Updated News From Kaup

ಜನವರಿ 25 ರಂದು ಕುಲಾಲ ಸಂಘ (ರಿ.) ಕಾಪು ವಲಯ ಅಶ್ರಯದಲ್ಲಿ ಜಿಲ್ಲಾ ಮಟ್ಟದ ಕುಲಾಲ ಕ್ರೀಡೋತ್ಸವ 2026

Thumbnail
Posted On: 26 Dec 2025, 07:35 PM

ಕಾಪು : ಸ್ನೇಹಕ್ಕಾಗಿ ಕ್ರೀಡೆ, ಏಳಿಗೆಗಾಗಿ ಕ್ರೀಡೆ, ಒಗ್ಗಟ್ಟಿಗಾಗಿ ಕ್ರೀಡೆ ಎಂಬ ನಿಟ್ಟಿನಲ್ಲಿ ತಾಲೂಕಿನ ಕುಲಾಲ ಸಂಘ(ರಿ)ಕಾಪು ವಲಯ ಹಾಗೂ ಮಹಿಳಾ ಘಟಕ, ಕಾಪು ಕುಲಾಲ ಯುವ ವೇದಿಕೆ ನೇತೃತ್ವದಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಕುಲಾಲ ಸಮಾಜ ಬಾಂಧವರಿಗೆ ವಾಲಿಬಾಲ್ ಹಾಗೂ ತ್ರೋಬಾಲ್ ಪಂದ್ಯಾಟ, ಮಕ್ಕಳಿಗೆ, ಮಹಿಳೆಯರಿಗೆ, ಪುರುಷರಿಗೆ 100 ಮೀ ಓಟ,ಗುಂಡು ಎಸೆತ,ಹಾಗೂ ವಿವಿಧ ಮನೋರಂಜನಾ ಕಾರ್ಯಕ್ರಮ ಜನವರಿ 25 ರಂದು ಉಚ್ಚಿಲ ಸರಸ್ವತಿ ಮಂದಿರ ಶಾಲಾ ಮೈದಾನದಲ್ಲಿ ನಡೆಯಲಿದೆ.

ಆಯಾಯ ಸ್ಪರ್ಧೆಗೆ ನಗದು ಜೊತೆಗೆ ಕುಲಾಲ ಶಾಶ್ವತ ಫಲಕ ನೀಡಲಾಗುವುದು ಎಂದು ಕಾಪು ಕುಲಾಲ ಸಂಘದ ಅಧ್ಯಕ್ಷರು,,ಪ್ರಸ್ತುತ ಎಲ್ಲೂರು ಗ್ರಾಮ ಪಂಚಾಯತ್ ಸದಸ್ಯರು ಶ್ರೀ ಹರೀಶ್ ಮೂಲ್ಯ ಬೆಳ್ಳಿಬೆಟ್ಟು ತಿಳಿಸಿರುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಮೊಬೈಲ್ ಗೆ ಸಂಪರ್ಕಿಸಬಹುದು... 9686122892, 9964194509, 9686945501

ಪಾದಚಾರಿಗೆ ಹಿಂದಿನಿಂದ ಬಂದು ಬೈಕ್ ಅಪಘಾತ. ಪೆರ್ಡೂರು ಕುಕ್ಕೆಹಳ್ಳಿನಿವಾಸಿ ದಿನೇಶ್ ಕುಲಾಲ್ ತೀವ್ರ ಅಶ್ವಸ್ತ

Thumbnail
Posted On: 26 Dec 2025, 07:02 PM

ಪೆರ್ಡೂರು : ಪೆರ್ಡೂರು ಭಾಗದ ಕುಕ್ಕೆಹಳ್ಳಿ ಬಡಪಾಲು ನರಸಿಂಹ ಕುಲಾಲ್ ಮಗ ದಿನೇಶ್ ಕುಲಾಲ್ ವೃತ್ತಿಯಲ್ಲಿ ಉಡುಪಿಯಲ್ಲೊಂದು ಕ್ಯಾಂಟಿನ್ ನಲ್ಲಿ ದಿನಕೂಲಿ ದುಡಿಯುವವರು.

ತನ್ನ ಕುಟುಂಬ ಪಾಲನೆಯ ಜೊತೆಯಲ್ಲಿ ದಿನ ಸಾಗಿಸುತ್ತಿದ್ದ ದಿನೇಶ್ ಕೆಲಸ ಮುಗಿಸಿಕೊಂಡು ಹೋಗುವ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿ ಬೈಕ್ ಸವಾರ ಹಿಂಬದಿಯಿಂದ ಡಿಕ್ಕಿ ಹೊಡೆದು ದಿನೇಶ್ ತಲೆಗೆ ಪೆಟ್ಟಾಗಿದ್ದು ಪರಿಣಾಮ ಕಳೆದ ಮೂರು ದಿನದಿಂದ ಮಣಿಪಾಲ ಹಾಸ್ಪಿಟಲ್ನಲ್ಲಿ ತುರ್ತು ಚಿಕಿತ್ಸೆ ನಿಗಮದಲ್ಲಿರುವರು..ಮುಗ್ದದ ಮನೋಭಾವನೆಯ ಇವರ ಕುಟುಂಬಕ್ಕೆ ಆದಷ್ಟು ಸಹಾಯ ಆಗೋಣ..

