Updated News From Kaup

ಅರಸು ಪ್ರಶಸ್ತಿ -2025 ಪುರಸ್ಕೃತರಾದ ಲಚ್ಚಿಲ್ ನಾಗೇಶ್ ಬಂಗೇರ ಉಚ್ಚಿಲ

Thumbnail
Posted On: 29 Dec 2025, 10:31 PM

ಪಡುಬಿದ್ರಿ : ಲಚ್ಚಿಲ್ ನಾಗೇಶ್ ಡಿ. ಬಂಗೇರ ಉಚ್ಚಿಲ ಅವರನ್ನು ಮೂಲ್ಕಿ ಸೀಮೆ ಅರಸರ ಅರಮನೆಯಲ್ಲಿ "ಅರಸು ಪ್ರಶಸ್ತಿ -2025"ನ್ನು ಪ್ರಧಾನಿಸಿ ಗೌರವಿಸಲಾಯಿತು.

ಬ್ಯಾಂಕ್ ಆಫ್ ಇಂಡಿಯಾ ಎಂಪ್ಲಾಯಸ್೯ ಯೂನಿಯನ್ ಇದರ ಕರ್ನಾಟಕ ವಲಯದ ಅಧ್ಯಕ್ಷರಾಗಿ ಸುದೀರ್ಘ ಅವಧಿಯಲ್ಲಿ ಸೇವೆಯನ್ನು ಸಲ್ಲಿಸಿದ್ದರು. ಉಚ್ಚಿಲ ಶ್ರೀ ಮಹಾಲಕ್ಷ್ಮಿ ಆಂಗ್ಲಮಾಧ್ಯಮ ಶಾಲೆ, ಲಚ್ಚಿಲ್ ವಿದ್ಯಾಪ್ರಸಾರ ಸಮಿತಿಯಲ್ಲಿ ತೊಡಗಿಸಿಕೊಂಡು ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಸೇವಕರಾಗಿ ಗುರುತಿಸಿಕೊಂಡಿದ್ದಾರೆ.

ಈ ಸಂದರ್ಭ ಅರಸು ದುಗ್ಗಣ್ಣ ಸಾವಂತರು, ಮಾಜಿ ಸಚಿವ ಅಭಯಚಂದ್ರ ಜೈನ್, ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್, ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು, ಡಾ. ಅಮರಶ್ರೀ ಶೆಟ್ಟಿ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ, ಲೀಲಾಕ್ಷ ಕರ್ಕೇರ, ಬಾಹುಬಲಿ ಪ್ರಸಾದ್, ಗೌತಮ್ ಜೈನ್, ವಸಂತ್ ಬೆರ್ನಾರ್ಡ್, ಉದ್ಯಮಿ ಕನ್ಯಾನ ಸದಾಶಿವ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಶಿರ್ವ : ಎಸ್ ಎಸ್.ಪ್ರಸಾದ್‌ರವರ 4ನೇ ಕೃತಿ ಸಾಯಿ ಕೃಷ್ಣ ಬಿಡುಗಡೆ

Thumbnail
Posted On: 29 Dec 2025, 07:05 PM

ಶಿರ್ವ : ಅತೀ ಶುದ್ಧ ಪ್ರೀತಿ, ಜ್ಞಾನ ವಿಜ್ಞಾನದ ತತ್ವಗಳನ್ನು ಒಳಗೊಂಡ ಸರಳ ಜೀವನ ಮೌಲ್ಯಗಳು, ಚಿಂತನಾಶೀಲ ಸಕಾಲಿಕ ವಿಚಾರಗಳನ್ನು ತಿಳಿಸಿ ಓದುಗರನ್ನು ಸ್ವವಿಮರ್ಶೆಗೆ ಒಳಪಡಿಸುವ ನಿಟ್ಟಿನಲ್ಲಿ ಎಸ್ ಎಸ್.ಪ್ರಸಾದ್‌ರವರ ಸುಪ್ರಭಾತದ ಲೇಖನಗಳು ಮನ ಮುಟ್ಟುವಂತಿವೆ ಎಂದು ಹಿರಿಯ ಆಧ್ಯಾತ್ಮದ ಚಿಂತಕಿ ಬಂಟಕಲ್ಲು ಕೃಷ್ಣಛಾಯಾದ ಪ್ರಫುಲ್ಲಾ ಜಯ ಶೆಟ್ಟಿ ನುಡಿದರು.
ಅವರು ರವಿವಾರ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಾಪು ತಾಲೂಕು ಘಟಕದ ವತಿಯಿಂದ  ಪ್ರಸಾದ್‌ರವರ ನಿವಾಸ "ಅನ್ನಪೂರ್ಣ"ದಲ್ಲಿ ಏರ್ಪಡಿಸಿದ "ಮನೆಯಂಗಳದಲ್ಲಿ ಸಾಹಿತ್ಯ" ಕಾರ್ಯಕ್ರಮದಲ್ಲಿ  ಜಿಲ್ಲಾ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಸತ್ಯಸಾಯಿ ಪ್ರಸಾದ್ ಇವರ ನಾಲ್ಕನೇ ಕೃತಿ"ಸಾಯಿ ಕೃಷ್ಣ" ಇದರ ಬಿಡುಗಡೆಗೊಳಿಸಿ ಮಾತನಾಡಿ ಖುಷಿಯನ್ನು ಹಂಚಿದರೆ ಖುಷಿಯೇ ಹಿಂದಕ್ಕೆ ಬರುತ್ತದೆ. ಇಂತಹ ಅನೇಕ ಕೃತಿಗಳು ಇವರಿಂದ ಮೂಡಿಬರಲಿ ಎಂದು ಹಾರೈಸಿದರು. 

