Updated News From Kaup

ಬಂಟಕಲ್ಲು : ವಿದ್ಯಾರ್ಥಿಗಳಿಗೆ ಅಭಿನಂದನೆ ಹಾಗೂ ವನಮಹೋತ್ಸವ ಕಾರ್ಯಕ್ರಮ

Thumbnail
Posted On: 10 Jul 2026, 10:44 PM

ಬಂಟಕಲ್ಲು : ವಿಕಾಸ ಸೇವಾ ಸಮಿತಿ ಮತ್ತು ಹೇರೂರು ಫ್ರೆಂಡ್ಸ್ 92ನೇ ಹೇರೂರು ಇದರ ಜಂಟಿ ಆಶ್ರಯದಲ್ಲಿ 92ನೇ ಹೇರೂರು ಶ್ರೀ ಗುರು ರಾಘವೇಂದ್ರ ಸಮಾಜಸೇವಾ ಮಂಡಳಿಯಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ತೇರ್ಗಡೆಗೊಂಡ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆ  ಹಾಗೂ ವನಮಹೋತ್ಸವ ಕಾರ್ಯಕ್ರಮ ನಡೆಯಿತು. 

ವಿಕಾಸ ಸೇವಾ ಸಮಿತಿಯ ಅಧ್ಯಕ್ಷ ಮಾದವಾಚಾರ್ಯ ಅಧ್ಯಕ್ಷತೆ ವಹಿಸಿದ್ದರು. 

 ಕಾಪು ವಲಯ ಅರಣ್ಯ ಅಧಿಕಾರಿ  ಮಲ್ಲಿಕಾರ್ಜುನ್, ಅರಣ್ಯ ಪಾಲಕರಾದ  ಶ್ರೀನಿವಾಸ್ ಕೋಟ, ಅಖಿಲೇಶ್, ಗುರುರಾಘವೇಂದ್ರ ಸಮಾಜ ಸೇವಾ ಮಂಡಳಿಯ ಅಧ್ಯಕ್ಷ ರಾಘವೇಂದ್ರ ಸ್ವಾಮಿ, ಹೇರೂರು ಫ್ರೆಂಡ್ಸ್ ನ ಅಧ್ಯಕ್ಷ ರಾಜೇಶ್ ದೇವಾಡಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು. 

 ಸುಮಾರು 17 ಜನ ವಿದ್ಯಾರ್ಥಿಗಳು   ಅಭಿನಂದನೆಯನ್ನು ಸ್ವೀಕರಿಸಿದರು. ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸಿ ಅದರ ಮಹತ್ವಗಳನ್ನು ತಿಳಿಸಲಾಯಿತು. 

ದಿಶಾ ಪಾಟ್ಕರ್ ಪ್ರಾರ್ಥಿಸಿದರು. ಹೇರೂರು ಫ್ರೆಂಡ್ಸ್ ನ ಉಪಾಧ್ಯಕ್ಷ ವಿಜಯ ಧೀರಜ್ ಸ್ವಾಗತಿಸಿದರು. ರಾಜೇಶ್ ಜೋಗಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

    

ಕುಲಾಲ ಸಮಾಜ ಕಳತ್ತೂರು ಒಕ್ಕೂಟ : ವಾರ್ಷಿಕ ಮಹಾಸಭೆ, ಸನ್ಮಾನ, ವಿದ್ಯಾರ್ಥಿ ವೇತನ ವಿತರಣೆ

Thumbnail
Posted On: 10 Jul 2026, 10:39 PM

ಕಾಪು : ಕುಲಾಲ  ಸಮಾಜ (ರಿ.) ಕಳತ್ತೂರು  ಒಕ್ಕೂಟ ಇದರ ಎಂಟನೇ ವರ್ಷದ ಮಹಾಸಭೆಯು ಕಳತ್ತೂರು  ಪುಂಚಲಕಾಡು ಸುದೀಪ್ ಕುಲಾಲ್ ಮನೆಯಲ್ಲಿ ಜರುಗಿತು.  

ಸಂಘದ ಪದಾಧಿಕಾರಿಗಳು ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮ  ಉದ್ಘಾಟಸಿದರು.

 ಈ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಪಾಂಡು ಕುಲಾಲ್ ಪಯ್ಯಾರು ವಹಿಸಿದ್ದರು.
 
ಈ ಸಂದರ್ಭದಲ್ಲಿ ಸಂಘದ ವ್ಯಾಪ್ತಿಯ SSLC ಮತ್ತು PUC ಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಪಿಯುಸಿ ಪರೀಕ್ಷೆ ಯಲ್ಲಿ ರಾಜ್ಯಕ್ಕೆ 4 ನೇ ಅಂಕ ಗಳಿಸಿದ ಕಾವ್ಯ ಕುಲಾಲ್ ಹಾಗೂ SSLC ಯಲ್ಲಿ ಸಾಧನೆಗೈದ ಭವಿಷ್ ಮೂಲ್ಯ, ಪಿಯುಸಿಯಲ್ಲಿ ಸಾಧನೆಗೈದ ನಿಹಾರ್ ಕುಲಾಲ್, ಸಾಕ್ಷಿತ್ ಕುಲಾಲ್ ರವರಿಗೆ  ಸನ್ಮಾನಿಸಿ, ಪ್ರತಿಭಾ ಪುರಸ್ಕಾರ  ನೀಡಲಾಯಿತು.

