Updated News From Kaup

ಕಾಪು : ಬೊಲ್ಲೆಟ್ಟು ಆದಿ ಆಲಡೆಯಲ್ಲಿ ಶಿಲಾನ್ಯಾಸ ಕಾರ್ಯಕ್ರಮ

Thumbnail
Posted On: 30 Mar 2026, 07:19 PM

ಕಾಪು : ಇತಿಹಾಸ ಪ್ರಸಿದ್ಧ, ಕುಮಾರ ನೆಲೆ ನಿಂತ ಮೊಟ್ಟ ಮೊದಲ ಆಲಡೆಯಾದ ಬೊಲ್ಲೆಟ್ಟುವಿನಲ್ಲಿ  ಗಣಪತಿ, ವೀರಭದ್ರ, ನಂದಿಗೋಣ ಚಾವಡಿ, ರಕ್ತೇಶ್ವರಿ ಮತ್ತು ಅಡ್ಕತ್ತಾಯ  ಗುಡಿಗಳಿಗೆ ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರ ಶುಭ ಆಶೀರ್ವಾದಗಳೊಂದಿಗೆ ಶಿಲಾನ್ಯಾಸ ಕಾರ್ಯಕ್ರಮವು  ಗಣ್ಯರ ಉಪಸ್ಥಿತಿಯಲ್ಲಿ ನಡೆಯಿತು.

ಪೈಯ್ಯಾರು ಕರಿಯಣ್ಣ ಶೆಟ್ಟಿ ಪ್ರೌಢಶಾಲೆಯಲ್ಲಿ 2026 - 27 ಸಾಲಿನ 8 ನೇ ತರಗತಿಯ ದಾಖಲಾತಿ ಆರಂಭ

Thumbnail
Posted On: 30 Mar 2026, 07:16 PM

ಕಾಪು : ಕುತ್ಯಾರು ಪಂಚಾಯತ್ ವ್ಯಾಪ್ತಿಯ ಪೈಯ್ಯಾರು ಕರಿಯಣ್ಣ ಪ್ರೌಢ ಶಾಲೆಯಲ್ಲಿ 2026-2027 ಸಾಲಿನ 8 ನೇ ತರಗತಿ ವಿದ್ಯಾರ್ಥಿಗಳ ದಾಖಲಾತಿ ಆರಂಭಗೊಂಡಿದೆ.

 ವಿದ್ಯಾರ್ಥಿಗಳಿಗೆ 3 ವರ್ಷದ ಸಂಪೂರ್ಣ ಉಚಿತ ಶಿಕ್ಸಣ, ಉಚಿತ ನೋಟ್ ಪುಸ್ತಕ, ಉಚಿತ ಸಮವಸ್ತ್ರ, ನುರಿತ ಅಧ್ಯಾಪಕರಿದ್ದಾರೆ.

 ವಿದ್ಯಾರ್ಥಿಗಳು ತಮ್ಮ ಅಗತ್ಯ ದಾಖಲೆಗಳಾದ ವಿದ್ಯಾರ್ಥಿ ಆಧಾರ್ ಕಾರ್ಡ್, ವಿದ್ಯಾರ್ಥಿ ಬ್ಯಾಂಕ್ ಪಾಸ್ ಪುಸ್ತಕ ಜೆರಾಕ್ಸ್, ತಂದೆ ತಾಯಿಯ ಆಧಾರ್ ಕಾರ್ಡ್ ಜೆರಾಕ್ಸ್, ಆದಾಯ ಪ್ರಮಾಣ ಪತ್ರ ಜೆರಾಕ್ಸ್ ನೊಂದಿಗೆ  ಕಚೇರಿಗೆ ಆಗಮಿಸಿ ದಾಖಲಾತಿ  ಮಾಡಬಹುದೆಂದು ಶಾಲಾ ಮುಖ್ಯ ಶಿಕ್ಷಕರಾದ ಗಂಗಾನಾಯ್ಕ್ ಪ್ರಕಟಣೆಯಲ್ಲಿ ತಿಳಿಸಿರುವರು.
ಸಂಪರ್ಕ ಸಂಖ್ಯೆ : 9611473588