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮಣಿಪಾಲ ರಾಜೀನನಗರ ಸರಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕ ಪಿ.ಬಾಲಕೃಷ್ಣ ಮಾತನಾಡಿ ಪ್ರಸಾದ್‌ರವರ ಕೃತಿಗಳು ನಮ್ಮ ನಡೆ,ನುಡಿಗೆ ದಾರಿದೀಪವಾಗಿದೆ. ಹಿಂದಿನ ಕೃತಿಗಳಾದ ಸಾಯಿ ಸಂದೇಶ,ಸಾಯಿ ಪ್ರಸಾದ, ಸಾಯಿ ತೀರ್ಥ ಕೃತಿಗಳು ಭಾವ ಹಾಗೂ ಭಾವನೆಗಳ ಸಮ್ಮಿಲಿತವಾಗಿವೆ ಎಂದರು.

  ಹಿರಿಯ ಜಾನಪದ ವಿದ್ವಾಂಸರಾದ ಕೆ.ಎಲ್.ಕುಂಡಂತಾಯ ಕಾರ್ಯಕ್ರಮವನ್ನು ದೀಪ ಪ್ರಜ್ವಲನ ಮಾಡಿ ಚಾಲನೆ ನೀಡಿದರು. ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿಗಳನ್ನು ಹಾರೈಸಿ, ಪ್ರಸಾದ್‌ರವರು ಶಿಕ್ಷಕರಾಗಿ ಸಲ್ಲಿಸಿದ ಸೇವೆ ಹಾಗೂ ಸಾಧನೆಗಳ ಪರಿಚಯ ಮಾಡಿದರು. ಈ ಸಂದರ್ಭದಲ್ಲಿ ಪ್ರಫುಲ್ಲಾ ಜಯ ಶೆಟ್ಟಿ ಇವರನ್ನು ಕಸಾಪ ವತಿಯಿಂದ ಸನ್ಮಾನಿಸಲಾಯಿತು. ಕೃತಿ ಲೇಖಕ ಪ್ರಸಾದ್ ಮಾತನಾಡಿ ಸಾಹಿತ್ಯ ರಚನೆಗೆ ಪ್ರೇರಣಾ ಶಕ್ತಿಯಾದ ತಮ್ಮ ಮಾತಾಪಿತರನ್ನು ಸ್ಮರಿಸಿದರು. ಸಹೋದರಿ ಪ್ರೇಮಕಾತಿ ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು.

ಸಮಾರಂಭದ ಅಧ್ಯಕ್ಷತೆಯನ್ನು ಕಾಪು ತಾಲೂಕು ಕಸಾಪ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ವಹಿಸಿದ್ದರು. ವೇದಿಕೆಯಲ್ಲಿ  ಶ್ರೀಕ್ಷೇತ್ರ ಬಂಟಕಲ್ಲು ದೇವಳದ ಮಾಜಿ ಆಡಳಿತ ಮೊಕ್ತೇಸರ ಶಶಿಧರ ವಾಗ್ಲೆ, ಕಸಾಪ ಜಿಲ್ಲಾ ಕೋಶಾಧ್ಯಕ್ಷ ಮನೋಹರ ಪಿ,  ಜಿಲ್ಲಾ ಸಮಿತಿ ಪ್ರತಿನಿಧಿ ಕಟ್ಟಿಂಗೇರಿ ದೇವದಾಸ್ ಹೆಬ್ಬಾರ್, ಬೆಂಗಳೂರು ರಾಜಾಜಿನಗರ ಪ್ರೌಢ ಶಾಲಾ ಮುಖ್ಯ ಶಿಕ್ಷಕ  ಹೆರಾಲ್ಡ್ ಕ್ವಾಡ್ರಸ್, ವೀರಮಾರುತಿ ಕಲಾ ಸಂಘದ ಅಧ್ಯಕ್ಷ ಸುಜಿತ್ ಕುಮಾರ್,ಇಂದಿರಾ ಎಸ್.ಪ್ರಸಾದ್, ರಾಜೀವನಗರ ಹಿ.ಪ್ರಾ ಶಾಲಾ ಮುಖ್ಯ ಶಿಕ್ಷಕ ಕೃಷ್ಣ ನಾಯ್ಕ್, ಮಧುಕರ್ ಎಸ್,ಬಿಳಿಯಾರು ಭಾಸ್ಕರ ಆಚಾರ್ಯ ಉಪಸ್ಥಿತರಿದ್ದರು.
   ಬಂಟಕಲ್ಲು ಬ್ಬುಸ್ವಾಮಿ ದೈವಸ್ಥಾನದ ಗುರಿಕಾರ ಶಂಕರ ಪದಕಣ್ಣಾಯ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕಸಾಪ ಸಂಘಟನಾ ಕಾರ್ಯದರ್ಶಿ ಕೆ.ಆರ್.ಪಾಟ್ಕರ್ ನಿರೂಪಿಸಿದರು. ಕಸಾಪ ಗೌರವ ಕಾರ್ಯದರ್ಶಿ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ಧನ್ಯವಾದವಿತ್ತರು. ಖ್ಯಾತ  ಜಾನಪದ ಕಲಾವಿದ ಡಾ.ಗಣೇಶ್ ಗಂಗೊಳ್ಳಿಯವರಿಂದ ನಾಡಗೀತೆ, ಕನ್ನಡ ಗೀತಾಗಾಯನ ನಡೆಯಿತು.