Contact : 9844 344157

ದಿನೇಶ್ ಅವರ ಪತ್ನಿ ಸವಿತರವರ ಬ್ಯಾಂಕ್ ಡೀಟೇಲ್ಸ್..

Name : savitha..

Bank Name : Union Bank Perdoor Branch.

A/C NO : 170522010001052

IFSC CODE : UBIN0917052

ಉಡುಪಿ : ವಿದ್ಯಾಲತಾ ಶೆಟ್ಟಿ ಅಭಿಮಾನಿ ಬಳಗ ಆಶ್ರಯದಲ್ಲಿ ಉದ್ಘಾಟನೆಯ ಪ್ರಯುಕ್ತ ಮೆಹೆಂದಿ ಸ್ಪರ್ಧೆ

Thumbnail
Posted On: 24 Dec 2025, 10:09 PM

ಉಡುಪಿ : ವಿದ್ಯಾಲತಾ ಶೆಟ್ಟಿ ಅಭಿಮಾನಿ ಬಳಗ, ಉಡುಪಿ ಇವರ ಆಶ್ರಯದಲ್ಲಿ  ಉದ್ಘಾಟನೆಯ ಪ್ರಯುಕ್ತ ಮೆಹೆಂದಿ ಸ್ಪರ್ಧೆ
ಡಿಸೆಂಬರ್ 25 ರಂದು ಮಧ್ಯಾಹ್ನ 2 ಗಂಟೆಗೆ ನಮಿತಾ ನಿವಾಸ, ಅಬಕಾರಿ ಭವನ ಎದುರು, ನಾಯರ್ ಕೆರೆ ರೋಡ್, ಉಡುಪಿ ಇಲ್ಲಿ ಜರಗಲಿದೆ.

ಪ್ರಥಮ ಬಹುಮಾನವಾಗಿ ಶಾಶ್ವತ ಫಲಕ, ಪ್ರಶಸ್ತಿ ಪತ್ರ ಹಾಗೂ ನಗದು, ದ್ವಿತೀಯ ಬಹುಮಾನ ಶಾಶ್ವತ ಫಲಕ, ಪ್ರಶಸ್ತಿ ಪತ್ರ ಹಾಗೂ ನಗದು, ತೃತೀಯ ಬಹುಮಾನ ಶಾಶ್ವತ ಫಲಕ, ಪ್ರಶಸ್ತಿ ಪತ್ರ ಹಾಗೂ ನಗದು ಇರಲಿದೆ. ಜೊತೆಗೆ ಆಕರ್ಷಕ ಬಹುಮಾನಗಳು ಹಾಗೂ
ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೂ ಪ್ರಮಾಣ ಪತ್ರ ನೀಡಲಾಗುವುದು.

ಈ ಕಾರ್ಯಕ್ರಮದಲ್ಲಿ ಉಪಸ್ಥಿತಿ ಇರುವ ಮಹಿಳೆಯರಿಗೆ ಸೀರೆಯ ನಿಖರ ಬೆಲೆ ಹೇಳುವ ಸ್ಪರ್ಧೆ ಹಾಗೂ ಇನ್ನಿತರ ಸ್ಪರ್ಧೆಗಳು ನಡೆಯಲಿವೆ.

ಸಮರೋಪ ಸಮಾರಂಭದಲ್ಲಿ ಉಡುಪಿಯ 5 ಮಹಿಳಾ ಚಂಡೆ ತಂಡಗಳನ್ನು ಗೌರವಿಸಲಾಗುವುದು. ಹೊಲಿಗೆ ಯಂತ್ರಗಳನ್ನು ವಿತರಿಸಲಾಗುವುದು. ಎಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪ್ರೋತ್ಸಾಹಿಸಬೇಕೆಂದು ಸಂಚಾಲಕರು ಹಾಗೂ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ವಿದ್ಯಾಲತಾ ಶೆಟ್ಟಿ ಬನ್ನಂಜೆ ಅಭಿಮಾನಿ ಬಳಗ, ಉಡುಪಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ:
8105501903, 9148533269, 
8050695853, 9591272479

