Updated News From Kaup

ಕಾಪು : 28ನೇ ಎಸ್‌ಎನ್‌ಜಿ ಟ್ರೋಫಿ ಓಪನ್ ಚೆಸ್ ಟೂರ್ನಮೆಂಟ್ ಸಂಪನ್ನ

Thumbnail
Posted On: 06 Jan 2026, 08:55 AM

ಕಾಪು : ಶ್ರೀ ನಾರಾಯಣ ಗುರು ಶಾಲಾ ಆಫ್ ಚೆಸ್, ಕಾಪು ಸಂಸ್ಥೆಯು ಮಂಗಳೂರು‌  ಅಫಿಲಿಯನ್ಸ್ ಟೆಕ್ನಾಲಜೀಸ್ ಅವರ ಸಹಯೋಗದಲ್ಲಿ ಕಾಪು ಶ್ರೀ ಹಳೆ ಮಾರಿಯಮ್ಮ ಸಭಾ ಭವನದಲ್ಲಿ 28ನೇ ಎಸ್‌ಎನ್‌ಜಿ ಟ್ರೋಫಿ ಓಪನ್ ಚೆಸ್ ಟೂರ್ನಮೆಂಟ್ ಆಯೋಜಿಸಲಾಗಿತ್ತು.

ಟೂರ್ನಮೆಂಟ್‌ನಲ್ಲಿ ಲಕ್ಷಿತ್ ಬಿ. ಸಾಲಿಯಾನ್ ಅವರು 6 ಸುತ್ತುಗಳಲ್ಲಿ 6 ಅಂಕಗಳನ್ನು ಗಳಿಸಿ ಯಾವುದೇ ಸೋಲು ಕಾಣದೆ ಚಾಂಪಿಯನ್ ಆಗಿ ಹೊರಹೊಮ್ಮಿದರು. 

ದಕ್ಷಿಣ ಕನ್ನಡದ ವಿಹಾನ್ ಶೆಟ್ಟಿ ಅವರು ದ್ವಿತೀಯ ಸ್ಥಾನ, ಹಾಗೂ ದಕ್ಷಿಣ ಕನ್ನಡದ ಆರೂಷ್ ಭಟ್ ಅವರು ತೃತೀಯ ಸ್ಥಾನ ಪಡೆದುಕೊಂಡರು.

ಈ ಸ್ಪರ್ಧೆಯಲ್ಲಿ ವಿವಿಧ ರಾಜ್ಯಗಳಿಂದ 300ಕ್ಕೂ ಹೆಚ್ಚು ಆಟಗಾರರು ಭಾಗವಹಿಸಿದ್ದರು. 

ಬಹುಮಾನ ವಿತರಕರಾಗಿ ಅವಿನಾಶ್ ಶೆಟ್ಟಿ ಸ್ಥಾಪಕರು ಎಫಿಲಿಯನ್ಸ್ ಟೆಕ್ನಾಲಜಿಸ್ ಮಂಗಳೂರು, ಮುಖ್ಯ ಅತಿಥಿಗಳಾಗಿ ಸುನಿಲ್ ಪೂಜಾರಿ ಕಾರ್ಯದರ್ಶಿ ಯುವವಾಹಿನಿ ಕಾಪು, ಜ್ಯೋತಿ ಇಂಗ್ಲೀಷ್ ಉಪನ್ಯಾಸಕರು ಸರ್ಕಾರಿ ಪಿಯು ಕಾಲೇಜು ಬೈಲೂರು, ಸುಧಾಕರ್ ಸಾಲ್ಯಾನ್, ಕಾಪು ಸಂಸ್ಥೆಯ ಅಧ್ಯಕ್ಷ  ಉಮಾನಾಥ ಕಾಪು, ನಾಗೇಶ್ ಕಾರಂತ್ ಪಾಂಗಾಳ, ನಿರ್ದೇಶಕಿ ಸೌಂದರ್ಯ ಯು ಕೆ ಉಪಸ್ಥಿತರಿದ್ದರು. 

ಸ್ಥಾಪಕ ಸಾಕ್ಷಾತ್ ಯುಕೆ ಸ್ವಾಗತಿಸಿದರು. ಬಾಬು ಜೆ ಪೂಜಾರಿ ಉಪ್ಪುಂದ ನಿರೂಪಿಸಿದರು.

 

ಜ.1 -ಜ.14 : ಶ್ರೀ ಸಾಯಿ ಈಶ್ವರ್‌ರಿಂದ ಅಯ್ಯಪ್ಪಸ್ವಾಮಿ ವ್ರತಧಾರಿಗಳಿಗೆ ಅನ್ನದಾನ ಸೇವೆ, ವಿಶ್ರಾಂತಿ ವ್ಯವಸ್ಥೆ

Thumbnail
Posted On: 05 Jan 2026, 09:30 PM

ಕಾಪು : ಅಖಿಲ ಭಾರತೀಯ ಸಂತ ಸಮಿತಿ ಕರ್ನಾಟಕ ಹಾಗೂ ಶ್ರೀ ಕ್ಷೇತ್ರ ಶಂಕರಪುರ ಉಡುಪಿ ಜಿಲ್ಲೆ ಸಹಭಾಗಿತ್ವದಲ್ಲಿ ಶ್ರೀ ಸಾಯಿ ಈಶ್ವರ್‌ಗುರೂಜಿಯವರ ಮಾರ್ಗ ದರ್ಶನದಲ್ಲಿ ಜ.1ರಿಂದ ಜ. 14ರ ವರೆಗೆ ಉಡುಪಿ, ಮಂಗಳೂರು ಹೆದ್ದಾರಿಯಾಗಿ ಶಬರಿಮಲೆ ಯಾತ್ರೆ ಮಾಡುವ ಅಯ್ಯಪ್ಪ ಸ್ವಾಮಿ ವ್ರತದಾರಿಗಳಿಗೆ ಅನ್ನದಾನ ಸೇವೆ ಹಾಗೂ ವಿಶ್ರಾಂತಿಯ ವ್ಯವಸ್ಥೆ ಕಾಪು ಪಾಂಗಾಳ ಸೇತುವೆಯ ಬಳಿ ವ್ಯವಸ್ಥೆ ಮಾಡಲಾಗಿದೆ ಎಂದು  ಶ್ರೀ ಕ್ಷೇತ್ರದ ಪ್ರಕಟನೆ ತಿಳಿಸಿದೆ.

