Updated News From Kaup
ಯೇಸು ಕ್ರಿಸ್ತರ ಜನನ ಮಾನವ ಕುಲಕ್ಕೆ ಶಾಂತಿ,ಪ್ರೀತಿ ಸಹೋದರತ್ವ ನೀಡಿದೆ : ವಿನಯ್ ಕುಮಾರ್ ಸೊರಕೆ
Posted On: 27 Dec 2025, 05:43 PM
ಕಾಪು : ಇಲ್ಲಿನ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಕಾಪು ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿಯ ವತಿಯಿಂದ ಮಾಜಿ ಸಚಿವ ಹಾಗೂ ಮಾಜಿ ಸಂಸದ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ವಿನಯ್ ಕುಮಾರ್ ಸೊರಕೆಯವರ ನೇತೃತ್ವದಲ್ಲಿ ಕಾಪು ರಾಜೀವಭವನದಲ್ಲಿ ಸೌಹಾರ್ದ ಕ್ರಿಸ್ಮಸ್ ಆಚರಣೆ ನಡೆಯಿತು.
ಈ ಸಂದರ್ಭದಲ್ಲಿ ಡಾ. ಸಹನಾ ಪ್ರವೀಣ್ ಮತ್ತು ತಂಡದಿಂದ ಕ್ರಿಸ್ಮಸ್ ಕ್ಯಾರಲ್ಸ್ ಹಾಡಲಾಯಿತು.
ಸಾಂತಾಕ್ಲಾಸ್ ಆಗಮನದೊಂದಿಗೆ ಎಲ್ಲರಲ್ಲಿ ವಿಶೇಷ ಸಂಭ್ರಮ ಮೂಡಿದ್ದು, ಕೇಕ್ ಕತ್ತರಿಸಿ ಸಿಹಿ ಹಂಚುವ ಮೂಲಕ ಕ್ರಿಸ್ಮಸ್ ಹಬ್ಬವನ್ನು ಸೌಹಾರ್ದದಿಂದ ಆಚರಿಸಲಾಯಿತು ಅನಂತರ ಅನಂತರ ವಿನಯ್ ಕುಮಾರ್ ಸೊರಕೆಯವರು ಮಾತನಾಡಿ, ಯೇಸು ಕ್ರಿಸ್ತರ ಜನನವು ಮಾನವಕುಲಕ್ಕೆ ಶಾಂತಿ, ಪ್ರೀತಿ, ಸಹೋದರತ್ವ ಮತ್ತು ತ್ಯಾಗದ ಮಹತ್ವದ ಸಂದೇಶವನ್ನು ನೀಡಿದೆ ಎಂದು ಹೇಳಿದರು. ಸಮಾಜದಲ್ಲಿ ದ್ವೇಷ, ಅಸಹಿಷ್ಣುತೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಕ್ರಿಸ್ತನ ಬೋಧನೆಗಳು ಎಲ್ಲರಿಗೂ ಮಾರ್ಗದರ್ಶಕವಾಗಿವೆ. ಎಲ್ಲ ಧರ್ಮಗಳ ಸಾರ ಮಾನವೀಯತೆಯೇ ಆಗಿದ್ದು, ಪರಸ್ಪರ ಗೌರವ ಮತ್ತು ಸೌಹಾರ್ದದಿಂದ ಬದುಕುವುದೇ ನಿಜವಾದ ಹಬ್ಬದ ಆಚರಣೆ ಎಂದು ಅವರು ತಿಳಿಸಿದರು. ಈ ರೀತಿಯ ಕಾರ್ಯಕ್ರಮಗಳು ಸಮಾಜದಲ್ಲಿ ಏಕತೆ ಹಾಗೂ ಸಹಬಾಳ್ವೆಯನ್ನು ಬಲಪಡಿಸುತ್ತವೆ ಎಂದು ಹೇಳಿ, ಎಲ್ಲರಿಗೂ ಕ್ರಿಸ್ಮಸ್ ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರಿದರು. ಮುಖ್ಯ ಸಂದೇಶಕರಾಗಿ ಆಗಮಿಸಿ್ ಆಲ್ವಿನ್ ದಾಂತಿ ರವರು ಮಾತನಾಡಿ ಯೇಸು ಕ್ರಿಸ್ತರು ಮತ್ತು ಬ್ರಹ್ಮಶ್ರೀ ನಾರಾಯಣ ಗುರುರು ಸಾರಿದ ಪ್ರೀತಿ, ಸಮಾನತೆ, ಶಾಂತಿ, ತ್ಯಾಗ ಮತ್ತು ಮಾನವೀಯತೆಯ ಸಂದೇಶಗಳು ಇಡೀ ಮಾನವಕುಲಕ್ಕೆ ಮಾರ್ಗದರ್ಶಕವಾಗಿವೆ. ಸಮಾಜದಲ್ಲಿ ಜಾತಿ, ಧರ್ಮ, ವರ್ಗಭೇದಗಳ ಕಾರಣದಿಂದ ಅಸಮಾನತೆ ಮತ್ತು ದ್ವೇಷ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ, “ಎಲ್ಲರೂ ಒಂದೇ ಮಾನವಕುಲ” ಎಂಬ ನಾರಾಯಣ ಗುರುರವರ ಸಂದೇಶ ಹಾಗೂ ಯೇಸು ಕ್ರಿಸ್ತರ ಸಹೋದರತ್ವ, ಕ್ಷಮೆ ಮತ್ತು ಸೇವೆಯ ತತ್ವಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ದುರ್ಬಲರು, ದೀನರು ಮತ್ತು ಹಿಂದುಳಿದವರನ್ನು ಗೌರವದಿಂದ ಕಾಣುವುದು, ಪರಸ್ಪರ ಪ್ರೀತಿ ಮತ್ತು ಸಹಬಾಳ್ವೆಯಿಂದ ಬದುಕುವುದು ನಿಜವಾದ ಧರ್ಮದ ಅರ್ಥವಾಗಿದೆ. ಈ ಮಹಾನ್ ಚಿಂತಕರ ಆದರ್ಶಗಳನ್ನು ಅನುಸರಿಸಿದಾಗ ಮಾತ್ರ ಶಾಂತಿಯುತ, ಸಮಾನತೆಯ ಮತ್ತು ಸೌಹಾರ್ದತೆಯ ಸಮಾಜವನ್ನು ನಿರ್ಮಿಸಲು ಸಾಧ್ಯವೆಂದು ಅವರು ಹೇಳಿದರು.ಇಂತಹ ಹಬ್ಬಗಳ ಆಚರಣೆ ಸಮಾಜದಲ್ಲಿ ಏಕತೆ ಮತ್ತು ಸಹೋದರತ್ವವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಕರ್ನಾಟಕ ಕ್ರೈಸ್ತ ನಿಗಮ ಮಂಡಳಿಯ ನಿರ್ದೇಶಕರಾದ ಪ್ರಶಾಂತ್ ಜತ್ತನ್ನರವರನ್ನು ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಕರ್ನಾಟಕ ಸರಕಾರದ ಕರಾವಳಿ ಪ್ರಾಧಿಕಾರ ಮಂಡಳಿಯ ಅಧ್ಯಕ್ಷರಾದ ಎಂ.