Updated News From Kaup

ಕಾಪು : ಇನ್ನಂಜೆ ಮಹಿಳಾ ಮಂಡಳಿಯ ಪದಗ್ರಹಣ

Thumbnail
Posted On: 23 Nov 2025, 04:46 PM

ಕಾಪು : ಇನ್ನಂಜೆ ಮಹಿಳಾ ಮಂಡಳಿ (ರಿ.) ಇನ್ನಂಜೆ ಇದರ ಪದಗ್ರಹಣ ಸಮಾರಂಭವು ಇನ್ನಂಜೆ ಎಸ್. ವಿ. ಎಸ್. ಶಾಲೆಯ ದಾಸ ಭವನ ಇಲ್ಲಿ ಜರಗಿತು. ಇನ್ನಂಜೆ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಸುಶೀಲ ಅಮೀನ್ ಕಾರ್ಯಕ್ರಮ ಉದ್ಘಾಟಿಸಿದರು. ಅತಿಥಿಗಳಾಗಿ ಇನ್ನಂಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಾಲಿನಿ ಶೆಟ್ಟಿ, ಕಟಪಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಆಗ್ಯೇಷ್ ಡೇಸಾ, ಇನ್ನಂಜೆ ಮಹಿಳಾ ಮಂಡಳಿ ಗೌರವಾಧ್ಯಕ್ಷರಾದ ಪುಷ್ಪ ರವೀಂದ್ರ ಶೆಟ್ಟಿ ಭಾಗವಹಿಸಿದ್ದರು. ಅಧ್ಯಕ್ಷತೆಯನ್ನು ಇನ್ನಂಜೆ ಮಹಿಳಾ ಮಂಡಳಿ ಅಧ್ಯಕ್ಷರಾದ ಶ್ವೇತಾ ಎಲ್. ಶೆಟ್ಟಿ ವಹಿಸಿದ್ದರು. ಈ ಸಂದರ್ಭ ಇನ್ನಂಜೆ ಮಹಿಳಾ ಮಂಡಳಿಯ ಕಾರ್ಯದರ್ಶಿ ಸಿಲ್ವಿಯ ವಿನಿಫ್ರೆಡ್ ಕ್ಯಾಸ್ತಲಿನೋ, ಕೋಶಾಧಿಕಾರಿ ಪೂರ್ಣಿಮ ಸುರೇಶ್, ನಿಯೋಜಿತ ಅಧ್ಯಕ್ಷರಾದ ಸುನಂದನ್ ಕುಮಾರ್, ನಿಯೋಜಿತ ಕಾರ್ಯದರ್ಶಿ ಸೀಮಾ ಮಾರ್ಗರೇಟ್ ಡಿ'ಸೋಜ, ನಿಯೋಜಿತ ಕೋಶಾಧಿಕಾರಿ ಅನಿತಾ ಮಥಾಯಸ್, ಕಾರ್ಯಕಾರಿ ಸಮಿತಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಕಾಪು : ಯುವ ಉದ್ಯಮಿ ಹರೀಶ್ ಕಮಲಾಕ್ಷ ನಾಯಕ್ ರಿಗೆ ಅತ್ಯುತ್ತಮ ಉದ್ಯಮಿ ಪ್ರಶಸ್ತಿ