 

ಧರ್ಮ ಒಂದೇ ಅದುವೆ ವಿಶ್ವ ಮಾನವ ಧರ್ಮ : ಡಾ ಸುರೇಶ ನೆಗಳಗುಳಿ

Thumbnail
Posted On: 05 Jan 2026, 08:59 AM

ಪಡುಬಿದ್ರಿ : ಕುವೆಂಪು ಜನ್ಮ ದಿನದ ನೆನಪಿನಲ್ಲಿ ಓ ನನ್ನ ಚೇತನಾ ವಿಚಾರಗೋಷ್ಠಿ,  ಕವಿಗೋಷ್ಠಿಯು ಭಾನುವಾರ ಪಡುಬಿದ್ರಿಯ ಸುಝ್ಲಾನ್ ಕಾಲೋನಿಯ ಸಭಾಭವನದಲ್ಲಿ  ನಡೆಯಿತು.
ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷೆ ರಾಣಿ ಪುಷ್ಪಲತಾ ಅವರ ಸಾರಥ್ಯದಲ್ಲಿ ನಡೆದ ಸಮಾರಂಭವನ್ನು ಮಂಗಳೂರಿನ ಕಣಚೂರು ಆಯುರ್ವೇದ ಕಾಲೇಜಿನ ಪ್ರಧಾನ ಸಲಹೆಗಾರ ಡಾ ಸುರೇಶ ನೆಗಳಗುಳಿಯವರು ಉದ್ಘಾಟಿಸಿ, ಕುವೆಂಪು ಅವರ ಬಗ್ಗೆ ಮಾತನಾಡಿ ವಿಶ್ವ ಮಾನವಧರ್ಮಕ್ಕೆ ಮಿಗಿಲಾದ ಧರ್ಮ ಬೇರೆ ಇಲ್ಲ ಎನ್ನುತ್ತಾ ಸ್ವರಚಿತ ಕವನಗಳನ್ನು ವಾಚಿಸಿದರು.

ರಾಣಿ ಪುಷ್ಪಲತಾ ದೇವಿಯವರು ಅಧ್ಯಕ್ಷತೆ ವಹಿಸಿದ್ದರು.

ಸಾಮಾಜಿಕ ಚಿಂತಕ ರಂಜನ್ ಕುಮಾರ್,
ಶಿಕ್ಷಕಿ ಕವಯಿತ್ರಿ ಶರಣ್ಯ ಬೆಳುವಾಯಿ, NSCDF ಅಧ್ಯಕ್ಷ ಗಂಗಾಧರ ಗಾಂಧೀ, ಮತ್ತು NSCDF ಅಂತಾರಾಷ್ಟ್ರೀಯ ವಕ್ತಾರ ಕೆ.ಎಂ.ಇಲಿಯಾಸ್ ಮುಖ್ಯ ಅತಿಥಿಗಳಾಗಿದ್ದರು.

ಬಳಿಕ ನಡೆದ ಕವಿಗೋಷ್ಠಿ ಅಧ್ಯಕ್ಷತೆಯನ್ನು ಮಣಿಪಾಲದ ಹಿಪ್ನೋಥೆರಪಿಸ್ಟ್ ಕವಯಿತ್ರಿ ಜ್ಯೋತಿ ಮಹದೇವ್  ವಹಿಸಿದ್ದರು.

ಕವಿಗಳಾದ ಅಶ್ವಿನಿ ಕೊಂಜಾಡಿ, ,ವಾಣಿಶ್ರೀ ಅಶೋಕ್ ಐತಾಳ್, ಕೆ ಮಂಜುನಾಥ್ ಗುಂಡ್ಮಿ, ಶಾಲಿನಿ ಕೆಮ್ಮಣ್ಣು, ಗಿರೀಶ್ ಪೆರಿಯಡ್ಕ,ಆಂಟೋನಿ ಲೂಯಿಸ್ ಮಣಿಪಾಲ, ಮಾರುತಿ ಕೆ.ಪಿ.,ಮಾಲತಿ ರಮೇಶ್ ಕೆಮ್ಮಣ್ಣು, ಅವನೀಶ್ ಐತಾಳ್, ಪಿ. ಆಯಿಷಾ ಪೆರ್ನೆ,ವಿನೋದಾ ಪ್ರಕಾಶ್ ಪಡುಬಿದ್ರಿ,ಸುಮಾ ಕಿರಣ್, ಜಯಂತಿ ಎಸ್. ನಂದಳಿಕೆ,ಸುಲೋಚನ ನವೀನ್, ತನೀರಾ,ಆತೂರ್ ಸುಮಯ್ಯಾ, ಎಂ ಪಾಟೀಲ್ ದೇರಳಕಟ್ಟೆ,ಆಕೃತಿ ಐ.ಎಸ್. ಭಟ್, ಮೂಗಪ್ಪ ಗಾಳೇರ,ಪೂರ್ಣಿಮಾ ಅನಿಲ್‌ ಮಣಿಪಾಲ,ಸ್ಮಿತಾ ಅಶೋಕ್ ಪರ್ಕಳ, ಮಂಡ್ಯ ಅನಾರ್ಕಲಿ ಸಲೀಂ  ಮಂಗಳೂರು, ಗಂಗಾಧರ ಗಾಂಧಿ ಮತ್ತಿತರರು ಕಾವ್ಯವಾಚನ ಮಾಡಿದರು. ಭಾಗವಹಿಸಿದ  ಕವಿಗಳಲ್ಲೆರಿಗೂ ಪ್ರಶಂಶನ ಪತ್ರ ಹಾಗೂ ಕೃತಿಗಳನ್ನು ನೀಡಿ ಗೌರವಿಸಲಾಯಿತು.