ಎ ಗಫೂರ್ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ವೈ ಸುಕುಮಾರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶಾಂತಲತಾ ಶೆಟ್ಟಿ,, ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಶರ್ಫುದ್ದೀನ್ ಶೇಖ್, ಕಾಪು ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ನವೀನ್ ಚಂದ್ರ ಸುವರ್ಣ ಅಡ್ವೆ ಕಾಪು ದಿವಾಕರ್ ಶೆಟ್ಟಿ, ನವೀನ್ ಎನ್ ಶೆಟ್ಟಿ, ಉಡುಪಿ ಜಿಲ್ಲಾ ಯುವಕಾಂಗ್ರೆಸ್ ನ ಮುಖಂಡರಾದ ಅರ್ಜುನ್ ನಾಯರಿ, ಮೊಹಮ್ಮದ್ ನಿಯಾಜ, ಗೌರೀಶ್ ಕೋಟ್ಯಾನ್ ಹಿರಿಯ ಕಾಂಗ್ರೆಸ್ ಮುಖಂಡರು ಗೋಪಾಲ ಪೂಜಾರಿ ಪಲಿಮಾರು ಹಸನಬ್ಬ ಶೇಖ್, ರಿಯಾಜ್ ಮುದರಂಗಡಿಕಾಂಗ್ರೆಸ್ ಪಕ್ಷದ ಮುಖಂಡರು, ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು, ಪಕ್ಷದ ಪದಾಧಿಕಾರಿಗಳು ಹಾಗೂ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದು, ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಸೌಹಾರ್ದತೆ, ಶಾಂತಿ ಮತ್ತು ಸಹೋದರತ್ವದ ಸಂದೇಶವನ್ನು ಈ ಕ್ರಿಸ್ಮಸ್ ಆಚರಣೆ ಸಾರಿತು. ಅಶ್ವಿನಿ ನವೀನ್ ಬಂಗೇರರವರು ಸ್ವಾಗತಿಸಿ, ತಸ್ನೀನ್ ಅರಾರವರು ಕಾರ್ಯಕ್ರಮ ನಿರೂಪಿಸಿದರು.
ಡಿ. 26-27-28 : ಕಾಪುವಿನಲ್ಲಿ “ಕಾಪು ಕಡಲ ಪರ್ಬ” ; ಕಾಪು ಕಡಲ ಪರ್ಬ ಆಮಂತ್ರಣ ಪತ್ರಿಕೆ ಬಿಡುಗಡೆ
Posted On: 27 Dec 2025, 05:38 PM
ಕಾಪು : ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮ ಶತಾಬ್ಬಿ ಪ್ರಯುಕ್ತ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರ ನೇತೃತ್ವದಲ್ಲಿ ಡಿ. 26, 27 ಮತ್ತು 28ರಂದು ಕಾಪು ಲೈಟ್ ಹೌಸ್ ಬೀಚ್ ಕಡಲ ಕಿನಾರೆಯಲ್ಲಿ ಡಾ. ವಿ. ಎಸ್. ಆಚಾರ್ಯ ಸ್ಮರಣೆಯ ಕಡಲೋತ್ಸವ- ಖಾದ್ಯ- ಕ್ರೀಡೆ-ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮಗಳೊಂದಿಗೆ ಕಾಪು ಕಡಲ ಪರ್ಬ ಜರುಗಲಿದೆ ಎಂದು ಕಾರ್ಯಕ್ರಮದ ರುವಾರಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದ್ದಾರೆ.
ಅವರು ಕಾಪು ಮಂಥನ್ ಬೀಚ್ ರೆಸಾರ್ಟ್ ನಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.
ಕಡಲ ಪರ್ಬದ ಜತೆಗೆ ಜನರಿಗೆ ಉಪಯುಕ್ತ ವಾಗುವ ರೀತಿಯಲ್ಲಿ ಉಚಿತ ನೇತ್ರ ಚಿಕಿತ್ಸೆ, ಕನ್ನಡಕ ವಿತರಣೆ, ದಂತ ಚಿಕಿತ್ಸೆ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ.
ಪ್ರಬಂಧ, ಚಿತ್ರ ಬಿಡಿಸುವ ಸ್ಪರ್ಧೆ, ಮರಳು ಶಿಲ್ಪ ರಚನೆ, ಹಗ್ಗಜಗ್ಗಾಟ, ಮಹಿಳೆಯರಿಗೆ ತ್ರೋಬಾಲ್ ಮತ್ತು ಪುರುಷರ ವಾಲಿಬಾಲ್ ಪಂದ್ಯಾಟ ಸಹಿತ ಬೀಚ್ ಕ್ರೀಡಾಕೂಟಗಳು, ಸಾಧಕರಿಗೆ ಸನ್ಮಾನ, ಸಂಗೀತ ರಸಮಂಜರಿ, ನಾಟಕ ಮೊದಲಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿಯವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಪ್ರತಿಪಕ್ಷ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ವೈ. ವಿಜಯೇಂದ್ರ ಭಾಗವಹಿಸಲಿದ್ದಾರೆ ಎಂದು ಶಾಸಕರು ಮಾಹಿತಿ ನೀಡಿದರು.
ಪ್ರಮುಖ ಕಾರ್ಯಕ್ರಮಗಳು
ಡಿ. 26ರಂದು ಮಧ್ಯಾಹ್ನ 3 ಗಂಟೆಗೆ 'ನಾ ಕಂಡಂತೆ ಅಟಲ್' ಪ್ರಬಂಧ ಸ್ಪರ್ಧೆ, ಸಂಜೆ 4 ಗಂಟೆಗೆ 'ಆತ್ಮ ನಿರ್ಭರ ಭಾರತ' - ಚಿತ್ರ ಬಿಡಿಸುವ ಸ್ಪರ್ಧೆ, ಆಹಾರ ಮೇಳ ಉದ್ಘಾಟನೆ, ಸಂಜೆ 6ಕ್ಕೆ ಜಗದೀಶ್ ಆಚಾರ್ಯ ಪುತ್ತೂರು ಅವರಿಂದ ಸಂಗೀತ ರಾತ್ರಿ 7ಕ್ಕೆ ಸಭಾ ಕಾರ್ಯಕ್ರಮ ಉದ್ಘಾಟನೆಯ ಬಳಿಕ ಕಾಪು ರಂಗ ತರಂಗ ಕಲಾವಿದರಿಂದ “ಶೋಬಾಜಿ” ಸಾಮಾಜಿಕ, ಹಾಸ್ಯಮಯ ನಾಟಕ ಪ್ರದರ್ಶನ ಗೊಳ್ಳಲಿದೆ.
