Updated News From Kaup

ಪಡುಬಿದ್ರಿ ಪುರದೊಡೆಯ ಹಾಗೂ ಪಡ್ಡೆದ್ರ ಉಲ್ಲಾಯೆ ವೀಡಿಯೋ ಆಲ್ಬಮ್ ಸಾಂಗ್ಸ್ ಪೋಸ್ಟರ್ ಬಿಡುಗಡೆ

Thumbnail
Posted On: 15 Apr 2026, 10:22 PM

ಪಡುಬಿದ್ರಿ : ಇಲ್ಲಿನ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಸುಸಂದರ್ಭದಲ್ಲಿ ಬಿಡುಗಡೆಗೊಳ್ಳಲಿರುವ ಪಡುಬಿದ್ರಿ ಪುರಾದೊಡೆಯ ಕನ್ನಡ ಹಾಗೂ ಪಡ್ಡೆದ್ರ ಉಲ್ಲಾಯೆ ತುಳು ವೀಡಿಯೋ ಆಲ್ಬಮ್  ಸಾಂಗ್ಸ್ ನ ಪೋಸ್ಟರನ್ನು ಉದ್ಯಮಿ ಸಂತೋಷ್ ಕುಮಾರ್ ಶೆಟ್ಟಿ  ಬಿಡುಗಡೆಗೊಳಿಸಿದರು.

    ಈ ಸಂದರ್ಭದಲ್ಲಿ ಸಾಹಿತಿ ಸುರೇಶ್ ಪಡುಬಿದ್ರಿ, ನಿರ್ಮಾಪಕಿ ಶಾಲಿನಿ ಸುರೇಶ್, ನಿರ್ದೇಶಕರಾದ ಸಂತೋಷ್ ಪಡುಬಿದ್ರಿ, ದಿನೇಶ್ ಪಡುಬಿದ್ರಿ, ಯಶೋಧ ಪಡುಬಿದ್ರಿ, ರಚನ್ ಸಾಲ್ಯಾನ್, ಸಾಹಿಲ್ ಪಡುಬಿದ್ರಿ, ಅಶ್ವಥ್ ಅಚಾರ್ಯ ಪಾದೆಬೆಟ್ಟು, ರಮೇಶ್ ಸಾಲ್ಯಾನ್ ಉಪಸ್ಥಿತರಿದ್ದರು.

ಶಿರ್ವ : ಪಿಯುಸಿ ವಾಣಿಜ್ಯ ವಿಭಾಗ ಪರೀಕ್ಷೆ - ಕಾವ್ಯಾಗೆ 99.16% ಅಂಕ

Thumbnail
Posted On: 15 Apr 2026, 07:18 PM

ಶಿರ್ವ : 2025-26ನೇ ಶೈಕ್ಷಣಿಕ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ಶಿರ್ವ ಹಿಂದೂ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕಾವ್ಯಾ ಅವರು ವಾಣಿಜ್ಯ ವಿಭಾಗದಲ್ಲಿ 99.16% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.  

ಇವರು ಕಾಪು ಕಳತ್ತೂರು ಚಂದ್ರನಗರ ನಿವಾಸಿ ಸತೀಶ ಮೂಲ್ಯ ಹಾಗೂ ರತ್ನಾ ದಂಪತಿಯ ಸುಪುತ್ರಿ.

ಉಡುಪಿ ಕನ್ಸಲ್ಟಿಂಗ್‌ ಸಿವಿಲ್ ಇಂಜಿನಿಯರ್ಸ್ & ಆರ್ಕಿಟೆಕ್ಟ್ ಅಸೋಸಿಯೇಷನ್‌ನ ಅಧ್ಯಕ್ಷರಾಗಿ ಭಗವಾನ್‌ ದಾಸ್ ಕೆ ಆಯ್ಕೆ

Thumbnail
Posted On: 15 Apr 2026, 07:15 PM

ಕಾಪು : ಉಡುಪಿ ಕನ್ಸಲ್ಟಿಂಗ್‌ ಸಿವಿಲ್ ಇಂಜಿನಿಯರ್ಸ್ ಮತ್ತು ಆರ್ಕಿಟೆಕ್ಟ್ ಅಸೋಸಿಯೇಷನ್‌ನ ಅಧ್ಯಕ್ಷರಾಗಿ
ಭಗವಾನ್‌ ದಾಸ್ ಕೆ ಅವರು ಆಯ್ಕೆಯಾಗಿದ್ದಾರೆ. 

