Updated News From Kaup
ಶ್ರೀ ಕೃಷ್ಣ ಜನ್ಮಾಷ್ಟಮಿ : ಶ್ರೀ ಕ್ಷೇತ್ರ ಶಂಕರಪುರ ವತಿಯಿಂದ ಮೂಡೆ ಹಾಲು, ಸಾಯಿ ತುತ್ತು ವಿತರಣೆ
Posted On: 27-08-2024 10:17PM
ಕಟಪಾಡಿ : ಶ್ರೀ ಕ್ಷೇತ್ರ ಶಂಕರಪುರ ಶ್ರೀ ಸಾಯಿ ಸಾಂತ್ವಾನ ಮಂದಿರ ಟ್ರಸ್ಟ್ (ರಿ.) ವತಿಯಿಂದ ಶ್ರೀ ಸಾಯಿ ಈಶ್ವರ್ ಗುರೂಜಿಯವರ ಆಶೀವಾರ್ದದದೊಂದಿಗೆ ಶ್ರೀ ಕೃಷ್ಣಾಷ್ಟಮಿಯ ಪ್ರಯುಕ್ತ ಉಡುಪಿ ವಿಟ್ಲಪಿಂಡಿಯಂದು ಮೂಡೆ ಹಾಲು ಮತ್ತು ಸಾಯಿ ತುತ್ತು ಮಂಗಳವಾರದಂದು ಉಡುಪಿ ಎಮ್.ಎಲ್.ಎ ಕಛೇರಿಯ ಮುಂಭಾಗದಲ್ಲಿ ವಿತರಿಸಲಾಯಿತು.
ಹೆಜಮಾಡಿ : ಕಣ್ಣಂಗಾರು ಜುಮಾ ಮಸೀದಿಯ ಅಧ್ಯಕ್ಷರಾಗಿ ಹಾಜಿ ಅಬ್ದುಲ್ ಹಮೀದ್ ಆಯ್ಕೆ
Posted On: 27-08-2024 06:41PM
ಹೆಜಮಾಡಿ : ಕಳೆದ ನಾಲ್ಕು ವರ್ಷಗಳಿಂದ ರಾಜ್ಯ ವಕ್ಫ್ ಆಡಳಿತಕ್ಕೆ ಒಳಪಟ್ಟಿದ್ದ ಕಣ್ಣಂಗಾರು ಜಮಾತಿನ ಆಡಳಿತ ಮಂಡಳಿ ಅಧ್ಯಕ್ಷರಾಗಿ ಅಬ್ದುಲ್ ಹಮೀದ್ ಹಾಜಿ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಜುಮಾ ಮಸೀದಿಯ ಆಡಳಿತ ಅಧಿಕಾರಿ ಕೆ.ಎಂ.ಕೆ. ಮಂಜನಾಡಿ ಅಧ್ಯಕ್ಷತೆಯಲ್ಲಿ ನಡೆದ ಆಡಳಿತ ಮಂಡಳಿತ ಸಭೆಯಲ್ಲಿ ಮುಂದಿನ ಮೂರು ವರ್ಷಗಳಿಗೆ ಈ ಆಯ್ಕೆ ನಡೆದಿದೆ.
ಉಚ್ಚಿಲ ದಸರಾ - 2024 ಆಮಂತ್ರಣ ಪತ್ರಿಕೆ ಬಿಡುಗಡೆ
Posted On: 27-08-2024 12:54PM
ಉಚ್ಚಿಲ : ದ.ಕ ಮೊಗವೀರ ಮಹಾಜನ ಸಂಘ ಅಧೀನದ ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ "ಉಚ್ಚಿಲ ದಸರಾ -2024" ರ ಆಮಂತ್ರಣ ಪತ್ರಿಕೆಯನ್ನು ಮೊಗವೀರ ಸಮಾಜದ ನಾಯಕ ನಾಡೋಜ ಡಾ. ಜಿ. ಶಂಕರ್ ಬಿಡುಗಡೆಗೊಳಿಸಿದರು.
