Updated News From Kaup
ಜನವರಿ 20 : 31 ನೇ ವರ್ಷದ ಅಡ್ವೆ ನಂದಿಕೂರು ಹೊನಲು ಬೆಳಕಿನ ಕೋಟಿ ಚೆನ್ನಯ ಕಂಬಳ
Posted On: 19-01-2024 06:19AM
ನಂದಿಕೂರು : ಪಕ್ಷ, ಜಾತಿ, ಧರ್ಮಾತೀತವಾಗಿ ನಡೆಯುವ ಕಂಬಳವು ಜನ ಮಾನಸದಲ್ಲಿ ಮುಟ್ಟುವಂತಾಗಬೇಕು. ಸುಮಾರು ವರ್ಷಗಳಿಂದ ನಡೆದು ಬಂದ ಅಡ್ವೆ ನಂದಿಕೂರು ಕಂಬಳ ಹೊಸ ಪ್ರಯತ್ನದ ಪ್ರಯೋಗಗಳಿಗೆ ಸಾಕ್ಷಿಯಾಗಿದೆ. ಪೂಜ್ಯ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದದೊಂದಿಗೆ ನಡೆಯಲಿದ್ದು ಅನೇಕ ಗಣ್ಯರ ಭಾಗವಹಿಸುವಿಕೆ, ಸನ್ಮಾನ ಇತ್ಯಾದಿ ಕಾರ್ಯಕ್ರಮಗಳು ಜರಗಲಿವೆ. ಜನವರಿ 20, ಶನಿವಾರ ಪೂರ್ವಾಹ್ನ ಗಂಟೆ 8ಕ್ಕೆ ಉದ್ಘಾಟನೆಗೊಳ್ಳಲಿದೆ ಎಂದು ಕಾಪು ಶಾಸಕರು, ಅಡ್ವೆ ನಂದಿಕೂರು ಕಂಬಳದ ಗೌರವ ಅಧ್ಯಕ್ಷರಾದ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು. ಅವರು ಅಡ್ವೆ ನಂದಿಕೂರು ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿಯ ವತಿಯಿಂದ ಜನವರಿ 20, ಶನಿವಾರ ಜರಗಲಿರುವ 31 ನೇ ವರ್ಷದ ಹೊನಲು ಬೆಳಕಿನ ಕಂಬಳೋತ್ಸವದ ಬಗ್ಗೆ ನಂದಿಕೂರಿನಲ್ಲಿ ಜರಗಿದ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು. ತುಳು ಭಾಷೆಯ ಬೆಳವಣಿಗೆಗೆ ಕಂಬಳವೂ ಸಹಕಾರಿಯಾಗಿದ್ದು ಇನ್ನು ಮುಂದೆಯೂ ನಡೆಯಬೇಕಾಗಿದೆ ಎಂದರು.
ರಾಮನ ಆಲಯಕ್ಕೆ ಕಾಯುತ್ತಿದೆ ರಾಂಪುರ
Posted On: 17-01-2024 09:36AM
ಅಯೋಧ್ಯೆ ಭವ್ಯ ರಾಮಮಂದಿರ ಲೋಕಾರ್ಪಣೆಗೊಳ್ಳುವ ಈ ಸುಸಂದರ್ಭದಲ್ಲಿ ಎಲ್ಲೆಡೆ ರಾಮನ ಧ್ಯಾನ ನಡೆಯುತ್ತಿದೆ. ಇಡೀ ಭಾರತ ದೇಶವೇ ಶ್ರೀ ರಾಮನ ಅಯೋಧ್ಯಾ ಆಗಮನಕ್ಕೆ ಕಾಯುತ್ತಿದೆ.
