Updated News From Kaup
ಪಡುಬಿದ್ರಿ : ಐ ಆ್ಯಮ್ ಸೇವಿಂಗ್ ಮೈ ಬೀಚ್ ಧ್ವಜಾರೋಹಣ
Posted On: 19 Sep 2020, 05:37 PM
ಪಡುಬಿದ್ರಿಯ ಬ್ಲೂ ಫ್ಲ್ಯಾಗ್ ಬೀಚಿನಲ್ಲಿ ಆಯೋಜಿಸಿದ್ದ ಐ ಆ್ಯಮ್ ಸೇವಿಂಗ್ ಮೈ ಬೀಚ್ ಕಾರ್ಯಕ್ರಮದ ಅಂಗವಾಗಿ ಕಾಪು ಶಾಸಕರಾದ ಲಾಲಾಜಿ ಆರ್. ಮೆಂಡನ್ ಧ್ವಜಾರೋಹಣ ಮಾಡಿದರು. ಈ ಸಂದರ್ಭ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್, ಉಡುಪಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಶೀಲಾ ಕೆ. ಶೆಟ್ಟಿ, ಜಿಲ್ಲಾ ಪಂಚಾಯತ್ ಸದಸ್ಯ ಶಶಿಕಾಂತ್ ಪಡುಬಿದ್ರಿ, ತಾಲುಕ್ ಪಂಚಾಯತ್ ನಿಕಟಪೂರ್ವಾಧ್ಯಕ್ಷೆ ನೀತಾ ಗುರುರಾಜ್, ಕಾಪು ತಹಶೀಲ್ದಾರ್ ಮಹಮ್ಮದ್ ಇಸಾಕ್, ಅಸೋಸಿಯೇಷನ್ ಆಫ್ ಕೋಸ್ಟಲ್ ಟೂರಿಸಂನ ಅಧ್ಯಕ್ಷ ಮನೋಹರ್ ಶೆಟ್ಟಿ, ಸುಕುಮಾರ್ ಶ್ರೀಯಾನ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ್ ನಾಯಕ್, ಬ್ಲೂ ಫ್ಲ್ಯಾಗ್ ಬೀಚಿನ ಪ್ರಬಂಧಕ ವಿಜಯ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ನವರಾತ್ರಿ ಅಮ್ಮನ ಆರಾಧನೆ
Posted On: 19 Sep 2020, 12:46 PM
'ಪಿತೃಪಕ್ಷ' - ಮಹಾಲಯ ಪಕ್ಷವು ಮಹಾಲಯ ಅಮಾವಾಸ್ಯೆಯೊಂದಿಗೆ ಮುಗಿದೊಡನೆ , ಶುದ್ಧ ಪಾಡ್ಯದಿಂದ "ಮಾತೃಪಕ್ಷ".
ಮಾತೃಪಕ್ಷವೇ 'ನವರಾತ್ರಿ'
ಇದೀಗ ಅಧಿಕ ಮಾಸದಲ್ಲಿ ಒದಗಿದ ನವರಾತ್ರಿ . ಈ ವರ್ಷ ಎರಡುಬಾರಿ ನವರಾತ್ರಿ ಆಚರಣೆಗೆ ಅವಕಾಶ.
ಆದರೆ ಭಾರತೀಯರಾದ ನಮಗೆ ಹೇಗೆ ಕೋಟ್ಯಂತರ ದೇವಾನುದೇವತೆಗಳನ್ನು ಗೊಂದಲಗಳಿಲ್ಲದೆ ಆರಾಧಿಸುವ ಮನಃಸ್ಥಿತಿ ಇದೆಯೋ ಹಾಗೆಯೇ ಪರ್ವವೊಂದು ಎರಡು ಬಾರಿ ಸನ್ನಿಹಿತವಾದರೂ ದೇವರ ಉಪಾಸನೆಗೆ ಪ್ರಾಪ್ತಿಯಾದ ಹೆಚ್ಚುವರಿ ಅವಕಾಶ ಎಂದು ತಿಳಿಯುವವರು .ಇದು ಭಾರತೀಯ ತತ್ತ್ವಜ್ಞಾನ.
ಪ್ರಸಿದ್ಧ ದುರ್ಗಾಲಯಗಳಲ್ಲಿ ಕೆಲವೆಡೆ ವಿಜೃಂಭಣೆಯಿಂದ ,ಇನ್ನು ಹಲವೆಡೆ ಪೂಜಾದಿಗಳಿಗೆ ಸೀಮಿತವಾಗಿ 'ಅಧಿಕ ನವರಾತ್ರಿ'ಯೂ ಆಚರಿಸಲ್ಪಡುತ್ತಿದೆ.
'ನವರಾತ್ರಿ' ರಮೋತ್ಸವ . "ರಮಾ" ಅಂದರೆ ಲಕ್ಷ್ಮೀ ,ಶೋಭೆ , ಸಮೃದ್ಧಿ ಎಂಬುದು ಅರ್ಥ .ಪ್ರಕೃತಿ ಕೃಷಿ - ಬೆಳೆಯ ಅತಿಶಯತೆಯಿಂದ , ಫಲ ಸಮೃದ್ಧಿಯಿಂದ ತುಂಬಿ ತುಳುಕುವ ಪರ್ವಕಾಲ . ಇದು ಲಕ್ಷ್ಮೀ ,ಸಂಪತ್ತಿಗೆ ಕಾರಣವಾಗಬಹುದಾದ ಪರಿಸರವಲ್ಲವೇ ? ಇದೇ ಅಲ್ಲವೇ ಸಂಭ್ರಮದ ಸುಮುಹೂರ್ತ.
ಒಂಬತ್ತು ದಿನಗಳ ಉತ್ಸವ ,ಹತ್ತನೇ ದಿನದ ಸಮಾರೋಪ ಅವಭೃತ .ಒಟ್ಟು ಹತ್ತು ದಿನಗಳ ಈ ಸಂದರ್ಭ ದಶ + ಆಹರಾ = 'ದಸರಾ' ಎಂದೇ ಪ್ರಸಿದ್ಧ , ವಿಜಯದಶಮಿ ಎಂದೇ ಆಚರಣೆ .
