Updated News From Kaup

ಪಡುಬೆಳ್ಳೆ ಶ್ರೀ ನಾರಾಯಣ ಗುರು ಶಾಲೆಗೆ ರಿಲಯನ್ಸ್ ಫೌಂಡೇಶನ್‌ನಿಂದ ಶಾಲಾ ವಾಹನ ಕೊಡುಗೆ

Thumbnail
Posted On: 20 Jun 2026, 08:38 AM

ಕಾಪು : ಪಡುಬೆಳ್ಳೆ ಶ್ರೀನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲೆಗೆ ರಿಲಯನ್ಸ್ ಫೌಂಡೇಶನ್ ಇದರ ವತಿಯಿಂದ ಶುಕ್ರವಾರ ನೂತನ ಬಸ್ ಇದರ ಹಸ್ತಾಂತರ ಕಾರ್ಯಕ್ರಮ ಜರುಗಿತು.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮುಂಬೈ ಕಸ್ಟಮ್ ಕ್ಲಿಯರೆನ್ಸ್ ವಿಭಾಗದ ಹಿರಿಯ ವ್ಯವಸ್ಥಾಪಕರಾದ ದಯಾನಂದ ಸಿ.ಕೊಟ್ಯಾನ್  ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ತಮ್ಮ ಜವಾಬ್ದಾರಿಗಳನ್ನು ಅರಿತು ಬಾಳಿ ಮುಂದೆ ಸಮಾಜದಲ್ಲಿ ಉತ್ತಮ ಸ್ಥಾನಮಾನವನ್ನು ಗಳಿಸಿ ಗುರುಹಿರಿಯರಿಗೆ ಗೌರವ ನೀಡಿ ದೇಶದ ಸತ್ರಜೆಗಳಾಗಿ ಬಾಳಿ ಎಂದು ಶುಭ ಹಾರೈಸಿದರು. 

ಮುಂಬೈನ್ ಚಾರ್ಟಡ್ ಅಕೌಂಟೆಂಟ್ ಜಯಂತ ಪೂಜಾರಿ ಶುಭ ಹಾರೈಸಿದರು.

ಅಧ್ಯಕ್ಷತೆಯನ್ನು ಬಿಲ್ಲವರ ಎಸೋಸಿಯೇಶನ್ ಮುಂಬಯಿ ಇದರ ಉಪಾಧ್ಯಕ್ಷ ಮೋಹನ್ ಸಿ.ಕೊಟ್ಯಾನ್ ವಹಿಸಿದ್ದರು. 

ಶಾಲಾ ಆಡಳಿತ ಸಮಿತಿಯ ಸದಸ್ಯರಾದ ಶಿವಾಜಿ ಎಸ್.ಸುವರ್ಣ ಬೆಳ್ಳೆ, ಕಟಪಾಡಿ ಶಂಕರ ಪೂಜಾರಿ, ಪ್ರಕಾಶ್ ಪಾಲಮೆ, ಗೀತಾ ವಾಗ್ಲೆ, ಸುರೇಶ್ ಪೂಜಾರಿ,  ನಿರಂಜನ್ ಕರ್ಕೇರಾ ಹೆಜಮಾಡಿ, ನವೀನ್ ಕೊಟ್ಯಾನ್ ಹೆಜಮಾಡಿ, ಶರತ್ ಕುಮಾರ್, ನಿರಂಜನ್ ಪೂಜಾರಿ, ಕೃಷ್ಣಪ್ಪ ಪೂಜಾರಿ, ವಾರಿಜ ಸಾಲಿಯಾನ್, ಪ್ರಸಾದ್ ಭಂಡಾರಿ, ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿಗಳು, ಪೋಷಕರು ಉಪಸ್ಥಿತರಿದ್ದರು. 

ಆಂಗ್ಲ ಮಾಧ್ಯಮದ ಮುಖ್ಯ ಶಿಕ್ಷಕ ರಾಘವೇಂದ್ರ ಸಾಲಿಯಾನ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಶಿಕ್ಷಕಿಯರಾದ ವೀಣಾ ನಾಯಕ್, ದೀಕ್ಷಾ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಮಾಧ್ಯಮ ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಉಷಾ ಎಸ್ ವಂದಿಸಿದರು.

 

ಕಾಪು : ಅಪಘಾತ ತಡೆಗೆ ವೇಗ ನಿಯಂತ್ರಕ ಅಳವಡಿಕೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧ್ಯಕ್ಷರಿಗೆ ಮನವಿ

Thumbnail
Posted On: 18 Jun 2026, 07:20 PM

ಕಾಪು : ಇಲ್ಲಿನ ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಮುಂಭಾಗದಲ್ಲಿರುವ ಅಂಡರ್ ಪಾಸ್ ಹಾಗೂ ಸರ್ವಿಸ್ ರಸ್ತೆಯಲ್ಲಿ ಬಹಳಷ್ಟು ಬಾರಿ ರಸ್ತೆ ಅಪಘಾತಗಳು ಉಂಟಾಗಿರುತ್ತವೆ, ಬಹಳ ಮುಖ್ಯವಾಗಿ ವಾಹನಗಳ ದಟ್ಟಣೆಯಿಂದ, ಅತಿಯಾದ ವೇಗದಿಂದ ಮತ್ತು ಮುಂಜಾಗ್ರತಾ ಕ್ರಮಗಳನ್ನು ಪಾಲಿಸದೆ ಇರುವುದರಿಂದ ಈ ಅಪಘಾತಗಳು ಉಂಟಾಗಿರುತ್ತವೆ. 