ಭಾರತೀಯ ಹಿನ್ನೆಲೆ ಗಾಯಕ ಕುನಲ್ ಗಾಂಜಾವಾಲಾ : ಕಾಪು ಹೊಸ ಮಾರಿಗುಡಿ ಭೇಟಿ

Thumbnail
Posted On: 29 Dec 2025, 06:06 PM

ಕಾಪು : ಸುಪ್ರಸಿದ್ದ ಭಾರತೀಯ ಹಿನ್ನೆಲೆ ಗಾಯಕ ಕುನಲ್ ಗಾಂಜಾವಾಲಾ ಸೋಮವಾರ ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮನ ಕ್ಷೇತ್ರ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀದೇವಿಯ ದರುಶನ ಪಡೆದರು.

ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯ ಅಮ್ಮನ ಅನುಗ್ರಹ ಪ್ರಸಾದ ನೀಡಿದರು.

ದೇವಳದ ವ್ಯವಸ್ಥಾಪನಾ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ವತಿಯಿಂದ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ, ಕಾರ್ಯನಿರ್ವಹಣಾಧಿಕಾರಿ ರವಿಕಿರಣ್, ಅಭಿವೃದ್ಧಿ ಸಮಿತಿ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಮತ್ತು ವ್ಯವಸ್ಥಾಪನಾ ಸಮಿತಿ ಸದಸ್ಯ ಮಾಧವ ಆರ್. ಪಾಲನ್, ಪ್ರಬಂಧಕ ಗೋವರ್ಧನ್ ಸೇರಿಗಾರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಬೆಳಪು ಗ್ರಾ.ಪಂ ಕಾರ್ಯದರ್ಶಿಯಾಗಿ ಪದೋನ್ನತಿ ಹೊಂದಿದ ಚಂದ್ರಾವತಿ ವಿ. ಆಚಾರ್ಯ

Thumbnail
Posted On: 29 Dec 2025, 05:05 PM

ಪಡುಬಿದ್ರಿ : ಉಚ್ಚಿಲ ಬಡಾ ಗ್ರಾಮ ಪಂಚಾಯತ್ನಲ್ಲಿ 31 ವರ್ಷಗಳ ಕಾಲ ಎಟೆಂಡರ್, ಕ್ಲರ್ಕ್ ಆಗಿ ಸುದೀರ್ಘ ಸೇವೆಯನ್ನು ಸಲ್ಲಿಸಿ ಇದೀಗ ಕಾರ್ಯದರ್ಶಿಯಾಗಿ ಪದೋನ್ನತಿ ಹೊಂದಿ ಬೆಳಪು ಗ್ರಾ.ಪಂ.ಗೆ ನಿಯುಕ್ತಿಗೊಂಡಿರುವ ಚಂದ್ರಾವತಿ ವಿ. ಆಚಾರ್ಯ ಅವರನ್ನು ಅಭಿನಂದಿಸಿ, ಸಮ್ಮಾನಿಸಿ ಬೀಳ್ಕೊಡಲಾಯಿತು.

ಉಚ್ಚಿಲ ಬಡಾ ಗ್ರಾ.ಪಂ. ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷರಾದ ಶಿವ ಕುಮಾರ್ ಮೆಂಡನ್, ಉಪಾಧ್ಯಕ್ಷರಾದ ದೀಪಕ್ ಕುಮಾರ್ ಎರ್ಮಾಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸತೀಶ್ ಆರ್.ಜಿ., ಅಕೌಂಟೆಂಟ್ ನಿರ್ಮಲಾ ಶೆಟ್ಟಿ, ಗ್ರಾ.ಪಂ. ಸದಸ್ಯರು, ಸಿಬ್ಬಂದಿ ಉಪಸ್ಥಿತರಿದ್ದರು.

 

 

ಬಿರುವೆರ್ ಕಾಪು ಸೇವಾ ಸಮಿತಿಯಿಂದ ಜ್ಞಾನ ದೀವಿಗೆ ವಿದ್ಯಾರ್ಥಿವೇತನ ವಿತರಣೆ, ಸನ್ಮಾನ

Thumbnail
Posted On: 28 Dec 2025, 04:35 PM

ಕಾಪು : ಬಿರುವೆರ್ ಕಾಪು ಸೇವಾ ಸಮಿತಿ (ರಿ.) ವತಿಯಿಂದ ಕಾಪು ಬಿಲ್ಲವರ ಸಹಾಯಕ ಸಂಘದ ವೇದಿಕೆಯಲ್ಲಿ 5 ನೇ ವರ್ಷದ "ಜ್ಞಾನ ದೀವಿಗೆ" ವಿದ್ಯಾರ್ಥಿವೇತನ ವಿತರಣೆ ಮತ್ತು ಸನ್ಮಾನ ಕಾರ್ಯಕ್ರಮವನ್ನು ಮಾಜಿ ಸಚಿವ  ವಿನಯ ಕುಮಾರ್ ಸೊರಕೆ ಉದ್ಘಾಟಿಸಿ, ಶುಭ ಹಾರೈಸಿದರು.

ಸುಮಾರು 50  ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ವಿನಯ ಕುಮಾರ್ ಸೊರಕೆ, ಸೂರ್ಯಕಾಂತ್ ಸುವರ್ಣ, ಸಂಕಪ್ಪ ಅಮಿನ್ ವಕೀಲರು, ಗೀತಾಂಜಲಿ ಸುವರ್ಣ, ಸಂಜೀವ ಆರ್ ಅಮಿನ್ , ದೀಪಕ್ ಕುಮಾರ್ ಎರ್ಮಾಳ್  ವಿತರಿಸಿದರು.  