ಈ ಸಂದರ್ಭ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಾಪು : ವಿವಿಧ ಇಲಾಖೆಗಳ‌ ಆಶ್ರಯದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಜನ್ಮ ದಿನಾಚರಣೆ

Thumbnail
Posted On: 14 Apr 2026, 08:01 PM

ಕಾಪು : ತಾಲೂಕು ಆಡಳಿತ, ತಾಲೂಕು ಪಂಚಾಯತ್, ಪುರಸಭೆ, ಸಮಾಜ ಕಲ್ಯಾಣ ಇಲಾಖೆ ಕಾಪು ತಾಲೂಕು ಇವರ ಸಂಯುಕ್ತ ಆಶ್ರಯದೊಂದಿಗೆ ಮಂಗಳವಾರ ಕಾಪು ಪ್ರಜಾಸೌಧದಲ್ಲಿ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರ್ ರವರ 135ನೇ ಜನ್ಮ ದಿನವನ್ನು ಆಚರಿಸಲಾಯಿತು.

ಕಾರ್ಯಕ್ರಮವನ್ನು ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟಿಸಿ, ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕಾಪು ತಹಶೀಲ್ದಾರರಾದ ಅಂನತ ಶಂಕರ್, ಕಾಪು ಪುರಸಭೆಯ ಮುಖ್ಯಾಧಿಕಾರಿ ನೀಲಕಂಠ ಮೇಸ್ತ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ವಿಜಯಲಕ್ಷ್ಮಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಶಿರ್ವ : ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ಹಿ.ಪ್ರಾ. ಶಾಲೆ ಶತಸಂಭ್ರಮೋತ್ಸವದಲ್ಲಿ ಶಿಕ್ಷಕಿಯರಿಗೆ ಸನ್ಮಾನ

Thumbnail
Posted On: 14 Apr 2026, 08:00 PM

ಶಿರ್ವ :  ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ಹಿ.ಪ್ರಾ. ಶಾಲೆ ಶತಸಂಭ್ರಮೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಕಳೆದ 4 ವರ್ಷಗಳಿಂದ ಸರಕಾರದ ವತಿಯಿಂದ ಯಾವುದೇ ಶಿಕ್ಷಕರಿಲ್ಲದೆ ಶಾಲಾ ಮುಖ್ಯ ಶಿಕ್ಷಕಿ ಸಹಿತ ಆರು ಶಿಕ್ಷಕಿಯರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.

ಮುಖ್ಯ ಶಿಕ್ಷಕಿ ಸಂಗೀತಾ ಪಾಟ್ಕರ್ ಸಹಿತ ಸಹಶಿಕ್ಷಕಿಯರಾದ ಶಾಲಿನಿ ಆಚಾರ್ಯ, ವಿನುತಾ ಆಚಾರ್ಯ, ಸುಮತಿ, ರೇಶ್ಮಾ, ಶ್ವೇತಾ ಇವರನ್ನು ಸನ್ಮಾನಿಸಲಾಯಿತು.

ಕೇವಲ ಗೌರವ ಧನದಲ್ಲಿಯೇ ಸಂತೃಪ್ತಿಪಟ್ಟು,  ಯಾವುದೇ ಸರಕಾರಿ ಶಾಲೆಗೆ ಸರಿಸಾಟಿಯಾಗಿ ಅತ್ಯುತ್ತಮ ರೀತಿಯಲ್ಲಿ ಶಾಲಾ ವಾರ್ಷಿಕೋತ್ಸವವನ್ನು ನೆರವೇರಿಸಿದ್ದರು.