ರಶ್ಮಿ ಸನಿಲ್  ಕಾರ್ಯಕ್ರಮ ನಿರೂಪಿಸಿದರು.

    

ಖ್ಯಾತ ಹಿನ್ನೆಲೆ ಗಾಯಕ ವಿಜಯ ಪ್ರಕಾಶ್ : ಕಾಪು ಮಾರಿಯಮ್ಮ ದೇವಳ ಭೇಟಿ

Thumbnail
Posted On: 04 Jan 2026, 06:29 PM

ಕಾಪು : ಖ್ಯಾತ ಹಿನ್ನೆಲೆ ಗಾಯಕ ವಿಜಯ ಪ್ರಕಾಶ್ ಅವರು ಶನಿವಾರ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮ ದೇವಿಯ ದರುಶನ ಪಡೆದರು.

ಪ್ರಧಾನ ಅರ್ಚಕ ವೇ.ಮೂ. ಶ್ರೀನಿವಾಸ ತಂತ್ರಿ ಕಲ್ಯ ಅಮ್ಮನ ಅನುಗ್ರಹ ಪ್ರಸಾದ ನೀಡಿದರು.

ಗಾಯಕ ವಿಜಯ ಪ್ರಕಾಶ್ ದೇವಳದಲ್ಲಿರುವ ಕರ್ನಾಟಕದ ಬೃಹತ್ ಘಂಟೆಯನ್ನು ಬಾರಿಸಿದರು. ಒಂದು ದಿನದ ವಿಶೇಷ ಅನ್ನದಾನ ಸೇವೆಯನ್ನು ನೀಡಿ, ನವದುರ್ಗಾ ಲೇಖನ ಮಂಟಪದ ಲೇಖನ ಯಜ್ಞದ ಪುಣ್ಯ ಭೂಮಿಯಲ್ಲಿ  ಮೊದಲ ದಿನದ ಲೇಖವನ್ನು ಬರೆದರು ಇನ್ನುಳಿದ ಲೇಖನವನ್ನು 9 ದಿನಗಳವರೆಗೆ ಮನೆಯಲ್ಲಿಯೇ ಬರೆದು ಶಾಶ್ವತ ಸೇವೆಯೊಂದಿಗೆ ಸಮರ್ಪಿಸುವುದಾಗಿ ಹೇಳಿದರು.

ದೇವಳದ ವ್ಯವಸ್ಥಾಪನಾ ಸಮಿತಿ ಮತ್ತು ಅಭಿವೃದ್ಧಿ ಸಮಿತಿಯಿಂದ ಗೌರವಿಸಲಾಯಿತು.

ದೇವಳದ ಕಾರ್ಯನಿರ್ವಹಣಾಧಿಕಾರಿ ರವಿಕಿರಣ್, ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಮತ್ತು ವ್ಯವಸ್ಥಾಪನಾ ಸಮಿತಿಯ ಸದಸ್ಯ ಮಾದವ ಆರ್. ಪಾಲನ್, ಘಂಟಾನಾದ ಸೇವಾ ಸಮಿತಿ ಅಧ್ಯಕ್ಷ ಮತ್ತು ಪ್ರಚಾರ ಸಮಿತಿ ಪ್ರಧಾನ ಸಂಚಾಲಕ ಯೋಗೀಶ್ ವಿ. ಶೆಟ್ಟಿ, ಪ್ರಚಾರ ಸಮಿತಿ ಸಂಚಾಲಕ ಜಯರಾಮ ಆಚಾರ್ಯ, ನವದುರ್ಗಾ ಲೇಖನ ಯಜ್ಞ ಸಮಿತಿಯ ಮಹಿಳಾ ಪ್ರಧಾನ ಸಂಚಾಲಕಿ ಸಾವಿತ್ರಿ ಗಣೇಶ್, ಪ್ರಬಂಧಕ ಗೋವರ್ಧನ್ ಸೇರಿಗಾರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಜ. 4: ಮಂಗಳೂರು ಕುದ್ಮುಲ್ ರಂಗರಾವ್ ಪುರಭವನದಲ್ಲಿ ಕುಂಭ ಕಲಾವಳಿ ಕಾರ್ಯಕ್ರಮ

Thumbnail
Posted On: 03 Jan 2026, 11:58 AM

ಮಂಗಳೂರು : ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ  ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ(ರಿ.) ದಕ್ಷಿಣ ಕನ್ನಡ ಜಿಲ್ಲಾ ಸಮಿತಿ  ಹಾಗೂ ದಾಸ್  ಚಾರಿಟೇಬಲ್  ಸೇವಾ ಟ್ರಸ್ಟ್ (ರಿ.)ಮಂಗಳೂರು ಸಹಯೋಗದಲ್ಲಿ ಮಂಗಳೂರು ಕುದ್ಮುಲ್ ರಂಗರಾವ್ ಪುರಭವನದಲ್ಲಿ ಪದಗ್ರಹಣ, ಸಭಾ ಕಾರ್ಯಕ್ರಮ, ಸಾಂಸ್ಕೃತಿಕ, ಕಾರ್ಯಕ್ರಮ, ಸಾಧಕರಿಗೆ ಸನ್ಮಾನ,  ಆಸಕ್ತರಿಗೆ ನೆರವು ಕಾರ್ಯಕ್ರಮ ಜನವರಿ 4 ರಂದು ನಡೆಯಲ್ಲಿದೆ.