ಡಿ. 27ರಂದು ಬೆಳಗ್ಗೆ 9.30ಕ್ಕೆ ಪ್ರಸಾದ್ ನೇತ್ರಾಲಯದ ಸಹಯೋಗದಲ್ಲಿ ನೇತ್ರ ಉಚಿತ ತಪಾಸಣೆ ಹಾಗೂ ಗುರ್ಮೆ ಫೌಂಡೇಶನ್ ವತಿಯಿಂದ ಕನ್ನಡಕ ವಿತರಣೆ, ಡಾ. ವಿಜಯೇಂದ್ರ ಅವರ ನೇತೃತ್ವದಲ್ಲಿ ದಂತ ಚಿಕಿತ್ಸಾ ಶಿಬಿರ, ಮಧ್ಯಾಹ್ನ 2.30ಕ್ಕೆ ಪುರುಷರು ಮತ್ತು ಮಹಿಳೆಯರಿಗೆ ಬೀಚ್ ಹಗ್ಗ ಜಗ್ಗಾಟ, ಮರಳು ಶಿಲ್ಪ ರಚನೆ ಸ್ಪರ್ಧೆ, ರಾತ್ರಿ 7ಕ್ಕೆ ಸಭಾ ಕಾರ್ಯಕ್ರಮ, ರಾತ್ರಿ 8ಕ್ಕೆ “ರಘು ದೀಕ್ಷಿತ್ ಸಂಗೀತ ರಸಮಂಜರಿ” ಕಾರ್ಯ ಕ್ರಮ ನಡೆಯಲಿದೆ.
ಡಿ.28ರಂದು ಬೆಳಗ್ಗೆ 9.30ಕ್ಕೆ ಆದರ್ಶ ಆಸ್ಪತ್ರೆ ಸಹಯೋಗದಲ್ಲಿ ಆರೋಗ್ಯ ಶಿಬಿರ, 11.30ಕ್ಕೆ ಪುರುಷರ ವಾಲಿಬಾಲ್ ಪಂದ್ಯಾವಳಿ, ಮಹಿಳೆಯರಿಗೆ ಥೋಬಾಲ್ ಪಂದ್ಯಾವಳಿ, ರಾತ್ರಿ 7ಕ್ಕೆ ಸಭಾ ಕಾರ್ಯಕ್ರಮ, ರಾತ್ರಿ 8ಕ್ಕೆ “ಕುನಾಲ್ ಗಾಂಜಾವಾಲಾ” ಅವರಿಂದ ಸಂಗೀತ ರಸ ಮಂಜರಿ ಕಾರ್ಯಕ್ರಮ ಜರುಗಲಿದೆ.
ಪ್ರತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ಕಾಪು ಬಿಜೆಪಿ ಮಂಡಲ ಅಧ್ಯಕ್ಷ ಜಿತೇಂದ್ರ ಶೆಟ್ಟಿ ಉದ್ಯಾವರ, ಕಾಪು ಪುರಸಭೆಯ ಅಧ್ಯಕ್ಷೆ ಹರಿಣಾಕ್ಷಿ ದೇವಾಡಿಗ, ಪ್ರಮುಖರಾದ ಗೀತಾಂಜಲಿ ಎಂ. ಸುವರ್ಣ, ಶಿಲ್ಪಾ ಜಿ. ಸುವರ್ಣ, ಶ್ರೀಕಾಂತ್ ನಾಯಕ್, ಪ್ರವೀಣ್ ಗುರ್ಮೆ, ವೀಣಾ ಶೆಟ್ಟಿ, ಗೋಪಾಲಕೃಷ್ಣ ರಾವ್, ಶರಣ್ ಕುಮಾರ್ ಮಟ್ಟು ಉಪಸ್ಥಿತರಿದ್ದರು.
ಎಸ್ಕೆಪಿಎ ಕಾಪು ವಲಯದ 2025- 27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ
Posted On: 27 Dec 2025, 05:36 PM
ಕಾಪು : ಛಾಯಾಗ್ರಾಹಕರು ತಮ್ಮ ದುಖ: ದುಮ್ಮಾನಗಳನ್ನು ಮರೆತು ಗಾಹಕರಲ್ಲಿ ನಗು ತರಿಸಿ, ಉತ್ತಮ ಛಾಯಾಚಿತ್ರ ಮೂಡುವಂತೆ ಪ್ರಯತ್ನಿಸುವ ಶ್ರಮ ಜೀವಿಗಳು ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದ್ದಾರೆ.
ಕಾಪು ಕೆ-ವನ್ ಹೋಟೆಲ್ ಸಭಾಂಗಣದಲ್ಲಿ ನಡೆದ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೆಶನ್ ನ ಕಾಪು ವಲಯದ 2025- 27ನೇ ಸಾಲಿನ ನೂತನ ಅಧ್ಯಕ್ಷ ಸಂತೋಷ್ ನಾಯ್ಕ್ ಕಾಪು ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಕಾಪು ವಲಯದ ಎಲ್ಲಾ ಸಂಘದ ಸದಸ್ಯ ಛಾಯಾಗ್ರಾಹಕರಿಗೆ ತನ್ನ ವತಿಯಿಂದ ಜೀವವಿಮೆ ಯೋಜನೆಗೆ ಮುನ್ನಡಿ ಇಡುತ್ತೇನೆ ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಆಶ್ವಾಸನೆ ನೀಡಿದರು.
ಕಾಪು ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಕಾಪು ದಿವಾಕರ ಶೆಟ್ಟಿ ಮಾತನಾಡಿ, ಛಾಯಾಗ್ರಾಹರಿಗೆ ಜೀವವಿಮೆಯ ಅಗತ್ಯದಷ್ಟೇ ಸಂಘಟನೆಗೆ ಸ್ವಂತ ಕಟ್ಟಡವೂ ಬೇಕು. ಅದಕ್ಕೆ ಬೇಕಾದ ಜಾಗವನ್ನು ಹೊಂದಿಸಿಕೊಂಡು ಕಟ್ಟಡ ನಿರ್ಮಾಣ ಮಾಡುವುದಾದರೆ, ಪ್ರಥಮ ದೇಣಿಗೆಯಾಗಿ ನಾನು 1 ಲಕ್ಷ ರೂ. ನೀಡುತ್ತೇನೆ ಎಂದರು.