 ಮಾರಿಯಮ್ಮನ ರಜತ ರಥ ಪ್ರವೇಶ ಮತ್ತು ಪ್ರತಿಮೆ ವಿಸರ್ಜನೆಯ ಸಂದರ್ಭದಲ್ಲೂ ರಸ್ತೆಯನ್ನು ಹಾದುಹೋಗಲು ಇರುವುದರಿಂದ ಬಹಳಷ್ಟು ಬಾರಿ ತೊಂದರೆಯಾಗುತ್ತಿತ್ತು.
 ಈ ನಿಟ್ಟಿನಲ್ಲಿ ಹಲವಾರು ಬಾರಿ ಜನಪ್ರತಿನಿಧಿಗಳಿಗೆ, ಅಧಿಕಾರಿ ವರ್ಗದವರಿಗೆ, ಜಿಲ್ಲಾಡಳಿತಕ್ಕೆ  ಮನವಿಯನ್ನ ಮಾಡಿದ್ದರು ಕೂಡ ಯಾವುದೇ ಸ್ಪಂದನೆ ದೊರಕಿಲ್ಲ ಎಂದು ಸಮಾಜ ಸೇವಕ ಜಯರಾಮ್ ಆಚಾರ್ಯ ಈ ಹಿಂದೆ ನಮ್ಮ ಕಾಪು ಮಾಧ್ಯಮದಲ್ಲಿ ಮಾಹಿತಿಯನ್ನು ನೀಡಿದ್ದರು.

ಇದೀಗ ಜೂನ್ 17ರ ಬುಧವಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧ್ಯಕ್ಷರಾದ ಸಂತೋಷ್ ಕುಮಾರ್ ಯಾದವ್ ಐಎಎಸ್ ಅವರು ಉಚ್ಚಂಗಿ ಸಹಿತ ಕಾಪು ಶ್ರೀ ಮಾರಿಯಮ್ಮನ ದರುಶನ ಪಡೆಯಲು ಕಾಪುವಿಗೆ ಬಂದಿದ್ದಾಗ ಸಾರ್ವಜನಿಕರ ಪರವಾಗಿ ಸಮಾಜಸೇವಕ  ಮತ್ತು ಜಾತ್ಯಾತೀತ ಜನತಾದಳದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯರಾಮ್ ಆಚಾರ್ಯ ಅವರು ಈ ಬಗ್ಗೆ ಮನವಿಯೊಂದಿಗೆ ಮಾಹಿತಿಯನ್ನು ನೀಡಿದರು.

 ಭಗವಂತನ ಸನ್ನಿಧಾನದಲ್ಲಿ ಮನವಿಯನ್ನು ನೀಡಿರುವುದರಿಂದ ನಿಮ್ಮ ಕೆಲಸ ಆಯ್ತು ಅಂತ ತಿಳಿದುಕೊಳ್ಳಿ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧ್ಯಕ್ಷರು ತಿಳಿಸಿದರು. ಈ ಸಂದರ್ಭದಲ್ಲಿ ಅಧಿಕಾರಿಗಳು ಮತ್ತು ದೇವಳದ ವ್ಯವಸ್ಥಾಪನಾ ಸಮಿತಿ ಮತ್ತು ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಒಂದು ವರ್ಷದ ಮಗುವಿನ ತಾಯಿ ದಿವ್ಯಾ ಕುಲಾಲ್ ಕ್ಯಾನ್ಸರ್ ಚಿಕಿತ್ಸೆ ಗೆ ನೆರವು ನೀಡುವಿರಾ...

Thumbnail
Posted On: 16 Jun 2026, 09:22 PM

ಕಾಪು : ತಾಲೂಕಿನ ಪಡುಬಿದ್ರಿ ಗ್ರಾಮ ಪಂಚಾಯತ್ ನಿವಾಸಿ ದಿ. ಕೃಷ್ಣ ಮೂಲ್ಯರ ಪುತ್ರಿ 30 ವರ್ಷ ಪ್ರಾಯದ ಬಡಕುಟುಂಬದ ದಿವ್ಯ ಕುಲಾಲ್ ಕ್ಯಾನ್ಸರ್ ರೋಗದಿಂದ ಬಳಲುತಿದ್ದು, ಚಿಕಿತ್ಸೆಯ ವೆಚ್ಚ ಭರಿಸಲು ನಿಮ್ಮ ಮುಂದೆ ಸಹಾಯಕ್ಕಾಗಿ ಅಂಗಲಾಚುತ್ತಿದ್ದಾರೆ, ಸಹೃದಯಿ ದಾನಿಗಳೇ ಆದಷ್ಟು ತಮ್ಮಿಂದ ಆಗುವ ಸಹಾಯದ ಜೊತೆಗೆ ದಿವ್ಯ ಲ ಒಂದು ವರ್ಷದ ಪುಟ್ಟ ಮಗುವಿಗೂ ಆಸರೆಯಾಗೋಣ.