ಡಿ.25 (ನಾಳೆ) : ಬಿರುವೆರ್ ಕಾಪು ಸೇವಾ ಸಮಿತಿ ವತಿಯಿಂದ ಜ್ಞಾನ ದೀವಿಗೆ - 2025

Thumbnail
Posted On: 24 Dec 2025, 09:56 PM

ಕಾಪು : ಬಿರುವೆರ್ ಕಾಪು ಸೇವಾ ಸಮಿತಿ (ರಿ.)ವತಿಯಿಂದ 5ನೇ ವರ್ಷದ ವಿದ್ಯಾರ್ಥಿ ವೇತನ ವಿತರಣೆ ಮತ್ತು ಸನ್ಮಾನ ಸಮಾರಂಭ
"ಜ್ಞಾನ ದೀವಿಗೆ - 2025" ಡಿ.25, ಗುರುವಾರ ಕಾಪು ಬಿಲ್ಲವರ ಸಹಾಯಕ ಸಂಘ (ರಿ.) ಕಾಪು ಇಲ್ಲಿ ಮಧ್ಯಾಹ್ನ 2.30 ರಿಂದ ಜರಗಲಿದೆ.
ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ರಾಷ್ಟ್ರೀಯ ಬಿಲ್ಲವರ ಮಹಾಮಂಡಲ (ರಿ.) ಮೂಲ್ಕಿ ಇದರ ಅಧ್ಯಕ್ಷರಾದ ಸೂರ್ಯಕಾಂತ್ ಜೆ.ಸುವರ್ಣ ವಿದ್ಯಾರ್ಥಿವೇತನ ವಿತರಿಸಲಿದ್ದಾರೆ. 
ಜೇಸಿಐ ಭಾರತ ರಾಷ್ಟ್ರೀಯ ತರಬೇತಿದಾರ ದೀಪಕ್ ರಾಜ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಂಕಪ್ಪ ಅಮಿನ್ ವಕೀಲರು, ಕಾನೂನು ಸಲಹೆಗಾರರು ಮತ್ತು ಬಿರುವೆರ್ ಕಾಪು ಸೇವಾ ಸಮಿತಿ (ರಿ),  ವಿಕ್ರಂ ಕಾಪು ಅಧ್ಯಕ್ಷರು, ಕಾಪು ಬಿಲ್ಲವರ ಸಹಾಯಕ ಸಂಘ (ರಿ.) ಕಾಪು ಮತ್ತು ಅಧ್ಯಕ್ಷರು ಕಾಪು ನಗರ ಯೋಜನಾ ಪ್ರಾಧಿಕಾರ, ಗೀತಾಂಜಲಿ ಸುವರ್ಣ ಕಟಪಾಡಿ ಮಾಜಿ ಸದಸ್ಯರು ಜಿಲ್ಲಾ ಪಂಚಾಯತ್,  ಪ್ರಭಾಕರ ಎಸ್.ಪೂಜಾರಿ ಕಾಪು ಗೌರವಾಧ್ಯಕ್ಷರು, ಕಾಪು ಬಿಲ್ಲವರ ಸಹಾಯಕ ಸಂಘ (ರಿ.) ಕಾಪು, ಸಂಜೀವ ಪೂಜಾರಿ ಮೂಳೂರು, ಪ್ರಭಾಕರ ಪೂಜಾರಿ ಉದ್ಯಮಿ, ಬಿಂದಾಸ್ ಕಾಪು, ಕೈಪುಂಜಾಲ್ ಭಾಗವಹಿಸಲಿದ್ದಾರೆ.

ವಿವಿಧ ಕ್ಷೇತ್ರಗಳ ಸಾಧಕರಾದ ಪ್ರಭಾಕರ ಎಸ್.ಪೂಜಾರಿ,  ವಿಕ್ರಂ ಕಾಪು, ಸೂರ್ಯಕಾಂತ್ ಜೆ. ಸುವರ್ಣ, ಶಿವಾನಂದ ಕೋಟ್ಯಾನ್ ಕಟಪಾಡಿ, ನವೀನ್ ಅಮಿನ್ ಕಂಕರಪುರ, ಸಂಜೀವ ಪೂಜಾರಿ ಮೂಳೂರು,  ಸುಧಾಕರ ಸಾಲ್ಯಾನ್, ವಿಕ್ಕಿ ಮಡುಂಬು,  ರಾಘು ಸಿ.ಪೂಜಾರಿ ಮರ್ನಾಡ್ ಸನ್ಮಾನಿಸಲ್ಪಡಲಿದ್ದಾರೆ.

ಸಭೆಯ ಅಧ್ಯಕ್ಷತೆಯನ್ನು ಬಿರುವೆರ್ ಕಾಪು ಸೇವಾ ಸಮಿತಿ (ರಿ.) ಉಪಾಧ್ಯಕ್ಷರಾದ  ಮನೋಜ್ ಎಸ್. ಅಂಚನ್ ಕಾಪು ವಹಿಸಲಿದ್ದಾರೆ ಎಂದು ಬಿರುವೆರ್ ಕಾಪು ಸೇವಾ ಸಮಿತಿ ಪ್ರಕಟಣೆ ತಿಳಿಸಿದೆ.

ಸಮಾಜಮುಖಿ ವ್ಯಕ್ತಿತ್ವ ಸ್ಫೂರ್ತಿದಾಯಕ: ಉಷಾ ಎಸ್.