ಶ್ರೀ ದೈವರಾಜ ಕೋರ್ದ್ದಬ್ಬು ದೈವಸ್ಥಾನ ಮೂಡುಕರೆ ಗರಡಿ ಮನೆ ಹೆಜಮಾಡಿ ವಾರ್ಷಿಕ ನೇಮೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮ ; ಪ್ರತಿಭಾ ಪುರಸ್ಕಾರ

Thumbnail
Posted On: 30 Mar 2026, 04:42 PM

ಪಡುಬಿದ್ರಿ : ಶ್ರೀ ದೈವರಾಜ ಕೋರ್ದ್ದಬ್ಬು ದೈವಸ್ಥಾನ ಮೂಡುಕರೆ ಗರಡಿ ಮನೆ ಹೆಜಮಾಡಿ ಇಲ್ಲಿಯ ವಾರ್ಷಿಕ ನೇಮೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ  ದೈವಸ್ಥಾನದ ವಠಾರದಲ್ಲಿ ಜರುಗಿತು.

ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿ,   2025 ಸಾಲಿನ ಎಸ್ಸೆಸ್ಸೆಲ್ಸಿ,  ದ್ವಿತೀಯ ಪಿಯುಸಿ ಹಾಗೂ ಡಿಗ್ರಿ ಪರೀಕ್ಷೆಯಲ್ಲಿ ಶೇಕಡಾ 80 ಪಡೆದ ಮೂಡುಕರೆ ಗ್ರಾಮಕ್ಕೆ ಸಂಬಂಧಪಟ್ಟ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ವಿತರಿಸಿ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೌರವಾಧ್ಯಕ್ಷರಾದ ರವೀಂದ್ರ ಎಮ್ ಶೆಟ್ಟಿ ಗರಡಿ ಮನೆ ಹೆಜಮಾಡಿ ವಹಿಸಿದ್ದರು.

ಈ ಸಂದರ್ಭದಲ್ಲಿ ಶ್ರೀ ದೈವರಾಜ ಕೋರ್ದ್ದಬ್ಬು ದೈವಸ್ಥಾನ ಮೂಡುಕರೆ ಗರಡಿ ಮನೆ ಹೆಜಮಾಡಿ ಸೇವಾ ಸಮಿತಿಯ ಅಧ್ಯಕ್ಷರಾದ ಸುಧೀಶ್ ಜೆ ಶೆಟ್ಟಿ, ರವೀಂದ್ರ ಗೋಪಾಲ್ ಶೆಟ್ಟಿ ಗರಡಿ ಮನೆ ಹೆಜಮಾಡಿ, ಪ್ರೇಮಾ ನಾಥ್ ಶೆಟ್ಟಿ, ಶಿವಾನಂದ ಆರ್ ಕೋಟ್ಯಾನ್, ಮಹೇಶ್ ಶೆಟ್ಟಿ ಗರಡಿ ಮನೆ, ಚಂದ್ರ ಪೂಜಾರಿ ನಟ್ಟಿಮನೆ ಹೆಜಮಾಡಿ, ಸುಂದರ ಗುರಿಕಾರರು ಉಪಸ್ಥಿತರಿದ್ದರು.