 

ಉಡುಪಿ ಹಾಗೂ ದಕ್ಷಿಣ ಜಿಲ್ಲಾ ಕುಲಾಲ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಅಭೂತಪೂರ್ವ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿ ಎಂದು ದಕ್ಸಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಲ| ಅನಿಲ್ ದಾಸ್. ಜಿಲ್ಲಾ ಅಧ್ಯಕ್ಷರು ಕರ್ನಾಟಕ ರಾಜ್ಯ ಕುಲಾಲ ಕುಂಬಾರ ಯುವ ವೇದಿಕೆ ಹಾಗೂ ಮಹಿಳಾ ಸಂಘಟನೆಗಳ ಒಕ್ಕೂಟ (ರಿ ) ಮಂಗಳೂರು ಪರವಾಗಿ ನಮ್ಮ ಕಾಪು ನ್ಯೂಸ್ ಗೆ ತಿಳಿಸಿದ್ದಾರೆ.

ಪೆರ್ಡೂರು : ಹಿರಿಯೆರೊಟ್ಟುಗೊಂಜಿ ದಿನ ವಿಶೇಷ ಕಾರ್ಯಕ್ರಮ

Thumbnail
Posted On: 02 Jan 2026, 03:31 PM

ಉಡುಪಿ : ಶ್ರೀ ಭೈರವನಾಥೇಶ್ವರ ಸೇವಾ ಸಮಿತಿ ಪೆರ್ಡೂರು ವತಿಯಿಂದ ಪೆರ್ಡೂರು ಸುಬ್ರಾಯ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ 'ಹಿರಿಯೆರೊಟ್ಟುಗೊಂಜಿ ದಿನ' ವಿಶೇಷ ಕಾರ್ಯಕ್ರಮವು ಸಂಭ್ರಮದಿಂದ ಜರಗಿತು. ಈ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ 60 ರಿಂದ 96 ವರ್ಷ ವಯಸ್ಸಿನ ನೂರಾರು ಹಿರಿಯ ನಾಗರಿಕರು ಪಾಲ್ಗೊಂಡು ಆಡಿ, ಹಾಡಿ, ನರ್ತಿಸಿ ಹರ್ಷದಿಂದ ದಿನವಿಡೀ ಸಂಭ್ರಮಿಸಿದರು. 

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ, ಗ್ರಾಮದ ಮುಖಂಡ ಹಾಗೂ ಸಮಿತಿಯ ಗೌರವಾಧ್ಯಕ್ಷ ಕೆ. ಶಾಂತಾರಾಮ ಸೂಡ, ಇಂದಿನ ಹಲವಾರು ಮುಂದುವರಿದ ಕುಟುಂಬಗಳಲ್ಲಿ ವೃದ್ಧಾಪ್ಯ ಒಂದು ರೀತಿಯಲ್ಲಿ ಶಾಪದಂತಾಗಿದೆ. ಅನೇಕ ಹಿರಿಯರು ಮನರಂಜನೆ ಹಾಗೂ ಸಾಮಾಜಿಕ ಚಟುವಟಿಕೆಗಳಿಂದ ವಂಚಿತರಾಗಿ ನೀರಸ ಜೀವನ ನಡೆಸುತ್ತಿದ್ದಾರೆ. ಅಂತಹ ಹಿರಿಯರಲ್ಲಿ ಜೀವನೋತ್ಸಾಹ ತುಂಬಲು ಈ ರೀತಿಯ ಕಾರ್ಯಕ್ರಮಗಳು ಅತ್ಯಗತ್ಯ. ಸಮಾಜದ ಅಗತ್ಯಗಳನ್ನು ಅರಿತು ಸಮಿತಿ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದರು.

ಸಮಾರೋಪ ಸಮಾರಂಭ : ಸಮಿತಿಯ ಅಧ್ಯಕ್ಷ ಸತೀಶ್ ಕೋಟ್ಯಾನ್ ಮಾತನಾಡಿ, ದೇವರ ನಂತರದ ಸ್ಥಾನ ಹೆತ್ತವರದು. ವೃದ್ದಾಪ್ಯದಲ್ಲಿ ಮಕ್ಕಳಂತೆಯೇ ಹಿರಿಯರಿಗೂ ಪ್ರೀತಿ, ಕಾಳಜಿ ನೀಡಬೇಕಿದೆ. ಯೌವನದಿಂದ ವೃದ್ಧಾಪ್ಯದವರೆಗೂ ಕುಟುಂಬದ ಸುಖಸಂತೋಷಕ್ಕಾಗಿ ನಿಸ್ವಾರ್ಥವಾಗಿ ದುಡಿದ ಹಿರಿಯರು ಜೀವನದ ಮುಸ್ಸಂಜೆಯಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿರುವುದು ದುಃಖಕರ. ಕುಟುಂಬ ಹಾಗೂ ಸಮಾಜದಲ್ಲಿ ಹಿರಿಯರು ಸಂತಸದಿಂದ ಬದುಕುವ ಅವಕಾಶ ಸಿಗಬೇಕೆಂಬ ಉದ್ದೇಶದಿಂದ ಇಡೀ ದಿನದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇಂದು ಹಿರಿಯರು ಸಂಭ್ರಮಿಸಿದ ರೀತಿಯನ್ನು ಕಂಡಾಗ ಸಮಿತಿಯ ಪ್ರಯತ್ನ ಸಾರ್ಥಕವಾಗಿದೆ. ಎಲ್ಲೆಡೆ ಸಂಘ-ಸಂಸ್ಥೆಗಳು ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿ ಎಂದು ಆಶಿಸಿದರು.

ಈ ಸಂದರ್ಭದಲ್ಲಿ ನಾಟಿ ವೈದ್ಯರಾಗಿ ದಶಕಗಳ ಕಾಲ ಸೇವೆ ಸಲ್ಲಿಸಿರುವ 96 ವರ್ಷದ ರಾಧಾ ಶೆಟ್ಟಿ (ಹೊಳಿಂಜೆ) ಹಾಗೂ 70 ವರ್ಷದ ಸುಂದರಿ ಆಚಾರ್ಯ (ಬುಕ್ಕಿಗುಡ್ಡೆ) ಅವರನ್ನು ಸನ್ಮಾನಿಸಲಾಯಿತು.

