Updated News From Kaup
ಜು.25 : ಕಾಪುವಿನಲ್ಲಿ ಸ್ತ್ರೀ ಹಾಗೂ ಪುರುಷರ ಉಚಿತ ಬಂಜೆತನ ತಪಾಸಣಾ ಕಾರ್ಯಕ್ರಮ
Posted On: 21 Jul 2026, 12:02 PM
ಕಾಪು : ಗರ್ಭಧಾರಣೆ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರವನ್ನು ಕಂಡುಕೊಳ್ಳುವುದಕ್ಕಾಗಿ ನೋವಾ ಐವಿಎಫ್ ಫರ್ಟಿಲಿಟಿ ಹಾಗೂ ಜೆಸಿಐ ಕಾಪು ಸಹಯೋಗದೊಂದಿಗೆ ಸ್ತ್ರೀ ಹಾಗೂ ಪುರುಷರ ಉಚಿತ ಬಂಜೆತನ ತಪಾಸಣಾ ಕಾರ್ಯಕ್ರಮವು ಜು.25, ಶನಿವಾರ ಮಧ್ಯಾಹ್ನ ಗಂಟೆ 11ರಿಂದ 1ರ ವರೆಗೆ ಕಾಪು ಜೆಸಿ ಭವನದಲ್ಲಿ ಜರಗಲಿದೆ.
ಡಾ. ಮಧುರಾ ಬಿ.ಆರ್. ಮತ್ತು ನುರಿತ ತಜ್ಞರಿಂದ ಸಮಾಲೋಚನೆ ಮತ್ತು ಕೌನ್ಸಿಲಿಂಗ್ ಏರ್ಪಡಿಸಲಾಗಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಪಾಯಿಂಟ್ಮೆಂಟ್ಗಾಗಿ ಕರೆ ಮಾಡಿ: +91 9483113930
ಉಡುಪಿ ಜಿಲ್ಲಾ ಜೆಡಿಎಸ್ ಪಕ್ಷದಿಂದ ಬರ ಪೀಡಿತ ಪ್ರದೇಶಗಳ ಸಮೀಕ್ಷೆ
Posted On: 17 Jul 2026, 10:27 AM
ಉಡುಪಿ : ಜಿಲ್ಲೆಯ ಹಲವಾರು ತಾಲೂಕುಗಳಲ್ಲಿ ಮುಂಗಾರು ಮಳೆ ಅಭಾವದಿಂದ ಅನೇಕ ಕಡೆ ಬರಗಾಲ ಉಂಟಾಗಿರುತ್ತದೆ. ಜಾತ್ಯತೀತ ಜನತಾದಳ ಉಡುಪಿ ಜಿಲ್ಲಾಧ್ಯಕ್ಷ ಯೋಗೀಶ್ ವಿ. ಶೆಟ್ಟಿ ನೇತೃತ್ವದಲ್ಲಿ ವಿಧಾನ ಪರಿಷತ್ ಸದಸ್ಯರು ಮತ್ತು ಕರಾವಳಿ ಉತ್ತರ ಕನ್ನಡ ಭಾಗದ ಅಧ್ಯಯನ ತಂಡದ ಉಸ್ತುವಾರಿಗಳಾದ ಎಸ್. ಎಲ್ ಭೋಜೆಗೌಡರ ಉಪಸ್ಥಿತಿಯಲ್ಲಿ ಉಡುಪಿ ಜಿಲ್ಲೆಯ ಅನೇಕ ಕಡೆ ಭೇಟಿ ನೀಡಿ ರೈತರ ಸಂಕಷ್ಟಗಳನ್ನು ಆಲಿಸಿ, ಉಳುಮೆ ಮಾಡಿ ಬಿತ್ತನೆ ಮಾಡಿದ ಫಸಲು ಮಳೆ ಅಭಾವದಿಂದ ಒಣಗಿ ಹೋಗಿದೆ, ರೈತರ ಸಂಕಷ್ಟ ಕೇಳುವವರಿಲ್ಲ , ಇದುವರೆಗೂ ಯಾವುದೇ ಅಧಿಕಾರಿಗಳು, ಜನಪ್ರತಿನಿಧಿಗಳು ಭೇಟಿ ನೀಡಿ ಸಾಂತ್ವನ ಹೇಳದೆ ಇರುವುದು ತೀವ್ರ ಬೇಸರದ ಸಂಗತಿ, ಭತ್ತ ಹಾಗೂ ಇನ್ನಿತರ ಬೆಳೆಗಳ ಬಿತ್ತನೆ ಆಗದೆ ಬರಗಾಲದ ಛಾಯೆ ಉಂಟಾಗಿದೆ, ಹಲವಾರು ಕಡೆ ನೀರಿನ ಅಭಾವವು ಉಂಟಾಗಿದೆ, ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದು, ವಿಧಾನ ಪರಿಷತ್ತಿನಲ್ಲಿ ಧ್ವನಿ ಎತ್ತುತ್ತೇನೆ ಎಂದರು.