ಕಾಪು ಕುಲಾಲ ಯುವ ವೇದಿಕೆ ಹಾಗೂ ಕಾಂತಾವರ ಕುಲಾಲ ಸಂಘಟನೆಯಿಂದ ಧನಸಹಾಯ
Posted On: 27-08-2024 09:59AM
ಕಾಪು : ಪುಣೆಯಲ್ಲಿ ವಾಸವಿರುವ ಕಾರ್ಕಳ ತಾಲೂಕಿನ ಬೇಲಾಡಿಯ ಬಾಬು ಮೂಲ್ಯರ ಸಹೋದರಿ ಸುಮಲತಾ ಮೂಲ್ಯ ತೀವ್ರ ಡೆಂಗ್ಯೂ ಜ್ವರಕ್ಕೆ ತುತ್ತಾಗಿ ಪುಣೆಯ ಸಹ್ಯಾದ್ರಿ ಆಸ್ಪತ್ರೆಯಲ್ಲಿ ತಿಂಗಳುಗಳ ಕಾಲ ಜೀವನ್ಮರಣ ಸ್ಥಿತಿಯಲ್ಲಿ ನರಳಿ ಸಾಲ- ಸೋಲ ಮಾಡಿ ಲಕ್ಷಗಟ್ಟಲೆ ಹಣವನ್ನು ಆಸ್ಪತ್ರೆಗೆ ಕಟ್ಟಬೇಕಾಗಿ ಬಂತು. ಕಡುಬಡತನದಿಂದ ದಿನಗೂಲಿ ಮಾಡಿ ಜೀವನ ನೆಡೆಸುತ್ತಿದ್ದ ಕಷ್ಟದ ಬದುಕು ಸುಮಲತಾರದ್ದು. ಕೈ ಹಿಡಿದ ಗಂಡ ಅಗಲಿ ವರ್ಷ ಹಲವಾಗಿದೆ. ಒಬ್ಬಳು ಮಗಳ ಜೊತೆ ಬದುಕು ಸವೆಸುತ್ತಿದ್ದ ಅವರಿಗೆ ಡೆಂಗ್ಯೂ ವಕ್ಕರಿಸಿ ಚಿತ್ರ ಹಿಂಸೆ ನೀಡಿತು.
ಶ್ರೀ ಕೃಷ್ಣ ಜನ್ಮಾಷ್ಟಮಿ : ರವಿ ಕಟಪಾಡಿ ತಂಡದಿಂದ ಈ ಬಾರಿ ಅಷ್ಟಮಿಗೆ ಅವತಾರ್ 2 ವೇಷ
Posted On: 27-08-2024 07:39AM
ಕಟಪಾಡಿ : ಶ್ರೀ ಕೃಷ್ಣ ಜನ್ಮಾಷ್ಟಮಿ ಊರೆಲ್ಲಾ ಸಂಭ್ರಮದಿಂದಿರಲು ಕಟಪಾಡಿಯ ರವಿಯವರು ಈ ಬಾರಿಯೂ ವೇಷ ಹಾಕಿ ಆರ್ಥಿಕವಾಗಿ ಹಿಂದುಳಿದ ಕುಟುಂಬದ ಮಕ್ಕಳ ಚಿಕಿತ್ಸೆಗೆ ತನ್ನಿಂದಾದ ಸಹಾಯದ ಬೆಂಬಲ ನೀಡಲಿದ್ದಾರೆ.