ದಿವ್ಯ ಅವರ ಬ್ಯಾಂಕ್ ಖಾತೆಯ ಮಾಹಿತಿ...
Name: Divya
Account No: 01382200086460
IFSC Code: CNRBOO10138
MICR Code: 576015022
Google Pay Numbers: 9632492659 : 8497865818.

ಉಡುಪಿ : ಸದ್ದಿಲ್ಲದೇ ಪೆರ್ಡೂರು ಕುಲಾಲ ಸಂಘದಿಂದ ಹೀಗೊಂದು ಮಾದರಿ ನಡೆ

Thumbnail
Posted On: 16 Jun 2026, 09:18 PM

ಉಡುಪಿ : ಸಮುದಾಯ ಸಂಘಟನೆಯ ಕಾರ್ಯಚಟುವಟಿಕೆ ಕಾರ್ಯಕ್ರಮ ಆಯೋಜನೆ, ಮಾಹಿತಿ ಹಂಚಿಕೆ, ಸನ್ಮಾನಗಳಿಗೆ ಮಾತ್ರ  ಸೀಮಿತವಾಗದೆ ಅದರಾಚೆಗೆ ಬೆಳೆದು  ಮಳೆಯಲ್ಲಿ ನೆನೆದು, ಬಿಸಿಲಲ್ಲಿ ಬೆಂದು ನೋಯುತ್ತಿದ್ದ  ಬಡ  ಕುಟುಂಬಕ್ಕೆ ಭದ್ರವಾದ ಸೂರೊಂದನ್ನು ನಿರ್ಮಿಸಿ ಕೊಡುದರ ಮೂಲಕ ಮಾದರಿ ನಡೆಯನ್ನು ಪ್ರದರ್ಶಿಸಬಹುದು ಎಂಬುದನ್ನು  ಉಡುಪಿ ಜಿಲ್ಲೆಯ ಪೆರ್ಡೂರು ಕುಲಾಲ  ಸಂಘ ಮಾಡಿದೆ. 

ಪೆರ್ಡೂರು  ಕುಲಾಲ ಸಂಘ ವ್ಯಾಪ್ತಿಯ ಕುಕ್ಕೇಹಳ್ಳಿ ಬೊಂಟೆಕುಮೇರಿ ಬೇಬಿ  ಕುಲಾಲ ಕುಟುಂಬ ತೀರ ಬಡತನದ ಕುಟುಂಬ. ಗಂಭೀರ ಅರೋಗ್ಯ ಸಮಸ್ಯೆಯಿಂದ ಬಳಲಿ, ನಿತ್ಯದ ಬೇಕು  ಬೇಡವೆಗಳನ್ನು ನಿರ್ವಹಿಸಲು ಕಷ್ಟ್ಟಪಡುತ್ತಿದ್ದ ಕುಟುಂಬ. ಮಳೆ ಬಂದರೆ ಸೋರುವ, ಬೇಸಿಗೆಯಲ್ಲಿ ಬಿಸಿಲು ಇಣುಕುವ ಜೋಪಡಿ.  ಇಂತಹ ಸಂದೀಗ್ದ ಬದುಕಿನ ಪ್ರಯಾಸತನವನ್ನು ಕಂಡು  ಮರುಗಿದ ಸ್ಥಳೀಯ ಕುಲಾಲ ಯುವ ಭಾಂದವರು ಪೆರ್ಡೂರು  ಕುಲಾಲ ಸಂಘದ ಗಮನಕ್ಕೆ ತಂದು ಆ  ಕುಟುಂಬಕ್ಕೆ ನೆಮ್ಮದಿಯ ಮನೆಯೊಂದನ್ನು ನಿರ್ಮಿಸಿಕೊಡುವ ದೃಡ ಸಂಕಲ್ಪವನ್ನು  ಮಾಡಿದರು. 

