Updated News From Kaup

ಪಡುಬಿದ್ರಿ : ಸುಝ್ಲಾನ್ ಕಾಲೋನಿಯಲ್ಲಿ ಉಚಿತ ವೈದ್ಯಕೀಯ ಶಿಬಿರ

Thumbnail
Posted On: 31 Dec 2025, 09:59 AM

ಪಡುಬಿದ್ರಿ: ಬೆಂಗಳೂರಿನ ಅಖಿಲ ಕರ್ನಾಟಕ ಅಭಿವೃದ್ಧಿ ಪ್ರತಿಷ್ಠಾನ,  ಮಂಗಳೂರಿನ ಕಣಚೂರು ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಇವರ ಸಹಭಾಗಿತ್ವ ದಲ್ಲಿ ಶನಿವಾರ ಇಲ್ಲಿನ ಸುಸ್ಲಾನ್ ಕಾಲೋನಿಯಲ್ಲಿ
"ಆರೋಗ್ಯವೇ ಭಾಗ್ಯ" ಉಚಿತ ವೈದ್ಯಕೀಯ ಶಿಬಿರ ನಡೆಯಿತು.

ವೈದ್ಯಕೀಯ ಶಿಬಿರವನ್ನು ಉದ್ಘಾಟಿಸಿದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಶಶಿಕಾಂತ್ ಪಡುಬಿದ್ರಿ ಮಾತನಾಡಿ,
ಇಂತಹ ವೈದ್ಯಕೀಯ ಶಿಬಿರಗಳಿಂದ ಕಾಯಿಲೆಗಳ ಪತ್ತೆ ಆಗುವುದರಿಂದ ಸಕಾಲದಲ್ಲಿ ಚಿಕಿತ್ಸೆ ನೀಡಲು ಸಹಾಯಕ ಆಗುತ್ತದೆ. ಸಂಘಟನೆಯ ಕಾರ್ಯ ಶ್ಲಾಘನೀಯ ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎನ್ಎಸ್ ಸಿಡಿಎಫ್ ಅಧ್ಯಕ್ಷ ಗಂಗಾಧರ್ ಗಾಂಧಿ ವಹಿಸಿದ್ದರು.

ಕಣಚೂರು ಆಯುರ್ವೇದ ಕಾಲೇಜು ವೈದ್ಯಕೀಯಸಲಹೆಗಾರ ಡಾ. ಸುರೇಶ್ ನೆಗಳಗುಳಿ, ಕಣಚೂರು ಆಸ್ಪತ್ರೆಯ
ವೈದ್ಯಕೀಯ ಅಧೀಕ್ಷಕ ಡಾ. ಕಾರ್ತಿಕೇಯ ಪ್ರಸಾದ್, ಸಹಾಯಕ ಪ್ರಾಧ್ಯಾಪಕ ಡಾ. ಶ್ರೀರಾಮ್ ಕಣಚೂರು ಆಸ್ಪತ್ರೆ, ಸಮಾಜ ಸೇವಕ ರಂಜನ್ ಕುಮಾರ್, ಸುಝ್ಲಾನ್ ಕಾಲೊನಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಜಮಾಲ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಅಖಿಲ ಕರ್ನಾಟಕ ಅಭಿವೃದ್ಧಿ ಪ್ರತಿಷ್ಠಾನ ಅಧ್ಯಕ್ಷೆ ಸೌಮ್ಯ ಶೆಟ್ಟಿ, ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು.

ಅಖಿಲ  ಕರ್ನಾಟಕ ಅಭಿವೃದ್ಧಿ ಪ್ರತಿಷ್ಠಾನದ   ಕಾರ್ಯದರ್ಶಿ ಅನುಪಮಾ ರಾವ್, ನಿರ್ದೇಶಕಿ ಶಿಲ್ಪಾ ಜೋಸೆಫ್ ಮತ್ತಿತರರು ಉಪಸ್ಥಿತರಿದ್ದರು. 

ಶರಣ್ಯ ಬೆಳುವಾಯಿ ಕಾರ್ಯಕ್ರಮ ನಿರೂಪಿಸಿದರು.

ಬಳಿಕ ನಡೆದ ವೈದ್ಯಕೀಯ ಶಿಬಿರದಲ್ಲಿ  60 ಕ್ಕೂ ಹೆಚ್ಚು ಮಂದಿ ವೈದ್ಯಕೀಯ ಸಲಹೆ ಮತ್ತು ಔಷಧಿ ಪಡೆದರು.