ಸುಧೀಶ್ ಜೆ ಶೆಟ್ಟಿ ಸ್ವಾಗತಿಸಿ, ಸುಧಾಕರ್ ಕೆ.  ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಏ.25 -26 : ಇನ್ನಂಜೆ ಪ್ರೀಮಿಯರ್ ಲೀಗ್ 2026

Thumbnail
Posted On: 30 Mar 2026, 04:13 PM

ಕಾಪು : ಇನ್ನಂಜೆ ಫ್ರೆಂಡ್ಸ್ ಇನ್ನಂಜೆ ವತಿಯಿಂದ
ಎಸ್.ವಿ.ಹೆಚ್ ಕನ್ನಡ ಮಾಧ್ಯಮ ಪ್ರೌಢ ಶಾಲೆ ಇನ್ನಂಜೆ ಇಲ್ಲಿಯ 6 ರಿಂದ 10ನೇ ತರಗತಿಯ  ಮಕ್ಕಳ ಉಚಿತ ವಿದ್ಯಾಭ್ಯಾಸಕ್ಕೆ ಸಹಾಯಾರ್ಥವಾಗಿ ಇನ್ನಂಜೆ ಪ್ರೀಮಿಯರ್ ಲೀಗ್ 2026 ನ್ನು ಇನ್ನಂಜೆಯಲ್ಲಿ ಏ.25 ಹಾಗೂ 26 ರಂದು ಆಯೋಜಿಸಲಾಗಿದೆ. 

ಪಂಚಾಯತ್ ಮಟ್ಟದ 8 ತಂಡಗಳು ಲೀಗ್ ಪಂದ್ಯಾಟ ಹಾಗೂ ಆಯ್ದ ಪಿನ್‌ಕೋಡ್ ವ್ಯಾಪ್ತಿಯ ಆಟಗಾರರ ಬಿಡ್ಡಿಂಗ್‌ ಪಂದ್ಯಾಟ (ಕಾಪು, ಬೆಳಪು, ಕಟಪಾಡಿ, ಮೂಡುಬೆಳ್ಳೆ, ಮೂಡಬೆಟ್ಟು, ಇನ್ನಂಜೆ, ಶಿರ್ವ, ಮಣಿಪುರ)ಇದಾಗಿದೆ.

ಪ್ರಥಮ ಬಹುಮಾನ ರೂ.50 ಸಾವಿರ ಮತ್ತು ಟ್ರೋಫಿ, ದ್ವಿತೀಯ ಬಹುಮಾನ ರೂ.30 ಸಾವಿರ ಮತ್ತು ಟ್ರೋಫಿ, ತೃತೀಯ ಮತ್ತು  ಚತುರ್ಥ ಬಹುಮಾನ ರೂ‌.15 ಸಾವಿರ ಸಿಗಲಿದೆ.

ವಿಶೇಷ ಆಕರ್ಷಣೆಯಾಗಿ ವಿಜೇತ ತಂಡದ ಮಾಲೀಕರಿಗೆ ಸೈಕಲ್‌ ಬಹುಮಾನವಿದೆ. ಪ್ರವೇಶ ಶುಲ್ಕ ರೂ. 8 ಸಾವಿರ ಇದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ : 8971043114, 7760214851, 9538262207

ಸಂಸದ ಬಿ ವೈ ರಾಘವೇಂದ್ರ ಕುಟುಂಬ ಕಾಪು ಮಾರಿಯಮ್ಮ ಸನ್ನಿದಾನಕ್ಕೆ ಭೇಟಿ

Thumbnail
Posted On: 30 Mar 2026, 03:16 PM

ಕಾಪು : ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಬಿ ವೈ ರಾಘವೇಂದ್ರ ಅವರು  ಕುಟುಂಬ ಸಮೇತರಾಗಿ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ ಉಚ್ಚಂಗಿ ಸಹಿತ ಮಾರಿಯಮ್ಮ ದೇವಿಯ ದರುಶನ ಪಡೆದರು.

 ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಮತ್ತು ದೇವಳದ ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ ಮತ್ತು ಅಧ್ಯಕ್ಷ ರಾಜರ್ಷಿ ಕೆ. ವಾಸುದೇವ ಶೆಟ್ಟಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು.

ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯ ಅವರು ವ್ಯವಸ್ಥಾಪನಾ ಸಮಿತಿ ಅಭಿವೃದ್ಧಿ ಸಮಿತಿಯ ಸಮ್ಮುಖದಲ್ಲಿ ಪ್ರಾರ್ಥಿಸಿ ಅಮ್ಮನ ಅನುಗ್ರಹ ಪ್ರಸಾದವನ್ನು ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಅಭಿವೃದ್ಧಿ ಸಮಿತಿ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ದೇವಳದ ಪ್ರಬಂಧಕ ಗೋವರ್ಧನ್ ಸೇರಿಗಾರ್ ಮತ್ತು ಸಿಬ್ಬಂದಿ ಲಕ್ಷ್ಮಣ್ ಶೆಟ್ಟಿ ಮಂಡೇಡಿ, ಮತ್ತಿತರರು ಉಪಸ್ಥಿತರಿದ್ದರು.

ಮಾ.27 (ಇಂದು) ಕಾಪುವಿನಲ್ಲಿ ರಕ್ತದಾನ ಶಿಬಿರ

Thumbnail
Posted On: 27 Mar 2026, 08:59 AM

ಕಾಪು : ಕರ್ನಾಟಕ ಸರ್ಕಾರ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರ, ಕೆಎಯುಪಿ ಉಡುಪಿ ಜಿಲ್ಲೆ, ಆಂತರಿಕ ಗುಣಮಟ್ಟ ಭರವಸೆ ಕೋಶ ಯೂತ್ ರೆಡ್ ಕ್ರಾಸ್, ಎನ್ಎಸ್ಎಸ್, ರೋವರ್ಸ್ -ರೇಂಜರ್ಸ್ ಘಟಕ, ಹಳೆಯ ವಿದ್ಯಾರ್ಥಿಗಳ ಸಂಘ, ವಿದ್ಯಾರ್ಥಿ ಕಲ್ಯಾಣ ಸಮಿತಿ
ಸಹಯೋಗದೊಂದಿಗೆ ಭಾರತೀಯ ರೆಡ್ ಕ್ರಾಸ್ ಸೊಸೈಟಿ, ರಕ್ತ ಬ್ಯಾಂಕ್ ಘಟಕ, ಜಿಲ್ಲಾ ಆಸ್ಪತ್ರೆ ಉಡುಪಿ, ಶ್ರೀ ದೇವಿ ಕ್ರೀಡಾ ಮತ್ತು ಸಾಂಸ್ಕೃತಿಕ ಕ್ಲಬ್ ಕಾಪು, ಜೆಸಿಐ ಕಾಪು ಆಯೋಜನೆಯಲ್ಲಿ ರಕ್ತದಾನ ಶಿಬಿರದ 
ಉದ್ಘಾಟನಾ ಕಾರ್ಯಕ್ರಮವು ಮಾ.27 ರಂದು ಬೆಳಿಗ್ಗೆ 09:30 ರಿಂದ ಕಾಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಜರಗಲಿದೆ

ಕಾರ್ಯಕ್ರಮವನ್ನು ಪ್ರೊ. ಗೋಪಾಲಕೃಷ್ಣ ಎಂ. ಗಾಂವ್ಕರ್ ಉದ್ಘಾಟಿಸಲಿದ್ದಾರೆ. 

ಮುಖ್ಯ ಅತಿಥಿಗಳಾಗಿ ಭಾರತೀಯ ರೆಡ್ ಕ್ರಾಸ್ ಸೊಸೈಟಿ, ಉಡುಪಿ ಇದರ ಕಾರ್ಯದರ್ಶಿ ಡಾ. ಗಣನಾಥ ಶೆಟ್ಟಿ ಎಕ್ಕಾರು, ರಕ್ತನಿಧಿ ಘಟಕ, ಜಿಲ್ಲಾ ಆಸ್ಪತ್ರೆ ಉಡುಪಿ ಮುಖ್ಯಸ್ಥೆ ಡಾ.  ವೀಣಾ, ಶ್ರೀ ದೇವಿ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್, ಕಾಪು ಇದರ ಅಧ್ಯಕ್ಷರಾದ ಪ್ರಭಾಕರ ಅಮೀನ್, ಕಾಪು ಜೆಸಿಐ ಅಧ್ಯಕ್ಷರಾದ ವಿಕ್ಕಿ ಪೂಜಾರಿ ಮಡುಂಬು ಭಾಗವಹಿಸಲಿದ್ದಾರೆ.