ಒಂದು ವರ್ಷದಲ್ಲಿ ನಾಲ್ಕು ನವರಾತ್ರಿಗಳು ಬರುತ್ತವೆ .ವಸಂತ ಋತು , ಗ್ರೀಷ್ಮ ಋತು ,ಶರದೃತು ,ಹೇಮಂತ ಋತುಗಳಲ್ಲಿ ನವರಾತ್ರಿ ನೆರವೇರುತ್ತಿತ್ತು .ಈ ಋತುಗಳೆಂದರೆ ಪ್ರಕೃತಿಯಲ್ಲಿ ಸಂಭವಿಸುವ ಹವಾಮಾನದ ಬದಲಾವಣೆಗಳನ್ಮು ಸೂಚಿಸುತ್ತಾ ಅನುಕ್ರಮವಾಗಿ ಮರಗಿಡಗಳು ಹೂ ಬಿಡುವ , ಮಳೆಯ ಆರಂಭ ಮತ್ತು ಬೆಳೆಬೆಳೆದು ಪೊಲಿ - ಸಮೃದ್ಧಿಯು ಪ್ರಕೃತಿಯಲ್ಲಿ ದರ್ಶನವಾಗುವ ಕಾಲಗಳಾಗಿವೆ.
ಹೀಗೆ ಪ್ರಕೃತಿಯೊಂದಿಗೆ ಸಂವಾದಿಗಳಾಗುತ್ತಾ , ಪ್ರಕೃತಿಯ ಸ್ಥಿತ್ಯಂತರಗಳನ್ನು ಗಮನಿಸುತ್ತಾ ಬದುಕು ಕಟ್ಟಿದ ಮಾನವ. ಆತನಿಗೆ ಇಂತಹ ಸಂದರ್ಭಗಳೇ ಆಚರಣೆಗಳಾದುವು ."ಮಾತೃ - ಪ್ರಕೃತಿ - ಶಕ್ತಿ" ಸಂಬಂಧವು ಇದೇ ಸಿದ್ಧಾಂತದಿಂದ , ಅನುಭವ ಅಥವಾ ಪ್ರಕೃತಿಯ ಸಾಕ್ಷಾತ್ಕಾರದಿಂದ ಪ್ರಾಪ್ತಿಯಾಯಿತು ಅನ್ನೋಣವೇ ?
ಬರಹ : ಕೆ.ಎಲ್.ಕುಂಡಂತಾಯ
ಒಂದು ಸೀಯಾಳಕ್ಕೆ ಜೀವ ಉಳಿಸುವ ಎಲ್ಲೂರು ಸೀಮೆಯ ಒಡೆಯ ವಿಶ್ವೇಶ್ವರ
Posted On: 18 Sep 2020, 10:39 PM
ಎಳೆದೇರನಿಗೆ ಎಳನೀರ ಕಾಣಿಕೆ
ಎಲ್ಲೂರಿನ ಎಳೆದೇರ ( ಶಿವ ) ನಿಗೆ ಎಳನೀರಿಗಿಂತ ಪ್ರಿಯವಾದುದು ಮತ್ತೊಂದಿಲ್ಲ!
ಬಡವ , ಬಲ್ಲಿದ ಭೇದವಿಲ್ಲದೆ ಭಕ್ತರೆಲ್ಲರೂ ಅರ್ಪಿಸುವ ಎಳನೀರಿನ ಮೇಲೆ ವಿಶ್ವನಾಥನಿಗೆ ವಿಶೇಷ ಮೋಹ . ಆದುದರಿಂದಲೇ ವಾರವೊಂದಕ್ಕೆ ಕನಿಷ್ಠ 2000 ಎಳನೀರು ರುದ್ರನಿಗೆ ಅಭಿಷೇಕವಾಗುತ್ತದೆ.
ದೇವಳದ ಪರಿಸರದಲ್ಲಿ ಯಾರೂ ಎಳನೀರು ಕುಡಿಯಲಾರರು.
ಪಕ್ಕದ ಅಂಗಡಿಯವರು ಭಕ್ತರಿಗಾಗಿ ಮಾರಾಟಕ್ಕಿಟ್ಟಿರುವ ಎಳನೀರಿನ ರಾಶಿಯನ್ನು ಹಾಗೆಯೇ ಬಿಟ್ಟು ಅಂಗಡಿಗೆ ಬಾಗಿಲು ಹಾಕಿ ಹೋಗುತ್ತಾರೆ. ಒಂದೇ ಒಂದು ಎಳನೀರನ್ನು ಕೂಡ ಯಾರೂ ಮುಟ್ಟಲಾರರು. ಈಗ ಪ್ರತಿದಿನ ಸುಮಾರು ಒಂದು ಸಾವಿರ ಎಳನೀರು ಅಭಿಷೇಕವಾಗುತ್ತದೆ.
ಎಳನೀರಿಗೆ ಸಂಬಂಧಿಸಿದ ಹಲವು ಕತೆಗಳು ಈ ಊರಲ್ಲಿ ಜನಜನಿತವಾಗಿವೆ. ಅವುಗಳಲ್ಲಿ ಇದೂ ಒಂದು : ಬ್ರಿಟಿಷ್ ಅಧಿಕಾರಿಯೊಬ್ಬ ಕ್ಷೇತ್ರಕ್ಕೆ ಆಗಮಿಸಿ ಎಳನೀರಿನ ರಾಶಿಯನ್ನು ಕಂಡು ಕುಡಿಯುವ ಮನ ಮಾಡುತ್ತಾನೆ . ಸ್ಥಳೀಯರು ಈ ಪರಿಸರದಲ್ಲಿ ಎಳನೀರು ಕುಡಿಯುವಂತಿಲ್ಲವೆಂದು ಹೇಳಿದರೂ ಕೂಡ ಅಧಿಕಾರಿ ದರ್ಪದಿಂದ ಕೆತ್ತಿ ಕೊಡುವಂತೆ ಸೂಚಿಸುತ್ತಾನೆ. ಎಳನೀರು ಕುಡಿದೊಡನೆ ದೊಪ್ಪನೆ ಬಿದ್ದು ನಾಲಗೆ ಹೊರಗೆ ಚಾಚಿ ಪ್ರಜ್ಞಾಹೀನನಾಗುತ್ತಾನೆ.
ಅಧಿಕಾರಿಯ ಕೈಯಲ್ಲೇ ತಪ್ಪು ಕಾಣಿಕೆಯಾಗಿ 100 ಸೀಯಾಳ ಸನ್ನಿಧಾನಕ್ಕೆ ಹಾಕಿಸುತ್ತೇವೆ ಎಂದು ಸ್ಥಳೀಯರು ಪ್ರಾರ್ಥಿಸಿದಾಗ ಅಧಿಕಾರಿ ಎದ್ದು ಕುಳಿತನಂತೆ!