ಜನವರಿ 21 : ದೇವರ ಚಿತ್ರ ಬಿಡಿಸುವ ಸ್ಪರ್ಧೆ
Posted On: 16-01-2024 05:40PM
ಪಡುಬಿದ್ರಿ : ಅಯೋಧ್ಯೆಯಲ್ಲಿ ಶ್ರೀ ರಾಮ ದೇವರ ಮಂದಿರ ಉದ್ಘಾಟನೆ ಮತ್ತು ಶ್ರೀ ರಾಮನ ವಿಗ್ರಹದ ಪ್ರತಿಷ್ಠಾಪನೆಯ ನಿಮಿತ್ತ ದಿ| ಉಗ್ಗು ದೇವಿ ನಾರಾಯಣ ಇವರ ಮಕ್ಕಳು ಮತ್ತು ಗೆಳೆಯರ ಬಳಗ, ಮುಂಬಯಿ ಇವರ ಜಂಟಿ ಆಶ್ರಯದಲ್ಲಿ ಜನವರಿ 21, ಆದಿತ್ಯವಾರ ಬೆಳಿಗ್ಗೆ ಗಂಟೆ 10ರಿಂದ ಪಡುಬಿದ್ರಿ ಬೀಚ್ ರೋಡ್ ನಲ್ಲಿರುವ ಸಾಗರ ವಿದ್ಯಾಮಂದಿರ ಸಭಾಗೃಹದಲ್ಲಿ ದೇವರ ಚಿತ್ರ ಬಿಡಿಸುವ ಸ್ಪರ್ಧೆ ಆಯೋಜಿಸಲಾಗಿದೆ.
ಕಟಪಾಡಿ : ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ ಚಾಲನೆ
Posted On: 16-01-2024 05:02PM
ಕಟಪಾಡಿ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ಯೋಜನೆಗಳ ಮಾಹಿತಿಯೊಂದಿಗೆ ಭಾರತದಾದ್ಯಂತ ನವೆಂಬರ್ 15 ರಿಂದ ಜನವರಿ 26ರವರೆಗೆ ನಡೆಯುತ್ತಿರುವ ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ ಮಂಗಳವಾರದಂದು ಕಟಪಾಡಿ ಗ್ರಾಮ ಪಂಚಾಯತ್ ಬಳಿ ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಚಾಲನೆ ನೀಡಿದರು.
ಉಚ್ಚಿಲ : ಶ್ರೀ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಪುತ್ತಿಗೆ ಮಠಾಧೀಶರ ಭೇಟಿ
Posted On: 15-01-2024 07:51PM
ಉಚ್ಚಿಲ : ಇತ್ತೀಚೆಗೆ ನವೀಕೃತಗೊಂಡ ಮೊಗವೀರ ಮಹಾಜನ ಸಂಘ ಸಂಚಾಲಿತ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೆಂದ್ರ ತೀರ್ಥ ಸ್ವಾಮೀಜಿ ಹಾಗೂ ಕಿರಿಯ ಸ್ವಾಮೀಜಿಗಳಾದ ಶ್ರೀ ಸುಶೀಂದ್ರ ತೀರ್ಥ ಸ್ವಾಮೀಜಿಯವರು ಆಗಮಿಸಿ, ಶ್ರೀ ಮಹಾಲಕ್ಷ್ಮಿಗೆ ಮತ್ತು ಸ್ವಾಮೀಜಿಯವರ ಪಟ್ಟದ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಉಡುಪಿ : ವೈದ್ಯಕೀಯ ಪ್ರತಿನಿಧಿಗಳ ಧನ್ವಂತರಿ ಸ್ವಸಹಾಯ ಸಂಘ - ಉಚಿತ ಮಜ್ಜಿಗೆ ವಿತರಣೆ
Posted On: 15-01-2024 07:32PM
ಉಡುಪಿ : ವೈದ್ಯಕೀಯ ಪ್ರತಿನಿಧಿಗಳ ಧನ್ವಂತರಿ ಸ್ವಸಹಾಯ ಸಂಘ ಇದರ ವತಿಯಿಂದ ಬಾಲಾಜಿ ರಾಘವೇಂದ್ರ ಆಚಾರ್ಯ ಹೆಚ್.ಪಿ ಗ್ಯಾಸ್ ಇವರ ಪ್ರಾಯೋಜಕತ್ವದಲ್ಲಿ ಮಕರ ಸಂಕ್ರಾಂತಿಯ ಹಗಲು ಉತ್ಸವ ಕಾರ್ಯಕ್ರಮದಲ್ಲಿ ಉಚಿತ ಮಜ್ಜಿಗೆ ವಿತರಣಾ ಕಾರ್ಯಕ್ರಮ ನಡೆಯಿತು.