Thumbnail
Posted On: 22 Dec 2025, 10:03 AM

​​​​​ಶಿರ್ವ : ಆರ್.ಎಸ್. ಬೆಳ್ಳೆಯವರು ತಮ್ಮ ಇಡೀ ಜೀವನವನ್ನು ಶಿಕ್ಷಣ ಮತ್ತು ಸಮಾಜಕ್ಕಾಗಿ ಮೀಸಲಿರಿಸಿದ್ದರು. ನಿಸ್ವಾರ್ಥ, ದ್ವೇಷ ರಹಿತ ಹಾಗೂ ಸೌಹಾರ್ದದ ಮನೋಭಾವದ ಮೂಲಕ ಪ್ರತಿಯೊಬ್ಬರಲ್ಲೂ ಆತ್ಮೀಯರೆನಿಸಿಕೊಂಡಿದ್ದರು. ಗ್ರಾಮೀಣಾಭಿವೃದ್ಧಿಯ ಕನಸು ಕಂಡು ಅದನ್ನು ಸಾಕಾರಗೊಳಿಸಲು ಅವಿರತ ಶ್ರಮಿಸಿದ ಅವರ ಸಮಾಜಮುಖಿ ವ್ಯಕ್ತಿತ್ವ ಸ್ಫೂರ್ತಿದಾಯಕವಾಗಿದೆ ಎಂದು ಪಡುಬೆಳ್ಳೆ ಶ್ರೀ ನಾರಾಯಣಗುರು ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಉಷಾ ಎಸ್. ಅವರು ಹೇಳಿದರು. 
ಅವರು ರವಿವಾರ ಪಾಂಬೂರು ವಿದ್ಯಾಜ್ಯೋತಿಯಲ್ಲಿ ಜರಗಿದ ಸಮಾಜಸೇವಕ, ನಿವೃತ್ತ ಮುಖ್ಯ ಶಿಕ್ಷಕ ಆರ್.ಎಸ್. ಬೆಳ್ಳೆ ಸಂಸ್ಮರಣಾ ವಾರ್ಷಿಕ ಉಪನ್ಯಾಸ ಹಾಗೂ ಪುರಸ್ಕಾರ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು. 

ಪಾಂಬೂರು ಹೋಲಿಕ್ರಾಸ್ ಚರ್ಚಿನ ಪ್ರಧಾನ ಧರ್ಮಗುರು ರೆ|ಡಾ| ರೋಶನ್ ಡಿಸೋಜಾ ಅವರು ರಿಚಾರ್ಡ್ ದಾಂತಿ ಪಾಂಬೂರು ಅವರು ಬರೆದ 'ಧೀಶಕ್ತಿ: ಶಿಕ್ಷಣ, ಸಾಮಾಜಿಕ ಕ್ಷೇತ್ರದ ಮೇರುವ್ಯಕ್ತಿ ಆರ್.ಎಸ್. ಬೆಳ್ಳೆ' ಕೃತಿಯನ್ನು ಬಿಡುಗಡೆಗೊಳಿಸಿದರು.
ನಿವೃತ್ತ ಮುಖ್ಯಶಿಕ್ಷಕ ರವೀಂದ್ರ ಪಡುಬೆಳ್ಳೆ, ನಿವೃತ್ತ ಶಿಕ್ಷಕ ರಿಚಾರ್ಡ್ ಸಲ್ಡಾನ್ಹಾ ಅವರಿಗೆ ಆರ್.ಎಸ್. ಬೆಳ್ಳೆ ಸ್ಮಾರಕ ಪುರಸ್ಕಾರವನ್ನು ಮೂಡುಬೆಳ್ಳೆ ಸೈಂಟ್ ಲಾರೆನ್ಸ್ ಚರ್ಚ್‌ನ ಮಾಜಿ ಉಪಾಧ್ಯಕ್ಷ, ಬೆಳ್ಳೆ ಸೊಸೈಟಿ ನಿರ್ದೇಶಕರಾದ ವಿನ್ಸೆಂಟ್ ಫೆರ್ನಾಂಡಿಸ್ ಅವರು ಪ್ರದಾನ ಮಾಡಿದರು. 

ಬೆಳ್ಳೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸುಧಾಕರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಬೆಳ್ಳೆ ಸೊಸೈಟಿ ನಿರ್ದೇಶಕ ಬೆಳ್ಳೆ ಪಠೇಲ್‌ಮನೆ ದಯಾನಂದ ಶೆಟ್ಟಿ, ದ.ಸಂ.ಸ. ಅಂಬೇಡ್ಕರ್ ವಾದ ಕಾಪು ತಾಲೂಕು ಶಾಖೆಯ ಸಂಘಟನಾ ಸಂಚಾಲಕ ಕೃಷ್ಣ ಮೂಡುಬೆಳ್ಳೆ, ಸಿ.ಎ. ಸ್ಟೀವನ್ ಮೆಂಡೋನ್ಸಾ, ಗಣೇಶ್ ತಂತ್ರಿ, ಆಲ್ಫೋನ್ಸ್ ಕೆ. ಆಳ್ವಾ, ಸ್ಯಾಮ್ಸನ್ ನೊರೋನ್ಹಾ, ಮುರಳೀಧರ ಸಾಮಗ ಉಪಸ್ಥಿತರಿದ್ದರು.

ಸಾಮಾಜಿಕ ಕಾರ್ಯಕರ್ತ ಶ್ರೀರಾಮ ದಿವಾಣ ಕೃತಿ ಪರಿಚಯ ಮಾಡಿದರು. ಸಂಘಟಕ ರಿಚಾರ್ಡ್ ದಾಂತಿ ಸ್ವಾಗತಿಸಿದರು. ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ನಿರೂಪಿಸಿ ವಂದಿಸಿದರು.

