Updated News From Kaup

ಶಿರ್ವ : ರಮೇಶ್ ಬಂಟಕಲ್ ಇವರಿಗೆ ಬೆಸ್ಟ್ ಪ್ರೆಸಿಡೆಂಟ್ ಅವಾರ್ಡ್ ಗೌರವ

Thumbnail
Posted On: 03 Feb 2026, 11:39 AM

ಶಿರ್ವ : ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಬಂಟಕಲ್ ಸನ್ ಶೈನ್ ಇದರ ಅಧ್ಯಕ್ಷರಾದ ರಮೇಶ್ ಬಂಟಕಲ್ ಇವರಿಗೆ ಶಿವಮೊಗ್ಗದಲ್ಲಿ ನಡೆದ ಸಮ್ಮೇಳನದಲ್ಲಿ ಬೆಸ್ಟ್ ಪ್ರೆಸಿಡೆಂಟ್ ಅವಾರ್ಡ್ ನೀಡಿ ಗೌರವಿಸಲಾಗಿದೆ.

ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಬಂಟಕಲ್ ಸನ್ ಶೈನ್ ಇದರ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಶುಭಾಶಯ ಕೋರಿದ್ದಾರೆ.

ಕಾಪು : ಇನ್ನಂಜೆ ಮಹಿಳಾ ಮಂಡಳಿಯಿಂದ ಹೊಸಬೆಳಕು ಆಶ್ರಮ ಭೇಟಿ

Thumbnail
Posted On: 01 Feb 2026, 05:34 PM

ಕಾಪು : ಇನ್ನಂಜೆ ಮಹಿಳಾ ಮಂಡಳಿ (ರಿ.) ಇನ್ನಂಜೆ ಇದರ 2ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಮಂಡಳಿಯ ಸದಸ್ಯೆಯರು ಕಾರ್ಕಳ ಬೈಲೂರು ಹೊಸಬೆಳಕು ಆಶ್ರಮಕ್ಕೆ ಭೇಟಿ ನೀಡಿ ಧನಸಹಾಯ ಹಾಗೂ ದಿನಬಳಕೆಯ ಆಹಾರ ಸಾಮಗ್ರಿಗಳನ್ನು ನೀಡಿ‌, ವಾರ್ಷಿಕೋತ್ಸವ ಆಚರಿಸಿದರು.

ಸದಸ್ಯರೆಲ್ಲರ ಸಹಕಾರದಿಂದ ರೂ. 28,500 ನಗದು ಹಾಗೂ ಸುಮಾರು ರೂ.15 ಸಾವಿರ  ವರೆಗಿನ ಆಹಾರ ಸಾಮಗ್ರಿಗಳನ್ನು ಹೊಸಬೆಳಕು ಆಶ್ರಮದ ಮುಖ್ಯಸ್ಥರಾದ ತನುಲಾ ತರುಣ್ ಅವರಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಮಹಿಳಾ ಮಂಡಳಿಯ ಅಧ್ಯಕ್ಷೆ ಸಖುನಂದನ್ ಕುಮಾರ್, ಕಾರ್ಯದರ್ಶಿ ಸೀಮಾ ಮಾರ್ಗರೇಟ್ ಡಿಸೋಜ, ಗೌರವಾಧ್ಯಕ್ಷೆ ಪುಷ್ಪ ರವೀಂದ್ರ ಶೆಟ್ಟಿ, ಪರಿಮಳ ಮಿತ್ತಂತಾಯ, ಗೌರವಸಲಹೆಗಾರ ಶ್ವೇತಾ ಎಲ್ ಶೆಟ್ಟಿ, ಕೋಶಾಧಿಕಾರಿ ಅನಿತಾ ಮಥಾಯಸ್, ಎಸ್ ವಿ ಎಚ್ ಶಾಲೆಯ ನಿವೃತ್ತ ಅಧ್ಯಾಪಕರಾದ ನಂದನ್ ಕುಮಾರ್, ಮಹಿಳಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು. 

ಆಶ್ರಮದ ನಿವಾಸಿಗಳಿಂದ ಮನೋರಂಜನಾ ಕಾರ್ಯಕ್ರಮ ನಡೆಯಿತು.