Thumbnail
Posted On: 22 Nov 2025, 04:19 PM

ಕಾಪು : ಕೌನ್ಸಿಲ್ ಆಫ್ ಸ್ಟೇಟ್ ಇಂಡಸ್ಟ್ರಿಯಲ್ ಡೆವಲಪ್ ಮೆಂಟ್ ಆ್ಯಂಡ್ ಇನ್ವೆಸ್ಟ್‌ಮೆಂಟ್ ಕಾರ್ಪೋರೇಶನ್ಸ್ ಆಫ್ ಇಂಡಿಯಾ (COSIDICI) ವತಿಯಿಂದ ಪ್ರತಿ ವರ್ಷ ನೀಡಲಾಗುವ 11 ನೇ ರಾಷ್ಟ್ರೀಯ 'ಅತ್ಯುತ್ತಮ ಉದ್ಯಮಿ' ಪ್ರಶಸ್ತಿಗೆ ಕಾಪುವಿನ ಯುವ ಉದ್ಯಮಿ ಹರೀಶ್ ಕಮಲಾಕ್ಷ ನಾಯಕ್ ಆಯ್ಕೆಯಾಗಿದ್ದಾರೆ. ಎಂ.ಎಸ್.ಎಂ.ಇ. ಕ್ಷೇತ್ರದಲ್ಲಿ ಶ್ರೇಷ್ಠ ಸಾಧನೆ, ನವೀನತೆ ಹಾಗೂ ಉದ್ಯಮ ಶೀಲತೆಯನ್ನು ರಾಷ್ಟ್ರಮಟ್ಟದಲ್ಲಿ ಗುರುತಿಸುವ ಉದ್ದೇಶದಿಂದ ದೇಶದ ವಿವಿಧ ರಾಜ್ಯಗಳ ಉದ್ಯಮಿಗಳಿಗೆ ನೀಡ ಲಾಗುವ ಈ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಸಮಾರಂಭವು ಡಿ. 5ರಂದು ವಿಶಾಖಪಟ್ಟಣದಲ್ಲಿ ನಡೆ ಯಲಿದೆ. ಕರ್ನಾಟಕ ರಾಜ್ಯ ಹಣಕಾಸು ನಿಗಮ ಬೆಂಗಳೂರು ಇವರ ಶಿಫಾರಸ್ಸಿನ ಮೇರೆಗೆ ಹರೀಶ್ ನಾಯಕ್ ಅವರನ್ನು ರಾಷ್ಟ್ರೀಯ ಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಸಿಒಎಸ್‌ಐಡಿಐಸಿಐ ಆಯೋಜನಾ ಸಮಿತಿಯು ಅನುಮೋದಿಸಿದೆ. ಹರೀಶ್ ನಾಯಕ್ ಸಹಿತ ರಾಜ್ಯದ ಐದು ಮಂದಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಕೌನ್ಸಿಲ್ ಆಫ್ ಸ್ಟೇಟ್ ಇಂಡಸ್ಟ್ರಿಯಲ್ ಡೆವಲಪ್ ಮೆಂಟ್ ಆ್ಯಂಡ್ ಇನ್ವೆಸ್ಟ್‌ಮೆಂಟ್ ಕಾರ್ಪೋರೇಶನ್ಸ್ ಆಫ್ ಇಂಡಿಯಾ ಸಂಸ್ಥೆಯ ಮಹಾನಿರ್ದೇಶಕ ಹನ್ಸ್ ರಾಜ್ ವರ್ಮಾ ಮಾಹಿತಿ ನೀಡಿದ್ದಾರೆ.

ಪಡುಕುತ್ಯಾರು : ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘದ ಆರನೇ ವಾರ್ಷಿಕ ಮಹಾಸಭೆ