ಎಸ್ಕೆಪಿಎ ಕೇಂದ್ರ ಸಮಿತಿಯ ಜಿಲ್ಲಾಧ್ಯಕ್ಷ ನವೀನ್ ರೈ ಪಂಜಳ ಅಧ್ಯಕ್ಷತೆ ವಹಿಸಿದ್ದರು.
ಅವರು, ನೂತನ ಅಧ್ಯಕ್ಷ ಸಂತೋಷ್ ನಾಯ್ಕ್ ಕಾಪು ಮತ್ತು ಪದಾಧಿಕಾರಿಗಳಿಗೆ ಶುಭ ಕೋರಿ, ಮುಂದಿನ ಎರಡು ವರ್ಷಗಳಲ್ಲಿ ಕಾಪು ವಲಯ ಉತ್ತಮ ಸಮಾಜ ಮುಖಿ ಕೆಲಸನ್ನು ಮಾಡುವಂತಾಗಲಿ ಎಂದರು.
ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೆಶನ್ ಕಾಪು ವಲಯದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಸನ್ಮಾನ ಮತ್ತು ಸಹಾಯ ಧನ ನೀಡಲಾಯಿತು.
ವೇದಿಕೆಯಲ್ಲಿ ಹೋಟೆಲ್ ಉದ್ಯಮಿ ಪ್ರಭಾಕರ ಪೂಜಾರಿ ಕಾಪು, ಫೊಟೋ ಪ್ಯಾಲೆಸ್ ನ ರವಿರಾಜ್ ಕಿದಿಯೂರು, ಎಸ್ ಕೆಪಿಎ ಸಂಚಾಲಕ ಗೋಪಾಲ್ ಸುಳ್ಯ, ಎಸ್ಕೆಪಿಎ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ವಾಸುದೇವ ರಾವ್, ಎಸ್ಕೆಪಿಎ ಕಟ್ಟಡ ಸಮಿತಿ ಅಧ್ಯಕ್ಷ ಆನಂದ್ ಎನ್. ಬಂಟ್ವಾಳ, ಎಸ್ಕೆಪಿಎ ಪ್ರಧಾನ ಕಾರ್ಯದರ್ಶಿ ಅಜಯ್ ಮಂಗಳೂರು, ಉಪಾಧ್ಯಕ್ಷ ದತ್ತಾತ್ರೇಯ ಕಾರ್ಕಳ, ಕಾಪು ವಲಯದ ಗೌರವಾಧ್ಯಕ್ಷ ಬಾಲಕೃಷ್ಣ ಪೂಜಾರಿ ಉಚ್ಚಿಲ, ಜಿಲ್ಲಾ ಛಾಯಾ ಕಾರ್ಯದರ್ಶಿ ರಾಜೇಶ್ ಶಂಕರಪುರ, ನಿರ್ಗಮನ ಅಧ್ಯಕ್ಷ ಸಚಿನ್ ಉಚ್ಚಿಲ, ಕೋಶಾಧಿಕಾರಿ ಕಿರಣ್ ಕಾಪು ಉಪಸ್ಥಿತರಿದ್ದರು.
ನಿರ್ಗಮನ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಭಟ್ ಸ್ವಾಗತಿಸಿದರು. ನೂತನ ಕಾರ್ಯದರ್ಶಿ ಪ್ರಕಾಶ್ ಆಚಾರ್ಯ ವಂದಿಸಿದರು. ಪತ್ರಕರ್ತ ರಾಕೇಶ್ ಕುಂಜೂರು ಕಾರ್ಯಕ್ರಮ ನಿರೂಪಿಸಿದರು.
ಸದಸ್ಯರ ಮಕ್ಕಳಿಂದ ನೃತ್ಯ ಕಾರ್ಯಕ್ರಮ, ಸದಸ್ಯರಿಂದ ಸಂಗೀತ ಕಾರ್ಯಕ್ರಮ ನೆರವೇರಿತು.
ಕಾಪುವಿನಲ್ಲಿ ಅಟಲ್ ಜನ್ಮಶತಾಬ್ದಿ ಪ್ರಯುಕ್ತ ”ಕಾಪು ಕಡಲ ಪರ್ಬ” ಉದ್ಘಾಟನೆ
Posted On: 27 Dec 2025, 05:30 PM
ಕಾಪು : ಕಾಪು ಪಡು ಕಡಲ ಕಿನಾರೆಯಲ್ಲಿ ಶುಕ್ರವಾರ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮಶತಾಬ್ದಿ ಪ್ರಯುಕ್ತ ಬಿಜೆಪಿ ಕಾಪು ಮಂಡಲದ ವತಿಯಿಂದ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ನೇತೃತ್ವದಲ್ಲಿ ಡಿ. 26, 27, 28 ರಂದು ಮೂರು ದಿನಗಳ ಕಾಲ ನಡೆಯುತ್ತಿರುವ ಕಾಪು ಕಡಲ ಪರ್ಬವನ್ನು ಶುಕ್ರವಾರ ಸಂಜೆ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿಯವರು ಕೀರ್ತಿಶೇಷ ಡಾ. ವಿ. ಎಸ್. ಆಚಾರ್ಯ ಸ್ಮರಣೆಯ ದಿ. ಲೀಲಾಧರ ಶೆಟ್ಟಿ ವೇದಿಕೆಯಲ್ಲಿ ತೆಂಗಿನ ಸಿರಿಯನ್ನು ಅರಳಿಸುವ ಮೂಲಕ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಅಟಲ್ ಬಿಹಾರಿ ವಾಜಪೇಯಿ ಅವರು ನಮ್ಮ ನಡುವೆ ಸೂರ್ಯನಂತಿದ್ದು, ನಿಷ್ಕಳಂಕ ರಾಜಕಾರಣಿಯಾಗಿ ನಮಗೆಲ್ಲರಿಗೂ ಪ್ರೇರಣೆಯಾಗಿದ್ದಾರೆ. ಸಂಪೂರ್ಣ ಭ್ರಷ್ಟಾಚಾರ ತುಂಬಿದ್ದ ಕಾಂಗ್ರೆಸ್ ಆಳ್ವಿಕೆಯ ಕಾಲದಲ್ಲಿಯೂ ನಿಷ್ಕಳಂಕ ರಾಜಕಾರಣಿಯಾಗಿ ಬೆಳೆದು ನಿಂತಿರುವ ಅಟಲ್ ಜೀ ಅವರು ದೇಶ ಕಂಡ ಅಪ್ರತಿಮ ರಾಜಕಾರಣಿ. ಅಳಿಯಲಾರದ ರಾಜಕೀಯ ಶಕ್ತಿಯಾಗಿದ್ದಾರೆ ಎಂದರು.