ಇಂದಿನ ದಿನಗಳಲ್ಲಿ ಇಂಥ ಕತೆಗಳನ್ನು ನಂಬುವವರು ಇರಬಹುದು , ಇಲ್ಲದೆಯೂ ಇರಬಹುದು . ಇದೇನಿದ್ದರೂ ಇಂದಿಗೂ ಈ ಪರಿಸರದಲ್ಲಿ ಯಾರೂ ಎಳನೀರು ಕುಡಿಯುವುದಿಲ್ಲ , ತೆಂಗಿನ ಗಿಡದ ಪ್ರಥಮ ಫಲ ( ಸೀಯಾಳ ) , ತೆಂಗಿನ ತೋಟಗಳಿಗೆ ಇಲಿ ಕಾಟ , ಹಲವು ಮಾರಣಾಂತಿಕ ಆಸೌಖ್ಯ , ಕಾರ್ಯಸಾಧನೆ ಮುಂತಾದ ಇಷ್ಟಾರ್ಥಸಿದ್ದಿಗೆ ಇಲ್ಲಿ ಎಳನೀರು ಅರ್ಪಿಸುವುದು ಅಥವಾ 100 , 1000 ಹೀಗೆ ಶಕ್ತ್ಯಾನುಸಾರ ಸಂಖ್ಯೆಯಲ್ಲಿ ಅಭಿಷೇಕ ಮಾಡಿಸುವುದು ನಡೆಯುತ್ತದೆ . ಎಳನೀರಿನಲ್ಲಿ ತುಲಾಭಾರ ಹೆಚ್ಚಿನ ಸಂಖ್ಯೆಯಲ್ಲಿ ನೆರವೇರುತ್ತದೆ.
ಸ್ವಯಂಭು ' ವಿಶ್ವನಾಥನು ಉದ್ಭವಿಸುವ ವೇಳೆ ಗಿರಿಜನ ವೃದ್ಧ ಮಹಿಳೆಯ ಕತ್ತಿಯ ಆಘಾತ ಲಿಂಗದ ಮೇಲೆ ಬಿದ್ದು ರಕ್ತ ಹರಿಯಲಾರಂಭಿಸಿತು . ಎಳನೀರಿನ ಎರೆಯುವಿಕೆಯಿಂದ ರಕ್ತ ಹರಿಯುವಿಕೆ ನಿಂತಿತು ಎಂಬ ಕತೆಯನ್ನು ಹೇಳುವ ಈ ಪ್ರದೇಶದ ( ಸೀಮೆಯ ) ಹಿರಿಯರು ಈ ಕಾರಣದಿಂದ ಉಳ್ಳಾಯನಿಗೆ ಎಳನೀರು ಅಪೂರ್ವವಾದ ಸೇವಾ ವಸ್ತುವಾಯಿತೆನ್ನುತ್ತಾರೆ . ಸುಲಭ ಲಭ್ಯ ಎಳನೀರು ಬಡವನೂ ಅರ್ಪಿಸಬಹುದಾದದ್ದು . ಹೀಗಾಗಿ ಸಕಲ ವೈಭವಯುಕ್ತನಾದ ಎಲ್ಲೂರು ವಿಶ್ವನಾಥನು ಅಲ್ಪಮೌಲ್ಯದ ಎಳನೀರಿನ ಸೇವೆಗೆ ಆಕ್ಷಯ ಫಲ ಅನುಗ್ರಹಿಸುವನೆಂಬುದು ನಂಬಿಕೆ.
ಬರಹ : ಕೆ ಎಲ್ ಕುಂಡಂತಾಯ
ಉಡುಪಿಯಲ್ಲಿ ಸರ್ಕಾರದ ಶುಲ್ಕ ಪಾವತಿಸಿ ಉಚಿತ ಐಟಿಐ ವಿದ್ಯಾಭ್ಯಾಸ
Posted On: 18 Sep 2020, 12:10 AM
ಪರಮ ಪೂಜ್ಯ ಶ್ರೀ ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿಯವರ ಶುಭ ಆಶೀರ್ವಾದದೊಂದಿಗೆ ಶ್ರೀ ಶ್ರೀ ಬ್ರಹ್ಮಾನಂದ ಸ್ವಾಮೀಜಿಯವರ ಮಾರ್ಗದರ್ಶನ ಹಾಗೂ ಅಧ್ಯಕ್ಷತೆಯೊಂದಿಗೆ ವಿದ್ಯಾರ್ಥಿಗಳ ಭವಿಷ್ಯದ ಆಶಾಕಿರಣ ಆತ್ಮಾನಂದ ಸರಸ್ವತಿ ಐ.ಟಿ.ಐ ಕಾಲೇಜು ಮಾನ್ಯ ಬಿಲ್ಲಾಡಿ
ಆತ್ಮಾನಂದ ಸರಸ್ವತಿ ಐ.ಟಿ.ಐ ಕಾಲೇಜಿನಲ್ಲಿ ಸುಸಜ್ಜಿತ ಸೌಲಭ್ಯದೊಂದಿಗೆ ವೃತ್ತಿಪರ ಕೋರ್ಸ್ಗಳು ಲಭ್ಯವಿದೆ.
ಯಾವುದೇ ಡೊನೇಷನ್ಗಳಿಲ್ಲದೆ ಹಾಸ್ಟೆಲ್ ವ್ಯವಸ್ಥೆಯೊಂದಿಗೆ ಉತ್ತಮ ಗುಣಮಟ್ಟದ ಶಿಕ್ಷಣ, ವಿಶೇಷ ಮಾಹಿತಿ ಕಾರ್ಯಾಗಾರ.
ತರಬೇತಿ ಗಳನ್ನು ನೀಡಲಾಗುತ್ತದೆ, ಇಲ್ಲಿ ಉದ್ಯೋಗ ಖಾತ್ರಿಯ ಮೌಲ್ಯಾತ್ಮಕ ಮಟ್ಟದಲ್ಲಿರುವ ನಮ್ಮ ಸಂಸ್ಥೆ ಯ ಸದುಪಯೋಗವನ್ನು ಎಲ್ಲಾ ವಿದ್ಯಾರ್ಥಿಗಳು, ವಿಶೇಷವಾಗಿ ಬಡ ಹಾಗೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಡೆದುಕೊಳ್ಳಬೇಕಾಗಿ ಕಾರ್ಯದರ್ಶಿ ಎಮ್ ಮಹೇಶ್ ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯುವ ಪ್ರಸಂಗಕರ್ತರು ಮಿಥುನ್ ಪೂಜಾರಿ ಕೋಣಿ
Posted On: 17 Sep 2020, 09:58 PM
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಣಿ ಗ್ರಾಮದ ಗೋಪಾಲ ಪೂಜಾರಿ ಮತ್ತು ಪ್ರೇಮಾ ಪೂಜಾರಿ ದಂಪತಿಗಳ ನಾಲ್ಕು ಮಕ್ಕಳಲ್ಲಿ ದ್ವಿತೀಯ ಪುತ್ರರಾಗಿ , ಮೇಘರಾಜ್ ಇವರ ತಮ್ಮನಾಗಿ , ನವ್ಯ ಮತ್ತು ಕಾವ್ಯ ರಿಗೆ ಅಣ್ಣನಾಗಿ ಸಪ್ಟೆಂಬರ್ ೨೩ ರ ೧೯೯೫ ರಂದು ಜನಿಸಿದರು.