ಕಾರ್ಯಕ್ರಮದಲ್ಲಿ ರಾಜೇಶ್ ಕುಲಾಲ್ ಪಯ್ಯಾರು ಶಂಕರ್ ಮೂಲ್ಯ ಇರಂದಾಡಿ, ಸಾಧುಮೂಲ್ಯ, ಕೃಷ್ಣ. ಕೆ. ಮೂಲ್ಯ, ಹರೀಶ್ ಕೆ ಮೂಲ್ಯ, ಉದಯ ಕುಲಾಲ್, ಮಹೇಶ್ ಕುಲಾಲ್, ಯಾಧವ ಕುಲಾಲ್,  ತೋತು ಮೂಲ್ಯ ಉಪಸ್ಥಿತರಿದ್ದರು.

ಶಾನ್ವಿತ್ ಕುಲಾಲ್ ಪ್ರಾರ್ಥಿಸಿದರು. ಸಂತೋಷ್ ಎಸ್ ಕುಲಾಲ್ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು. 

ವರದಿ : ಉದಯ ಕುಲಾಲ್, ಕಳತ್ತೂರು
    

ಜೇಸಿಐ ಕಾಪು ಘಟಕ : ವಿಶ್ವ ಪರಿಸರ ದಿನಾಚರಣೆ ಅಂಗವಾಗಿ : ವನಮಹೋತ್ಸವ ಆಚರಣೆ

Thumbnail
Posted On: 10 Jul 2026, 10:33 PM

ಕಾಪು : ಇಲ್ಲಿನ ದಂಡತೀರ್ಥ ಸಮೂಹ ವಿದ್ಯಾಸಂಸ್ಥೆಗಳ ಸಹಯೋಗದಲ್ಲಿ ಜೇಸಿಐ ಕಾಪು ಘಟಕದ ನೇತೃತ್ವದಲ್ಲಿ ವನಮಹೋತ್ಸವ ದಿನವನ್ನು ಆಚರಿಸಲಾಯಿತು.

 ಜೇಸಿ ಅರುಣ್ ಶೆಟ್ಟಿ ಪಾದೂರು, ಶಿಲ್ಪಾ ಜಿ.ಸುವರ್ಣ ನೀಡಿರುವ 108 ಗಿಡಗಳು ಮತ್ತು ಅರಣ್ಯ ಪಾಲಕರಾದ ಕೇಶವ ಪೂಜಾರಿ ನೀಡಿರುವ 20 ಗಿಡಗಳು, ಒಟ್ಟು 128 ಗೀಡಗಳನ್ನು ಶಾಲಾ ಮಕ್ಕಳಿಗೆ ಹಂಚಲಾಯಿತು ಮತ್ತು ಶಾಲಾ ವಠಾರದಲ್ಲಿ ಹಲವಾರು ಗಿಡಗಳನ್ನು ನೆಡಲಾಯಿತು.

 ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯ ಅತಿಥಿ ಉಡುಪಿ ಹಿರಿಯಡ್ಕದ ಅರಣ್ಯ ಪಾಲಕರಾದ ಕೇಶವ ಪೂಜಾರಿ ಅರಣ್ಯ ಸಂರಕ್ಷಣೆ, ಭೂ ಸಂರಕ್ಷಣೆ, ಕಡಲ್ಕೊರೆತ ಇವುಗಳ ಸವಿವರವಾದ ಮಾಹಿತಿಯನ್ನು ನೀಡಿದರು, ಮಾನವನ ಸ್ವಾರ್ಥಕ್ಕೆ ಪ್ರಕೃತಿ ನಾಶವಾಗುತ್ತಿದೆ,ಮುಂದೊಂದು ದಿನ ನೀರಿಲ್ಲದೆ ಭೂಮಿ ಬರಡಾಗಬಹುದು, ಜೀವ ಸಂಕುಲಗಳು ಅದೃಶ್ಯವಾಗಬಹುದು, ಹಾಗಾಗಿ ವಿದ್ಯಾರ್ಥಿಗಳು ವನಮಹೋತ್ಸವವನ್ನು ಆಚರಿಸುವ ಮೂಲಕ ಪ್ರಕೃತಿ ರಕ್ಷಣೆಗೆ ಮುಂದಾಗಬೇಕು ಎಂದು ಹೇಳಿ, ವನಮಹೋತ್ಸವ ಆಚರಣೆಯ ಸದುದ್ದೇಶವನ್ನು ತಿಳಿಸಿದರು.

 ಜೇಸಿಐ ಕಾಪು ಘಟಕದ ಅಧ್ಯಕ್ಷ  ಜೆಎಫ್ಎಮ್ ವಿಕ್ಕಿ ಪೂಜಾರಿ ಮಾತನಾಡಿ "ಪರಿಸರಂ ಏವ ಹತೋ ಹಂತಿ" ಅಂದರೆ ಪರಿಸರವನ್ನು ನಾವು ನಾಶ ಮಾಡಿದರೆ, ಪರಿಸರ ನಮ್ಮನ್ನು ನಾಶ ಮಾಡುತ್ತದೆ, ಆಧುನಿಕತೆಯ ಭರದೊಂದಿಗೆ ಅಭಿವೃದ್ಧಿಯ ನೆಪದಲ್ಲಿ, ನಮ್ಮ ನಾಶಕ್ಕೆ ನಾವೇ ಕಾರಣವಾಗುತ್ತಿದ್ದೇವೆ.

