Updated News From Kaup
"ಆನ್ ಲೈನ್ ಆಫ್ ಲೈನ್ ಮಧ್ಯೆ ಮಕ್ಕಳು ಲೈನ್ ತಪ್ಪದಿರಲಿ"
Posted On: 10-07-2020 10:17PM
ಇತ್ತೀಚೆಗೆ ನಮ್ಮೆಲ್ಲರನ್ನು ಕಾಡುತ್ತಿರುವ ಆತಂಕ ಈ ಕರೋನಾ ವೈರಸ್ ನದ್ದು. ಈ ಮಾರಕ ವ್ಯಾಧಿಯ ಭೀತಿ ಜನಜೀವನದ ಶೈಲಿಯನ್ನು ಬದಲಾಯಿಸಿದೆ ಎಲ್ಲರನ್ನು ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗಿಸಿದೆ. ಇದರ ಮಧ್ಯೆ ದೊಡ್ಡ ಸವಾಲು ಇದ್ದದ್ದು ಶಿಕ್ಷಣ ಕ್ಷೇತ್ರಕ್ಕೆ ಶಾಲಾ ಕಾಲೇಜುಗಳ ಪರೀಕ್ಷೆಗಳಾಗಿಲ್ಲ ಎನ್ನುವ ಚಿಂತೆ ಪಾಲಕ, ಶಿಕ್ಷಕರನ್ನು ಕಾಡುತ್ತಿದೆ.ಶಿಕ್ಷಣವನ್ನು ಅತ್ಯಂತ ಸ್ಪಧಾ೯ತ್ಮಕವಾಗಿ ಸ್ವೀಕರಿಸಿದ ಮಕ್ಕಳು ಆತಂಕಕ್ಕೆ ಒಳಗಾದಾಗ ಈ ಕ್ಷೇತ್ರಕ್ಕೆ ತಂತ್ರಜ್ಞಾನದ ನೆರಳು ಬಿದ್ದಿದೆ.ಇದರ ಸಾಧಕ ಬಾಧಕದ ಬಗ್ಗೆ ಯೋಚನೆ ಮಾಡುದಾದರೆ, ಪಾಲಕರು ಮಕ್ಕಳ ಕೈಗೆ ಮೊಬೈಲ್ ನೀಡಿದರೆ ದಾರಿ ತಪ್ಪುವ ಭಯದಿಂದ ಮೊಬೈಲ್ ನೀಡಲು ಹಿಂದೆ ಮುಂದೆ ನೋಡುತ್ತಿದ್ದವರು ಇಂದು ಅವರೇ ಸ್ವತಃ ಮಕ್ಕಳ ಕೈಗೆ ಮೊಬೈಲ್ ನೀಡಿ ಸಣ್ಣ ಸ್ಕ್ರೀನ್ ಒಳಗೆ ತರಗತಿ ಪ್ರಾರಂಭವಾಗಿದೆ. ಈಗ ಪಾಲಕರ ಸಮಸ್ಯೆ ಎನೆಂದರೆ ಮಗುವಿನ ಕೈಗೆ ಮೊಬೈಲ್ ನೀಡಿ ಎದ್ದು ಹೋಗುವ ಹಾಗಿಲ್ಲ ಅವರ ಹತ್ತಿರ ಮೂರು ನಾಲ್ಕು ಗಂಟೆ ಕುಳಿತಿರಬೇಕಾದ ಅನಿವಾಯ೯ತೆ ಸೃಷ್ಟಿಯಾಗಿದೆ. ಇದರಿಂದ ಸಮಯಕ್ಕೆ ಸರಿಯಾಗಿ ಊಟ ತಿಂಡಿ ತಯಾರು ಮಾಡುವ ಸಾಧ್ಯತೆ ಕಡಿಮೆಯಾಗಿದೆ. ಶಾಲೆಯಲ್ಲಿ ಶಿಕ್ಷಕರು ಕರಿಹಲಗೆಯ ಮೇಲೆ ಬರೆದು ಮಗುವಿಗೆ ಶಿಕ್ಷಣ ನೀಡುವ ರೀತಿ ಶಿಕ್ಷಕರ ಮಾತೃ ವಾತ್ಸಲ್ಯದ ಪ್ರೀತಿ ತೋರುವ ಶಿಕ್ಷಣ ನಾವು ಆನ್ ಲೈನ್ ಶಿಕ್ಷಣದಲ್ಲಿ ಖಂಡಿತ ಕಾಣಲು ಸಾಧ್ಯವಿಲ್ಲ .ಈ ಯಾಂತ್ರಿಕ ಶಿಕ್ಷಣದಿಂದ ಗುರು ಶಿಷ್ಯರ ಸಂಬಂಧ ದೂರವಾಗುವ ಸಂಭವ ಹೆಚ್ಚಾಗುತ್ತಿದೆ.ಪಾಲಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸುವ ಉದ್ದೇಶ ತನ್ನಮಗುವಿನ ಭವಿಷ್ಯ ಉತ್ತಮವಾಗಲಿ ತಾನು ಪಟ್ಟ ಕಷ್ಟದ ಶಿಕ್ಷಣ, ಜೀವನ ತನ್ನ ಮಗ/ಮಗಳಿಗೆ ಸಿಗಬಾರದು ಎಂಬ ಉದ್ದೇಶವಾಗಿದೆ.ಖಾಸಗಿ ಶಾಲೆಗೆ ನೀಡುವ ಶುಲ್ಕ ಹೊಂದಾಣಿಕೆಗೆ ಪಾಲಕರು ಪಡುತ್ತಿರುವ ಕಷ್ಟ ದೇವರಿಗೆ ಪ್ರೀತಿ. ಇದೀಗ ಆನ್ ಲೈನ್ ಶಿಕ್ಷಣದಿಂದ ತನ್ನ ಮಕ್ಕಳಿಗೆ ಎಂಡ್ರಾಯಿಡ್ ಫೋನ್ ಅದೇ ರೀತಿ ಇಂಟರ್ ನೆಟ್ ಪ್ಯಾಕ್ ಹಾಕಬೇಕಾದ ಅನಿವಾಯ೯ತೆ ಯಿದೆ.ಶುಲ್ಕ ಕಟ್ಟಲು ಕಷ್ಟಪಡುವ ತಂದೆ ತಾಯಂದಿರಗೆ ಇದು ಬಿಸಿ ತುಪ್ಪವಾಗಿ ಪರಿಣಮಿಸಿದೆ. ಹೀಗಾಗಿ ಈ ಆನ್ ಲೈನ್ ವ್ಯವಸ್ಥೆಗೆ ಮತ್ತಷ್ಟು ಸಾಲ ಮಾಡುವ ಅನಿವಾಯ೯ತೆಯಿದೆ. ಮೊದಲೇ ಈ ಕರೋನಾ ಪರಿಣಾಮದಿಂದ ಜೀವನ ನಡೆಸುದೇ ಕಷ್ಟವಾಗಿರುವ ಪೋಷಕರು ವ್ಯಥೆ ಪಡಬೇಕಾಗಿದೆ. ನಮ್ಮ ಮನೆಯ ಹತ್ತಿರದ ಪಾಲಕರು ಹೇಳಿದ ಮಾತು ನೆನಪಿಗೆ ಬರುತ್ತದೆ ಮೊದಲೇ ಜೀವನ ನಡೆಸಲು ಸಾಲ ಮಾಡಬೇಕಾದ ಅನಿವಾಯ೯ತೆ ಇರುವ ನಾವು ಈ ಆನ್ ಲೈನ್ ನಿಂದ ದಿಕ್ಕೆ ತೋರದಿರುವ ದೋಣಿಯಾಗಿದ್ದೆವೆ" ಅವರ ಮಾತು ಎಷ್ಟೋ ಮಂದಿ ಪಾಲಕರಿಗೆ ಅನ್ವಯವಾಗುತ್ತದೆ.ಕೆಲವು ಖಾಸಗಿ ಶಾಲೆಗಳು ಇದನ್ನು ಹಗಲು ದರೋಡೆಯಾಗಿ ಮಾಡಿರುವುದು ಒಪ್ಪತಕ್ಕ ವಿಷಯವಲ್ಲ.ಸಕಾ೯ರಕ್ಕೆ ಈ ಬಗ್ಗೆ ಇರುವ ಗೊಂದಲ ಇನ್ನು ಸರಿಯಾಗಿಲ್ಲ. ಕಾಲೇಜಿಗೆ ಹೋಗುವ ಮಕ್ಕಳದ್ದು ಇನ್ನೊಂದು ಕಥೆ .ಅಪ್ಪ ಅಮ್ಮನ ಒತ್ತಾಯಕ್ಕೆ ಮಣಿದು ಕಂಪ್ಯೂಟರ್, ಲ್ಯಾಪ್ ಟಾಪ್ ತೆರೆದು ಆನ್ ಲೈನ್ ತರಗತಿಗೆ ಲಾಗಿನ್ ಮಾಡಿ ಕೂತರೂ ಪಾಠದಲ್ಲಿ ಏಕಾಗ್ರತೆಯಿಲ್ಲ ಮನ ಬಂದಂತೆ ಸಾಮಾಜಿಕ ಜಾಲ ತಾಣದ ಆನ್ವೇಷಣೆ ಯಲ್ಲಿ ಮಗ್ನರಾಗಿರುತ್ತಾರೆ ಎಂಬುದು ಬಹಳಷ್ಟು ಪಾಲಕರ ದೂರು.