‌ಈ‌ ಸಂದರ್ಭ ಮುಖ್ಯ ಅತಿಥಿಗಳಾದ ದಾಮೋದರ ಶರ್ಮಾ ಬಾರ್ಕೂರು, ರೆ.ಫಾ. ರೋಶನ್ ಡಿಸೋಜ, ಶತಮಾನೋತ್ಸವ ಸಮಿತಿ ಅಧ್ಯಕ್ಷ ಮಾಧವ ಕಾಮತ್, ಕೆ.ಆರ್.ಪಾಟ್ಕರ್, ಜಯರಾಮ ಪ್ರಭು, ಶಶಿಧರ ವಾಗ್ಲೆ, ರಾಮದಾಸ್ ಪ್ರಭು,ಉಮೇಶ ಪ್ರಭು ಪಾಲಮೆ, ಶಂಕರ ಶೆಟ್ಟಿ ಮಾನಿಪಾಡಿ, ದಿನೇಶ್ ದೇವಾಡಿಗ, ಅನಂತರಾಮ ವಾಗ್ಲೆ ಮತ್ತಿತರರು ‌ಉಪಸ್ಥಿತರಿದ್ದರು.

ಕಾಪು : ದಂಡತೀರ್ಥ ಸಮೂಹ ವಿದ್ಯಾಸಂಸ್ಥೆಗಳಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

Thumbnail
Posted On: 14 Apr 2026, 07:49 PM

ಕಾಪು : ಇಲ್ಲಿನ ದಂಡತೀರ್ಥ ಸಮೂಹ ವಿದ್ಯಾಸಂಸ್ಥೆಗಳಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ 135ನೇ ಜನ್ಮ ದಿನವನ್ನು ಮಂಗಳವಾರ   ಆಚರಿಸಲಾಯಿತು.

ಕಾಲೇಜಿನ ಪ್ರಾಂಶುಪಾಲರಾದ ಎಂ.ನೀಲಾನಂದ ನಾಯ್ಕ್ ಇವರು ದೀಪ ಬೆಳಗಿಸಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ  ಪುಷ್ಪನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕನ್ನಡ ಮಾಧ್ಯಮ ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿ ಕೃಪ ಅಮ್ಮನ್ನ , ಜಾನೆಟ್, ಕಾಲೇಜು ಉಪನ್ಯಾಸಕರಾದ ಸೂರಥ್ ಕುಮಾರ್ ಹಾಗೂ ಶಿಕ್ಷಕ -ಶಿಕ್ಷಕೇತರ ವೃಂದದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಶಿರ್ವ : ಕೊರಗರ ಕಟ್ಟುಕಟ್ಲೆಗಳು - ಆರಾಧನೆ ಮತ್ತು ಆಚರಣೆ ಪುಸ್ತಕ ಬಿಡುಗಡೆ

Thumbnail
Posted On: 08 Apr 2026, 09:53 AM

ಶಿರ್ವ : ಪಾಂಗಾಳ ಕೊರಗರ ಕೂಡು ಕುಟುಂಬದ ಕಟ್ಟುಕಟ್ಲೆಗಳು-ಆರಾಧನೆ ಮತ್ತು ಆಚರಣೆ" ಎಂಬ ಮಾರ್ಗದರ್ಶಕ ಪುಸ್ತಕವನ್ನು ಸೋಮವಾರ ಪಾಂಗಾಳ ಕೊರಗರ ದೈವ ಸಾನಿಧ್ಯದಲ್ಲಿ ಬಿಡುಗಡೆಗೊಳಿಸಲಾಯಿತು.

 ಕೂಡು ಕುಟುಂಬದ ಹಿರಿಯ ಮಹಿಳೆಯರಾದ ಗುರ್ಬಿ ಮತ್ತು ಅಮಣಿಯವರು ಜಂಟಿಯಾಗಿ ಪುಸ್ತಕ ಬಿಡುಗಡೆಗೊಳಿಸಿದರು. 

ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕೊರಗರ ಬಲೆಪಿನ ಗುರಿಕಾರ ಕುಡುಪ ಕೊರಗ ಅವರು ಕೊರಗ ಸಮುದಾಯದಲ್ಲಿ ಇದೊಂದು ಹೊಸ ಪ್ರಯತ್ನವಾಗಿದ್ದು, ಇತರರಿಗೂ ಮಾದರಿಯಾಗಿದೆ ಎಂದರು. ಸಭೆಯಲ್ಲಿ ಪಾದೆಬೆಟ್ಟು ಬಲೆಪಿನ ಪ್ರತಿನಿಧಿ ಸೋಮಶೇಖರ್, ಮುಂಡ್ಕೂರು ಬಲೆಪಿನ ಗುರಿಕಾರ ಅಣ್ಣು ಸಾಲಿಯಾನ್, ಕುರ್ಕಾಲು ಬಲೆಪಿನ ಗುರಿಕಾರ ಸುರೇಶ್ ಕುಂದರ್ ಸಕಾಲಿಕವಾಗಿ ಮಾತನಾಡಿದರು.

 ಸಚ್ಚೇರಿಪೇಟೆಯ ಕರ್ಣಾ ಸಾಲಿಯಾನ್, ಕಬ್ಯಾಡಿ ಬಲೆಪಿನ ಶಂಭು, ಪಾಂಗಾಳ ಕುಟುಂಬದ ಹಿರಿಯರಾದ ಕುಡ್ಡು ಕೊರಗ, ಗುರುವ ಮೂಡುಬೆಳ್ಳೆ, ಅಣ್ಣು ಕಡಂದಲೆ, ಉಪಸ್ಥಿತರಿದ್ದರು. ಕುಟುಂಬದ ಗುರಿಕಾರ ವಸಂತ ಪಾಂಬೂರು ಅಧ್ಯಕ್ಷತೆ ವಹಿಸಿದ್ದರು.

 ಸೌಮ್ಯಾ ಮತ್ತು ತಂಡದವರು ಪ್ರಾರ್ಥನಾ ಗೀತೆ ಹಾಡಿದರು. ಅಣ್ಣು ಪಿಲಾರು ವಂದಿಸಿದರು. ಜ್ಯೋತಿ ಪಾಂಬೂರು ಕಾರ್ಯಕ್ರಮ ನಿರೂಪಿಸಿದರು.

ಉಡುಪಿ : ಸರಕಾರಿ ಜಾಗ ಅಕ್ರಮ ಒತ್ತುವರಿ - ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ

Thumbnail
Posted On: 08 Apr 2026, 09:49 AM

ಉಡುಪಿ : ಹೊಸುರು ಗ್ರಾಮದ ಸರ್ವೆ ನಂ. 141ರಲ್ಲಿ ಸರಕಾರಿ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿ ಮನೆ ನಿರ್ಮಾಣ ಮಾಡುತ್ತಿರುವ ಪ್ರಕರಣದಲ್ಲಿ ಸಂಬಂಧಿತ ಅಧಿಕಾರಿಗಳ ವಿರುದ್ಧ ಕರ್ತವ್ಯ ಲೋಪ, ನಿರ್ಲಕ್ಷ್ಯ ಮತ್ತು ದುರ್ಬಳಕೆ ಆರೋಪಗಳು ಕೇಳಿಬಂದಿವೆ.
ಈ ಬಗ್ಗೆ ಹೊಸಕಿರಣ ನ್ಯೂಸ್ ಸಂಪಾದಕರಾದ ಕಿರಣ್ ಪೂಜಾರಿ ಅವರು ಉಪಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದಾರೆ.

 ಗಣಪು ಶೇಡ್ತಿ ಎಂಬವರು ಸರಕಾರಿ ಜಾಗದಲ್ಲಿ ಅನಧಿಕೃತವಾಗಿ ಮನೆ ನಿರ್ಮಾಣ ಮಾಡುತ್ತಿದ್ದರೂ ಸಂಬಂಧಿತ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.