Thumbnail
Posted On: 20 Nov 2025, 07:11 PM

ಕಾಪು : ಪಡುಕುತ್ಯಾರು, ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘದ ಆರನೇ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ನಾಗೇಶ ಆರ್ ಆಚಾರ್ಯರವರ ಅಧ್ಯಕ್ಷತೆಯಲ್ಲಿ ದುರ್ಗಾ ಮಂದಿರದಲ್ಲಿ ಜರಗಿತು. ಮುಖ್ಯ ಅತಿಥಿ ಸಮಾಜ ಸೇವಕರಾದ ಶಶಿಧರ್ ಪುರೋಹಿತರು ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘವು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಂಘವು ಉತ್ತರೋತರ ಅಭಿವೃದ್ದಿ ಹೊಂದಲಿ ಹಾಗೂ ಮಂದಿರದ ಜೀರ್ಣೋದ್ಧಾರ ಕೆಲಸ ಶ್ರೀಘ್ರ ಪ್ರಾರಂಭವಾಗಲಿ ಎಂದು ಹಾರೈಸಿದರು. ಪ್ರಾಸ್ತಾವಿಕವಾಗಿ ಗೌರವಾಧ್ಯಕ್ಷರಾದ ಹರಿಶ್ಚಂದ್ರ ಎಚ್ ಆಚಾರ್ಯ ಮತ್ತು ಸದಾಶಿವ ವಿ ಆಚಾರ್ಯ ರವರು ಮಾತನಾಡಿದರು. ಸನ್ಮಾನ/ಪ್ರತಿಭಾ ಪುರಸ್ಕಾರ/ಬಹುಮಾನ ವಿತರಣೆ : ಸಮಾಜ ಸೇವಕ ಶಶಿಧರ ಆಚಾರ್ಯ, ರಂಗಭೂಮಿ ಕಲಾವಿದ, ಚಲನಚಿತ್ರ ನಟ ಹಾಗೂ ಸಂಘದ ಪದಾಧಿಕಾರಿ ಶಶಿರಾಜ ಪಿ ಆಚಾರ್ಯ ರವರನ್ನು ಸನ್ಮಾನಿಸಲಾಯಿತು. ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ಮತ್ತು ಕಲಾ ನೈಪುಣ್ಯತೆ ಹೊಂದಿದ ಸಮಾಜದ ಆರು ವಿದ್ಯಾರ್ಥಿಗಳನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕ್ರೀಡೆ, ರಂಗೋಲಿ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮುಂದಿನ 3 ವರುಷದ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಮಾಡಲಾಯಿತು. ಕೋಶಾಧಿಕಾರಿಯಾದ ಗಂಗಾಧರ ಎಸ್ ಆಚಾರ್ಯರವರು ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಮುಂಬೈ ಕಮಿಟಿ ಅಧ್ಯಕ್ಷರಾದ ಮಾಧವ ಎಸ್ ಆಚಾರ್ಯ, ಕಾರ್ಯಾಧ್ಯಕ್ಷರಾದ ಜಯರಾಮ ಆಚಾರ್ಯ, ಗೌರವ ಸಲಹೆಗಾರರು, ಮೊಕ್ತೆಶ್ವರರಾದ ಪ್ರಕಾಶ್ ಎಸ್ ಆಚಾರ್ಯ ಮತ್ತು ಚಂದ್ರಯ್ಯ ಪಿ ಆಚಾರ್ಯ, ಉಪಾಧ್ಯಕ್ಷರಾದ ಕೆ ವಿವೇಕಾನಂದ ಆಚಾರ್ಯ, ಪದಾಧಿಕಾರಿಗಳಾದ ಪ್ರವೀಣ ಎಸ್ ಆಚಾರ್ಯ, ಪ್ರಕಾಶ್ ಎಸ್ ಆಚಾರ್ಯ, ಉದಯಕುಮಾರ್, ಹೇಮಾವತಿ ಪಿ ಆಚಾರ್ಯ, ಪ್ರಸನ್ನ ಎಸ್ ಆಚಾರ್ಯ, ಸುರೇಂದ್ರ ಎ ಆಚಾರ್ಯರವರು ಉಪಸ್ಥಿತರಿದ್ದರು. ಸುರೇಶ್ ಆರ್ ಆಚಾರ್ಯ ಸ್ವಾಗತಿಸಿದರು. ಕಾರ್ಯದರ್ಶಿ ದಿನೇಶ್ ಎಸ್ ಆಚಾರ್ಯ ವರದಿ ಮಂಡಿಸಿದರು. ಶ್ರೀಲತಾ ಪ್ರಸಾದ ಆಚಾರ್ಯ, ಶಶಿರಾಜ್ ಆಚಾರ್ಯ ಮತ್ತು ಗಂಗಾಧರ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿ, ಗಂಗಾಧರ ಎಸ್ ಆಚಾರ್ಯ ವಂದಿಸಿದರು.

ಕಳತ್ತೂರು ಶ್ರೀ ಬ್ರಹ್ಮಬೈದೆರುಗಳ ಗರಡಿಯ ಜೀರ್ಣೋದ್ದಾರಕ್ಕೆ ಧನ ಸಹಾಯ

Thumbnail
Posted On: 16 Nov 2025, 08:17 PM

ಕಾಪು : ಕಳತ್ತೂರು ಟೈಗರ್ಸ್ ಕಳತ್ತೂರು ಇವರ ವತಿಯಿಂದ ಕಳತ್ತೂರು ಬ್ರಹ್ಮ ಬೈದೇರುಗಳ ಗರಡಿಯ ಸಮಗ್ರ ಜೀರ್ಣೋದ್ದಾರಕ್ಕೆ ಸುಮಾರು 2 ಲಕ್ಷ ರೂಪಾಯಿಯ ಧನ ಸಹಾಯ ಗರಡಿ ಪ್ರಮುಖರ ಸಮ್ಮುಖದಲ್ಲಿ ನೀಡಲಾಯಿತು. ಈ ಸಂದರ್ಭದಲ್ಲಿ ಕಳತ್ತೂರು ಟೈಗರ್ ಪದಾಧಿಕಾರಿಗಳು, ಗರಡಿಯ ಪ್ರಮುಖರು ಉಪಸ್ಥಿತರಿದ್ದರು.

