Updated News From Kaup

ಉಡುಪಿ : ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ

Posted On: 17-10-2024 10:23PM

ಉಡುಪಿ : ಮಹರ್ಷಿ ವಾಲ್ಮೀಕಿ ಸಂಘಟನೆ ಉಡುಪಿ ಜಿಲ್ಲೆಯ ವತಿಯಿಂದ ಜಯಂತ್ಯೋತ್ಸವವನ್ನು ಉಡುಪಿಯ ಮಥುರಾ ಕಂಫರ್ಟ್ಸ್ ನಲ್ಲಿ ಆಯೋಜಿಸಲಾಗಿತ್ತು. ಉದ್ಯಮಿ ವಿಶ್ವನಾಥ ಶೆಣೈ ಯವರು ವಾಲ್ಮೀಕಿ ಮಹರ್ಷಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.

ಅ. 27 : ರಾಗ್ ರಂಗ್ ಕಲ್ಚರಲ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್ ಪಡುಬಿದ್ರಿ ವತಿಯಿಂದ ಉಭಯ ಜಿಲ್ಲಾ ಮಟ್ಟದ

Posted On: 17-10-2024 08:48PM

ಪಡುಬಿದ್ರಿ : ರಾಗ್ ರಂಗ್ ಕಲ್ಚರಲ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್ ಪಡುಬಿದ್ರಿ ಇದರ ವತಿಯಿಂದ ದೀಪಾವಳಿ ಹಬ್ಬದ ಅಂಗವಾಗಿ ಉಭಯ ಜಿಲ್ಲಾ ಮಟ್ಟದ "ಗೂಡುದೀಪ ಸ್ಪರ್ಧೆ" ಅಕ್ಟೋಬರ್ 27, ಆದಿತ್ಯವಾರ ಸಂಜೆ 6 ಗಂಟೆಗೆ ಬೋರ್ಡ್ ಶಾಲಾ ಮೃೆದಾನ( ಕರ್ನಾಟಕ ಪಬ್ಲಿಕ್ ಸ್ಕೂಲ್) ಪಡುಬಿದ್ರಿ ಇಲ್ಲಿ ಆಯೋಜಿಸಲಾಗಿದೆ.

ಉತ್ತಮ ಶಿಕ್ಷಕ ಪ್ರಶಸ್ತಿಗೆ ಕಾಪು ದಂಡತೀರ್ಥ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎಂ. ನೀಲಾನಂದ ನಾಯ್ಕ್ ಆಯ್ಕೆ

Posted On: 17-10-2024 08:16PM

ಕಾಪು : ಮಾನ್ಯತೆ ಪಡೆದ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘ (ರಿ.) ಕರ್ನಾಟಕ (ರುಪ್ಸ) ಇವರು ಕೊಡ ಮಾಡುವ ಉತ್ತಮ ಶಿಕ್ಷಕ ಪ್ರಶಸ್ತಿಗೆ ಕಾಪು ತಾಲೂಕಿನ ದಂಡತೀರ್ಥ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎಂ. ನೀಲಾನಂದ ನಾಯ್ಕ್ ಇವರು ಆಯ್ಕೆಯಾಗಿದ್ದಾರೆ.