ದೂರು ಪ್ರಕಾರ, ಈ ಅಕ್ರಮ ನಿರ್ಮಾಣವನ್ನು ನಿಲ್ಲಿಸುವಂತೆ ಹಲವು ಬಾರಿ ಲಿಖಿತ ಹಾಗೂ ದೂರವಾಣಿ ಮೂಲಕ ಮನವಿ ಸಲ್ಲಿಸಿದರೂ ಅಧಿಕಾರಿಗಳು ಕೇವಲ ನೋಟಿಸ್ ನೀಡುವುದರಲ್ಲೇ ಸೀಮಿತಗೊಂಡಿದ್ದು, ಕಾನೂನು ಕ್ರಮ ಕೈಗೊಳ್ಳಲು ವಿಫಲರಾಗಿದ್ದಾರೆ. ಅಲ್ಲದೆ, ಕಂದಾಯ ಕಾಯ್ದೆ 192(A) ಅಡಿಯಲ್ಲಿ ಯಾವುದೇ ಪ್ರಕರಣ ದಾಖಲಿಸದಿರುವುದು ಪ್ರಶ್ನೆಗೆ ಗ್ರಾಸವಾಗಿದೆ.
ಇದೇ ವೇಳೆ, ಮಾನ್ಯ ಉಚ್ಚ ನ್ಯಾಯಾಲಯದಿಂದ ಯಥಾಸ್ಥಿತಿ ಕಾಪಾಡುವಂತೆ ಆದೇಶ ನೀಡಿದ್ದರೂ, ಅಧಿಕಾರಿಗಳು ನ್ಯಾಯಾಲಯಕ್ಕೆ ಅಗತ್ಯ ವರದಿ ಸಲ್ಲಿಸದಿರುವುದು ಗಂಭೀರ ವಿಷಯವಾಗಿದೆ. ಇದರಿಂದ ಅಕ್ರಮ ನಿರ್ಮಾಣ ಕಾರ್ಯ ಈಗ ಮುಕ್ತಾಯ ಹಂತಕ್ಕೆ ತಲುಪಿದೆ ಎಂದು ದೂರುದಾರರು ತಿಳಿಸಿದ್ದಾರೆ.
ಮತ್ತೊಂದು ಅಂಶವಾಗಿ, ಮಾರ್ಚ್ 31, 2026ರಂದು ಸರಕಾರಿ ಜಾಗದಿಂದ ಕೆಂಪು ಮಣ್ಣನ್ನು ಅಕ್ರಮವಾಗಿ ಸಾಗಾಣಿಕೆ ಮಾಡಿದರೂ ಸಹ ಯಾವುದೇ ಕ್ರಮ ಕೈಗೊಳ್ಳದಿರುವುದು ಅಧಿಕಾರಿಗಳ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ಆರೋಪಿಸಲಾಗಿದೆ.

ಸ್ಥಳೀಯ ಅಧಿಕಾರಿಗಳಾದ ಗ್ರಾಮ ಲೆಕ್ಕಿಗ (V.A), ರಾಜಸ್ವ ನಿರೀಕ್ಷಕ (R.I) ಹಾಗೂ ತಹಶೀಲ್ದಾರ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರುದಾರರು ಆಗ್ರಹಿಸಿದ್ದಾರೆ. ಅಲ್ಲದೆ, ರಾಜಕೀಯ ಒತ್ತಡದ ಕಾರಣದಿಂದ ಅಧಿಕಾರಿಗಳು ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂಬುದೂ ದೂರುದಲ್ಲಿ ಉಲ್ಲೇಖಿಸಲಾಗಿದೆ.

ಈ ಕುರಿತು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಉಪಲೋಕಾಯುಕ್ತರನ್ನು ಮನವಿ ಮಾಡಲಾಗಿದೆ.