ಡಿ 12 : ಕಾಪುವಿನಲ್ಲಿ ಸಮಾಜರತ್ನ ದಿ.ಕೆ. ಲೀಲಾಧರ ಶೆಟ್ಟಿ ಮತ್ತು ದಿ. ವಸುಂಧರಾ ಎಲ್ ಶೆಟ್ಟಿ ಪುಣ್ಯಸ್ಮರಣೆ

Thumbnail
Posted On: 16 Nov 2025, 08:12 PM

ಕಾಪು : ಸಮಾಜ ಸೇವಕ ಸೂರಿ ಶೆಟ್ಟಿ ಕಾಪು ಹಾಗೂ ಸರ್ವ ಧರ್ಮದ ಬಂಧುಗಳ ಸಹಕಾರದೊಂದಿಗೆ ಸಮಾಜ ರತ್ನ ಕೆ. ದಿ. ಲೀಲಾಧರ ಶೆಟ್ಟಿ ಹಾಗೂ ಅವರ ಪತ್ನಿ ದಿ. ವಸುಂದರಾ ಶೆಟ್ಟಿ ಅವರ ದ್ವಿತೀಯ ವರ್ಷದ ಸಂಸ್ಮರಣೆಯೊಂದಿಗೆ ಡಿ. 12 ರಂದು ಮಜೂರು ಸರ್ಕಲ್ ಬಳಿಯ ಲೀಲಾಧರ ಶೆಟ್ಟಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ, ನಂತರ ಕಾಪು ಶ್ರೀ ವೀರಭದ್ರ ದೇವಸ್ಥಾನದಲ್ಲಿ ಶ್ರೀ ದೇವರಿಗೆ ಅವರ ಹೆಸರಿನಲ್ಲಿ ಪೂಜೆ, ನಂತರ ಸಭಾಂಗಣದಲ್ಲಿ ಉಡುಪಿ ಜಿಲ್ಲಾ ಆಸ್ಪತ್ರೆಯ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರ, ಗಣ್ಯರ ಉಪಸ್ಥಿತಿಯಲ್ಲಿ ಎಸ್ ಎಸ್ಎಲ್ ಸಿ ಪರೀಕ್ಷೆಯಲ್ಲಿ 2024-2025 ಸಾಲಿನಲ್ಲಿ (ಅನುದಾನಿತ ಶಾಲೆ )ಹೆಚ್ಚು ಅಂಕ ಗಳಿಸಿದ 10 ವಿದ್ಯಾರ್ಥಿಗಳಿಗೆ ನಗದಿನೊಂದಿಗೆ ಸನ್ಮಾನ, ಹಾಗೂ 3 ಮಂದಿ ಮಾಜಿ ಸೈನಿಕರನ್ನು ಗುರುತಿಸಿ ಸನ್ಮಾನಿಸಲಾಗುವುದು ಎಂದು ಸಮಾಜ ರತ್ನ ಕೆ. ಲೀಲಾಧರ ಶೆಟ್ಟಿ ಅಭಿಮಾನಿ ಬಳಗ ಕಾಪು ಇವರ ಪ್ರಕಟಣೆಯು ತಿಳಿಸಿದೆ.