ತನ್ನ ಪ್ರಾಥಮಿಕ ಶಿಕ್ಷಣವನ್ನು ಸೈಂಟ್ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆ ಕುಂದಾಪುರ ದಲ್ಲಿ , ಪ್ರೌಢ ಶಿಕ್ಷಣವನ್ನು ಸೈಂಟ್ ಮೇರಿಸ್ ಪ್ರೌಢ ಶಾಲೆ ಕುಂದಾಪುರ ದಲ್ಲಿ ವ್ಯಾಸಾಂಗ ಮಾಡಿ , ಪಿಯುಸಿ ಶಿಕ್ಷಣವನ್ನು ಭಂಡಾರ್ಕಾರ್ಸ್ ಆರ್ಟ್ಸ್ ಮತ್ತು ಸಾಯನ್ಸ್ ಕಾಲೇಜು ಕುಂದಾಪುರದಲ್ಲಿ ಅಧ್ಯಯನ ಮಾಡಿ , ಬಿ.ಎ ಪದವಿಯನ್ನು ಶ್ರೀ ಶಾರದಾ ಕಾಲೇಜು ಬಸ್ರೂರು ವಿನಲ್ಲಿ ಸಂಪೂರ್ಣಗೊಳಿಸಿರುತ್ತಾರೆ.
ರಾಜು ಪೂಜಾರಿ ಹೆಮ್ಮಾಡಿ , ಕಲಾವಿದರು ಶ್ರೀ ಕ್ಷೇತ್ರ ಹಾಲಾಡಿ ಮೇಳ ಇವರ ಪ್ರೇರಣೆ ಮತ್ತು ಸಲಹೆಯೊಂದಿಗೆ ಪ್ರಸಂಗ ಬರೆಯಲು ಒಲವು ತೋರಿದ ಇವರು ಶ್ರೀಮತಿ ಶಾಂತಾ ವಾಸುದೇವ್ ಪೂಜಾರಿ ಆನಗಳ್ಳಿ ಮತ್ತು ಯಕ್ಷಕವಿ ಯಕ್ಷಾನಂದಾ ಬಿಲ್ಲವ ಕುತ್ಪಾಡಿ ಇವರನ್ನು ಗುರುಗಳನ್ನಾಗಿ ಸ್ವೀಕರಸಿಕೊಂಡರು.
ಶ್ರೀಮತಿ ಶಾಂತಾ ವಾಸುದೇವ್ ಪೂಜಾರಿ ಆನಗಳ್ಳಿ ಇವರ ಪದ್ಯ ರಚನೆಯಲ್ಲಿ " ದೇವ ಸ್ವರೂಪ " ಪ್ರಸಂಗ
ಶ್ರೀ ಕ್ಷೇತ್ರ ಹಿರಿಯಡಕ ಮೇಳದಲ್ಲಿ ಮತ್ತು
" ಧರ್ಮದೇವತೆ ಚಿಕ್ಕಮ್ಮ " ಹಾಗೂ
" ಶ್ರೀ ದೇವಿ ಭದ್ರಮಹಂಕಾಳಿ " ಪ್ರಸಂಗ
ಶ್ರೀ ಕ್ಷೇತ್ರ ಮಡಾಮಕ್ಕಿ ಮೇಳದಲ್ಲಿ ಹಾಗೂ
೨೦೧೮ - ೨೦೨೦ ನೇ ಸಾಲಿನ ಶ್ರೀ ಕ್ಷೇತ್ರ ಸೌಕೂರು ಮೇಳದ ತಿರುಗಾಟದಲ್ಲಿ ಯಕ್ಷಕವಿ ಯಕ್ಷನಂದಾ ಬಿಲ್ಲವ ಕುತ್ಪಾಡಿ ಇವರ ಪದ್ಯ ರಚನೆಯಲ್ಲಿ " ಧರ್ಮ ಸಂಕಲ್ಪ " ಪ್ರಸಂಗ ಪ್ರದರ್ಶನಗೊಂಡಿರುತ್ತದೆ.
ಇವರ " ಧರ್ಮದೇವತೆ ಚಿಕ್ಕಮ್ಮ " ಪ್ರಸಂಗವು ೭೫ಕ್ಕೂ ಹೆಚ್ಚು ಪ್ರದರ್ಶನಗೊಂಡು ಜನಮನ್ನಣೆಗೊಂಡಿರುತ್ತದೆ.
೨೦೨೦ - ೨೦೨೧ ನೇ ಸಾಲಿನ ತಿರುಗಾಟಕ್ಕೆ ಇವರ ಪಂಚಮ ಕಲಾಕುಸುಮ " ಶ್ರೀ ಅಗ್ನಿ ದುರ್ಗಾಪರಮೇಶ್ವರೀ ಕ್ಷೇತ್ರ ಮಹಾತ್ಮೆ " ಶ್ರೀಮತಿ ಶಾಂತಾ ವಾಸುದೇವ್ ಪೂಜಾರಿ ಆನಗಳ್ಳಿ ಇವರ ಪದ್ಯ ರಚನೆಯಲ್ಲಿ ತೆಂಕುತಿಟ್ಟಿನ ಸುಪ್ರಸಿದ್ಧ ಮೇಳವೊಂದರಲ್ಲಿ ವಿಜ್ರಂಬಿಸಲಿಕ್ಕಿದೆ.
ಯುವ ಪ್ರಸಂಗಕರ್ತರಿಗೆ ಎಂ.ಜಿ.ಎಫ್ ಫ್ರೆಂಡ್ಸ್ ಬಗ್ವಾಡಿ ಇವರು ನೀಡುವ ಎಂ.ಜಿ.ಎಫ್ ಪ್ರಶಸ್ತಿ , ಯಕ್ಷಾಭಿಮಾನಿ ಬಳಗ ಕೋಣಿ ಇವರಿಂದ ಸನ್ಮಾನ , ಯಕ್ಷ ಮೃದಂಗ ಮಹಾಲಕ್ಷ್ಮೀ ಲೇಔಟ್ ಬೆಂಗಳೂರು ಇವರಿಂದ ಪುರಸ್ಕಾರ ಮತ್ತು ಮಾರ್ಪಳ್ಳಿ ಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘ ಇವರಿಂದ ಪುರಸ್ಕಾರವನ್ನು ಪಡೆದ ಇವರು ಎಲ್ಲರ ಪ್ರೀತಿ ಪಾತ್ರಕ್ಕೆ ಭಾಜನರಾಗಿರುತ್ತಾರೆ.