ಒತ್ತಡದಿಂದ ಮುಕ್ತವಾಗಲು ಭಗವದ್ಗೀತೆಯೇ ಪರಿಹಾರ : ಕೇಮಾರು ಶ್ರೀ ಶ್ರೀ ಈಶಾ ವಿಠಲದಾಸ ಸ್ವಾಮೀಜಿ

Thumbnail
Posted On: 31 Dec 2025, 09:50 AM

ಪಡುಬಿದ್ರಿ : ಇಂದಿನ ಯುವ ಜನತೆಗೆ ಸಂಸ್ಕಾರ ನೀಡುವಂತಹ ಜಾಗೃತಿ ಕಾರ್ಯಕ್ರಮಗಳು ಅತ್ಯಗತ್ಯವಿದೆ. ಸಾಮಾಜಿಕ ಜಾಲತಾಣದಲ್ಲಿ ಮೋಸ ವಂಚನೆಗಳು ಜಾಸ್ತಿಯಾಗಿ ಯುವ ಜನತೆ ಬಲಿಯಾಗುತೀರುವುದು ಖೇದಕರ. ಆಧುನಿಕ ಜೀವನ ಶೈಲಿಯ ಒತ್ತಡ ನಿವಾರಣೆಗೆ ಭಗವದ್ಗೀತೆಯೇ ಪರಿಹಾರ‌. ಕ್ಷೇತ್ರದ ವತಿಯಿಂದ ಭಗವದ್ಗೀತೆಯನ್ನು  ಭಕ್ತಾದಿಗಳಿಗೆ ಹಂಚಿರುವುದು  ಶ್ಲಾಘನೀಯ ಎಂದು ಕೇಮಾರು ಶ್ರೀ ಶೀ ಈಶಾ ವಿಠಲದಾಸ ಸ್ವಾಮೀಜಿ  ಹೇಳಿದರು
ಅವರು ಪಡುಬಿದ್ರಿ ಅಲಂಗಾರು ಕ್ಷೇತ್ರದ ಶ್ರೀ ಆದಿಶಕ್ತಿ ಅದಿಮಾಯೆ ಸ್ವಾಮಿ ಕೊರಗಜ್ಜ ಕ್ಷೇತ್ರದಲ್ಲಿ ನಡೆದ ಶ್ರೀ ಸತ್ಯನಾರಾಯಣ ಪೂಜೆ ಹಾಗೂ  ಶನಿಪೂಜಾ ಕಾರ್ಯಕ್ರಮದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅಶೀರ್ವಚನ ನೀಡಿ ಮಾತನಾಡಿದರು.

ಧಾರ್ಮಿಕ ಕಾರ್ಯಕ್ರಮವನ್ನು ಕೇವಲ  ಆಚರಣೆಗಳಲ್ಲ. ಅವು ಜೀವನವನ್ನು ಅರ್ಥ ಪೂರ್ಣ ಗೂಳಿಸುವ ಸಾಧನಗಳು ಅವು ನಮ್ಮ ಅಂತರಿಕ ಶಕ್ತಿಯನ್ನು ಹೆಚ್ಚಿಸಿ, ಸಮಾಜವನ್ನು ಒಗ್ಗೂಡಿಸಿ ನಮ್ಮ ಸಂಸ್ಕ್ರತಿಯನ್ನು ಬೆಳಗಿಸುತ್ತವೆ. ಆದ್ದರಿಂದ ಧಾರ್ಮಿಕ ಕಾರ್ಯಕ್ರಮಗಳ ಮಹತ್ವವನ್ನು ಅರಿತು ಅವುಗಳನ್ನು ಗೌರವಿಸಿ, ಸಕಾರಾತ್ಮಕವಾಗಿ ಅಚರಿಸುವುದು ಪ್ರತಿಯೊಬ್ಬರ ಕರ್ತವ್ಯ ವಾಗಿದೆ ಎಂದು ಪಡುಬಿದ್ರಿ ಬಂಟರ ಸಂಘದ ಮಾಜಿ  ಅಧ್ಯಕ್ಷ ನವೀನಚಂದ್ರ ಜೆ. ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕ್ಷೇತ್ರ ಧರ್ಮದರ್ಶಿ ಸುಧಾಕರ್ ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ರಸ್ತೆ ಅಪಘಾತಕ್ಕೆ ಒಳಗಾದ ರಾಕೇಶ್ ಶೆಟ್ಟಿಗಾರ್  ರವರಿಗೆ ವ್ಯೆದ್ಯಕೀಯ ಸಹಾಯಹಸ್ತ   ನೀಡಲಾಯಿತು.
ಕ್ಷೇತ್ರದ ವತಿಯಿಂದ ಭಕ್ತಾದಿಗಳಿಗೆ ಭಗವದ್ಗೀತೆಯನ್ನು ಹಂಚಲಾಯಿತು.
ಸಮಾಜ ಸೇವಕಿ ಗೀತಾ ಅರುಣ್, ರಂಗಭೂಮಿ ಹಾಗೂ ಸಮಾಜ ಸೇವಕಿ ಯಶೋಧ ಪಡುಬಿದ್ರಿ ಹಾಗೂ ಕನ್ನಡ ಚಲನಚಿತ್ರ ಕಲಾವಿದೆ ಐಶ್ವರ್ಯ ಆಚಾರ್ಯ ರವರನ್ನು ಸನ್ಮಾನಿಸಿ ಗೌರವಿಸಲಾಯಿತು.