ಸಂಪನ್ಮೂಲ ವ್ಯಕ್ತಿ ದೀಪಕ್ ರಾಜ್ ರವರು ಮಕ್ಕಳ ಭವಿಷ್ಯ ಮತ್ತು ವ್ಯಕ್ತಿತ್ವ ವಿಕಸನದ ಕುರಿತು ಮಾತನಾಡಿದರು.

 ಪ್ರಭಾಕರ ಎಸ್ ಪೂಜಾರಿ, ವಿಕ್ರಂ ಕಾಪು, ನವೀನ್ ಅಮಿನ್ ಶಂಕರಪುರ, ಸೂರ್ಯ ಕಾಂತ್ ಸುವರ್ಣ, ಶಿವಾನಂದ ಕೋಟ್ಯಾನ್,  ಸಂಜೀವ ಆರ್ ಅಮಿನ್ ಮೂಳೂರು, ವಿಕ್ಕಿ ಮಡುಂಬು, ಸುಧಾಕರ ಸಾಲ್ಯಾನ್ ರವನ್ನು  ಸನ್ಮಾನಿಸಲಾಯಿತು. 

ಬಿರುವೆರ್ ಕಾಪು ಸೇವಾ ಸಮಿತಿಯ ಉಪಾಧ್ಯಕ್ಷರಾದ ಮನೋಜ್ ಅಂಚನ್ ರವರು ಸಭಾಧ್ಯಕ್ಷತೆ ವಹಿಸಿದ್ದರು.

ಸಮಿತಿಯ ಉಪಾಧ್ಯಕ್ಷರುಗಳಾದ ಸುಧಾಕರ ಸಾಲ್ಯಾನ್, ಮನೋಜ್ ಅಂಚನ್ , ಕೋಶಧಿಕಾರಿಯಾದ ಕಾರ್ತಿಕ್ ಅಮಿನ್ , ಕಾರ್ಯದರ್ಶಿಗಳಾದ ವಿಕ್ಕಿ ಮಡುಂಬು, ರಾಕೇಶ್ ಕುಂಜೂರು , ರವಿರಾಜ್ ಶಂಕರಪುರ, ದೀಪಕ್ ಕುಮಾರ್ ಎರ್ಮಾಳ್, ಸುಜನ್ ಎಲ್ ಸುವರ್ಣ, ಮನೋಹರ್ ಕಲ್ಲುಗುಡ್ಡೆ , ವರುಣ್ ಬಿ ಕೋಟ್ಯಾನ್,ಸಂಧ್ಯಾ ಬಿ ಕೋಟ್ಯಾನ್ , ಅಶ್ವಿನಿ ಎನ್ ಬಂಗೇರ ,  ಹರಿ ಪ್ರಸಾದ್ ಕುಬೇರ ,   ಶ್ರೀಮತಿ ಸ್ವಪ್ನ ಎಮ್ ಅಂಚನ್ , ಅನಿಷ ಎಸ್ ಅಂಚನ್ , ಸಾಕ್ಷಿ ಪೂಜಾರಿ, ಅಶ್ವಿನಿ ಗಣೇಶ್ ಕೋಟ್ಯಾನ್ , ಸುರಕ್ಷ ಸುಜನ್ ಸುವರ್ಣ ಉಪಸ್ಥಿತರಿದ್ದರು.

ಪತ್ರಕರ್ತ ರಾಕೇಶ್ ಕುಂಜೂರು ಪ್ರಸ್ತಾವಿಸಿ, ಸ್ವಾಗತಿಸಿದರು. ಸತೀಶ್ ಪೂಜಾರಿ ಹೊಸ್ಮರ್ ಕಾರ್ಯಕ್ರಮ ನಿರೂಪಿಸಿ, ವಿಕ್ಕಿ ಮಡುಂಬುರವರು ವಂದಿಸಿದರು.

 

ಉದ್ಯಾವರ : ಸಾಮಾಜಿಕ ಕಾರ್ಯಕರ್ತೆ ಹೆಲೆನ್ ಫೆರ್ನಾಂಡಿಸ್ ನಿಧನ

Thumbnail
Posted On: 28 Dec 2025, 12:46 PM

ಕಾಪು : ಉದ್ಯಾವರ ಗ್ರಾಮದ ಸಾಮಾಜಿಕ ಕಾರ್ಯಕರ್ತೆ, ಹಲವಾರು ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಹೆಲೆನ್ ಫೆರ್ನಾಂಡಿಸ್ ಉದ್ಯಾವರ ಇಂದು ಕುಸಿದು ಬಿದ್ದು ಹೃದಯಾಘಾತದಿಂದ ಬೆಳಗ್ಗೆ ನಿಧನರಾದರು.