ಪೆರ್ಡೂರು  ಕುಲಾಲ ಸಂಘದ  ಈ  ಯೋಚನೆಗೆ ಹಲವು  ಧಾನವಂತ ಮನಸುಗಳು ಸಹಾಯ ಹಸ್ತ ಚಾಚಿದವು.  ಕುಂಬಾರರ ಗುಡಿ ಕೈಗಾರಿಕೆ ಸಹಕಾರಿ ಸಂಘ  ಪೆರ್ಡೂರು 50 ಸಾವಿರ ಧನ ಸಹಾಯದ ಬೆಂಬಲ ನೀಡಿತು. ಸ್ಥಳೀಯ ಯುವ ಉತ್ಸಾಹಿ ಕಟ್ಟಡ ನಿರ್ಮಾಣ ಕೆಲಸಗಾರರ ತಂಡದ ಶ್ರಮದಾನ, ಪೆರ್ಡೂರು  ಕುಲಾಲ ಸಂಘದ  ಕಮಿಟಿಯ ಸದಸ್ಯರು, ಸಜ್ಜನರ ಧನ ಸಹಾಯ ಬೆಂಬಲದಿಂದ ಅಂದಾಜು 5 ಲಕ್ಷ ವೆಚ್ಚದಲ್ಲಿ ಸುಭದ್ರವಾದ ಮನೆಯನ್ನು ಕುಕ್ಕೇಹಳ್ಳಿಯ ಬೇಬಿ ಕುಲಾಲ ಕುಟುಂಬಕ್ಕೆ  ನಿರ್ಮಿಸಿ ಕೊಡಲಾಯಿತು. ಬೇಬಿ  ಕುಲಾಲ ಅವರ ಕಂಗಳಿಂದ ಆನಂದ  ಬಾಷ್ಪ ಹರಿದು ಬಂತು.

ಸಮುದಾಯದ ಕಟ್ಟಕಡೆಯ ವ್ಯಕ್ತಿಯನ್ನು ತಲುಪುವ ಈ ಮಹಾಕಾರ್ಯಕ್ಕೆ ತಾವೂ ಕೈಜೋಡಿಸಬಹುದು ಎಂದು ವಿನಂತಿಸಿದ್ದಾರೆ.
ಸಂಪರ್ಕ ಸಂಖ್ಯೆ : 9141150952. (ಕುಲಾಲ ಸಂಘ ಪೆರ್ಡೂರು )

ಶ್ರೀ ದೇವಿ ಫ್ರೆಂಡ್ಸ್ ಮಲ್ಲಾರು ರಾಣ್ಯಕೇರಿ, ಕಾಪು : 4 ನೇ ವರ್ಷದ ಉಚಿತ ಪುಸ್ತಕ ವಿತರಣೆ, ಪ್ರತಿಭಾ ಪುರಸ್ಕಾರ

Thumbnail
Posted On: 15 Jun 2026, 08:48 AM

ಕಾಪು : ಶ್ರೀ ದೇವಿ ಫ್ರೆಂಡ್ಸ್ ಮಲ್ಲಾರು ರಾಣ್ಯಕೇರಿ, ಕಾಪು ಇವರ ನೇತೃತ್ವದಲ್ಲಿ ದಿ.ಕಾಪು ಲೀಲಾಧರ್ ಶೆಟ್ಟಿ ಇವರ ಸ್ಮರಣಾರ್ಥ ರಾಣೆಯಾರ್ ಸಮಾಜದ ವಿದ್ಯಾರ್ಥಿಗಳಿಗೆ 4 ನೇ ವರ್ಷದ ಉಚಿತ ಪುಸ್ತಕ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವು ಕೋಟೆ ಶ್ರೀ ಹಳೇ ಮಾರಿಯಮ್ಮ ಸಭಾಂಗಣದಲ್ಲಿ ಜರಗಿತು.

ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ, ಶುಭ ಹಾರೈಸಿದರು.

ಕಾಪು ಪುರಸಭೆಯ ಅಧ್ಯಕ್ಷರಾದ ಮೋಹಿನಿ ಶೆಟ್ಟಿ, ಕೋಟೆ ಶ್ರೀ ಹಳೇ ಮಾರಿಗುಡಿಯ ಗುರಿಕಾರರಾದ ಜಯ ರಾಣ್ಯ, ಶ್ರೀ ದೇವಿ ಫ್ರೆಂಡ್ಸ್ ಅಧ್ಯಕ್ಷರಾದ ರಕ್ಷತ್, ಕಾಪು ಶ್ರೀ ಹೊಸ ಮಾರಿಗುಡಿಯ ಸದಸ್ಯರಾದ ರವೀಂದ್ರ ಮಲ್ಲಾರ್, ಹರಿ ರಾಣ್ಯ, ರಾಣೆಯಾರ್ ಸಮಾಜ ಸೇವಾ ಸಂಘ ಕಾಪು ವಲಯದ ಅಧ್ಯಕ್ಷರಾದ ನಾಗಾರ್ಜುನ ಕಾಪು, ಶಿರ್ವ ಅಮೃತ ಕ್ಯಾಂಟೀನ್ ಇದರ ಜಗದೀಶ್, ಕೋಟೆ ಶ್ರೀ ಹಳೇ ಮಾರಿಗುಡಿ ಮಹಿಳಾ ‌ಮಂಡಳಿಯ ಅಧ್ಯಕ್ಷರಾದ ಕು.ಜ್ಞಾನೇಶ್ವರಿ ಉಪಸ್ಥಿತರಿದ್ದರು.