ಖ್ಯಾತ ವಾಗ್ಮಿ ಹಾಗೂ ಹಿರಿಯ ನಾಗರಿಕರ ಜಾಗೃತಿಗಾಗಿ ಶ್ರಮಿಸುತ್ತಿರುವ ನಿತ್ಯಾನಂದ ಭಟ್ (ಉಡುಪಿ) ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಹಿರಿಯರು-ಕಿರಿಯರ ನಡುವೆ ಸಮನ್ವಯದ ಬದುಕು ಹಾಗೂ ಹಿರಿಯರಿಗಾಗಿ ಇರುವ ಕಾನೂನು ರಕ್ಷಣೆಯ ಬಗ್ಗೆ ಮಾಹಿತಿ ನೀಡಿದರು. ತೀರ್ಥಹಳ್ಳಿಯ ಖ್ಯಾತ ಗಾಯಕ ರಮೇಶ್ ಹುಣಸೆಮಕ್ಕಿ ಅವರ ಹಾಡುಗಳು ಹಿರಿಯರನ್ನು ರಂಜಿಸಿತು.

ಹಲವು ಹಿರಿಯರು ತಮ್ಮೊಳಗಿನ ಪ್ರತಿಭೆಗಳನ್ನು ಪ್ರದರ್ಶಿಸಿದರು. ಮಲ್ಪೆಯ ಲೀಲಾವತಿ ಅವರ ಕುಟುಂಬವು ಮಕ್ಕಳು, ಮೊಮ್ಮಕ್ಕಳು ಹಾಗೂ ಸೊಸೆಯಂದಿರೊಂದಿಗೆ ಸೇರಿ ಜಲಸಂರಕ್ಷಣೆಯ ಕುರಿತ ಛದ್ಮವೇಷದ ಮೂಲಕ ಜನಜಾಗೃತಿ ಮೂಡಿಸಿತು. ಮೊಮ್ಮಕ್ಕಳೊಂದಿಗೆ ಹುಲಿ ವೇಷದಲ್ಲಿ ಕುಣಿದು ಹಿರಿಯರು ವಿಶೇಷ ಗಮನ ಸೆಳೆದರು. 

ಹಿರಿಯರೊಬ್ಬರು ತಮ್ಮ ಭಾವನೆ ವ್ಯಕ್ತಪಡಿಸಿ, "ನಾವೂ ಎಲ್ಲರಂತೆ ಸಂಭ್ರಮಿಸಬೇಕೆಂಬ ಆಸೆ ಇದ್ದರೂ ಅವಕಾಶಗಳು ಕಡಿಮೆ. ನಮ್ಮಿಗಾಗಿ ಇಡೀ ದಿನ ಮೀಸಲಿಟ್ಟು ಮಕ್ಕಳಂತೆ ಕುಣಿಯಲು ಅವಕಾಶ ಕಲ್ಪಿಸಿದ ಸಮಿತಿಗೆ ದೇವರು ಎಲ್ಲವನ್ನೂ ಕರುಣಿಸಲಿ. ಇಂತಹ ಕಾರ್ಯಕ್ರಮಗಳು ಎಲ್ಲೆಡೆ ನಡೆಯಲಿ" ಎಂದು ಹೇಳಿದರು.

ವೇದಿಕೆಯಲ್ಲಿ ಸಮಿತಿಯ ಅಧ್ಯಕ್ಷ ಸತೀಶ್ ಕೋಟ್ಯಾನ್, ಗೌರವಾಧ್ಯಕ್ಷ ಕೆ. ಶಾಂತಾರಾಮ ಸೂಡ, ಮುಖ್ಯ ಅತಿಥಿ ನಿತ್ಯಾನಂದ ಭಟ್, ಕಾರ್ಯದರ್ಶಿ ರವೀಂದ್ರ ನಾಡಿಗ್, ಜತೆ ಕಾರ್ಯದರ್ಶಿ ಸತೀಶ್‌ ಕುಲಾಲ್ ಉಪಸ್ಥಿತರಿದ್ದರು. 
ಪ್ರತೀಕ್ಷಾ ಕೋಟ್ಯಾನ್ ಪ್ರಾರ್ಥಿಸಿ, ಪ್ರಭಾಕರ ಶೆಟ್ಟಿ ಪ್ರಸ್ತಾವನೆಗೈದು, ಸ್ವಾಗತಿಸಿ,  ವಂದಿಸಿದರು. ಉಪೇಂದ್ರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. 

 


    

ಪಡುಬಿದ್ರಿ : ಸುಝ್ಲಾನ್ ಕಾಲೋನಿಯಲ್ಲಿ ಉಚಿತ ವೈದ್ಯಕೀಯ ಶಿಬಿರ

Thumbnail
Posted On: 31 Dec 2025, 09:59 AM

ಪಡುಬಿದ್ರಿ: ಬೆಂಗಳೂರಿನ ಅಖಿಲ ಕರ್ನಾಟಕ ಅಭಿವೃದ್ಧಿ ಪ್ರತಿಷ್ಠಾನ,  ಮಂಗಳೂರಿನ ಕಣಚೂರು ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಇವರ ಸಹಭಾಗಿತ್ವ ದಲ್ಲಿ ಶನಿವಾರ ಇಲ್ಲಿನ ಸುಸ್ಲಾನ್ ಕಾಲೋನಿಯಲ್ಲಿ
"ಆರೋಗ್ಯವೇ ಭಾಗ್ಯ" ಉಚಿತ ವೈದ್ಯಕೀಯ ಶಿಬಿರ ನಡೆಯಿತು.