ತರಗತಿಯಲ್ಲಿಯೇ ಈ ಮನೋಭಾವದ ವಿದ್ಯಾಥಿ೯ ಯ ಕಡೆಗೆ ಗಮನ ಹರಿಸುದೇ ಕಷ್ಟವಾಗಿರುವಾಗ ಈ ಆನ್ ಲೈನ್ ನಲ್ಲಿ ಕೇವಲ ಕಾಟಚಾರಕ್ಕಾಗಿ ತರಗತಿ ಯಾಗುತ್ತಿದೆ ಎಂಬುವುದು ಉಪನ್ಯಾಸಕರ ವಾದ. ಈ ವಾದ ವಿವಾದದ ಮಧ್ಯೆ ಮಕ್ಕಳ ಮೇಲೆ ಈ ರೀತಿಯ ಶಿಕ್ಷಣ ಯಾವ ರೀತಿ ಪರಿಣಾಮ ಬೀಳುತ್ತದೆ ಎನ್ನುವುದು ಮುಖ್ಯವಾಗಿದೆ. ಶಾಲಾ ತರಗತಿಯೊಳಗೆ ಮೌನವಿರುತ್ತದೆ ಶಿಕ್ಷಕರು ಪಾಠ ಮಾಡುವ ಸಂದಭ೯ ವಿದ್ಯಾಥಿ೯ಗಳು ನೋಟ್ಸ್ ಮಾಡುವುದು ಮುಖ್ಯಾಂಶಗಳು ಗುರುತು ಹಾಕುವ ಸಂದಭ೯ ಅವರಿಗೆ ಮನನವಾಗುತ್ತದೆ. ಶಿಕ್ಷಕರ ಮೇಲಿನ ಗೌರವ, ಭಯದಿಂದ ಪಾಠವನ್ನು ಓದುತ್ತಾರೆ ಇದರಿಂದ ವಿದ್ಯಾಥಿ೯ಗಳಿಗೆ ಪರೀಕ್ಷಾ ದೃಷ್ಟಿಯಿಂದ ಅಲ್ಲದೆ ಸಾಂಪ್ರದಾಯಿಕ ಶಿಕ್ಷಣದ ದೃಷ್ಠಿಯಿಂದ ಒಳ್ಳೆಯದು. ಆದರೆ ಆನ್ ಲೈನ್ ನಲ್ಲಿ ಯಾವುದೇ ಸಂವಾದ ಚಚೆ೯ಯಿಲ್ಲದ ಏಕಮುಖ ಸಂವಹನವಾಗಿದೆ. ಕೇವಲ ಖಾಸಗಿ ಶಾಲೆಗಳಿಗೆ ಮಾತ್ರ ಈ ಅನ್ ಲೈನ್ ವ್ಯವಸ್ಥೆ ಯಾಕೆ ಸಕಾ೯ರಿ ಶಾಲೆಯ ವಿದ್ಯಾಥಿ೯ಗಳ ಬಗ್ಗೆ ಯಾಕೆ ಚಿಂತನೆಯಿಲ್ಲ ಎಂಬ ವಾದವೂ ಇದೆ. ಮಕ್ಕಳ ಹಕ್ಕುಗಳ ಆಂದೋಲನದ ಒತ್ತಾಯದ ಪ್ರಕಾರ: ಮಕ್ಕಳಿಗೆ ಉಚಿತ ಇಂಟರ್ ನೆಟ್ ನೀಡಬೇಕು. ಆರ್.ಟಿ.ಇ ವಿದ್ಯಾಥಿ೯ಗಳಿಗೆ ಉಚಿತ ಕಂಪ್ಯೂಟರ್ ವ್ಯವಸ್ಥೆ ನೀಡಬೇಕು. ಮಕ್ಕಳ ರಕ್ಷಣಾ ನಿಯಮಗಳನ್ನು ಜಾರಿಗೆ ತರಬೇಕು. ಶಿಕ್ಷಕರಿಗೆ ತರಬೇತಿಯ ವ್ಯವಸ್ಥೆಯಾಗಬೇಕು. ಮಕ್ಕಳ ಸ್ವಾತಂತ್ರಕ್ಕೆ ಧಕ್ಕೆಯಾಗಬಾರದು ಎಂಬ ಅಂಶಗಳನ್ನು ಸಕಾ೯ರಕ್ಕೆ ಸಲ್ಲಿಸಿದೆ. ಮತ್ತೊoದು ವಾದ ಪ್ರಕಾರ ಈಗೀರುವ ಪರಿಸ್ಥಿತಿಯಲ್ಲಿ ಶಾಲೆ ಕಾಲೇಜುಗಳನ್ನು ತೆರೆಯುವುದು ಸರಿಯಲ್ಲ. ಮಕ್ಕಳು ಸಮಾಜದ ಆಸ್ತಿ ಈ ಅಸ್ತಿಗೆ ಶಕ್ತಿ ತುಂಬಿಸುವ ಕಾಯ೯ ಶಿಕ್ಷಕರಿಂದ ನಡೆಯುತ್ತಿದೆ. ಎಲ್ಲರ ಹಿತದೃಷ್ಠಿಯಿಂದ ಈಗಿರುವ ಈ ಪರಿಸ್ಥಿತಿಯಲ್ಲಿ ಆನ್ ಲೈನ್ ಶಿಕ್ಷಣ ಒಳ್ಳೆಯದು ಆದರೆ ಈ ಬಗ್ಗೆ ಪೋಷಕರಿಗೆ ತಿಳಿ ಹೇಳುವುದು ಅಗತ್ಯವಿದೆ.ಹೊಸ ತನಕ್ಕೆ ಬದಲಾವಣೆ ಸಂದಭ೯ ಹಲವಾರು ತೊಂದರೆಯಿರುತ್ತದೆ ಆದರೆ ಅದೆಲ್ಲವನ್ನು ನಿವಾರಿಸಿ ಮುಂದೆ ಸಾಗಬೇಕು. ಮಕ್ಕಳ ಭವಿಷ್ಯದ ದೃಷ್ಠಿ ಯಿoದ ಇದು ಅಗತ್ಯವಿದೆ. ನಿರಾಸೆ ಬೇಡ ಆಶಾವಾದಿಯಾಗಿರೋಣ.ಶಾಲೆ ಕಾಲೇಜುಗಳು ವ್ಯಾಪಾರಿ ಮನೋಭಾವನೆ ಕಡಿಮೆ ಮಾಡಲಿ ಸಕಾ೯ರ ಈ ಬಗ್ಗೆ ಸ್ಪಷ್ಟ ನಿಧಾ೯ರ ತಿಳಿಸಲಿ .ಈ ಕರೋನಾದೊಂದಿಗೆ ಬದುಕುವ ಸಂದಭ೯ ಆಗುವ ತೊಂದರೆಗಳನ್ನು ಸಮಥ೯ವಾಗಿ ಎದುರಿಸೋಣ.ಮಕ್ಕಳ ಭವಿಷ್ಯ ಅದೇ ರೀತಿ ನಮ್ಮ ಭವಿಷ್ಯದ ಹಿತ ದೃಷ್ಠಿಯಿಂದ ಜಾಗ್ರತೆಯಾಗಿರೋಣ. ಅದಷ್ಟು ಬೇಗ ಈ ವ್ಯಾಧಿ ದೂರವಾಗಿ ಶಾಲೆ ಕಾಲೇಜುಗಳಲ್ಲಿ ಮಕ್ಕಳ್ಳ ಕಲರವ ಮತ್ತೊಂಮ್ಮೆ ಮೊಳಗಲಿ' ಭರವಸೆಯ ಹೊಸ ಬೆಳಕು ಮೂಡಲಿ.ಕಟ್ಟುವೆವು ನಾವು ಹೊಸ ನಾಡನ್ನು ಕಲೆಯ ಬೀಡನ್ನು ಎಂಬಂತೆ ಜೊತೆಯಾಗಿ ಬೆಳೆಯೋಣ. ರಾಘವೇಂದ್ರ ಪ್ರಭು, ಕವಾ೯ಲು ಉಡುಪಿ ಯುವ ಲೇಖಕರು, ಶಿಕ್ಷಣ ಪ್ರೀಯರು
ತುಳುನಾಡ ದೈವರಾಧಕರೆನ ಸಂಘಟನೆ ಒಡಿಪು ಜಿಲ್ಲೆದ ಪಡುಬಿದ್ರಿ ಘಟಕದ ಉದಿಪನದ ಲೇಸ್
Posted On: 10-07-2020 10:10PM
ಕಾಪು:(10/07/2020 ನಮ್ಮ ಕಾಪು ನ್ಯೂಸ್) ತುಳುನಾಡು ದೈವಾರಾಧಕೆರೆನ ಸಹಕಾರಿ ಒಕ್ಕೂಟ ಒಡಿಪು ಜಿಲ್ಲೆದ ಕಾಪು ಪಡುಬಿದ್ರಿ ಘಟಕದ ಉಚ್ಚಯ ಕಾಪು ವಿಧಾನ ಸಭಾ ವ್ಯಾಪ್ತಿದ ಕಳತ್ತೂರು ಪೈಯ್ಯಾರುದ ಬರ್ಪಾಣಿ ಶ್ರೀ ಧೂಮಾವತಿ ದೈವಸ್ದಾನದ ಅಂಗಣಡ್ ಈ ತಿಂಗಳುದ ಎಡ್ಮ ತಾರೀಖುದಾನಿ ನಡುತುಂಡು.. ಒಡಿಪು ಜಿಲ್ಲೆದ ದೈವದ ಚಾಕ್ರಿ ಮಲ್ಪುನಗುಲ್ ಬೊಕ್ಕ ತುಳು ನಾಡುದ ಸರ್ವ ಬಂಧುಲು ಮಾತ ಒಟ್ಟಾಯಿನ ಈ ಕೂಟಡ್ ಕಾಪು ಪಡುಬಿದ್ರಿ ಘಟಕದ ಅಧ್ಯಕ್ಷರಾದ್ ಯಶೋಧರ ಶೆಟ್ಟಿ ಬಗ್ಗೇಡಿ ಗುತ್ತು ಎರ್ಮಾಳು ಮಾತೇರ್ಗ್ ಲ ಒಮ್ಮತಡ್ ಅಯ್ಕೆ ಅಯೆರ್.. ಅರೆನೊಟ್ಟುಗೆ ಬೆರಿಸಾಯದ್ ಹಿರಿಯೆರ್ ಕಿರಿಯೆರ್ ಈ ಸಂಘಟನೆಗ್ ಪದಾಧಿಕಾರಿಲು ಅದ್ ಮುಲ್ಪ ಅಯ್ಕೆಯಾಯೆರ್.. ತುಳುನಾಡ ಅಚಾರ ವಿಚಾರದ ಬಗ್ಗೆ ಸಂಘಟನೆ ನನಾತ್ ಬುಲೆಯಡ್ ತುಳುನಾಡುದ ದೈವ ದೇವೆರೆನ ಅನುಗ್ರಹ ನಿಗಲೆನ ಮಿತ್ತ್ ಸದಾ ಉಪ್ಪಡ್.. ನಮ್ಮ ಕಾಪು ನ್ಯೂಸ್.