ಎ.10 - 12 : ಕಾಪು ಬಿಲ್ಲವ ಭವನ ಮತ್ತು ಶ್ರೀ ನಾರಾಯಣಗುರು ಸಭಾಂಗಣದ ಲೋಕಾರ್ಪಣೆ

Thumbnail
Posted On: 07 Apr 2026, 11:21 AM

ಕಾಪು : ಕಾಪು ಬಿಲ್ಲವ ಭವನ ಮತ್ತು ಶ್ರೀ ನಾರಾಯಣಗುರು ಸಭಾಂಗಣದ ಉದ್ಘಾಟನೆಯು ಎ.10 ರಿಂದ 12 ರ ವರಗೆ ನಡೆಯಲಿದೆ ಎಂದು ಕಾಪು ಬಿಲ್ಲವ ಸಂಘದ ಅಧ್ಯಕ್ಷ ವಿಕ್ರಂ ಕಾಪು ಹೇಳಿದರು. 
ಅವರು ಕಾಪು ಪತ್ರಕರ್ತರ ಸಂಘದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಎ.11ರಂದು ಬಿಲ್ಲವ ಭವನವನ್ನು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ, ನಾರಾಯಣ ಗುರು ಸಭಾಂಗಣವನ್ನು ಹಿಂದುಳಿದ ವರ್ಗಗಳ ಮತ್ತು ಸಮಾಜ 
ಕಲ್ಯಾಣ ಇಲಾಖಾ ಸಚಿವ ಶಿವರಾಜ್ ತಂಗಡಗಿ , ಭೋಜನ ಶಾಲೆಯನ್ನು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್,  ಆಡಳಿತ ಕಛೇರಿಯನ್ನು ಕಾಪು ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ದಿ.ಸಿಂಧು ಪೂವ ಪೂಜಾರಿ ವೇದಿಕೆಯನ್ನು ನಾಡೋಜ ಡಾ.ಜಿ. ಶಂಕ‌ರ್, ಮುಖ್ಯ ದ್ವಾರವನ್ನು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಇದರ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾ‌ರ್ ಉದ್ಘಾಟಿಸಲಿದ್ದಾರೆ.

ಎ.10ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಎ.11ರಂದು ಸಂಜೆ ಗಂಟೆ 6ರಿಂದ ಜರಗಲಿರುವ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿದ್ದಾರೆ. ಕರ್ನಾಟಕ ರಾಜ್ಯ ಆರ್ಯ ಈಡಿಗ ಮಹಾಸಂಸ್ಥಾನ ರೇಣುಕಾ ಪೀಠ, ಸೋಲೂರು ಪೀಠಾಧಿಫತಿ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.