 ಈ ಸಂದರ್ಭದಲ್ಲಿ ಪಲ್ಲವಿ ಬಾರ್ ರೆಸ್ಟೋರೆಂಟ್ ಮಾಲಕ ಸಂತೋಷ್ ಕುಮಾರ್ ಶೆಟ್ಟಿ , ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪಡುಹಿತ್ಲು, ಪಡುಬಿದ್ರಿ ಗ್ರಾ‌.ಪಂ ಮಾಜಿ ಉಪಾಧ್ಯಕ್ಷೆ ಯಶೋಧ ಪಡುಬಿದ್ರಿ,  ಓಂಕಾರ ಕಾಸ್ಟೋಮ್ಸ್ & ಕಲಾ ಸಂಗಮದ ಅಡಳಿತ ನಿರ್ದೇಶಕಿ ಗೀತಾ ಅರುಣ್, ನಮ್ಮ ಕುಡ್ಲ ಚಾನಲ್ ನಿರೂಪಕಿ ಡಾ. ಪ್ರಿಯ ಹರೀಶ್ ಶೆಟ್ಟಿ, ಪಡುಬಿದ್ರಿ ಕಾಡಿಪಟ್ನ ಮೊಗವೀರ ಮಹಾಸಭಾದ ಅಧ್ಯಕ್ಷ ಅಶೋಕ್ ಸಾಲ್ಯಾನ್, ಕನ್ನಡ ಚಲನಚಿತ್ರ ನಟಿ ಐಶ್ವರ್ಯ, ಕಾಪು ವಲಯ ಶಬರಿಮಲೆ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ದಿವಾಕರ್ ಶೆಟ್ಟಿ ಮಲ್ಲಾರು ಉಪಸ್ಥಿತರಿದ್ದರು.

 ಸಂತೋಷ್ ಪಡುಬಿದ್ರಿ ಸ್ವಾಗತಿಸಿ ವಂದಿಸಿದರು , ಸುಧಾಕರ್ ಕೆ ಕಾರ್ಯಕ್ರಮ ನಿರೂಪಿಸಿದರು.
    

ಬಿಜೆಪಿಯಲ್ಲಿ ಓರ್ವ ಕಾರ್ಯಕರ್ತನೂ ಅಧಿಕಾರದ ಚುಕ್ಕಾಣಿ ಹಿಡಿಯಬಹುದು : ಆರ್. ಅಶೋಕ್

Thumbnail
Posted On: 30 Dec 2025, 09:53 PM

ಕಾಪು  : ಅಟಲ್ ಬಿಹಾರಿ ವಾಜಪೇಯಿ ಸರಳ ಸಜ್ಜನ ವ್ಯಕ್ತಿಯಾಗಿ ಬಾಳಿದವರು. ಓರ್ವ ಕಾರ್ಯಕರ್ತನೂ ಅಧಿಕಾರದ ಚುಕ್ಕಾಣಿ ಹಿಡಿಯಬಹುದು ಎಂಬುದು ಬಿಜೆಪಿ ಪಕ್ಷದಲ್ಲಿದೆ. ಆದರೆ ಉಳಿದ ಪಕ್ಷಗಳಲ್ಲಿ ಈ ಕ್ರಮವಿಲ್ಲ. ಮೋಸ ಹೇಗೆ ಮಾಡುವುದನ್ನು ಕಾಂಗ್ರೆಸ್ ನಿಂದ  ಕಲಿಯಬೇಕು. 5 ಸಾವಿರ ಕೋಟಿ ಗೃಹಲಕ್ಷ್ಮಿ ಹಣವನ್ನು ಜನರಿಗೆ ಮೋಸ ಮಾಡಲು ನಾವು ಬಿಡುವುದಿಲ್ಲ ಎಂದು‌ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆ‌ರ್. ಅಶೋಕ್ ಹೇಳಿದರು.
ಅವರು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ನೇತೃತ್ವದಲ್ಲಿ ನಡೆದ ಕಾಪು ಕಡಲ ಪರ್ಬ ಕಾರ್ಯಕ್ರಮದಲ್ಲಿ ‌ಮಾತನಾಡಿದರು.
 
ಸತ್ತ ಸರಕಾರ ಕರ್ನಾಟಕದಲ್ಲಿದೆ. ಕರಾವಳಿ ಭಾಗದಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ. 4 ದಿನದ ಚರ್ಚೆ ವ್ಯರ್ಥವಾಗಿದೆ. 4 ಲಕ್ಷ ಕೋಟಿ ಸಾಲದ ಸರಕಾರ ಸಿದ್ದರಾಮಯ್ಯ ಸರಕಾರದ ಸಾಲ. ಸಾಲನೂ ಜನತೆಗೆ ಫ್ರೀ ಭಾಗ್ಯ ಎಂದರು.

ಈ ಸಂದರ್ಭ ಕುದಿ ಶ್ರೀನಿವಾಸ ಭಟ್, ಡಾ.ದೇವದಾಸ, ದೀಕ್ಷಾ ವಿ, ತನುಶ್ರೀ ಪಿತ್ರೋಡಿ, ಡಾ.ಚಂದ್ರಶೇಖರ್, ಡಾ.ನವೀನ್, ಡಾ.ಶಿಲ್ಪ, ಕೃಷ್ಣ ಶೆಟ್ಟಿ, ಉಮಾ ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಧೀಮಂತ ರಾಜಕಾರಣಿ ವಾಜಪೇಯಿ ಅಜಾತ ಶತ್ರುವಾಗಿದ್ದರು ಎಂದರು.