ಕಾಪು ವಿದ್ಯಾನಿಕೇತನ್ ಪಬ್ಲಿಕ್ ಶಾಲೆ : 33ನೇ ಶಾಲಾ ವಾರ್ಷಿಕೋತ್ಸವ ವಿದ್ಯೋತ್ಸವ ಸಂಪನ್ನ

Thumbnail
Posted On: 22 Dec 2025, 09:56 AM

ಕಲಿಕೆಯಲ್ಲಿ ಜಾತಿ ಮುಖ್ಯವಲ್ಲ. ಗುರುಗಳು ಮುಖ್ಯ : ಚಲನಚಿತ್ರ ನಟ ಅರವಿಂದ ಬೋಳಾರ್ 

ಕಾಪು : ಕಲಿಕೆಯಲ್ಲಿ ಜಾತಿ ಮುಖ್ಯವಲ್ಲ. ಗುರುಗಳು ಮುಖ್ಯ. ಸಣ್ಣವರಿರುವಾಗಲೇ ಪ್ರತಿಭೆಯನ್ನು ಗುರುತಿಸಿ ಪೋಷಿಸಿದ್ದಲ್ಲಿ ದೊಡ್ಡವರಾದಾಗ ಸಾಧಕರಾಗಲು ಸಾಧ್ಯ ಎಂದು ಚಲನಚಿತ್ರ ನಟ ಅರವಿಂದ ಬೋಳಾರ್ ಹೇಳಿದರು‌.
ಅವರು ವಿದ್ಯಾನಿಕೇತನ್ ಪಬ್ಲಿಕ್ ಶಾಲೆ ಕಾಪು  ಇದರ 33ನೇ ಶಾಲಾ ವಾರ್ಷಿಕೋತ್ಸವ  ವಿದ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಶಾಲೆಯ ಶಿಕ್ಷಕರ ಬೈಗುಳವು ಮುಂದೆ ಪ್ರತಿಭಾ ಕಾರ್ಯಕ್ರಮದಲ್ಲಿ ಪ್ರಥಮ ಬಹುಮಾನ ಪಡೆದುಕೊಳ್ಳಲು ಪ್ರೇರೆಪಿಸಿದ ಕ್ಷಣವನ್ನು ನೆನಪಿಸಿಕೊಂಡರು. 

ಶ್ರೀ ಭಗವತಿ ಕ್ಷೇತ್ರ ಸಸಿಹಿತ್ಲು ಇಲ್ಲಿನ ಅನುವಂಶಿಕ ಆಡಳಿತ ಮೊಕ್ತೇಸರರಾದ
ಶ್ರೀನಿವಾಸ ಯಾನೆ ಅಪ್ಪು ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿ, ಶುಭ ಹಾರೈಸಿದರು.

ನ್ಯಾಯವಾದಿ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಸಂತಸದೊಂದಿಗೆ ಕಲಿಕೆ ಸಾಗಬೇಕು. ಮಕ್ಕಳನ್ನು ಅವಮಾನ ಮಾಡದೆ, ಅವರ ಕಲಿಕೆಗೆ ಪ್ರೋತ್ಸಾಹದಾತರಾಗಬೇಕು.
ಕೆ.ಪಿ ಆಚಾರ್ಯರ ದಿಟ್ಟತನದಿಂದ ಮೂಡಿದ ಸಂಸ್ಥೆ ವಿದ್ಯಾನಿಕೇತನವಾಗಿದೆ.

ವಿದ್ಯಾರತ್ನ ಪ್ರಶಸ್ತಿ/ ಬಹುಮಾನ ವಿತರಣೆ : ಕಾಪುವಿನ ಚಿತ್ರಕಲಾ ಪ್ರತಿಭೆ ಕುಮಾರಿ ರಕ್ಷಾ ಆರ್ ಪೂಜಾರಿಯವರಿಗೆ ವಿದ್ಯಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಲಿಕೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಮಣಿಪಾಲ ಜ್ಞಾನಸುಧ ಕಾಲೇಜಿನ ಪ್ರಾಂಶುಪಾಲರಾದ ಗಣೇಶ್ ಶೆಟ್ಟಿ, ಶ್ರೀ ಗುರು ತಿಲಕನಾಥ ಸ್ವಾಮಿ ಕ್ಷೇತ್ರ ಮುಳಿಹಿತ್ಲು ಇದರ ಆಡಳಿತ ಮೊಕ್ತೇಸರ ಉಮಾನಾಥ ಕಾಪು, ಪತ್ರಕರ್ತರಾದ ರಾಕೇಶ್ ಕುಂಜೂರು, ಹಳೆ ವಿದ್ಯಾರ್ಥಿ ಸಕ್ಷತ್ ಶೆಟ್ಟಿ, ಚಿತ್ರಕಲಾವಿದೆ 
ರಕ್ಷಾ ಆರ್ ಪೂಜಾರಿ, ಸಂಚಾಲಕರಾದ ಕೆ.ಪಿ.ಆಚಾರ್ಯ, ಸಹ ಮ್ಯಾನೇಜಿಂಗ್ ಟ್ರಸ್ಟಿ ಶ್ವೇತಾ ಆಚಾರ್ಯ, ಪ್ರಾಂಶುಪಾಲರಾದ ಸಾಕ್ಷತ್ ಯುಕೆ, ಉಪ ಪ್ರಾಂಶುಪಾಲೆ ನಿಶ್ಮಿತ ಸನಿಲ್, ಕ್ಯಾಂಪಸ್ ಮ್ಯಾನೇಜರ್ ರಾಜೇಶ್ ವೈ, ಕಾರ್ಯಕ್ರಮ ಸಂಚಾಲಕರಾದ ಶೋಭಾ, ಆಶಿತಾ ಉಪಸ್ಥಿತರಿದ್ದರು.