ಪ್ರಸ್ತುತ ಇವರು ಎಚ್.ಡಿ.ಬಿ ಫೈನಾನ್ಸ್ ಕಂಪೆನಿ ಉಡುಪಿ ಇಲ್ಲಿ ಉದ್ಯೋಗದಲ್ಲಿ ನಿಯೋಜಿತಗೊಂಡಿರುತ್ತಾರೆ.
ಇಂತಹ ಯುವ ಪ್ರಸಂಗಕರ್ತರಿಂದ ಇನ್ನಷ್ಟು ಕಲಾಕುಸುಮಗಳು ಯಕ್ಷರಂಗದಲ್ಲಿ ರಾರಾಜಿಸಲಿ ಮತ್ತು ಇನ್ನೂ ಅನೇಕ ಪ್ರಶಸ್ತಿ , ಪುರಸ್ಕಾರಗಳು ನಿಮ್ಮದಾಗಲಿ ಮತ್ತು ನೀವು ಮಾಡುವ ಕೆಲಸದಲ್ಲಿ ಸುಖ , ಶಾಂತಿ , ನೆಮ್ಮದಿ ಮತ್ತು ಯಶಸ್ಸನ್ನು ಒದಗಿಸು ಎಂದು ಸಿಗಂದೂರು ಶ್ರೀ ಚೌಡೇಶ್ವರೀ ಅಮ್ಮನವರಲ್ಲಿ ಮತ್ತು ಪುಷ್ಪ ಪವಾಡ ಖ್ಯಾತಿಯ ಸೌಕೂರು ಶ್ರೀ ದುರ್ಗಾಪರಮೇಶ್ವರೀ ಅಮ್ಮನವರಲ್ಲಿ ಭಕ್ತಿಪೂರ್ವಕವಾಗಿ ಬೇಡಿಕೊಳ್ಳುತ್ತಾ ಶುಭ ಹಾರೈಸೋಣ.
ಧನ್ಯವಾದಗಳೊಂದಿಗೆ.
ರೋಟರಿಕ್ಲಬ್ ಮಣಿಪುರ ವತಿಯಿಂದ ಹೀಗೊಂದು ಸಮಾಜಸೇವೆ.
Posted On: 17 Sep 2020, 05:23 PM
ರೋಟರಿ ಕ್ಲಬ್ ಮಣಿಪುರ ವತಿಯಿಂದ ಕಾರುಣ್ಯ ವೃದ್ದಾಶ್ರಮ ಏಣಗುಡ್ಡೆ ಕಟಪಾಡಿ ಇಲ್ಲಿಗೆ ಒಂದು ತಿಂಗಳಿಗೆ ಆಗುವಷ್ಟು ಅಕ್ಕಿಯನ್ನು ವಿತರಿಸಲಾಯಿತು ಅಧ್ಯಕ್ಷರಾದ ಮೊಹಮ್ಮದ್ ಷರೀಫ್ ಕಾರ್ಯದರ್ಶಿ ಸುಧೀರ್ ಕುಮಾರ್ ಹಾಗೂ ಕ್ಲಬ್ ನ ಸದಸ್ಯರು ಉಪಸ್ಥಿತರಿದ್ದರು. ಹಾಗೂ ಆನಂದ ಕಾಂಚನ್ ರಾಮೇರ್ ತೋಟ ಇವರಿಗೆ ಮನೆ ಕಟ್ಟಲು 25 ಚೀಲ ಸಿಮೆಂಟ್ ವಿತರಿಸಲಾಯಿತು. ಅಧ್ಯಕ್ಷರಾದ ಮೊಹಮ್ಮದ್ ಷರೀಫ್ ಕಾರ್ಯದರ್ಶಿ ಸುಧೀರ್ ಕುಮಾರ್ ಹಾಗೂ ಕ್ಲಬ್ ನ ಸದಸ್ಯರು ಉಪಸ್ಥಿತರಿದ್ದರು.
ಇಂದ್ರಾಳಿ ಘಟಕದ 2020ನೇ ಸಾಲಿನ ಜೆಸಿಐ ಸಪ್ತಾಹದ ಸಮಾರೋಪ ಸಮಾರಂಭ
Posted On: 16 Sep 2020, 05:49 PM
ಉಡುಪಿ :- ಜೆಸಿಐ ಉಡುಪಿ ಇಂದ್ರಾಳಿ ಘಟಕದ 2020ನೇ ಸಾಲಿನ ಜೆಸಿಐ ಸಪ್ತಾಹದ ಸಮಾರೋಪ ಸಮಾರಂಭವು ಘಟಕದ ಅಧ್ಯಕ್ಷ ಎಂ ಎನ್ ನಾಯಕ್ ಮತ್ತು ಸರ್ವ ಸದಸ್ಯರ ಸಹಭಾಗಿತ್ವ ದೊಂದಿಗೆ ವಲಯಾಧ್ಯಕ್ಷ ಕಾತಿ೯ಕೇಯ ಮಧ್ಯಸ್ಥ ಹಾಗೂ ವಲಯ ಉಪಾಧ್ಯಕ್ಷ ಮೇಧಾವಿ ಇವರ ವಿಶೇಷ ಉಪಸ್ಥಿತಿಯಲ್ಲಿ ಸೆ.15ರಂದು ಮಣಿಪಾಲದ ಹೋಟೆಲ್ ಮಧುವನ ಸೇರಾಯ್ ನ " ಮೈತ್ರಿ ಹಾಲ್" ನಲ್ಲಿ ನಡೆಯಿತು. ಈ ಸಂದಭ೯ದಲ್ಲಿ ವಿಶೇಷ ಕೊಡುಗೆಯಾಗಿ 11 ಜನ ಪ್ರತಿಭಾನ್ವಿತ ಯಾವುದೇ ಸರಕಾರಿ ವಿದ್ಯಾರ್ಥಿ ವೇತನ ಪಡೆಯದ ವರ್ಗದ ಆರ್ಥಿಕ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ಸುಮಾರು 69ಸಾವಿರ ರೂ. ದೇಣಿಗೆಯ ಯನ್ನು ಸಾರ್ವಜನಿಕವಾಗಿ ಮತ್ತು ಸದಸ್ಯ ಮಿತ್ರರು ಸೇರಿ ಸಂಗ್ರಹಣೆ ಮಾಡಿದ್ದನ್ನು ನೀಡಲಾಯಿತು. ಜೆಸಿಐ ಭಾರತದ ಸ್ವಚ್ಛ ಜಲ ಕಾರ್ಯಕ್ರಮದ ಅಡಿಯಲ್ಲಿ ಮಣಿಪಾಲದ ನಗರಸಭಾ ಕಟ್ಟಡದಲ್ಲಿ ಇರುವ ಗ್ರಾಮ ಕರಣಿಕರ ಕಚೇರಿ ಗೆ ವಾಟರ್ ಪ್ಯೂರಿಫೈರ್ ನ ಕೊಡುಗೆ ಹಾಗೂ ಫಿಟ್ ಇಂಡಿಯಾದ ಕಾರ್ಯಕ್ರಮ ದ ಅಂಗವಾಗಿ ಸ್ಯಾನಿಟೈಸರ್ ಸ್ಟಾಂಡ್ ವಿಥ್ ಸ್ಯಾನಿಟೈಸರ್ ಕೊಡುಗೆಯಾಗಿ ನೀಡಲಾಯಿತು.