ಕುಲಾಲ ಸಂಘ ಮೂಡುಬಿದಿರೆ ವತಿಯಿಂದ ತುರ್ತು ಆರೋಗ್ಯ ನಿಧಿ ಹಸ್ತಾಂತರ

Thumbnail
Posted On: 09 Nov 2025, 07:31 PM

ಮೂಡುಬಿದಿರೆ : ಇತ್ತೀಚೆಗೆ ನಡೆದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೂಡುಬಿದಿರೆ ಪಡುಮಾರ್ನಾಡ್ ಶ್ಯಾಮ ಅಂಚನ್ ಅವರ ಪುತ್ರ ಸಾತ್ವಿಕ್ ಕುಲಾಲ್ ನ ಚಿಕಿತ್ಸಾ ವೆಚ್ಚಕ್ಕಾಗಿ ಕುಲಾಲ ಸಂಘ (ರಿ) ಮೂಡುಬಿದಿರೆ ವತಿಯಿಂದ ತುರ್ತು ಆರೋಗ್ಯ ನಿಧಿ ಯೋಜನೆಯಡಿ ದಾನಿಗಳಿಂದ ಸಂಗ್ರಹಿಸಿದ ರೂ 21,000 ಮೊತ್ತವನ್ನು ಫಲಾನುಭಾವಿಯ ಮನೆಯಲ್ಲಿ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಸತೀಶ್ ಕುಲಾಲ್ ಏರಿಮಾರು, ಕಾರ್ಯದರ್ಶಿ ವಿಶ್ವನಾಥ್ ಕುಲಾಲ್, ಮಹಿಳಾ ಘಟಕದ ಕಾರ್ಯದರ್ಶಿ ಮಮತಾ ಕುಲಾಲ್, ಸದಸ್ಯರುಗಳಾದ ವೆಂಕಟೇಶ್ ಬಂಗೇರ, ವಿಜಯ್ ಕುಮಾರ್, ಸೀತರಾಮ ಕುಲಾಲ್, ಸಂಪಾ ಸದಾಶಿವ ಮೂಲ್ಯ ಉಪಸ್ಥಿತರಿದ್ದರು. ಮನವಿಗೆ ಸಕರಾತ್ಮಕವಾಗಿ ಸ್ಪಂದಿಸಿ ಧನ ಸಹಾಯವಿತ್ತ ಮಹಾದಾನಿಗಳಿಗೆ ಕುಲಾಲ ಸಂಘ (ರಿ) ಮೂಡುಬಿದಿರೆ ವತಿಯಿಂದ ಕೃತಜ್ಞತೆ ಸಲ್ಲಿಸಿದ್ದಾರೆ.

ನ. 23 ರಂದು ಮಂಗಳೂರಿನ ಮಂಗಳಾದೇವಿಯಲ್ಲಿ ಭವ್ಯ ಕುಲಾಲ ಭವನ ಉದ್ಘಾಟನೆ

Thumbnail
Posted On: 09 Nov 2025, 06:56 AM

ಮಂಗಳೂರು : ಕುಲಾಲ ಸಂಘ ಮುಂಬಯಿ (ರಿ.) ಇದರ ಬಹು ಕೋಟಿ ವೆಚ್ಚದ ನೂತನ ಕುಲಾಲ ಭವನ ಮಂಗಳೂರಿನಲ್ಲಿ ನವೆಂಬರ್ 23ರಂದು ಮಂಗಳಾದೇವಿ ದೇವಸ್ಥಾನ ಬಳಿ ಅದ್ದೂರಿಯಾಗಿ ಲೋಕಾರ್ಪಣೆಗೊಳ್ಳಲಿದೆ. ನ.21 ರಂದು ಸಂಜೆ 6ರಿಂದ ವಾಸ್ತು ಪೂಜೆ, ಬಲಿ ಪೂಜೆ ಹಾಗೂ ಸುದರ್ಶನ ಹೋಮ ನ. 22ರಂದು ಬೆಳಿಗ್ಗೆ 9ರಿಂದ ಗಣಹೋಮ, 11.30ರಿಂದ ಸತ್ಯನಾರಾಯಣ ಪೂಜೆ , ನವೆಂಬರ್ 23ರಂದು ಬೆಳಿಗ್ಗೆ 8.30ರಿಂದ ಮಂಗಳಾದೇವಿ ದೇವಸ್ಥಾನದಿಂದ ಶೋಭಾಯಾತ್ರೆ ಹೊರಟು ಒಡಿಯೂರು ಶ್ರೀ ಹಾಗೂ ಮಾಣಿಲ ಶ್ರೀಗಳ ಶುಭಾಶೀರ್ವಾದದೊಂದಿಗೆ 9.30ಕ್ಕೆ ಕುಲಾಲ ಭವನದ ಉದ್ಘಾಟನೆಯಾಗಲಿದೆ. ಇದರೊಂದಿಗೆ ಶ್ರೀಮತಿ ಸುಮಿತ್ರ ರಾಜು ಸಾಲ್ಯಾನ್ ಆಡಿಟೋರಿಯಂ, ಶ್ರೀಮತಿ ಯಶೋದಾ ಬಾಬು ಸಾಲ್ಯಾನ್ ಬಂಟ್ವಾಳ ವೇದಿಕೆ, ಶ್ರೀಮತಿ ಸರಸ್ವತಿ ವಿಶ್ವನಾಥ ಬಂಗೇರ ಕುಳಾಯಿ (ಬಾಲ್ಕನಿ), ಶ್ರೀಮತಿ ನಮೃತಾ ಜಗದೀಶ್ ಬಂಜನ್ ಬ್ಯಾಂಕ್ವೆಟ್ ಹಾಲ್ ಶ್ರೀಮತಿ ಸಾವಿತ್ರಿ ಪಿ.ಕೆ.ಸಾಲ್ಯಾನ್ ವೇದಿಕೆ ಹಾಗೂ ಶ್ರೀಮತಿ ವಸಂತಿ ಸದಾಶಿವ ಬಂಜನ್ ಪುಣೆ ಆಡಳಿತ ಕಚೇರಿ ಹಾಗೂ ಡಾ. ಸುರೇಖಾ ಆರ್ ಕುಲಾಲ್ ಮುಂಬಯಿ ಆಡಳಿತ ಕಚೇರಿ ಉದ್ಘಾಟನೆಗೊಳ್ಳಲಿದೆ. ಮಧ್ಯಾಹ್ನ 1.30ರಿಂದ 2.30ರವರೆಗೆ ಮನೋರಂಜನಾ ಕಾರ್ಯಕ್ರಮ, ಸಂಜೆ 3ರಿಂದ ಗೌರವ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ವಿವಿಧ ಕ್ಷೇತ್ರದ ಗಣ್ಯರು, ದೇಶ ವಿದೇಶದ ಕುಲಾಲ ಸಮುದಾಯದ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