92ನೇ ಹೇರೂರಿನ ಶ್ರೀ ಗುರುರಾಘವೇಂದ್ರ ಸಮಾಜ ಸೇವಾ ಮಂಡಳಿಯಿಂದ ಮುದ್ದು ಕೃಷ್ಣ ವೇಷ ಸ್ಪರ್ಧೆ
Posted On: 27-08-2024 07:19AM
ಶಿರ್ವ : ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ, 92ನೇ ಹೇರೂರಿನ ಶ್ರೀ ಗುರುರಾಘವೇಂದ್ರ ಸಮಾಜ ಸೇವಾ ಮಂಡಳಿ (ರಿ.) ವತಿಯಿಂದ ಮುದ್ದು ಕೃಷ್ಣ ವೇಷ ಸ್ಪರ್ಧೆಯನ್ನು ಏರ್ಪಡಿಸಲಾಯಿತು. ಊರಿನ ಹೆಚ್ಚಿನ ಮಕ್ಕಳು ಸ್ಪರ್ಧೆಯಲ್ಲಿ ಪಾಲ್ಗೊಂಡರು.
ಪಡುಬಿದ್ರಿ ಬಂಟರ ಭವನದಲ್ಲಿ ವೃತ್ತಿ ಅಭಿವೃದ್ಧಿ, ಉದ್ಯಮಶೀಲತಾ ನಾವೀನ್ಯತೆ ತರಬೇತಿ ಕಾರ್ಯಕ್ರಮ
Posted On: 25-08-2024 08:22PM
ಪಡುಬಿದ್ರಿ : ಸಂಸ್ಕೃತಿಯನ್ನು ಅರಿತು ನಮ್ಮ ಮಕ್ಕಳು ಬೆಳೆಯಬೇಕಿದೆ. ಯಶಸ್ಸು ಸಾಧನೆಯ ಹಿಂದೆ ಶ್ರಮವಿರಬೇಕು. ಮೊದಲು ತಂದೆ ತಾಯಿ, ಊರಿನ ದೈವ, ದೇವರು, ಗುರುಗಳ ಆಶೀರ್ವಾದ ಅನಿವಾರ್ಯ. ನಮ್ಮ ಕಾರ್ಯ ಹುಟ್ಟೂರಿಗೆ ಧನ್ಯತೆ ತರಬೇಕಾಗಿದೆ. ವೈಫಲ್ಯ, ಸವಾಲುಗಳನ್ನು ಮೆಟ್ಟಿ ನಿಂತಾಗ ಮಾತ್ರ ಯಶಸ್ಸು ಸಾಧ್ಯ ಎಂದು ಎಂ ಆರ್ ಜಿ ಗ್ರೂಪ್ ಮುಖ್ಯಸ್ಥ ಡಾ. ಕೆ. ಪ್ರಕಾಶ್ ಶೆಟ್ಟಿ ಹೇಳಿದರು. ಅವರು ಪಡುಬಿದ್ರಿ ಬಂಟರ ಸಂಘ ಮತ್ತು ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ಸಹಯೋಗದಲ್ಲಿ ಭಾನುವಾರ ಪಡುಬಿದ್ರಿ ಬಂಟರ ಭವನದಲ್ಲಿ ಕಾಲೇಜು ವಿದ್ಯಾರ್ಥಿಗಳಿಗಾಗಿ ನಡೆದ ಒಂದು ದಿನದ ವೃತ್ತಿ ಅಭಿವೃದ್ಧಿ ಮತ್ತು ಉದ್ಯಮಶೀಲತಾ ನಾವೀನ್ಯತೆ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಶಿರ್ವ : ರೋಟರಿ ಕ್ಲಬ್, ಇನ್ನರ್ ವಿಲ್ ಶಂಕರಪುರ - ಶಾಲಾ ಇಂಟರಾಕ್ಟ್ ವಿದ್ಯಾರ್ಥಿಗಳ ಪ್ರತಿಭಾನ್ವೇಷಣೆ ಸ್ಪರ್ಧೆ ಸಂಪನ್ನ
Posted On: 25-08-2024 07:42PM
ಶಿರ್ವ : ರೋಟರಿ ಕ್ಲಬ್ ಶಂಕರಪುರ ಮತ್ತು ಇನ್ನರ್ ವಿಲ್ ಶಂಕರಪುರ ಇವರ ಜಂಟಿ ಆಶ್ರಯದಲ್ಲಿ ಇನ್ನಂಜೆ ಮತ್ತು ಶಂಕರಪುರ ಶಾಲಾ ಇಂಟರಾಕ್ಟ್ ವಿದ್ಯಾರ್ಥಿಗಳಿಗೆ ಪ್ರತಿಭಾನ್ವೇಷಣೆ ಸ್ಪರ್ಧೆಯನ್ನು ದಿ. ಸಾವ್ಯಾ ಸಬೀನಾ ಡೆಸಾ ಇವರ ಸ್ಮರಣಾರ್ಥ ಫ್ರಾನ್ಸಿಸ್ ಡೆಸಾ ಮತ್ತು ಅಗ್ನೆಸ್ ಡೆಸಾ ಇವರ ಪ್ರಾಯೋಜಕತ್ವದಲ್ಲಿ ನಡೆಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಆಗ್ನೆಸ್ ಡೆಸಾ ಇವರು ನೆರವೇರಿಸಿದರು.