ಕಾಪು : ದೇಶದ ಹಿತದೃಷ್ಟಿಯಲ್ಲಿ ದೂರದೃಷ್ಟಿ ಇಟ್ಟುಕೊಂಡ ಬಜೆಟ್‌‌ - ಯೋಗೇಶ್ ವಿ. ಶೆಟ್ಟಿ

Thumbnail
Posted On: 01 Feb 2026, 04:20 PM

ಕಾಪು : ಈ ಬಾರಿಯ ಕೇಂದ್ರ ಸರಕಾರದ ಬಜೆಟ್, ದೇಶದ ಹಿತದೃಷ್ಟಿಯಲ್ಲಿ  ದೂರದೃಷ್ಟಿ ಇಟ್ಟುಕೊಂಡ  ಬಜೆಟ್‌‌ ಆಗಿದೆ ಎಂದು ಉಡುಪಿ ಜಿಲ್ಲಾ ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೇಶ್ ವಿ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.

ಮೀನುಗಾರಿಕೆ, ಗೋಡಂಬಿ, ಜವಳಿ ಮತ್ತು ಇತರೆ ಉದ್ಯಮ, ರೈತರ ಒಳಿತು ಮತ್ತು ಉತ್ಪಾದನಾ ಯೋಜನೆಗಳಿಗೆ ಹಾಗೂ ದೇಶದ ಆರ್ಥಿಕ ಬೆಳವಣಿಗೆಗೆ ಪೂರಕ ಬಜೆಟ್ ಆಗಿರುತ್ತದೆ ಎಂದು ತಿಳಿಸಿದ್ದಾರೆ.

ಫೆ.2 : ಜೆಸಿಐ ಕಟಪಾಡಿ - ಪದಗ್ರಹಣ

Thumbnail
Posted On: 01 Feb 2026, 04:10 PM

ಕಾಪು : ಜೆಸಿಐ ಕಟಪಾಡಿ ವಲಯ ಬಿ, ಝೋನ್ 15ರ 2026ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಫೆ.2, ಸೋಮವಾರ ಕಟಪಾಡಿ ಪಲ್ಲಿಗುಡ್ಡೆಯ ಜೆಸಿ ಭವನದಲ್ಲಿ ಜರಗಲಿದೆ. 

ನೂತನ ಅಧ್ಯಕ್ಷರಾಗಿ ಜೆಸಿ ಧೀರಜ್ ಜತ್ತನ್ ಅಧಿಕಾರ ವಹಿಸಲಿದ್ದು, ಅವರ ನೂತನ ತಂಡಕ್ಕೆ ಪದಪ್ರದಾನ ನಡೆಯಲಿದೆ.

ಮುಖ್ಯ ಅತಿಥಿಗಳಾಗಿ ಲ.ಡಾ.ಪ್ರಜ್ವಲ್ ಕೆ.ರಾವ್, ಝೋನ್ 15ರ ಝೋನ್ ಅಧ್ಯಕ್ಷ ಜೆಎಫ್ಎಫ್ ಸಂತೋಷ್ ಶೆಟ್ಟಿ, ಉಪಾಧ್ಯಕ್ಷರಾದ ಜೆಸಿ ಪ್ರದೀಪ್‌ ಶೆಟ್ಟಿ ‌ಇನ್ನ ಭಾಗವಹಿಸಲಿದ್ದಾರೆ ‌ಎಂದು ಜೆಸಿಐ ಕಟಪಾಡಿ ಇದರ ಪ್ರಕಟಣೆ ತಿಳಿಸಿದೆ.

 

 

ಫೆಬ್ರವರಿ 12 : ಸೇನಾ ನಿವೃತ್ತಿ ಪಡೆದು ಹುಟ್ಟೂರಿಗೆ ಆಗಮಿಸುತ್ತಿರುವ ಪೆರ್ಡೂರು ರಮೇಶ್ ಕುಲಾಲ್

Thumbnail
Posted On: 01 Feb 2026, 03:56 PM

ಕಾಪು : ಭಾರತೀಯ ಸೇನೆಯ ಆರ್ಮಿ ಆರ್ಡಿನೆನ್ಸ್ ಕಾರ್ಪ್ಸ್ (AOC) ತರಬೇತಿ ಕೇಂದ್ರದಲ್ಲಿ 22 ವರ್ಷ ಸುದೀರ್ಘ ಸೇವೆಗೈದು ನಿವೃತ್ತಿ ಹೊಂದಿ ತನ್ನ ಹುಟ್ಟೂರು ಕಾಪು ವಿಧಾನ ಸಭಾ ವ್ಯಾಪ್ತಿಯ ಪೆರ್ಡೂರು ದೂಪದಕಟ್ಟೆಗೆ ಫೆಬ್ರವರಿ 12 ರಂದು ಮಧ್ಯಾಹ್ನ 1 ಗಂಟೆಗೆ ಆಗಮಿಸಲಿದ್ದಾರೆ.