ಶಿರ್ವದಲ್ಲಿ ಕಾಣೆಯಾಗಿದ್ದ ಯುವತಿಯ ಮೃತದೇಹ ಬಾವಿಯಲ್ಲಿ ಪತ್ತೆ
Posted On: 10-07-2020 10:47AM
ಶಿರ್ವ.10, ಜುಲೈ : ಕ್ವಾಲಿಟಿ ಕೋಳಿ ಫಾರ್ಮ ಹಿಂದುಗಡೆ ಶಿರ್ವ ಗ್ರಾಮದಲ್ಲಿ ವಾಸವಾಗಿದ್ದ ಯಲಪ್ಪ ಇವರ ಮಗಳಾದ ಸೌಭಾಗ್ಯ 18 ವರ್ಷ ಈಕೆಯು ದಿನಾಂಕ 08/07/2020 ರ ಬುಧವಾರ ಬೆಳಿಗ್ಗೆ 10:00 ಗಂಟೆಗೆ ಶಿರ್ವ ಗ್ರಾಮದ ಕ್ವಾಲಿಟಿ ಪೌಲ್ಟ್ರಿ ಫಾರ್ಮ್ ಎಂಬಲ್ಲಿರುವ ಬಾಡಿಗೆ ಮನೆಯಿಂದ ಭೂತಬೆಟ್ಟು ಎಂಬಲ್ಲಿರುವ ಸಬಾಸ್ಟಿನ್ ಬರ್ಬೋಜ ಎಂಬವರ ಮನೆಗೆ ಹೋಗಿ ಬರುತ್ತೇನೆಂದು ಹೇಳಿ ಹೋದವಳು ಅಲ್ಲಿಗೂ ಹೋಗದೇ ವಾಪಾಸು ಮನೆಗೂ ಬಾರದೇ ಕಾಣೆಯಾಗಿರುತ್ತಾಳೆ, ಎಂದು ಶಿರ್ವ ಪೊಲೀಸ್ ಸ್ಟೇಷನ್ ನಲ್ಲಿ ದೂರು ದಾಖಲಿಸಿರುತ್ತಾರೆ, ದೂರಿನ ಅನ್ವಯ ಪರಿಶೀಲನೆ ನಡೆಸಿದಾಗ ಕಾಣೆಯಾಗಿದ್ದ ವ್ಯಕ್ತಿಯ ಮೃತ ದೇಹ ಮನೆಯ ವಠಾರದಲ್ಲಿರುವ ಬಾವಿಯಲ್ಲಿ ಪತ್ತೆಯಾಗಿದೆ, ಸಮಾಜ ಸೇವಕ ಸೂರಿ ಶೆಟ್ಟಿ ಅವರು ಮೃತ ದೇಹವನ್ನು ಬಾವಿಯಿಂದ ಹೊರ ತೆಗೆಯಲು ಸಹಕರಿಸಿದರು.
ಕಟೀಲು ದೇವಸ್ಥಾನದ ಎರಡು ಪ್ರತ್ಯೇಕ ಪ್ರಕರಣಗಳ ಆರೋಪ-ಆರೋಪಿತರಿಗೆ ನಿರೀಕ್ಷಣಾ ಜಾಮೀನು
Posted On: 09-07-2020 08:37PM
ಕಟೀಲು ದೇವಸ್ಥಾನದ ಅಸ್ರಣ್ಣರ ಆಡಳಿತ ವೈಫಲ್ಯದ ಬಗ್ಗೆ ಹಾಗೂ ಅಲ್ಲಿಯ ದೇವಸ್ಥಾನದ ವಿಧಿವಿಧಾನ, ಹಣಸಂದಾಯದ ದುರುಪಯೋಗ, ಮತ್ತಿತರ ಅವ್ಯವಹಾರಗಳ ಬಗ್ಗೆ ಸಾರ್ವಜನಿಕವಾಗಿ ಯೂಟ್ಯೂಬ್ ಪಬ್ಲಿಕ್ ಮಿರರ್ ಚಾನೆಲ್ ಮುಖಾಂತರ ಪ್ರಸಾರ ಮಾಡಿ ಕಟೀಲು ದೇವಸ್ಥಾನದ ಪ್ರಖ್ಯಾತಿ ಮತ್ತು ಧಾರ್ಮಿಕ ಭಾವನೆಗೆ ಧಕ್ಕೆ ತರುವ ರೀತಿಯಲ್ಲಿ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಿ ವಸಂತ ಗಿಳಿಯಾರ್, ಸಂಜೀವ ಮಡಿವಾಳ, ಮತ್ತು ಅನಂತ ರಾವ್ ರವರ ಮೇಲೆ ಮೂಲ್ಕಿ ಪೊಲೀಸ್ ಠಾಣೆ ಮತ್ತು ಬಜ್ಪೆ ಪೊಲೀಸ್ ಠಾಣೆಗಳಲ್ಲಿ ಎರಡು ಪ್ರತ್ಯೇಕ ಪ್ರಕರಣಗಳನ್ನು ರಾಜೇಶ್ ಕೊಟ್ಟಾರಿ ಮತ್ತು ಗಣೇಶ್ ಶೆಟ್ಟಿ ಅವರು ದಾಖಲಿಸಿದ್ದು, ಮಾನ್ಯ ಮೂರನೇ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರು ವಾದವನ್ನು ಆಲಿಸಿ ಯಾವುದೇ ಭಕ್ತಾದಿಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗಿರುವುದಿಲ್ಲವೆಂದು ಪರಿಗಣಿಸಿ ಎರಡು ಪ್ರಕರಣಗಳಲ್ಲಿಯೂ ನಿರೀಕ್ಷಣಾ ಜಾಮೀನನ್ನು ಮೂವರು ಆರೋಪಿತರಿಗೆ ಆದೇಶಿಸಿರುತ್ತಾರೆ. ಆರೋಪಿತರ ಪರವಾಗಿ ನ್ಯಾಯವಾದಿಗಳಾದ ಆರೂರು ಸುಕೇಶ್ ಶೆಟ್ಟಿ, ಗಿರೀಶ್ ಎಸ್.ಪಿ ಏಳಿಂಜೆ, ಸಂತೋಷ್ ಕುಮಾರ್ ಮೂಡುಬೆಳ್ಳೆ ವಾದಿಸಿದ್ದರು.
ಆನ್ಲೈನ್ ಶಿಕ್ಷಣ ವಿದ್ಯಾರ್ಥಿಗಳ ಜೀವನಕ್ಕೆ ದೊಡ್ಡ ಕಂಟಕ
Posted On: 09-07-2020 10:11AM
ರಾಜ್ಯ ಸರ್ಕಾರ ಯಾರದೋ ಒತ್ತಾಯಕ್ಕೆ ಮಣಿದು, ಬಡ ವಿದ್ಯಾರ್ಥಿಗಳ ಜೀವನವನ್ನು ಹಾಳು ಮಾಡಲು ಹೊರಟಿರುವ ಶಿಕ್ಷಣ ಯಾವತ್ತೂ ವಿದ್ಯಾರ್ಥಿಗಳ ವಿಕಸನಕ್ಕೆ ಅಡಿಪಾಯವಾಗದು.ಅದೆಷ್ಟೋ ಮನೆಯಲ್ಲಿ ಉಣ್ಣಲು ಗತಿ ಇಲ್ಲದೆ ಇರುವ ಕಡೆಯಲ್ಲಿ ಮಕ್ಕಳು ಮೊಬೈಲ್ ಲ್ಯಾಪ್ಟಾಪ್ ಹಿಡಿದು ವಿದ್ಯಾಭ್ಯಾಸ ಮಾಡಲು ಹೇಗೆ ಸಾಧ್ಯ? ಮಳೆಗಾಲದಲ್ಲಿ ಕೆಲವು ಕಡೆ ಇಂಟರ್ನೆಟ್ ತೊಂದರೆ ಇವುಗಳನ್ನು ಅರಿಯದೆ, ಇವತ್ತು ಹೈಕೋರ್ಟ್ ಕೊಟ್ಟ ತೀರ್ಪು ಸಮಂಜಸವಲ್ಲ. ಯಾವುದೋ ವಿದ್ಯಾಸಂಸ್ಥೆಗಳ ಒತ್ತಡಕ್ಕೆ ಮಣಿದು ಮಕ್ಕಳ ಭವಿಷ್ಯವನ್ನು ಹಾಳು ಮಾಡಲು ಹೊರಟಿರುವುದು ಖಂಡನೀಯ. ಈ ವಿಚಾರದ ಬಗ್ಗೆ ಇನ್ನೊಮ್ಮೆ ಚರ್ಚೆ ನಡೆಸಿ ಕೋರೋನ ಕಮ್ಮಿಯಾದ ಮೇಲೆ ಶಾಲೆಗಳನ್ನು ತೆರೆಯುವುದು ಒಳಿತು. ಇಲ್ಲವಾದಲ್ಲಿ ಉಗ್ರ ಹೋರಾಟಕ್ಕೆ ಸರ್ಕಾರ ದಾರಿ ಮಾಡಿಕೊಟ್ಟಂತ್ತಾಗುತ್ತೆ. ಕೆಲವು ದಂಧೆಕೋರರ ಹಣದ ಆಸೆಗೆ ಬಡ ಮಕ್ಕಳ ಜೀವನವನ್ನು ಬಲಿ ಕೊಡಬೇಡಿ.