2024ರಲ್ಲಿ ನಡೆದ ಕೇರಳದ ವಯನಾಡ್ ದುರಂತ, ಕಳೆದ ನಾಲ್ಕು ದಿನಗಳ ಹಿಂದೆಯಷ್ಟೇ ರಸ್ತೆ ಟನಲ್ ನಿರ್ಮಾಣದಿಂದ ಆದ ವಯನಾಡ್ ದುರಂತ ಇವೆಲ್ಲವೂ ಮನುಷ್ಯ ಮಾಡಿದ ತಪ್ಪು, ಇದನ್ನು ಪ್ರಕೃತಿ ಮತ್ತೆ ಮತ್ತೆ ನೆನಪಿಸುತ್ತಿದೆ. ಹಾಗಾಗಿ ಪರಿಸರಕ್ಕೆ ಕೊಡುಗೆಯನ್ನು ನೀಡೋಣ ಹೊರತು ಪರಿಸರವನ್ನು ನಾಶ ಮಾಡುವುದು ಬೇಡ ಎಂದು ಹೇಳಿದರು.

 ಕಾರ್ಯಕ್ರಮದಲ್ಲಿ ಸಭಾಧ್ಯಕ್ಷರಾಗಿ ಕಾಪು ದಂಡತೀರ್ಥ ಸಮೂಹ ವಿದ್ಯಾಸಂಸ್ಥೆಗಳ ಸಂಚಾಲಕರಾದ ಡಾ ಕೆ. ಪ್ರಶಾಂತ್ ಶೆಟ್ಟಿ, ಜೇಸಿಐ ವಲಯ 15ರ ವಲಯಾಧಿಕಾರಿ ಜೇಸಿ ಅನಿತಾ ಹೆಗ್ಡೆ, ಶಾಲಾ ಆಡಳಿತಾಧಿಕಾರಿ ಆಲ್ಬನ್ ರೊಡ್ರಿಗಸ್, ಪ್ರಾಂಶುಪಾಲರಾದ ಜೇಸಿ ನಿಲಾನಂದ್ ನಾಯ್ಕ್, ಶಿಕ್ಷಣ ಸಂಯೋಜಕ ಜೇಸಿ ಶಿವಣ್ಣ ಬಾಯರ್, ಪ್ರಾಥಮಿಕ ವಿಭಾಗದ ಮುಖ್ಯಸ್ಥ ಗ್ಯಾಬ್ರಿಯಲ್ ಮಸ್ಕರೇನ್ಹಸ್, ಕನ್ನಡ ಮಾಧ್ಯಮದ ಮುಖ್ಯಸ್ಥೆ ಕೃಪಾ ಅಮ್ಮಣ್ಣ ಮತ್ತು ಅಧ್ಯಾಪಕ ವೃಂದ ಹಾಗೂ ಸ್ಕೌಟ್ - ಗೈಡ್ಸ್, ಬುಲ್ ಬುಲ್,ಸೇವಾದಳ, ಎನ್.ಸಿ.ಸಿ, ಎನ್.ಎಸ್.ಎಸ್ ವಿಭಾಗಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

 ವಿದ್ಯಾರ್ಥಿನಿಯರಾದ ಧ್ವನಿತ ವನಮಹೋತ್ಸವದ ಮಹತ್ವವನ್ನು ವಿವರಿಸಿದರು, ಶ್ರೀರಕ್ಷಾ ದೇವಾಡಿಗ ನಿರೂಪಿಸಿ, ಅನುಕ್ಷಾ ಸ್ವಾಗತಗೈದು, ಅಶ್ವಿನಿ ಧನ್ಯವಾದಗೈದರು.

 

ಹೆಜಮಾಡಿ : ಶಾಲಾ ಸಂಸತ್ತು ಹಾಗೂ ವಿವಿಧ ಸಂಘಗಳ ಉದ್ಘಾಟನೆ

Thumbnail
Posted On: 06 Jul 2026, 04:31 PM

ಪಡುಬಿದ್ರಿ :  ಹೆಜಮಾಡಿಯ ಸರಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಇಲ್ಲಿ ಶಾಲಾ ಸಂಸತ್ತು ಹಾಗೂ ವಿವಿಧ ಸಂಘಗಳ ಉದ್ಘಾಟನಾ ಕಾರ್ಯಕ್ರಮ ಜರಗಿತು.

ಕಾರ್ಯಕ್ರಮವನ್ನು ಮೂಲ್ಕಿಯ ಸುರಭಿ ಎಲೆಕ್ಟ್ರಿಕಲ್ಸ್ ಮತ್ತು ಫರ್ನಿಚರ್ಸ್ ಮಾಲೀಕರಾದ ಜೋನ್ ಕ್ವಾಡ್ರಸ್ ಉದ್ಘಾಟಿಸಿದರು.

ಈ ಸಂದರ್ಭ ಮಾತನಾಡಿದ ಅವರು, ಸರಕಾರಿ ಶಾಲೆ ಹಾಗೂ ಸರಕಾರಿ ಶಾಲೆಯಲ್ಲಿ ಕಲಿಯುತ್ತಿರುವ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಧನ ಸಹಾಯವನ್ನು ಮಾಡುವುದಾಗಿ ಹೇಳಿದರು. ಈ ಸಂದರ್ಭ ಶಾಲೆಗೆ 20 ಕುರ್ಚಿಗಳನ್ನು ಕೊಡುಗೆಯಾಗಿ ನೀಡುವುದಾಗಿ ತಿಳಿಸಿದರು.   

ವಕೀಲರಾದ ರವೀಶ್ ಕಾಮತ್ ಇವರು ಶಾಲಾ ಸಂಸತ್ತಿನ ರಚನೆಯ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ಅರ್ಥಪೂರ್ಣವಾಗಿ ತಿಳಿಸಿದರು.