ಅಟಲ್ ಜೀ-ಅಡ್ವಾನಿಯವರಂತೆ ಬಿಜೆಪಿಯಲ್ಲಿ ಲಾಲಾಜಿ ಮೆಂಡನ್- ಗುರ್ಮೆ ಸುರೇಶ್ ಶೆಟ್ಟಿ ಅವರುಗಳು ಬಿಜೆಪಿ ರಾಜಕಾರಣದಲ್ಲಿ ಆದರ್ಶ ಮತ್ತು ಪ್ರೇರಣಾದಾಯಕ ವ್ಯಕ್ತಿಗಳಾಗಿದ್ದಾರೆ. ಕಾಪುವಿನ ಕಡಲ ಕಿನಾರೆಯಲ್ಲಿ ಅದ್ದೂರಿಯಾಗಿ ಅಟಲ್ ಬಿಹಾರಿ ವಾಜಪೇಯಿ ಆವರ ಜನ್ಮಶತಾಬ್ದಿ ಪ್ರಯುಕ್ತ ಆಯೋಜಿಸಿದ ಕಡಲ ಪರ್ಬ ವಿಶೇಷತೆಯಿಂದಾಗಿ ರಾಜ್ಯಕ್ಕೆ ಮಾದರಿಯಾಗಿದೆ. ಇದು ರಾಷ್ಟ್ರ ಮಟ್ಟದಲ್ಲಿಯೂ ಗುರುತಿಸುವಂತೆ ಆಗಿದೆ ಎಂದೂ ಛಲವಾದಿ ನಾರಾಯಣ ಸ್ವಾಮಿ ಹೇಳಿದರು.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರು ಪ್ರಾಸಾವಿಕವಾಗಿ ಮಾತನಾಡಿದರು.
ಕಾಪು ಕಡಲ ಪರ್ಬದ ಗೌರಾವಾಧ್ಯಕ್ಷ ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಹಿರಿಯ ಬಿಜೆಪಿಗರನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿಆಟಲ್ ಜೀ ಶತಮಾನೋತ್ಸವ ಸಮಿತಿಯ ರಾಜ್ಯ ಸಂಚಾಲಕ ಜಗದೀಶ್ ಹಿರೇಮನಿ, ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಕಾರ್ಕಳ ಶಾಸಕ ಸುನಿಲ್ ವಿ. ಕುಮಾರ್, ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಧನಂಜಯ ಸರ್ಜಿ, ಉಡುಪಿ ಶಾಸಕ ಯಶ್ ಪಾಲ್ ಸುವರ್ಣ, ಮುಲ್ಕಿ-ಮೂಡಬಿದ್ರಿ ಕ್ಷೇತ್ರದ ಶಾಸಕ ಉಮಾನಾಥ್ ಕೋಟ್ಯಾನ್, ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ಮಾಜಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಸುವರ್ಣ, ಮಾಜಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಕಾಪು ಪುರಸಭಾ ಅಧ್ಯಕ್ಷೆ ಹರಿಣಾಕ್ಷಿ ದೇವಾಡಿಗ, ಉಪಾಧ್ಯಕ್ಷೆ ಸರಿತಾ ಶಿವಾನಂದ ವೇದಿಕೆಯಲ್ಲಿದ್ದರು.
ಕಾಪು ಬಿಜೆಪಿ ಅಧ್ಯಕ್ಷ ಜಿತೇಂದ್ರ ಶೆಟ್ಟಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ರಾವ್ ವಂದಿಸಿದರು.
ಕಾಪು ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್ ಆಳ್ವ, ಸತೀಶ್ ಶೆಟ್ಟಿ ಗುಡ್ಡೆಚ್ಚಿ, ನಿತೇಶ್ ಎಕ್ಕಾರು ನಿರೂಪಿಸಿದರು.
ಜಗದೀಶ್ ಆಚಾರ್ಯ ಪುತ್ತೂರು, ಇವರಿಂದ ಸಂಗೀತ ರಸಮಂಜರಿ, ಕಾಪು ರಂಗತರಂಗ ತಂಡದಿಂದ ತುಳು ಸಾಮಾಜಿಕ, ಹಾಸ್ಯಮಯ ನಾಟಕ “ಶೋಬಾಜಿ” ಪ್ರದರ್ಶನಗೊಂಡಿತು.
ವಿದ್ಯಾ ಲತಾ ಶೆಟ್ಟಿ ಅಭಿಮಾನಿ ಬಳಗ ಉದ್ಘಾಟನೆ
Posted On: 27 Dec 2025, 04:36 PM
ಉಡುಪಿ : ವಿದ್ಯಾ ಲತಾ ಶೆಟ್ಟಿ ಅಭಿಮಾನಿ ಬಳಗ ಉದ್ಘಾಟನೆ ಪ್ರಯುಕ್ತ ಡಿ.25ರಂದು ಮಹಿಳೆಯರಿಗಾಗಿ ಮಹೆಂದಿ ಸ್ಪರ್ಧೆ, ವಿವಿಧ ಸ್ಪರ್ಧೆಗಳು ಹಾಗೂ ಸಾಮಾಜಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭವು ಉಡುಪಿಯ ಬ್ರಹ್ಮಗಿರಿಯಲ್ಲಿರುವ ನಮಿತಾ ನಿವಾಸ್ ಬೋರ್ಡಿಂಗ್ ಅಂಡ್ ಲಾಡ್ಜಿಂಗ್ ನಲ್ಲಿರುವ ಸಭಾಭವನದಲ್ಲಿ ಜರುಗಿತು.
ಈ ಭವ್ಯ ಸಭಾ ಕಾರ್ಯಕ್ರಮದಲ್ಲಿ ದೊಡ್ಡನ ಗುಡ್ಡೆಯ ಆದಿಶಕ್ತಿ ಕ್ಷೇತ್ರದ ಧರ್ಮದರ್ಶಿಗಳಾದ ರಮಾನಂದ ಗುರೂಜಿ ದೀಪ ಬೆಳಗಿಸುವುದರ ಮೂಲಕ ಉದ್ಘಾಟನೆಯನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ರಾಜಕೀಯ ಮುಖಂಡ, ಉದ್ಯಮಿಗಳಾದ ಪ್ರಸಾದ್ ರಾಜ್ ಕಾಂಚನ್ ಹೊಲಿಗೆ ಯಂತ್ರದ ಫಲಾನುಭವಿಯಾದ ಸುಜಾತರವರಿಗೆ ಹಸ್ತಾಂತರ ಮಾಡಿ, ಪ್ರತಿಯೊಬ್ಬ ಮಹಿಳೆಯರು ಪ್ರಮುಖ ವಾಹಿನಿಯಲ್ಲಿ ತನ್ನ ಪ್ರತಿಭೆಯ ಛಾಪನ್ನು ಮೂಡಿಸಿಕೊಳ್ಳುವ ಬಗ್ಗೆ ತಿಳಿಸಿದರು.