IQAC ಸಂಯೋಜಕಿ ಡಾ. ರೋಶನಿ ಯಶವಂತ, YRC ಸಂಯೋಜಕ ಡಾ.ರಾಘವ ನಾಯ್ಕ, ವಿದ್ಯಾರ್ಥಿಗಳ ಕಲ್ಯಾಣ ಅಧಿಕಾರಿ ದೀಪಿಕಾ ಸುವರ್ಣ, ಎನ್.ಎಸ್.ಎಸ್ ಸಂಯೋಜಕಿ ಮಂಜುಳಾ ಎಚ್ ಎಸ್, ರೋವರ್ಸ್ - ರೇಂಜರ್ ಘಟಕ ಸಂಯೋಜಕಿ ಸವಿತಾ ಉಪಸ್ಥಿತರಿರಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶ್ರೀ ಬ್ರಹ್ಮ ಬೈದರ್ಕಳ ಗರಡಿ ಸೇವಾ ಸಮಿತಿ ಬೊಳ್ಜೆ ಉದ್ಯಾವರ : ಅಧ್ಯಕ್ಷರಾಗಿ ಪ್ರಕಾಶ್ ಟಿ. ಕೋಟ್ಯಾನ್ ಆಯ್ಕೆ

Thumbnail
Posted On: 27 Mar 2026, 08:44 AM

ಕಾಪು : ಉದ್ಯಾವರ ಬೊಳ್ಜೆಯ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಸೇವಾ ಸಮಿತಿ (ರಿ.) ಯ 2026-29 ನೇ ಸಾಲಿಗೆ ಕಾರ್ಯಕಾರಿ ಸಮಿತಿಯು ಅಸ್ತಿತ್ವಕ್ಕೆ ಬಂದಿದ್ದು, ಅಧ್ಯಕ್ಷರಾಗಿ ಉದ್ಯಮಿ ಪ್ರಕಾಶ್ ಟಿ. ಕೋಟ್ಯಾನ್ ಆಯ್ಕೆಯಾಗಿದ್ದಾರೆ. 

ವಾರ್ಷಿಕ ಮಹಾಸಭೆಯಲ್ಲಿ ಆಯ್ಕೆಯಾದ ಪದಾಧಿಕಾರಿಗಳು ಹೀಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ದಿವಾಕರ್ ಬೊಳ್ಜೆ, ಉಪಾಧ್ಯಕ್ಷರಾಗಿ ಸುಧಾಕರ್ ಕೋಟ್ಯಾನ್ ಬೊಳ್ಜೆ, ಕೋಶಾಧಿಕಾರಿ ಜಯಕುಮಾರ್, ಜೊತೆ ಕಾರ್ಯದರ್ಶಿಯಾಗಿ ಸುರೇಶ್ ಕೆ. ಪೂಜಾರಿ, ಸಚಿನ್ ಎಂ ಸಾಲ್ಯಾನ್ ಬೊಳ್ಜೆ, ಗುರಿಕಾರರಾಗಿ ವಿಠಲ ಕೆ. ಕೋಟ್ಯಾನ್, ವೇಣುಗೋಪಾಲ್ ಉದಿಯಾವರ್, ವಿಠಲ ಅಂಚನ್, ದಿವಾಕರ ಪೂಜಾರಿ, ಅಶೋಕ ಆರ್. ಕೋಟ್ಯಾನ್ ಆಯ್ಕೆಯಾಗಿದ್ದಾರೆ.

