, ಕಲಶ ಸ್ಥಾಪನೆ, ಮಹಾಪೂಜೆ. 24 ರಂದು ಬೆಳಿಗ್ಗೆ ಪುಣ್ಯಾಹವಾಚನ, ಮಧ್ಯಾಹ್ನ 12ಕ್ಕೆ ಪೂರ್ಣಾಹುತಿ, ಮಹಾಪೂಜೆ, ಶ್ರೀ ಚಂಡಿಕಾ ಹೋಮ, ಅನ್ನಸಂತರ್ಪಣೆ ಮತ್ತು 2: 30ಕ್ಕೆ ದೇವಿಯ ದರ್ಶನ ಸೇವೆ ನಡೆಯಲಿದ್ದು, ಅಂದು ಮಧ್ಯಾಹ್ನ 12 ರಿಂದ ಶ್ರೀ ಚೌಡೇಶ್ವರಿ ದೇವಿ ಕಲಾ ಬಳಗದವರಿಂದ ಭಕ್ತಿಗಾನಂಜಲಿ ನಡೆಯಲಿದೆ ಎಂದು ತಿಳಿಸಿದ್ದಾರೆ.
ಎಲ್ಲೂರಿನಲ್ಲಿ ಲಲಿತ ಪಂಚಮಿ ಪ್ರಯುಕ್ತ ಚಂಡಿಕಾಯಾಗ

Posted On: 21-10-2020 03:02PM
ಕಾಪು.20, ಅಕ್ಟೋಬರ್ : ಕಾಶಿ ಸಮಾನವಾದ ಎಲ್ಲೂರು ಶ್ರೀ ವಿಶ್ವೇಶ್ವರ ದೇವಸ್ಥಾನದಲ್ಲಿ ನವರಾತ್ರಿಯ ವಿಶೇಷ ಸಂದರ್ಭದಲ್ಲಿ ಲಲಿತ ಪಂಚಮಿ ಪ್ರಯುಕ್ತ ಅನ್ನ ಪೂರ್ಣೇಶ್ವರಿ ದೇವರಿಗೆ ಚಂಡಿಕಾ ಯಾಗ ಜರಗಿತು. ಈ ಸಂದರ್ಭದಲ್ಲಿ ಅರ್ಚಕರು, ದೇವಸ್ಥಾನದ ಆಡಳಿತ ಮಂಡಳಿ ಮತ್ತು ಭಕ್ತರು ಉಪಸ್ಥಿತರಿದ್ದರು.
ಭಾರತ್ ಬ್ಯಾಂಕ್ ಮಾಜಿ ಅಧ್ಯಕ್ಷ, ಬಿಲ್ಲವ ಮುಖಂಡ ಜಯ ಸಿ ಸುವರ್ಣ ಇನ್ನಿಲ್ಲ

Posted On: 21-10-2020 11:25AM
ಶ್ರೀ ಜಯ ಸಿ ಸುವರ್ಣ (ಭಾರತ್ ಬ್ಯಾಂಕಿನ ಮಾಜಿ ಅಧ್ಯಕ್ಷರು) ಅವರ ಸ್ವರ್ಗೀಯ ವಾಸಸ್ಥಾನಕ್ಕೆ ತೆರಳಿದ್ದಾರೆ ಎಂದು ತಿಳಿಸಲು ತುಂಬಾ ದುಃಖವಾಗಿದೆ.
ಮುಂಬಯಿಯಲ್ಲಿ ಹೊಟೇಲ್ ಉದ್ಯಮಿಯಾಗಿದ್ದ ಜಯ ಸಿ.ಸುವರ್ಣ ಅವರು ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡು, ಮುಂಬಯಿ ಭಾರತ್ ಕೋ-ಅಪರೇಟಿವ್ ಬ್ಯಾಂಕ್ ನ ಅಧ್ಯಕ್ಷರಾಗಿ, ಅಭಿವೃದ್ಧಿಯ ರೂವಾರಿಯಾಗಿದ್ದರು. ಬಿಲ್ಲವ ಭವನ ಮುಂಬಯಿ ಮತ್ತು ಮಹಾಮಂಡಲ ಭವನ ಮುಲ್ಕಿ ಇದರ ನಿರ್ಮಾತೃ ಆಗಿದ್ದರು. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಅವರ ಅಂತ್ಯಕ್ರಿಯೆ ಇಂದು (ಬುಧವಾರ) ಮಧ್ಯಾಹ್ನ 3.00 ರ ಸುಮಾರಿಗೆ ನಡೆಯಲಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಮೃತರು ಪತ್ನಿ, ನಾಲ್ವರು ಪುತ್ರರು ಮತ್ತು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
ಕಾಪು ವೆಂಕಟರಮಣ ದೇವಸ್ಥಾನಕ್ಕೆ ನೂತನ ರಜತ ಮುಖ ಮತ್ತು ಬೆಳ್ಳಿಯ ಆರತಿ ಸಮರ್ಪಣೆ