ಕಾಪು : ವಾಲ್ಮೀಕಿಯವರ ಸಂದೇಶಗಳು ಬಾಳಿನ ಬೆಳಕು - ತಹಶಿಲ್ದಾರ್ ಡಾ. ಪ್ರತಿಭಾ ಆರ್

Posted On: 17-10-2024 02:58PM

ಕಾಪು : ವಾಲ್ಮೀಕಿಯವರಂತೆ ಮನಃ ಪರಿವರ್ತನೆ ಮಾಡಿಕೊಂಡು ಸದ್ಗಗುಣವಂತರಾಗಲು ಎಲ್ಲರಿಗೂ ಸಾಧ್ಯವಿದೆ. ಜಗತ್ತಿನ ಪ್ರಥಮ ಕಾವ್ಯ ರಚನೆಕಾರರಾದ ವಾಲ್ಮೀಕಿಯವರ ಹಿರಿಮೆ ಎಂದೆಂದಿಗೂ ಪ್ರಾಥಃಸ್ಮರಣೀಯ ಎಂದು ಕಾಪು ತಾಲೂಕು ತಹಶಿಲ್ದಾರ್ ಡಾ. ಪ್ರತಿಭಾ ಆರ್ ಹೇಳಿದರು. ಅವರು ಗುರುವಾರ ಕಾಪು ತಹಶಿಲ್ದಾರ್ ಕಚೇರಿಯ ಸಭಾಂಗಣದಲ್ಲಿ ಏರ್ಪಡಿಸಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕುಕ್ಕುಂಜ : ಅಯ್ಯಪ್ಪ ಶಿಬಿರದ ಮಂಟಪ ನಿರ್ಮಾಣ, ಇನ್ನಿತರ ಕಾರ್ಯಕ್ಕೆ ಭಕ್ತವೃಂದ ಸಹಕರಿಸುವಂತೆ ಮನವಿ

Posted On: 17-10-2024 02:47PM

ಕಾಪು : ಕುತ್ಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ದಿ| ಸೂರ್ಯ ಕುಲಾಲ್ ಕುಕ್ಕುಂಜ ಗುರುಸ್ವಾಮಿಯಾಗಿ ಸ್ಥಾಪಿಸಿದ ಅಯ್ಯಪ್ಪ ಭಕ್ತವೃಂದ (ರಿ.) ಕುಕ್ಕುಂಜ ಕಳತ್ತೂರು ಶಿಬಿರ 25 ವರ್ಷ ಪೂರೈಸಿದ್ದು, ಇದೀಗ ಮಂಟಪ ರಚನೆ ಹಾಗೂ ಇನ್ನಿತರ ಕೆಲವು ಕೆಲಸಗಳು ಶಿಬಿರದ ಮಹಾಪೂಜೆಯ ಮೊದಲು ಆಗಬೇಕಿದ್ದು ಭಕ್ತವೃಂದ ತಮ್ಮಿಂದಾದಷ್ಟು ಧನ ಸಹಾಯ ನೀಡಬೇಕಾಗಿ ಶಿಬಿರದ ಪ್ರಮುಖರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ : ಮುಂಬೈ ಬಂಟರ ಭವನದಲ್ಲಿ ಸ್ವರ್ಣಗೌರಿ ಪೂಜೆ

Posted On: 17-10-2024 02:45PM

ಕಾಪು‌ : ಸಂಪೂರ್ಣ ಶಿಲಾಮಯವಾಗಿ ಜೀರ್ಣೋದ್ಧಾರಗೊಳ್ಳುತ್ತಿರುವ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಮತ್ತು ನವದುರ್ಗಾ ಲೇಖನ ಯಜ್ಞ ಯಶಸ್ವಿಯಾಗಿ, ವಿಜೃಂಭಣೆಯಿಂದ ನಡೆಸುವ ನಿಟ್ಟಿನಲ್ಲಿ ಮುಂಬೈನಲ್ಲಿರುವ ಊರಿನ ಬಂಧುಗಳು ಪಾಲ್ಗೊಳ್ಳಲು ಆಮಂತ್ರಿಸಲು ಕಾಪು ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿ, ಸ್ವರ್ಣ ಸಮರ್ಪಣಾ ಸಮಿತಿ, ನವದುರ್ಗಾ ಲೇಖನ‌ ಯಜ್ಞ ಸಮಿತಿ ಪದಾಧಿಕಾರಿಗಳು ಮುಂಬೈಗೆ ತೆರಳಿದ್ದು, ಮಂಗಳವಾರ ಮುಂಬೈ ಬಂಟರ ಭವನದಲ್ಲಿ ನಡೆದ ಸ್ವರ್ಣಗೌರಿ ಪೂಜೆಯಲ್ಲಿ ಭಾಗವಹಿಸಿದರು.