ಈ ಬಗ್ಗೆ ಕರ್ನಾಟಕ ರಾಜ್ಯ ಸರಕಾರ ಪರಿಹಾರ ನೀಡುವಲ್ಲಿ ವಿಫಲವಾಗಿದೆ. ಉಡುಪಿ ಜಿಲ್ಲೆಯನ್ನು ಬರ ಪೀಡಿತ ಜಿಲ್ಲೆ ಎಂದು ಘೋಷಣೆ ಮಾಡಿ ಗರಿಷ್ಠ ಪರಿಹಾರವನ್ನು ಒದಗಿಸಬೇಕೆಂದು ಅಗ್ರಹಿಸಿದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ಉದಯ ಹೆಗ್ಡೆ ಮಲ್ಲಾರ್, ಜಯರಾಮ್ ಆಚಾರ್ಯ, ಉದಯ ಆರ್. ಶೆಟ್ಟಿ, ತಾಲೂಕು ಅಧ್ಯಕ್ಷರು ಶ್ರೀಕಾಂತ್ ಕುಚ್ಚೂರು, ಜಯ ಪೂಜಾರಿ, ದೇವರಾಜ್ ತೊಟ್ಟಮ್, ಅನೂಸೂಯ ಶೆಟ್ಟಿ, ಯೋಗೀಶ್ ಶೆಟ್ಟಿ ಜೆಪ್ಪು, ಅಕ್ಷಿತ್ ಸುವರ್ಣ, ರತ್ನಾಕರ್ ಸುವರ್ಣ, ಕೀರ್ತಿರಾಜ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಪಡುಬಿದ್ರಿ : ಕಲಾವಿದ ರಮೇಶ ಬಂಟಕಲ್ಲುರವರಿಂದ ಕಲೆಯ ಮೂಲಕ ಸಂವಹನ ಕಾರ್ಯಕ್ರಮ
Posted On: 17 Jul 2026, 10:24 AM
ಪಡುಬಿದ್ರಿ : ಭಾರತೀಯ ಭಾಷಾ ಉತ್ಸವದ ಅಂಗವಾಗಿ ಪಡುಬಿದ್ರಿ ಗಣಪತಿ ಪ್ರೌಢಶಾಲೆಯಲ್ಲಿ ಕಲೆಯ ಮೂಲಕ ಸಂವಹನ ಎಂಬ ವಿಶಿಷ್ಟ ಕಾರ್ಯಕ್ರಮವು ನಡೆಯಿತು.
ಹಿರಿಯ ಕಲಾವಿದ ರಮೇಶ ಬಂಟಕಲ್ಲು ಇವರು ವಿವಿಧ ಕಲಾಪ್ರಕಾರಗಳ ಮೂಲಕ ಹೇಗೆ ಸಂವಹನ ಕೌಶಲವನ್ನು ಪರಿಣಾಮಕಾರಿಯಾಗಿಸಬಹುದು ಎಂಬುದರ ಕುರಿತು ವಿಶೇಷ ಕಾರ್ಯಶಾಲೆಯನ್ನು ನಡೆಸಿಕೊಟ್ಟರು.
ವಿದ್ಯಾರ್ಥಿಗಳು ಅವರ ಮಾರ್ಗದರ್ಶನದಲ್ಲಿ ತಾವೇ ಸ್ವತಃ ಕಲಾಕೃತಿಗಳನ್ನು ರಚಿಸಿ ಸಂಭ್ರಮಿಸಿದರು. ರಮೇಶ ಬಂಟಕಲ್ಲು ಇವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.