 ರಮೇಶ್ ಕುಲಾಲ್ ಉತ್ತರ ಪ್ರದೇಶ, ಜಮ್ಮು ಕಾಶ್ಮೀರ, ಪಂಜಾಬ್, ಮಧ್ಯಪ್ರದೇಶ, ರಾಜಸ್ಥಾನ, ದಿಲ್ಲಿ, ಬೆಂಗಳೂರು ಹೀಗೆ ಹಲವೆಡೆ ಭಾರತೀಯ ಸೇನಾ ಸೇವೆಯಲ್ಲಿ ಸುದೀರ್ಘ ಸೇವೆ ನೀಡಿರುವರು.

ಪೆಭ್ರವರಿ 12: 22 ವರ್ಷದ ಸೇನಾ ನಿವೃತ್ತಿ ಪಡೆದು ಹುಟ್ಟೂರಿಗೆ ಆಗಮಿಸುತ್ತಿರುವ ಪೆರ್ಡೂರು ರಮೇಶ್ ಕುಲಾಲ್.

Thumbnail
Posted On: 31 Jan 2026, 05:58 PM

ಕಾಪು :: ಭಾರತೀಯ ಸೇನೆಯ ಆರ್ಮಿ ಆರ್ಡಿನೆನ್ಸ್ ಕಾರ್ಪ್ಸ್ (AOC) ತರಬೇತಿ ಕೇಂದ್ರದಲ್ಲಿ 22 ವರ್ಷ ಸುದೀರ್ಘ ಸೇವೆಗೈದು ನಿವೃತ್ತಿ ಹೊಂದಿ ತನ್ನ ಹುಟ್ಟೂರು ಕಾಪು ವಿಧಾನ ಸಭಾ ವ್ಯಾಪ್ತಿಯ ಪೆರ್ಡೂರು ದೂಪದಕಟ್ಟೆಗೆ ಪೆಭ್ರವರಿ 12 ರಂದು ಮಧ್ಯಾಹ್ನ 1 ಗಂಟೆಗೆ ಆಗಮಿಸಲಿದ್ದಾರೆ, ರಮೇಶ್ ಕುಲಾಲ್ ಉತ್ತರ ಪ್ರದೇಶ, ಜಮ್ಮು ಕಾಶ್ಮೀರ, ಪಂಜಾಬ್, ಮಧ್ಯಪ್ರದೇಶ, ರಾಜಸ್ಥಾನ, ದಿಲ್ಲಿ, ಬೆಂಗಳೂರು ಹೀಗೆ ಹಲವೆಡೆ ಭಾರತೀಯ ಸೇನಾ ಸೇವೆಯಲ್ಲಿ ಸುದೀರ್ಘ ಸೇವೆ ನೀಡಿರುವರು..

ಜ.31 : ಕಾಪು ಜೆಸಿಐ ಪದಗ್ರಹಣ

Thumbnail
Posted On: 29 Jan 2026, 05:19 PM

ಕಾಪು : ಪ್ರತಿಷ್ಠಿತ ಕಾಪು ಜೆಸಿಐ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣವು ಜನವರಿ 31 ರಂದು ಸಂಜೆ 7 ಗಂಟೆಗೆ ಕಾಪುವಿನ ಜೆಸಿಐ ಭವನದಲ್ಲಿ ಜರಗಲಿದೆ.

ನೂತನ ಅಧ್ಯಕ್ಷರಾಗಿ ನಮ್ಮ ಕಾಪು ನ್ಯೂಸ್ ಇದರ ಪ್ರವರ್ತಕ ವಿಕ್ಕಿ ಪೂಜಾರಿ ಮಡುಂಬು ಅಧಿಕಾರ ವಹಿಸಲಿದ್ದಾರೆ.

ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಕಾಪು ಶ್ರೀ ಹೊಸ ಮಾರಿಗುಡಿಯ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ರಾಜರ್ಷಿ ಕೆ.ವಾಸುದೇವ ಶೆಟ್ಟಿ ಭಾಗವಹಿಸಲಿದ್ದು, ಜೆಸಿಐ ಇಂಡಿಯಾ ವಲಯ 15ರ ಅಧ್ಯಕ್ಷರಾದ ಜೆಎಫ್ಎಫ್ ಸಂತೋಷ್ ಶೆಟ್ಟಿ, ಅತಿಥಿಗಳಾಗಿ ವಲಯ 15ರ ಮಾಜಿ‌ ಅಧ್ಯಕ್ಷರಾದ ಜೆಸಿಐ ಪಿಪಿಪಿ ರಾಕೇಶ್ ಕುಂಜೂರು, ವಲಯ 15ರ ವಲಯ ಉಪಾಧ್ಯಕ್ಷರಾದ ಜೆಎಫ್ಎಮ್ ಅರುಣ್ ಮಂಜ ಮತ್ತಿತರರು ಉಪಸ್ಥಿತರಿರಲಿದ್ದಾರೆ ಎಂದು ಜೆಸಿಐ ಕಾಪು ಪ್ರಕಟಣೆ ತಿಳಿಸಿದೆ.

ಕಾಪು : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕುಟುಂಬ ವರ್ಗ ಹೊಸ ಮಾರಿಗುಡಿ ಭೇಟಿ

Thumbnail
Posted On: 27 Jan 2026, 06:55 PM

ಕಾಪು : ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಸಹೋದರ ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೋಳಿ ಹಾಗೂ ತಾಯಿ ಗಿರಿಜಾ ಹಟ್ಟಿಹೋಳಿ ಮತ್ತು ಕುಟುಂಬಸ್ಥರೊಂದಿಗೆ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮ ದೇವಿಯ ದರುಶನ ಪಡೆದರು.

ದೇವಳದ ವ್ಯವಸ್ಥಾಪನಾ ಸಮಿತಿ ಮತ್ತು ಅಭಿವೃದ್ಧಿ ಸಮಿತಿಯಿಂದ ಅವರನ್ನು ಗೌರವಿಸಲಾಯಿತು.

ದೇವಸ್ಥಾನದ ಎದುರಿನ ಎನ್.ಎಚ್ 66 ಹೆದ್ದಾರಿಯ ಡೈವರ್ಶನ್ ಅಂಡರ್ ಪಾಸ್ ಬಳಿ ರಸ್ತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯಿಂದ ಮನವಿ ನೀಡಲಾಯಿತು. ಇಲಾಖೆಯಿಂದ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ, ಕಾರ್ಯನಿರ್ವಹಣಾಧಿಕಾರಿ ರವಿಕಿರಣ್, ಅಭಿವೃದ್ಧಿ ಸಮಿತಿಯ ಪ್ರಚಾರ ಸಮಿತಿ ಪ್ರಧಾನ ಸಂಚಾಲಕ ಮತ್ತು ಘಂಟಾನಾದ ಸೇವಾ ಸಮಿತಿ ಅಧ್ಯಕ್ಷ ಯೋಗೀಶ್ ವಿ. ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ಮಾಧವ ಆರ್. ಪಾಲನ್, ಶೇಖರ ಸಾಲ್ಯಾನ್, ರವೀಂದ್ರ ಮಲ್ಲಾರ್, ಜಯಲಕ್ಷ್ಮಿ ಎಸ್. ಶೆಟ್ಟಿ, ಪ್ರಚಾರ ಸಮಿತಿ ಸಂಚಾಲಕ ಜಯರಾಮ್ ಆಚಾರ್ಯ, ನವದುರ್ಗಾ ಲೇಖನ ಯಜ್ಞ ಸಮಿತಿಯ ಮಹಿಳಾ ವಿಭಾಗದ ಪ್ರಧಾನ ಸಂಚಾಲಕಿ ಸಾವಿತ್ರಿ ಗಣೇಶ್, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈ. ಸುಕುಮಾರ್, ಪ್ರಮುಖರಾದ ಪ್ರಸಾದ್ ರಾಜ್ ಕಾಂಚನ್, ರಮೇಶ್ ಕಾಂಚನ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
    

ಕುತ್ಯಾರು ಯುವಕ ಮಂಡಲ : ಕೆ.ಪಿ.ಎಲ್ ಟ್ರೋಫಿ 2026 ಸಂಪನ್ನ

Thumbnail
Posted On: 27 Jan 2026, 05:31 PM

ಕಾಪು : ಉಡುಪಿ ಜಿಲ್ಲಾ ರಾಜ್ಯೋತ್ಸವದ ಪ್ರಶಸ್ತಿ ಪುರಸ್ಕೃತ ಯುವಕ ಮಂಡಲ (ರಿ.) ಕುತ್ಯಾರು ಇವರ ಆಶ್ರಯದಲ್ಲಿ  ಕುತ್ಯಾರು ಪ್ರೀಮಿಯರ್ - 2026, 40 ಗಜಗಳ ಕ್ರಿಕೆಟ್ ಪಂದ್ಯಾಟ ಯುವಕ ಮಂಡಲದ ವಠಾರದಲ್ಲಿ ಭಾನುವಾರ ನಡೆಯಿತು.