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಭೇಟಿ

Thumbnail
Posted On: 13 Jun 2026, 10:50 AM

ಕಾಪು : ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ, ಉಚ್ಚಂಗಿ ಸಹಿತ ಮಾರಿಯಮ್ಮ ದೇವಿಯ ದರುಶನ ಪಡೆದರು.

ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಪ್ರಧಾನ ತಂತ್ರಿ ಜ್ಯೋತಿಷ್ಯ ವಿದ್ವಾನ್ ಕುಮಾರಗುರು ತಂತ್ರಿ ಕೊರಂಗ್ರಪಾಡಿ, ಪ್ರಧಾನ ಅರ್ಚಕ ವೇ. ಮೂ. ಶ್ರೀನಿವಾಸ ತಂತ್ರಿ ಕಲ್ಯ ಅವರು ದೇವರಲ್ಲಿ ಪ್ರಾರ್ಥಿಸಿ, ಪ್ರಸಾದ ನೀಡಿದರು. ರಕ್ಷಾ ರೂಪದಲ್ಲಿ ದೇವಿಯ ಸೀರೆಯನ್ನು ಪ್ರಸಾದವಾಗಿ ನೀಡಲಾಯಿತು. 

ಈ ಸಂದರ್ಭ ಸಚಿವೆ ನಿರ್ಮಲಾ ಸೀತಾರಾಮನ್ ಭಾವುಕರಾದರು.

ಕಾಪು ಶಾಸಕ ಮತ್ತು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ಶಾಸಕ ಯಶಪಾಲ್ ಸುವರ್ಣ, ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ರಾಜರ್ಷಿ ಕೆ. ವಾಸುದೇವ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ರವಿಕಿರಣ್, ಮಾಜಿ ಆಡಳಿತ ಮೊಕ್ತೇಸರ ರಮೇಶ್ ಹೆಗ್ಡೆ‌ ಕಲ್ಯ, ಮೊಕ್ತೇಸರರಾದ ಶೇಖರ ಸಾಲ್ಯಾನ್, ರವೀಂದ್ರ ಮಲ್ಲಾರು, ಜಯಲಕ್ಷ್ಮೀ ಎಸ್. ಶೆಟ್ಟಿ, ಚರಿತಾ ದೇವಾಡಿಗ, ಬಿಜೆಪಿ ಮುಖಂಡರಾದ ಶಿಲ್ಪಾ ಜಿ. ಸುವರ್ಣ, ಗೀತಾಂಜಲಿ ಎಂ. ಸುವರ್ಣ, ಜೆಡಿಎಸ್ ಮುಖಂಡ ಜಯರಾಮ ಆಚಾರ್ಯ, ಪ್ರಬಂಧಕ ಗೋವರ್ಧನ್ ಸೇರಿಗಾರ್ ಹಾಗೂ ಮೊದಲಾದವರು ಉಪಸ್ಥಿತರಿದ್ದರು.

ಉಡುಪಿ ಜಿಲ್ಲಾ ಜೆಡಿಎಸ್ : ಪಕ್ಷ ಸಂಘಟನಾ ಕಾರ್ಯಕ್ರಮ

Thumbnail
Posted On: 08 Jun 2026, 12:13 PM

ಉಡುಪಿ :  ಜಿಲ್ಲಾ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಯೋಗೀಶ್ ವಿ ಶೆಟ್ಟಿ ಯವರ ಸಮ್ಮುಖದಲ್ಲಿ, ಉಡುಪಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಜಯ ಪೂಜಾರಿಯವರ ನಾಯಕತ್ವದಲ್ಲಿ ಜನತಾದಳ( ಜಾತ್ಯತೀತ )ಪಕ್ಷದ ಪಕ್ಷ  ಸಂಘಟನಾ ಕಾರ್ಯಕ್ರಮ ಜರಗಿತು.

ಸಭೆಯಲ್ಲಿ ಜಿಲ್ಲಾಧ್ಯಕ್ಷರಾದ ಯೋಗೀಶ್ ವಿ ಶೆಟ್ಟಿ, ಪಕ್ಷದ ತತ್ವ ಸಿದ್ಧಾಂತದ ಬಗ್ಗೆ ಮಾಹಿತಿಯನ್ನು ನೀಡಿ, ಪಕ್ಷದ ಇತಿಹಾಸ, ತತ್ವಸಿದ್ಧಾಂತಗಳು ಹಾಗೂ ರಾಷ್ಟ್ರ ಮತ್ತು ರಾಜ್ಯ ರಾಜಕಾರಣದಲ್ಲಿ ಜೆಡಿಎಸ್ ಪಕ್ಷದ ಪಾತ್ರದ ಬಗ್ಗೆ ವಿವರಿಸಿದರು.
ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಜನಪರ ಆಡಳಿತ, ರೈತಪರ ಯೋಜನೆಗಳು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಸ್ಮರಿಸಿದ ಅವರು, ಪಕ್ಷದ ಕಾರ್ಯಕರ್ತರು ಈ ಸಾಧನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಮೂಲಕ ಪಕ್ಷವನ್ನು ಮತ್ತಷ್ಟು ಬಲಪಡಿಸಬೇಕೆಂದು ಕರೆ ನೀಡಿದರು.

