Updated News From Kaup

ಉಚ್ಚಿಲ : ಮುದ್ದು ಮಕ್ಕಳಿಗಾಗಿ ಶಾರದಾ ಮಾತೆಯ ಛದ್ಮವೇಷ ಸ್ಪರ್ಧೆ

Posted On: 05-10-2024 06:24PM

ಉಚ್ಚಿಲ : ಉಡುಪಿ ಉಚ್ಚಿಲ ದಸರಾ -2024 ರ ಪ್ರಯುಕ್ತ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇಗುಲದಲ್ಲಿ ಮೂರರಿಂದ ಒಂಭತ್ತು ವರ್ಷ ವಯಸ್ಸಿನ ಮುದ್ದು ಮಕ್ಕಳಿಗಾಗಿ ಶಾರದಾ ಮಾತೆಯ ಛದ್ಮವೇಷ ಸ್ಪರ್ಧೆಯು ಶ್ರೀಮತಿ ಶಾಲಿನಿ‌ ಡಾ| ಜಿ.ಶಂಕರ್ ತೆರೆದ ಸಭಾಂಗಣದಲ್ಲಿ ಶನಿವಾರ ಜರಗಿತು.

ಡಾ.ಎಂ ಫಾರೂಕ್ ಉಮ್ಮರಬ್ಬ ಚಂದ್ರನಗರ ಇವರಿಗೆ ಕಾಯಕ ರತ್ನ ರಾಜ್ಯ ಪ್ರಶಸ್ತಿ ಪ್ರದಾನ

Posted On: 05-10-2024 02:48PM

ಉಡುಪಿ : ವಿಶ್ವ ಮಾನವಾಧಿಕಾರ ಹಕ್ಕು ಲೋಕ ಪರಿಷತ್ ಉಡುಪಿ ಜಿಲ್ಲಾ ವತಿಯಿಂದ ಇತ್ತಿಚೆಗೆ ಗೌರವ ಡಾಕ್ಟರೆಟ್ ಪಡೆದ ಕಾಪುವಿನ ಸಮಾಜ ಸೇವಕ ಡಾ.ಎಂ ಫಾರೂಕ್ ಉಮ್ಮರಬ್ಬ ಚಂದ್ರನಗರ ಇವರಿಗೆ ಕಾಯಕ ರತ್ನ ರಾಜ್ಯ ಪ್ರಶಸ್ತಿಯನ್ನು ವಿಶ್ವ ಮನವಾದಿಕಾರ ಹಕ್ಕು ಲೋಕ ಪರಿಷತ್ ಇದರ ಅಂತರಾಷ್ಟ್ರೀಯ ಅಧ್ಯಕ್ಷರಾದ ಸಮಾಜ ರತ್ನ ಡಾ.ಶಂಕರ್ ಶೆಟ್ಟಿ ಉಡುಪಿ ಲಯನ್ಸ್ ಕ್ಲಬ್ ನಲ್ಲಿ ನಡೆದ ನೂತನ ಪದಾಧಿಕಾರಿಗಳ ಪದ ಪ್ರದಾನ ಕಾರ್ಯಕ್ರಮದಲ್ಲಿ ವಿತರಿಸಿದರು.

ಕಾಪು : ಕೋಟೆ ಶ್ರೀ ಗಡು ಮಾರಿಯಮ್ಮ ಹಾಗೂ ಚಾಮುಂಡೇಶ್ವರಿ ದೇವಸ್ಥಾನ ಮಲ್ಲಾರು - ನವರಾತ್ರಿ ಮಹೋತ್ಸವ

Posted On: 05-10-2024 09:07AM

ಕಾಪು : ಕೋಟೆ ಶ್ರೀ ಗಡು ಮಾರಿಯಮ್ಮ ಹಾಗೂ ಚಾಮುಂಡೇಶ್ವರಿ ದೇವಸ್ಥಾನ ಮಲ್ಲಾರು, ಕಾಪು ಇಲ್ಲಿಯ ಶ್ರೀ ದೇವಿಯ ಸನ್ನಿಧಾನದಲ್ಲಿ ಅ. 03 ಗುರುವಾರದಿಂದ ನವರಾತ್ರಿ ಮಹೋತ್ಸವ ಆರಂಭಗೊಂಡಿದ್ದು ಅ. 12, ಶನಿವಾರದವರೆಗೆ ಜರಗಲಿದೆ.

ಜೈ ತುಲುನಾಡ್ ಕುಡ್ಲ ಎಗ್ಗೆದ ಗುರ್ಕಾರ್ಲು ಆದ್ ಮನೀಶ್ ಕುಮಾರ್ ಅಜತ್ತ್ ಬತ್ತೆರ್

Posted On: 04-10-2024 04:34PM

ಕುಡ್ಲ : ಜೈ ತುಲುನಾಡ್ (ರಿ.) ಕುಡ್ಲ ಎಗ್ಗೆದ ವರ್ಸದ ಕೂಡುಪಟ್ಟಾಂಗ ಬೊಕ್ಕ ಪದಗ್ರಹಣ ಲೇಸ್ ಕುಳೂರುದ ಫಲ್ಗುಣ್ ಸಭಾಂಗಣಡ್ ನಡತ್ಂಡ್.