ಶಾಸಕರಾದ ಯಶ್‌ಪಾಲ್ ಎ. ಸುವರ್ಣ, ವಿ. ಸುನಿಲ್ ಕುಮಾರ್, ಕಿರಣ್ ಕೊಡ್ಗಿ, ಧೀರಜ್ ಮುನಿರಾಜು, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ, ಪ್ರಮುಖರಾದ ಸಂದೀಪ್ ರವಿ, ದಿನಕರ ಬಾಬು, ನಿತಿನ್, ರೇಷ್ಮಾ ಶೆಟ್ಟಿ, ಶ್ರೀಕಾಂತ್ ನಾಯಕ್, ಸಂಧ್ಯಾ ರಮೇಶ್, ಶ್ಯಾಮಲಾ ಕುಂದ‌ರ್, ಕುತ್ಯಾರು ನವೀನ್ ಶೆಟ್ಟಿ, ಗೋಪಾಲಕೃಷ್ಣ ರಾವ್, ಶರಣ್ ಕುಮಾ‌ರ್ ಮಟ್ಟು, ಸಂತೋಷ್ ಮೂಡುಬೆಳ್ಳೆ, ಸೋನು ಪಾಂಗಾಳ, ನೀತಾ ಗುರುರಾಜ್, ಪಾರ್ಥಸಾರಥಿ, ಕೃಷ್ಣ ರಾವ್, ಗಾಯತ್ರಿ ಪ್ರಭು ಭಾಗವಹಿಸಿದ್ದರು. 

ಮಂಡಲ ಬಿಜೆಪಿ ಅಧ್ಯಕ್ಷ ಜಿತೇಂದ್ರ ಶೆಟ್ಟಿ ವಂದಿಸಿದರು. ಸತೀಶ್ ಶೆಟ್ಟಿ ಗುಡ್ಡೆಚ್ಚಿ, ಸಂತೋಷ್ ನಂಬಿಯಾರ್ ನಿರೂಪಿಸಿದರು.

ಕಟಪಾಡಿ : ಕುಣಿತ ಭಜನಾ ಸ್ಪರ್ಧೆಯ ಭಜಕರಿಗೆ ಸೀರೆ ವಿತರಣೆ

Thumbnail
Posted On: 29 Dec 2025, 10:41 PM

ಕಟಪಾಡಿ : ಶ್ರೀ ವಿಶ್ವನಾಥ ಕ್ಷೇತ್ರ ಕಟಪಾಡಿ ಯಲ್ಲಿ ಭಾನುವಾರ ಶ್ರೀ ಗುರು ಕುಣಿತ  ಮಹಿಳಾ ತಂಡದ ನೇತೃತ್ವದಲ್ಲಿ ಕುಣಿತ ಭಜನಾ ಸ್ಪರ್ಧಾ ಕಾರ್ಯಕ್ರಮ ಜರಗಿತು.

ಭಾಗವಹಿಸಿದ ಒಟ್ಟು 14 ತಂಡದ ಭಜಕರಿಗೆ ಭಾಗ್ಯಲಕ್ಷ್ಮಿ ಸಿಲ್ಕ್ಸ್ ಮುಲ್ಕಿ ಇದರ ಮಾಲಕರು  ಹಾಗೂ ಅಮ್ಮ ಫೌಂಡೇಶನ ಅಧ್ಯಕ್ಷರಾದ ರಾಜ ಶೇಖರ್ ಕೋಟ್ಯಾನವರ ವತಿಯಿoದ  ಸೀರೆಯನ್ನು ನೀಡಿ ಗೌರವಿಸಲಾಯಿತು.

ಈ ಸಂದರ್ಭ ಶ್ರೀ ಗುರು ಕುಣಿತ  ಮಹಿಳಾ ತಂಡದ ಪ್ರಮುಖರು ಉಪಸ್ಥಿತರಿದ್ದರು.

 

ಅರಸು ಪ್ರಶಸ್ತಿ -2025 ಪುರಸ್ಕೃತರಾದ ಲಚ್ಚಿಲ್ ನಾಗೇಶ್ ಬಂಗೇರ ಉಚ್ಚಿಲ

Thumbnail
Posted On: 29 Dec 2025, 10:31 PM

ಪಡುಬಿದ್ರಿ : ಲಚ್ಚಿಲ್ ನಾಗೇಶ್ ಡಿ. ಬಂಗೇರ ಉಚ್ಚಿಲ ಅವರನ್ನು ಮೂಲ್ಕಿ ಸೀಮೆ ಅರಸರ ಅರಮನೆಯಲ್ಲಿ "ಅರಸು ಪ್ರಶಸ್ತಿ -2025"ನ್ನು ಪ್ರಧಾನಿಸಿ ಗೌರವಿಸಲಾಯಿತು.

ಬ್ಯಾಂಕ್ ಆಫ್ ಇಂಡಿಯಾ ಎಂಪ್ಲಾಯಸ್೯ ಯೂನಿಯನ್ ಇದರ ಕರ್ನಾಟಕ ವಲಯದ ಅಧ್ಯಕ್ಷರಾಗಿ ಸುದೀರ್ಘ ಅವಧಿಯಲ್ಲಿ ಸೇವೆಯನ್ನು ಸಲ್ಲಿಸಿದ್ದರು. ಉಚ್ಚಿಲ ಶ್ರೀ ಮಹಾಲಕ್ಷ್ಮಿ ಆಂಗ್ಲಮಾಧ್ಯಮ ಶಾಲೆ, ಲಚ್ಚಿಲ್ ವಿದ್ಯಾಪ್ರಸಾರ ಸಮಿತಿಯಲ್ಲಿ ತೊಡಗಿಸಿಕೊಂಡು ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಸೇವಕರಾಗಿ ಗುರುತಿಸಿಕೊಂಡಿದ್ದಾರೆ.