ಕಾರ್ಕಳ : ಕರಾಟೆಯಲ್ಲಿ ನೊಬೆಲ್ ವಿಶ್ವದಾಖಲೆ ಬರೆದ ನಿಟ್ಟೆಯ ಅವಳಿ ಸಹೋದರರು
Posted On: 15-01-2024 07:18PM
ಕಾರ್ಕಳ : ನಿಟ್ಟೆಯ ಅವಳಿ ಸಹೋದರರಾದ ಅನುಷ್ ಮತ್ತು ಆಯುಷ್ ಕರಾಟೆಯಲ್ಲಿ ಮತ್ತೊಂದು ದಾಖಲೆ ನಿರ್ಮಿಸುವ ಮೂಲಕ ನೊಬೆಲ್ ವರ್ಲ್ಡ್ ರೆಕಾಡ್ಸ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ಕಾಪು : ನೂತನ ಇನ್ನಂಜೆ ಮಹಿಳಾ ಮಂಡಳಿಯ ಉದ್ಘಾಟನೆ
Posted On: 15-01-2024 11:11AM
ಕಾಪು : ನೂತನ ಇನ್ನಂಜೆ ಮಹಿಳಾ ಮಂಡಳಿಯನ್ನು ಕಾಪು ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಎಸ್ವಿಎಚ್ ಶಾಲೆಯ ದಾಸಭವನದಲ್ಲಿ ಜನವರಿ 13 ರಂದು ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು ಮಾತೆಯರು ತಮ್ಮ ಮಕ್ಕಳಿಗೆ ನೀತಿ ಕಥೆಗಳನ್ನು ಹೇಳಿ ಆದರ್ಶಗಳನ್ನು ಮೈಗೂಡಿಸುವಂತೆ ಮಾಡಿ ತಾಯಿಯ ಮಮತೆ ಸಮಾಜವನ್ನೇ ತಿದ್ದುವಂತಾಗಬೇಕು ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ ಮಹಿಳೆಯು ಎಲ್ಲಾ ಕ್ಷೇತ್ರಗಳಲ್ಲಿ ಮುಂದೆ ಬರುವ ಅವಕಾಶವಿದ್ದು ಸರಕಾರವು ಕೂಡ ಈ ನಿಟ್ಟಿನಲ್ಲಿ ಮಹಿಳೆಯರಿಗೆ ಪ್ರಯೋಜನವಾಗುವ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದು ಇದರ ಸದುಪಯೋಗ ಎಲ್ಲಾ ಮಹಿಳೆಯರು ಪಡೆದು ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಭಾಗವಹಿಸಿ ಮುಂದೆ ಬರಬೇಕೆಂದು ತಿಳಿಸಿದರು.
ಉಡುಪಿ : ಜೇಸಿಐ ಉಡುಪಿ ಸಿಟಿ - ಸಂಚಲನ ಪ್ರೇರಣಾ ತರಬೇತಿ ಕಾಯಾ೯ಗಾರ
Posted On: 14-01-2024 05:43PM
ಉಡುಪಿ : ಜೇಸಿಐ ಉಡುಪಿ ಸಿಟಿ ಇದರ ವತಿಯಿಂದ ನೂತನ ಸದಸ್ಯರಿಗಾಗಿ ಸಂಚಲನ ಪ್ರೇರಣಾ ತರಬೇತಿ ಕಾಯಾ೯ಗಾರ ಜನವರಿ 14ರಂದು ಹಿಂದಿ ಭವನದಲ್ಲಿ ನಡೆಯಿತು.
ಪಲಿಮಾರು : ಹೊೖಗೆ ಫ್ರೆಂಡ್ಸ್ ವತಿಯಿಂದ ಬೃಹತ್ ಸ್ವಚ್ಛತಾ ಕಾರ್ಯಕ್ರಮ
Posted On: 14-01-2024 05:38PM
ಪಲಿಮಾರು : ಹೊೖಗೆ ಫ್ರೆಂಡ್ಸ್ ಹೊೖಗೆ (ರಿ.) ಪಲಿಮಾರು ಸಂಸ್ಥೆಯ ವತಿಯಿಂದ ನಮ್ಮ ಪರಿಸರದ ಸಂರಕ್ಷಣೆ ನಮ್ಮದೇ ಹೊಣೆ ಎಂಬ ಕಾರ್ಯಕ್ರಮದಡಿ ಬೃಹತ್ ಸ್ವಚ್ಛತಾ ಕಾರ್ಯಕ್ರಮವನ್ನು ಪಲಿಮಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆರಂದಿ ಕಟ್ಟ ಹೊಳೆಯಲ್ಲಿ ನಡೆಸಲಾಯಿತು.