ದೊಡ್ಡನ ಗುಡ್ಡೆಯ ಎ ವಿ ಬಾಳಿಗ ಆಸ್ಪತ್ರೆಯ ಆಡಳಿತ ನಿರ್ದೇಶಕರಾಗಿರುವ ಸೌಜನ್ಯ ಶೆಟ್ಟಿ ಅವರು ಮಾತನಾಡಿ, ಮಹಿಳೆಯರಿಗೆ ಬೇಕಾಗುವ ಆರೋಗ್ಯ ಮಾಹಿತಿಗಳನ್ನು ನೀಡಿ ಶುಭ ಹಾರೈಸಿದರು.
ಮಹಿಳಾ ಉದ್ಯಮಿ ರಾಜಕೀಯ ಮುಖಂಡರಾದ ಮಮತಾ ಶೆಟ್ಟಿ, ಬಿಜೆಪಿ ಮಹಿಳಾ ಮುಖಂಡರು, ಸಮಾಜ ಸೇವಕರಾದ ವೀಣಾ ಶೆಟ್ಟಿ, ಮಾಜಿ ನಗರಸಭಾ ಅಧ್ಯಕ್ಷರಾದ ಮೀನಾಕ್ಷಿ ಮಾಧವ ಬನ್ನಂಜೆ, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಮೇಶ್ ಕಾಂಚನ್, ವಿದ್ಯಾ ಲತಾ ಶೆಟ್ಟಿ ಅಭಿಮಾನಿ ಬಳಗದ ಸ್ಥಾಪಕರಾದ ವಿನೋದ್ ಶೆಟ್ಟಿ, ಅಧ್ಯಕ್ಷರಾದ ದಿನೇಶ್ ಪೂಜಾರಿ ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭದಲ್ಲಿ ರಾಜಕೀಯ ಮುಖಂಡ, ಉದ್ಯಮಿಗಳಾದ ಹರಿ ಪ್ರಸಾದ್ ರೈ ಹಾಗೂ ಪ್ರಮುಖ ಅತಿಥಿಗಳು ಉಪಸ್ಥಿತಿಯಿದ್ದರು.
ಉಡುಪಿಯ 5 ಮಹಿಳಾ ಚಂಡೆ ಬಳಗದ ಎಲ್ಲಾ ಸದಸ್ಯರಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗೌರವಿಸಲಾಯಿತು.
ವಿದ್ಯಾ ಲತಾ ಶೆಟ್ಟಿ ಅಭಿಮಾನಿ ಬಳಗದ ಸ್ಥಾಪಕರಾದ ವಿನೋದ್ ಶೆಟ್ಟಿ ಸ್ವಾಗತಿಸಿದರು.
ದಯಾನಂದ್ ರವರು ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ಪ್ರೀತಿ ಕಲ್ಯಾಣಪುರ ವಂದಿಸಿದರು.
ಡಿ. 28:ಪಾದೂರು ಕಳತ್ತೂರು ಶ್ರೀ ಬ್ರಹ್ಮಬೈದೆರುಗಳ ಗರಡಿಯಲ್ಲಿ ಸಮಾಲೋಚನ ಸಭೆ
Posted On: 26 Dec 2025, 08:14 PM
ಕಾಪು : ತಾಲೂಕಿನ ಎಲ್ಲೂರು ಸೀಮೆಯ ಕಳತ್ತೂರು ನಡೀಬೈಲ್ ಉರಿ ಉಂಡಾಲ ಪಾದೆಯಲ್ಲಿ ನೆಲೆ ನಿಂತಿರುವ ಬ್ರಹ್ಮ ಬೈದೆರುಗಳ ಗರಡಿ ಸಮಗ್ರ ಜೀರ್ಣೋದ್ದಾರ ಕೆಲಸ ನಡೆಯುತ್ತಿದ್ದು, ಅ ಪ್ರಯುಕ್ತ ದಿನಾಂಕ: 28/12/2025 ಆದಿತ್ಯವಾರ ಸಂಜೆ 4 ಗಂಟೆಗೆ ಸರಿಯಾಗಿ, ಶ್ರೀ ಬ್ರಹ್ಮ ಬೈದೆರುಗಳ ಗರಡಿ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಳಶಾಭಿಷೇಕ ನಡೆಸುವ ಬಗ್ಗೆ ಸಮಾಲೋಚನಾ ಸಭೆ ನಡೆಯಲಿದೆ.
ಎಲ್ಲಾ ಗುತ್ತು ಬರ್ಕೆ ನಟ್ಟಿಲ್ ಮನೆಯವರು ಮತ್ತು ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸೂಕ್ತ ಸಲಹೆ ಸೂಚನೆ ನೀಡಬೇಕಾಗಿ ವಿನಂತಿ.
ಅಧ್ಯಕ್ಷರು ಹಾಗೂ ಸರ್ವ ಸದಸ್ಯರು
ಪಾದೂರು ಕಳತ್ತೂರು ಶ್ರೀ ಬ್ರಹ್ಮ ಬೈದೆರುಗಳ ಜೀರ್ಣೋದ್ದಾರ ಸಮಿತಿ
ಕಳತ್ತೂರು ಗ್ರಾಮ
ಜನವರಿ 25 ರಂದು ಕುಲಾಲ ಸಂಘ (ರಿ.) ಕಾಪು ವಲಯ ಅಶ್ರಯದಲ್ಲಿ ಜಿಲ್ಲಾ ಮಟ್ಟದ ಕುಲಾಲ ಕ್ರೀಡೋತ್ಸವ 2026
Posted On: 26 Dec 2025, 07:35 PM
ಕಾಪು : ಸ್ನೇಹಕ್ಕಾಗಿ ಕ್ರೀಡೆ, ಏಳಿಗೆಗಾಗಿ ಕ್ರೀಡೆ, ಒಗ್ಗಟ್ಟಿಗಾಗಿ ಕ್ರೀಡೆ ಎಂಬ ನಿಟ್ಟಿನಲ್ಲಿ ತಾಲೂಕಿನ ಕುಲಾಲ ಸಂಘ(ರಿ)ಕಾಪು ವಲಯ ಹಾಗೂ ಮಹಿಳಾ ಘಟಕ, ಕಾಪು ಕುಲಾಲ ಯುವ ವೇದಿಕೆ ನೇತೃತ್ವದಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಕುಲಾಲ ಸಮಾಜ ಬಾಂಧವರಿಗೆ ವಾಲಿಬಾಲ್ ಹಾಗೂ ತ್ರೋಬಾಲ್ ಪಂದ್ಯಾಟ, ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ 100 ಮೀ ಓಟ,ಗುಂಡು ಎಸೆತ,ಹಾಗೂ ವಿವಿಧ ಮನೋರಂಜನಾ ಕಾರ್ಯಕ್ರಮ ಜನವರಿ 25 ರಂದು ಉಚ್ಚಿಲ ಸರಸ್ವತಿ ಮಂದಿರ ಶಾಲಾ ಮೈದಾನದಲ್ಲಿ ನಡೆಯಲಿದೆ.