ಈ ಸಂದರ್ಭ ಅರಸು ದುಗ್ಗಣ್ಣ ಸಾವಂತರು, ಮಾಜಿ ಸಚಿವ ಅಭಯಚಂದ್ರ ಜೈನ್, ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್, ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು, ಡಾ. ಅಮರಶ್ರೀ ಶೆಟ್ಟಿ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ, ಲೀಲಾಕ್ಷ ಕರ್ಕೇರ, ಬಾಹುಬಲಿ ಪ್ರಸಾದ್, ಗೌತಮ್ ಜೈನ್, ವಸಂತ್ ಬೆರ್ನಾರ್ಡ್, ಉದ್ಯಮಿ ಕನ್ಯಾನ ಸದಾಶಿವ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಶಿರ್ವ : ಎಸ್ ಎಸ್.ಪ್ರಸಾದ್‌ರವರ 4ನೇ ಕೃತಿ ಸಾಯಿ ಕೃಷ್ಣ ಬಿಡುಗಡೆ

Thumbnail
Posted On: 29 Dec 2025, 07:05 PM

ಶಿರ್ವ : ಅತೀ ಶುದ್ಧ ಪ್ರೀತಿ, ಜ್ಞಾನ ವಿಜ್ಞಾನದ ತತ್ವಗಳನ್ನು ಒಳಗೊಂಡ ಸರಳ ಜೀವನ ಮೌಲ್ಯಗಳು, ಚಿಂತನಾಶೀಲ ಸಕಾಲಿಕ ವಿಚಾರಗಳನ್ನು ತಿಳಿಸಿ ಓದುಗರನ್ನು ಸ್ವವಿಮರ್ಶೆಗೆ ಒಳಪಡಿಸುವ ನಿಟ್ಟಿನಲ್ಲಿ ಎಸ್ ಎಸ್.ಪ್ರಸಾದ್‌ರವರ ಸುಪ್ರಭಾತದ ಲೇಖನಗಳು ಮನ ಮುಟ್ಟುವಂತಿವೆ ಎಂದು ಹಿರಿಯ ಆಧ್ಯಾತ್ಮದ ಚಿಂತಕಿ ಬಂಟಕಲ್ಲು ಕೃಷ್ಣಛಾಯಾದ ಪ್ರಫುಲ್ಲಾ ಜಯ ಶೆಟ್ಟಿ ನುಡಿದರು.
ಅವರು ರವಿವಾರ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಾಪು ತಾಲೂಕು ಘಟಕದ ವತಿಯಿಂದ  ಪ್ರಸಾದ್‌ರವರ ನಿವಾಸ "ಅನ್ನಪೂರ್ಣ"ದಲ್ಲಿ ಏರ್ಪಡಿಸಿದ "ಮನೆಯಂಗಳದಲ್ಲಿ ಸಾಹಿತ್ಯ" ಕಾರ್ಯಕ್ರಮದಲ್ಲಿ  ಜಿಲ್ಲಾ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಸತ್ಯಸಾಯಿ ಪ್ರಸಾದ್ ಇವರ ನಾಲ್ಕನೇ ಕೃತಿ"ಸಾಯಿ ಕೃಷ್ಣ" ಇದರ ಬಿಡುಗಡೆಗೊಳಿಸಿ ಮಾತನಾಡಿ ಖುಷಿಯನ್ನು ಹಂಚಿದರೆ ಖುಷಿಯೇ ಹಿಂದಕ್ಕೆ ಬರುತ್ತದೆ. ಇಂತಹ ಅನೇಕ ಕೃತಿಗಳು ಇವರಿಂದ ಮೂಡಿಬರಲಿ ಎಂದು ಹಾರೈಸಿದರು. 

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮಣಿಪಾಲ ರಾಜೀನನಗರ ಸರಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕ ಪಿ.ಬಾಲಕೃಷ್ಣ ಮಾತನಾಡಿ ಪ್ರಸಾದ್‌ರವರ ಕೃತಿಗಳು ನಮ್ಮ ನಡೆ,ನುಡಿಗೆ ದಾರಿದೀಪವಾಗಿದೆ. ಹಿಂದಿನ ಕೃತಿಗಳಾದ ಸಾಯಿ ಸಂದೇಶ,ಸಾಯಿ ಪ್ರಸಾದ, ಸಾಯಿ ತೀರ್ಥ ಕೃತಿಗಳು ಭಾವ ಹಾಗೂ ಭಾವನೆಗಳ ಸಮ್ಮಿಲಿತವಾಗಿವೆ ಎಂದರು.