ಕಾಪುವಿನ ಮಹಾಬಲ ಮಾಲ್ ನಲ್ಲಿ ಅಂಗಡಿ ಕೋಣೆ ಮಾರಾಟ/ ಬಾಡಿಗೆಗೆ ಲಭ್ಯ

Thumbnail
Posted On: 08 Nov 2025, 10:04 AM

ಕಾಪು : ಇಲ್ಲಿನ ಹೃದಯ ಭಾಗದಲ್ಲಿರುವ ಮಹಾಬಲ ಮಾಲ್ ನ ಮೊದಲ ಮಹಡಿಯಲ್ಲಿ 825 Sq Ft ಅಂಗಡಿ ಕೋಣೆ ಮಾರಾಟಕ್ಕಿದೆ ಅಥವಾ ಬಾಡಿಗೆಗೆ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ : 9900250666 9481269415

ಹೆಜಮಾಡಿಯಲ್ಲಿ ನ.15 ರಂದು ಜರಗಲಿರುವ ಕಾಪು ತಾ| 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ

Thumbnail
Posted On: 02 Nov 2025, 11:33 AM

ಪಡುಬಿದ್ರಿ : ಕಾಪು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಇದರ ವತಿಯಿಂದ ನ.15ರಂದು ಹೆಜಮಾಡಿ ಬಿಲ್ಲವರ ಸಂಘದ ಸಭಾಭವನದಲ್ಲಿ ಹಿರಿಯ ಸಾಹಿತಿ ಫಕೀರ್ ಮುಹಮ್ಮದ್ ಕಟ್ಪಾಡಿ ಸರ್ವಾಧ್ಯಕ್ಷತೆಯಲ್ಲಿ ಜರಗಲಿರುವ 7 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆಯು ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಜರಗಿತು. ಕ್ಷೇತ್ರದ ಅರ್ಚಕರಾದ ಶ್ರೀನಿವಾಸ್ ಆಚಾರ್ಯರವರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಉಡುಪಿ ಜಿಲ್ಲಾ ಕ.ಸಾ.ಪ. ವತಿಯಿಂದ ಸಮ್ಮೇಳನದ ಕಾರ್ಯಾಧ್ಯಕ್ಷರಾದ ದಯಾನಂದ ಹೆಜಮಾಡಿ ಮತ್ತು ದೇವಳದ ಅರ್ಚಕರನ್ನು ಗೌರವಿಸಲಾಯಿತು. ಈ ಸಂದರ್ಭ ಹೆಜಮಾಡಿ ಗ್ರಾ.ಪಂ.ಅಧ್ಯಕ್ಷರಾದ ರೇಷ್ಮಾ ಎ.ಮೆಂಡನ್, ಕಾಪು ತಾಲ್ಲೂಕು ಕ.ಸಾ.ಪ. ಅಧ್ಯಕ್ಷರಾದ ಬಿ.ಪುಂಡಲೀಕ ಮರಾಠೆ, ಉಡುಪಿ ಜಿಲ್ಲಾ ಕ.ಸಾ.ಪ. ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ನರಸಿಂಹ ಮೂರ್ತಿ ರಾವ್, ಸಮ್ಮೇಳನದ ಕಾರ್ಯಾಧ್ಯಕ್ಷರಾದ ದಯಾನಂದ ಹೆಜಮಾಡಿ, ಉಪಾಧ್ಯಕ್ಷರುಗಳಾದ ಸಂಜೀವ ಟಿ., ಹರೀಶ್ ಕುಮಾರ್ ಹೆಜಮಾಡಿ, ಪ್ರಧಾನ ಕಾರ್ಯದರ್ಶಿ ಪ್ರಾಣೇಶ್ ಹೆಜಮಾಡಿ, ಜೊತೆ ಕಾರ್ಯದರ್ಶಿ ಪವಿತ್ರ ಗಿರೀಶ್, ಕಾಪು ಕ.ಸಾ.ಪ. ಗೌರವ ಕಾರ್ಯದರ್ಶಿ ಅಶ್ವಿನ್ ಲಾರೆನ್ಸ್, ಕಾಪು ಕ.ಸಾ.ಪ. ಸಮಿತಿಯ ವಿದ್ಯಾ ಅಮ್ಮಣ್ಣಾಯ, ಮಧುಕರ್ ಎಸ್ ಯು ಕಲ್ಯ, ದೇವದಾಸ್ ಪಾಟ್ಕರ್, ದೀಪಕ್ ಬೀರ, ಸಮ್ಮೇಳನದ ಸಮಿತಿಯ ಭರತ್ ಕಾಂಚನ್, ಸನಾ ಇಬ್ರಾಹಿಂ, ದೀಪಕ್ ಕೋಟ್ಯಾನ್, ಚಂದ್ರಹಾಸ್ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

ಕಾಪು ದಂಡತೀರ್ಥ ಶಿಕ್ಷಣ ಸಂಸ್ಥೆ : ಕನ್ನಡ ರಾಜ್ಯೋತ್ಸವ ಆಚರಣೆ

Thumbnail
Posted On: 01 Nov 2025, 06:45 PM

ಕಾಪು : ಇಲ್ಲಿನ ದಂಡತೀರ್ಥ ವಿದ್ಯಾಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವದ ಆಚರಣೆಯನ್ನು ಅತ್ಯಂತ ಸರಳವಾಗಿ ಆಚರಿಸಲಾಯಿತು. ಸಂಸ್ಥೆಯ ಪ್ರಾಂಶುಪಾಲ ನೀಲಾನಂದ ನಾಯ್ಕ ಇವರು ಧ್ವಜಾರೋಹಣ ನೆರವೇರಿಸಿ, ಕನ್ನಡದ ಆಚರಣೆ ಕೇವಲ ಒಂದು ದಿನಕ್ಕೆ ಸೀಮಿತ ವಾಗಿರದೆ ಬದುಕಿನ ಎಲ್ಲ ಸಮಯಗಳಲ್ಲಿ ಒಂದಾಗಿ ಆಯೋಜಿಸುವಂತಾಗಬೇಕು ಎಂಬ ಸಂದೇಶ ನೀಡಿದರು. ಸಮಾರಂಭದಲ್ಲಿ ಪ್ರಾಥಮಿಕ ವಿಭಾಗದ ಮುಖ್ಯಸ್ಥ ಗೇಬ್ರಿಯಲ್ ಮಸ್ಕರೇನ್ಹಸ್, ಕನ್ನಡ ಮಾಧ್ಯಮ ವಿಭಾಗದ ಮುಖ್ಯಸ್ಥೆ ಕೃಪಾ ಅಮ್ಮನ್ನ, ಶಿಕ್ಷಕ ಪ್ರಭಾಕರ್ ಶೆಟ್ಟಿ, ಶಿಕ್ಷಕ - ಶಿಕ್ಷಕೇತರ ವೃಂದದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.