ನಂಬಿ ಬಂದ ಭಕ್ತರ ಇಷ್ಟಾರ್ಥ ನೆರೆವೇರಿಸುವ ಕಾಪು ಸಾವಿರ ಸೀಮೆಯ ಒಡತಿ ಮಾರಿಯಮ್ಮ
Posted On: 07-07-2020 09:51PM
ಪುರಾತನ ಕಾಲದಿಂದಲೂ “ಹೂವಿನ ಹಿತ್ತಿಲು” ಎಂದೇ ಖ್ಯಾತಿಯನ್ನು ಪಡೆದಿರುವ ಕಾಪು ಸಾವಿರ ಸೀಮೆಯ ಒಡತಿ ಗದ್ದುಗೆಯನ್ನೇರಿ ಶರಣು ಬಂದ ಭಕ್ತರನ್ನು ತಥಾಸ್ತು ಎಂದು ಸದಾ ಹರಸುತ್ತಿರುವ ಶ್ರೀ ಮಾರಿಯಮ್ಮ ದೇವಿ. ಸೈಂದವ – ವೈದಿಕ ಸಂಸ್ಕೃತಿಗಳ ಸಮನ್ವಯವಾದ ಭಾರತೀಯ ಸಂಸ್ಕೃತಿಯ ಉಸಿರು ಜಾನಪದ ಮನೋಧರ್ಮ ಸಾನ್ನಿಧ್ಯವಿದೆ ಎಂದು ಪೂಜೆ ನಡೆಯುವುದಲ್ಲ, ಪೂಜೆ ನಡೆದಾಗ ಸಾನ್ನಿಧ್ಯವೊದಗುವುದೆಂಬುದು ಜಾನಪದ ನಂಬಿಕೆ. ಈ ಶ್ರದ್ಧೆಯ ಆಧಾರದಲ್ಲಿ ನಮ್ಮ ಧಾರ್ಮಿಕ ಆಚರಣೆ,ವಿಧಿ, ಕಟ್ಟಳೆಗಳು ಶತಮಾನಗಳಿಂದ ಸಾಗಿ ಬಂದು ಇಂದು ನಾವು ಕಾಣುವ ಸ್ವರೂಪದಲ್ಲಿದೆ, ಹಲವು ರೂಪಾಂತರಗಳನ್ನು ಹೊಂದಿದ್ದರೂ ಮೂಲವನ್ನು ಸುಪ್ತವಾಗಿ ತನ್ನಲ್ಲಿ ಬಚ್ಚಿಟ್ಟುಕೊಂಡಿವೆ. ವಿವಿಧ ಹಂತಗಳನ್ನು ದಾಟಿ ವಿಕಾಸ ಹೊಂದಿದ ಸ್ಥಿತಿಯಲ್ಲಿರುವ ಬಹುತೇಕ ಎಲ್ಲಾ ನಮ್ಮ ಆರಾಧನಾ ಪ್ರಕಾರಗಳು ಜಾನಪದ ಮೂಲಗಳಿಂದ ಪಡಿಮೂಡಿರುವವುಗಳೆಂಬುದು ಸಂಶೋಧಕರ, ಚಿಂತಕರ ಅಭಿಪ್ರಾಯ. ಈ ನಿಲುವಿನೊಂದಿಗೆ ಕರಾವಳಿ ಕರ್ನಾಟಕ, ಉಡುಪಿ ಜಿಲ್ಲೆಯ, ಕಾಪುವಿನ ಮಾರಿಯಮ್ಮ, ಮಾರಿ – ಮಾರಿಯಮ್ಮ- ಮಾರಿಯಮ್ಮದೇವರು ಎಂದು ನಿಷ್ಠಾಂತರಗೊಂಡು ಗದ್ದುಗೆ – ಗುಡಿ – ದೇವಸ್ಥಾನ ಸಂಕಲ್ಪಗಳಲ್ಲಿ ಕಾಣಿಸಿಕೊಂಡಿಡೆ. ಕೋಟೆ ಮನೆಯಲ್ಲಿ ’ಮಾರಿ’ ಮನೆ ದೇವರಾಗಿ ಪೂಜೆಗೊಳ್ಳುತ್ತಿದೆ. ಮಾರಿಗುಡಿಗಳಲ್ಲಿ ದರ್ಶನ ಆರಂಭಕ್ಕೆ ಮುನ್ನ ಹವಾಲ್ದಾರ್ ಪ್ರಾರ್ಥನೆ ನಡೆಸುತ್ತಾರೆ. ಮಂಗಳವಾರದ ಆಚರಣೆ ಮತ್ತು ಮಾರಿ ಪೂಜೆ ವಿಧಿಗಳನ್ನು ಸಂಪೂರ್ಣವಾಗಿ ನಿರ್ವಹಿಸುವುದು ಸೇರ್ವೆಗಾರ. ರಾಣ್ಯದವರೇ ಆಗಿದ್ದಾರೆ. ಇಲ್ಲಿ ಮಲ್ಲಿಗೆ ಹೂವಿನ ಪರಿಮಳ ಬರುವುದು ಹಾಗೂ ಕೋಟೆಯ ಒಳಗಿನ ನಂದಿಕೆರೆಯಲ್ಲಿ ಸ್ನಾನ ಮಾಡುವ ಸದ್ದು ಕೇಳಿ ಬರುವುದು ಜನರ ಗಮನಕ್ಕೆ ಬರುತ್ತದೆ. ಈ ಕುರಿತಂತೆ ಉಗ್ರಾಣಿಗೂ ಮಾಹಿತಿ ಲಭಿಸುತ್ತದೆ. ಹಾಗಾದರೆ ಇದೇನೆಂಬುದನ್ನು ಪರೀಕ್ಷಿಸಲು ಒಂದು ಮಂಗಳವಾರ ರಾತ್ರಿ ಉಗ್ರಾಣಿ (ಇವರು ಮುಸ್ಲಿಂ) ಕೋಟೆಗೆ ಬರುತ್ತಾರೆ. ನಿರ್ಜನ ಪ್ರದೇಶ, ಮಲ್ಲಿಗೆಯ ಪರಿಮಳ, ಸ್ನಾನ ಮಾಡುತ್ತಿರುವವರು ಹೆಂಗಸೆಂಬುದನ್ನು ಅರ್ಥೈಸಿಕೊಂಡು ಉಗ್ರಾಣಿ “ಯಾರಮ್ಮ.......ನೀವು “ ಎಂದು ಕರೆದುಕೊಳ್ಳುತ್ತಾರೆ. “ ನಾನು ಕೋಟೆಯ ಮಾರಿ “ ಎಂಬುದು ಕೆರೆಯಿಂದ ಬಂದ ಉತ್ತರ. ಕೋಟೆ ಈಗ ನಮಗಾಗಿದೆ ಎಂದು ಉಗ್ರಾಣಿ ಎಚ್ಚರಿಸಿದಾಗ “ ನನಗೆ ಬೇರೆ ನೆಲೆಯನ್ನು ತೋರಿಸಿಕೊಡು, ತೆರಳುತ್ತೇನೆ”ಎಂಬುದು ಮಾರಿಯ ಸೂಚನೆ.ಮುಸ್ಲಿಮನಿದ್ದೇನೆ ಹೇಗೆ ನೆಲೆಗೊಳಿಸಲಿ ಎಂದು ಉಗ್ರಾಣಿ ವಿನಂತಿಸಿಕೊಂಡಾಗ ನಾಲ್ಕು ಜಾತಿಯ ಜನರನ್ನು ಸೇರಿಸು ಎಂದು ಮಾರಿಯಿಂದ ಮಾರ್ಗದರ್ಶನ. ಮಾರಿಯ ಆದೇಶದಂತೆ ನಾಲ್ಕು ಜಾತಿಯ ಹತ್ತು ಸಮಸ್ತರ ಸಮ್ಮುಖದಲ್ಲಿ ಮಾರಿ ನೆಲೆಗೊಂಡು ಸೀಮಿತ ಜನ ವರ್ಗದಿಂದ ಪೂಜೆಗೊಳ್ಳುತ್ತಿದ್ದವಳು ಮುಂದೆ ಸಮುಷ್ಟಿಯ ಆರಾಧನಾ ಮೂರ್ತಿಯಾದಳು. ಗದ್ದಿಗೆ ಪೂಜೆ ಪ್ರಧಾನವಾಗಿರುವ ಮಾರಿಯಮ್ಮಳ ಸನ್ನಿಧಾನದಲ್ಲಿ ಕುಂಕುಮಾರ್ಚನೆ ಹೂವಿನ ಪೂಜೆ ಮುಂತಾದ ಸೇವೆಗಳು ಆಪಾರ ಸಂಖ್ಯೆಯಲ್ಲಿ ನಡೆಯುತ್ತದೆ. ಸಮಾಜದ ಎಲ್ಲಾ ವರ್ಗದ ಜನರು ಮಾರಿಕಾಂಬೆಯ ಸನ್ನಿಧಿಯಲ್ಲಿ ಪ್ರತಿ ಮಂಗಳವಾರ ನಡೆಯುವ ಅನ್ನಸಂತರ್ಪಣೆಯಲ್ಲಿ ಸಹಸ್ರ- ಸಹಸ್ರ ಸಂಖ್ಯೆಯಲ್ಲಿ ಭಕ್ತರು ಭಾವುಕರಾಗಿ ಪಾಲ್ಗೊಳ್ಳುತ್ತಾರೆ. ಮಾರಿಯಮ್ಮನ ಸನ್ನಿಧಾನದಲ್ಲಿ ವರ್ಷಕ್ಕೆ 3ಬಾರಿ ನಡೆಯುವ ಕಾಲಾವಧಿ ಮಾರಿಪೂಜೆಯು ಪರಶುರಾಮ ಸೃಷ್ಟಿಯ ತುಳುನಾಡಿನ 7 ಪ್ರಸಿದ್ಧ ಜಾತ್ರೆಗಳಲ್ಲಿ ಒಂದು ಎಂಬ ಖ್ಯಾತಿಯನ್ನು ಪಡೆದಿದೆ. ಸುಗ್ಗಿ, ಆಟಿ, ಜಾರ್ದೆ ಹೀಗೆ 3 ಬಾರಿ ನಡೆಯುವ ಕಾಲಾವಧಿ ಮಾರಿಪೂಜೆಯಲ್ಲಿ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಮತ್ತು ಮಲೆನಾಡು ಜಿಲ್ಲೆಗಳು ಮಾತ್ರವಲ್ಲದೆ, ದೂರದ ಮುಂಬಯಿಯಿಂದಲೂ ಜನ ಸಾಗರವೇ ಹರಿದು ಬರುತ್ತದೆ. ವರ್ಷಪ್ರತಿಯಂತೆ ಜರಗುವ ಶರನ್ನವರಾತ್ರಿ ಮಹೋತ್ಸವದ ಪ್ರಯುಕ್ತ ನವ ದಿನಗಳೂ ಆಕರ್ಷಕವಾಗಿರ ಬೇಕೆಂಬ ಅಭಿಲಾಷೆಯೊಂದಿಗೆ ಪ್ರತಿ ನಿತ್ಯವೂ ನಾನಾ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಶ್ರೀ ಮಾತೆಯ ಸನ್ನಿಧಾನದಲ್ಲಿ ಆಯೋಜಿಸಿಕೊಂಡು ಬರಲಾಗುತ್ತಿದೆ.