Posted On: 19-10-2020 04:37PM
ಶ್ರೀ ವೆಂಕಟರಮಣ ದೇವಸ್ಥಾನ, ಕಾಪು ಇಲ್ಲಿ ನವರಾತ್ರಿ ಸಂದರ್ಭದಲ್ಲಿ ನಿತ್ಯ ಜರಗುವ ದುರ್ಗಾ ನಮಸ್ಕಾರ ಪೂಜೆಗೆ ಶ್ರೀಮತಿ ಪ್ರತಿಮಾ ಪ್ರವೀಣ್ ಶೆಣೈ (USA) ಇವರು ನೂತನ ಬೆಳ್ಳಿಯ ಆರತಿ ಹಾಗೂ ಶ್ರೀ ಲಕ್ಷ್ಮೀನಾರಾಯಣ ಭಟ್ ಮತ್ತು ಕುಟುಂಬಸ್ಥರು ನೂತನ ದೇವಿಯ ರಜತ ಮುಖವನ್ನು ಸಮರ್ಪಿಸಿದರು.
ಕಾಪು ಬೀಚ್ ನಲ್ಲಿ ಯುವಕರಿಬ್ಬರು ನೀರು ಪಾಲು

Posted On: 18-10-2020 11:53PM
ಕಾಪು, ಅ. 18 : ಬೆಂಗಳೂರಿನ ಯುವಕರಿಬ್ಬರು ರವಿವಾರ ಸಂಜೆ ಕಾಪು ಬೀಚ್ ನಲ್ಲಿ ನೀರು ಪಾಲಾಗಿದ್ದಾರೆ.
ಕಾರ್ತಿಕ್ ಮತ್ತು ರೂಪೇಶ್ ಎಂಬವರು ನೀರು ಪಾಲಾಗಿದ್ದು, ರೂಪೇಶ್ ಎಂಬಾತನ ಶವ ಮೇಲಕ್ಕೆತ್ತಲಾಗಿದೆ.
ಬೆಂಗಳೂರಿನಿಂದ ಬಂದ 5 ಮಂದಿ ಯುವಕರ ತಂಡ ರವಿವಾರ ಸಂಜೆ ಕಾಪು ಬೀಚ್ ನಲ್ಲಿ ಆಟವಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ನೀರು ಪಾಲಾಗುತ್ತಿದ್ದ ರೂಪೇಶ್ ನನ್ನು ಬೀಚ್ ನಿರ್ವಾಹಕ ಪ್ರಶಾಂತ್ ಕರ್ಕೇರ, ವಿನೀತ್, ಪ್ರಥಮ್, ದಯೋದರ ಪುತ್ರನ್, ಚಂದ್ರಹಾಸ ಜೊತೆಗೂಡಿ ರಕ್ಷಿಸುವ ಪ್ರಯತ್ನ ಮಾಡಿದ್ದರು.

ಮೇಲಕ್ಕೆ ತಂದು ಆಕ್ಸಿಜನ್ ನೀಡಲಾಯಿತಾದರೂ ಅಷ್ಟರಲ್ಲೇ ಮೃತಪಟ್ಟಿದ್ದನು. ನೀರಿನಲ್ಲಿ ಮುಳುಗಿದ ಯುವಕನಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ತನಿಖೆ ಮುಂದುವರಿಸಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.
ಇನ್ನಂಜೆ ಕುಜುಂಬ ಮನೆಯ ಗುಲಾಬಿ ಎಚ್.ಪೂಜಾರಿ ಇನ್ನಿಲ್ಲ

Posted On: 18-10-2020 04:16PM
ಕಾಪು ತಾಲೂಕಿನ ಇನ್ನಂಜೆ ಗ್ರಾಮದ ಗುಲಾಬಿ ಪೂಜಾರಿ (66) ಅವರು ಅಕ್ಟೋಬರ್ 17 ರಂದು ಅನಾರೋಗ್ಯದ ಕಾರಣ ನಿಧಾನ ಹೊಂದಿದರು.
ಇನ್ನಂಜೆ ಕುಜುಂಬ ಮನೆಯವರಾದ ಗುಲಾಬಿ ಅವರು ಪತಿ ಹಿರಿಯಣ್ಣ ಪೂಜಾರಿ, 3 ಪುತ್ರರನ್ನು ಹಾಗೂ ಒಬ್ಬಳು ಪುತ್ರಿಯನ್ನು ಮತ್ತು ಅಪಾರ ಬಂಧುಗಳನ್ನು ಅಗಲಿದ್ದಾರೆ.
ಮೃತರ ಅಂತ್ಯ ಕ್ರಿಯೆಯು ಆ.18 ರಂದು ಬೆಳ್ಳಿಗೆ ನೆರವೇರಿದ್ದು,ಕುಟುಂಬಸ್ಥರು,ಊರ ಜನರು ಉಪಸ್ಥಿತರಿದ್ದರು.
ಸ್ವರ ಮನ್ಮಥನ ಕಂಠದಲ್ಲಿ ಮೂಡಿಬಂದ "ಶಿರ್ವದ ತುಡರ್" ತುಳು ಆಲ್ಬಮ್ ಸಾಂಗ್

Posted On: 17-10-2020 04:53PM
ಶಿರ್ವ ಕ್ರಿಯೇಶನ್ಸ್ ಅರ್ಪಿಸುವ "ಶಿರ್ವದ ತುಡರ್" ನ್ಯಾರ್ಮದ ಶ್ರೀ ಧರ್ಮ ಜಾರಂದಾಯೆ ಅನ್ನುವ ತುಳು ಆಲ್ಬಮ್ ಸಾಂಗ್.
ವಿ ಸುಬ್ಬಯ್ಯ ಹೆಗ್ಡೆ ನ್ಯಾರ್ಮ ಇವರ ಸಲಹೆ ಸಹಕಾರ ದೊಂದಿಗೆ, ಪ್ರಸಾದ್ ಬಂಗೇರ ಇನ್ನಂಜೆ ನಿರ್ಮಾಣದ, ತುಳುನಾಡ ಕಲಶ ಬಿರುದಾಂಕಿತ ಶ್ರೀ ಜಿ, ಎಸ್, ಗುರುಪುರ ಇವರ ಸಾಹಿತ್ಯದಲ್ಲಿ, ಸ್ವರ ಮನ್ಮಥ ಬಿರುದಾಂಕಿತ ವಿ.ಜೆ ಮಧುರಾಜ್ ಗುರುಪುರ ಇವರ ಕಂಠದಲ್ಲಿ ಅದ್ಭುತವಾಗಿ ಮೂಡಿ ಬಂದಿದ್ದು.
ಶಿರ್ವ ನ್ಯಾರ್ಮ ಧರ್ಮ ಜಾರಂದಾಯನ ಭಕ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ
ವಿಡಿಯೋ ವೀಕ್ಷಿಸಲು ಇಲ್ಲಿ ಒತ್ತಿರಿ
ಕ್ಲಿಕ್ ಮಾಡಿ
ಸಾರ್ವಜನಿಕರಿಗೆ ತಲೆನೋವಾಗಿದ್ದ ಮಾನಸಿಕ ಅಸ್ವಸ್ಥನ ಚಿಕಿತ್ಸೆಗೆ ನೆರವಾದ ಕುಂದಾಪುರ ಪಿ.ಎಸ್.ಐ ಸದಾಶಿವ ಆರ್ ಗವರೋಜಿ

Posted On: 17-10-2020 10:35AM
ಕಳೆದ 2 ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಬಿಹಾರ ಮೂಲದ ಮಾನಸಿಕ ಅಸ್ವಸ್ಥ ಯುವಕನೊರ್ವ ಅರೆ ನಗ್ನ ಅವಸ್ಥೆಯಲ್ಲಿ ಕುಂದಾಪುರದ ಬೀದಿಯಲ್ಲಿ ತನ್ನ ಭಯಾನಕ ವರ್ತನೆಯಿಂದ ಸಾರ್ವಜನಿಕ ವಲಯದಲ್ಲಿ ಆಂತಕ ಸ್ರಷ್ಟಿಸಿದ್ದ ಸುದ್ದಿ ವಾಟ್ಸಪ್ಪ್ ನಲ್ಲಿ ಹರಿದಾಡಿತ್ತು.