ಈ ಸಂದರ್ಭ ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕ ವೃಂದದವರು, ಸಿಬಂದಿ ವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾಪು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ - ಪರಿಸರ ಜಾಗೃತಿ ಮಾಹಿತಿ
Posted On: 17 Jul 2026, 10:05 AM
ಕಾಪು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ಕಾಪು ತಾಲೂಕು ವತಿಯಿಂದ ಶ್ರೀರಾಮ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಮಜೂರು ಕರಂದಾಡಿ ಶಾಲೆಯಲ್ಲಿ ಪರಿಸರ ಜಾಗೃತಿ ಮಾಹಿತಿ ಕಾರ್ಯಕ್ರಮ ಜರಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯ ಶಿಕ್ಷಕರಾದ ಆರ್ ಎಸ್ ಕಲ್ಲೂರ ವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಯಾದ ಶಾಲಾ ನಿವೃತ್ತ ಮುಖ್ಯ ಶಿಕ್ಷಕರಾದ ನಿರ್ಮಲ್ ಕುಮಾರ್ ಹೆಗ್ಡೆ
ಯವರು, ಪರಿಸರದ ಜಾಗೃತಿ
ಯ ಬಗ್ಗೆ ಭೂಮಂಡಲದಲ್ಲಿ ಇರುವಂತಹ ಪರಿಸರದಲ್ಲಿ ಮನುಷ್ಯನ ಜೊತೆಗೆ ಪ್ರತಿಯೊಂದು ಪ್ರಾಣಿ ಪಕ್ಷಿ ಸಂಕುಲಗಳು , ಜಲಚರ ಜೀವಿಗಳು ಜೀವಿಸುತ್ತಿದ್ದು, ನಾವೆಲ್ಲರೂ ಪರಿಸರಸ್ನೇಹಿ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕ, ಮರಗಳನ್ನು ಬೆಳೆಸಿ, ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಿ ಜಲ ಹಾಗೂ ವಾಯು ಮಾಲಿನ್ಯವನ್ನು ತಡೆಗಟ್ಟಿದರೆ ಮಾತ್ರ ಮುಂದಿನ ಪೀಳಿಗೆಗೆ ಆರೋಗ್ಯಕರ ಭೂಮಿಯನ್ನು ನೀಡಲು ಸಾಧ್ಯಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಪದ್ಮನಾಭ ಶಾನುಭೋಗ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ವಾಸುದೇವ ರಾವ್, ಒಕ್ಕೂಟದ ಅಧ್ಯಕ್ಷರಾದ ಪ್ರಸಾದ್ ಆಚಾರ್ಯ, ಸದಸ್ಯರಾದ ಸದಾಶಿವ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ರವಿರಾಜ್ ಶೆಟ್ಟಿ, ಜನ ಜಾಗ್ರತಿ ವೇದಿಕೆ ಸದಸ್ಯರಾದ ನಾಗಭೂಷಣ್ ರಾವ್, ಕಲ್ಪವೃಕ್ಷ ಕನ್ನಡ ಶಾಲಾ ಸಮಿತಿ ಕಾರ್ಯದರ್ಶಿ ಅಶ್ರಫ್, ವಲಯ ಮೇಲ್ವಿಚಾರಕರಾದ ವಿನುತ, ಕೃಷಿ ಮೇಲ್ವಿಚಾರಕರಾದ ದೇವೇಂದ್ರ, ಸೇವಾ ಪ್ರತಿನಿಧಿ ರಜನಿ, ಮಮ್ತಾಜ್, ಶಾಲಾ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಬಿಸಿ ರೋಡ್ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಯುವತಿ ಲಾವಣ್ಯಳ ಹತ್ಯೆ ಅತ್ಯಂತ ದುರದೃಷ್ಟಕರ
Posted On: 17 Jul 2026, 09:54 AM
ಕಾರ್ಕಳ : ಹಾಡು ಹಗಲೇ ಕರಾವಳಿಯನ್ನು ಬೆಚ್ಚಿ ಬಿಳಿಸುವ ಘಟನೆ ಬಿಸಿ ರೋಡ್ KSRTC ಬಸ್ ನಿಲ್ದಾಣದಲ್ಲಿ ನಡೆದಿದ್ದು ಬಸ್ ಗೆ ಕಾಯುತ್ತಿದ್ದ ಲಾವಣ್ಯ ಅವರನ್ನು ಸಾರ್ವಜನಿಕ ಸ್ಥಳದಲ್ಲಿ ಹತ್ಯೆ ಮಾಡಿರುವಂತದ್ದು ದೇಶವೇ ಬೆಚ್ಚಿ ಬೀಳುವಂತೆ ಮಾಡಿದೆ. ಇದು ಮಹಿಳೆಯರಲ್ಲಿ ಆತಂಕ ಮೂಡಿಸುವಂತೆ ಆಗಿದ್ದು ಈ ಹಿಂದೆಯೂ ಈ ರೀತಿಯ ಘಟನೆ ನಡೆದಿದ್ದು ಕಾನೂನು ವ್ಯವಸ್ಥೆ ಸಡಿಲ ಇರುವ ಕಾರಣ ಈ ರೀತಿಯ ಘಟನೆ ಪುನರವರ್ತನೆ ಆಗುತ್ತಿದೆ ಹಾಗಾಗಿ ಯಾವುದೇ ಧರ್ಮವಾಗಲಿ ಯಾವುದೇ ಜಾತಿಯಾಗಲಿ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಆ ಶಿಕ್ಷೆ ಇನ್ನು ಯಾರು ತಪ್ಪು ಮಾಡದಂತೆ ಮುನ್ನೆಚ್ಚರಿಕೆ ಕೊಡುವಂತೆ ಇರಬೇಕು.