 ಪ್ರತಿನಿಧಿ ಮಂಡಳಿಯಿಂದ ಸುಂದರ ಎಸ್ ಕೋಟ್ಯಾನ್, ದಿನೇಶ್ ಎಂ ಸಾಲ್ಯಾನ್, ರಮೇಶ್ ಟಿ ಕೋಟ್ಯಾನ್, ಪ್ರಕಾಶ್ ಟಿ ಕೋಟ್ಯಾನ್, ರವೀಂದ್ರ ಕೋಟ್ಯಾನ್, ದಿವಾಕರ ಬೊಳ್ಜೆ, ಲೋಕನಾಥ ಬೊಳ್ಜೆ, ಶ್ರೀಧರ ಮಾಬಿಯಾನ್, ಸುಧಾಕರ ಕೋಟ್ಯಾನ್, ಸಂತೋಷ್ ಡಿ ಸುವರ್ಣ, ಕಿಶೋರ್ ವಿ ಸಾಲ್ಯಾನ್, ಕಿಶೋರ್ ಟಿ ಬಂಗೇರ, ಚಂದ್ರಶೇಖರ ಎಂ ಬಂಗೇರ, ಸುರೇಶ್ ಕೆ ಪೂಜಾರಿ, ಸಚಿನ್ ಎಂ ಸಾಲ್ಯಾನ್, ಉದಯ ಮಾಬಿಯಾನ, ಸೆಲ್ಯೂತ್ ಕುಮಾರ್, ಜಯಕುಮಾರ್, ನಿತಿನ್  ಕುಮಾರ್ ಪರಾರಿತೋಟ, ರಾಜು ಪೂಜಾರಿ, ನಿತಿನ್ ಜೆ ಸಾಲ್ಯಾನ್, ಸಾಯಿನಾಥ ಬೊಳ್ಜೆ, ದಿನೇಶ್ ಬೊಳ್ಜೆ, ರವಿಕುಮಾರ್, ಪ್ರಕಾಶ್ ಕುಮಾರ್ ಚುನಾಯಿತರಾಗಿದ್ದಾರೆ.

ಕಾಪು ಪಡು ಸರಕಾರಿ ಹಿ.ಪ್ರಾ.ಶಾಲೆಗೆ ಡಿಜಿಟಲ್ ಕಲಿಕಾ ಉಪಕರಣಗಳ ದೇಣಿಗೆ

Thumbnail
Posted On: 27 Mar 2026, 08:41 AM

ಕಾಪು : ರೋಬೋಸಾಫ್ಟ್ ಟೆಕ್ನಾಲಜೀಸ್ ಸಂಸ್ಥೆಯು ತನ್ನ ಸಿ.ಎಸ್.ಆರ್. ಯೋಜನೆಯಡಿ ಕಾಪು ಪಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಡಿಜಿಟಲ್ ಕಲಿಕಾ ಉಪಕರಣ ಹಾಗೂ ಪ್ರೊಜೆಕ್ಟರ್ ಮತ್ತು ಲ್ಯಾಪ್‌ಟಾಪ್ ಅನ್ನು ದೇಣಿಗೆಯಾಗಿ ನೀಡಿತು.

ರೋಬೋಸಾಫ್ಟ್ ಸಂಸ್ಥೆಯ ಸಿ.ಎಸ್.ಆ‌ರ್. ಅಧಿಕಾರಿ ಚಕ್ರಿ ಹೆಗ್ಡೆ ಮಾತನಾಡಿ, ಈ ಆಧುನಿಕ ಉಪಕರಣಗಳು ವಿದ್ಯಾರ್ಥಿಗಳಿಗೆ ತಂತ್ರಜ್ಞಾನ ಆಧಾರಿತ ಸಂವಾದಾತ್ಮಕ ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ಸಹಕಾರಿಯಾಗಲಿದೆ.