ಉದ್ಯಾವರ ಗ್ರಾಮೀಣ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿ ಹಲವಾರು ವರ್ಷ ಪಕ್ಷ ಸಂಘಟನೆಯಲ್ಲಿ ತೊಡಗಿದ್ದ ಇವರು, ಸಕ್ರಿಯ ಕಾಂಗ್ರೆಸ್ ಕಾರ್ಯಕರ್ತೆ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಇದರ ಸದಸ್ಯೆಯಾಗಿದ್ದು, ಹಲವಾರು ಹುದ್ದೆಗಳನ್ನು ಸಕ್ರಿಯವಾಗಿ ನಿಭಾಯಿಸಿದ್ದಾರೆ. ಪ್ರಸ್ತುತ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಉದ್ಯಾವರ ಚರ್ಚಿನ ವಿವಿಧ ಸಂಘ-ಸಂಸ್ಥೆಗಳಲ್ಲಿ  ಮತ್ತು ವಿಶೇಷವಾಗಿ ಪಾಲನ ಮಂಡಳಿಯಲ್ಲಿಯೂ ಸೇವೆ ಸಲ್ಲಿಸಿದ್ದರು. ಅವರಿಗೆ 64 ವರ್ಷ ವಯಸ್ಸಾಗಿತ್ತು. ಮೂವರು ಪುತ್ರರು ಮತ್ತು ಅಪಾರ ಬಂಧು ಬಳಗದವರನ್ನು ಆಗಲಿದ್ದಾರೆ.

ವಾಜಪೇಯಿ ಅವರ ಜನ್ಮ ಶತಾಬ್ದಿ ಪ್ರಯುಕ್ತ ಹಮ್ಮಿಕೊಂಡ ಕಾರ್ಯಕ್ರಮ ಅವಿಸ್ಮರಣೀಯ : ಬಿ.ವೈ.ವಿಜಯೇಂದ್ರ

Thumbnail
Posted On: 28 Dec 2025, 10:54 AM

ಕಾಪು : ಅಪ್ರತಿಮ ದೇಶ ಭಕ್ತ ಅಟಲ್ ಬಿಹಾರಿ  ವಾಜಪೇಯಿಯವರ ದೂರದರ್ಶಿತ್ವ ನಾಯಕತ್ವ ಸರ್ವರಿಗೂ ಮಾರ್ಗದರ್ಶಿಯಾಗಿದೆ. ರಾಷ್ಟ್ರೀಯ ಹೆದ್ದಾರಿಗೆ ಕಾಯಕಲ್ಪ ನೀಡಿದ ದೇಶದ ಜನ ಸೇವಕ. ಕಾಪು ಕಡಲ ತೀರದಲ್ಲಿ ಅಟಲ್ ರವರ ಜನ್ಮ ದಿನಾಚರಣೆಯ ಪ್ರಯುಕ್ತ ಪ್ರಯುಕ್ತ ಹಮ್ಮಿಕೊಂಡ ಕಾರ್ಯಕ್ರಮ ಅವಿಸ್ಮರಣೀಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಅವರು ಅವರು ಶನಿವಾರ ಕಾಪು ದೀಪಸ್ತಂಭದ ಬಳಿ ಕಡಲ ಕಿನಾರೆಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಾಬ್ದಿ ಪ್ರಯುಕ್ತ ಬಿಜೆಪಿ ಕಾಪು ಮಂಡಲದ ವತಿಯಿಂದ ಕಾಪು ವಿಧಾನ ಸಭಾ ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ನೇತೃತ್ವದಲ್ಲಿ ನಡೆಯುತ್ತಿರುವ ಎರಡನೇ ದಿನದ ಕಾಪು ಕಡಲ ಪರ್ಬದ ಕೀರ್ತಿಶೇಷ ಡಾ. ವಿ.ಎಸ್. ಆಚಾರ್ಯ ಸ್ಮರಣೆಯ ದಿ. ಲೀಲಾಧರ ಶೆಟ್ಟಿ. ವೇದಿಕೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

ಈ ಸಂದರ್ಭ ಪಕ್ಷ ಸಂಘಟನೆಗಾಗಿ 

ಕೀರ್ತಿಶೇಷ ಡಾ. ವಿ.ಎಸ್. ಆಚಾರ್ಯ, ಸೋಮಶೇಖರ್ ಭಟ್ ರ ಶ್ರಮವನ್ನು ಸ್ಮರಿಸಿದರು.

 

ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ, ಅದಾನಿ ಗ್ರೂಪ್ ಕಾರ್ಯವಾಹಕ ನಿರ್ದೇಶಕ, ಅಧ್ಯಕ್ಷ ಕಿಶೋರ್ ಆಳ್ವ ಮಾತನಾಡಿದರು.

 

ಅಟಲ್ ಸಾಧನಾ ಪ್ರಶಸ್ತಿ : ಕಾಪು ಕಡಲ ಪರ್ಬದ ಗೌರಾವಾಧ್ಯಕ್ಷ, ನಿಕಟಪೂರ್ವ ಶಾಸಕರಾದ ಲಾಲಾಜಿ ಆರ್ ಮೆಂಡನ್, ಡಾ. ವಿದ್ಯಾಧರ್ ಎಸ್ ನಾಯಕ್, ಸೂರ್ಯಕಾಂತ್ ಜಯ ಸುವರ್ಣ ಅವರನ್ನು ಅಟಲ್ ಸಾಧನಾ ಪ್ರಶಸ್ತಿ ಪ್ರದಾನಿಸಿ ಗೌರವಿಸಲಾಯಿತು. ಬಿಜೆಪಿ ಹಿರಿಯರನ್ನು ಗುರುತಿಸಿ ಗೌರವಿಸಲಾಯಿತು.

 

ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. 