ಕರ್ನಾಟಕದಲ್ಲೂ ಬುಲ್ಡೋಜರ್ ನಿಯಮವನ್ನು ಜಾರಿಗೊಳಿಸಿ ಹೆಣ್ಣಿಗೆ ಆಗುವ ದೌರ್ಜನ್ಯವನ್ನು ತಡೆಹಿಡಿಯಲು ಕಠಿಣ ಕಾನೂನು ವ್ಯವಸ್ಥೆಗಳನ್ನು ತನ್ನಿ, ಲಾವಣ್ಯನ ಎನ್ನುವ ಅಮಾಯಕಳ ಸಾವಿಗೆ ನ್ಯಾಯ ಕೊಡಿಸುವಂತದ್ದು ಆದಷ್ಟು ತೀರ್ವಗತಿಯಲ್ಲಿ ನಡೆಯಲಿ ಎಂದು ಸಾಮಾಜಿಕ ಕಾರ್ಯಕರ್ತೆ ರಮಿತಾ ಸೂರ್ಯವಂಶಿ ಆಗ್ರಹಿಸಿದ್ದಾರೆ.
ಆಟೋ ರಿಕ್ಷಾ ಚಾಲಕರ ಹಾಗೂ ಮಾಲಕರ ಸಂಘ ಬಂಟಕಲ್ ಪದಗ್ರಹಣ
Posted On: 17 Jul 2026, 09:45 AM
ಶಿರ್ವ : ಆಟೋ ರಿಕ್ಷಾ ಚಾಲಕರ ಹಾಗೂ ಮಾಲಕರ ಸಂಘ (ರಿ) ಬಂಟಕಲ್ ಇದರ 2026-2027 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಬಂಟಕಲ್ಲು ಶ್ರೀ ಗುರು ರಾಘವೇಂದ್ರ ಭಜನಾ ಮಂಡಳಿ ಇದರ ವಠಾರದಲ್ಲಿ ನಡೆಯಿತು.
ಸಂಘದ ಗೌರವಾಧ್ಯಕ್ಷರಾದ ಮಾಧವ ಕಾಮತ್ ರವರು ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ಮಾಡಿದರು.
ಅಧ್ಯಕ್ಷರು - ಸುಧಾಕರ, ಉಪಾಧ್ಯಕ್ಷರು - ಉಮೇಶ್ ಪ್ರಭು. ಕಾರ್ಯದರ್ಶಿ - ಮುದ್ದು ಕುಲಾಲ್, ಜೊತೆ ಕಾರ್ಯದರ್ಶಿ - ನವೀನ್ ಸನಿಲ್, ಕೋಶಾಧಿಕಾರಿ - ಡೆನಿಸ್ ಡಿಸೋಜ ರವರು ಅಧಿಕಾರ ಸ್ವೀಕರಿಸಿದರು.
ನಿಕಟ ಪೂರ್ವ ಅಧ್ಯಕ್ಷರಾದ ಮಂಜುನಾಥ ಪೂಜಾರಿ ಸ್ವಾಗತಿಸಿದರು. ಮುದ್ದು ಕುಲಾಲ್ ರವರು ವಂದಿಸಿದರು. ದಿವಾಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಜು.19 : ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಮಲಾಡ್ - ಆಶಾಡ ಹಬ್ಬ ಆಚರಣೆ
Posted On: 17 Jul 2026, 09:35 AM
ಮುಂಬಯಿ : ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಮಲಾಡ್ ಪೂರ್ವ ಇದರ ಮಹಿಳಾ ವಿಭಾಗದ ವತಿಯಿಂದ ಆಟಿ ತಿಂಗಳ ಆಷಾಡ ಹಬ್ಬವು ಉತ್ಕರ್ಷ ವಿದ್ಯಾಮಂದಿರ, ಪುಷ್ಪ ಪಾರ್ಕ್ ಮಲಾಡ್ ಪೂರ್ವ, ಇಲ್ಲಿ ಜು. 19ರಂದು ಮಧ್ಯಾಹ್ನ 4 ರಿಂದ ಸಮಿತಿಯ ಅಧ್ಯಕ್ಷರಾದ ನ್ಯಾಯವಾದಿ ಜಗನ್ನಾಥ್ ಎನ್ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಇತರ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಈ ಸಮಾರಂಭಕ್ಕೆ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕಾಗಿ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಮಹಿಳಾ ವಿಭಾಗದ ಪರವಾಗಿ ಕಾರ್ಯಾಧ್ಯಕ್ಷೆ ಶ್ರೀಮತಿ ಕೆ ಆಚಾರ್ಯ, ಕಾರ್ಯದರ್ಶಿ ಶೀಲಾ ಎಂ ಪೂಜಾರಿ, ಕೋಶಾಧಿಕಾರಿ ನಳಿನಿ ಪಿ ಕರ್ಕೆರ, ಉಪ ಕಾರ್ಯಾಧ್ಯಕ್ಷರುಗಳಾದ ಗೀತಾ ಜೆ ಮೆಂಡನ್, ಲಲಿತಾ ಎಸ್ ಗೌಡ ಮತ್ತು ಸಂಧ್ಯಾ ಎಸ್ ಪ್ರಭು, ಜೊತೆ ಕಾರ್ಯದರ್ಶಿಗಳಾದ ಭಾರತಿ ಎಸ್ ಆಚಾರ್ಯ ಮತ್ತು ವಿದ್ಯಾ ಡಿ ಆಚಾರ್ಯ, ಜೊತೆ ಕೋಶಾಧಿಕಾರಿಗಳಾದ ಶೋಭಾ ಎಲ್ ರಾವ್ ಮತ್ತು ವಿದ್ಯಾ ಎಸ್ ನಾಯಕ್ ಸಲಹಾ ಸಮಿತಿಯ ಸದಸ್ಯರುಗಳಾದ ಮೋಹಿನಿ ಜೆ ಶೆಟ್ಟಿ ಮತ್ತು ರತ್ನ ಡಿ ಕುಲಾಲ್, ಕಾರ್ಯಕಾರಿ ಸಮಿತಿ ಮತ್ತು ಯುವ ವಿಭಾಗದ ಎಲ್ಲಾ ಸದಸ್ಯರು ವಿನಂತಿಸಿದ್ದಾರೆ.