ವೇಗವಾಗಿ ನಡೆಯುತ್ತಾ ಸಾರ್ವಜನಿಕರ ಮೇಲೆ ಮುಗಿ ಬೀಳುವ ಈತನಿಂದ ಈಗಾಗಲೇ ಹಲವರು ಮಾರಕ ಹಲ್ಲೆಗೊಳಗಾಗಿದ್ದಾರೆ. ಅಲ್ಲದೇ ಮಹಿಳೆಯರ ಬೆಂಬತ್ತುವ ಈತ ನೇರವಾಗಿ ಅವರ ದೇಹದ ಮೇಲೆ ಕೈಹಾಕುತ್ತಿರುವ ಘಟನೆಗಳು ನಡೆದಿದ್ದು ವಿದ್ಯಾರ್ಥಿನಿಗಳ ಸಹಿತ ಇನ್ನಿತರ ಮಹಿಳೆಯರು ಈತನ ವಿಕಾರತೆಗೆ ಸಿಲುಕಿದ್ದಾರೆನ್ನಲಾಗಿದೆ. ಸಂಬಂಧ ಪಟ್ಟ ಇಲಾಖೆಗಳು ಕೂಡಲೇ ಈತನ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ ಎಂದು ಮ್ಯಾನರ್ ವಾಟ್ಸಪ್ಪ್ ಗ್ರೂಪ್ ನಲ್ಲಿ ಹಾಕಿದ್ದು ಇದಕ್ಕೆ ಆದಷ್ಟು ಬೇಗ ಸಾಮಾಜಿಕ ಕಾರ್ಯಕರ್ತರು ಸ್ಪಂದಿಸಬೇಕು ಎಂದು ರವಿ ಮ್ಯಾನರ್ ವಿನಂತಿಸಿದ್ದರು.
ಈ ಸುದ್ದಿ ತಿಳಿದ ಕೂಡಲೇ ಸಾಮಾಜಿಕ ಕಾರ್ಯಕರ್ತ ಮತ್ತು ಕುಂದಾಪರ ಮಿತ್ರ ವರದಿಗಾರ ಕಿರಣ್ ಪೂಜಾರಿಯವರು ಕುಂದಾಪುರ ಪಿ.ಎಸ್.ಐ ಸದಾಶಿವ ಆರ್ ಗವರೋಜಿ ಅವರ ಗಮನಕ್ಕೆ ತಂದು, ದಿನಾಂಕ 15/10/2020ರಂದು ಬೆಳಿಗ್ಗೆ ಆ ವ್ಯಕ್ತಿಯ ಚಲನವಲನ್ನು ಗಮನಿಸಿದ್ದ ಕಿರಣ್ ರವರು ಕೂಡಲೇ ಪಿ.ಎಸ್.ಐ ಸದಾಶಿವ ಆರ್ ಗವರೋಜಿರವರಿಗೆ ಮಾಹಿತಿ ನೀಡಿ, ಕುಂದಾಪುರ ಪೊಲೀಸ್ ಸುಧಾಕರ್, ರಾಘವೇಂದ್ರ, ಆನಂದ ಹಾಗೂ ಸ್ಥಳೀಯ ಪುರಸಭೆ ಸದಸ್ಯರಾದ ಪ್ರಭಾಕರ ಮತ್ತು ಹುಸೈನ್ ಹೈಕಾಡಿ ಅವರ ನೆರವಿನೊಂದಿಗೆ ಮಾನಸಿಕ ಅಸ್ವಸ್ಥನ ಮನವೊಲಿಸಿ ಅವರನ್ನು ಕೋಟ ನಾಗರಾಜ್ ರವರ ಆಂಬುಲೆನ್ಸ್ ನಲ್ಲಿ ಉಡುಪಿ ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ಚಿಕ್ಸಿತೆಗೆ ಕೊಂಡೊಯ್ಯಲಾಗಿದೆ. ಇದರಿಂದ ಜನತೆಗೆ ನೆಮ್ಮದಿ ದೊರೆತ್ತಿದ್ದು, ಕುಂದಾಪುರ ಪೊಲೀಸರ ಮಾನವೀಯ ಕಾರ್ಯಕ್ಕೆ ಕುಂದಾಪುರ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಲಯದ ಆದೇಶ ಪಡೆದು ಧಾರವಾಡ ನಿಮ್ಹಾನ್ಸ್ ಆಸ್ಪತ್ರೆಗೆ ಕೋಡಿಯ NMA ಆಸ್ಪತ್ರೆಯವರ ಹಾಗೂ ಜೆಸಿಐ ಕುಂದಾಪುರ ಸಿಟಿಯ ಸ್ಥಾಪಕ ಅಧ್ಯಕ್ಷ ಹುಸೈನ್ ಹೈಕಾಡಿ, nmaಯ ಶಾಬಾನ್ ಹಂಗಳೂರ್, nmaಯ ಅಧ್ಯಕ್ಷ ರಫೀಕ್ ಬಿಎಸ್ಎಫ್ ಇವರ ಸಹಕಾರದಿಂದ ಆಂಬುಲೆನ್ಸ್ ಮೂಲಕ ಸಿಬ್ಬಂದಿವರ ಭದ್ರತೆಯಲ್ಲಿ ಚಿಕಿತ್ಸೆಗೆ ಕಳುಹಿಸಲಾಗಿದೆ.
ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಗೆ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಭೇಟಿ

Posted On: 16-10-2020 12:43PM
ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ (ನಿ.) ಪಡುಬಿದ್ರಿಗೆ ಮಾಜಿ ಸಂಸದ ಹಾಗು ವಿಧಾನ ಪರಿಷತ್ ಸದಸ್ಯರಾದ ಬಿ.ಕೆ. ಹರಿಪ್ರಸಾದ್ ಭೇಟಿನೀಡಿದರು. ಈ ಸಂದರ್ಭ ಮಾತನಾಡಿದ ಅವರು ಪಡುಬಿದ್ರಿ ಸೊಸೈಟಿಯ ಕಾರ್ಯಚಟುವಟಿಕೆಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಕೊರೊನಾದಂತಹ ಕ್ಲಿಷ್ಟಕರ ಸಂದರ್ಭದಲ್ಲಿ ಸಹಕಾರಿಸಂಸ್ಥೆಗಳು ಜನರ ಜೀವನ ಮಟ್ಟವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭ ಸೊಸೈಟಿಯ ಅಧ್ಯಕ್ಷ ರಾದ ವೈ. ಸುಧೀರ್ ಕುಮಾರ್, ಸೊಸೈಟಿಯ ನಿರ್ದೇಶಕರಾದ ಶಿವರಾಮ ಎನ್. ಶೆಟ್ಟಿ , ರಾಜಾರಾಮ ರಾವ್, ಮಾಧವ ಆಚಾರ್ಯ, ಯಶವಂತ , ಶ್ರೀಮತಿ ಸುಚರಿತಾ ಎಲ್ ಅಮೀನ್, ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿಶ್ಮಿತ ಪಿ.ಎಚ್ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಪಡುಬಿದ್ರಿ ರೋಟರಿ ಮತ್ತು ಇನ್ನರ್ ವೀಲ್ ಕ್ಲಬ್ ಪ್ರತಿಭಾ ಸಮ್ಮಿಲನ-2020 ಸಾಂಸ್ಕೃತಿಕ ಸ್ಪರ್ಧಾ ಸಮಾರೋಪ ಸಮಾರಂಭ