ಗೌರವ ಡಾಕ್ಟರೆಟ್ ಪಡೆದ ಡಾ.ಎಂ. ಫಾರೂಕ್ ಉಮ್ಮರಬ್ಬ ಚಂದ್ರನಗರ ಇವರಿಗೆ ಸನ್ಮಾನ

Posted On: 04-10-2024 04:05PM

ಕಾಪು : ಗೌರವ ಡಾಕ್ಟರೆಟ್ ಪಡೆದ ಡಾ.ಎಂ ಫಾರೂಕ್ ಉಮ್ಮರಬ್ಬ ಇವರಿಗೆ ಮಜೂರು ಉಮಾತ್ಮ ಇದ್ದಿನಬ್ಬ ಫ್ಯಾಮಿಲಿ ಗ್ರೂಪ್ ನಿಂದ ಸನ್ಮಾನ ಕಾರ್ಯಕ್ರಮ ಚಂದ್ರನಗರ ಬಟರ್ ಫ್ಲೈ ಪಾರ್ಟಿ ಹಾಲ್ ಮರ್ಹೂಂ ಹಾಜಿ ಉಮ್ಮರಬ್ಬ ವೇದಿಕೆಯಲ್ಲಿ ಬದ್ರಿಯಾ ಜುಮ್ಮಾ ಮಸ್ಜಿದ್ ಧರ್ಮಗುರುಗಳಾದ ಅಬ್ದುಲ್ ರಶೀದ್ ಸಖಾಫಿಯವರ ನೇತೃತ್ವದಲ್ಲಿ ನಡೆಸಲಾಯಿತು.

ಕಾಪು ಹೊಸ ಮಾರಿಗುಡಿ ದೇವಸ್ಥಾನ : ಸ್ವರ್ಣ ಗದ್ದುಗೆ ನಿರ್ಮಾಣಕ್ಕೆ ಮುಹೂರ್ತ

Posted On: 04-10-2024 03:56PM

ಕಾಪು : ಸಂಪೂರ್ಣ ಇಳಕಲ್ ಕೆಂಪು ಶಿಲೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿ ಮತ್ತು ಸ್ವರ್ಣ ಗದ್ದುಗೆ ಸಮರ್ಪಣಾ ಸಮಿತಿಯ ನೇತೃತ್ವದಲ್ಲಿ ಭಕ್ತಾದಿಗಳ ಸಹಕಾರದೊಂದಿಗೆ ನಿರ್ಮಾಣಗೊಳ್ಳಲಿರುವ ನೂತನ ಸ್ವರ್ಣ ಗದ್ದುಗೆ ನಿರ್ಮಾಣಕ್ಕೆ ಅಕ್ಟೋಬರ್ 3 ರಂದು ಮುಹೂರ್ತ ನೆರವೇರಿಸಲಾಯಿತು.

ನವೆಂಬರ್ 16 ರಂದು ಪಲಿಮಾರಿನಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಪಾಂಗಾಳ ಬಾಬು ಕೊರಗ ಆಯ್ಕೆ

Posted On: 04-10-2024 03:47PM

ಪಡುಬಿದ್ರಿ : ಕೊರಗ ಸಮುದಾಯದ ಹಿರಿಯ ಸಂಘಟಕ ಹಾಗೂ ಕೊರಗ ಭಾಷಾ ತಜ್ಞ, ಸಾಹಿತಿ, ಸಂಶೋಧಕ ಪಾಂಗಾಳ ಬಾಬು ಕೊರಗ ಅವರನ್ನು ನವೆಂಬರ್ 16, ಶನಿವಾರದಂದು ಪಲಿಮಾರು ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಜರಗಲಿರುವ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾ ಕಾಪು ತಾಲ್ಲೂಕು ಘಟಕದ 6ನೇ ಕಾಪು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಕ.ಸಾ.ಪ. ಜಿಲ್ಲಾಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ, ಕಾಪು ಘಟಕದ ಅಧ್ಯಕ್ಷ ಬಿ. ಪುಂಡಲೀಕ ಮರಾಠೆ ಜಂಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಚಂದ್ರನಗರ : ಉಚಿತ ಸಾಮೂಹಿಕ ಮುಂಜಿ ಕಾರ್ಯಕ್ರಮ, ಉಚಿತ ಮೆಡಿಸಿನ್, ಮನೆ ಸಾಮಗ್ರಿ ಕಿಟ್ ವಿತರಣೆ