ಕಾಯ೯ಕ್ರಮದಲ್ಲಿ ಫಟಕದ ಸದಸ್ಯರು ಭಾಗವಹಿಸಿದ್ದರು. ಸಾರ್ವಜನಿಕರಿಗೆ ಮಾಸ್ಕ್ ವಿತರಣೆ, ರಕ್ತದಾನ ಶಿಬಿರ, ಪೇಪರ್ ಬ್ಯಾಗ್ ವಿತರಣೆ, ಪ್ಲಾಸ್ಮಾ ಡೊನೇಷನ್ ಅವರ್ನೇಸ್, ನೋ ಪ್ಲಾಸ್ಟಿಕ್ ಅವರ್ನೇಸ್ ಇತ್ಯಾದಿ ಕಾರ್ಯಕ್ರಮ ಗಳನ್ನು ಯಶಸ್ವಿ ಯಾಗಿ ಈ ಸಪ್ತಾಹದಲ್ಲಿ ಮಾಡಲಾಗಿದೆ.
ವೆರಿಕೋಸ್ ವೇಯ್ನ್ ಗೆ ಸಾಧ್ಯವಾದಷ್ಟು ಆಪರೇಷನ್ ಇಲ್ಲದೆ ಚಿಕೆತ್ಸೆ
Posted On: 16 Sep 2020, 02:50 PM
ವೆರಿಕೋಸ್ ವೇಯ್ನ್ ಈವಾಗ ಸಾಮಾನ್ಯ ವಾದ ಖಾಯಿಲೆ ಯಂತಾಗಿದೆ .ಇದೆಕ್ಕೆಲ್ಲಾ ಕಾರಣ ಜನರ ಅಸಮರ್ಪಕ ಜೀವನ ಶೈಲಿ, ವ್ಯಾಯಾಮ ರಹಿತ ಜೀವನ, ಜಾಸ್ತಿ ನಿಂತುಕೊಂಡೆ ಅಥವಾ ಕುಳಿತುಕೊಂಡೆ ಕೆಲಸ ಮಾಡುವುದು, ಸತ್ವ ರಹಿತ ಕಲಬೆರಿಕೆ ಆಹಾರ ಸೇವನೆ, ವಂಶಪಾರಂಪರ್ಯವಾಗಿ ಹಾಗೂ ಗರ್ಭಿಣಿ ಯರಿಗೆ ಸಾಮಾನ್ಯ ವಾಗಿ ಕಂಡು ಬರುವುದು.
ವೆರಿಕೋಸ್ ವೇಯ್ನ್ ನಿಂದಾಗಿ ನಮ್ಮ ದೇಶದಲ್ಲಿ 30 ರಿಂದ 40% ಜನರು ಬಳಲುತ್ತಿದ್ದರೂ ಸಹ ಇದಕ್ಕೆ ಪರಿಣಾಮಕಾರಿಯಾದಂತಹ 3 ರಿಂದ 4 ಔಷದವೂ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಪ್ರಾರಂಭದ ಹಂತದಲ್ಲಿ ಉದಾಸೀನ ಮಾಡಿ ನಂತರ ಗಂಭೀರ ಹಂತದಲ್ಲಿ ಔಷಧಿ ದೊರೆಯದೆ ತುಂಬಾ ನೋವನ್ನು, ತೊಂದರೆ ಯನ್ನು ಅನುಭವಿಸಿ ಆಪರೇಷನ್ ಮಾಡಿಸಿ ಕೊಂಡರೂ ಸಹ ಸರಿಯಾಗಿ ಗುಣವಾಗದೆ ಸಮರ್ಪಕ ಜೀವನ ನಡೆಸಲಾಗದ ರೋಗಿಗಳ ಪರಿಸ್ಥಿತಿ ಯನ್ನು ನೋಡಿ, ಮುತುವರ್ಜಿ ವಹಿಸಿ DR URALS VARICOSE VEIN AYURVEDA CURE ಎನ್ನುವ ಸಂಸ್ಥೆ ಸಂಶೋಧನಾ ಸಂಶೋಧನೆಗೆ ಒಳಪಡಿಸಿ ಅಮೃತ ವೆರಿಕೋಸ್ ವೇಯ್ನ್ ಎನ್ನುವ ಆಯುರ್ವೇದ ಔಷದಿ ಯನ್ನು ತಯಾರಿಸಿ ರಾಜ್ಯ ಹಾಗೂ ಹೊರ ರಾಜ್ಯದ ಸಾವಿರಾರು ರೋಗಿ ಗಳಿಗೆ ನೀಡಿ ಅವರ ತೊಂದರೆ ಯನ್ನು ಸಾಧ್ಯವಾದಷ್ಟು ಆಪರೇಷನ್ ಇಲ್ಲದೆ ನಿವಾರಿಸಿ ಅವರ ಜೀವನ ಶೈಲಿ ಹಾಗೂ ಅರೋಗ್ಯ ಮಟ್ಟವನ್ನು ಸಾಕಷ್ಟು ಸುಧಾರಿಸಲಾಗಿದೆ.
ಸಂಸ್ಥೆಯು ವೆರಿಕೋಸ್ ವೇಯ್ನ್ ಬಗ್ಗೆ ಸಾಕಷ್ಟು ಜನ ಜಾಗ್ರತೆ ಮೂಡಿಸುತಿದ್ದು ಸಂಸ್ಥೆ ಯೊಂದಿಗೆ ಕೈ ಜೋಡಿಸಬೇಕೆಂಬುವುದು ನಮ್ಮ ಆಶಯ.