ವೈದ್ಯಕೀಯ ಶಿಬಿರವನ್ನು ಉದ್ಘಾಟಿಸಿದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಶಶಿಕಾಂತ್ ಪಡುಬಿದ್ರಿ ಮಾತನಾಡಿ,
ಇಂತಹ ವೈದ್ಯಕೀಯ ಶಿಬಿರಗಳಿಂದ ಕಾಯಿಲೆಗಳ ಪತ್ತೆ ಆಗುವುದರಿಂದ ಸಕಾಲದಲ್ಲಿ ಚಿಕಿತ್ಸೆ ನೀಡಲು ಸಹಾಯಕ ಆಗುತ್ತದೆ. ಸಂಘಟನೆಯ ಕಾರ್ಯ ಶ್ಲಾಘನೀಯ ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎನ್ಎಸ್ ಸಿಡಿಎಫ್ ಅಧ್ಯಕ್ಷ ಗಂಗಾಧರ್ ಗಾಂಧಿ ವಹಿಸಿದ್ದರು.

ಕಣಚೂರು ಆಯುರ್ವೇದ ಕಾಲೇಜು ವೈದ್ಯಕೀಯಸಲಹೆಗಾರ ಡಾ. ಸುರೇಶ್ ನೆಗಳಗುಳಿ, ಕಣಚೂರು ಆಸ್ಪತ್ರೆಯ
ವೈದ್ಯಕೀಯ ಅಧೀಕ್ಷಕ ಡಾ. ಕಾರ್ತಿಕೇಯ ಪ್ರಸಾದ್, ಸಹಾಯಕ ಪ್ರಾಧ್ಯಾಪಕ ಡಾ. ಶ್ರೀರಾಮ್ ಕಣಚೂರು ಆಸ್ಪತ್ರೆ, ಸಮಾಜ ಸೇವಕ ರಂಜನ್ ಕುಮಾರ್, ಸುಝ್ಲಾನ್ ಕಾಲೊನಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಜಮಾಲ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಅಖಿಲ ಕರ್ನಾಟಕ ಅಭಿವೃದ್ಧಿ ಪ್ರತಿಷ್ಠಾನ ಅಧ್ಯಕ್ಷೆ ಸೌಮ್ಯ ಶೆಟ್ಟಿ, ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು.

ಅಖಿಲ  ಕರ್ನಾಟಕ ಅಭಿವೃದ್ಧಿ ಪ್ರತಿಷ್ಠಾನದ   ಕಾರ್ಯದರ್ಶಿ ಅನುಪಮಾ ರಾವ್, ನಿರ್ದೇಶಕಿ ಶಿಲ್ಪಾ ಜೋಸೆಫ್ ಮತ್ತಿತರರು ಉಪಸ್ಥಿತರಿದ್ದರು. 

ಶರಣ್ಯ ಬೆಳುವಾಯಿ ಕಾರ್ಯಕ್ರಮ ನಿರೂಪಿಸಿದರು.

ಬಳಿಕ ನಡೆದ ವೈದ್ಯಕೀಯ ಶಿಬಿರದಲ್ಲಿ  60 ಕ್ಕೂ ಹೆಚ್ಚು ಮಂದಿ ವೈದ್ಯಕೀಯ ಸಲಹೆ ಮತ್ತು ಔಷಧಿ ಪಡೆದರು.

ಒತ್ತಡದಿಂದ ಮುಕ್ತವಾಗಲು ಭಗವದ್ಗೀತೆಯೇ ಪರಿಹಾರ : ಕೇಮಾರು ಶ್ರೀ ಶ್ರೀ ಈಶಾ ವಿಠಲದಾಸ ಸ್ವಾಮೀಜಿ

Thumbnail
Posted On: 31 Dec 2025, 09:50 AM

ಪಡುಬಿದ್ರಿ : ಇಂದಿನ ಯುವ ಜನತೆಗೆ ಸಂಸ್ಕಾರ ನೀಡುವಂತಹ ಜಾಗೃತಿ ಕಾರ್ಯಕ್ರಮಗಳು ಅತ್ಯಗತ್ಯವಿದೆ. ಸಾಮಾಜಿಕ ಜಾಲತಾಣದಲ್ಲಿ ಮೋಸ ವಂಚನೆಗಳು ಜಾಸ್ತಿಯಾಗಿ ಯುವ ಜನತೆ ಬಲಿಯಾಗುತೀರುವುದು ಖೇದಕರ. ಆಧುನಿಕ ಜೀವನ ಶೈಲಿಯ ಒತ್ತಡ ನಿವಾರಣೆಗೆ ಭಗವದ್ಗೀತೆಯೇ ಪರಿಹಾರ‌. ಕ್ಷೇತ್ರದ ವತಿಯಿಂದ ಭಗವದ್ಗೀತೆಯನ್ನು  ಭಕ್ತಾದಿಗಳಿಗೆ ಹಂಚಿರುವುದು  ಶ್ಲಾಘನೀಯ ಎಂದು ಕೇಮಾರು ಶ್ರೀ ಶೀ ಈಶಾ ವಿಠಲದಾಸ ಸ್ವಾಮೀಜಿ  ಹೇಳಿದರು
ಅವರು ಪಡುಬಿದ್ರಿ ಅಲಂಗಾರು ಕ್ಷೇತ್ರದ ಶ್ರೀ ಆದಿಶಕ್ತಿ ಅದಿಮಾಯೆ ಸ್ವಾಮಿ ಕೊರಗಜ್ಜ ಕ್ಷೇತ್ರದಲ್ಲಿ ನಡೆದ ಶ್ರೀ ಸತ್ಯನಾರಾಯಣ ಪೂಜೆ ಹಾಗೂ  ಶನಿಪೂಜಾ ಕಾರ್ಯಕ್ರಮದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅಶೀರ್ವಚನ ನೀಡಿ ಮಾತನಾಡಿದರು.