     ಶಾಲೆಯ ನೂತನ ಸಭಾಂಗಣಕ್ಕೆ ಮುಂಬೈ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ  ಶೇಷಗಿರಿ ರಾವ್  ಅವರು ನೀಡಲ್ಪಟ್ಟ 25 ಕುರ್ಚಿಗಳನ್ನು ಹಸ್ತಾಂತರಿಸಲಾಯಿತು.

ಕಾರ್ಯಕ್ರಮದಲ್ಲಿ ಹೆಜಮಾಡಿ ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಮೋಹನ ಸುವರ್ಣ, ಮಾಜಿ ಗ್ರಾ.ಪಂ.ಸದಸ್ಯ ಪಾಂಡುರಂಗ ಕರ್ಕೇರ,  ಪ್ರೌ.ಶಾ. ಅ. ಸಮಿತಿ ಅಧ್ಯಕ್ಷರಾದ ಶೈಲಜಾ, ಸದಸ್ಯರು ,ಶಿಕ್ಷಕಿಯರಾದ ದೀಪ ಉಡುಪ, ವನಿತಾ ಅಲ್ಮೇಡ, ಸರೋಜಾ ಆಚಾರಿ, ಅನಿತಾ, ಸುಚೇತಾ, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.  

   ಹಿರಿಯ ಶಿಕ್ಷಕಿ ಸಂಪಾವತಿ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ದೈ.ಶಿ.ಶಿಕ್ಷಕ  ಮಂಜುನಾಥ ವಂದಿಸಿದರು. ಸಹ ಶಿಕ್ಷಕ ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿದರು.

 

ಪಡುಬಿದ್ರಿ ಕಾಡಿಪಟ್ನ ಮೊಗವೀರ ಮಹಾಸಭಾ ಮತ್ತು ಮುಂಬೈ ಸಮಿತಿ ವತಿಯಿಂದ ವಿದ್ಯಾರ್ಥಿ ವೇತನ ವಿತರಣೆ

Thumbnail
Posted On: 06 Jul 2026, 04:17 PM

ಪಡುಬಿದ್ರಿ : ಶಿಕ್ಷಣವು ವ್ಯಕ್ತಿಯ ಸರ್ವತೋಮುಖ ಬೆಳವಣಿಗೆ ಮತ್ತು ಸಮಾಜದ ಪ್ರಗತಿಗೆ  ಅಧಾರವಾಗಿದೆ. ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿ ಅವರ ಶಿಕ್ಷಣಕ್ಕೆ ಪ್ರೇರಣೆ ಯಾಗುವ ಕೆಲಸ ಮಾದರಿಯಾಗಿದೆ. ಅನಾದಿ ಕಾಲದಿಂದಲೂ ಹಿರಿಯರು  ಸಮುದಾಯದ ವಿದ್ಯಾರ್ಥಿಗಳಿಗಾಗಿ  ವಿದ್ಯಾನಿಧಿ ಕಾಯ್ದಿರಿಸಿ ಪ್ರತಿವರ್ಷ ವಿದ್ಯಾರ್ಥಿ ವೇತನ ನೀಡುವ ಸಂಕಲ್ಪ ಹೊಂದಿದ್ದಾರೆ. ಬಡತನದ ಕಾರಣದಿಂದ ಶಿಕ್ಷಣ ವಂಚಿತರಾಗಬಾರದು. ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದು ವಿದ್ಯಾರ್ಥಿಗಳ ಭವಿಷ್ಯ ಉಜ್ವಲಗೂಳಿಸಲು ಅತ್ಯಂತ ಅಗತ್ಯವಾಗಿದೆ. ಆಧುನಿಕ ಯುಗದಲ್ಲಿ ಎಲ್ಲಾ ಮಕ್ಕಳು ಪ್ರತಿಭಾವಂತರಾಗಿದ್ದಾರೆ. ವಿದ್ಯಾರ್ಥಿಗಳು ಕಠಿಣ ಪರಿಶ್ರಮದ ಮೇಲೆ ನಂಬಿಕೆ ಇಟ್ಟುಕೊಂಡು ವಿದ್ಯಾಭ್ಯಾಸ ಮಾಡಬೇಕು ಎಂದು ಪಡುಬಿದ್ರಿ ಕಾಡಿಪಟ್ನ ಮೊಗವೀರ ಮಹಾಸಭಾ ಅಧ್ಯಕ್ಷರಾದ ಅಶೋಕ್ ಸಾಲ್ಯಾನ್  ಹೇಳಿದರು.
 ಅವರು ಪಡುಬಿದ್ರಿ ಕಾಡಿಪಟ್ನ ಮೊಗವೀರ ಮಹಾಸಭಾ ಮತ್ತು ಕಾಡಿಪಟ್ನ ಮೊಗವೀರ ಮಹಾಸಭಾ  ಮುಂಬೈ ಸಮಿತಿ ವತಿಯಿಂದ ಕಾಡಿಪಟ್ನ ವಿಷ್ಣು ಭಜನಾ ಮಂದಿರದ ಆವರಣದಲ್ಲಿ ನಡೆದ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಿ ಮಾತನಾಡಿದರು‌.

  2026-26 ಸಾಲಿನ 70 ವಿದ್ಯಾರ್ಥಿಗಳಿಗೆ  ರೂ.1,80,000  ವಿದ್ಯಾರ್ಥಿ ವೇತನ ವಿತರಿಸಲಾಯಿತು.

  ಈ ಸಂದರ್ಭದಲ್ಲಿ ಕಾಡಿಪಟ್ನ ಮೊಗವೀರ ಮಹಾಸಭಾ ಉಪಾಧ್ಯಕ್ಷ ಹೇಮಚಂದ್ರ ಸಾಲ್ಯಾನ್, ಕೋಶಾಧಿಕಾರಿ ಅಶೋಕ್ ಬಂಗೇರ, ಮುಂಬೈ ಸಮಿತಿ ಪದಾಧಿಕಾರಿಗಳಾದ ಸುರೇಶ್  ಅಮೀನ್, ಪುಷ್ಪರಾಜ್ ಕೋಟ್ಯಾನ್, ಪಡುಬಿದ್ರಿ ಕಾಡಿಪಟ್ನ ಮೊಗವೀರ ಮಹಾಸಭಾ ಆಡಳಿತ ಮಂಡಳಿ ಸದಸ್ಯರಾದ  ವಿಶ್ವಾಸ್ ಅಮೀನ್, ಸತೀಶ್ ಸಾಲ್ಯಾನ್, ಶರತ್ ಕುಮಾರ್, ಜೀವನ್ ಸುವರ್ಣ,  ಜಗದೀಶ್ ಬಂಗೇರ, ಮಿಥುನ್  ಸಾಲ್ಯಾನ್,  ದೇವದಾಸ್ ಬಂಗೇರ,  ಕಾಡಿಪಟ್ನ ಮೊಗವೀರ ಮಹಿಳಾ ಮಹಾಸಭಾ ಅಧ್ಯಕ್ಷೆ ವಿಜಯ ಮೆಂಡನ್, ಕೋಶಾಧಿಕಾರಿ ಚಂದ್ರಿಕಾ ಉದಯ್ ಕಾಂಚನ್ ಉಪಸ್ಥಿತರಿದ್ದರು.

  ಪ್ರಧಾನ  ಕಾರ್ಯದರ್ಶಿ ಸಂತೋಷ್ ಪಡುಬಿದ್ರಿ ನಿರೂಪಿಸಿ, ವಂದಿಸಿದರು.

ಪಡುಬಿದ್ರಿ ನಡಿಪಟ್ಣದಲ್ಲಿ ತಡೆಗೋಡೆ ನಿರ್ಮಾಣಕ್ಕೆ ಸಚಿವ ಯು.ಟಿ. ಖಾದರ್ ಗೆ ಮನವಿ

Thumbnail
Posted On: 05 Jul 2026, 11:38 AM

ಪಡುಬಿದ್ರಿ : ಇಲ್ಲಿನ ಗ್ರಾಮ ಪಂಚಾಯತ್ ವ್ಯಾಪ್ತಿಯ ನಡಿಪಟ್ಣ ಪ್ರದೇಶದಲ್ಲಿ ತೀವ್ರಗೊಳ್ಳುತ್ತಿರುವ ಸಮುದ್ರ ಕೊರೆತವನ್ನು ತಡೆಗಟ್ಟಲು ಶ್ರೀ ಪಾಂಡುರಂಗ ಕೋಟ್ಯಾನ್ ಅವರ ಮನೆಯ ಮುಂಭಾಗದಿಂದ ಸಾಗರ ವಿದ್ಯಾ ಮಂದಿರ  ಕಡೆಗೆ ಸುಮಾರು 700 ಮೀಟರ್ ಉದ್ದದ ಪ್ರದೇಶದಲ್ಲಿ ಶಾಶ್ವತ ಕಡಲ ತಡೆಗೋಡೆ ನಿರ್ಮಿಸುವಂತೆ ಉಡುಪಿ ಜಿಲ್ಲಾ ಮೀನುಗಾರರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ವಿಶ್ವಾಸ್ ವಿ. ಅಮೀನ್ ಅವರು ರಾಜ್ಯದ ಆರೋಗ್ಯ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಅವರಿಗೆ ಮನವಿ ಸಲ್ಲಿಸಿದರು.

ಮನವಿಯಲ್ಲಿ, ನಡಿಪಟ್ಣ ಪ್ರದೇಶದಲ್ಲಿ ನಿರಂತರವಾಗಿ ಉಂಟಾಗುತ್ತಿರುವ ಸಮುದ್ರ ಕೊರೆತದಿಂದ ಸ್ಥಳೀಯ ನಿವಾಸಿಗಳ ಮನೆಗಳು, ಸಾರ್ವಜನಿಕ ಆಸ್ತಿಪಾಸ್ತಿಗಳು ಹಾಗೂ ಮೀನುಗಾರರ ಜೀವನೋಪಾಯಕ್ಕೆ ಗಂಭೀರ ಅಪಾಯ ಎದುರಾಗಿರುವುದನ್ನು ಉಲ್ಲೇಖಿಸಲಾಗಿದೆ. 

ಮಳೆಗಾಲದಲ್ಲಿ ಸಮುದ್ರದ ಅಬ್ಬರ ಹೆಚ್ಚಾಗುವುದರಿಂದ ಪರಿಸ್ಥಿತಿ ಮತ್ತಷ್ಟು ಆತಂಕಕಾರಿಯಾಗಿದ್ದು, ಸ್ಥಳೀಯರು ಭಯದ ವಾತಾವರಣದಲ್ಲಿ ಜೀವನ ನಡೆಸುವಂತಾಗಿದೆ ಎಂದು ತಿಳಿಸಿದ್ದಾರೆ.