ಪಡುಬಿದ್ರಿ : ವಿಧಾನ ಪರಿಷತ್ ಉಪ ಚುನಾವಣೆ ಬಿಜೆಪಿಯಿಂದ ಪೂರ್ವಭಾವಿ ಸಭೆ

Posted On: 17-10-2024 02:14PM

ಪಡುಬಿದ್ರಿ : ಉಡುಪಿ - ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಉಪ ಚುನಾವಣೆಯ ಪೂರ್ವಭಾವಿಯಾಗಿ ಗುರುವಾರ ಪಡುಬಿದ್ರಿಯ ಉದಯಾದ್ರಿ ಸಭಾಭವನದಲ್ಲಿ ಹೆಜಮಾಡಿ, ಪಡುಬಿದ್ರಿ, ಪಲಿಮಾರು, ಮುದರಂಗಡಿ, ಎಲ್ಲೂರು, ತೆಂಕ, ಬಡಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಭೆಯು ಜರಗಿತು

ಅ.22 : ಬೊಬ್ಬರ್ಯ ಕಟ್ಟೆ ದೈವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು

Posted On: 17-10-2024 01:50PM

ಉಡುಪಿ : ಇಲ್ಲಿನ ತೆಂಕುಪೇಟೆ ವುಡ್ ಲಾಂಡ್ಸ್ ಹೋಟೆಲ್ ಬಳಿಯ ಬೊಬ್ಬರ್ಯ ಕಟ್ಟೆಯ ಬೊಬ್ಬರ್ಯ, ಕಾಂತೇರಿ ಜುಮಾದಿ, ಕಲ್ಕುಡ, ಕೊರಗಜ್ಜಿ ಪರಿವಾರ ದೈವಗಳ ದೈವಸ್ಥಾನದಲ್ಲಿ ಅಕ್ಟೋಬರ್ 22, ಮಂಗಳವಾರ ಬೆಳಿಗ್ಗೆ 8.30 ಗಂಟೆಗೆ ಸರಿಯಾಗಿ ಕಾಂತೇರಿ ಜುಮಾದಿ, ಪಿಲಿಚಂಡಿ, ಪಂಜುರ್ಲಿ ದೈವದ ನೂತನ ಮಣೆಮಂಚ ಸಮರ್ಪಣೆ ಹಾಗೂ ಸಂಜೆ 5 ಗಂಟೆಗೆ ಸರಿಯಾಗಿ ಹೂವಿನ ಪೂಜೆ ಹಾಗೂ ಕಾಂತೇರಿ ಜುಮಾದಿ ದೈವ ದರ್ಶನ ನಡೆಯಲಿದೆ ಎಂದು ದೈವಸ್ಥಾನದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಾ.ಎಂ ಫಾರೂಕ್ ಉಮ್ಮರಬ್ಬ ಚಂದ್ರನಗರ ಇವರಿಗೆ ಪ್ರತಿಷ್ಠಿತ ವಫಾ ಸಂಸ್ಥೆಯಿಂದ ಸನ್ಮಾನ

Posted On: 17-10-2024 01:42PM

ಕಾಪು : ಉಡುಪಿ-ಮಂಗಳೂರು ನಗರದ ಪ್ರತಿಷ್ಠಿತ ಸುಪ್ರಸಿದ್ದ ವಫಾ ಸಂಸ್ಥೆಯವರ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಕಾಪುವಿನ ಸಮಾಜ ಸೇವಕ ಡಾ.ಎಂ.ಫಾರೂಕ್ ಉಮ್ಮರಬ್ಬ ಚಂದ್ರನಗರ ಇವರನ್ನು ವಫಾ ಸಂಸ್ಥೆಯು ಬೈಕಂಪಾಡಿ ಅಡ್ಕ ಸಭಾಂಗಣದಲ್ಲಿ ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಅ.20 : ಕಾಪು ತಾಲೂಕು ಪರಿವಾರ ನಾಯಕ ಸಮುದಾಯದ ಮಹಾಸಭೆ

Posted On: 16-10-2024 09:29AM

ಕಾಪು : ಕಾಪು ತಾಲೂಕು ಪರಿವಾರ ನಾಯಕ ಸಮುದಾಯದ ಮಹಾಸಭೆಯು ಅಕ್ಟೋಬರ್ 20, ಆದಿತ್ಯವಾರ ಬೆಳಿಗ್ಗೆ 10 ಘಂಟೆಗೆ ಸರಿಯಾಗಿ ಮಜೂರು ಪಂಚಾಯತ್ ಸಭಾಂಗಣದಲ್ಲಿ ಕಾಪು ತಾಲೂಕಿನ ಅದ್ಯಕ್ಷರಾದ ನೀಲಾನಂದ್ ನಾಯ್ಕ್ ಇವರ ಅಧ್ಯಕ್ಷತೆಯಲ್ಲಿ ಜರಗಲಿದೆ.