ಇಲ್ಲಿ ಜರಗುವ ಚಂಡಿಕಾಯಾಗ, ಸಾಮೂಹಿಕ ಅನ್ನಸಂತರ್ಪಣೆ (ಭೂರಿ – ಭೋಜನ) ಮತ್ತು ಮಧ್ಯಾಹ್ನದ ಬಳಿಕ ನಡೆಯುವ ಶ್ರೀ ದೇವಿಯ ದರ್ಶನ ಸೇವೆಯು “ಕಾಪುದಪ್ಪೆ ಮಾರಿಯಮ್ಮನ” ಕ್ಷೇತ್ರದ ಮಹಿಮೆಯನ್ನು ಎಲ್ಲೆಡೆಗೂ ಪಸರಿಸುವಂತೆ ಮಾಡಿದೆ. ಶರದ್ ಋತು, ಅಶ್ವೀಜ ಮಾಸ, ಶುಕ್ಲ ಪಕ್ಷದ ಪ್ರಾರಂಭದಿಂದ 9 ದಿನಗಳನ್ನು ನವರಾತ್ರಿಯೆಂದೂ ಹತ್ತನೆಯ ದಿನವನ್ನು ವಿದ್ಯಾ ದಶಮಿ ಮತ್ತು ವಿಜಯ ದಶಮಿಯೆಂದೂ ಕರೆಯಲಾಗುತ್ತದೆ. ಪ್ರಕೃತಿ ಮಾತೆಯು ಮೈದುಂಬಿ ಮೆರೆಯುತ್ತಿರುವ ಸಂದರ್ಭದಲ್ಲಿ ಪ್ರಕೃತಿಯನ್ನೇ ದೇವಿಗೆ ಹೋಲಿಸಿ ಪೂಜಿಸುವ ಪುಣ್ಯ ಪರ್ವ ಕಾಲವೇ ಶರನ್ನವರಾತ್ರಿ. ನವರಾತ್ರಿ ಸಂದರ್ಭದಲ್ಲಿ ನವದುರ್ಗೆಯರನ್ನು 9 ದಿನಗಳ ಕಾಲ ಒಂದೊಂದು ಶಕ್ತಿ ಮಂತ್ರಗಳಿಂದ ಆವಾಹಿಸಿ ಪೂಜಿಸಲಾಗುತ್ತದೆ. 9 ದಿನಗಳಲ್ಲಿ ಆಚರಿಸಲ್ಪುಡುವ ಪೂಜಾ ವಿಧಿ ವಿಧಾನಗಳಲ್ಲಿ ಶ್ರೀ ದೇವಿಯನ್ನು ಆವಾಹನೆ, ಆಸನ, ಪಾದ್ಯ, ಆಚಮನೇಯ, ಸ್ನಾನ, ವಸ್ತ್ರ, ಧೂಪ, ದೀಪ, ನೈವೇದ್ಯ, ಪ್ರದಕ್ಷಿಣೆ, ನಮಸ್ಕಾರ, ಪ್ರಾರ್ಥನೆ ಹೀಗೆ ಷೋಢಷೋಪಾಚಾರಗಳಿಂದ ಪೂಜಿಸಿದಲ್ಲಿ ಶ್ರೀ ದೇವಿಯು ಕಷ್ಟವನ್ನು ಪರಿಹರಿಸಿ ಇಷ್ಟಾರ್ಥವನ್ನು ಕರುಣಿಸುವಳು ಎನ್ನುವುದು ಭಕ್ತರ ನಂಬಿಕೆಯಾಗಿದೆ. ಕೃಪೆ : WhatsApp
ಹಳೆ ತುಳು ಮುದ್ರಿತ ನಾಟಕ ಪುಸ್ತಕಗಳ ಸಂಗ್ರಾಹಕರು ಶ್ರೀ ಪ್ರಭಾಕರ್ ಕಲ್ಯಾಣಿ
Posted On: 07-07-2020 08:59PM
ಕಾಪು : ನಮ್ಮ ಕಾಪು ನ್ಯೂಸ್ (07/07/2020))ಉಡುಪಿ ಸಮೀಪದ ಪೆರ್ಡೂರಿನಲ್ಲಿ ಜನಿಸಿದ ಶ್ರೀ ಪ್ರಭಾಕರ ಕಲ್ಯಾಣಿ ಇವರು ರಂಗಭೂಮಿ ಕಲಾವಿದರಾಗಿದ್ದು,ತುಳು ಮುದ್ರಿತ ತುಳು ನಾಟಕ ಪುಸ್ತಕಗಳನ್ನು ಸಂಗ್ರಹಮಾಡುವ ಹವ್ಯಾಸವನ್ನು ಕಳೆದ ಹತ್ತು ವರ್ಷದಿಂದ ಮಾಡುತ್ತಿದ್ದಾರೆ...ಹಳೆಯ ಕಾಲದ ನಾಟಕದ ಪುಸ್ತಕ ಹಾಗೂ ಇತ್ತಿಚೀನ ತುಳು ನಾಟಕದ ಪುಸ್ತಕಗಳು ಇವರ ಪುಸ್ತಕ ಭಂಡಾರದಲ್ಲಿದೆ.. ಶ್ರೀ ಪ್ರಭಾಕರ್ ಕಲ್ಯಾಣಿ ಇವರ ತಂದೆ ದಿ/ ಪಿ ರಾಮಕೃಷ್ಣ ಕಲ್ಯಾಣಿ ರಂಗಭೂಮಿಯಲ್ಲಿ ಹಾಸ್ಯ ಕಲಾವಿದರಾಗಿ ಮಿಂಚಿದ್ದು ತಂದೆಯ ಬಹುಕನಸಿಗೆ ಅವರ ಅದರ್ಶದಂತೆ ರಂಗಭೂಮಿಯಲ್ಲಿ ಅತೀವ ಸಾಧನೆಗೈದವರು.. ಶ್ರೀ ಪ್ರಭಾಕರ್ ಕಲ್ಯಾಣಿ ಇವರ ಸಾಧನೆಗೆ ಒಲಿದ ಸನ್ಮಾನಗಳು.. ಕನ್ನಡ ವಿಶ್ವ ವಿದ್ಯಾಲಯ ಹಂಪಿ ಇವರ ತುಳು ನಾಟಕದ ಪುಸ್ತಕದ ಸಂಶೋಧನೆಯಲ್ಲಿ ತುಳು ಸಾಂಕಿತ್ಯ ಚರಿತ್ರೆ ಎಂಬ ಪುಸ್ತಕದಲ್ಲಿ ಇವರ ಹೆಸರು ನಮೂದಿಸಿರುತ್ತಾರೆ.. ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಶ್ತಿ,ವಿಜಯ ಬ್ಯಾಂಕ್ ಬೆಂಗಳೂರು ನೀಡುವ ವಿಜಯಶ್ರಿ ಪ್ರಶಸ್ತಿ ಪಡೆದಿರುತ್ತಾರೆ.. ವೃತ್ತಿಯಲ್ಲಿ ವಿಜಯ ಬ್ಯಾಂಕ್ ಉದ್ಯೋಗಿಯಾಗಿ ಇತೀಚೆಗೆ ನಿವೃತ್ತಿ ಹೊಂದಿರುವ ಇವರು ಊರಿನ ಹಲವಾರು ಸಂಘ ಸಂಸ್ಥೆಗಳಲ್ಲಿ ಸನ್ಮಾನಿತಗೊಂಡ ಇವರ ಕುಟುಂಬದ ಸದಸ್ಯರೂ ಕೂಡ ಮುಖಕ್ಕೆ ಬಣ್ಣ ಹಚ್ಚಿ ರಂಗಭೂಮಿಯಲ್ಲಿ ನಿರತವಾಗಿರುವುದು ನಿಜಕ್ಕೂ ಹೆಮ್ಮೆ.. ಬೆಂಗಳೂರು ದೂರದರ್ಶನದ ಚಂದನ ವಾಹಿನಿಯಲ್ಲಿ ಬೆಳಗು ಎಂಬ ಕಾರ್ಯಕ್ರಮದಲ್ಲಿ ಸಂದರ್ಶನ ಹೀಗೆ ಶ್ರೀ ಪ್ರಭಾಕರ್ ಕಲ್ಯಾಣಿ ಇವರ ಬಗ್ಗೆ ಬರೆದಷ್ಷು ಮುಗಿಯದು.. ಶ್ರೀ ಪ್ರಭಾಕರ್ ಕಲ್ಯಾಣಿಯವರ ಅಭಿರುಚಿಯ ಹಳೆಯ ತುಳು ನಾಟಕದ ಪುಸ್ತಕವಿದ್ದಲ್ಲಿ ನೀಡಿ.. ಅವರ ಮೊಬೈಲ್ ಸಂಖ್ಯೆ ಈ ರೀತಿ ಇದೆ.. 9945491572 ಧನ್ಯವಾದಗಳು ಬರಹ: ಯು.ಕೆ ಕಳತ್ತೂರು
ಕೊರೋನಾದೊಂದಿಗೆ ಬದುಕು ಮಿತವಾಗಿರಲಿ - ರಾಘವೇಂದ್ರ ಪ್ರಭು ಕರ್ವಾಲು
Posted On: 07-07-2020 07:16PM