ಈ ಪ್ರದೇಶದ ಸಮೀಕ್ಷೆಯನ್ನು ಸಂಬಂಧಪಟ್ಟ ಇಲಾಖೆಯು ಈಗಾಗಲೇ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ, ಸುಮಾರು 700 ಮೀಟರ್ ವ್ಯಾಪ್ತಿಯಲ್ಲಿ ಕಡಲ ತಡೆಗೋಡೆ ನಿರ್ಮಾಣಕ್ಕೆ ಅಗತ್ಯ ಆಡಳಿತಾತ್ಮಕ ಅನುಮೋದನೆ ಹಾಗೂ ಅನುದಾನವನ್ನು ಮಂಜೂರು ಮಾಡಿ ಶೀಘ್ರದಲ್ಲೇ ಕಾಮಗಾರಿ ಆರಂಭಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.

ಈ ಕಾಮಗಾರಿಯಿಂದ ಸಮುದ್ರ ಕೊರೆತವನ್ನು ಪರಿಣಾಮಕಾರಿಯಾಗಿ ತಡೆಗಟ್ಟಿ, ಸ್ಥಳೀಯರ ಜೀವ ಮತ್ತು ಆಸ್ತಿಯನ್ನು ರಕ್ಷಿಸುವುದರ ಜೊತೆಗೆ ಕರಾವಳಿ ಪ್ರದೇಶದ ಸುರಕ್ಷತೆಯನ್ನು ಖಾತ್ರಿಪಡಿಸಲು ಸಾಧ್ಯವಾಗಲಿದೆ ಎಂದು ವಿಶ್ವಾಸ್ ವಿ. ಅಮೀನ್ ತಿಳಿಸಿದ್ದಾರೆ.

ಶಿರ್ವ ಸಹಕಾರಿ ವ್ಯವಸಾಯಿಕ ಸಂಘದಿಂದ ಸಂಸದರಿಗೆ ಮನವಿ

Thumbnail
Posted On: 03 Jul 2026, 12:52 PM

ಶಿರ್ವ : ಇಲ್ಲಿನ ಸಹಕಾರಿ ವ್ಯವಸಾಯಿಕ ಸಂಘ ನಿ. ಶಿರ್ವ ವತಿಯಿಂದ ಅಧ್ಯಕ್ಷರಾದ ಕುತ್ಯಾರು ಪ್ರಸಾದ್ ಶೆಟ್ಟಿ ಯವರ ನೇತೃತ್ವದಲ್ಲಿ ಸಂಸದರಾದ ಕೋಟಾ ಶ್ರೀನಿವಾಸ ಪೂಜಾರಿಯವರನ್ನು ಭೇಟಿಯಾಗಿ ಮನವಿಯನ್ನು ಸಲ್ಲಿಸಲಾಯಿತು.

ಪ್ರಸಕ್ತ ಸಾಲಿನಲ್ಲಿ ನಬಾರ್ಡ್ ಸಂಸ್ಥೆಯು ಕೃಷಿಕರಿಗಾಗಿ ಒದಗಿಸುವ ಶೂನ್ಯ ಬಡ್ಡಿ ದರದ MKCC ಸಾಲದ ಮಿತಿ ನಿಗದಿಪಡಿಸಲು  ವಿಧಿಸಿದ ಷರತ್ತುಗಳ ಅನ್ವಯ  ಈ ಹಿಂದಿನ ಮೊತ್ತದ ಸಾಲವನ್ನು ವಿತರಿಸಲು ಸಾಧ್ಯವಾಗುತ್ತಿಲ್ಲ. ಆದುದರಿಂದ ಕಾರ್ಯವ್ಯಾಪ್ತಿಯ ಮಲ್ಲಿಗೆ ಕೃಷಿಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟು ಈ ಹಿಂದಿನಂತೆಯೇ ಸಾಲ ವಿತರಿಸಲು ಅನುಕೂಲ ಮಾಡಿಕೊಡುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಮನವರಿಕೆ ಮಾಡುವಂತೆ ವಿನಂತಿಸಲಾಯಿತು.

 ನಿಯೋಗದಲ್ಲಿ ಸಂಘದ ಉಪಾಧ್ಯಕ್ಷರಾದ ವೀರೇಂದ್ರ ಪಾಟ್ಕರ್, ನಿರ್ದೇಶಕರಾದ ಉಮೇಶ್ ಆಚಾರ್ಯ ಮತ್ತು ಹರಿಣಾಕ್ಷ ಶೆಟ್ಟಿಯವರು ಉಪಸ್ಥಿತರಿದ್ದರು.

ಜು. 5 : ಫ್ರೆಂಡ್ಸ್ ಅವರಾಲು ವತಿಯಿಂದ ಕೆಸರ್ಡ್ ಒಂಜಿ ದಿನ

Thumbnail
Posted On: 03 Jul 2026, 12:47 PM

ಪಡುಬಿದ್ರಿ : ಫ್ರೆಂಡ್ಸ್ ಅವರಾಲು ವತಿಯಿಂದ ಪಲಿಮಾರ್ ಪಂಚಾಯತ್ ವ್ಯಾಪ್ತಿಯ ನಾಗರಿಕರಿಗಾಗಿ ಕೆಸರ್ಡ್ ಒಂಜಿ ದಿನ ಕಾರ್ಯಕ್ರಮ ಜುಲೈ 5, ಆದಿತ್ಯವಾರ ಅವರಾಲು ಅಡ್ಕದ ಹತ್ತಿರದ ಬಾಕಿಮಾರು ಗದ್ದೆಯಲ್ಲಿಜರಗಲಿದೆ.