ಶಿರ್ವ ಸಂತಮೇರಿ ಪ. ಪೂ ಕಾಲೇಜು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಕೆ. ಆರ್ ಪಾಟ್ಕರ್ ಆಯ್ಕೆ
Posted On: 17 Jul 2026, 09:30 AM
ಶಿರ್ವ : ಇಲ್ಲಿನ ಸಂತಮೇರಿ ಪ. ಪೂ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಶಿರ್ವ ಗ್ರಾ. ಪಂ. ಮಾಜಿ ಅಧ್ಯಕ್ಷರಾದ ಕೆ. ಆರ್ ಪಾಟ್ಕರ್ ಪುನಾರಾಯ್ಕೆಯಾಗಿದ್ದಾರೆ.
2026- 27 ನೇ ಸಾಲಿನ ಸಂಘದ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು.
ಗೌರವ ಅಧ್ಯಕ್ಷರಾಗಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಜಯಶಂಕರ್ ಕೆ., ಉಪಾಧ್ಯಕ್ಷರಾಗಿ ಡಾ. ಗೖನಲ್ ಡಿ'ಮೆಲ್ಲೋ, ಕಾರ್ಯದರ್ಶಿ ಮೋಹನ್ ನೊರೋನ್ನಾ, ಕೋಶಾಧಿಕಾರಿ ಜುಲಿಯಾನ್ ರೊಡ್ರಿಗಸ್, ಜೊತೆ ಕಾರ್ಯದರ್ಶಿ ಕ್ಲಾರ ಪಿರೇರಾ.
ಕಾರ್ಯಕಾರಿ ಮಂಡಳಿ ಸದಸ್ಯರಾಗಿ ನೋರ್ಬಾಟ್ ಡಿ'ಸೋಜ, ಮೆಲ್ವಿನ್ ಅರಾನ್ನ, ಅನಿತಾ ಮೆಂಡೋನ್ಸಾ, ಫೆಡ್ರಿಕ್ ಪಿಂಟೊ, ಡೇನಿಸ್ ಮಥಾಯಸ್, ಇರ್ವಿನ್ ಡಿ'ಸೋಜಾ, ವಸಂತ್ ಅಂಚನ್, ಮೆಕ್ಸಿಮ್ ಡಿ'ಸೋಜ, ಮರ್ವಿನ್ ಮೆನೇಜಸ್, ಮನೋಜ್ ಮೆನೇಜಸ್.
ಲೆಕ್ಕಪರಿಶೋಧಕರಾಗಿ ರಾಯ್ ಮಥಾಯಸ್ ಪುನರಾಯ್ಕೆಯಾದರು.
ಮಕ್ಕಳಿಗೆ ಪೋಷಕರೇ ನಿಜವಾದ ರೋಲ್ ಮಾಡೆಲ್ ಆಗಬೇಕು : ರಾಘವೇಂದ್ರ ಪ್ರಭು ಕರ್ವಾಲು
Posted On: 14 Jul 2026, 08:45 AM
ಉಡುಪಿ : ಪೋಷಕರು ತಮ್ಮ ಮಕ್ಕಳಿಗೆ ರೋಲ್ ಮಾಡೆಲ್ ಆಗಬೇಕಾಗಿದೆ ಎಂದು ಖ್ಯಾತ ವ್ಯಕ್ತಿತ್ವ ವಿಕಸನ ತರಬೇತುದಾರ ರಾಘವೇಂದ್ರ ಪ್ರಭು ಕರ್ವಾಲು ಹೇಳಿದರು.
ಅವರು ಕ್ರಿಶ್ಚಿಯನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಪೋಷಕರು ಮತ್ತು ವಿದ್ಯಾರ್ಥಿಗಳ ಬೃಹತ್ ಸಮಾವೇಶದಲ್ಲಿ ಮಾತನಾಡಿದರು.