  ಹಿರಿಯ ಜಾನಪದ ವಿದ್ವಾಂಸರಾದ ಕೆ.ಎಲ್.ಕುಂಡಂತಾಯ ಕಾರ್ಯಕ್ರಮವನ್ನು ದೀಪ ಪ್ರಜ್ವಲನ ಮಾಡಿ ಚಾಲನೆ ನೀಡಿದರು. ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿಗಳನ್ನು ಹಾರೈಸಿ, ಪ್ರಸಾದ್‌ರವರು ಶಿಕ್ಷಕರಾಗಿ ಸಲ್ಲಿಸಿದ ಸೇವೆ ಹಾಗೂ ಸಾಧನೆಗಳ ಪರಿಚಯ ಮಾಡಿದರು. ಈ ಸಂದರ್ಭದಲ್ಲಿ ಪ್ರಫುಲ್ಲಾ ಜಯ ಶೆಟ್ಟಿ ಇವರನ್ನು ಕಸಾಪ ವತಿಯಿಂದ ಸನ್ಮಾನಿಸಲಾಯಿತು. ಕೃತಿ ಲೇಖಕ ಪ್ರಸಾದ್ ಮಾತನಾಡಿ ಸಾಹಿತ್ಯ ರಚನೆಗೆ ಪ್ರೇರಣಾ ಶಕ್ತಿಯಾದ ತಮ್ಮ ಮಾತಾಪಿತರನ್ನು ಸ್ಮರಿಸಿದರು. ಸಹೋದರಿ ಪ್ರೇಮಕಾತಿ ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು.

ಸಮಾರಂಭದ ಅಧ್ಯಕ್ಷತೆಯನ್ನು ಕಾಪು ತಾಲೂಕು ಕಸಾಪ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ವಹಿಸಿದ್ದರು. ವೇದಿಕೆಯಲ್ಲಿ  ಶ್ರೀಕ್ಷೇತ್ರ ಬಂಟಕಲ್ಲು ದೇವಳದ ಮಾಜಿ ಆಡಳಿತ ಮೊಕ್ತೇಸರ ಶಶಿಧರ ವಾಗ್ಲೆ, ಕಸಾಪ ಜಿಲ್ಲಾ ಕೋಶಾಧ್ಯಕ್ಷ ಮನೋಹರ ಪಿ,  ಜಿಲ್ಲಾ ಸಮಿತಿ ಪ್ರತಿನಿಧಿ ಕಟ್ಟಿಂಗೇರಿ ದೇವದಾಸ್ ಹೆಬ್ಬಾರ್, ಬೆಂಗಳೂರು ರಾಜಾಜಿನಗರ ಪ್ರೌಢ ಶಾಲಾ ಮುಖ್ಯ ಶಿಕ್ಷಕ  ಹೆರಾಲ್ಡ್ ಕ್ವಾಡ್ರಸ್, ವೀರಮಾರುತಿ ಕಲಾ ಸಂಘದ ಅಧ್ಯಕ್ಷ ಸುಜಿತ್ ಕುಮಾರ್,ಇಂದಿರಾ ಎಸ್.ಪ್ರಸಾದ್, ರಾಜೀವನಗರ ಹಿ.ಪ್ರಾ ಶಾಲಾ ಮುಖ್ಯ ಶಿಕ್ಷಕ ಕೃಷ್ಣ ನಾಯ್ಕ್, ಮಧುಕರ್ ಎಸ್,ಬಿಳಿಯಾರು ಭಾಸ್ಕರ ಆಚಾರ್ಯ ಉಪಸ್ಥಿತರಿದ್ದರು.
   ಬಂಟಕಲ್ಲು ಬ್ಬುಸ್ವಾಮಿ ದೈವಸ್ಥಾನದ ಗುರಿಕಾರ ಶಂಕರ ಪದಕಣ್ಣಾಯ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕಸಾಪ ಸಂಘಟನಾ ಕಾರ್ಯದರ್ಶಿ ಕೆ.ಆರ್.ಪಾಟ್ಕರ್ ನಿರೂಪಿಸಿದರು. ಕಸಾಪ ಗೌರವ ಕಾರ್ಯದರ್ಶಿ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ಧನ್ಯವಾದವಿತ್ತರು. ಖ್ಯಾತ  ಜಾನಪದ ಕಲಾವಿದ ಡಾ.ಗಣೇಶ್ ಗಂಗೊಳ್ಳಿಯವರಿಂದ ನಾಡಗೀತೆ, ಕನ್ನಡ ಗೀತಾಗಾಯನ ನಡೆಯಿತು.

ಭಾರತೀಯ ಹಿನ್ನೆಲೆ ಗಾಯಕ ಕುನಲ್ ಗಾಂಜಾವಾಲಾ : ಕಾಪು ಹೊಸ ಮಾರಿಗುಡಿ ಭೇಟಿ

Thumbnail
Posted On: 29 Dec 2025, 06:06 PM

ಕಾಪು : ಸುಪ್ರಸಿದ್ದ ಭಾರತೀಯ ಹಿನ್ನೆಲೆ ಗಾಯಕ ಕುನಲ್ ಗಾಂಜಾವಾಲಾ ಸೋಮವಾರ ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮನ ಕ್ಷೇತ್ರ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀದೇವಿಯ ದರುಶನ ಪಡೆದರು.

ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯ ಅಮ್ಮನ ಅನುಗ್ರಹ ಪ್ರಸಾದ ನೀಡಿದರು.