ಪುರುಷರಿಗಾಗಿ ವಾಲಿಬಾಲ್, ಹಗ್ಗಜಗ್ಗಾಟ, ರಿಲೇ ಮಹಿಳೆಯರಿಗಾಗಿ ಥ್ರೋಬಾಲ್, ಹಗ್ಗಜಗ್ಗಾಟ ಮಕ್ಕಳಿಗಾಗಿ 100 ಮೀ ಓಟ, ನಿಧಿ ಶೋಧನೆ, ಪುರುಷರಿಗಾಗಿ ಮತ್ತು ಮಹಿಳೆಯರ ವೈಯಕ್ತಿಕ ಸ್ಪರ್ಧೆಯಲ್ಲಿ 100ಮೀ ಓಟ, ಹಿಮ್ಮುಖ ಓಟ, ಹಾಲೆ ಓಟ, 16ವರ್ಷದೊಳಗಿನ ಹುಡುಗರಿಗೆ ಮತ್ತು ಹುಡುಗಿಯರಿಗೆ 100ಮೀ ಓಟ, ಹಿಮ್ಮುಖ ಓಟ, ಹಾಲೆ ಓಟ ಸ್ಪರ್ಧೆಗಳು ಜರಗಲಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
8951191827, 6363081270, 7349323483, 7760737906

ಶಿರ್ವ ರೋಟರಿ ಅಧ್ಯಕ್ಷರಾಗಿ ಜೆಸಿಂತಾ ಡಿಸೋಜಾ ಆಯ್ಕೆ

Thumbnail
Posted On: 03 Jul 2026, 08:53 AM

ಶಿರ್ವ : ಪ್ರತಿಷ್ಠಿತ ಶಿರ್ವ ರೋಟರಿಯ 57ನೇ ವರ್ಷದ ನೂತನ ಅಧ್ಯಕ್ಷರಾಗಿ ನಿವೃತ್ತ ಶಿಕ್ಷಕಿ ಹಾಗೂ ಹಲವು ಸಾಮಾಜಿಕ ಸೇವಾ ಸಂಘಟನೆಗಳಲ್ಲಿ ಸೇವಾ ಅನುಭವ ಹೊಂದಿರುವ ಜೆಸಿಂತಾ ಡಿಸೋಜ ಶಿರ್ವ ಇವರು ಆಯ್ಕೆಯಾಗಿದ್ದಾರೆ.

 ನೂತನ ಪದಾಧಿಕಾರಿಗಳು :ಉಪಾಧ್ಯಕ್ಷ -ಲೂಕಾಸ್ ಡಿಸೋಜಾ, ನಿಕಟಪೂರ್ವ ಅಧ್ಯಕ್ಷ/ಕಾರ್ಯದರ್ಶಿ : ವಿಲಿಯಮ್ ಮಚಾದೋ, ಜೊತೆ ಕಾರ್ಯದರ್ಶಿ- ಪ್ರಾನ್ಸಿಸ್ ಕಸ್ತಲಿನೊ, ಕೋಶಾಧಿಕಾರಿ- ವಿಷ್ಣುಮೂರ್ತಿ ಸರಳಾಯ, ದಂಡಪಾಣಿ- ಗ್ರೇಸಿ ಕರ್ಡೋಜಾ, ನಿಯೋಜಿತ ಅಧ್ಯಕ್ಷ(2027-28)- ರಿಚಾರ್ಡ್ ಪೌಲ್ ಫೆರಾವೊ ಆಯ್ಕೆಯಾಗಿದ್ದಾರೆ. 

 ನಿರ್ದೇಶಕರು: ಕ್ಲಬ್ ಸೇವೆ - ಮೈಕಲ್ ಮತಾಯಸ್, ವೃತ್ತಿ ಸೇವೆ - ಹೆರಾಲ್ಡ್ ಕುತಿನ್ಹೋ, ಸಮುದಾಯ ಸೇವೆ- ಡಾ.ವಿಠಲ ನಾಯಕ್, ಅಂತಾರಾಷ್ಟ್ರೀಯ ಸೇವೆ- ಬಿ.ಪುಂಡಲೀಕ ಮರಾಠೆ, ಯುವಜನ ಸೇವೆ- ದಿನೇಶ್ ಕುಲಾಲ್, ಸದಸ್ಯತನ ಅಭಿವೃದ್ಧಿ- ಮೆಲ್ವಿನ್ ಡಿಸೋಜಾ, ರೋಟರಿ ಪ್ರತಿಷ್ಠಾನ (ಟಿಆರ್‌ಎಫ್) - ರಫಾಯಲ್ ಮತಾಯಸ್, ಪೋಲಿಯೊ ಪ್ಲಸ್ - ರಘುಪತಿ ಐತಾಳ್, ಸಾರ್ವಜನಿಕ ಸಂಪರ್ಕ ಮತ್ತು ಕ್ಲಬ್ ಪತ್ರಿಕೆ ಸಂಪಾದಕ-ಹೊನ್ನಯ್ಯ ಶೆಟ್ಟಿಗಾರ್, ಐಟಿ ಮತ್ತು ವೆಬ್‌ಸೈಟ್ - ವಿವಿಯನ್ ಮಚಾದೊ, ಜಿಲ್ಲಾ ಯೋಜನೆ - ಜಯಕೃಷ್ಣ ಆಳ್ವ, ಜಾಗತಿಕ ತಿಳುವಳಿಕೆ -ದಿವಾಕರ ಡಿ.ಶೆಟ್ಟಿ, ಸ್ಕಿಲ್ ಡೆವಲಪ್‌ಮೆಂಟ್ -ಡಾ.ಅರುಣ್ ಹೆಗ್ಡೆ, ಮಹಿಳಾ ಸದಸ್ಯತನ- ಜಾಕ್ಲಿನ್ ಮೆಂಡೋನ್ಸಾ, ವೊಕೇಶನಲ್ ಅವಾರ್ನೆಸ್/ಅವಾರ್ಡ್-ರವೀಂದ್ರ ಆಚಾರ್ಯ, ಸಾಕ್ಷರತೆ -ಜಿನೇಶ್ ಬಲ್ಲಾಳ್, ರೋಟರಿ ಫ್ರೆಂಡ್ಸಶಿಪ್ ಎಕ್ಸೇಂಜ್ - ಜಗದೀಶ ಹೆಗ್ಡೆ, ಸ್ವದ್ಯೋಗ- ಜುಲಿಯಾನ್ ಮಾರ್ಕ್ ಡಿಮೆಲ್ಲೊ, ವಾಶ್ ಇನ್ ಸ್ಕೂಲ್ - ಮೌರಿಸ್ ಕ್ವಾಡ್ರಸ್, ಟೀರ‍್ಸ್ ಸಪೋರ್ಟ್-ಖಲೀಕ್ ಮೊಹಮ್ಮದ್, ಮಹಿಳಾ ಸಬಲೀಕರಣ-ಅನ್ಸಿಲ್ಲಾ ಫೆರ್ನಾಂಡಿಸ್ ಆಯ್ಕೆಯಾಗಿದ್ದಾರೆ.