 

ವೇದಿಕೆಯಲ್ಲಿ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಬೆಂಗಳೂರು ಎಂ.ಆರ್.ಜಿ ಗ್ರೂಪ್ ಚೈಯರ್‌ಮ್ಯಾನ್ ಕೆ.ಪ್ರಕಾಶ್ ಶೆಟ್ಟಿ, ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಸುಳ್ಯ ಶಾಸಕಿ ಭಾಗಿರಥಿ ಮುರಳೂ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಸಕಲೇಶಪುರ ಶಾಸಕ ಮಂಜು, ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್, ಆಟಲ್ ಜೀ ಶತಮಾನೋತ್ಸವ ಸಮಿತಿಯ - ರಾಜ್ಯ ಸಂಚಾಲಕರಾದ ಜಗದೀಶ್ ಹಿರೇಮನಿ, ಮಾಜಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಮಂಗಳೂರು ವಿಭಾಗ ವಿಭಾಗ ಪ್ರಭಾರಿ ಉದಯ್ ಕುಮಾರ್ ಶೆಟ್ಟಿ, ರಾಷ್ಟ್ರೀಯ ಬಿಲ್ಲವ ಮಹಾ ಮಂಡಲ ಮಹಿಳಾ ವಿಭಾಗ ಉಡುಪಿ ಅಧ್ಯಕ್ಷರಾದ ಗೀತಾಂಜಲಿ ಎಮ್. ಸುವರ್ಣ, ಕಾಪು ಪುರಸಭಾ ಸದಸ್ಯ ಅನಿಲ್ ಕುಮಾರ್, ಬಿಜೆಪಿ ಕಾಪು ಮಂಡಲ ಅಧ್ಯಕ್ಷ ಜಿತೇಂದ್ರ ಶೆಟ್ಟಿ, ಬಿಜೆಪಿ ಕಾಪು ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಗೋಪಾಲಕೃಷ್ಣರಾವ್‌, ಶರಣ್ ಕುಮಾರ್ ಮಟ್ಟು, ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ, ಹೋಟೆಲ್ ಉದ್ಯಮಿಗಳಾದ ಸಂತೋಷ್ ಶೆಟ್ಟಿ ಪುಣೆ, ಬರೋಡ ಶಶಿಧರ್ ಶೆಟ್ಟಿ, ಉಪೇಂದ್ರ, ಕುಶ ಸಾಲ್ಯಾನ್, ಸಂದೀಪ್ ಶೆಟ್ಟಿ, ರಾಜರ್ಷಿ ಕೆ. ವಾಸುದೇವ ಶೆಟ್ಟಿ, ನೀತಾಗುರುರಾಜ್, ಸೋನು ಪಾಂಗಾಳ, ಸಂತೋಷ್ ಮೂಡುಬೆಳ್ಳೆ ಮತ್ತಿತರರು ವೇದಿಕೆಯಲ್ಲಿದ್ದರು.

 

ಪ್ರಾಣೇಶ್ ಹೆಜಮಾಡಿ ವಂದೇ ಮಾತರಂ ಹಾಡಿದರು. ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಸ್ವಾಗತಿಸಿದರು. ಬಿಜೆಪಿ ಕಾಪು ಮಂಡಲ ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು ವಂದಿಸಿದರು. ಎಲ್ಲೂರು ಗ್ರಾ.ಪಂ. ಮಾಜಿ ಸದಸ್ಯ ಸತೀಶ್ ಶೆಟ್ಟಿ ಗುಡ್ಡೆಚ್ಚಿ ನಿರೂಪಿಸಿದರು.

 

ನಂತರ ಗಾಯಕ ರಘು ದೀಕ್ಷಿತ್ ರವರಿಂದ  ಸಂಗೀತ ರಸ ಮಂಜರಿ ಕಾರ್ಯಕ್ರಮವು  ನಡೆಯಿತು.

 

ಕಾಪು : K1 ಹೋಟೆಲ್ ಬಳಿ ಜಿಗ್ ಜಾಗ್ ಬ್ಯಾರಿಕೆಡ್ ಅಳವಡಿಸುವ ಬಗ್ಗೆ ಎನ್ ಎಚ್ ಎ ಐ ಗೆ ಮನವಿ

Thumbnail
Posted On: 27 Dec 2025, 07:01 PM

ಕಾಪು : ರಾ.ಹೆ.66 ರ ಕಾಪು ಹೋಟೆಲ್ K1 ಹತ್ತಿರದಲ್ಲಿರುವ ಎನ್ ಎಚ್  ವೃತ್ತದ ಛೇದಕದಲ್ಲಿ ತೀವ್ರ ಸಂಚಾರ ದಟ್ಟಣೆ ಮತ್ತು ಹೆಚ್ಚುತ್ತಿರುವ ಅಪಘಾತಗಳ ಬಗ್ಗೆ  ವ್ಯವಸ್ಥಿತವಾಗಿ ಸರಿಪಡಿಸಲು ಸಾಮಾಜಿಕ ಕಾರ್ಯಕರ್ತ ಕಾಪು ಜಯರಾಮ ಆಚಾರ್ಯ 
ಯೋಜನಾ ನಿರ್ದೇಶಕರು, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ ಮಾಡಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಹಲವಾರು ಅಪಘಾತಗಳು ಸಂಭವಿಸಿರುತ್ತದೆ ಮತ್ತು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಅಪಘಾತಗಳು ಸಂಭವಿಸಿರುತ್ತದೆ. ಇದಕ್ಕೆ ಮುಖ್ಯ ಕಾರಣ ಅತಿಯಾದ ವೇಗ, ಕಳಪೆ ಗೋಚರಕೆ ಮತ್ತು ಸರಿಯಾದ ನಿಯಂತ್ರಣಗಳ ಕೊರತೆಯಿಂದಾಗಿ ಅಪಘಾತಗಳು ಸಂಭವಿಸಿವೆ  ಮತ್ತು ವರದಿಯು ಆಗಿರುತ್ತದೆ.  ಇದಲ್ಲದೆ, ಈ ವೃತ್ತದ ಮೂಲಕ  ವಾಹನಗಳು ಕಾಪು ನಗರ, ಶಿರ್ವ,  ಬೆಳ್ಮಣ್‌ಗೆ ಸಾಗುತ್ತದೆ. ಕಾಪು ಮುಖೇನ ಮಂಗಳೂರಿಗೆ  ಮತ್ತು ಉಡುಪಿಗೆ ಸಾಗುತ್ತದೆ. 