ದೃಶ್ಯ ಮಾಧ್ಯಮದ ಮೂಲಕ ಪಾಠಗಳನ್ನು ಸುಲಭವಾಗಿ ಅರ್ಥೈಸಿಕೊಳ್ಳಲು ಮತ್ತು ವಿದ್ಯಾರ್ಥಿಗಳನ್ನು ಡಿಜಿಟಲ್ ಯುಗಕ್ಕೆ ಸಜ್ಜುಗೊಳಿಸಲು ಈ ಕ್ರಮ ಪೂರಕವಾಗಿದೆ ಎಂದರು.

ಕೊಡುಗೆಯನ್ನು ಸ್ವೀಕರಿಸಿದ, ಹಳೆ ವಿದ್ಯಾರ್ಥಿ ಮತ್ತು ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್ ಅವರು ಮಾತನಾಡಿ, ಸರಕಾರಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ ಇಂತಹ ಕಾರ್ಪೋರೆಟ್ ಸಂಸ್ಥೆಗಳ ಬೆಂಬಲ ಅತ್ಯಗತ್ಯವಾಗಿದ್ದು ಡಿಜಿಟಲ್ ಉಪಕರಣಗಳ ಕೊಡುಗೆ ನೀಡಿದ ರೋಬೋಸಾಫ್ಟ್ ಸಂಸ್ಥೆಯ ಆಡಳಿತ ಮಂಡಳಿಯನ್ನು ಅಭಿನಂದಿಸಿ, ಕೃತಜ್ಞತೆ ಸಲ್ಲಿಸಿದರು.

ರೋಬೋಸಾಫ್ಟ್ ಉದ್ಯೋಗಿ ಮತ್ತು ಹಳೆ ವಿದ್ಯಾರ್ಥಿ ಲಾಲಾಜಿ ಪುತ್ರನ್, ನರೇಶ್ ಕುಂದರ್, ಕಾರ್ತಿಕ್ ಕೋಟ್ಯಾನ್, ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕಿ ಉಷಾ ಸ್ವಾಗತಿಸಿ, ಶ್ರೀಲತಾ ವಂದಿಸಿದರು.

ಕಾಪು : ಯುವಸೇನೆ ಮಡುಂಬು ಇದರ 2026 - 27 ನೇ ಸಾಲಿನ ನೂತನ ಅಧ್ಯಕ್ಷರಾಗಿ ನಿತೇಶ್ ಸಾಲ್ಯಾನ್ ಮಡುಂಬು ಆಯ್ಕೆ

Thumbnail
Posted On: 24 Mar 2026, 06:53 AM

ಕಾಪು : ಯುವಸೇನೆ ಮಡುಂಬು ಇದರ 2026-2027 ನೇ ಸಾಲಿನ ನೂತನ ಅಧ್ಯಕ್ಷರಾಗಿ, ಇನ್ನಂಜೆ ಗ್ರಾಮ ಪಂಚಾಯತ್ ಮಾಜಿ ಸದಸ್ಯರು ಮತ್ತು ಜೆಸಿಐ ಕಾಪು ಘಟಕದ ಸದಸ್ಯರಾದ ಜೆಸಿ ನಿತೇಶ್ ಸಾಲ್ಯಾನ್ ಮಡುಂಬು ಆಯ್ಕೆಯಾಗಿದ್ದಾರೆ.

ಪ್ರಧಾನ ಕಾರ್ಯದರ್ಶಿಯಾಗಿ ಕಿರಣ್ ಪೂಜಾರಿ ಕಲ್ಯಾಲು, ಕೋಶಾಧಿಕಾರಿಯಾಗಿ ಸಚಿನ್ ಸಾಲ್ಯಾನ್ ಮಡುಂಬು ಮತ್ತು ಜೊತೆ ಕೋಶಾಧಿಕಾರಿಯಾಗಿ ಪೃಥ್ವಿರಾಜ್ ಶೆಟ್ಟಿ ಮಡುಂಬು ಸರ್ವಾನುಮತದಿಂದ ಆಯ್ಕೆಯಾಗಿರುತ್ತಾರೆ.