ದೇವಳದ ವ್ಯವಸ್ಥಾಪನಾ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ವತಿಯಿಂದ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ, ಕಾರ್ಯನಿರ್ವಹಣಾಧಿಕಾರಿ ರವಿಕಿರಣ್, ಅಭಿವೃದ್ಧಿ ಸಮಿತಿ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಮತ್ತು ವ್ಯವಸ್ಥಾಪನಾ ಸಮಿತಿ ಸದಸ್ಯ ಮಾಧವ ಆರ್. ಪಾಲನ್, ಪ್ರಬಂಧಕ ಗೋವರ್ಧನ್ ಸೇರಿಗಾರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಬೆಳಪು ಗ್ರಾ.ಪಂ ಕಾರ್ಯದರ್ಶಿಯಾಗಿ ಪದೋನ್ನತಿ ಹೊಂದಿದ ಚಂದ್ರಾವತಿ ವಿ. ಆಚಾರ್ಯ

Thumbnail
Posted On: 29 Dec 2025, 05:05 PM

ಪಡುಬಿದ್ರಿ : ಉಚ್ಚಿಲ ಬಡಾ ಗ್ರಾಮ ಪಂಚಾಯತ್ನಲ್ಲಿ 31 ವರ್ಷಗಳ ಕಾಲ ಎಟೆಂಡರ್, ಕ್ಲರ್ಕ್ ಆಗಿ ಸುದೀರ್ಘ ಸೇವೆಯನ್ನು ಸಲ್ಲಿಸಿ ಇದೀಗ ಕಾರ್ಯದರ್ಶಿಯಾಗಿ ಪದೋನ್ನತಿ ಹೊಂದಿ ಬೆಳಪು ಗ್ರಾ.ಪಂ.ಗೆ ನಿಯುಕ್ತಿಗೊಂಡಿರುವ ಚಂದ್ರಾವತಿ ವಿ. ಆಚಾರ್ಯ ಅವರನ್ನು ಅಭಿನಂದಿಸಿ, ಸಮ್ಮಾನಿಸಿ ಬೀಳ್ಕೊಡಲಾಯಿತು.

ಉಚ್ಚಿಲ ಬಡಾ ಗ್ರಾ.ಪಂ. ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷರಾದ ಶಿವ ಕುಮಾರ್ ಮೆಂಡನ್, ಉಪಾಧ್ಯಕ್ಷರಾದ ದೀಪಕ್ ಕುಮಾರ್ ಎರ್ಮಾಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸತೀಶ್ ಆರ್.ಜಿ., ಅಕೌಂಟೆಂಟ್ ನಿರ್ಮಲಾ ಶೆಟ್ಟಿ, ಗ್ರಾ.ಪಂ. ಸದಸ್ಯರು, ಸಿಬ್ಬಂದಿ ಉಪಸ್ಥಿತರಿದ್ದರು.

 

 

ಬಿರುವೆರ್ ಕಾಪು ಸೇವಾ ಸಮಿತಿಯಿಂದ ಜ್ಞಾನ ದೀವಿಗೆ ವಿದ್ಯಾರ್ಥಿವೇತನ ವಿತರಣೆ, ಸನ್ಮಾನ

Thumbnail
Posted On: 28 Dec 2025, 04:35 PM

ಕಾಪು : ಬಿರುವೆರ್ ಕಾಪು ಸೇವಾ ಸಮಿತಿ (ರಿ.) ವತಿಯಿಂದ ಕಾಪು ಬಿಲ್ಲವರ ಸಹಾಯಕ ಸಂಘದ ವೇದಿಕೆಯಲ್ಲಿ 5 ನೇ ವರ್ಷದ "ಜ್ಞಾನ ದೀವಿಗೆ" ವಿದ್ಯಾರ್ಥಿವೇತನ ವಿತರಣೆ ಮತ್ತು ಸನ್ಮಾನ ಕಾರ್ಯಕ್ರಮವನ್ನು ಮಾಜಿ ಸಚಿವ  ವಿನಯ ಕುಮಾರ್ ಸೊರಕೆ ಉದ್ಘಾಟಿಸಿ, ಶುಭ ಹಾರೈಸಿದರು.

ಸುಮಾರು 50  ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ವಿನಯ ಕುಮಾರ್ ಸೊರಕೆ, ಸೂರ್ಯಕಾಂತ್ ಸುವರ್ಣ, ಸಂಕಪ್ಪ ಅಮಿನ್ ವಕೀಲರು, ಗೀತಾಂಜಲಿ ಸುವರ್ಣ, ಸಂಜೀವ ಆರ್ ಅಮಿನ್ , ದೀಪಕ್ ಕುಮಾರ್ ಎರ್ಮಾಳ್  ವಿತರಿಸಿದರು.  

ಸಂಪನ್ಮೂಲ ವ್ಯಕ್ತಿ ದೀಪಕ್ ರಾಜ್ ರವರು ಮಕ್ಕಳ ಭವಿಷ್ಯ ಮತ್ತು ವ್ಯಕ್ತಿತ್ವ ವಿಕಸನದ ಕುರಿತು ಮಾತನಾಡಿದರು.

 ಪ್ರಭಾಕರ ಎಸ್ ಪೂಜಾರಿ, ವಿಕ್ರಂ ಕಾಪು, ನವೀನ್ ಅಮಿನ್ ಶಂಕರಪುರ, ಸೂರ್ಯ ಕಾಂತ್ ಸುವರ್ಣ, ಶಿವಾನಂದ ಕೋಟ್ಯಾನ್,  ಸಂಜೀವ ಆರ್ ಅಮಿನ್ ಮೂಳೂರು, ವಿಕ್ಕಿ ಮಡುಂಬು, ಸುಧಾಕರ ಸಾಲ್ಯಾನ್ ರವನ್ನು  ಸನ್ಮಾನಿಸಲಾಯಿತು. 