ಜ್ಯೋತಿ ಅಶೋಕ್, ಕಾಶಿನಾಥ್, ಬಸವರಾಜ್, ದೇವರಾಜ್, ಅಶೋಕ, ಶ್ರೀಮತಿ ಹಲನ್, ಪ್ರಶಾಂತ್ ಪೂಜಾರಿ, ಮಹೇಶ್ ಪೂಜಾರಿ, ಬಲಭೀಮರಾಯ ಪಕ್ಷಕ್ಕೆ ಸೇರ್ಪಡೆಯಾದರು.

 ಈ ಸಂದರ್ಭ ಜಿಲ್ಲಾ ಕಾರ್ಯಧ್ಯಕ್ಷರಾದ ವಾಸುದೇವ ರಾವ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯರಾಮ ಆಚಾರ್ಯ, ರಾಜ್ಯ ನಾಯಕರಾದ ದಕ್ಷಿತ ಆರ್ ಶೆಟ್ಟಿ, ಗಂಗಾಧರ ಬಿರ್ತಿ, ದಕ್ಷಿಣಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿಯೋಗೇಶ್ ಶೆಟ್ಟಿ ಜಪ್ಪು, ಜಿಲ್ಲಾ ಯುವ ಘಟಕದ ಅಧ್ಯಕ್ಷರಾದ ಸಂಜಯ್ ಕುಮಾರ್, ಜಿಲ್ಲಾ ಮಹಿಳಾ ಅಧ್ಯಕ್ಷರಾದ ಶಾಲಿನಿ ಆರ್ ಶೆಟ್ಟಿ ಕೆಂಚನೂರು, ಕಾರ್ಯಾಧ್ಯಕ್ಷರಾದ ಅನಸೂಯಾ ಶೆಟ್ಟಿ,
ಕಾಪು ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ದೇವರಾಜ ತೊಟ್ಟಂ, ರಾಮರಾವ್, ಹರಿಣಾಕ್ಷಿ, ಮೋಹಿನಿ ಎಸ್, ರಂಗ ಆರ್ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

ಕಾಪು : ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ಚೆಸ್ ವತಿಯಿಂದ ಆಹ್ವಾನಿತರ ಮುಕ್ತ ಚೆಸ್ ಸ್ಪರ್ಧೆ

Thumbnail
Posted On: 08 Jun 2026, 12:01 PM

ಕಾಪು : ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ಚೆಸ್, ಕಾಪು ಇವರ ವತಿಯಿಂದ ಆಯೋಜಿಸಲಾದ ಆಹ್ವಾನಿತರ ಮುಕ್ತ ಚೆಸ್ ಸ್ಪರ್ಧೆಯು ಕಾಪುವಿನ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ಯಶಸ್ವಿಯಾಗಿ ನಡೆಯಿತು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ನಾರಾಯಣ ಗುರು ಸ್ಪೋರ್ಟ್ಸ್ & ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷರಾದ ಉಮಾನಾಥ ಕಾಪು ವಹಿಸಿದ್ದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷರಾದ ಮಹೇಶ್ ಪುಚ್ಚಪ್ಪಾಡಿ, ಆದರ್ಶ ಆಸ್ಪತ್ರೆ ಉಡುಪಿಯ ಹೃದ್ರೋಗ ತಜ್ಞರಾದ ಡಾ. ವಿಶು ಕುಮಾರ್ ಭಾಗವಹಿಸಿ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ಚೆಸ್‌ನ ಸ್ಥಾಪಕರಾದ ಸಾಕ್ಷಾತ್ ಯು.ಕೆ.,  ನಿರ್ದೇಶಕಿ  ಸೌಂದರ್ಯ ಯು.ಕೆ., ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

ಸ್ಪರ್ಧೆಯಲ್ಲಿ ವಿವಿಧ ವಯೋಮಿತಿಯ ವಿಭಾಗಗಳಲ್ಲಿ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಿ ಪ್ರಶಸ್ತಿ ಪಡೆದರು.

ಮುಕ್ತ ವಿಭಾಗ :  ಪ್ರಥಮ - ಪ್ರಣವ್ ಪಿ. ಜೆ.,
ದ್ವಿತೀಯ - ಅಭಿನವ್ ಪಿ., ತೃತೀಯ - ಚಿನ್ಮಯ ಕೃಷ್ಣ, ಬೆಸ್ಟ್ ವೆಟರನ್ ಪ್ಲೇಯರ್ ರಾಮ ಶೇರಿಗಾರ್

8 ವರ್ಷದೊಳಗಿನ ವಿಭಾಗ : ಪ್ರಥಮ - ಸಾಮ್ರಾಟ್ ಬೆಳ್ಚಡ ಕೆ., ದ್ವಿತೀಯ - ಇಂಚರ ಉಡುಪ, ತೃತೀಯ - ಅಭಯ್ ಉಡುಪ