ವಾಯ್ಸ್ ಆಫ್ ಪಡುಬಿದ್ರಿ - 2026 ಕರೋಕೆ ಗಾಯನ ಸ್ಪರ್ಧೆಯ ಕರಪತ್ರ ಬಿಡುಗಡೆ

Thumbnail
Posted On: 24 Mar 2026, 06:48 AM

ಪಡುಬಿದ್ರಿ : ಸಂಗೀತವು ವಿಶ್ವವ್ಯಾಪಿ ಭಾಷೆ,  ಸಂಗೀತ ಪ್ರತಿಭೆ ಎಂದರೆ ಕೇವಲ ಹಾಡುವುದಲ್ಲ, ಅದು ಶಬ್ದಗಳ ಸೂಕ್ಷ್ಮತೆಯನ್ನು ಗ್ರಹಿಸುವ ರಾಗ- ಲಯಗಳನ್ನು ಸರಿಯಾಗಿ ಆಳವಡಿಸಿ ಕೊಳ್ಳುವ ಜನ್ಮಜಾತ ಕೌಶಲ್ಯವಾಗಿದೆ. ಇದು ಕೆಲವರಿಗೆ ಹುಟ್ಟಿನಿಂದಲೇ ಬಂದರೆ ಇನ್ನು ಕೆಲವರಲ್ಲಿ ತೀವ್ರ ಆಸಕ್ತಿಯಿಂದ ಬೆಳೆಯುತ್ತಿದೆ.‌ ಗ್ರಾಮೀಣ ಪ್ರದೇಶದ ಪ್ರತಿಭೆಗಳಿಗೆ ಇಂತಹ ಕಾರ್ಯಕ್ರಮಗಳು ಉತ್ತಮ ವೇದಿಕೆಯಾಗಿದೆ  ಎಂದು ಓಂಕಾರ ಕಾಸ್ಟ್ಯೂಮ್ಸ್ ಮತ್ತು ಕಲಾ ಸಂಗಮದ ಆಡಳಿತ ನಿರ್ದೇಶಕಿ ಗೀತಾ ಅರುಣ್ ಹೇಳಿದರು.
ಅವರು ಪಡುಬಿದ್ರಿ ಬಂಟರ ಭವನದಲ್ಲಿ ಜರಗಲಿರುವ ಮೂರು  ದಿನಗಳ  ಬೃಹತ್ ಆಹಾರ ಮತ್ತು  ಸ್ವದೇಶಿ ಉತ್ಪನ್ನಗಳ ಮಾರಾಟ ಮೇಳದ ಅಂಗವಾಗಿ ಮಾರ್ಚ್ 29 ರಂದು ಪಡುಬಿದ್ರಿ ಬಂಟರ ಭವನದಲ್ಲಿ  ನಡೆಯುವ ವಾಯ್ಸ್ ಆಫ್ ಪಡುಬಿದ್ರಿ -2026 ಕರೋಕೆ ಗಾಯನ ಸ್ಪರ್ಧೆಯ ಕರಪತ್ರವನ್ನು   ಬಿಡುಗಡೆಗೊಳಿಸಿ ಮಾತನಾಡಿದರು.

  ಈ ಸಂದರ್ಭದಲ್ಲಿ ತುಳುನಾಡ ಕಲಾವಿದರು ಸಂಸ್ಥೆಯ ಅಧ್ಯಕ್ಷ  ಸಂತೋಷ್ ಪಡುಬಿದ್ರಿ, ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿಯ ರಾಜ್ಯಾಧ್ಯಕ್ಷ  ರಚನ್ ಸಾಲ್ಯಾನ್ ಹೆಜಮಾಡಿ,  ಸಾಹಿತಿ, ಚಿತ್ರಕಲಾವಿದ ಸುರೇಶ್ ಪಡುಬಿದ್ರಿ, ರಿದಮ್ ಸಂಗೀತ ಕಲಾವಿದ ದಿನೇಶ್ ಪಡುಬಿದ್ರಿ ಉಪಸ್ಥಿತರಿದ್ದರು.