ಈ ಸರ್ಕಲ್ ಮೂಲಕ ಪಾದೂರು ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವಸ್ ಲಿಮಿಟೆಡ್ (ISPRL)ನ ಭಾರೀ ತೈಲ ಟ್ಯಾಂಕರ್‌ಗಳು, ಟ್ರಕ್‌ಗಳು ಮತ್ತು ಇತರ ಸ್ಥಳಗಳಿಗೆ ಈ ಮೂಲಕ ಆಗಾಗ್ಗೆ ಚಲಿಸುವ ಭಾರೀ ವಾಹನಗಳು. ರಾಷ್ಟ್ರೀಯ ಹೆದ್ದಾರಿ ಮುಖ್ಯ ರಸ್ತೆಯಿಂದ ಬರುವ ವಾಹನ ದಟ್ಟಣೆಯಿಂದಾಗಿ ಯಾವಾಗಲೂ ತಿರುವು ಸಮಯದಲ್ಲಿ ಅಪಘಾತಗಳು ಸಂಭವಿಸುತ್ತವೆ ಮತ್ತು ನಿರಂತರ ಸಂಚಾರ ದಟ್ಟಣೆ ಉಂಟಾಗುತ್ತದೆ.ಹಾಗೂ  ಇಕ್ಕಡೆಗಳ್ಳಲ್ಲಿ ಸರಿಯಾದ ಸರ್ವಿಸ್ ರಸ್ತೆ ಮತ್ತು ಡ್ರೈನೇಜ್ ವ್ಯವಸ್ಥೆಯು ಸರಿಯಾಗಿ ಇರದೆ ಮಳೆ ನೀರು ರಸ್ತೆಯಲ್ಲಿ ಹರಿದು  ಸುಗಮ ಸಂಚಾರಕ್ಕೆ ಅನಾನುಕೂಲವಾಗುತ್ತದೆ.

ಪ್ರಮುಖ ಸಮಸ್ಯೆಗಳೆಂದರೆ ಅಸಮರ್ಪಕ ಸೂಚನಾ ಫಲಕಗಳು, ಸಂಚಾರ ಸಂಕೇತಗಳು ಅಥವಾ ವೃತ್ತಗಳ, ಕಿರಿದಾದ ಲೇನ್‌ಗಳು ಮತ್ತು ಅಪಾಯಗಳನ್ನು ಹೆಚ್ಚಿಸುವ ವೇಗದ ಜಿಗ್ ಜಾಗ್ ಬ್ಯಾರಿಕೇಡ್‌ಗಳಿಲ್ಲದೆ ಅಪಘಾತಗಳು ಸಂಭವಿಸುತ್ತದೆ 

ವೃತ್ತದ ಪಕ್ಕದಲ್ಲಿ ಎರಡು ಬದಿಗಳಲ್ಲಿಯೂ ಬ್ಯಾರಿಕೇಡ್‌ಗಳನ್ನು ಅಳವಡಿಸುವುದು  ಮತ್ತು ಇತರ ಸುರಕ್ಷತಾ ಕ್ರಮಗಳಿಂದಾಗಿ ಅಪಘಾತಗಳನ್ನು ತಡೆಯಬಹುದು/ತಪ್ಪಿಸಬಹುದು. ಆಧುನಿಕ ವೃತ್ತಗಳು, ಉತ್ತಮ ಬೆಳಕು, ರಂಬಲ್ ಪಟ್ಟಿಗಳು ಮತ್ತು ಸ್ಪಷ್ಟ ಗುರುತುಗಳನ್ನು ಸ್ಥಾಪಿಸುವಂತಹ ಪ್ರಸ್ತಾವಿತ ಪರಿಹಾರಗಳನ್ನು ಸಹ ಬ್ಯಾರಿಕೇಡ್ ಸುರಕ್ಷತೆ ಮತ್ತು ಹರಿವನ್ನು ಹೆಚ್ಚಿಸುತ್ತದೆ.  ಈ ಮೂಲಕ ಸಾರ್ವಜನಿಕರ ಅಭಿಪ್ರಾಯದಂತೆ ಮತ್ತು ಪ್ರಯಾಣಿಕರ ಪರವಾಗಿ ಆಗ್ರಹಿಸಿದ್ದಾರೆ.

 

ಡಿ.28 (ನಾಳೆ) : 47ನೇ ವರ್ಷದ ಪುಣೆ ಕುಲಾಲ ಸುಧಾರಕ ಸಂಘದ ವಾರ್ಷಿಕ ಮಹಾಸಭೆ

Thumbnail
Posted On: 27 Dec 2025, 06:49 PM

ಪುಣೆ : ಮಹಾನಗರಿ ಮುಂಬೈಯ ಪುಣೆ ಕುಲಾಲ ಸುಧಾರಕ ಸಂಘ (ರಿ.) ಇದರ ಮಹಾಸಭೆ  ಡಿ. 28 ರಂದು ಭಾನುವಾರ ಬೆಳಿಗ್ಗೆ10 ರಿಂದ ಶ್ರೀ ಗುಂಡೂರಾವ್ ಎಂ ಶೆಟ್ಟಿ ಮೆಮೋರಿಯಲ್ ಹಾಲ್, ಡಾ|  ಸ್ಯಾಮ್ ರಾವ್ ಕಲ್ಮಾಡಿ ಕನ್ನಡ ಮಾಧ್ಯಮ ಶಾಲೆ, ಡಾ| ಕೆದ್ಕರ್  ರೋಡ್ ಪುಣೆಯಲ್ಲಿ ನಡೆಯಲಿದೆ.