12 ವರ್ಷದೊಳಗಿನ ವಿಭಾಗ : ಪ್ರಥಮ - ಡಿಸೋಜ ವಿನೆಲ್ ಲಿಯೋನ್, ದ್ವಿತೀಯ - ಯಾಯಿನ್ ಎಸ್. ಭಟ್, ತೃತೀಯ - ಮಧ್ವ ವ್ಯಾಸರಾಜ್ ತಂತ್ರಿ

15 ವರ್ಷದೊಳಗಿನ ವಿಭಾಗ : ಪ್ರಥಮ -  ರಿಮಾ ರಾವ್ ಯು.ಬಿ., ದ್ವಿತೀಯ - ಅನ್ವಯ್ ಎ. ಕಾಮತ್, ತೃತೀಯ - ಶ್ರೀಪಾದ ಪ್ರಶಸ್ತಿ ಗಳಿಸಿದ್ದಾರೆ.

ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಉಡುಪಿ ಕೋಸ್ಟಲ್ ಅಧ್ಯಕ್ಷರಾಗಿ ಡಾ. ಚಂದ್ರಶೇಖರ್ ಆಯ್ಕೆ

Thumbnail
Posted On: 08 Jun 2026, 07:27 AM

ಉಡುಪಿ : ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಇದರ ಏರಿಯ ಸಿ ಯ ಉಡುಪಿ ಕೋಸ್ಟಲ್ ನ 2026-27ನೇ ಸಾಲಿನ ಪದ ಪ್ರಧಾನ ಕಾರ್ಯಕ್ರಮವು ಉಡುಪಿಯ ಓಶಿಯನ್ ಪರ್ಲ್ ಹೋಟೆಲ್ ಸಭಾಂಗಣದಲ್ಲಿ ಜರುಗಿತು.

 ಮುಖ್ಯ ಅತಿಥಿಯಾಗಿ ನಿಕಟ ಪೂರ್ವ ರಾಷ್ಟ್ರೀಯ ಅಧ್ಯಕ್ಷ ಎಂ ಆರ್ ಜಯೇಶ ಮಾತನಾಡಿ, ಸೋತೆನೆಂದು ಕುಳಿತುಕೊಳ್ಳಬಾರದು. ಬದಲಾಗಿ ಮರಳಿ ನಮ್ಮ ನಾಯಕತ್ವದ ಪ್ರಯತ್ನವನ್ನು ಮಾಡಬೇಕು. ಅಧಿಕಾರ ಮತ್ತು ಯಶಸ್ಸು ಸಿಕ್ಕಿದಾಗ ಅಹಂ ಪಡೆದೆ ನಿಸ್ವಾರ್ಥವಾಗಿ ಸೇವೆ ಮಾಡಿದರೆ ಸಮಾಜದಲ್ಲಿ ಮುನ್ನಡೆಯಲು ಸಾಧ್ಯ. ಸಮಾಜದಿಂದ ನಾವು ಏನನ್ನು ಪಡೆದಿದ್ದೇವೆ, ಅದನ್ನು ಸಮಾಜಕ್ಕೆ ನಾವು ಕೊಡುವಂತಾಗಬೇಕು ಎಂದರು. ರಾಷ್ಟ್ರೀಯ ಉಪಾಧ್ಯಕ್ಷ ಕುಮಾರ್ ಕೂರ್ಸೆ, ಮ್ಯಾನೇಜ್ಮೆಂಟ್ ವಿಭಾಗದ ನಿರ್ದೇಶಕರಾದ ಸಿದ್ದಗಂಗಯ್ಯ, ತರಬೇತಿ ವಿಭಾಗದ ನಿರ್ದೇಶಕ ಹುಸೇನ್ ಹೈಕಾಡಿ, ಸ್ಥಾಪಕ ಅಧ್ಯಕ್ಷೇ ಮತ್ತು ಹಿರಿಯ ವಕೀಲೆ ಬಿಂದು ತಂಕಪ್ಪನ್, ಯುವ ವಿಭಾಗದ ಅಧ್ಯಕ್ಷ ಮೋಹಿತ್ ಎಂ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರೊ. ಡಾ. ಜಯರಾಮ್ ಶೆಟ್ಟಿಗಾರ್ ದಿಕ್ಸೂಚಿ ಸಂದೇಶ ನೀಡಿದರು. 

2026-27ನೇ ಅಧ್ಯಕ್ಷರಾಗಿ ಆಯ್ಕೆಯಾದ ಡಾ. ಚಂದ್ರಶೇಖರ್ ವಿ ಎಸ್, ನಿಕಟಪೂರ್ವ ಅಧ್ಯಕ್ಷೆ  ಜೀನತ್ ರವರಿಂದ ಅಧಿಕಾರ ಸ್ವೀಕರಿಸಿದರು. ನೂತನ ಕಾರ್ಯದರ್ಶಿ ಸುನಂದ ಕೋಶಾಧಿಕಾರಿ, ಮಮತಾ ಅಮೀನ್ ಪ್ರಮಾಣವಚನ ಸ್ವೀಕರಿಸಿ, ಅಧಿಕಾರ ಸ್ವೀಕರಿಸಿದರು. ಎರಡು ವರ್ಷ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ನಿರ್ಗಮನ ಅಧ್ಯಕ್ಷೆ ಜೀನತ್ ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. 