ಹೆಚ್ಚಿನ ಮಾಹಿತಿಗಾಗಿ.
Dr.URALS FACEBOOK
Dr. URAL'S WEBSITE
Call Now : +918310191364
ಪಡುಬಿದ್ರಿ ರೋಟರಿ ವತಿಯಿಂದ ಇಂಜಿನಿಯರ್ಸ್ ಡೇ ಆಚರಣೆ
Posted On: 15 Sep 2020, 11:52 PM
ಇಂಜಿನಿಯರ್ಸ್ ಡೇ ಅಂಗವಾಗಿ ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದು ಇಂಜಿನಿಯರಿಂಗ್ ವೃತ್ತಿ ಯನ್ನು ನಡೆಸುತಿರುವ ರಮೀಜ್ ಹುಸೇನ್ ಮತ್ತು ಮಹಮ್ಮದ್ ನಿಯಾಜ್ ರವರಿಗೆ ಪಡುಬಿದ್ರಿ ರೋಟರಿ ವತಿಯಿಂದ ಸಮ್ಮಾನಿಸಲಾಯಿತು. ಪಡುಬಿದ್ರಿ ರೋಟರಿ ಅಧ್ಯಕ್ಷ ಕೇಶವ ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಇನ್ನರ್ ವೀಲ್ ಕ್ಲಬ್ನ ಪೂರ್ವ ಅಧ್ಯಕ್ಷೆ ಸುನಿತಾ ಭಕ್ತವತ್ಸಲ , ಕಾರ್ಯದರ್ಶಿ ಮಹಮ್ಮದ್ ನಿಯಾಜ್, ಸದಸ್ಯರಾದ ಸುಧಾಕರ್ ಕೆ, ಸಂತೋಷ್ ಪಡುಬಿದ್ರಿ, ಗೀತಾ ಅರುಣ್, ತಸ್ಲೀನ್ ಅರ್ಹ ಉಪಸ್ಥಿತರಿದ್ದರು. ಕೇಶವ್ ಸಾಲ್ಯಾನ್ ಸ್ವಾಗತಿಸಿ, ಬಿ.ಯಸ್ ಆಚಾರ್ಯ ವಂದಿಸಿದರು.
ಕರೋನಾ ಮೈಮರೆವು ಅಪಾಯಕ್ಕೆ ದಾರಿಯಾಗಬಹುದು
Posted On: 15 Sep 2020, 06:44 PM
ಇತ್ತಿಚೆಗೆ ನಾವು ನೋಡುತ್ತಿರುವ ಸಂಗತಿ ಯಂತೆ ಕರೋನಾದ ಬಗ್ಗೆ ಜನರಿಗೆ ಅಸಡ್ಡೆ ಎದುರಾಗಿದೆ.ಪರಿಣಾಮ ಕರೋನಾ ಮತ್ತು ನಮಗೆ ಯಾವುದೇ ಸಂಬಂಧವಿಲ್ಲದಂತೆ ಹೆಚ್ಚಿನ ಜನರು ವತಿ೯ಸುತ್ತಿದ್ದಾರೆ ಇದು ಸರಿಯಲ್ಲ. ಮುಖ್ಯವಾಗಿ ಮಾಸ್ಕ್ ಹಾಕುವುದು ಸಾಮಾಜಿಕ ಅಂತರ ಕಾಪಾಡುವುದು ನಿಧಾನವಾಗಿ ಕಡಿಮೆಯಾಗಿರುದನ್ನು ನಾವು ಗಮನಿಸುತ್ತಿದ್ದೇವೆ.ಸಕಾ೯ರ ದ ನೀತಿ ನಿಯಮಗಳನ್ನು ಮೀರಿ ಸಮಾರಂಭಗಳ ಆಯೋಜನೆ, ಕಾಯ೯ಕ್ರಮಗಳಲ್ಲಿ ಯಾವುದೇ ರೀತಿಯ ಕರೋನಾ ಮುಂಜಾಗ್ರತೆ ವಹಿಸದಿರುವುದು ಸಾಮಾನ್ಯವಾಗುತ್ತಿದೆ ಇದು ಅಪಾಯಕ್ಕೆ ಎಡೆ ಮಾಡುವ ಸಂಭವವಿದೆ ಎಂದು ಈಗಾಗಲೇ ತಜ್ಞರು ಎಚ್ಚರಿಸಿದ್ದಾರೆ.ಆದರೂ ನಮವರಿಗೆ ಎಚ್ಚರವಾಗಿಲ್ಲ. ಕರೋನಾದ ಲಕ್ಷಣ ಕಂಡು ಬಂದರೂ ಕೂಡ ಅದನ್ನು ಮುಚ್ಚಿಟ್ಟು ಸುರಕ್ಷತೆ ವಹಿಸದ ಪರಿಣಾಮ ಸೋoಕಿತರ ಸಂಖ್ಯೆ ಹೆಚ್ಚಾಗುತ್ತಿದೆ.ಅಲ್ಲದೆ ಐಸಿಯು ವೆಂಟಿಲೇಟರ್ ನಲ್ಲಿ ದಾಖಲಾಗುತ್ತಿರುವ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚುತ್ತಿರುವ ಕಾರಣ ಆಸ್ಪತ್ರೆಗಳಲ್ಲಿ ಐಸಿಯು ಬೆಡ್ ಕಡಿಮೆಯಾಗುತ್ತಿರುವುದು ಅಪಾಯದ ಸಂಕೇತ. ಹೀಗಾಗಿ ಜನರು ಸಕಾ೯ರ ದ ನೀತಿ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡಬೇಕು. ಮಾಸ್ಕ್ ಧರಿಸಲೇ ಬೇಕೇ? ಎಂಬ ಪ್ರಶ್ನೆ ನಮ್ಮನ್ನು ಕಾಡ ಬಹುದು ನಮ್ಮ ಮತ್ತು ಸಮಾಜದ ಆರೋಗ್ಯದ ದೃಷ್ಟಿಯಿಂದ ಮಾಸ್ಕ್ ಧರಿಸಬೇಕು ಇದರಲ್ಲಿ ರಿಯಾಯಿತಿ ಬೇಡ. ಮಾಸ್ಕ್ ಧರಿಸುವ ಜತೆಗೆ ನಿಯಮಿತ ಅವಧಿಯಲ್ಲಿ ಕೈಗಳನ್ನು ಸಾಬೂನು ಅಥವಾ ಇನ್ನಿತರ ಶುಚಿತ್ವ ಕಾಪಾಡಿಕೊಳ್ಳುವ ವಸ್ತುಗಳಿಂದ ತೊಳೆದುಕೊಳ್ಳುವುದು ಅತಿ ಮುಖ್ಯವಾಗಿರುತ್ತದೆ. ಕೆಲವು ಜನರು ಫೋಲಿಸರು ಹಾಕುವ ಫೈನ್ ನಿಂದ ತಪ್ಪಿಸಲು ಮಾಸ್ಕ್ ಹಾಕುದನ್ನು ನಾವು ನೋಡುತ್ತೇವೆ. ನಮ್ಮ ಆರೋಗ್ಯದ ಬಗ್ಗೆ ನಮಗೆ ಗಮನ ಇದ್ದರೆ ಎಲ್ಲರೂ ಮಾಸ್ಕ್ ಹಾಕಬೇಕಾದ ಅಗತ್ಯವಿದೆ. ರೋಗ ನಿರೋಧಕ ಶಕ್ತಿ ಹೆಚ್ಚಿದ್ದರೆ ವೃರಸ್ನ ಭಯ ಅಗತ್ಯವಿಲ್ಲವೇ? ಹೆಚ್ಚು ಜಾಗೃತರಾಗಿರಬೇಕಾದವರಾರು? ತಜ್ಞರ ಪ್ರಕಾರ, ಮಧುಮೇಹ, ಹೃದ್ರೋಗ, ಶ್ವಾಸಕೋಶ ಸಮಸ್ಯೆಗಳಿರುವವರು ಅತ್ಯಂತ ಜಾಗರೂಕರಾಗಿರಬೇಕಾಗುತ್ತದೆ. ಈಗಾಗಲೇ ಇರುವ ಆರೋಗ್ಯ ಸಮಸ್ಯೆಗಳ ಪರಿಣಾಮದಿಂದ ರೋಗ ನಿರೋಧಕ ಶಕ್ತಿಯಲ್ಲಿ ಕೊಂಚ ಕಡಿಮೆ ಇರುವ ಸಾಧ್ಯತೆಗಳು ಹೆಚ್ಚು. ಅಂತೆಯೇ ಹಿರಿಯ ನಾಗರಿಕರಲ್ಲೂ ರೋಗಗಳನ್ನು ಹೋರಾಡುವ ಕಣಗಳ ಸಂಖ್ಯೆ ಕಡಿಮೆ ಇರುವ ಸಾಧ್ಯತೆಗಳಿರುತ್ತದೆ. ಹೀಗಾಗಿ ಈ ವರ್ಗದ ಜನರು ಅತ್ಯಂತ ಜಾಗರೂಕರಾಗಿರಬೇಕಾಗುತ್ತದೆ. ಆರೋಗ್ಯ ಸಮಸ್ಯೆ ಇರುವವರಿಗೆ ಸೋಂಕು ತಗಲುವ ಸಾಧ್ಯತೆ ದುಪ್ಪಟ್ಟಾಗಿರುತ್ತದೆ ಎಂದು ಅವಲೋಕಿಸಲಾಗಿದೆ. ಆದರೂ ಯುವ ಸಮುದಾಯವೂ ಈ ಮಹಾಮಾರಿ ವೈರಸ್ನಿಂದ ಪಾರಾಗಲು ಬೇಕಾದ ಅಗತ್ಯ ಕ್ರಮಗಳನ್ನು ಪಾಲಿಸುವುದೇ ಸೂಕ್ತವಾಗಿದೆ. ಜಿಲ್ಲಾಡಳಿತದ ನಿಯಮ ಪಾಲನೆ ಮಾಡಿರಿ ಈಗಾಗಲೇ ಜಿಲ್ಲಾಧಿಕಾರಿ ಸೇರಿದಂತೆ ಅನೇಕ ಮಂದಿ ವೈದ್ಯರು ಕರೋನಾದ ಬಗ್ಗೆ ಮುಂಜಾಗ್ರತೆ ವಹಿಸಲು ಕರೆ ನೀಡಿದ್ದಾರೆ. ಅಲ್ಲದೆ ಈ ಬಗ್ಗೆ ರೂಪಿಸಿದ ನೀತಿ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡಬೇಕಾಗಿದೆ. ನಮ್ಮ ಉದಾಸೀನ ಮತ್ತು ನಿಲ೯ಕ್ಷದಿಂದ ಉಳಿದವರು ತೊಂದರೆ ಎದುರಿಸಬೇಕಾಗುತ್ತದೆ. ಹೀಗಾಗಿ ಈ ಕರೋನಾ ದೂರವಾಗುವ ತನಕ ನಿಯಮಗಳನ್ನು ಪಾಲನೆ ಮಾಡೋಣ. ಅಪಪ್ರಚಾರ, ಅಪನಂಬಿಕೆ ಬೇಡ ಕೆಲವು ಜನರು ಸುಳ್ಳು ಮತ್ತು ಆಧಾರ ರಹಿತ ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ಜನರನ್ನು ತಪ್ಪು ದಾರಿಗೆ ತರುವ ಕೆಲಸ ಮಾಡುತ್ತಿದ್ದಾರೆ ಇದು ಸರಿಯಲ್ಲ. ಒಟ್ಟಾಗಿ ಕರೋನಾ ದೂರವಾಗಬೇಕಾದರೆ ಸಕಾ೯ರ ಮಾತ್ರ ಕೆಲಸ ಮಾಡಿದರೆ ಸಾಲದು ಎಲ್ಲರೂ ತಮ್ಮ ಆರೋಗ್ಯದ ದೃಷ್ಠಿಯಿಂದ ಕರೋನಾ ನಿಯಮಗಳನ್ನು ಪಾಲನೆ ಮಾಡಬೇಕಾಗಿದೆ. ಈಗಾಗಲೇ ವಿಶ್ವದ ಕೆಲವು ದೇಶದಲ್ಲಿ ಕರೋನಾದ ಎರಡನೇ ಹಂತ ಪ್ರಾರಂಭವಾಗಿದೆ. ಈ ಬಗ್ಗೆ ನಾವೆಲ್ಲರೂ ಎಚ್ಚರಿಕೆಯಿಂದ ಜೀವನ ಸಾಗಿಸೋಣ.ಕರೋನಾ ಮುಕ್ತ ಭಾರತವನ್ನಾಗಿಸಲು ಪ್ರಯತ್ನಿಸೋಣ. ರಾಘವೇಂದ್ರ ಪ್ರಭು,ಕವಾ೯ಲು, ಯುವ ಲೇಖಕ