ಕುಲಾಲ ಸುಧಾರಕ ಸಂಘ  ಪುಣೆ ಇದರ ಅಧ್ಯಕ್ಷರಾದ ದೊಡ್ಡಣ್ಣ ಸಿ ಮೂಲ್ಯ ಅಧ್ಯಕ್ಷತೆಯಲ್ಲಿ ಹಾಗೂ ವಿವಿಧ ಕುಲಾಲ ಮುಖಂಡರು ಉಪಸ್ಥಿತಿಯಲ್ಲಿ ನಡೆಯಲಿದೆ.

ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ : ಕಾಪು ಮಾರಿಯಮ್ಮ ದರುಶನ

Thumbnail
Posted On: 27 Dec 2025, 06:43 PM

ಕಾಪು : ಕರ್ನಾಟಕ ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ್ ಹೊರಟ್ಟಿ ಅವರು ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮ ದೇವಿಯ ದರುಶನ ಪಡೆದರು.

ದೇವಳದ ವ್ಯವಸ್ಥಾಪನಾ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ವತಿಯಿಂದ ಸ್ವಾಗತಿಸಿ ಗೌರವಿಸಲಾಯಿತು.

 ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯ ಅಮ್ಮನ ಅನುಗ್ರಹ ಪ್ರಸಾದ ನೀಡಿದರು.

 ಈ ಸಂದರ್ಭದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು ನನಗೆ ಇದು ಜೀವನದಲ್ಲಿ ಅತ್ಯಂತ ಶ್ರೇಷ್ಠವಾದ ದಿನ, ಇಂತಹ ಚರಿತ್ರೆಯುಳ್ಳ ದೇವಸ್ಥಾನಕ್ಕೆ ಬಂದಿರುವುದು ನನ್ನ ಪೂರ್ವ ಜನ್ಮದ ಪುಣ್ಯ, ಕೋಟಿ ದುಡ್ಡು ಕೊಟ್ಟರು ಸಿಗದ ಮಾನಸಿಕ ನೆಮ್ಮದಿಯ ಅನುಭವವಾಗಿದೆ, ದೇಶದಲ್ಲಿ ರಾಜ್ಯದಲ್ಲಿ ಎಲ್ಲಿಯೂ ನಡೆಯದ ರೀತಿಯಲ್ಲಿ ಈ ದೇಗುಲದ ಜೀರ್ಣೋದ್ಧಾರ ನಡೆದಿದೆ, ಅ ತಾಯಿ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದರು.

ಈ ಸಂದರ್ಭದಲ್ಲಿ ಕಾಪು ಕ್ಷೇತ್ರದ ಶಾಸಕ ಮತ್ತು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ, ಅಭಿವೃದ್ಧಿ ಸಮಿತಿ ಅಧ್ಯಕ್ಷ ರಾಜರ್ಷಿ ಕೆ. ವಾಸುದೇವ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ, ಕಾರ್ಯನಿರ್ವಹಣಾಧಿಕಾರಿ ರವಿಕಿರಣ್, ಅಭಿವೃದ್ಧಿ ಸಮಿತಿ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಉಪಾಧ್ಯಕ್ಷ ಮತ್ತು ವ್ಯವಸ್ಥಾಪನಾ ಸಮಿತಿಯ ಸದಸ್ಯ ಮಾಧವ ಆರ್. ಪಾಲನ್, ಪ್ರಚಾರ ಸಮಿತಿ ಪ್ರಧಾನ ಸಂಚಾಲಕ ಮತ್ತು ಘಂಟಾನಾದ ಸೇವಾ ಸಮಿತಿ ಅಧ್ಯಕ್ಷ ಯೋಗೀಶ್ ವಿ. ಶೆಟ್ಟಿ, ಹುಬ್ಬಳ್ಳಿ ಧಾರವಾಡ ಸಮಿತಿಯ ಸಂಚಾಲಕರಾದ ಸುಗ್ಗಿ ಸುಧಾಕರ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿಯ ಸದಸ್ಯರುಗಳಾದ ಶೇಖರ ಸಾಲ್ಯಾನ್,ರವೀಂದ್ರ ಮಲ್ಲಾರ್, ಮನೋಹರ ರಾವ್, ಜಯಲಕ್ಷ್ಮಿ ಎಸ್. ಶೆಟ್ಟಿ, ಚರಿತ ದೇವಾಡಿಗ, ಪ್ರಚಾರ ಸಮಿತಿ ಸಂಚಾಲಕ ಜಯರಾಮ್ ಆಚಾರ್ಯ, ನವದುರ್ಗಾ ಲೇಖನ ಯಜ್ಞ ಸಮಿತಿಯ ಪ್ರಧಾನ ಸಂಚಾಲಕಿ ಸಾವಿತ್ರಿ ಗಣೇಶ್ ಮತ್ತು ಪ್ರಬಂಧಕ ಗೋವರ್ಧನ್ ಸೇರಿಗಾರ್  ಹಾಗೂ ಮತ್ತಿತರರು ಉಪಸ್ಥಿತರಿದ್ದರು.