ಕಾರ್ಯದರ್ಶಿ ಸುನಂದ ಧನ್ಯವಾದ ಸಮರ್ಪಿಸಿದರೆ, ಸ್ಟೀವನ್ ಕುಲಾಸೊ ಉದ್ಯಾವರ ಕಾರ್ಯಕ್ರಮ ನಿರೂಪಿಸಿದರು.

ಜೂ.7 : ಬಂಟಕಲ್ಲು ಸಾಲ್ಮರ - ಉಚಿತ ಅರೋಗ್ಯ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ

Thumbnail
Posted On: 02 Jun 2026, 06:58 AM

ಶಿರ್ವ : ಕೃಷ್ಣವೇಣಿ ಆಯುರ್ವೇದ,ಚಿಕಿತ್ಸಾ ಮತ್ತು ಸ್ವಾಸ್ಥ್ಯ ಕೇಂದ್ರ,ಜೇಸಿಐ ಶಂಕರಪುರ ಜಾಸ್ಮಿನ್ ಜಂಟಿ ಆಶ್ರಯದಲ್ಲಿ ಜೂ.7 ರವಿವಾರ ಸಾಲ್ಮರ ಕೃಷ್ಣವೇಣಿ ಆಯುರ್ವೇದ,ಚಿಕಿತ್ಸಾಲಯದಲ್ಲಿ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1.30ರ ಪರ್ಯಂತ"ಉಚಿತ ಅರೋಗ್ಯ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ" ಜರುಗಲಿದೆ. 

ಹಿರಿಯ ಮೂಳೆ ತಜ್ಞ ಡಾ.ಪ್ರಕಾಶ್ ಭಟ್ ಮರ್ಣೆ ಆರ್ಥೋಪೆಡಿಕ್ ಕ್ಲಿನಿಕ್ ಉಡುಪಿ ಇವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಹಿರಿಯ ಆಯುರ್ವೇದ ಸರ್ಜನ್ ಡಾ.ಸುಕೇಶ್ ಎ. ಮೂಡಬಿದ್ರೆ ಭಾಗವಹಿಸುವರು.

 ಅಧ್ಯಕ್ಷತೆಯನ್ನು ಸಾಲ್ಮರ ಗೋವಿಂದ ಭಟ್ ಫ್ಯಾಮಿಲಿ ಟ್ರಸ್ಟ್ ಶಂಕರಪುರ ಇದರ ಟ್ರಸ್ಟಿ ಹರಿದಾಸ್ ಭಟ್ ವಹಿಸುವರು. 

ಜೇಸಿಐ ಅಧ್ಯಕ್ಷ ರಾಜೇಶ್ ಆಚಾರ್ಯ, ಕಾರ್ಯದರ್ಶಿ ಭವ್ಯ ಸುವರ್ಣ, ಬಂಟಕಲ್ಲು ಗಾಯತ್ರಿ ವೃಂದದ ಅಧ್ಯಕ್ಷೆ ವಿದ್ಯಾ ಹರೀಶ್, ಕೃಷ್ಣವೇಣಿ ಆಯುರ್ವೇದ ಮತ್ತು ಆಶ್ರಯಧಾಮದ ಮುಖ್ಯ ವೈದ್ಯಾಧಿಕಾರಿ ಡಾ.ಕೆ.ಲಕ್ಷ್ಮೀಶ ಉಪಾಧ್ಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ರಮೇಶ್ ಮಿತ್ತಾಂತಾಯ ಉಪಸ್ಥಿತರಿರುವರು.

 ಶಿಬಿರದಲ್ಲಿ ನುರಿತ ವೈದ್ಯರುಗಳಿಂದ ಮಂಡಿನೋವು, ಸೊಂಟನೋವು, ನರದೌರ್ಬಲ್ಯ, ಶೀತ, ಕೆಮ್ಮು, ಉಬ್ಬಸ ಸಹಿತ ವಿವಿಧ ಕಾಯಿಲೆಗಳ ತಪಾಸಣೆ, ಹಾಗೂ ಔಷಧಿ ನೀಡಲಾಗುವುದು, ರಕ್ತಹೀನತೆ, ಡಯಾಬಿಟಿಸ್ ರೋಗಕ್ಕೆ ಉಚಿತ ಚಿಕಿತ್ಸೆ, ರಕ್ತತಪಾಸಣೆ ಮಾಡಲಾಗುವುದು ಎಂದು ಸಂಘಟಕರ ಪ್ರಕಟನೆ ತಿಳಿಸಿದೆ.