ಧಾರ್ಮಿಕ ಕಾರ್ಯಕ್ರಮವನ್ನು ಕೇವಲ  ಆಚರಣೆಗಳಲ್ಲ. ಅವು ಜೀವನವನ್ನು ಅರ್ಥ ಪೂರ್ಣ ಗೂಳಿಸುವ ಸಾಧನಗಳು ಅವು ನಮ್ಮ ಅಂತರಿಕ ಶಕ್ತಿಯನ್ನು ಹೆಚ್ಚಿಸಿ, ಸಮಾಜವನ್ನು ಒಗ್ಗೂಡಿಸಿ ನಮ್ಮ ಸಂಸ್ಕ್ರತಿಯನ್ನು ಬೆಳಗಿಸುತ್ತವೆ. ಆದ್ದರಿಂದ ಧಾರ್ಮಿಕ ಕಾರ್ಯಕ್ರಮಗಳ ಮಹತ್ವವನ್ನು ಅರಿತು ಅವುಗಳನ್ನು ಗೌರವಿಸಿ, ಸಕಾರಾತ್ಮಕವಾಗಿ ಅಚರಿಸುವುದು ಪ್ರತಿಯೊಬ್ಬರ ಕರ್ತವ್ಯ ವಾಗಿದೆ ಎಂದು ಪಡುಬಿದ್ರಿ ಬಂಟರ ಸಂಘದ ಮಾಜಿ  ಅಧ್ಯಕ್ಷ ನವೀನಚಂದ್ರ ಜೆ. ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕ್ಷೇತ್ರ ಧರ್ಮದರ್ಶಿ ಸುಧಾಕರ್ ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ರಸ್ತೆ ಅಪಘಾತಕ್ಕೆ ಒಳಗಾದ ರಾಕೇಶ್ ಶೆಟ್ಟಿಗಾರ್  ರವರಿಗೆ ವ್ಯೆದ್ಯಕೀಯ ಸಹಾಯಹಸ್ತ   ನೀಡಲಾಯಿತು.
ಕ್ಷೇತ್ರದ ವತಿಯಿಂದ ಭಕ್ತಾದಿಗಳಿಗೆ ಭಗವದ್ಗೀತೆಯನ್ನು ಹಂಚಲಾಯಿತು.
ಸಮಾಜ ಸೇವಕಿ ಗೀತಾ ಅರುಣ್, ರಂಗಭೂಮಿ ಹಾಗೂ ಸಮಾಜ ಸೇವಕಿ ಯಶೋಧ ಪಡುಬಿದ್ರಿ ಹಾಗೂ ಕನ್ನಡ ಚಲನಚಿತ್ರ ಕಲಾವಿದೆ ಐಶ್ವರ್ಯ ಆಚಾರ್ಯ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.

 ಈ ಸಂದರ್ಭದಲ್ಲಿ ಪಲ್ಲವಿ ಬಾರ್ ರೆಸ್ಟೋರೆಂಟ್ ಮಾಲಕ ಸಂತೋಷ್ ಕುಮಾರ್ ಶೆಟ್ಟಿ , ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪಡುಹಿತ್ಲು, ಪಡುಬಿದ್ರಿ ಗ್ರಾ‌.ಪಂ ಮಾಜಿ ಉಪಾಧ್ಯಕ್ಷೆ ಯಶೋಧ ಪಡುಬಿದ್ರಿ,  ಓಂಕಾರ ಕಾಸ್ಟೋಮ್ಸ್ & ಕಲಾ ಸಂಗಮದ ಅಡಳಿತ ನಿರ್ದೇಶಕಿ ಗೀತಾ ಅರುಣ್, ನಮ್ಮ ಕುಡ್ಲ ಚಾನಲ್ ನಿರೂಪಕಿ ಡಾ. ಪ್ರಿಯ ಹರೀಶ್ ಶೆಟ್ಟಿ, ಪಡುಬಿದ್ರಿ ಕಾಡಿಪಟ್ನ ಮೊಗವೀರ ಮಹಾಸಭಾದ ಅಧ್ಯಕ್ಷ ಅಶೋಕ್ ಸಾಲ್ಯಾನ್, ಕನ್ನಡ ಚಲನಚಿತ್ರ ನಟಿ ಐಶ್ವರ್ಯ, ಕಾಪು ವಲಯ ಶಬರಿಮಲೆ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ದಿವಾಕರ್ ಶೆಟ್ಟಿ ಮಲ್ಲಾರು ಉಪಸ್ಥಿತರಿದ್ದರು.

 ಸಂತೋಷ್ ಪಡುಬಿದ್ರಿ ಸ್ವಾಗತಿಸಿ ವಂದಿಸಿದರು , ಸುಧಾಕರ್ ಕೆ ಕಾರ್ಯಕ್ರಮ ನಿರೂಪಿಸಿದರು.
    

ಬಿಜೆಪಿಯಲ್ಲಿ ಓರ್ವ ಕಾರ್ಯಕರ್ತನೂ ಅಧಿಕಾರದ ಚುಕ್ಕಾಣಿ ಹಿಡಿಯಬಹುದು : ಆರ್. ಅಶೋಕ್

Thumbnail
Posted On: 30 Dec 2025, 09:53 PM

ಕಾಪು  : ಅಟಲ್ ಬಿಹಾರಿ ವಾಜಪೇಯಿ ಸರಳ ಸಜ್ಜನ ವ್ಯಕ್ತಿಯಾಗಿ ಬಾಳಿದವರು. ಓರ್ವ ಕಾರ್ಯಕರ್ತನೂ ಅಧಿಕಾರದ ಚುಕ್ಕಾಣಿ ಹಿಡಿಯಬಹುದು ಎಂಬುದು ಬಿಜೆಪಿ ಪಕ್ಷದಲ್ಲಿದೆ. ಆದರೆ ಉಳಿದ ಪಕ್ಷಗಳಲ್ಲಿ ಈ ಕ್ರಮವಿಲ್ಲ. ಮೋಸ ಹೇಗೆ ಮಾಡುವುದನ್ನು ಕಾಂಗ್ರೆಸ್ ನಿಂದ  ಕಲಿಯಬೇಕು. 5 ಸಾವಿರ ಕೋಟಿ ಗೃಹಲಕ್ಷ್ಮಿ ಹಣವನ್ನು ಜನರಿಗೆ ಮೋಸ ಮಾಡಲು ನಾವು ಬಿಡುವುದಿಲ್ಲ ಎಂದು‌ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆ‌ರ್. ಅಶೋಕ್ ಹೇಳಿದರು.
ಅವರು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ನೇತೃತ್ವದಲ್ಲಿ ನಡೆದ ಕಾಪು ಕಡಲ ಪರ್ಬ ಕಾರ್ಯಕ್ರಮದಲ್ಲಿ ‌ಮಾತನಾಡಿದರು.
 