ಆಯಾಯ ಸ್ಪರ್ಧೆಗೆ ನಗದು ಜೊತೆಗೆ ಕುಲಾಲ ಶಾಶ್ವತ ಫಲಕ ನೀಡಲಾಗುವುದು ಎಂದು ಕಾಪು ಕುಲಾಲ ಸಂಘದ ಅಧ್ಯಕ್ಷರು,,ಪ್ರಸ್ತುತ ಎಲ್ಲೂರು ಗ್ರಾಮ ಪಂಚಾಯತ್ ಸದಸ್ಯರು ಶ್ರೀ ಹರೀಶ್ ಮೂಲ್ಯ ಬೆಳ್ಳಿಬೆಟ್ಟು ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಮೊಬೈಲ್ ಗೆ ಸಂಪರ್ಕಿಸಬಹುದು... 9686122892, 9964194509, 9686945501
ಪಾದಚಾರಿಗೆ ಹಿಂದಿನಿಂದ ಬಂದು ಬೈಕ್ ಅಪಘಾತ. ಪೆರ್ಡೂರು ಕುಕ್ಕೆಹಳ್ಳಿನಿವಾಸಿ ದಿನೇಶ್ ಕುಲಾಲ್ ತೀವ್ರ ಅಶ್ವಸ್ತ
Posted On: 26 Dec 2025, 07:02 PM
ಪೆರ್ಡೂರು : ಪೆರ್ಡೂರು ಭಾಗದ ಕುಕ್ಕೆಹಳ್ಳಿ ಬಡಪಾಲು ನರಸಿಂಹ ಕುಲಾಲ್ ಮಗ ದಿನೇಶ್ ಕುಲಾಲ್ ವೃತ್ತಿಯಲ್ಲಿ ಉಡುಪಿಯಲ್ಲೊಂದು ಕ್ಯಾಂಟಿನ್ ನಲ್ಲಿ ದಿನಕೂಲಿ ದುಡಿಯುವವರು.
ತನ್ನ ಕುಟುಂಬ ಪಾಲನೆಯ ಜೊತೆಯಲ್ಲಿ ದಿನ ಸಾಗಿಸುತ್ತಿದ್ದ ದಿನೇಶ್ ಕೆಲಸ ಮುಗಿಸಿಕೊಂಡು ಹೋಗುವ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿ ಬೈಕ್ ಸವಾರ ಹಿಂಬದಿಯಿಂದ ಡಿಕ್ಕಿ ಹೊಡೆದು ದಿನೇಶ್ ತಲೆಗೆ ಪೆಟ್ಟಾಗಿದ್ದು ಪರಿಣಾಮ ಕಳೆದ ಮೂರು ದಿನದಿಂದ ಮಣಿಪಾಲ ಹಾಸ್ಪಿಟಲ್ನಲ್ಲಿ ತುರ್ತು ಚಿಕಿತ್ಸೆ ನಿಗಮದಲ್ಲಿರುವರು..ಮುಗ್ದದ ಮನೋಭಾವನೆಯ ಇವರ ಕುಟುಂಬಕ್ಕೆ ಆದಷ್ಟು ಸಹಾಯ ಆಗೋಣ..
Contact : 9844 344157
ದಿನೇಶ್ ಅವರ ಪತ್ನಿ ಸವಿತರವರ ಬ್ಯಾಂಕ್ ಡೀಟೇಲ್ಸ್..
Name : savitha..
Bank Name : Union Bank Perdoor Branch.
A/C NO : 170522010001052
IFSC CODE : UBIN0917052
ಉಡುಪಿ : ವಿದ್ಯಾಲತಾ ಶೆಟ್ಟಿ ಅಭಿಮಾನಿ ಬಳಗ ಆಶ್ರಯದಲ್ಲಿ ಉದ್ಘಾಟನೆಯ ಪ್ರಯುಕ್ತ ಮೆಹೆಂದಿ ಸ್ಪರ್ಧೆ
Posted On: 24 Dec 2025, 10:09 PM
ಉಡುಪಿ : ವಿದ್ಯಾಲತಾ ಶೆಟ್ಟಿ ಅಭಿಮಾನಿ ಬಳಗ, ಉಡುಪಿ ಇವರ ಆಶ್ರಯದಲ್ಲಿ ಉದ್ಘಾಟನೆಯ ಪ್ರಯುಕ್ತ ಮೆಹೆಂದಿ ಸ್ಪರ್ಧೆ
ಡಿಸೆಂಬರ್ 25 ರಂದು ಮಧ್ಯಾಹ್ನ 2 ಗಂಟೆಗೆ ನಮಿತಾ ನಿವಾಸ, ಅಬಕಾರಿ ಭವನ ಎದುರು, ನಾಯರ್ ಕೆರೆ ರೋಡ್, ಉಡುಪಿ ಇಲ್ಲಿ ಜರಗಲಿದೆ.
ಪ್ರಥಮ ಬಹುಮಾನವಾಗಿ ಶಾಶ್ವತ ಫಲಕ, ಪ್ರಶಸ್ತಿ ಪತ್ರ ಹಾಗೂ ನಗದು, ದ್ವಿತೀಯ ಬಹುಮಾನ ಶಾಶ್ವತ ಫಲಕ, ಪ್ರಶಸ್ತಿ ಪತ್ರ ಹಾಗೂ ನಗದು, ತೃತೀಯ ಬಹುಮಾನ ಶಾಶ್ವತ ಫಲಕ, ಪ್ರಶಸ್ತಿ ಪತ್ರ ಹಾಗೂ ನಗದು ಇರಲಿದೆ. ಜೊತೆಗೆ ಆಕರ್ಷಕ ಬಹುಮಾನಗಳು ಹಾಗೂ
ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೂ ಪ್ರಮಾಣ ಪತ್ರ ನೀಡಲಾಗುವುದು.