ಬಿರುವೆರ್ ಕಾಪು ಸೇವಾ ಸಮಿತಿಯ ಉಪಾಧ್ಯಕ್ಷರಾದ ಮನೋಜ್ ಅಂಚನ್ ರವರು ಸಭಾಧ್ಯಕ್ಷತೆ ವಹಿಸಿದ್ದರು.

ಸಮಿತಿಯ ಉಪಾಧ್ಯಕ್ಷರುಗಳಾದ ಸುಧಾಕರ ಸಾಲ್ಯಾನ್, ಮನೋಜ್ ಅಂಚನ್ , ಕೋಶಧಿಕಾರಿಯಾದ ಕಾರ್ತಿಕ್ ಅಮಿನ್ , ಕಾರ್ಯದರ್ಶಿಗಳಾದ ವಿಕ್ಕಿ ಮಡುಂಬು, ರಾಕೇಶ್ ಕುಂಜೂರು , ರವಿರಾಜ್ ಶಂಕರಪುರ, ದೀಪಕ್ ಕುಮಾರ್ ಎರ್ಮಾಳ್, ಸುಜನ್ ಎಲ್ ಸುವರ್ಣ, ಮನೋಹರ್ ಕಲ್ಲುಗುಡ್ಡೆ , ವರುಣ್ ಬಿ ಕೋಟ್ಯಾನ್,ಸಂಧ್ಯಾ ಬಿ ಕೋಟ್ಯಾನ್ , ಅಶ್ವಿನಿ ಎನ್ ಬಂಗೇರ ,  ಹರಿ ಪ್ರಸಾದ್ ಕುಬೇರ ,   ಶ್ರೀಮತಿ ಸ್ವಪ್ನ ಎಮ್ ಅಂಚನ್ , ಅನಿಷ ಎಸ್ ಅಂಚನ್ , ಸಾಕ್ಷಿ ಪೂಜಾರಿ, ಅಶ್ವಿನಿ ಗಣೇಶ್ ಕೋಟ್ಯಾನ್ , ಸುರಕ್ಷ ಸುಜನ್ ಸುವರ್ಣ ಉಪಸ್ಥಿತರಿದ್ದರು.

ಪತ್ರಕರ್ತ ರಾಕೇಶ್ ಕುಂಜೂರು ಪ್ರಸ್ತಾವಿಸಿ, ಸ್ವಾಗತಿಸಿದರು. ಸತೀಶ್ ಪೂಜಾರಿ ಹೊಸ್ಮರ್ ಕಾರ್ಯಕ್ರಮ ನಿರೂಪಿಸಿ, ವಿಕ್ಕಿ ಮಡುಂಬುರವರು ವಂದಿಸಿದರು.

 

ಉದ್ಯಾವರ : ಸಾಮಾಜಿಕ ಕಾರ್ಯಕರ್ತೆ ಹೆಲೆನ್ ಫೆರ್ನಾಂಡಿಸ್ ನಿಧನ

Thumbnail
Posted On: 28 Dec 2025, 12:46 PM

ಕಾಪು : ಉದ್ಯಾವರ ಗ್ರಾಮದ ಸಾಮಾಜಿಕ ಕಾರ್ಯಕರ್ತೆ, ಹಲವಾರು ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಹೆಲೆನ್ ಫೆರ್ನಾಂಡಿಸ್ ಉದ್ಯಾವರ ಇಂದು ಕುಸಿದು ಬಿದ್ದು ಹೃದಯಾಘಾತದಿಂದ ಬೆಳಗ್ಗೆ ನಿಧನರಾದರು.

ಉದ್ಯಾವರ ಗ್ರಾಮೀಣ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿ ಹಲವಾರು ವರ್ಷ ಪಕ್ಷ ಸಂಘಟನೆಯಲ್ಲಿ ತೊಡಗಿದ್ದ ಇವರು, ಸಕ್ರಿಯ ಕಾಂಗ್ರೆಸ್ ಕಾರ್ಯಕರ್ತೆ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಇದರ ಸದಸ್ಯೆಯಾಗಿದ್ದು, ಹಲವಾರು ಹುದ್ದೆಗಳನ್ನು ಸಕ್ರಿಯವಾಗಿ ನಿಭಾಯಿಸಿದ್ದಾರೆ. ಪ್ರಸ್ತುತ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಉದ್ಯಾವರ ಚರ್ಚಿನ ವಿವಿಧ ಸಂಘ-ಸಂಸ್ಥೆಗಳಲ್ಲಿ  ಮತ್ತು ವಿಶೇಷವಾಗಿ ಪಾಲನ ಮಂಡಳಿಯಲ್ಲಿಯೂ ಸೇವೆ ಸಲ್ಲಿಸಿದ್ದರು. ಅವರಿಗೆ 64 ವರ್ಷ ವಯಸ್ಸಾಗಿತ್ತು. ಮೂವರು ಪುತ್ರರು ಮತ್ತು ಅಪಾರ ಬಂಧು ಬಳಗದವರನ್ನು ಆಗಲಿದ್ದಾರೆ.