ಯುವಕ ಮಂಡಲ ಅಧ್ಯಕ್ಷ ಮನೋಜ್ ಕುತ್ಯಾರು ಅಧ್ಯಕ್ಷತೆಯಲ್ಲಿ, ಪಂದ್ಯಾಟದ ಉದ್ಘಾಟನೆಯನ್ನು ಕುತ್ಯಾರು ಅರಮನೆಯ ಜಿನೇಶ್ ಬಲ್ಲಾಳ್ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ವೇ|ಮೂ| ಕೇಂಜ ಶ್ರೀಧರ್ ತಂತ್ರಿ, ಶಿರ್ವ ಸಹಕಾರಿ ವ್ಯವಸಾಯಿಕ ಸಂಘ. ನಿ. ಶಿರ್ವ ಇದರ ಅಧ್ಯಕ್ಷರಾದ ಕುತ್ಯಾರು ಪ್ರಸಾದ್ ಶೆಟ್ಟಿ, ಶಿರ್ವ ಠಾಣೆಯ ಪಿ.ಎಸ್.ಐ  ಮಂಜುನಾಥ್ 
ಸಭಾಳಲ, ವೇದಿಕೆಯಲ್ಲಿ ಉಪಸ್ಥಿತರಿದ್ದರು.

 ಸಂಜೆ ಸಮಾರೋಪ ಸಮಾರಂಭದಲ್ಲಿ ಶಿರ್ವದ ಉದ್ಯಮಿ ರತನ್ ಶೆಟ್ಟಿ ಕೊಲ್ಲೊಟ್ಟು, ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಕುತ್ಯಾರು ನವೀನ್ ಶೆಟ್ಟಿ, ಯುವಕ ಮಂಡಲ ಕುತ್ಯಾರು ಇದರ ಮಾಜಿ ಅಧ್ಯಕ್ಷರಾದ ಗುಲ್ವಾರ್ ಖಾನ್, ಉಲ್ಲಾಯ ಫ್ರೆಂಡ್ಸ್ ಕುತ್ಯಾರು ಅಧ್ಯಕ್ಷರಾದ  ಭಾರ್ಗವ ತಂತ್ರಿ, ಉದ್ಯಮಿ ದಿನೇಶ್ ಕುಲಾಲ್ ಶಿರ್ವ, ಕುತ್ಯಾರು ಗ್ರಾಮಸ್ಥರು, ಕ್ರೀಡಾಭಿಮಾನಿಗಳು, ಯುವಕ ಮಂಡಲ (ರಿ.) ಕುತ್ಯಾರು ಇದರ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

ಕಾಪು ಶ್ರೀ ಹೊಸ ಮಾರಿಗುಡಿ : ಬಿಗ್ ಬಾಸ್ ರನ್ನರ್ ಅಪ್ ರಕ್ಷಿತಾ ಶೆಟ್ಟಿ ಭೇಟಿ

Thumbnail
Posted On: 25 Jan 2026, 05:46 PM

ಕಾಪು : ಇಲ್ಲಿನ ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಬಿಗ್ ಬಾಸ್ ರನ್ನರ್ ಅಪ್ ರಕ್ಷಿತಾ ಶೆಟ್ಟಿ ಅವರು ಭೇಟಿ ನೀಡಿ ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮ ದೇವಿಯ ದರುಶನ ಪಡೆದರು.

 ವ್ಯವಸ್ಥಾಪನ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ವತಿಯಿಂದ ಅಮ್ಮನ ಅನುಗ್ರಹ ಪ್ರಸಾದವನ್ನು ನೀಡಿ ಗೌರವಿಸಲಾಯಿತು.

 ಈ ಸಂದರ್ಭದಲ್ಲಿ ದೇವಳದ ಅಭಿವೃದ್ಧಿ ಸಮಿತಿಯ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಶೇಖರ ಸಾಲ್ಯಾನ್ ಮತ್ತು ಪ್ರಬಂಧಕ ಗೋವರ್ಧನ್ ಸೇರಿಗಾರ್  ಹಾಗೂ ಸಿಬ್ಬಂದಿ ಲಕ್ಷ್ಮಣ್ ಶೆಟ್ಟಿ ಮಂಡೇಡಿ ಉಪಸ್ಥಿತರಿದ್ದರು.