ಕೊರೊನಾ ಎಂಬ ಈ ಹೆಸರು ಕೇಳಿದರೆ ಈಡೀ ವಿಶ್ವವೇ ಗಾಬರಿಯಾಗುವ ಪರಿಸ್ಥಿತಿಯಿದೆ. ಸೋಂಕಿತರ ಪ್ರಮಾಣ ಹೆಚ್ಚಿದರೂ ಈವರೆಗೆ ಸರಿಯಾದ ಮದ್ದು ಬಂದಿಲ್ಲ.ಉದ್ಯಮಿಯಿಂದ ಕೂಲಿ ಕಾಮಿ೯ಕರಿಗೆ ಅದೇ ರೀತಿ ಶ್ರೀಮಂತರಿಂದ ಬಡವವರಿಗೂ ಯಾರನ್ನು ಬಿಟ್ಟಿಲ್ಲ ಹೀಗಾಗಿ ಈಗ ಎಲ್ಲರೂ ಸಮಾನ ದುಃಖಿಗಳಾಗುವ ಪರಿಸ್ಥಿತಿ ಎದುರಾಗಿದೆ. ಸಕಾ೯ರಗಳು ಯಾವುದೇ ರೀತಿಯ ಕ್ರಮಗಳನ್ನು ಕೈಗೊಂಡರೂ ನಾವೆಲ್ಲರೂ ಜೀವ ಮತ್ತು ಜೀವನದ ಈ ಹೋರಾಟದಲ್ಲಿ ಗೆದ್ದು ಬರಬೇಕಾಗಿದೆ ಹೀಗಾಗಿ ಇನ್ನು ಮುಂದೆ ನಾವು ಸಿಂಪಲ್ಲಾಗಿ ಜೀವನದ ಚಕ್ರವನ್ನು ಓಡಿಸಬೇಕಾಗಿದೆ. ದುಂದು ವೆಚ್ಚ ಬೇಡ: - ಮದುವೆ ಸಮಾರಂಭ' ಪಾಟಿ೯ ಚಿನ್ನಾಭರಣ ಅಗತ್ಯಕ್ಕಿಂತ ಹೆಚ್ಚು ಹೆಚ್ಚು ಖಚು೯ ಮಾಡದೆ ಜೀವನ ಸಾಗಲಿ ಗೆಳೆಯರೇ, ಸರಳವಾದ ಕಾಯ೯ಕ್ರಮ ಮಾಡೋಣ: - ಹಬ್ಬ ಹರಿದಿನಗಳು'ಶುಭ ಸಮಾರಂಭ' ಭೂರಿ ಬೋಜನ, ಅಲಂಕಾರ ಮುಂತಾದ ಕಾಯ೯ಗಳನ್ನು ಸರಳವಾಗಿ ಮಾಡೋಣ. ಧಾಮಿ೯ಕ ಕಾಯ೯ಕ್ರಮ : - ಪೂಜೆ, ಪುನಸ್ಕಾರ ಜಾತ್ರೆ ಮುಂತಾದ ಧಾಮಿ೯ಕ ಕಾಯ೯ಗಳನ್ನು ಸರಳವಾಗಿ ಮಾಡಲು ಸಾಧ್ಯ .ಹೀಗಾಗಿ ಖಚು೯ ಕಡಿಮೆ ಇರಲಿ ಭಕ್ತಿ ಹೆಚ್ಚಿರಲಿ. ಸಕಾ೯ರಿ ಶಾಲೆಗಳತ್ತ ಗಮನ ನೀಡೋಣ : - ಇಂದು ನಮ್ಮ ಪ್ರತಿಷ್ಟೆಯ ಪಣದಿಂದ ನಾವು ಹೆಚ್ಚಿನವರು ಲಕ್ಷಾ೦ತರ ರೂಪಾಯಿ ಶುಲ್ಕ ನೀಡಿ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ದಾಖಲಾತಿ ಮಾಡುತ್ತೇವೆ .ಯಾಕೆ ನಾವು ನಮ್ಮ ಮಕ್ಕಳನ್ನು ಸಕಾ೯ರಿ ಶಾಲೆಗಳಿಗೆ ಸೇರಿಸಬಾರದು ಯೋಚನೆ ಮಾಡೋಣ ಅತೀ ಕಡಿಮೆ ಶುಲ್ಕದಲ್ಲಿ ಶಿಕ್ಷಣ ಪಡೆಯಲು ಸಾಧ್ಯ. ಸ್ವದೇಶಿ ವಸ್ತುಗಳಿಗೆ ಆದ್ಯತೆ ನಿಡೋಣ : -ಪ್ರಧಾನಿಯವರು ಕರೆ ನೀಡಿದಂತೆ ಮೊಕಲ್ ಫಾರ್ ಲೋಕಲ್ ಎಂಬಂತೆ ವಿದೇಶಿ ವಸ್ತುಗಳ ಬಳಕೆ ಕಡಿಮೆ ಮಾಡೋಣ .ನಮ್ಮ ದೇಶದಲ್ಲಿ ಅದರಲ್ಲಿಯೂ ನಮ್ಮ ಹಳ್ಳಿಯಲ್ಲಿ ತಯಾರಾಗುವ ವಸ್ತುಗಳನ್ನು ಖರೀದಿ ಮಾಡಿ ಅದಕ್ಕೆ ಪ್ರೋತ್ಸಾಹ ನೀಡೋಣ ಇದರಿಂದ ದೇಶದಲ್ಲಿ ನಮ್ಮ ಖರೀದಿಯಿಂದ ಹೊಸ ಉದ್ಯೋಗ ಸೃಷ್ಠಿಯಾಗಲು ದಾರಿಯಾಗುತ್ತದೆ. ಯಾಕೆ ನಾವೆಲ್ಲರೂ ಈ ನಿಟ್ಟಿನಲ್ಲಿ ಮುನ್ನುಡಿ ಬರೆಯಬಾರದು? ತಿಂಗಳ ಖಚು೯ ಕಡಿಮೆ ಮಾಡಿ: ಹೆಚ್ಚಿನವರಿಗೆ ನಿತ್ಯ ಪೇಟೆಗೆ ಹೋಗಿ ಏನಾದರೂ ವಸ್ತುವನ್ನು ಅಗತ್ಯವಿಲ್ಲದಿದ್ದರೂ ಖರೀದಿ ಮಾಡುವುದು ರೂಡಿಯಾಗಿದೆ ಇದರಿಂದ ನಮ್ಮ ಆಧಾಯದ ದೊಡ್ಡ ಪಾಲು ನಷ್ಟವಾಗುತ್ತದೆ. ಹೀಗಾಗಿ ಖಚು೯ ಬದಲು ಉಳಿತಾಯ ಮಾಡೋಣ. ಮಿತವಾಗಿ ಬಳಸಿ: - ನೀರು,ವಿದ್ಯುತ್, ಇಂಧನ ಮುಂತಾದ ನೈಸಗಿ೯ಕ ಸಂಪನ್ಮೂಲಗಳ ಬಳಕೆ ಕಡಿಮ ಇರಲಿ .ಕಾರಿನ ಬದಲು ಬೈಕ್ ಇರಲಿ ಯಾಕೆಂದರೆ ನಾವು ಇದರಿಂದಾಗಿ ಬಹಳಷ್ಟು ಇಂಧನ ಉಳಿಸಬಹುದಾಗಿದೆ. ಕಚೇರಿಗಳಿಗೆ ಖಾಸಗಿ ಕೆಲಸಕ್ಕೆ ನಿತ್ಯ ಸ್ವಂತ ವಾಹನದಲ್ಲಿ ಓಡಾಡುದಕ್ಕೆ ದಿನಕ್ಕೆ 400 - 500 ರೂ.ಖಚು೯ ಮಾಡುವರಿದ್ದಾರೆ ಹೀಗಾಗಿ ಇದನ್ನ ಉಳಿಸಲು ಸಕಾ೯ರಿ ಸಾರಿಗೆ ಬಳಕೆ ಮಾಡೋಣ ಇದರಿಂದಾಗಿ ಇಂಧನಕ್ಕಾಗಿ ಖಚು೯ ಮಾಡುವ ಮೊತ್ತವನ್ನು ಉಳಿಸಬಹುದಾಗಿದೆ. ಮನೆಯಲ್ಲಿ ತಿಂಡಿ ತಿನಸು ತಯಾರಿಸೋಣ .. :- ಪ್ರತಿಯೊಂದಕ್ಕೆ ಹೊಟೇಲ್ ಗೆ ಕಾಯುವ ಸ್ಥಿತಿ ನಮಗೆ ಬೇಡ ನಮಗೆ ಬೇಕಾದ ಅಡುಗೆಯನ್ನು ನಾವು ತಯಾರಿಸಿದರೆ ಉತ್ತಮ ಆರೋಗ್ಯ ಅಲ್ಲದೆ ಹಣವನ್ನು ಉಳಿಸ ಬಹುದಾಗಿದೆ. ಮನೆಗೆ ಬೇಕಾದ ತರಕಾರಿ ನಾವು ಬೆಳೆಸೋಣ . - ಪ್ರತಿಯೊಂದು ತರಕಾರಿಗೆ ಮತ್ತೊಬ್ಬರನ್ನು ಅವಲಂಬಿಸುದನ್ನು ಬಿಟ್ಟು ನಮ್ಮ ಮನೆಗೆ ಬೇಕಾದ ತರಕಾರಿ ಯಾಕೆ ನಾವು ಬೆಳೆಸಬಾರದು. ಪ್ಲಾಟ್ ನಲ್ಲಿ ವಾಸ ಮಾಡುವವರು ಗೋಣಿ ಚೀಲದಲ್ಲಿ ತರಕಾರಿ ಮಾಡಬಹುದು. ಕಿಚನ್ ಗಾಡ೯ನ ಮಾಡುದರಿಂದ ಮಾನಸಿಕ ನೆಮ್ಮದಿ, ವ್ಯಾಯಾಮ ಅದೇ ರೀತಿ ತರಕಾರಿಗೆ ತಿಂಗಳಲ್ಲಿ ಖಚು೯ ಮಾಡುವ ಸಾವಿರಾರು ರೂ. ಉಳಿತಾಯ ಮಾಡಬಹುದು. ಹೈನುಗಾರಿಕೆ, ಮಲ್ಲಿಗೆ ಬೇಸಾಯ ಮಾಡಿದರೆ ಮನೆಯ ಖಚು೯ ಇದರಿಂದ ಗಳಿಸಬಹುದು. ದುಶ್ಚಟದಿ೦ದ ದೂರ ಸಾಗೋಣ : - ಮಧ್ಯಪಾನ, ಬೀಡಿ ಸಿಗರೇಟ್ ಇತ್ಯಾದಿ ಚಟದಿಂದ ವಿಮುಕ್ತಿಯಾಗಬೇಕು. ಇತ್ತಿಚೆಗೆ ಡೌನ್ ಸಮಯದಲ್ಲಿ ಮಧ್ಯ ಬಂದ್ ಆಗಿತ್ತು ನಂತರ ದ ದಿನದಲ್ಲಿ ಓಪನ್ ಆದಾಗ ಜನರು ಚೀಲ ಹಿಡಿದು ನೂರಾರು ಮೀಟರ್ ಸರದಿ ಸಾಲಲ್ಲಿ ಕಾದು ಮಧ್ಯ ಪಡೆದ ಉದಾ : ನಮ್ಮ ಮುಂದೆ ಇದೆ ಹೀಗಾಗಿ ಈ ಚಟ ಕೆ ಹಾಕುವ ಹಣವನ್ನು ಆರೋಗ್ಯಕ್ಕೆ ಬಳಕೆ ಮಾಡೋಣ. ತಿಂಗಳ ಬಜೆಟ್ ಮಾಡಿ ಅ ದರಂತೆ ಜೀವನ ಸಾಗಿಸೋಣ: - ಯಾವ ರೀತಿ ಕಂಪೆನಿಗಳು ಸಕಾ೯ರ ಬಜೆಟ್ ಮಾಡುತ್ತಾವೆ ಯೋ ಅದೇ ರೀತಿ ನಾವು ತಿಂಗಳ ಆಧಾಯ ಮತ್ತು ಖಚು ೯ ಪಟ್ಟಿ ತಯಾರಿಸಿ ಅದರಂತೆ ಕಾಯ೯ ನಿವ೯ಹಿಸೋಣ. ಈ ರೀತಿ ಮಾಡಿದಾಗ ಅನಾವಶ್ಯಕ ಖಚು೯ಗಳಿಗೆ ಬ್ರೇಕ್ ಹಾಕಬಹುದು. ಅಲ್ಲದೆ ಉಳಿತಾಯವನ್ನು ಮೊದಲು ಮಾಡಿ ನಂತರ ಖಚಿ೯ನ ಬಾಪ್ತಿಗೆ ಹಣ ಹೊಂದಾಣಿಕೆ ಮಾಡಬಹುದು. ಸುಂದರ ಜೀವನಕ್ಕೆ ಬಜೆಟ್ ದಾರಿಯಾಗಲು ಸಾಧ್ಯ. ಸಕಾ೯ರದ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಿ:- ಸಕಾ೯ರ ದ ವಿವಿಧ ಯೋಜನೆಗಳು ಕೇವಲ ಕಾಗದ ಪತ್ರಗಳಿಗೆ ಸೀಮಿತವಾಗಿದೆ ಇದರ ಪ್ರಯೋಜನ ನಾವು ಕಾನೂನು ನಿಯಮಗಳಿಗೆ ಒಳಪಟ್ಟು ಪಡೆಯಬೇಕು. ಉದಾ..ಆಯುಷ್ಮಾನ್ ಭಾರತ, ಉಜ್ವಲ ,ಪಡಿತರ ಯೋಜನೆಗಳ ಲಾಭ ಪಡೆಯಬೇಕು. ಬ್ಯಾಂಕ್ ಖಾತೆಯನ್ನು ಹೊಂದುವ ಮೂಲಕ ಈ ಯೋಜನೆಯನ್ನು ಪಡೆಯಬಹುದು. ಪಡಿತರದ ದುರುಪಯೋಗ ಮಾಡದೆ ಇದನ್ನು ಸದ್ಬಳಕೆ ಮಾಡಬೇಕು. ಉಳಿತಾಯಕ್ಕೆ ಇರುವ ದಾರಿಯನ್ನು ಹುಡುಕಿ :- ಈ ಕೊರೋನಾ ನಮಗೆ ಉಳಿತಾಯದ ಮಹತ್ವ ತಿಳಿಸಿದೆ. ನಮ್ಮ ಉಳಿತಾಯವನ್ನು ಸುರಕ್ಷಿತ ಯೋಜನೆಯಲ್ಲಿ ತೊಡಗಿಸಬೇಕು. ಉದಾ.. ಜೀವವಿಮೆ, ಅಂಚೆ ಕಚೇರಿ, ಬ್ಯಾಂಕ್ ಮುಂತಾದ ಸಂಸ್ಥೆಯಲ್ಲಿ ಲಭ್ಯವಿರುವ ಉಳಿತಾಯ ಯೋಜನೆಯಲ್ಲಿ ಹಣ ತೊಡಗಿಸಬೇಕು ಇದರಿಂದ ನಮ್ಮ ಹಣಕ್ಕೆ ಸರಿಯಾದ ಮೌಲ್ಯ ಸಿಗಲು ಸಾಧ್ಯ.ಬಡ್ಡಿಯ ಆಸೆಗೆ ಬೇರೆ ಅಸುರಕ್ಷಿತ ಮೂಲದಲ್ಲಿ ಉಳಿತಾಯ ಹೊಡಿಕೆ ಮಾಡಿದರೆ ನಮ್ಮ ಹಣ ಮತ್ತೊಬ್ಬರ ಪಾಲಾಗಬಹುದು. ಸ್ವಉದ್ಯೋಗಕ್ಕೆ ಗಮನ ನೀಡಿದರೆ ನಾವು ಹಲವಾರು ಜನರಿಗೆ ಉದ್ಯೋಗ ನೀಡಬಹುದು. ಉದಾ. ಹೈನುಗಾರಿಕೆ, ಕೃಷಿ ಸಂಬಂಧಿಸಿದ ಕೈಗಾರಿಕೆಗಳು ಕೃಷಿಯನ್ನು ಸಕಾ೯ರದಿಂದ ಲಭಿಸುವ ಬಾಡಿಗೆ ಆಧಾರಿತ ಯಂತ್ರ ಗಳ ಮೂಲಕ ಆಧುನಿಕ ಮಾದರಿಯಲ್ಲಿ ಮಿಶ್ರ ಬೆಳೆ ಕೃಷಿ ಮಾಡಿದರೆ ಉತ್ತಮ ಲಾಭ ಗಳಿಸಲು ಸಾಧ್ಯ. ಅಲ್ಲದೆ ನಾವು ಬೆಳೆದ ವಸ್ತುಗಳನ್ನು ನಾವೇ ಮಾರಾಟ ಮಾಡಿದಾಗ ಉತ್ತಮ ಬೆಲೆ ಸಿಗಲು ಸಾಧ್ಯ.ಈಗಾಗಲೇ ಎ.ಪಿ.ಎಂಸಿಯಲ್ಲಿ ಯಾರು ಬೇಕಾದರೂ ತಮ್ಮ ಕೃಷಿ ವಸ್ತುವನ್ನು ಮಾರಾಟ ಮಾಡಲು ಸಕಾ೯ರ ಅವಕಾಶ ನೀಡಿದೆ. ಅದೇ ರೀತಿ ಸಾಮಾಜಿಕ ಜಾಲ ತಾಣಗಳ ಬಳಕೆ ಮಾಡಿಯೂ ವಿವಿಧ ರೀತಿಯ ವಸ್ತುಗಳನ್ನಾ ಮಾರಾಟ ಮಾಡುವ ವ್ಯವಹಾರ ಮಾಡಬಹುದು.ಡೋರ್ ಡೆಲಿವರಿ ವ್ಯವಹಾರ, ಹೊಸ ತನದ ವ್ಯವಹಾರವು ಮುಂದೆ ಹೊಸ ಬದುಕು ಸಾಗಿಸಲು ಪ್ರೇರಣೆ ಒದಗಿಸಲು ಸಾಧ್ಯವಾಗಬಹುದು. ಈ ಕೊರೋನಾ ನಮಗೆ ಮತ್ತಷ್ಟು ಎತ್ತರಕ್ಕೆ ಬೆಳೆಯಲು ಅವಕಾಶ ನೀಡಿದೆ.ಕವಿ ವಾಣಿಯoತೆ ನಡೆ ಮುoದೆ ನಡೆ ಮುಂದೆ ನುಗ್ಗಿ ನಡೆ ಮುಂದೆ " ಎಂಬಂತೆ ಜೀವನಕ್ಕಾಗಿ ಹೋರಾಟ ನಡೆಸಿ ಕರೋನಾದೊಂದಿಗೆ ಸಾಗೋಣ. ರಾಘವೇಂದ್ರ ಪ್ರಭು,ಕವಾ೯ಲು ಯುವ ಲೇಖಕ, ವೈದ್ಯಕೀಯ ಪ್ರತಿನಿಧಿ
ಉಡುಪಿ : ಆಯುಷ್ಮಾನ್ ಕಾರ್ಡ್ ಇದ್ದಲ್ಲಿ ಖಾಸಗಿ ಆಸ್ಪತ್ರೆಯಲ್ಲೂ ಕೊರೊನ ಚಿಕಿತ್ಸೆ
Posted On: 07-07-2020 07:03PM
ಉಡುಪಿ ಜುಲೈ 7 (ಕರ್ನಾಟಕ ವಾರ್ತೆ): ರಾಜ್ಯ ಸರಕಾರದ ಆದೇಶದಂತೆ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ, ಖಾಸಗಿ ಆಸ್ಪತ್ರೆಗಳಲ್ಲಿ ಸಹ ಕೋವಿಡ್ 19 ಸೋಂಕಿತರು ಚಿಕಿತ್ಸೆಯನ್ನು ಪಡೆಯಬಹುದಾಗಿದ್ದು, ಇದಕ್ಕಾಗಿ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ಹೊಂದಿರಬೇಕಾಗುತ್ತದೆ. ಇದನ್ನು ಬಿಪಿಎಲ್, ಎಪಿಎಲ್ ಹಾಗೂ ಕಾರ್ಡ್ ಇಲ್ಲದವರು ಸಹ ಸೇರಿದಂತೆ, ವಿವಿಧ ಸರ್ಕಾರಿ ನೌಕರರಿಗೆ ಈ ಕಾರ್ಡ್ ಪಡೆಯಲು ಅವಕಾಶವಿರುತ್ತದೆ. ಆದ್ದರಿಂದ ಸಾರ್ವಜನಿಕರು ಸದರಿ ಯೋಜನೆಯ ಸದುಪಯೋಗ ಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ. ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ ಮಾಡಿಸಿಕೊಳ್ಳಲು, ನಿಮ್ಮ ಹತ್ತಿರದ ಸೇವಾ ಸಿಂಧು ಕೇಂದ್ರದಲ್ಲಿ ಕಾಗದದ ಪ್ರತಿ 10 ರೂ ಹಾಗೂ ಸ್ಮಾರ್ಟ್ ಕಾರ್ಡ್ ಪ್ರತಿಗೆ 35 ರೂ ಪಾವತಿಸಿ ಪಡೆದುಕೊಳ್ಳಬಹುದು, ಹೆಚ್ಚಿನ ಮಾಹಿತಿಗಾಗಿ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಂಪರ್ಕಿಸುವAತೆ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಉಡುಪಿ ಜಿಲ್ಲಾ ಸರ್ಕಾರಿ ಕೋವಿಡ್ ಲ್ಯಾಬ್ ಕಾರ್ಯ ನಿರ್ವಹಣೆಗೆ ಸಿದ್ದ