ಮುಖ್ಯ ಅಥಿತಿಗಳಾಗಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ವಿಧಾನ ಪರಿಷತ್ ಸದಸ್ಯ ಭೋಜೇಗೌಡ, ಮಾಜಿ ಶಾಸಕರಾದ ಲಾಲಾಜಿ ಆರ್. ಮೆಂಡನ್, ಗೋಪಾಲ ಪೂಜಾರಿ, ಕರಾವಳಿ ಪ್ರಾಧಿಕಾರ ಅಧ್ಯಕ್ಷ ಎಂ.ಎ. ಗಪೂರ್, ನಾರಾಯಣ ಗುರು ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ ಹೆಬ್ರಿ, ಕಟಪಾಡಿ ವಿಶ್ವನಾಥ ಕ್ಷೇತ್ರದ ಅಧ್ಯಕ್ಷ ಮಹೇಶ್ ಅಂಚನ್, ಕಾಪು ಗ್ರಾಮ ದೇಗುಲದ ಅಧ್ಯಕ್ಷ ಮನೋಹರ ಶೆಟ್ಟಿ, ಕಾಪು ಹಳೆ ಮಾರಿಯಮ್ಮ ದೇವಳದ ಅಧ್ಯಕ್ಷ ಪ್ರಸಾದ್ ಶೆಣೈ, ಕಾಪು ಹೊಸ ಮಾರಿಯಮ್ಮ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ಕಾಪು ಸಿಎ ಬ್ಯಾಂಕ್ ಅಧ್ಯಕ್ಷ ಕಾಪು ದಿವಾಕರ ಶೆಟ್ಟಿ, ಜನತಾದಳ ಜಿಲ್ಲಾಧ್ಯಕ್ಷ  ಯೋಗೀಶ್ ಶೆಟ್ಟಿ ಬಾಲಾಜಿ, ಕಾಪು ಪುರಸಭಾ ಉಪಾಧ್ಯಕ್ಷೆ ಸರಿತಾ ಶಿವಾನಂದ, ಉದ್ಯಮಿ ಎಂ. ಉಮೇಶ್ ಶೆಟ್ಟಿ, ಬಿಲ್ಲವ ಮುವ ವೇದಿಕೆಯ ಜಿಲ್ಲಾಧ್ಯಕ್ಷ ಪ್ರವೀಣ್ ಎಂ. ಪೂಜಾರಿ, ಪುರಸಭೆಯ ಸದಸ್ಯೆ ಫರ್ಜಾನಾ, ಪುರಸಭೆ ಮುಖ್ಯಧಿಕಾರಿ ನೀಲಕಂಠ ಮೇಸ್ತ ಭಾಗವಹಿಸಲಿದ್ದಾರೆ. ದಾನಿಗಳಿಗೆ ಈ ಸಂದರ್ಭ ಸನ್ಮಾನದ ಗೌರವ ನಡೆಯಲಿದೆ.

11 ರ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಕಾಪು ನಾರಾಯಣ ಗುರು ಸೇವಾ ಮಹಿಳಾ ಮಂಡಳಿ ಸದಸ್ಯೆಯರಿಂದ ಮನರಂಜನಾ ಕಾರ್ಯಕ್ರಮ ಹಾಗೂ ದೇಯಿ ಬೈದೆದಿ ನೃತ್ಯ ರೂಪಕ ನಡೆಯಲಿದ್ದು, ಬಳಿಕ ಮುಲ್ಕಿ ಶಿವ ಪ್ರಣಾಮ್ ತಂಡದಿಂದ ನೃತ್ಯ ವೈಭವ ಕಾರ್ಯಕ್ರಮ ನಡೆಯಲಿದೆ.

 ಎ.12 ರಂದು ಸಂಜೆ ಗಂಟೆ 5ಕ್ಕೆ ಧಾರ್ಮಿಕ ಸಭೆ ಮತ್ತು ಸನ್ಮಾನ ಕಾರ್ಯಕ್ರಮವು ವಿವಿಧ ಕ್ಷೇತ್ರದ ಗಣ್ಯರ ಉಪಸ್ಥಿತಿಯಲ್ಲಿ ಜರಗಲಿದೆ. ಬಳಿಕ ಶ್ರೀ ನಾರಾಯಣ ಗುರು ಸೇವಾ ಮಹಿಳಾ ಮಂಡಳಿ ಸದಸ್ಯರಿಂದ ನೃತ್ಯ ಕಾರ್ಯಕ್ರಮ ಮತ್ತು ತಾಂಬೂಲ ಕಲಾವಿದರು ಪುಂಜಾಲಕಟ್ಟೆ ಕುಡ್ಲ ಇವರಿಂದ ಎಲ್ಲೆ ದಾದ ಏರೆಗ್ ಗೊತ್ತು ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು.

ಸುದ್ದಿ ಗೋಷ್ಠಿಯಲ್ಲಿ ಮಾಜಿ ಅಧ್ಯಕ್ಷ ಮಾಧವ ಪಾಲನ್, ಕಾರ್ಯದರ್ಶಿ ಅನಿಲ್ ಕಾಪು, ದಿನೇಶ್ ಸಾಲ್ಯಾನ್, ದೇವರಾಜ್ ಎ. ಕೋಟ್ಯಾನ್‌, ಶೇಖರ ಕೋಟ್ಯಾನ್ ಹಾಗೂ ಪ್ರವೀಣ್ ಪೂಜಾರಿ ಉಪಸ್ಥಿತರಿದ್ದರು.