ಕಾಪು : ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ ಸೇವಾದಳ ಕಾಪು ವತಿಯಿಂದ ಸಮುದಾಯ ಭವನದ ಕಾಮಗಾರಿಗೆ ಧನ ಸಹಾಯ
Posted On: 25-08-2024 07:29PM
ಕಾಪು : ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ ಸೇವಾದಳ ಕಾಪು ಇವರ ವತಿಯಿಂದ ಕಾಪು ಬಿಲ್ಲವರ ಸಮುದಾಯ ಭವನದ ಕಾಮಗಾರಿಗೆ ರೂಪಾಯಿ 20,482 ಧನ ಸಹಾಯ ನೀಡಲಾಯಿತು.
ಕಾಪು : ಮೊಹಮ್ಮದ್ ಫಾರೂಕ್ ಚಂದ್ರನಗರ - ಗೌರವ ಡಾಕ್ಟರೇಟ್ ಪದವಿಗೆ ಆಯ್ಕೆ
Posted On: 25-08-2024 12:38PM
ಕಾಪು : ಹತ್ತಾರು ಸಾಮಾಜಿಕ ಸಂಘ ಸಂಸ್ಥೆಗಳಲ್ಲಿ ತನ್ನನ್ನು ತಾನು ತೊಡಗಿಸಿ ಕೊಂಡಿರುವ ಉಡುಪಿ ಜಿಲ್ಲೆ ಕಾಪು ತಾಲೂಕಿನ ಕಳತ್ತೂರು ಗ್ರಾಮದ ಸಮಾಜ ಸೇವಕ ಬಟರ್ ಫ್ಲೈ ಗೆಸ್ಟ್ ಹೌಸ್ ಮತ್ತು ಪಾರ್ಟಿ ಹಾಲ್ ಇದರ ಆಡಳಿತ ನಿರ್ದೇಶಕರಾದ ಮೊಹಮ್ಮದ್ ಫಾರೂಕ್ ಚಂದ್ರನಗರ ಇವರ ಸಮಾಜ ಸೇವೆ ಪರಿಗಣಿಸಿ ಗ್ಲೋಬಲ್ ಹ್ಯೂಮನ್ ಪೀಸ್ ವಿಶ್ವ ವಿದ್ಯಾಲಯ ಯು.ಎಸ್.ಎ ಚೆನ್ನೈ(ತಮಿಳುನಾಡು) ಘಟಕದಿಂದ ಗೌರವ ಡಾಕ್ಟರೇಟ್ ಪದವಿಗೆ ಗ್ಲೋಬಲ್ ಹ್ಯೂಮನ್ ಪೀಸ್ ವಿಶ್ವ ವಿದ್ಯಾಲಯ ಚೆನ್ನೈ ಇದರ ಸ್ಥಾಪಕ ಅಧ್ಯಕ್ಷರಾದ ಡಾ.ಪಿ.ಎಂ ಮನವಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