ಸತ್ತ ಸರಕಾರ ಕರ್ನಾಟಕದಲ್ಲಿದೆ. ಕರಾವಳಿ ಭಾಗದಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ. 4 ದಿನದ ಚರ್ಚೆ ವ್ಯರ್ಥವಾಗಿದೆ. 4 ಲಕ್ಷ ಕೋಟಿ ಸಾಲದ ಸರಕಾರ ಸಿದ್ದರಾಮಯ್ಯ ಸರಕಾರದ ಸಾಲ. ಸಾಲನೂ ಜನತೆಗೆ ಫ್ರೀ ಭಾಗ್ಯ ಎಂದರು.

ಈ ಸಂದರ್ಭ ಕುದಿ ಶ್ರೀನಿವಾಸ ಭಟ್, ಡಾ.ದೇವದಾಸ, ದೀಕ್ಷಾ ವಿ, ತನುಶ್ರೀ ಪಿತ್ರೋಡಿ, ಡಾ.ಚಂದ್ರಶೇಖರ್, ಡಾ.ನವೀನ್, ಡಾ.ಶಿಲ್ಪ, ಕೃಷ್ಣ ಶೆಟ್ಟಿ, ಉಮಾ ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಧೀಮಂತ ರಾಜಕಾರಣಿ ವಾಜಪೇಯಿ ಅಜಾತ ಶತ್ರುವಾಗಿದ್ದರು ಎಂದರು.

ಶಾಸಕರಾದ ಯಶ್‌ಪಾಲ್ ಎ. ಸುವರ್ಣ, ವಿ. ಸುನಿಲ್ ಕುಮಾರ್, ಕಿರಣ್ ಕೊಡ್ಗಿ, ಧೀರಜ್ ಮುನಿರಾಜು, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ, ಪ್ರಮುಖರಾದ ಸಂದೀಪ್ ರವಿ, ದಿನಕರ ಬಾಬು, ನಿತಿನ್, ರೇಷ್ಮಾ ಶೆಟ್ಟಿ, ಶ್ರೀಕಾಂತ್ ನಾಯಕ್, ಸಂಧ್ಯಾ ರಮೇಶ್, ಶ್ಯಾಮಲಾ ಕುಂದ‌ರ್, ಕುತ್ಯಾರು ನವೀನ್ ಶೆಟ್ಟಿ, ಗೋಪಾಲಕೃಷ್ಣ ರಾವ್, ಶರಣ್ ಕುಮಾ‌ರ್ ಮಟ್ಟು, ಸಂತೋಷ್ ಮೂಡುಬೆಳ್ಳೆ, ಸೋನು ಪಾಂಗಾಳ, ನೀತಾ ಗುರುರಾಜ್, ಪಾರ್ಥಸಾರಥಿ, ಕೃಷ್ಣ ರಾವ್, ಗಾಯತ್ರಿ ಪ್ರಭು ಭಾಗವಹಿಸಿದ್ದರು. 

ಮಂಡಲ ಬಿಜೆಪಿ ಅಧ್ಯಕ್ಷ ಜಿತೇಂದ್ರ ಶೆಟ್ಟಿ ವಂದಿಸಿದರು. ಸತೀಶ್ ಶೆಟ್ಟಿ ಗುಡ್ಡೆಚ್ಚಿ, ಸಂತೋಷ್ ನಂಬಿಯಾರ್ ನಿರೂಪಿಸಿದರು.

ಕಟಪಾಡಿ : ಕುಣಿತ ಭಜನಾ ಸ್ಪರ್ಧೆಯ ಭಜಕರಿಗೆ ಸೀರೆ ವಿತರಣೆ

Thumbnail
Posted On: 29 Dec 2025, 10:41 PM

ಕಟಪಾಡಿ : ಶ್ರೀ ವಿಶ್ವನಾಥ ಕ್ಷೇತ್ರ ಕಟಪಾಡಿ ಯಲ್ಲಿ ಭಾನುವಾರ ಶ್ರೀ ಗುರು ಕುಣಿತ  ಮಹಿಳಾ ತಂಡದ ನೇತೃತ್ವದಲ್ಲಿ ಕುಣಿತ ಭಜನಾ ಸ್ಪರ್ಧಾ ಕಾರ್ಯಕ್ರಮ ಜರಗಿತು.

ಭಾಗವಹಿಸಿದ ಒಟ್ಟು 14 ತಂಡದ ಭಜಕರಿಗೆ ಭಾಗ್ಯಲಕ್ಷ್ಮಿ ಸಿಲ್ಕ್ಸ್ ಮುಲ್ಕಿ ಇದರ ಮಾಲಕರು  ಹಾಗೂ ಅಮ್ಮ ಫೌಂಡೇಶನ ಅಧ್ಯಕ್ಷರಾದ ರಾಜ ಶೇಖರ್ ಕೋಟ್ಯಾನವರ ವತಿಯಿoದ  ಸೀರೆಯನ್ನು ನೀಡಿ ಗೌರವಿಸಲಾಯಿತು.

ಈ ಸಂದರ್ಭ ಶ್ರೀ ಗುರು ಕುಣಿತ  ಮಹಿಳಾ ತಂಡದ ಪ್ರಮುಖರು ಉಪಸ್ಥಿತರಿದ್ದರು.