ಆಶಿತಾ ಸ್ವಾಗತಿಸಿದರು. ಪ್ರಾಂಶುಪಾಲರಾದ ಸಾಕ್ಷತ್ ಯುಕೆ ವರದಿ ವಾಚಿಸಿದರು. ಶಿಕ್ಷಕಿಯರಾದ ಶೋಭಾ, ಆಶಿತಾ ಬಹುಮಾನಿತರ ಪಟ್ಟಿ ವಾಚಿಸಿದರು.
ವಿದ್ಯಾರ್ಥಿಗಳಾದ ಸಾತ್ವಿಕಾ ಮತ್ತು ರಾನಿಯಾ ಕಾರ್ಯಕ್ರಮ ನಿರೂಪಿಸಿದರು.

 

 

 

ಕಾಪು : 18 ಲಕ್ಷ ರೂಪಾಯಿ ವೆಚ್ಚದ ಕಾಲು ಸಂಕ ನಿರ್ಮಾಣಕ್ಕೆ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಗುದ್ದಲಿ ಪೂಜೆ

Thumbnail
Posted On: 21 Dec 2025, 03:05 PM

ಕಾಪು: ವಿಧಾನಸಭಾ ಕ್ಷೇತ್ರದ ಇನ್ನಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಾಂಗಾಳ ತುಂಗೇರ್ ಬೈಲು ಬಳಿ ಕಾಲು ಸಂಕ ನಿರ್ಮಾಣಕ್ಕೆ 18 ಲಕ್ಷ ರೂಪಾಯಿ ಅನುದಾನದ ಮಂಜೂರಾಗಿದ್ದು, ಇದರ ಗುದ್ದಲಿ ಪೂಜೆಯನ್ನು ಭಾನುವಾರ ಕಾಪು  ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಇನ್ನಂಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಾಲಿನಿ ಶೆಟ್ಟಿ, ಉಪಾಧ್ಯಕ್ಷರಾದ ಸುರೇಖಾ ಶೆಟ್ಟಿ, ಸದಸ್ಯರಾದ ದಿವೇಶ್ ಶೆಟ್ಟಿ, ಸವಿತಾ ಶೆಟ್ಟಿ, ಶಕ್ತಿ ಕೇಂದ್ರದ ಪ್ರವೀಣ್ ಶೆಟ್ಟಿ ಪಾಂಗಾಳ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಚಂದ್ರಕಲಾ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

ಜ. 3 -10 : 26ನೇ ವರ್ಷದ ಕಳತ್ತೂರು ಕುಕ್ಕುಂಜದ ಅಯ್ಯಪ್ಪ ಶಿಬಿರದ ಕಾರ್ಯಕ್ರಮ

Thumbnail
Posted On: 21 Dec 2025, 09:23 AM

ಕಾಪು : ತಾಲೂಕಿನ ಕಳತ್ತೂರು ಕುಕ್ಕುಂಜದ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದ (ರಿ.)ಇದರ 26 ನೇ ವರ್ಷದ ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಪೂಜೆ ಪ್ರಯುಕ್ತ ಜನವರಿ 3 ರಂದು ಸಂಜೆ 7.30 ಕ್ಕೆ ಶ್ರೀ ಅಯ್ಯಪ್ಪ ಸ್ವಾಮಿಯ ದೀಪೋತ್ಸವ, ಜನವರಿ 10 ರಂದು ಬೆಳಿಗ್ಗೆ 11.30 ಕ್ಕೆ ಸರಿಯಾಗಿ ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಪೂಜೆ, ಮಧ್ಯಾಹ್ನ 12.30 ರಿಂದ ಮಹಾ ಅನ್ನಸಂತರ್ಪಣೆ  ಹಾಗೂ ಅಂದು ರಾತ್ರಿ  8 ರಿಂದ ಮೆಲೋಡಿ ಮ್ಯೂಸಿಕಲ್ ನಿಟ್ಟೆ  "ಕಲಾರತ್ನ' ಪ್ರದೀಪ್ ಆಚಾರ್ಯ ತಂಡದಿಂದ ಭಕ್ತಿ ಗಾನಮೃತ ಕಾರ್ಯಕ್ರಮ ಜರಗಲಿದೆ.

ಈ ಎಲ್ಲಾ ಕಾರ್ಯಕ್ರಮಕ್ಕೆ ತಾವೆಲ್ಲರೂ ಆಗಮಿಸಿ  ಶ್ರೀ ದೇವರ ಕೃಪೆಗೆ ಪಾತ್ರರಾಗ ಬೇಕಾಗಿ ಅಯ್ಯಪ್ಪ ಭಕ್ತವೃಂದ (ರಿ.)ಕುಕ್ಕುಂಜ  ಪ್ರಕಟಣೆಯಲ್ಲಿ ತಿಳಿಸಿದೆ.