Posted On: 15-10-2020 09:56PM
ಪಡುಬಿದ್ರಿ ರೋಟರಿ ಕ್ಲಬ್ ಹಾಗು ಇನ್ನರ್ ವೀಲ್ ಕ್ಲಬ್ ವತಿಯಿಂದ ಪ್ರತಿಭಾ ಸಮ್ಮಿಲನ-2020 ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ ವನ್ನು ಪಡುಬಿದ್ರಿ ಸಿ.ಎ ಬ್ಯಾಂಕ್ ಅಧ್ಯಕ್ಷ ವೈ.ಸುಧೀರ್ ಕುಮಾರ್ ಉದ್ಘಾಟಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ನಮ್ಮ ಜೀವನದಲ್ಲಿರುವ ಒತ್ತಡ ಕಡಿಮೆಯಾಗುತ್ತದೆ. ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಕಲೆ ಎಂಬುದು ಯಾವತ್ತೂ ನಾಶವಾಗದ ಸಂಪತ್ತು. ಕಲೆಯನ್ನು ಪ್ರಸ್ತುತ ಪಡಿಸಲು ಇಂತಹ ವೇದಿಕೆಗಳನ್ನು ಸದುಪಯೋಗ ಪಡೆದುಕೂಳ್ಳಬೇಕು. ಪ್ರತಿಭೆಯನ್ನು ಗುರುತಿಸುವ ಕೆಲಸವನ್ನು ಮಾಡುತಿರುವ ರೋಟರಿ ಕ್ಲಬ್ ನ ಕೆಲಸ ಶ್ಲಾಘನೀಯ ಎಂದರು. ಪಡುಬಿದ್ರಿ ರೋಟರಿ ಅಧ್ಯಕ್ಷ ಕೇಶವ್ ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು.ಈ ಸಂದರ್ಭದಲ್ಲಿ ಇನ್ನರ್ ವೀಲ್ ಕ್ಲಬ್ ಅಧ್ಯಕೆ ಆಶಾ ಸುಕುಮಾರ್, ಯುವ ಉದ್ಯಮಿ ಸುಧೀರ್ ಕರ್ಕೇರ ಹೆಜಮಾಡಿ ,ತುಳು ಚಲನಚಿತ್ರ ನಟಿ ರಂಜಿತಾ ಶೇಟ್, ಸಂಗೀತ ಕಲಾವಿದ ಚಂದ್ರಕಾಂತ್ ಆಚಾರ್ಯ ಉಪಸ್ಥಿತರಿದ್ದರು.

ಸನ್ಮಾನ :ತುಳು ಚಲನಚಿತ್ರನಟ ಅರವಿಂದ್ ಬೋಳಾರ್ ಹಾಗು ದಾಯ್ಜಿವಲ್ಡ್ ಸುದ್ದಿ ಸಂಪಾದಕ ಹಾಗು ನಿರೂಪಕ ಚೇತನ್ ಶೆಟ್ಟಿ ಮಂಗಳೂರು ಹಾಗು ರೋಟರಿ ಕ್ಲಬ್ ನ ಪೂರ್ವ ಅಧ್ಯಕ್ಷರು ಗಳಾದ ವೈ. ಸುಧೀರ್ ಕುಮಾರ್, ರಮೀಜ್ ಹುಸೇನ್, ಅಬ್ದುಲ್ ಹಮೀದ್ , ಗಣೇಶ್ ಅಚಾರ್ಯ ಎರ್ಮಾಳ್ , ರಿಯಾಜ್ ಮುದರಂಗಡಿ ಹಾಗು ಪೂರ್ವ ಕಾರ್ಯದರ್ಶಿಗಳಾದ ಬಿ.ಯಸ್ ಅಚಾರ್ಯ, ಸುಧಾಕರ್ ಕೆ. ಸಂತೋಷ್ ಪಡುಬಿದ್ರಿರವರನ್ನು ಸಾನ್ಮಾನಿಸಿ ಗೌರವಿಸಲಾಯಿತು.
ಸ್ಪರ್ಧಾ ವಿಜೇತರ ವಿವರ :- ಮಿಮಿಕ್ರಿ: ಪ್ರಥಮ- ಮಹಮ್ಮದ್ ಅತೀಫ್ , ದ್ವಿತೀಯ- ಬಿ.ಯಸ್ ಅಚಾರ್ಯ. ಏಕಪಾತ್ರಭಿನಯ : ಪ್ರಥಮ- ಯಶೋಧ ಪಡುಬಿದ್ರಿ. ದ್ವಿತೀಯ- ಬಿ.ಯಸ್ ಆಚಾರ್ಯ ,ಸಂಗೀತ ವೈಯಕ್ತಿಕ ವಿಭಾಗ: ಪ್ರಥಮ- ಸ್ವಾತಿ ಗಣೇಶ್ ದ್ವಿತೀಯ- ತೌಫೀಕ್ ಪಡುಬಿದ್ರಿ. ಸಂಗೀತ ಡ್ಯೂಯೆಟ್ ವಿಭಾಗ :-ಪ್ರಥಮ- ವೇಣುಗೋಪಾಲ ಶೆಟ್ಚಿ ಹಾಗು ಗುಣವತಿ, ದ್ವಿತೀಯ- ಮಹಮ್ಮದ್ ಅತೀಫ್ ಹಾಗು ಗೀತಾ ಅರುಣ್. ಸಂಗೀತ ಗುಂಪು ವಿಭಾಗ :- ಪ್ರಥಮ -ಇನ್ನರ್ ವೀಲ್ ಕ್ಲಬ್ ಪಡುಬಿದ್ರಿ.ದ್ವಿತೀಯ- ಬಿ.ಯಸ್ ಅಚಾರ್ಯ ತಂಡ. ನೃತ್ಯ ವೈಯಕ್ತಿಕ ವಿಭಾಗ :- ಪ್ರಥಮ -ಅದ್ವಿತ್ ಕುಮಾರ್, ದ್ವಿತೀಯ- ಶಿಲ್ಪಾಶ್ರೀ.ನೃತ್ಯ ಗಂಪು ವಿಭಾಗ:-ಪ್ರಥಮ -ಯಶೋಧ ತಂಡ. ದ್ವಿತೀಯ- ಇನ್ನರ್ ವೀಲ್ ತಂಡ. ಪ್ರಹಸನ:- ಪ್ರಥಮ -ಇನ್ನರ್ ವೀಲ್ ತಂಡ , ದ್ವಿತೀಯ :- ಬಿ.ಯಸ್ ಅಚಾರ್ಯ ತಂಡ. ಪ್ರತಿ ವಿಭಾಗದಲ್ಲಿ ವಿಜೇತರಿಗೆ ಪ್ರಥಮ , ದ್ವಿತೀಯ ಬಹುಮಾನ ನೀಡಿ ಗೌರವಿಸಲಾಯಿತು ಹಾಗು ಅತೀ ಹೆಚ್ಚು ಬಹುಮಾನ ಪಡೆದ ಯಶೋಧ ಮತ್ತು ತಂಡ "ಪ್ರತಿಭಾ ಸಮ್ಮಿಲನ -2020 " ರ ಚಾಂಪಿಯನ್ ಪ್ರಶಸ್ತಿ ಪಡೆದುಕೊಂಡರು.

ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆಯನ್ನು ರೋಟರಿ ಅಧ್ಯಕ್ಷ ಕೇಶವ್ ಸಾಲ್ಯಾನ್ ವಹಿಸಿದರು. ತುಳು ಚಲನಚಿತ್ರ ನಟ ಅರವಿಂದ್ ಬೋಳಾರ್, ದಾಯ್ಜಿವಲ್ಡ್ ಸುದ್ದಿ ಸಂಪಾದಕ ಹಾಗು ನಿರೂಪಕ ಚೇತನ್ ಶೆಟ್ಟಿ ಮಂಗಳೂರು , ಮಾಜಿ ತಾ.ಪಂ.ಸದಸ್ಯ ನವೀನ್ ಚಂದ್ರ ಶೆಟ್ಟಿ, ವಲಯ ಸಹಾಯಕ ಗವರ್ನರ್ ನವೀನ್ ಅಮೀನ್ ಶಂಕರ್ ಪುರ, ವಲಯ ಸಂಯೋಜಕ ರಮೀಜ್ ಹುಸೇನ್, ಪಡುಬಿದ್ರಿ ಯುತ್ ಫೌಂಡೇಶನ್ ಅಧ್ಯಕ್ಷ ಅಬ್ದುಲ್ ಹಮೀದ್ ಕಾರ್ಯಕ್ರಮದ ನಿರ್ದೇಶಕರಾದ ಗೀತಾ ಅರುಣ್ ಹಾಗು ಸಂತೋಷ್ ಪಡುಬಿದ್ರಿ, ಸುಧಾಕರ್ ಕೆ. ಉಪಸ್ಥಿತರಿದ್ದರು. ರೋಟರಿ ಕಾರ್ಯದರ್ಶಿ ಮಹಮ್ಮದ್ ನಿಯಾಜ್ ವಂದಿಸಿ . ಬಿ.ಯಸ್. ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.