ಈ ಕಾರ್ಯಕ್ರಮದಲ್ಲಿ ಉಪಸ್ಥಿತಿ ಇರುವ ಮಹಿಳೆಯರಿಗೆ ಸೀರೆಯ ನಿಖರ ಬೆಲೆ ಹೇಳುವ ಸ್ಪರ್ಧೆ ಹಾಗೂ ಇನ್ನಿತರ ಸ್ಪರ್ಧೆಗಳು ನಡೆಯಲಿವೆ.
ಸಮರೋಪ ಸಮಾರಂಭದಲ್ಲಿ ಉಡುಪಿಯ 5 ಮಹಿಳಾ ಚಂಡೆ ತಂಡಗಳನ್ನು ಗೌರವಿಸಲಾಗುವುದು. ಹೊಲಿಗೆ ಯಂತ್ರಗಳನ್ನು ವಿತರಿಸಲಾಗುವುದು. ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪ್ರೋತ್ಸಾಹಿಸಬೇಕೆಂದು ಸಂಚಾಲಕರು ಹಾಗೂ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ವಿದ್ಯಾಲತಾ ಶೆಟ್ಟಿ ಬನ್ನಂಜೆ ಅಭಿಮಾನಿ ಬಳಗ, ಉಡುಪಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ:
8105501903, 9148533269,
8050695853, 9591272479
ಡಿ.25 (ನಾಳೆ) : ಬಿರುವೆರ್ ಕಾಪು ಸೇವಾ ಸಮಿತಿ ವತಿಯಿಂದ ಜ್ಞಾನ ದೀವಿಗೆ - 2025
Posted On: 24 Dec 2025, 09:56 PM
ಕಾಪು : ಬಿರುವೆರ್ ಕಾಪು ಸೇವಾ ಸಮಿತಿ (ರಿ.)ವತಿಯಿಂದ 5ನೇ ವರ್ಷದ ವಿದ್ಯಾರ್ಥಿ ವೇತನ ವಿತರಣೆ ಮತ್ತು ಸನ್ಮಾನ ಸಮಾರಂಭ
"ಜ್ಞಾನ ದೀವಿಗೆ - 2025" ಡಿ.25, ಗುರುವಾರ ಕಾಪು ಬಿಲ್ಲವರ ಸಹಾಯಕ ಸಂಘ (ರಿ.) ಕಾಪು ಇಲ್ಲಿ ಮಧ್ಯಾಹ್ನ 2.30 ರಿಂದ ಜರಗಲಿದೆ.
ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ರಾಷ್ಟ್ರೀಯ ಬಿಲ್ಲವರ ಮಹಾಮಂಡಲ (ರಿ.) ಮೂಲ್ಕಿ ಇದರ ಅಧ್ಯಕ್ಷರಾದ ಸೂರ್ಯಕಾಂತ್ ಜೆ.ಸುವರ್ಣ ವಿದ್ಯಾರ್ಥಿವೇತನ ವಿತರಿಸಲಿದ್ದಾರೆ.
ಜೇಸಿಐ ಭಾರತ ರಾಷ್ಟ್ರೀಯ ತರಬೇತಿದಾರ ದೀಪಕ್ ರಾಜ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಂಕಪ್ಪ ಅಮಿನ್ ವಕೀಲರು, ಕಾನೂನು ಸಲಹೆಗಾರರು ಮತ್ತು ಬಿರುವೆರ್ ಕಾಪು ಸೇವಾ ಸಮಿತಿ (ರಿ), ವಿಕ್ರಂ ಕಾಪು ಅಧ್ಯಕ್ಷರು, ಕಾಪು ಬಿಲ್ಲವರ ಸಹಾಯಕ ಸಂಘ (ರಿ.) ಕಾಪು ಮತ್ತು ಅಧ್ಯಕ್ಷರು ಕಾಪು ನಗರ ಯೋಜನಾ ಪ್ರಾಧಿಕಾರ, ಗೀತಾಂಜಲಿ ಸುವರ್ಣ ಕಟಪಾಡಿ ಮಾಜಿ ಸದಸ್ಯರು ಜಿಲ್ಲಾ ಪಂಚಾಯತ್, ಪ್ರಭಾಕರ ಎಸ್.ಪೂಜಾರಿ ಕಾಪು ಗೌರವಾಧ್ಯಕ್ಷರು, ಕಾಪು ಬಿಲ್ಲವರ ಸಹಾಯಕ ಸಂಘ (ರಿ.) ಕಾಪು, ಸಂಜೀವ ಪೂಜಾರಿ ಮೂಳೂರು, ಪ್ರಭಾಕರ ಪೂಜಾರಿ ಉದ್ಯಮಿ, ಬಿಂದಾಸ್ ಕಾಪು, ಕೈಪುಂಜಾಲ್ ಭಾಗವಹಿಸಲಿದ್ದಾರೆ.
ವಿವಿಧ ಕ್ಷೇತ್ರಗಳ ಸಾಧಕರಾದ ಪ್ರಭಾಕರ ಎಸ್.ಪೂಜಾರಿ, ವಿಕ್ರಂ ಕಾಪು, ಸೂರ್ಯಕಾಂತ್ ಜೆ. ಸುವರ್ಣ, ಶಿವಾನಂದ ಕೋಟ್ಯಾನ್ ಕಟಪಾಡಿ, ನವೀನ್ ಅಮಿನ್ ಕಂಕರಪುರ, ಸಂಜೀವ ಪೂಜಾರಿ ಮೂಳೂರು, ಸುಧಾಕರ ಸಾಲ್ಯಾನ್, ವಿಕ್ಕಿ ಮಡುಂಬು, ರಾಘು ಸಿ.ಪೂಜಾರಿ ಮರ್ನಾಡ್ ಸನ್ಮಾನಿಸಲ್ಪಡಲಿದ್ದಾರೆ.
ಸಭೆಯ ಅಧ್ಯಕ್ಷತೆಯನ್ನು ಬಿರುವೆರ್ ಕಾಪು ಸೇವಾ ಸಮಿತಿ (ರಿ.) ಉಪಾಧ್ಯಕ್ಷರಾದ ಮನೋಜ್ ಎಸ್. ಅಂಚನ್ ಕಾಪು ವಹಿಸಲಿದ್ದಾರೆ ಎಂದು ಬಿರುವೆರ್ ಕಾಪು ಸೇವಾ ಸಮಿತಿ ಪ್ರಕಟಣೆ ತಿಳಿಸಿದೆ.