Posted On: 04-10-2024 06:49AM

ಕಾಪು : ನಮ್ಮ ನಾಡ ಒಕ್ಕೂಟ(ರಿ) ಕಾಪು ತಾಲೂಕು ಹಾಗೂ ಸಫಿಯ ಉಮ್ಮರಬ್ಬ ಫ್ಯಾಮಿಲಿ ಗ್ರೂಪ್ ಚಂದ್ರನಗರ ಇವರ ಜಂಟಿ ಆಶ್ರಯದಲ್ಲಿ ನುರಿತ ವೈದ್ಯರಿಂದ ಮರ್ಹೂಂ ಹಾಜಿ ಕೆ.ಉಮ್ಮರಬ್ಬ ರವರ ಸ್ಮರಣಾರ್ಥ ಇಪ್ಪತ್ತೇಳು ಮಕ್ಕಳಿಗೆ ಉಚಿತ ಮುಂಜಿ(ಸುನ್ನತ್) ಕಾರ್ಯಕ್ರಮ ಹಾಗೂ ಉಚಿತ ಮೆಡಿಸಿನ್ ಮತ್ತು ಮನೆ ಸಾಮಗ್ರಿ ಕಿಟ್ ವಿತರಣಾ ಕಾರ್ಯಕ್ರಮವನ್ನು ಚಂದ್ರನಗರ ಬಟರ್ ಫ್ಲೈ ಪಾರ್ಟಿ ಹಾಲ್ ನಲ್ಲಿ ನಡೆಯಿತು. ಸಫಿಯ ಉಮ್ಮರಬ್ಬ ಫ್ಯಾಮಿಲಿ ಗ್ರೂಪ್ ಅಧ್ಯಕ್ಷ, ಸಮಾಜ ಸೇವಕರಾದ ಡಾ.ಎಂ ಫಾರೂಕ್ ಉಮ್ಮರಬ್ಬ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಸಮಾಜ ಸೇವೆಯೆ ನನ್ನ ತಂದೆಯ ಕನಸಾಗಿತ್ತು. ಸಮಾಜದಲ್ಲಿ ಆಶಕ್ತರು ಬಡವರಿಗಾಗಿ ಹಲವಾರು ಸಮಾಜ ಮುಖಿ ಕಾರ್ಯಕ್ರಮ ನಡೆಸಿದ್ದು, ಸಾಮೂಹಿಕ ಮುಂಜಿ ಕಾರ್ಯಕ್ರಮವನ್ನು ಸಮಾಜದಲ್ಲಿ ಉತ್ತಮ ಸಾಮಾಜಿಕ ಕಾರ್ಯಕ್ರಮ ಹಾಕಿಕೊಳ್ಳುವ ಎನ್ ಎನ್ ಒ ಜಂಟಿ ಸಂಸ್ಥೆಯೊಂದಿಗೆ ಕೈ ಜೋಡಿಸಿ ಸಮಾಜ ಸೇವೆ ಮಾಡಿದ್ದು ತೃಪ್ತಿಕರವಾಗಿದೆ ಎಂದು ತಿಳಿಸಿದರು.

ಬೆಳಪು ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಸಮುದಾಯ ಆರೋಗ್ಯ ಕೇಂದ್ರಕ್ಕೆ ವಾಟರ್ ಪ್ಯೂರಿಫೈರ್, ಸಿಲಿಂಗ್ ಫ್ಯಾನ್ ಕೊಡುಗೆ

Posted On: 03-10-2024 09:08PM

ಕಾಪು : ಬೆಳಪು ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಬೆಳಪುವಿನ ಸಮುದಾಯದ ಆರೋಗ್ಯ ಕೇಂದ್ರ ಶಿರ್ವ, ಆರೋಗ್ಯ ಮತ್ತು ಕ್ಷೇಮ ಕೇಂದ್ರ ಬೆಳಪು (ಉಪಕೇಂದ್ರ )ದಲ್ಲಿ ವಾಟರ್ ಪ್ಯೂರಿಫೈರ್ ಮತ್ತು ಸಿಲಿಂಗ್ ಫ್ಯಾನ್ ಕೊಡುಗೆ ನೀಡಲಾಯಿತು.

ಉಡುಪಿ ಉಚ್ಚಿಲ ದಸರಾ -2024 ವಿದ್ಯುದೀಪಾಲಂಕಾರದ ಉದ್ಘಾಟನೆ

Posted On: 03-10-2024 08:57PM

ಉಚ್ಚಿಲ : ಉಡುಪಿ ಉಚ್ಚಿಲ‌ ದಸರಾ 2024 ಪ್ರಯುಕ್ತ ಉದ್ಯಮಿ, ಎಂ.ಆರ್.ಜಿ ಗ್ರೂಪ್ ನ ಮುಖ್ಯಸ್ಥ ಡಾ. ಕೆ. ಪ್ರಕಾಶ್ ಅವರ ಪ್ರಾಯೋಜಕತ್ವದಲ್ಲಿ ಅಳವಡಿಸಲಾದ ವಿದ್ಯುತ್ ದೀಪಾಲಂಕಾರ ವ್ಯವಸ್ಥೆಯನ್ನು ಡಾ. ಕೆ. ಪ್ರಕಾಶ್ ಶೆಟ್ಟಿ ಅವರು ಗುರುವಾರ ಸಂಜೆ ಉದ್ಘಾಟಿಸಿದರು.