ಕಾಪು ಪುರಸಭೆಯ ನೂತನ ಅಧ್ಯಕ್ಷರಾಗಿ ಮೋಹಿನಿ ಶೆಟ್ಟಿ ಅವಿರೋಧ ಆಯ್ಕೆ

Thumbnail
Posted On: 07 Apr 2026, 08:54 AM

ಕಾಪು : ಇಲ್ಲಿನ ಪುರಸಭೆಯ ನೂತನ ಅಧ್ಯಕ್ಷರಾಗಿ ಮುಂದಿನ 11 ತಿಂಗಳ ಅವಧಿಗೆ ಮೋಹಿನಿ ಶೆಟ್ಟಿ ಅವಿರೋಧವಾಗಿ ಆಯ್ಕೆಯಾದರು.

ಸೋಮವಾರ ನಡೆದ ಮತದಾನ ಪ್ರಕ್ರಿಯೆಯಲ್ಲಿ ಮೋಹಿನಿ ಶೆಟ್ಟಿ ಅವರೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವರ ಅವಿರೋಧ ಆಯ್ಕೆಯನ್ನು ಘೋಷಿಸಲಾಯಿತು.

2024ರ ಆಗಸ್ಟ್‌ನಲ್ಲಿ ಸರ್ಕಾರದ ಮೀಸಲಾತಿಯಂತೆ 30 ತಿಂಗಳ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ನಡೆದಿದ್ದು, 12 ಸ್ಥಾನಗಳನ್ನು ಗೆದ್ದು ಭಾರತೀಯ ಜನತಾ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದಿತ್ತು.

ಸಾಮಾನ್ಯ ಮಹಿಳೆ ಮೀಸಲಿನಡಿ ಬಿಜೆಪಿ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಹರಿಣಾಕ್ಷಿ ಹಾಗೂ ಮೋಹಿನಿ ಶೆಟ್ಟಿ ನಡುವೆ ತಲಾ 15 ತಿಂಗಳ ಅವಧಿಯ ಒಡಂಬಡಿಕೆ ನಡೆದಿತ್ತು. ಅದರಂತೆ ಮೊದಲ 15 ತಿಂಗಳು ಹರಿಣಾಕ್ಷಿ ಅಧ್ಯಕ್ಷೆಯಾಗಿದ್ದರೆ, ಮುಂದಿನ ಅವಧಿಗೆ ಮೋಹಿನಿ ಶೆಟ್ಟಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡ ಮಹಿಳೆಗೆ ಮೀಸಲಾಗಿದ್ದು, ಸರಿತಾ ಶಿವಾನಂದ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಈ ಸಂದರ್ಭದಲ್ಲಿ ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಕಾಪು ಪುರಸಭೆಯ ಉಪಾಧ್ಯಕ್ಷರಾದ ಸರಿತಾ ಶಿವಾನಂದ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಕಿರಣ್ ಆಳ್ವ, ಮಾಜಿ ಶಾಸಕರಾದ ಲಾಲಾಜಿ ಆರ್ ಮೆಂಡನ್, ನಿಕಟ ಪೂರ್ವ ಅಧ್ಯಕ್ಷರಾದ ಹರಿಣಾಕ್ಷಿ ದೇವಾಡಿಗ, ಕಾಪು ಮಂಡಲ ಬಿಜೆಪಿ ಅಧ್ಯಕ್ಷರಾದ ಜಿತೇಂದ್ರ ಶೆಟ್ಟಿ, ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಶಿಲ್ಪಾ ಜಿ ಸುವರ್ಣ, ಕಾಪು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಸುಧಾಮ ಶೆಟ್ಟಿ ಹಾಗೂ ಕಾಪು ಪುರಸಭೆಯ ಸದಸ್ಯರು ಉಪಸ್ಥಿತರಿದ್ದರು.