ಮಕ್ಕಳಿಗೆ ಪೋಷಕರು ಎಳವೆಯಲ್ಲಿ ಉತ್ತಮ ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳನ್ನು ಹೇಳಿಕೊಡಬೇಕು.
ಇತ್ತೀಚಿಗಿನ ದಿನಗಳಲ್ಲಿ ಮಾನವೀಯ ಮೌಲ್ಯಗಳು ದೂರವಾಗುತ್ತಿವೆ, ವೃದ್ಧಾಶ್ರಮಗಳು ಹೆಚ್ಚಾಗುತ್ತಿರುವುದು ಇದಕ್ಕೆ ಸ್ಪಷ್ಟ ನಿದರ್ಶನ ಎಂದು ಹೇಳಿದ ಅವರು, ಕ್ರಿಶ್ಚಿಯನ್ ಹೈಸ್ಕೂಲು ಶತಮಾನ ಕಂಡ ಈ ಸಂಸ್ಥೆ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾ ದಾನ ನೀಡಿದ ಜಿಲ್ಲೆ ಶ್ರೇಷ್ಠ ಸಂಸ್ಥೆ ಎಂದರು.
ಶಾಲಾ ಸಂಚಾಲಕ ಐವನ್ ಡಿ ಸೋನ್ಸ್ ಮಾತನಾಡಿ, ಶಾಲೆಯು ಉತ್ತಮ ರೀತಿಯಲ್ಲಿ ಅಭಿವೃದ್ಧಿ ಹೊಂದುತ್ತಿದ್ದು, ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸದ ಕುರಿತು ಶಾಲೆಗೆ ಬರುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಶಾಲಾ ಮುಖ್ಯ ಶಿಕ್ಷಕಿ ಹೆಲೆನ್ ಸಾಲಿನ್ಸ್ ಶಾಲೆಯ ವಿವಿಧ ಚಟುವಟಿಕೆಯ ಕುರಿತು ಮಾಹಿತಿ ನೀಡಿದರು.
ವೇದಿಕೆಯಲ್ಲಿ ಪಿಟಿಎ ಅಧ್ಯಕ್ಷ ಸುನಿಲ್, ಉಪಾಧ್ಯಕ್ಷೆ ಶಾಂಭವಿ ಭಂಡಾರ್ಕರ್, ಕೋಶಾಧಿಕಾರಿ ಶಾನವಾಜ್ ಮುಂತಾದವರು ಉಪಸ್ಥಿತರಿದ್ದರು.
ಕಾಪು ಸಮುದ್ರ ಕಿನಾರೆಯಲ್ಲಿ ಜೇಸಿಐ ಕಾಪು ಘಟಕದಿಂದ ಶಾಶ್ವತ ಯೋಜನೆ
Posted On: 14 Jul 2026, 08:40 AM
ಕಾಪು : ಜೇಸಿಐ ಭಾರತದ ರಾಷ್ಟ್ರಾಧ್ಯಕ್ಷ RPP ಭರತ್ ಎನ್. ಆಚಾರ್ಯ ಅವರು ಜುಲೈ 12ರಂದು ಕಾಪು ಲೈಟ್ ಹೌಸ್ ಮುಂಭಾಗ ಸಮುದ್ರ ಕಿನಾರೆಯಲ್ಲಿ ಜೇಸಿಐ ಕಾಪು ಘಟಕ ಮತ್ತು ಅಕ್ಷರ ಪ್ರಿಂಟ್ಸ್ ಕಾಪು ಇವರ ಪ್ರಾಯೋಜಕತ್ವದಲ್ಲಿ ನೀಡಲಾದ "ಐ ಲವ್ ಕಾಪು" ಎಲ್ಈಡಿ ಫಲಕವನ್ನು ಲೋಕಾರ್ಪಣೆ ಮಾಡಿದರು ಮತ್ತು ಯೋಜನೆಯನ್ನು ಕಾಪು ಬೀಚ್ ನಿರ್ವಾಹಕರಿಗೆ ಹಸ್ತಾಂತರ ಮಾಡಲಾಯಿತು.
ರಾಷ್ಟ್ರಾಧ್ಯಕ್ಷರು ಘಟಕವನ್ನು ಉದ್ದೇಶಿಸಿ ಮಾತನಾಡಿ 29 ವರ್ಷಗಳನ್ನು ಪೂರೈಸಿರುವ ಕಾಪು ಘಟಕ, ಜೇಸಿಐ ಗೆ ಬಹಳಷ್ಟು ಕೊಡುಗೆಯನ್ನು ನೀಡಿದೆ, ಪ್ರತೀ ವರ್ಷ ಸಾರ್ವಜನಿಕರಿಗೆ ಶಾಶ್ವತ ಯೋಜನೆಯನ್ನು ನೀಡುತ್ತಿರುವ ಈ ಘಟಕ ಇನ್ನಷ್ಟು ಯಶಸ್ಸನ್ನು ಕಾಣಲಿ ಎಂದು ಶುಭಸಂಶನೆಗೈದರು.