Posted On: 07-07-2020 04:54PM
ಉಡುಪಿ ಜುಲೈ 7 (ಕರ್ನಾಟಕ ವಾರ್ತೆ): ಜಿಲ್ಲೆಯಲ್ಲಿ ಕೋವಿಡ್-19 ಪ್ರಕರಣಗಳನ್ನು ಪತ್ತೆ ಹಚ್ಚಲು , ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಸರ್ಕಾರಿ ಕೋವಿಡ್ ಲ್ಯಾಬ್ ನಿರ್ಮಾಣದ ಕಾರ್ಯ ಸಂಪೂರ್ಣಗೋಂಡಿದ್ದು, ಯಾವುದೇ ಸಮಯದಲ್ಲಿ ಅಧಿಕೃತವಾಗಿ ತನ್ನ ಪರೀಕ್ಷಾ ಕಾರ್ಯ ಆರಂಭಿಸಲಿದೆ. ಇದರಿಂದ ಜಿಲ್ಲೆಯ ಕೋವಿಡ್ ಶಂಕಿತರ ಗಂಟಲು ದ್ರವದ ಪರೀಕ್ಷೆಯನ್ನು ಇತರೆ ಜಿಲ್ಲೆಗಳಿಗೆ ಕಳುಹಿಸುವ ಅಗತ್ಯ ಇಲ್ಲವಾಗಲಿದ್ದು, ಜಿಲ್ಲೆಯಲ್ಲಿ ಪ್ರಕರಣಗಳ ವರದಿ ಇಲ್ಲಿಯೇ ಪಡೆಯಲು ಸಾಧ್ಯವಾಗಲಿದೆ. ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್-19 ಲ್ಯಾಬ್ ನಿರ್ಮಾಣಕ್ಕೆ 1 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಪ್ರಯೋಗಾಲಯ ಯಂತ್ರಗಳು ಮತ್ತು ಉಪಕರಣಗಳ ಸರಬರಾಜು ಅಗಿದ್ದು, ಲ್ಯಾಬ್ ನಿರ್ಮಾಣದ ಕಟ್ಟಡದ ಕಾಮಗಾರಿಗೆ 45 ಲಕ್ಷ ರೂ ವೆಚ್ಚವಾಗಿದೆ, ಪ್ರಯೋಗಾಲಯದಲ್ಲಿ ಕಾರ್ಯ ನಿರ್ವಹಿಸಲು 1 ಮೈಕ್ರೋ ಬಯೋಲಜಿಸ್ಟ್ ಹಾಗೂ 8 ಮಂದಿ ಲ್ಯಾಬ್ ಟೆಕ್ನೀಷಿಯನ್ ಗಳನ್ನು ನೇಮಕ ಮಾಡಿಕೊಂಡಿದ್ದು, ಮೈಕ್ರೋ ಬಯೋಲಾಜಿಸ್ಟ್ ಹಾಗೂ ಇಬ್ಬರು ಲ್ಯಾಬ್ ಟೆಕ್ನೀಷಿಯನ್ ಗಳಿಗೆ ನಿಮಾನ್ಸ್ ನಲ್ಲಿ ಅಗತ್ಯ ತರಬೇತಿ ನೀಡಲಾಗಿದೆ. ನಿಮಾನ್ಸ್ ಮೂಲಕ 5 ಸ್ಯಾಂಪಲ್ ಗಳನ್ನು ಪ್ರಾಯೋಗಿಕ ಪರೀಕ್ಷೆಗಾಗಿ ಉಡುಪಿ ಸರ್ಕಾರಿ ಕೋವಿಡ್ ಪ್ರಯೋಗಾಲಯಕ್ಕೆ ನೀಡಿದ್ದು, ಈ ಸ್ಯಾಂಪಲ್ ಗಳನ್ನು ಪರೀಕ್ಷಿಸಿ, ಈಗಾಗಲೇ ವರದಿಯನ್ನು ನಿಮಾನ್ಸ್ ಗೆ ಕಳುಹಿಸಲಾಗಿದ್ದು, ಈ ವರದಿ ನಿಮಾನ್ಸ್ ನ ವರದಿಯೊಂದಿಗೆ ಸರಿಯಾದಲ್ಲಿ , ಜಿಲ್ಲೆಯ ಸರ್ಕಾರಿ ಪ್ರಯೋಗಾಲಯದಲ್ಲಿ ಕೋವಿಡ್-19 ಮಾದರಿಗಳ ಪರೀಕ್ಷೆ ಆರಂಭವಾಗಲಿದೆ , ಮುಂದಿನ 2 ದಿನದೊಳಗೆ ನಿಮಾನ್ಸ್ನ ವರದಿ ಬರಲಿದೆ ಎನ್ನುತ್ತಾರೆ ಜಿಲ್ಲಾ ಆಸ್ಪತ್ರೆಯ ಸರ್ಜನ್ ಡಾ. ಮಧುಸೂಧನ್ ನಾಯಕ್. ಸಂಪೂರ್ಣ ಹವಾನಿಯಂತ್ರಿತವಾಗಿರುವ ಈ ಪರೀಕ್ಷಾ ಲ್ಯಾಬ್ ನಲ್ಲಿ , ಒಂದು ಬಾರಿಗೆ 96 ಸ್ಯಾಂಪಲ್ ಗಳ ಪರೀಕ್ಷೆ ಮಾಡಬಹುದಾಗಿದ್ದು, ಪರೀಕ್ಷಾ ವರದಿಗಾಗಿ 4 ರಿಂದ 6 ಗಂಟೆಗಳ ಅವಧಿ ತೆಗೆದುಕೊಳ್ಳಲಿದೆ, ಈ ಪ್ರಕಾರದಲ್ಲಿ ಈ ಲ್ಯಾಬ್ ನಲ್ಲಿ ದಿನಕ್ಕೆ ಗರಿಷ್ಠ 300 ಸ್ಯಾಂಪಲ್ ಗಳ ಪರೀಕ್ಷಾ ವರದಿ ಪಡೆಯಬಹುದಾಗಿದೆ. ಸ್ಯಾಂಪಲ್ ನ ಸ್ವೀಕೃತಿಯಿಂದ , ವರದಿಯವರೆಗೆ ಸಂಪೂರ್ಣ ಆನ್ ಲೈನ್ ನಲ್ಲಿ ಮಾಹಿತಿ ದಾಖಲಿಸವುದು ಸೇರಿದಂತೆ ಐ.ಸಿ.ಎಂ.ಆರ್ ಮಾರ್ಗಸೂಚಿಯನ್ವಯ ಕಾರ್ಯ ನಿರ್ವಹಿಸಲಾಗುವುದು. ಲ್ಯಾಬ್ ನಲ್ಲಿ ಪಿಪಿಇ ಕಿಟ್ ಗಳನ್ನು ಧರಿಸಿಯೇ ಪರೀಕ್ಷೆ ನಡೆಸಬೇಕಾಗಿದ್ದು, ಟೆಸ್ಟಿಂಗ್ ಕಾರ್ಯ ನಿರ್ವಹಣೆ ಕುರಿತಂತೆ, ಬೆಂಗಳೂರಿನ ನಿಮ್ಹಾನ್ಸ್ ನಲ್ಲಿ ಸಂಪೂರ್ಣ ತರಬೇತಿ ಪಡೆಯಲಾಗಿದೆ, ಸ್ಯಾಂಪಲ್ ಗಳನ್ನು ಆರಂಭದಲ್ಲಿ ಪ್ರೋಸೆಸಿಂಗ್ ಕೊಠಡಿಯಲ್ಲಿ ಸ್ವೀಕರಿಸಿ, ಬಯೋ ಸೇಪ್ಟಿ ಕ್ಯಾಬಿನಿಟ್ ನಲ್ಲಿಟ್ಟು ನಂತರ ಪಾಸ್ ಬಾಕ್ಸ್ ಮೂಲಕ ಪರೀಕ್ಷ ಕೊಠಡಿಗೆ ತಲುಪಿಸಿ, ಕೊನೆಗೆ ಆರ್.ಟಿ.ಪಿ.ಸಿ.ಆರ್ ಯಂತ್ರವಿರುವ ಕೊಠಡಿಗೆ ತಲುಪಿಸಿ ಅಲ್ಲಿರುವ ಯಂತ್ರದಲ್ಲಿ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಲ್ಯಾಬ್ ನ ಮೈಕ್ರೋ ಬಯಾಲಜಿಸ್ಟ್ ಡಾ. ಆನೀಟ್ ಡಿಸೋಜಾ ತಿಳಿಸಿದರು. ಒಂದು ಸ್ಯಾಂಪಲ್ ನ ಪರೀಕ್ಷೆಗೆ ಟೆಸ್ಟ್ ಕಿಟ್ ಗಳು ಮತ್ತು ಇತರೆ ಅಗತ್ಯ ಸುರಕ್ಷತಾ ವಸ್ತುಗಳ ಬಳಕೆಯ ವೆಚ್ಚ ಸೇರಿದಂತೆ ರೂ.1600 ವೆಚ್ಚವಾಗಲಿದ್ದು, ಈ ಎಲ್ಲಾ ವೆಚ್ವನ್ನು ಜಿಲ್ಲಾ ಪ್ರಾಕೃತಿಕ ವಿಕೋಪ ನಿಧಿಯಿಂದ ಭರಿಸಲಾಗುವುದು ಎಂದು ಜಿಲ್ಲಾ ಸರ್ಜನ್ ತಿಳಿಸಿದ್ದಾರೆ.