ಕರುನಾಡ ಸುವರ್ಣ ರಾಜ್ಯೋತ್ಸವ ಪ್ರಶಸ್ತಿಗೆ ಸಮಾಜ ಸೇವಕ ಡಾ. ಫಾರೂಕ್ ಚಂದ್ರನಗರ ಆಯ್ಕೆ

Thumbnail
Posted On: 21 Dec 2025, 09:15 AM

ಕಾಪು : ಅನ್ನ ಪೂರ್ಣೇಶ್ವರಿ ಹ್ಯೂಮಾನಿಟಿ ಫೌಂಡೇಶನ್ (ರಿ.) ಹಾಗೂ ವಿಶ್ವಕರ್ಮ ಅಭಿವೃದ್ಧಿ ಫೌಂಡೇಶನ್ (ರಿ.) ಬೆಂಗಳೂರು ವತಿಯಿಂದ ವಿಶ್ವ ಮಾನವ ದಿನಾಚರಣೆಯ ಕಾರ್ಯಕ್ರಮದಲ್ಲಿ ಅತ್ಯುತ್ತಮ ಸಮಾಜ ಸೇವೆಗಾಗಿ ಕೊಡಲ್ಪಡುವ ರಾಜ್ಯ ಮಟ್ಟದ ಕರುನಾಡ ಸುವರ್ಣ ರಾಜ್ಯೋತ್ಸವ ಪ್ರಶಸ್ತಿಗೆ ಕಾಪುವಿನ ಸಮಾಜ ಸೇವಕ ಬಟರ್ ಫ್ಲೈ ಗೆಸ್ಟ್ ಹೌಸ್ & ಪಾರ್ಟಿ ಹಾಲ್ ಇದರ ಆಡಳಿತ ನಿರ್ದೇಶಕರಾದ ಡಾ.ಫಾರೂಕ್ ಚಂದ್ರನಗರ ಆಯ್ಕೆಯಾಗಿದ್ದಾರೆಂದು ಅನ್ನ ಪೂರ್ಣೇಶ್ವರಿ ಹ್ಯೂಮಾನಿಟಿ ಫೌಂಡೇಶನ್ ಅಧ್ಯಕ್ಷರಾದ ಡಾ.ಮಹಾಂತೇಶ್ ಎಸ್ ಕಡಲಗಿ ಹಾಗೂ ವಿಶ್ವಕರ್ಮ ಅಭಿವೃದ್ಧಿ ಫೌಂಡೇಶನ್ ಅಧ್ಯಕ್ಷರಾದ ನಿತ್ಯ ಎಸ್.ಆಚಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿಸೆಂಬರ್ 28 ರವೀಂದ್ರ ಕಲಾಕ್ಷೇತ್ರ ನಯನ ಸಭಾಂಗಣ ಕನ್ನಡ ಭವನ ಬೆಂಗಳೂರಿನಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಬಂಟಕಲ್ಲು ಶಾಲಾ ಶತ ಸಂಭ್ರಮ : ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ - ಕ್ರೀಡೋತ್ಸವ ಸಂಪನ್ನ

Thumbnail
Posted On: 20 Dec 2025, 07:42 PM

ಶಿರ್ವ : ಬಂಟಕಲ್ಲು ಶ್ರೀದುರ್ಗಾಪರಮೇಶ್ವರೀ ಅನುದಾನಿತ ಹಿ.ಪ್ರಾ.ಶಾಲೆಯ ಶತಮಾನೋತ್ಸವ ಸಂಭ್ರಮದ ಪ್ರಯುಕ್ತ  ಶಾಲಾ ಶತಮಾನೋತ್ಸವ ಸಮಿತಿಯ ನೇತೃತ್ವದಲ್ಲಿ  ಶನಿವಾರ "ಶಾಲಾ ಹಳೆವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ- ಕ್ರೀಡೋತ್ಸವ" ಕಾರ್ಯಕ್ರಮ ಶತಮಾನೋತ್ಸವ ವೇದಿಕೆಯಲ್ಲಿ ಉದ್ಘಾಟನೆಗೊಂಡಿತು. ಶಾಲಾ ಹಿರಿಯ ಹಳೆವಿದ್ಯಾರ್ಥಿ,ಉದ್ಯಮಿ ಲೂವಿಸ್ ಮಾರ್ಟಿಸ್ ಬಂಟಕಲ್ಲು ಇವರು ದೀಪ ಪ್ರಜ್ವಲನದ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು.

   ಶಾಲಾ ಆವರಣದ ದ್ವಾರವನ್ನು ದಿ.ವಿಲಿಯಮ್ ಪಿಂಟೊ, ಎಮಿಲಿಯಾ ಪಿಂಟೊ ಸ್ಮರಣಾರ್ಥ ನೀಡಿದ ದಾನಿ ಎವಿಟಾ ಪಿಂಟೊ ಪೊದಮಲೆ ಇವರು ಉದ್ಘಾಟಿಸಿದರು. 

ಶಾಲಾ ಮುಖ್ಯೋಪಾಧ್ಯಾಯರ ನವೀಕೃತ ಕಾರ್ಯಾಲಯವನ್ನು ಶಾಲಾ ಹಳೆವಿದ್ಯಾರ್ಥಿನಿ, ಅನಿವಾಸಿ ಭಾರತೀಯ ವೆರೋನಿಕಾ ಕಸ್ತಲಿನೊ ಉದ್ಘಾಟಿಸಿದರು. ಶಾಲೆ ಹಳೆ ವಿದ್ಯಾರ್ಥಿನಿ ಶಾರದಾ ಶರ್ಮಾ ಬಂಟಕಲ್ಲು ಇವರು ಕ್ರೀಡಾಕೂಟವನ್ನು ಬೆಲೂನುಗಳನ್ನು ಆಕಾಶಕ್ಕೆ ಹಾರಿಸುವ ಮೂಲಕ ಚಾಲನೆ ನೀಡಿದರು.

    ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ದಾನಿಗಳಾದ ಉದ್ಯಮಿ ರಾಮಚಂದ್ರ ನಾಯಕ್ ಪಡುಬೆಳ್ಳೆ, ಶಾಲಾ ಹಳೆವಿದ್ಯಾರ್ಥಿ ಅನಿವಾಸಿ ಉದ್ಯಮಿ ರತ್ನಾಕರ ಶೆಟ್ಟಿ ಮಾಣಿಪಾಡಿ, ಮುಂಬಯಿ ಉದ್ಯಮಿ ಜನಾರ್ದನ ಆಚಾರ್ಯ ಬಂಟಕಲ್ಲು, ನಿವೃತ್ತ ಅಂಚೆ ಸಹಾಯಕ ಭಾಸ್ಕರ ಶೆಟ್ಟಿ ಸಡಂಬೈಲು, ಬಂಟಕಲ್ಲು ದೇವಳದ ಆಡಳಿತ ಮೊಕ್ತೇಸರ ಜಯರಾಮ ಪ್ರಭು ಗಂಪದಬೈಲು, ಬಂಟಕಲ್ಲು ಬಬ್ಬುಸ್ವಾಮಿ ದೈವಸ್ಥಾನದ ಗುರಿಕಾರ ಶಂಕರ ಪದಕಣ್ಣಾಯ, ಶಾಲಾ ಸಂಚಾಲಕ ರಾಮದಾಸ್ ಪ್ರಭು, ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಶಶಿಧರ ವಾಗ್ಲೆ, ಶಾಲಾ ಮುಖ್ಯ ಶಿಕ್ಷಕಿ ಸಂಗೀತಾ ಆರ್ ಪಾಟ್ಕರ್ ಉಪಸ್ಥಿತರಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಮಾಧವ ಕಾಮತ್ ವಹಿಸಿದ್ದರು.

 ಕಾರ್ಯದರ್ಶಿ ಕೆ.ಆರ್.ಪಾಟ್ಕರ್ ಶತಮಾನೋತ್ಸವ ಸಮಿತಿಯ ಆಶಯ, ಈವರೆಗಿನ ಅಭಿವೃದ್ಧಿ ಕಾರ್ಯಗಳು, ಭವಿಷ್ಯದ ಯೋಜನೆಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.  ಸಮಿತಿಯ ಪದಾಧಿಕಾರಿ ದೇವದಾಸ್ ಪಾಟ್ಕರ್ ಮುದರಂಗಡಿ ನಿರೂಪಿಸಿ, ವಂದಿಸಿದರು. ಶಿಕ್ಷಕಿ ವಿನಯಾ ಆಚಾರ್ಯ ಪ್ರಾರ್ಥಿಸಿದರು.

  ಶಾಲಾ ನಿವೃತ್ತ ಶಿಕ್ಷಕರೊಂದಿಗೆ ಹಳೆವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮದ ವೇದಿಕೆಯಲ್ಲಿ ನಿವೃತ್ತ ಮುಖ್ಯ ಶಿಕ್ಷಕರುಗಳಾದ ಎನ್.ರಾಧಾಕೃಷ್ಣ ಪ್ರಭು, ಜಯಂತಿ,  ಸಹಶಿಕ್ಷಕರುಗಳಾದ ಬಿ.ಪುಂಡಲೀಕ ಮರಾಠೆ, ಸುಬ್ರಹ್ಮಣ್ಯ ನಾಯಕ್, ಹಿಲ್ಡಾ ಸಲ್ಡಾನ್ನ ಭಾಗವಹಿಸಿದ್ದರು. ವಿದ್ಯಾರ್ಥಿಗಳು ಅಂದಿನ ಕಾಲದ ಅವಿಸ್ಮರಣೀಯ ಘಟನೆಗಳನ್ನು ಮೆಲುಕು ಹಾಕಿ ಸಂಭ್ರಮಿಸಿದರು. ಕ್ರೀಡಾಕೂಟದ ನಿರ್ವಹಣೆಯನ್ನು ದೈಹಿಕ ಶಿಕ್ಷಣ ಶಿಕ್ಷಕರಾದ ಪರಶುರಾಮ ಪ್ರಭು ಪಂಜಿಮಾರು ಕೋಟೆ ನೆರವೇರಿಸಿದರು. 

  ಕಾರ್ಯಕ್ರಮದಲ್ಲಿ ವಾರ್ಷಿಕ ಪಬ್ಲಿಕ್ ಪರೀಕ್ಷೆಯಲ್ಲಿ ಶಾಲೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿಗಳನ್ನು ಹಾಗೂ 60 ವರ್ಷ ಮೇಲ್ಪಟ್ಟ ಹಿರಿಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶಾಲಾ ಹಳೆವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.