ವಲಯ 15ರ ವಲಯಾಧ್ಯಕ್ಷ JFS ಸಂತೋಷ್ ಶೆಟ್ಟಿ ಮಾತನಾಡಿ ಕಾಪು ಘಟಕ ಬಹಳಷ್ಟು ವರ್ಷಗಳಿಂದ ನಿರಂತರವಾಗಿ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದು, ಇದು ಎಲ್ಲರಿಗೂ ಪ್ರೇರಣೆಯಾಗಿದೆ ಎಂದರು,
ವಲಯ 15ರ ನಂದಿನಿ ಪ್ರಾಂತ್ಯದ ಉಪಾಧ್ಯಕ್ಷ JFD ಅರುಣ್ ಮಂಜ, ಆಡಳಿತ ವಿಭಾಗದ ನಿರ್ದೇಶಕ JCI Sen ಸುಹಾಸ್ ಮರಿಕೆ, ಶಾಶ್ವತ ಯೋಜನೆಯ ವಲಯ ಸಂಯೋಜಕ ಸುನಿಲ್ ಕುಮಾರ್, ವಲಯ ಉಪಾಧ್ಯಕ್ಷರುಗಳು, ವಲಯಧಿಕಾರಿಗಳು, ಕಾಪು ಪುರಸಭಾ ಸದಸ್ಯರುಗಳಾದ ಅರುಣ್ ಶೆಟ್ಟಿ ಪಾದೂರು, ಅನಿಲ್ ಕುಮಾರ್ ಕಾಪು, ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಶೇಕರ ಸಾಲ್ಯಾನ್, ಜೇಸಿಐ ಕಾಪು ಘಟಕದ ಪೂರ್ವಾಧ್ಯಕ್ಷರುಗಳು, ಸದಸ್ಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಅಧ್ಯಕ್ಷ JFM ವಿಕ್ಕಿ ಪೂಜಾರಿ ಮಡುಂಬು ಸ್ವಾಗತಿಸಿದರು, ಪೂರ್ವ ವಲಯಾಧ್ಯಕ್ಷ ರಾಕೇಶ್ ಕುಂಜೂರು ಪ್ರಸ್ತಾವನೆಗೈದು, ನಿಕಟಪೂರ್ವ ಅಧ್ಯಕ್ಷೆ ಅನಿತಾ ಹೆಗ್ಡೆ ಧನ್ಯವಾದಗೈದರು.
ನಂತರ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ, ಉಚ್ಚಂಗಿ ಸಹಿತ ಮಾರಿಯಮ್ಮ ದೇವಿಯ ದರುಶನ ಪಡೆಯಲಾಯಿತು.
ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ, ಅಭಿವೃದ್ಧಿ ಸಮಿತಿ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ ಅಮ್ಮನಲ್ಲಿ ಪ್ರಾರ್ಥಿಸಿ ಅಮ್ಮನ ಅನುಗ್ರಹ ಪ್ರಸಾದ ನೀಡಿ ಗೌರವಿಸಿದರು.
ಕಾಪು ಶ್ರೀ ಕಾಳಿಕಾಂಬಾ ದೇವಸ್ಥಾನಕ್ಕೆ ಭೇಟಿ ನೀಡಿ ಕಾಳಿಕಾಂಬಾ ದೇವಿಯ ದರುಶನ ಪಡೆಯಲಾಯಿತು, ದೇವಳದ ವತಿಯಿಂದ ಗೌರವಿಸಲಾಯಿತು, ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗಣೇಶ್ ಆಚಾರ್ಯ, ಸಮಿತಿ ಸದಸ್ಯರು, ಅರ್ಚಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಜೇಸಿಐ ಭಾರತದ ರಾಷ್ಟ್ರಾಧ್ಯಕ್ಷ RPP ಭರತ್ ಎನ್. ಆಚಾರ್ಯ ಅವರು ಜುಲೈ 12ರಂದು ಕಾಪು ಲೈಟ್ ಹೌಸ್ ಮುಂಭಾಗ ಸಮುದ್ರ ಕಿನಾರೆಯಲ್ಲಿ ಜೇಸಿಐ ಕಾಪು ಘಟಕ ಮತ್ತು ಅಕ್ಷರ ಪ್ರಿಂಟ್ಸ್ ಕಾಪು ಇವರ ಪ್ರಾಯೋಜಕತ್ವದಲ್ಲಿ ನೀಡಲಾದ "ಐ ಲವ್ ಕಾಪು" ಎಲ್ಈಡಿ ಫಲಕವನ್ನು ಲೋಕಾರ್ಪಣೆ ಮಾಡಿದರು ಮತ್ತು ಯೋಜನೆಯನ್ನು ಕಾಪು ಬೀಚ್ ನಿರ್ವಾಹಕರಿಗೆ ಹಸ್ತಾಂತರ ಮಾಡಲಾಯಿತು.