 

ಜು.5 : ಪೋಲಿಸ್ ಕಾನ್ಸ್ಟೇಬಲ್ ಹುದ್ದೆಯ ಉಚಿತ ತರಬೇತಿ ಕಾರ್ಯಗಾರ

Thumbnail
Posted On: 03 Jul 2026, 08:52 AM

ಕಾಪು : ಕರ್ನಾಟಕ ರಾಜ್ಯ ಪೋಲಿಸ್ ಇಲಾಖೆಯಲ್ಲಿ ಸಿವಿಲ್ ಪೋಲಿಸ್ ಕಾನ್ಸ್ಟೇಬಲ್ 3395 ಹುದ್ದೆ ಹಾಗೂ ಸಶಸ್ತ್ರ ಪೋಲಿಸ್ ಕಾನ್ಸ್ಟೇಬಲ್ 1421 ಹುದ್ದೆಗೆ ಸರ್ಕಾರ ಅರ್ಜಿಯನ್ನು ಕರೆದಿದ್ದು ಸದ್ರಿ ಹುದ್ದೆಗೆ ನಿಗದಿಪಡಿಸಿದ ಲಿಖಿತ ಪರೀಕ್ಷೆಗೆ ಸಂಬಂಧಿಸಿದಂತೆ ಜು.5, ಭಾನುವಾರ ಬೆಳಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ಕೋಟ ಶಿವರಾಮ ಕಾರಂತ ಥೀಂ ಪಾರ್ಕ್ ನಲ್ಲಿ ವಿ-ಶೈನ್ ಕೋಚಿಂಗ್ ಸೆಂಟರ್ ಕೋಟ ಹಾಗೂ ಓಂ ಪ್ರೆಂಡ್ಸ್ ಕುಂದಾಪುರ ಇವರ ಸಹಭಾಗಿತ್ವದಲ್ಲಿ ಉಚಿತ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ. 

ಕಾರ್ಯಗಾರದಲ್ಲಿ ಅನುಭವಿ ಸಂಪನ್ಮೂಲ ವ್ಯಕ್ತಿಗಳು ಭಾಗಿವಹಿಸಲಿದ್ದಾರೆ. ಈ ಕಾರ್ಯಗಾರವನ್ನು ಉಡುಪಿ ಚಿಕ್ಕಮಗಳೂರು ಸಂಸದರಾದ ಕೋಟ ಶ್ರೀನಿವಾಸ ಪೂಜಾರಿಯವರು ಉದ್ಘಾಟಿಸಲ್ಲಿದ್ದು, ಸಭಾ ಕಾರ್ಯಕ್ರಮದಲ್ಲಿ ಕುಂದಾಪುರ ಶಾಸಕರಾದ  ಕಿರಣ್ ಕುಮಾರ್ ಕೊಡ್ಗಿ,  ಕಾಪು ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆರವರು ಹಾಗೂ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಹರಿರಾಮ್ ಶಂಕರ್ ಮತ್ತು ಇನ್ನಿತರ ಗಣ್ಯರು ಸದ್ರಿ ಕಾರ್ಯಗಾರದಲ್ಲಿ ಭಾಗವಹಿಸಲಿದ್ದಾರೆ.

ಸದ್ರಿ ಕಾರ್ಯಗಾರಕ್ಕೆ ಉಡುಪಿ ಜಿಲ್ಲೆಯ ಹಾಗೂ ಕರಾವಳಿ ಜಿಲ್ಲೆಯ ಸ್ಪರ್ದಾ ಆಕಾಂಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದ್ರಿ ಕಾರ್ಯಗಾರದ ಪ್ರಯೋಜನ ಪಡೆಯುವಂತೆ ಕಾಪು ಶಾಸಕರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: 9980040551 / 8277027118