ರಾಷ್ಟ್ರಾಧ್ಯಕ್ಷರು ಘಟಕವನ್ನು ಉದ್ದೇಶಿಸಿ ಮಾತನಾಡಿ 29 ವರ್ಷಗಳನ್ನು ಪೂರೈಸಿರುವ ಕಾಪು ಘಟಕ, ಜೇಸಿಐ ಗೆ ಬಹಳಷ್ಟು ಕೊಡುಗೆಯನ್ನು ನೀಡಿದೆ, ಪ್ರತೀ ವರ್ಷ ಸಾರ್ವಜನಿಕರಿಗೆ ಶಾಶ್ವತ ಯೋಜನೆಯನ್ನು ನೀಡುತ್ತಿರುವ ಈ ಘಟಕ ಇನ್ನಷ್ಟು ಯಶಸ್ಸನ್ನು ಕಾಣಲಿ ಎಂದು ಶುಭಸಂಶನೆಗೈದರು.
ವಲಯ 15ರ ವಲಯಾಧ್ಯಕ್ಷ JFS ಸಂತೋಷ್ ಶೆಟ್ಟಿ ಮಾತನಾಡಿ ಕಾಪು ಘಟಕ ಬಹಳಷ್ಟು ವರ್ಷಗಳಿಂದ ನಿರಂತರವಾಗಿ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದು, ಇದು ಎಲ್ಲರಿಗೂ ಪ್ರೇರಣೆಯಾಗಿದೆ ಎಂದರು,
ವಲಯ 15ರ ನಂದಿನಿ ಪ್ರಾಂತ್ಯದ ಉಪಾಧ್ಯಕ್ಷ JFD ಅರುಣ್ ಮಂಜ, ಆಡಳಿತ ವಿಭಾಗದ ನಿರ್ದೇಶಕ JCI Sen ಸುಹಾಸ್ ಮರಿಕೆ, ಶಾಶ್ವತ ಯೋಜನೆಯ ವಲಯ ಸಂಯೋಜಕ ಸುನಿಲ್ ಕುಮಾರ್, ವಲಯ ಉಪಾಧ್ಯಕ್ಷರುಗಳು, ವಲಯಧಿಕಾರಿಗಳು, ಕಾಪು ಪುರಸಭಾ ಸದಸ್ಯರುಗಳಾದ ಅರುಣ್ ಶೆಟ್ಟಿ ಪಾದೂರು, ಅನಿಲ್ ಕುಮಾರ್ ಕಾಪು, ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಶೇಕರ ಸಾಲ್ಯಾನ್, ಜೇಸಿಐ ಕಾಪು ಘಟಕದ ಪೂರ್ವಾಧ್ಯಕ್ಷರುಗಳು, ಸದಸ್ಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಅಧ್ಯಕ್ಷ JFM ವಿಕ್ಕಿ ಪೂಜಾರಿ ಮಡುಂಬು ಸ್ವಾಗತಿಸಿದರು, ಪೂರ್ವ ವಲಯಾಧ್ಯಕ್ಷ ರಾಕೇಶ್ ಕುಂಜೂರು ಪ್ರಸ್ತಾವನೆಗೈದು, ನಿಕಟಪೂರ್ವ ಅಧ್ಯಕ್ಷೆ ಅನಿತಾ ಹೆಗ್ಡೆ ಧನ್ಯವಾದಗೈದರು.
ನಂತರ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ, ಉಚ್ಚಂಗಿ ಸಹಿತ ಮಾರಿಯಮ್ಮ ದೇವಿಯ ದರುಶನ ಪಡೆಯಲಾಯಿತು.
ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ, ಅಭಿವೃದ್ಧಿ ಸಮಿತಿ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ ಅಮ್ಮನಲ್ಲಿ ಪ್ರಾರ್ಥಿಸಿ ಅಮ್ಮನ ಅನುಗ್ರಹ ಪ್ರಸಾದ ನೀಡಿ ಗೌರವಿಸಿದರು.
ಕಾಪು ಶ್ರೀ ಕಾಳಿಕಾಂಬಾ ದೇವಸ್ಥಾನಕ್ಕೆ ಭೇಟಿ ನೀಡಿ ಕಾಳಿಕಾಂಬಾ ದೇವಿಯ ದರುಶನ ಪಡೆಯಲಾಯಿತು, ದೇವಳದ ವತಿಯಿಂದ ಗೌರವಿಸಲಾಯಿತು, ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗಣೇಶ್ ಆಚಾರ್ಯ, ಸಮಿತಿ ಸದಸ್ಯರು, ಅರ್ಚಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
